Brief Mumbai News with Pictures


Rons Bantwal
Kemmannu News Network, 23-01-2018 20:07:19


Write Comment     |     E-Mail To a Friend     |     Facebook     |     Twitter     |     Print


Mumbai Jan. 19 :- *Head less man* A novel initiative under *TAP* Traffic awareness program Thane Traffic Branch under the Guidance of DCP Amit Kale had organised a drive on ’Always wear Helmet’ @ Teen haath Naka Thane. Today morning the drive was met with lot of excitement as a head less man was instructing the rider to always wear helmet. Few pics below of the activity.

Republic day parade rehearsal at Shivaji park Dadar.

Bollywood actress Parineeti Chopra during release a series of video recent holiday experience in the Australia to promote Tourism Australia, in Mumbai on tuesday.

ಬಿಲ್ಲವ ಹಿರಿಯ ಮುಂದಾಳು ಡಿಯುಎಸ್‍ರಿಗೆ ಬಿಲ್ಲವರ ಅಸೋಸಿಯೇಶನ್‍ನಿಂದ ಬಾಷ್ಪಾಂಜಲಿ - ಡಿ.ಯು ಸಾಲ್ಯಾನ್‍ರ ದೂರದೃಷ್ಟಿತ್ವದ ಸೇವೆ ಬಿಲ್ಲವ ಸಮಾಜಕ್ಕೆ ವರದಾನ

ಮುಂಬಯಿ, ಅ.05: ಬೃಹನ್ಮುಂಬಯಿಯಲ್ಲಿ ದಕ್ಷ ಸಂಘಟಕರಾಗಿ ಸಾಮಾಜಿ, ಶೈಕ್ಷಣಿಕ, ಆಥಿರ್üಕ ಕ್ಷೇತ್ರದಲ್ಲಿ  ಅನನ್ಯ ಸೇವೆಗೈದು, ಬಿಲ್ಲವರ ಪ್ರಸಿದ್ಧ ಸಮಾಜ ಸೇವಕರೆಣಿಸಿ ಇತ್ತೀಚೆಗೆ ಹರಿಪಾದ ಸೇರಿದ ನಿವೃತ್ತ ಶಿಕ್ಷಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ಭಾರತ್ ಬ್ಯಾಂಕ್‍ನ ಸ್ಥಾಪಕ ರೂವಾರಿಯಾಗಿ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷರಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಡಿ.ಯು ಸಾಲ್ಯಾನ್ (ದೇವು ಉಗ್ಗಪ್ಪ ಪೂಜಾರಿ) ಅವÀರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಭಾರತ್ ಬ್ಯಾಂಕ್‍ನ  ಪರವಾಗಿ ಅಗಲಿದ ಮಹಾನ್ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲಾದ ಸಂತಾಪ ಸೂಚನಾ ಸಭೆಯಲ್ಲಿ ಅಗಲಿದ ಡಿ.ಯು ಸಾಲ್ಯಾನ್ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಸದ್ಗತಿ ಕೋರಲಾಯಿತು.

ಆದಿಯಲ್ಲಿ ಸಭೆಯಲ್ಲಿ ಉಪಸ್ಥಿತ ಸಾಲ್ಯಾನ್‍ರ ಮಕ್ಕಳಾದ  ಹರೀಶ್‍ಸಾಲ್ಯಾನ್, ಆಶಾ ಸಾಲ್ಯಾನ್, ಉಷಾ ಸಾಲ್ಯಾನ್ ಮತ್ತು ಸಾಲ್ಯಾನ್ ಬಂಧುಗಳು ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಅಶ್ರುತಾರ್ಪಣೆಗೈದರು.

ನಿತ್ಯಾನಂದ ಕೋಟ್ಯಾನ್ ಮಾತನಾಡಿ ಓರ್ವ ವ್ಯಕ್ತಿ ಮಾನವೀಯ ಮೌಲ್ಯಗಳೊಂದಿಗೆ ತಾನು ನಿಷ್ಠಾವಂತನಾಗಿ ಬದುಕುವ ಜೊತೆಗೆ ಮತ್ತೊಬ್ಬರ ಬದುಕನ್ನೂ ಪೆÇ್ರೀತ್ಸಹಿಸುವುದಕ್ಕೆ ಡಿ.ಯು ಸಾಲ್ಯಾನ್ ಮೇರು ವ್ಯಕ್ತಿತ್ವವುಳ್ಳವರಾ ಗಿದ್ದರು. ಸುಮಾರು ಒಂಭತ್ತು ದಶಕಗಳ ಹಿಂದೆಯೇ ಭವಿಷ್ಯತ್ತಿನ ಪೀಳಿಗೆಗಾಗಿನ ದೂರದೃಷ್ಟಿತ್ವ ಹೊಂದಿ ಸೇವೆಯಲ್ಲಿ ತೊಡಗಿಸಿ ನಮಗೆಲ್ಲಾ ಆದರ್ಶಪ್ರಾಯರಾದ ಸಾಲ್ಯಾನ್ ಜೀನವನೇ ಅನುಕರಣೀಯ. ತನ್ನೊಂದಿಗೆ ಇಡೀ ಪರಿವಾರವನ್ನೇ ಸಮಾಜ ಸೇವೆಗೆ ಸಮರ್ಪಿಸಿ ಕೊಂಡವರು. ಈ ಬಿಲ್ಲವರ ಭವನ ಮತ್ತು ಕುದ್ರೋಳಿ ಗೋಕರ್ಣಥ ಕ್ಷೇತ್ರ, ಭಾರತ್ ಬ್ಯಾಂಕ್ ಸೇರಿದಂತೆ ಹತ್ತಾರು ಸಂಘಸಂಸ್ಥೆಗಳಿಗೆ ಸಂಗ್ರಹಿಸಿದ ದೇಣಿಗೆ ಮಾತ್ರವಲ್ಲ ಆ ಹಿಂದಿನ ಶ್ರಮವೇ ಬಿಲ್ಲವ ಸಮುದಾಯವನ್ನು ಈ ಮಟ್ಟಕ್ಕೆ ಬೆಳೆಸಿದೆ. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಜೊತೆಗೆ ಸಾಲ್ಯಾನ್‍ರ ಬಂಧುತ್ವ, ಒಡನಾಟ ಬಿಚ್ಚಿಟ್ಟರು.
ಸಾಲ್ಯಾನ್‍ರ ಶಿಸ್ತುಬದ್ಧ ಜೀವನ ಇಂದು ನಮ್ಮಲ್ಲಿ ರೂಢಿಸಿ ಕೊಂಡಾಗಲೇ ನಾವು ಅವರಿಗೆ ಸಲ್ಲಿಸುವ ಮೊದಲ ಶ್ರದ್ಧಾಂಜಲಿ ಆಗಿದೆ. ಇಂತಹ ಧೀಶಕ್ತಿಯ ಜೀವನ ಶೈಲಿಯನ್ನು ಮೈಗೂಡಿಸಿ ಅವರನ್ನು ಸ್ಮರಿಸೋಣ. ಅಗಲಿದ ಅವರ ಆತ್ಮ ವೈಕುಂಠ ಸೇರಲಿ. ನಮ್ಮನ್ನಗಲಿದ ಸಾಲ್ಯಾನ್ ಸದಾ ಕೀರ್ತಿಶೇಷರಾಗಿರಲಿ ಎನ್ನುತ್ತಾ ಸಮಗ್ರ ಬಿಲ್ಲವರ ಹಾಗೂ ಜಯ ಸುವರ್ಣರ ಪರವಾಗಿ  ಸಾಲ್ಯಾನ್ ಕುಟುಂಬಕ್ಕೆ ಸಾಂತ್ವನ ಹೇಳಿ ಸಭೆಯಲ್ಲಿ ಉಪಸ್ಥಿತ ಸಾಲ್ಯಾನ್‍ರ ಮಕ್ಕಳು ಹಾಗೂ ಕುಟುಂಬಕ್ಕೆ ಸಂತೈಸಿದರು.

ಸಭೆಯಲ್ಲಿ ಉಪಸ್ಥಿತ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಜೊತೆ ಕಾರ್ಯದರ್ಶಿಗಳಾದ ಪ್ರೇಮನಾಥ ಪಿ.ಕೋಟ್ಯಾನ್, ಜೆ.ಎಂ ಕೋಟ್ಯಾನ್, ಭಾರತ್ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ವರದ ಉಳ್ಳಾಲ್, ನಿರ್ದೇಶಕರಾದ ವಿ.ಆರ್ ಕೋಟ್ಯಾನ್ (ಮಾಜಿ ಕಾರ್ಯಾಧ್ಯಕ್ಷ), ಎಂ.ಬಿ ಕೋಟ್ಯಾನ್, ಮಾಜಿ ನಿರ್ದೇಶಕರಾದ ನ್ಯಾ| ಶಶಿಧರ್ ಕಾಪು, ಎಲ್.ವಿ ಅವಿೂನ್, ಎನ್.ಎಂ ಸನೀಲ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ  ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವ ಮುಂದಾಳುಗಳಾದ ಪದ್ಮನಾಭ ಪೂಜಾರಿ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಜಯಕರ ಡಿ.ಪೂಜಾರಿ, ಚಿತ್ರಾಪು ಕೆ.ಎಂ ಕೋಟ್ಯಾನ್ ಮತ್ತು ಚಿರಾಗ್ ಸಾಲ್ಯಾನ್ ನುಡಿ ನಮನ ಸಲ್ಲಿಸಿ ನಮ್ಮನ್ನಗಲಿದ ಸಾಲ್ಯಾನ್‍ರ ದಿವ್ಯಾತ್ಮಕ್ಕೆ ಶ್ರೀದೇವರು ಮೋಕ್ಷ ಪ್ರಾಪ್ತಿಸಲಿ ಎಂದು ಬಾಷ್ಪಾಂಜಲಿ ಅರ್ಪಿಸಿದರು.

ಸಮಯಪ್ರಜ್ಞೆ ಯ ಕ್ಷೀಣತೆ-ತೀವ್ರ ಅಸಮಾಧಾನ:
ಸಂತಾಪ ಸಭೆಯಲ್ಲಿ ಭಾರೀ ಕಡಿಮೆ ಸಂಖ್ಯೆಯ ಜನರನ್ನು ಕಂಡ ಗಣ್ಯರು ಮತ್ತು ಕುಟುಂಬಸ್ಥರು ತೀವ್ರ ಖೇದ ವ್ಯಕ್ತಪಡಿಸಿದರು. ಕನಿಷ್ಠ ಅವರಿಂದ ನೌಕರಿ ಪಡೆದು ದೊಡ್ಡದೊಡ್ಡ ವ್ಯಕ್ತಿಗಳಾಗಿ, ದುಡಿಸಿ ಗಳಿಸಿಕೊಂಡವರ ಅನುಪಸ್ಥಿತಿ ಬಹುತೇಕರಲ್ಲಿ ಬೇಸರ ತಂದಿತು. ಮನುಷ್ಯ ಜೀವಂತವಿದ್ದಾಗ ಮಾತ್ರ ಹೊಗಳಿ ವ್ಯಕ್ತಿಪೂಜೆ ಮಾಡುವ ಸಂಸ್ಕೃತಿ ಇಂದೂ ಎತ್ತಿಕಾಣುವಂತಾಯಿತು. ಇದು ಸಮಂಜಸವಲ್ಲ. ವ್ಯಕ್ತಿಯೊಬ್ಬರು ಜೀವಂತವಿದ್ದಾಗ ತನ್ನ ಅವಿರತ ಶ್ರಮ, ತ್ಯಾಗ, ಕುಟುಂಬಸ್ಥರಿಗೆ ನೀಡದ ಸಮಯ ಸಮಾಜ ಸೇವೆಗೆ ನೀಡಿ ಸಮಾಜದ ಜೊತೆಗೆ ನೂರಾರು ವ್ಯಕ್ತಿಗಳನ್ನು ಬೆಳೆಸಿ ಕೊನೆಯಲ್ಲಿ ಸ್ಮರಣೀಯರಾದಾಗ ಕನಿಷ್ಠ ಒಗ್ಗೂಡಿ ಆ ವ್ಯಕ್ತಿಗೆ ಇಂತಹ ಸಭೆ ಅವಮಾನಕಾರಿ. ಇದು ಗಣ್ಯವ್ಯಕ್ತಿಯ ದುರದೃಷ್ಟವೇ ಸರಿ ಎಂದು ಭಾವೋದ್ವೆಕÀರಾಗಿಯೇ ನುಡಿದರು. ಇನ್ನಾದರೂ ಸಮಯಪ್ರಜ್ಞೆ  ರೂಢಿಸಿ ಮೇರುವ್ಯಕ್ತಿಗಳನ್ನು ಸ್ಮರಿಸೋಣ ಎಂದು ಕಟುವಾಗಿಯೇ ನೊಂದ ಮನಗಳಿಂದ ಸಮಾಜವನ್ನು ಎಚ್ಚರಿಸಿದರು.

ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ರಾಜ ವಿ.ಸಾಲ್ಯಾನ್, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಮಹೇಂದ್ರ ಸೂರು ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕರಾದÀ ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್, ಉಪ ಪ್ರಧಾನ ವ್ಯವಸ್ಥಾಪಕರಾದ ಸುರೇಶ್ ಎಸ್.ಸಾಲ್ಯಾನ್ ಮತ್ತಿತರ ಉನ್ನತಾಧಿಕಾರಿಗಳು ಕರ್ಮಚಾರಿಗಳು, ಶೇರುದಾರರು ಹಾಗೂ ಗ್ರಾಹಕರು, ಸಿಎ| ಅಶ್ವಜಿತ್ ಹೆಜ್ಮಾಡಿ, ಮಾಜಿ ನಿರ್ದೇಶಕರಾದ ಡಿ.ಬಿ ಅವಿೂನ್, ಜಗನ್ನಾಥ್ ವಿ.ಕೋಟ್ಯಾನ್, ಸುರೇಶ್ ಆರ್.ಅಂಚನ್, ಶಾರದಾ ಸೂರು ಕರ್ಕೇರ, ಯಶೋಧ ಎನ್.ಟಿ ಪೂಜಾರಿ, ದೇವೇಂದ್ರ ಬಂಗೇರಾ ಖಾರ್, ಎಸ್.ಕೆ ಸುವರ್ಣ, ಅನಿಲ್‍ಕುಮಾರ್ ಆರ್.ಅವಿೂನ್, ಹರೀಶ್ ಜಿ.ಅವಿೂನ್, ಸುರೇಂದ್ರ ಎ.ಪೂಜಾರಿ, ಮೋಹನ್ ಆರ್.ಕೋಟ್ಯಾನ್, ತೋನ್ಸೆ ಸಂಜೀವ ಪೂಜಾರಿ ಮತ್ತಿತರರು ಪುಷ್ಫಗೌರವದೊಂದಿಗೆ ಸದ್ಗತಿ ಕೋರಿದರು.

Daivajna Swamiji  @ Mumbai Prgrm NEWS & Photos by Rons Bantwal

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ `ಅನುವಾದ ಕಲೆ’ಉಪನ್ಯಾಸ ಅನುವಾದ ಅಂದರೆ ಮರುಸೃಷ್ಠಿ ಇದ್ದಂತೆ: ಡಾ| ಬಿ.ಜನಾರ್ದನ ಭಟ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.12: ಅನುವಾದದ ಕೆಲಸ ಅಷ್ಟು ಸುಲಭದ ಕೆಲಸವಲ್ಲ. ಅನುವಾದವೆಂದರೆ ಮರುಸೃಷ್ಟಿ ಇದ್ದಂತೆ. ಅನುವಾದದಲ್ಲಿ ನಾಲ್ಕು ಕ್ರಿಯೆಗಳನ್ನು ಗುರುತಿಸಬಹುದು. ಮೂಲಕ್ಕೆ ನಿಷ್ಠನಾಗಿ ಅನುವಾದಿಸುವುದು, ರೂಪಾಂತರ, ಪ್ರೇರಣೆ, ಸಂಸ್ಕೃತಿಯ ಅನುವಾದ ಇವು ಆ ನಾಲ್ಕು ಪ್ರಮುಖ ಘಟಕಗಳನ್ನು ಅನುವಾದಕನು ತಿಳಿದುಕೊಳ್ಳಬೇಕಾದ ಸಂಗತಿಗಳು. ಯಾವುದೇ ಒಂದು ಕೃತಿ ಶಬ್ದದ ಅನುವಾದವಾಗಿರಬಾರದು. ಅದು ಒಂದು ಸಂಸ್ಕೃತಿಯ ಅನುವಾದವಾಗಿರಬೇಕು. ಓದುಗನ ಮನಸ್ಸು ತಟ್ಟುವಂತೆ ಅನುವಾದ ಇರಬೇಕು. ಅನುವಾದ ಕೈಗೊಳ್ಳುವಾಗ ನಾನಾ ಸಮಸ್ಯೆಗಳು ಎದುರಾಗುತ್ತವೆ. ಅವುಗಳೆಲ್ಲವನ್ನು ಬಗೆಹರಿಸಿಕೊಂಡು ಅನುವಾದಕ್ಕೆ ಮುಂದಾಗಬೇಕು. ಎರಡು ಭಾಷೆಯ ಜ್ಞಾನವುಳ್ಳವನೇ ಒಳ್ಳೆಯ ಅನುವಾದಕನಾಗಲು ಸಾಧ್ಯ. ಮೂಲಕ್ಕೆ ನಿಷ್ಠನಾಗಿಯೇ  ಅನುವಾದದ ಕಾರ್ಯ ಕೈಗೊಂಡರೆ ಮಾತ್ರ ಅನುವಾದಕನು ನಿಜವಾದ ಯಶಸ್ಸು ಕಾಣಬಲ್ಲನು ಎಂದು ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕನ್ನಡ ವಿಭಾಗದ ವಿದ್ಯಾಥಿರ್üಗಳಿಗೆ ಆಯೋಜಿಸಿದ್ದ `ಅನುವಾದ ಕಲೆ’ ವಿಷಯದಲ್ಲಿ ಉಪನ್ಯಾಸವನ್ನಿತ್ತು ಡಾ| ಜನಾರ್ದನ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಬೃಹನ್ಮುಂಬಯಿನ ಹಿರಿಯ ಪತ್ರಕರ್ತ, ಲೇಖಕ ಶ್ರೀನಿವಾಸ ಜೋಕಟ್ಟೆ ಅತಿಥಿüಯಾಗಿ ಉಪಸ್ಥಿತರಿದ್ದರು.

ಪತ್ರಿಕಾರಂಗದಲ್ಲಿ ಅನುವಾದಕ್ಕೆ ತುಂಬಾ ಬೇಡಿಕೆಯಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವವನಿಗೆ ಆ ಭಾಷೆಯ ಸಂಪೂರ್ಣ ಜ್ಞಾನ  ಇರಬೇಕು. ಎರಡು ಭಾಷೆಗಳಲ್ಲಿ ಹಿಡಿತ ಸಾಧಿಸಬೇಕು. ಯಾವುದಾದರೂ ಒಂದು ಲೇಖನ ಸಮಾಜಕ್ಕೆ ಬೇಕಾಗುವಂತಹ ಲೇಖನವನ್ನು ಅನುವಾದಿತ ಪತ್ರಿಕೆಗಳಿಗೆ ನೀಡಲಾಗುತ್ತದೆ. ಸಮಾಜ ವಿರೋಧಿ ವಿಷಯಗಳನ್ನು ಕೈಬಿಟ್ಟು ಅನುವಾದ ಕೈಗೊಳ್ಳಬೇಕು. ಜನಪರವಾದ ಲೇಖನಗಳನ್ನು ಅನುವಾದ ಮಾಡಬೇಕು. ಜೀವ ವಿರೋಧಿ ನಿಲುವುಗಳ ಸಂಗತಿಗಳನ್ನು ಅನುವಾದಕನು ಅನುವಾದಿಸಬಾರದು. ಅನುವಾದ ಎಂದರೆ ತಿಳಿಯುವುದು ತಿಳಿಸುವುದು ಪತ್ರಿಕಾರಂಗದಲ್ಲಿ ಅನುವಾದಕನು ತುಂಬಾ ಜಾಗೃತನಾಗಿರಬೇಕು ಎಂದು ಶ್ರೀನಿವಾಸ ಜೋಕಟ್ಟೆ ತಿಳಿಸಿದರು.

ಡಾ| ಜಿ.ಎನ್ ಉಪಾಧ್ಯಾಯ ಪ್ರಸ್ತಾವಿಕ ನುಡಿಗಳನ್ನಾಡಿ ಅನುವಾದವು ದೇಶ, ಭಾಷೆಯನ್ನು ಒಂದುಗೂಡಿಸುವುದು. ದೇಶ ಕಾಲವನ್ನು ದಾಟುವಂತಹದು. ಕನ್ನಡದಲ್ಲಿ ಸಾಕಷ್ಟು ಅನುವಾದ ಸಾಹಿತ್ಯ ಬಂದಿದೆ. ಮುಂಬಯಿಯಲ್ಲಿ ಅನುವಾದ ಸಾಹಿತ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಮುಂಬಯಿಯಲ್ಲಿ ಅನೇಕ ಸಾಹಿತಿಗಳು ಕನ್ನಡ ಅನುವಾದ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ. ಚುರ-ಮುರಿ ಶೇಷಗಿರಿ ನಾಯಕರ ಅಭಿಜ್ಞಾನ ಶಾಕುಂತಲ ನಾಟಕವು ಮುಂಬಯಿಯಲ್ಲಿ ಅನುವಾದಗೊಂಡು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸುರೇಖಾ ಸುಂದರೇಶ್ ದೇವಾಡಿಗ, ರಮಾ ಉಡುಪ, ಕುಮುದಾ ಆಳ್ವ, ಅನಿತಾ ಪಿ.ಪೂಜಾರಿ ತಾಕೋಡೆ, ಸುರೇಖಾ ಹರಿಪ್ರಸಾದ್ ಶೆಟ್ಟಿ, ಎಸ್.ನಳಿನಾ ಪ್ರಸಾದ್, ಜ್ಯೋತಿ ಎನ್.ಶೆಟ್ಟಿ, ಉದಯ ಬಿ.ಶೆಟ್ಟಿ, ಜಯ ಪೂಜಾರಿ ಕೊಜಕೊಳ್ಳಿ, ಲಕ್ಷಿ ್ಮೀ ಪೂಜಾರ್ತಿ, ದುಗ್ಗಪ್ಪ ಕೋಟಿಯವರ್ ಉಪಸ್ಥಿತರಿದ್ದು ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಮಂಜುನಾಥ್ ವಂದಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ `ಅನುವಾದ ಕಲೆ’ಉಪನ್ಯಾಸ ಅನುವಾದ ಅಂದರೆ ಮರುಸೃಷ್ಠಿ ಇದ್ದಂತೆ: ಡಾ| ಬಿ.ಜನಾರ್ದನ ಭಟ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.12: ಅನುವಾದದ ಕೆಲಸ ಅಷ್ಟು ಸುಲಭದ ಕೆಲಸವಲ್ಲ. ಅನುವಾದವೆಂದರೆ ಮರುಸೃಷ್ಟಿ ಇದ್ದಂತೆ. ಅನುವಾದದಲ್ಲಿ ನಾಲ್ಕು ಕ್ರಿಯೆಗಳನ್ನು ಗುರುತಿಸಬಹುದು. ಮೂಲಕ್ಕೆ ನಿಷ್ಠನಾಗಿ ಅನುವಾದಿಸುವುದು, ರೂಪಾಂತರ, ಪ್ರೇರಣೆ, ಸಂಸ್ಕೃತಿಯ ಅನುವಾದ ಇವು ಆ ನಾಲ್ಕು ಪ್ರಮುಖ ಘಟಕಗಳನ್ನು ಅನುವಾದಕನು ತಿಳಿದುಕೊಳ್ಳಬೇಕಾದ ಸಂಗತಿಗಳು. ಯಾವುದೇ ಒಂದು ಕೃತಿ ಶಬ್ದದ ಅನುವಾದವಾಗಿರಬಾರದು. ಅದು ಒಂದು ಸಂಸ್ಕೃತಿಯ ಅನುವಾದವಾಗಿರಬೇಕು. ಓದುಗನ ಮನಸ್ಸು ತಟ್ಟುವಂತೆ ಅನುವಾದ ಇರಬೇಕು. ಅನುವಾದ ಕೈಗೊಳ್ಳುವಾಗ ನಾನಾ ಸಮಸ್ಯೆಗಳು ಎದುರಾಗುತ್ತವೆ. ಅವುಗಳೆಲ್ಲವನ್ನು ಬಗೆಹರಿಸಿಕೊಂಡು ಅನುವಾದಕ್ಕೆ ಮುಂದಾಗಬೇಕು. ಎರಡು ಭಾಷೆಯ ಜ್ಞಾನವುಳ್ಳವನೇ ಒಳ್ಳೆಯ ಅನುವಾದಕನಾಗಲು ಸಾಧ್ಯ. ಮೂಲಕ್ಕೆ ನಿಷ್ಠನಾಗಿಯೇ  ಅನುವಾದದ ಕಾರ್ಯ ಕೈಗೊಂಡರೆ ಮಾತ್ರ ಅನುವಾದಕನು ನಿಜವಾದ ಯಶಸ್ಸು ಕಾಣಬಲ್ಲನು ಎಂದು ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕನ್ನಡ ವಿಭಾಗದ ವಿದ್ಯಾಥಿರ್üಗಳಿಗೆ ಆಯೋಜಿಸಿದ್ದ `ಅನುವಾದ ಕಲೆ’ ವಿಷಯದಲ್ಲಿ ಉಪನ್ಯಾಸವನ್ನಿತ್ತು ಡಾ| ಜನಾರ್ದನ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಬೃಹನ್ಮುಂಬಯಿನ ಹಿರಿಯ ಪತ್ರಕರ್ತ, ಲೇಖಕ ಶ್ರೀನಿವಾಸ ಜೋಕಟ್ಟೆ ಅತಿಥಿüಯಾಗಿ ಉಪಸ್ಥಿತರಿದ್ದರು.

ಪತ್ರಿಕಾರಂಗದಲ್ಲಿ ಅನುವಾದಕ್ಕೆ ತುಂಬಾ ಬೇಡಿಕೆಯಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವವನಿಗೆ ಆ ಭಾಷೆಯ ಸಂಪೂರ್ಣ ಜ್ಞಾನ  ಇರಬೇಕು. ಎರಡು ಭಾಷೆಗಳಲ್ಲಿ ಹಿಡಿತ ಸಾಧಿಸಬೇಕು. ಯಾವುದಾದರೂ ಒಂದು ಲೇಖನ ಸಮಾಜಕ್ಕೆ ಬೇಕಾಗುವಂತಹ ಲೇಖನವನ್ನು ಅನುವಾದಿತ ಪತ್ರಿಕೆಗಳಿಗೆ ನೀಡಲಾಗುತ್ತದೆ. ಸಮಾಜ ವಿರೋಧಿ ವಿಷಯಗಳನ್ನು ಕೈಬಿಟ್ಟು ಅನುವಾದ ಕೈಗೊಳ್ಳಬೇಕು. ಜನಪರವಾದ ಲೇಖನಗಳನ್ನು ಅನುವಾದ ಮಾಡಬೇಕು. ಜೀವ ವಿರೋಧಿ ನಿಲುವುಗಳ ಸಂಗತಿಗಳನ್ನು ಅನುವಾದಕನು ಅನುವಾದಿಸಬಾರದು. ಅನುವಾದ ಎಂದರೆ ತಿಳಿಯುವುದು ತಿಳಿಸುವುದು ಪತ್ರಿಕಾರಂಗದಲ್ಲಿ ಅನುವಾದಕನು ತುಂಬಾ ಜಾಗೃತನಾಗಿರಬೇಕು ಎಂದು ಶ್ರೀನಿವಾಸ ಜೋಕಟ್ಟೆ ತಿಳಿಸಿದರು.

ಡಾ| ಜಿ.ಎನ್ ಉಪಾಧ್ಯಾಯ ಪ್ರಸ್ತಾವಿಕ ನುಡಿಗಳನ್ನಾಡಿ ಅನುವಾದವು ದೇಶ, ಭಾಷೆಯನ್ನು ಒಂದುಗೂಡಿಸುವುದು. ದೇಶ ಕಾಲವನ್ನು ದಾಟುವಂತಹದು. ಕನ್ನಡದಲ್ಲಿ ಸಾಕಷ್ಟು ಅನುವಾದ ಸಾಹಿತ್ಯ ಬಂದಿದೆ. ಮುಂಬಯಿಯಲ್ಲಿ ಅನುವಾದ ಸಾಹಿತ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಮುಂಬಯಿಯಲ್ಲಿ ಅನೇಕ ಸಾಹಿತಿಗಳು ಕನ್ನಡ ಅನುವಾದ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ. ಚುರ-ಮುರಿ ಶೇಷಗಿರಿ ನಾಯಕರ ಅಭಿಜ್ಞಾನ ಶಾಕುಂತಲ ನಾಟಕವು ಮುಂಬಯಿಯಲ್ಲಿ ಅನುವಾದಗೊಂಡು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸುರೇಖಾ ಸುಂದರೇಶ್ ದೇವಾಡಿಗ, ರಮಾ ಉಡುಪ, ಕುಮುದಾ ಆಳ್ವ, ಅನಿತಾ ಪಿ.ಪೂಜಾರಿ ತಾಕೋಡೆ, ಸುರೇಖಾ ಹರಿಪ್ರಸಾದ್ ಶೆಟ್ಟಿ, ಎಸ್.ನಳಿನಾ ಪ್ರಸಾದ್, ಜ್ಯೋತಿ ಎನ್.ಶೆಟ್ಟಿ, ಉದಯ ಬಿ.ಶೆಟ್ಟಿ, ಜಯ ಪೂಜಾರಿ ಕೊಜಕೊಳ್ಳಿ, ಲಕ್ಷಿ ್ಮೀ ಪೂಜಾರ್ತಿ, ದುಗ್ಗಪ್ಪ ಕೋಟಿಯವರ್ ಉಪಸ್ಥಿತರಿದ್ದು ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಮಂಜುನಾಥ್ ವಂದಿಸಿದರು.

ಪೇಜಾವರ ಮಠದಲ್ಲಿ ಜರುಗಿದ ಶ್ರೀಧಾಮ ಮಾಣಿಲದ ಪ್ರತಿಷ್ಠಾ ವರ್ಧಂತ್ಯುತ್ಸವ ಸಭೆ ಸ್ಫೂರ್ತಿ ತುಂಬವ ಮೂರ್ತಿಗಳಾಗೋಣ: ಮಾಣಿಲ ಮೋಹನದಾಸ ಸ್ವಾಮೀಜಿ 

ಮುಂಬಯಿ, ಜ.20: ಪ್ರಕೃತಿದತ್ತ ಆಹಾರ ಸೇವನೆಯಿಂದ ಆರೋಗ್ಯದಾಯಕ ಬದುಕು ಆದರೆ ಧರ್ಮದತ್ತ ಕರ್ಮಾನು, ಆಚಾರ ವಿಚಾರಗಳಿಂದ ಸನ್ಮಾರ್ಗ ಸಾಧ್ಯ. ಸದ್ಯ ಸಾಧುಸಂತರು, ತಪಸ್ಸಿಗಳ ತ್ಯಾಗ, ತಪಸ್ಸುಗಳಿಂದ ರಾಷ್ಟ್ರದ ಪುನರ್‍ನಿರ್ಮಾಣ ಆಗುತ್ತಿದೆ. ನಮ್ಮ ಮನಸ್ಥಿತಿ ಸ್ಥಿಮಿತಿಯಲ್ಲಿದ್ದಾಗ ಬದುಕು ನೆಮ್ಮದಿಯುತ ಆಗುವುದು. ಆದುದರಿಂದ ಜೀವನ ಬದುಕಾಗಿಸಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು. 

ಬಂಟ್ವಾಳ ತಾಲೂಕು ವಿಟ್ಲ ಗ್ರಾಮದ ಮುರುವ ಇಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಧಾರ್ಮಿಕ, ಸಾಂಸ್ಕೃತಿಕ  ಹಾಗೂ ಸಾಮಾಜಿಕ ವೈಭವಗಳೊಂದಿಗೆ ನಡೆಸಲ್ಪಡುವ ಪ್ರತಿಷ್ಠಾ ವರ್ಧಂತ್ಯುತ್ಸವ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ನಡೆಸಲ್ಪಟ್ಟ ಪೂರ್ವಭಾವಿ ಸಿದ್ಧತಾ ಸಮಾಲೋಚನಾ ಸಭೆಗೆ ಚಾಲನೆಯನ್ನೀಡಿ ಭಕ್ತಾಭಿಮಾನಿಗಳನ್ನುದ್ದೇಶಿಸಿ ಮಾಣಿಲಶ್ರೀ ಮಾತನಾಡಿದರು.

ಇಂದು ನಮ್ಮಲ್ಲಿ ಧನಾತ್ಮಕವಾಗಿ ಚಿಂತಿಸುವ ಮನಗಳು ಕ್ಷೀಣಿತವಾಗುತ್ತವೆ. ಕಾರಣ ನಮ್ಮ ಚಿಂತನೆಯೇ ಅವಿಚಾರವಾಗಿರುವುದು. ಆದುದರಿಂದ ಜಾತಿಕ್ಕಿಂತ ನೀತಿಯುತ ಜೀವನಕ್ಕೆ ಮಹತ್ವ ನೀಡಿ ಬಾಳಿರಿ. ಅಧಿಕಾರಕ್ಕಿಂತ ಬದುಕುವ ರೀತಿಗಾಗಿ ಮಾತ್ರ ಜಾತಿ ಮೀಸಲಾಗಿರಿಸಿ. ಆದರೆ ಜಾತಿಗಳು ರಾಷ್ಟ್ರದ ಉದ್ಧಾರಕ್ಕೆ ಪೂರಕವಾಗುವಂತಿರÀಲಿ. ನಮ್ಮ ಮನಸ್ಸುಗಳು ವಿಶಾಲವಾಗಿಸಿದಾಗ ಬಾಂಧವ್ಯ ಪ್ರೀತಿ ತನ್ನಷ್ಟಕ್ಕೆ ಪುಲುಕಿತ ಗೊಳ್ಳುವುದು. ನಾವು ಹಳೆಯ ಬದುಕನ್ನು ದೂರವಾಗಿಸಿ ಏಕಾಂತವನ್ನು ಹರಸುವುದರಲ್ಲಿ ಅರ್ಥವಿಅಲ್ಲ. ಎಂದಿಗೂ ಕೂಡು ಕುಟುಂಬದಿಂದ ಮಾತ್ರ ಸಂಸ್ಕಾರಕ್ಕೆ ಸುಖ ಪ್ರಾಪ್ತಿಯಾಗುವುದು. ಅಂತೆಯೇ ಜೊತೆಯಾಗಿ ಉಣ್ಣುವ ಆಹಾರ ಮತ್ತು ಒಗ್ಗೂಡುವಿಕೆಯಿಂದ ಪೂರೈಸುವ ಆಚರಣೆಗಳಿಂದ ಸಂತೃಪ್ತ ಜೀವನ ಸಾಧ್ಯ. ಇದೇ ಶುದ್ಧ ಜೀವನ ಎಂದೂ ಶ್ರೀಗಳು ಸಂತ್ಸಂಗ ಕಾರ್ಯಕ್ರಮದಲ್ಲಿ ಭಕ್ತರಿಗೆ ಮನವರಿಸಿದರು.

ಮಾಣಿಲ ಕ್ಷೇತ್ರದಲ್ಲಿ ಬರುವ ಫೆ.18 ರಿಂದ ಫೆ.25ರ ತನಕ ಧಾರ್ಮಿಕ, ಸಾಂಸ್ಕೃತಿಕ  ಹಾಗೂ ಸಾಮಾಜಿಕ ವೈಭವಗಳೊಂದಿಗೆ ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಅಷ್ಟಪವಿತ್ರ ನಾಗಮಂಡಲೋತ್ಸವ, ಭಜನೋತ್ಸವ, ಮಹಿಳಾ ಸಮಾವೇಶ, ನೇಮೋತ್ಸವ ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ವರ್ಧಂತ್ಯುತ್ಸವದ ಶುಭಾವಸರದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ, ಪಂಚ ಪರ್ಯಾಯ ಅಲಂಕರಿಸಿದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಗುರುವಂದನೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದು ಸ್ವರ್ಣಸಂಭ್ರಮ ಪೂರೈಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಭಿಷಿಕ್ತ (ಖಾವಂದರು) ಪದ್ಮಶ್ರೀ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನಾ ಸನ್ಮಾನ ನೆರವೇರಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಸಭೆಯಲ್ಲಿ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದ್ದು ಇದರ ಯಶಸ್ಸಿಗೆ ಮುಂಬಯಿ ಸಮಿತಿ ರಚಿಸಲಾಗುವುದು ಎಂದು ಮಾಣಿಲ ಶ್ರೀಗಳು ಮಾಹಿತಿಯನ್ನಿತ್ತು ನೆರೆದ ಸದ್ಭಕ್ತರಿಗೆ ಪ್ರಸಾದ, ಮಂತ್ರಾಕ್ಷತೆ ನೀಡಿ ಹರಸಿದರು.

ಸಭೆಯಲ್ಲಿ ಅತಿಥಿs ಅಭ್ಯಾಗತರುಗಗಳಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ಉಪಸ್ಥಿತರಿದ್ದು ಶ್ರೀಗಳನ್ನು ಗೌರವಿಸಿದರು. ಕುಲಾಲ್ ಸಂಘದ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್, ಭಾಸ್ಕರ್ ಶೆಟ್ಟಿ ಪುಣೆ, ದಯಾನಂದ ಬಂಗೇರ, ಅರುಣ್‍ಕುಮಾರ್ ರೈ ಚೆಲ್ಲಡ್ಕ, ದಾಮೋದರ ಶೆಟ್ಟಿ ನೆರೂಲ್, ರಾಜೇಶ್ ಪಾಟೇಲ್ ಥಾಣೆ ವೇದಿಕೆಯಲ್ಲಿ ಆಸೀನರಾಗಿದ್ದರು. 

ಮಾಣಿಲಶ್ರೀಗಳು ಸಜ್ಜನರಾಗಿದ್ದು ತೆರೆಮರೆಯಲ್ಲಿದ್ದೇ ಸಮಾಜಮುಖಿ ಸೇವೆಗೈದು ಶ್ರೀಹರಿಗೆ ಸಮೀಪಿಗರು. ಎಲ್ಲರನ್ನೂ ಸಮಾನತೆಯಲ್ಲಿ ಕಂಡು ಗೌರವಿಸಿ ಹರಸುವ, ಅಪೇಕ್ಷೆಯನ್ನಿರಿಸದ ಸ್ವಾಮೀಜಿ. ನಮ್ಮ ಸಮಾಜ ಮುಂಬಯಿಗೆ ಬಂದಿದ್ದೇ ಸೇವೆ ಮಾಡಲು. ಸೇವೆಯೇ ನಮ್ಮ ಧರ್ಮವಾಗಿಸಿದ್ದೇವೆ. ಇಂತಹ ಸೇವೆಗೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನಮ್ಮ ಭಾಗ್ಯವಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಕೆ.ಡಿ ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಮಾಣಿಲ ಬರೇ ಮಾಣಿಲದಲ್ಲ ಆದರ ಸತ್ವದಲ್ಲೂ ಚೆಲ್ಲಡ್ಕ ಮಣ್ಣಿನ ಗುಣ ಬೆಳಗುಂದಿದೆ. ಹೆತ್ತತಾಯಿ ಮತ್ತು ಸ್ವಾಮೀಜಿ ಅವರ ಆಶೀರ್ವಾದ ಇದ್ದರೆ ನಾವೂ ಎಷ್ಟೂ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾನು ಇವತ್ತು ಈ ಮಟ್ಟಕೆ ಏರಲು ಸ್ವಾಮೀಜಿ ಅವರ ಅನುಗ್ರಹವೂ ಪೂರಕವಾಗಿದೆ. ಯಾರ ಹತ್ತಿರ ಧನವಿಲ್ಲದಿದ್ದರೂ ತನು ಮನದಿಂದ ಸಹಕರಿಸಬೇಕು. ಕನಿಷ್ಠ ಒಂದು ಹಿಂಡು ಅಕ್ಕಿಯಷ್ಟು ನೆರವು ಮಾಡಬೇಕು ಎಂದರು. 

ಸ್ವಾಮೀಜಿ ಅವರ ಪರಿಶ್ರಮದಿಂದ   ಮಾಣಿಲ ಕ್ಷೇತ್ರ ಕಂಗೊಳಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾವೆಲ್ಲರೂ ಸಹಕರಿಸಬೇಕು. ಶ್ರೀಗಳ ಯೋಜಿತ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ದೇವದಾಸ್ ಕುಲಾಲ್ ಕರೆಯಿತ್ತರು.

ಸಭೆಯಲ್ಲಿ ರಾಜೇಂದ್ರ ದೇವಾಡಿಗ, ವಿಶಾಲಕ್ಷಿ ಆರ್.ಆಳ್ವ, ಅತುಲ್ ಓಝಾ, ಶಶಿಧರ್ ಶೆಟ್ಟಿ, ರಘು ಮೂಲ್ಯ, ಜೀಕ್ಷಿತ್ ಕೆ.ಶೆಟ್ಟಿ, ಹರೀಶ್ ಚೇವಾರ್ ಚಾರ್ಕೋಪ್, ಕ್ಷೇತ್ರದ ರಾಜೇಶ್ ಕೆ.ಪಿ. ಉಪಸ್ಥಿತರಿದ್ದು ನಾಗಮಂಡÀಲೋತ್ಸವ ಸಮಿತಿ ಅಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕರ್ನೂರ್ ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನೇತ್ರದಾನಿ ಸದಸ್ಯೆ ಅಭಿನಂದನೆ
ಮುಂಬಯಿ, ಜ.19: ಪ್ರಸಾದ್ ನೇತ್ರಾಲಯಕ್ಕೆ ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿರುವ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ ಸರಸ್ವತಿ ಅವರನ್ನು ಕರ್ನಾಟಕರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದಿಂದ ಜ.13ರಂದು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಎಂ.ನಾರಾಯಣ್ ಭಟ್ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಈಗಾಗಲೇ ದೇಹ, ನೇತ್ರದಾನದ ಒಪ್ಪಿಗೆ ಪತ್ರಕ್ಕೆ ರುಜು ಮಾಡಿರುವ ಉಪಾಧ್ಯಕ್ಷೆ ಹೆಚ್.ಕೃಷ್ಣಾಬಾಯಿ, ಕಾರ್ಯದರ್ಶಿ ಎಸ್, ಎಸ್, ತೋನ್ಸೆ, ಸಭಾಧ್ಯಕ್ಷರು ಸಂಘದ ಕಾರ್ಯಕಾರಿ  ಸಮಿತಿ ಸದಸ್ಯೆ ಸರಸ್ವತಿ ಅವರನ್ನು ಅಭಿನಂದಿಸಿರು.

6ನೇ ವೇತನ ಆಯೋಗ ತಾತ್ಕಾಲಿಕ ಪರಿಹಾರಕ್ಕೆ ಶಿಫಾರಸ್ಸು ಮಾಡದೆ, ಸ್ಪಷ್ಟ ನಿಲುವನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಪ್ರಸಾರವಾಗುತ್ತಿರುವ ಬಗ್ಗೆ ಸಭೆ ಅಸಂತೋಷ ವ್ಯಕ್ತಪಡಿಸಿತು. ಕೇಂದ್ರ ಸರಕಾರತನ್ನ ನಿವೃತ್ತ ನೌಕರರಿಗೆ ನೀಡುತ್ತಿರುವಎಲ್ಲಾ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಮನವಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಾರ್ಯಕಾರೀ ಸಮಿತಿಯ ಸದಸ್ಯೆ ಕೆ.ಪುಷ್ಪಾವತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯ ಪ್ರಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯಣ್ಣ ಭಂಡಾರಿ, ಗ್ರಾಮೀಣ ಅಭಿವೃದ್ದಿ ಇಲಾಖೆಯ ಹಿರೇಮಠ ವಾಮನ್ ಭಟ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜೊತೆ ಕಾರ್ಯದರ್ಶಿ ಬಿ.ರವಿನಾಥ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಪಾಂಡು ಎಂ.ಶೆಟ್ಟಿ ವಂದಿಸಿದರು.


ಜ.27: ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಸಂಸ್ಥೆಯಿಂದ ಕೊಂಕಣಿ ಉತ್ಸವ ಶ್ರೀಮದ್ ವಿದ್ಯಾಧಿರಾಜ ತೀರ್ಥರ ಸನ್ಯಾಸ ದೀಕ್ಷಾ ಸುವರ್ಣೋತ್ಸವ-ಗೌರವ ವಂದನೆ

ಮುಂಬಯಿ, ಜ.19: ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಸಂಸ್ಥೆಯು ಇದೇ ಜ.27ರ ಶನಿವಾರ ಸಂಜೆ ದಾದರ್ ಪೂರ್ವದ ಸ್ವಾಮಿ ನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೆಯರ್ ಸ್ವಾಮೀಜಿ ಹಾಗೂ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಕೊಂಕಣಿ ಉತ್ಸವ 2018 ಸಂಭ್ರಮಿಸಲಿದೆ ಎಂದು ತ್ರಿವೇಣಿ ಸಂಗಮ್‍ನ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್ ತಿಳಿಸಿದರು.

ಇಂದಿಲ್ಲಿ ಶುಕ್ರವಾರ ಸಂಜೆ ದಾದರ್ ಪ್ರಭಾದೇವಿ ಅಲ್ಲಿನ ಕೊಹಿನೂರು ಹೊಟೇಲು ಸಭಾಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಉಲ್ಲಾಸ್ ಕಾಮತ್ ಮಾತನಾಡಿ ಶ್ರೀಮದ್ ವಿದ್ಯಾಧಿರಾಜ ತೀರ್ಥರ ಸನ್ಯಾಸ ದೀಕ್ಷಾ ಸುವರ್ಣೋತ್ಸವ ಹಾಗೂ ಗೌರವ ವಂದನೆ ನಡೆಸಲಾಗುವುದು. ಆ ಪ್ರಯುಕ್ತ ಅಂದು ಅಪರಾಹ್ನ 3.00 ಗಂಟೆಗೆ ವಡಲಾ ಅಲ್ಲಿನ ರಾಮಮಂದಿರದಿಂದ ಭವ್ಯ ಶೋಭಾಯಾತ್ರೆ ಮೂಲಕ ಯತಿವರ್ಯರನ್ನು ಸಭಾಂಗಣಕ್ಕೆ ವೇದಘೋಷಗಳೊಂದಿಗೆ ಬರಮಾಡಿ ಕೊಳ್ಳಲಾಗುವುದು. ನಂತರ ಪಾದಪೂಜೆ, ಗೌರವ ವಂದನೆ, ಆಶೀರ್ವಚನ, ಅಶೋಕ್ ಪಟ್ಕಿ ಬಳಗದಿಂದ ಸಂಗೀತ ಸಂಧ್ಯಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಮುಕುಂದ್ ವೈ. ಕಾಮತ್, ಪ್ರಕಾಶ್ ಭಟ್, ಉಮೇಶ್ ಪೈ, ಕಿರಣ್ ಕಾಮತ್ ಮತ್ತು ಸಚಿನ್ ಕಾಮತ್ ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi