Brief Mumbai News with Pictures
Kemmannu News Network, 26-01-2018 11:55:11
Shiv Sena Executive Meeting held at NSCI Sardar Vallabh Bhai Patel auditorium, worli. in pic Uddhav Thackeray along with Aditya, Manohar Joshi, Sudhir Joshi
Mumbai Jan. 25 :- Petroleum Conservation Research Association & Ministry of Petroleum and Conservation a New Cycling Initiative for enthusiastic cyclists of Mumbai on Thursday.
Mumbai Jan. 25 :- Police security outside at The Regal Cinema on the release day Hindi Movie "Padmavat" at Colaba in Mumbai.
Mumbai Jan. 25 :- The Gas tanker that overturned near Fountain Hotel, Motorists traveliing Thane via Ghodbunder road towards Mumbai.
Mumbai Jan. 25 :- Here is a look of some iconic buildings that were decorated with lights on the eve of Republic Day. in Mumbai on Thursday.
Mumbai Jan. 25 :- High tight Police security after Padmavat film, one show release at Metro Cinema in Mumbai on Wednesday.
Mumbai Jan. 25 :- After coming live on TV 9 channel on Padmavati topic, Thakur Ajay Sengar & Amita Chauhan were arrested by the Sion Police outside the studio
ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಗುರುವರ್ಯರÀ
ಶಿಷ್ಯ ಸ್ವೀಕಾರ-ಸನ್ಯಾಸ ದೀಕ್ಷೆಯ ವೈಭವದ ಸ್ವರ್ಣಮಹೋತ್ಸವ ಸಂಭ್ರಮ
ಮುಂಬಯಿ, ಜ.24: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧಿಪತಿ, ಪರ್ತಗಾಳಿ ಜಿವೋತ್ತಮ ಮಠದ 23ನೇ ಯತಿವರ್ಯರಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಪೂಜ್ಯನೀಯ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರ ಸನ್ಯಾಸ ದೀಕ್ಷಾ ಸ್ವರ್ಣಮಹೋತ್ಸವ ಸಂಭ್ರಮವನ್ನು ಇಂದು (ಜ.25) ಗುರುವಾರ ರಾತ್ರಿ 7.00 ಗಂಟೆಗೆ ಶ್ರೀ ರಾಮಮಂದಿರ, ದ್ವಾರಕಾನಾಥ ಭವನ, ವಡಲಾ, ಮುಂಬಯಿ ಇಲ್ಲಿ ಭಕ್ತಿಪೂರ್ವಕವಾಗಿ ನೆರವೇರಿಸಲಾಗುವುದು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲಾ ಮುಂಬಯಿ ಸಮಿತಿ ಹಾಗೂ ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿ, ವಡಾಲಾ ಮುಂಬಯಿ ನೇತೃತ್ವದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಭವ್ಯ ಸಮಾರಂಭದಲ್ಲಿ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ಸನ್ಯಾಸ ದೀಕ್ಷಾ ಸ್ವರ್ಣಮಹೋತ್ಸವ ಆಚರಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀವರ್ಯರಿಗೆ ಪೂಜ್ಯನೀಯ ಗೌರವದೊಂದಿಗೆ ಸನ್ಮಾನಿಸಲಾಗುವುದು ಎಂದು ಶ್ರೀ ರಾಮ ಮಂದಿರ, ವಡಲಾ, ಮುಂಬಯಿ ಇದರ ಅಧ್ಯಕ್ಷ ಗೋವಿಂದ ಎಸ್.ಭಟ್ ಮತ್ತು ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ತಿಳಿಸಿದ್ದಾರೆ.
ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ:
ಮುಂಬಯಿಯ ವಡಾಲಾ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನದಲ್ಲೇ 26.ಫೆಬ್ರವರಿ,1967 (ಮಾಘ ಕೃಷ್ಣ ದ್ವಿತೀಯ) ಈ ದಿನದಂದು ಬೆಳಗ್ಗೆ 11.43 ಶುಭ ಮುಹೂರ್ತದಲ್ಲಿ ತನ್ನ ಗುರುವರ್ಯರಾದ ಪೂಜ್ಯ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮೀಜಿ ಅವರಿಂದ ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಸನ್ಯಾಸದೀಕ್ಷೆ ಪಡೆದು ಕೊಂಡಿರುವುದೇ ಮುಂಬಯಿಗರ ಹಿರಿಮೆ, ವೈಶಿಷ್ಟ ್ಯವಾಗಿದೆ. 12.ಫೆಬ್ರವರಿ,2017 (ಮಾಘ ಕೃಷ್ಣ ದ್ವಿತೀಯ) ಈ ದಿನದಂದು ಶ್ರೀ ವಿದ್ಯಾಧಿರಾಜತೀರ್ಥರು ಸನ್ಯಾಸ ದೀಕ್ಷೆಯ 50ವರ್ಷಗಳನ್ನು ಪೂರೈಸುವುದರೊಂದಿಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ (ಗೋವಾ) ಇದರ ವೈಭವವನ್ನು ಇಮ್ಮಡಿಗೊಳಿಸಿದ್ದಾರೆ. 2018ನೇ ಜನವರಿ.21 ರಿಂದ ಫೆಬ್ರುವರಿ.11 ರವರೆಗೆ ಶಿಷ್ಯ ಸ್ವೀಕಾರ ಮತ್ತು ಸನ್ಯಾಸ ದೀಕ್ಷೆಯ ವೈಭವದ 50 ವರ್ಷಗಳನ್ನು ಪೂರೈಸಿದ ಬಳಿಕ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರ ಮೊದಲ ಶಿಬಿರ, ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಜೊತೆಗೂಡಿ ಇದೇ ಮೊದಲ ಬಾರಿ ತಾನು ದೀಕ್ಷೆ ಸ್ವೀಕರಿಸಿದ ಮುಂಬಯಿ ಮಹಾನಗರದ ವಡಾಲ ಅಲ್ಲಿನ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನಕ್ಕೆ ಚರಣಸ್ಪರ್ಶಗೈದು ಭಕ್ತಾಭಿಮಾನಿಗಳನ್ನು ಪುಲಕಿತ ಗೊಳಿಸಿರುವರು.
ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು 50 ವರ್ಷಗಳ ಸನ್ಯಾಸವನ್ನು ಅನುಕರಣೀಯ ರೀತಿಯಲ್ಲಿ ಮಾರ್ಗದರ್ಶಿಸಿದ್ದಾರೆ. ಅದು ನಮ್ಮ ಗ್ರಂಥಗಳಲ್ಲಿ ವರ್ಣಿಸಲಾಗಿರುವ ಆದರ್ಶ ಯತಿಗಳಿಗೆ ತಕ್ಕುದಾದುದಾಗಿದೆ. ಅವರು ವೈದಿಕ ನಿಯಮಗಳು, ಸಂಪ್ರದಾಯ ಮತ್ತು ಸಂಸ್ಥಾನದ ವಿಧಿವಿಧಾನಗಳ ನಿರ್ವಹಣೆಯಲ್ಲಿ ಸೂಕ್ಷ್ಮ ಮತ್ತು ಶಿಸ್ತುಬದ್ಧ ನಿಲುವುಗಳನ್ನು ತೋರ್ಪಡಿಸಿದ್ದಾರೆ. ಸಂಸ್ಥಾನ ಭಕ್ತರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಉನ್ನತೀಕರಣಕ್ಕೆ ಸಾಧನವೂ ಆಗಿದ್ದಾರೆ. ಎಚ್ ಎಚ್ ವಿದ್ಯಾಧಿರಾಜ ಸ್ವಾಮೀಜಿ ತಮ್ಮ ಪವಿತ್ರವಾದ ಸ್ಥಾನವನ್ನು ವೈಭವೀಕರಿಸಿದ್ದು ಮಾತ್ರವಲ್ಲದೆ ವಿಶೇಷ ಅನುಸ್ಥಾನಮ್ ಅಥವಾ ಪ್ರಮುಖ ಸ್ಥಳಗಳಲ್ಲಿ ಚತುರ್ಮಾಸ ಅಥವಾ ಕ್ಲಿಷ್ಟ ಯಾತ್ರೆಗಳಿಗಾಗಿ ಅಥವಾ ಪವಿತ್ರ ಗ್ರಂಥ ಪ್ರತಿಪಾದನೆಗಾಗಿ ಅಥವಾ ಯಾವುದೇ ದತ್ತಿ ಕಾರಣಗಳಿಗಾಗಿ ತಮ್ಮನ್ನು ನಿಯೋಜಿಸಿ ಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳು ಸಂಸ್ಥಾನದ ವೈಭವವನ್ನು ಹೆಚ್ಚಿಸಿದೆ ಮತ್ತು ಸಮಾಜದ ಬಾಂಧವರ ಯೋಗಕ್ಷೇಮವನ್ನು ವೃದ್ದಿಸಿದೆ.
ಸ್ವಾಮೀಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನಕ್ಕೆ ನಾವು ಸದಾ ಋಣಿಯಾಗಿದ್ದೇವೆ. ಅವರ ಮಾರ್ಗದರ್ಶನ ಮತ್ತು ಅವರ ಅಗ್ರಮಾನ್ಯ ಸಾಧನೆಗಳಿಗೆ ಮನದಾಳದ ಕೃತಜ್ಞತೆ ಮತ್ತು ಗೌರವ ಅರ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸ್ವಾಮೀಜಿಯ ನಿರಂತರ ಆಶೀರ್ವಾದ ನಮಗೆ ಹೀಗೆ ಇರಲಿ ಎಂದು ಆ ಭಗವಂತನ ಕಮಲದ ಪಾದಗಳಿಗೆರಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದು ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾಭಿಮಾನಿ ಗಳು ತಿಳಿಸುತ್ತಿದ್ದಾರೆ.
ಶ್ರೀವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರು ತಮ್ಮ ಸನ್ಯಾಸ ದೀಕ್ಷ 50ನೇ ವರ್ಷ ಪೂರೈಸಿದ ಶುಭವಸರದಲ್ಲಿ ವಡಲಾದ ದ್ವಾರಕಾನಾಥ ಭವನದ ಶ್ರೀರಾಮ ಅಧ್ಯಾತ್ಮಿಕ ಸಾನಿಧ್ಯದಲ್ಲಿ ಶ್ರೀಪಾದರನ್ನು ನಮಿಸಿ ಗೌರವಿಸಲು ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಭಕ್ತಮಹಾಶಯರು ಸಿದ್ಧತೆ ನಡೆಸಿರುವರು. ಅಂತೆಯೇ ಶ್ರೀಪಾದರಿಗೆ ವಿನಮ್ರ ಶುಭಾಶಯಗಳು ಮತ್ತು ಗೌರವಂದನೆ ಸಲ್ಲಿಸಲು ಆಯೋಜಿಸಿರುವ ಭವ್ಯ ಸಮಾರಭದಲ್ಲಿ ರಾಮ ಸೇವಕರು, ಮಹಿಳಾವೃಂದ ಹಾಗೂ ಭಕ್ತಾಭಿಮಾನಿಗಳು ನಮ್ಮೊಂದಿಗೆ ಸ್ವಪರಿವಾರದೊಂದಿಗೆ ಸಹಭಾಗಿಯಾಗಿ ಶ್ರೀ ಮಹಾಗಣಪತಿ, ಶ್ರೀರಾಮಚಂದ್ರ ಮತ್ತು ಶ್ರೀ ಸ್ವಾಮೀಜಿ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಸಂಘಟಕರು ಈ ಮೂಲಕ ಕೋರಿದ್ದಾರೆ.
ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ಮಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಮಾರಂಭ ಬೆಂಗಳೂರಿನ ವಸಂತ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರಗಿದ್ದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಸ್ವೀಕರಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷÀ ಎಂ.ಸಿದ್ಧರಾಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ ಎಸ್ ಹರ್ಷ, ಸಾಹಿತಿ ಬರಗೂರು ರಾಮಚಂದ್ರಪ್ಪ, ಅಕಾಡೆಮಿ ಕಾರ್ಯದರ್ಶಿ ಎಸ್ ಶಂಕರಪ್ಪ, ಹಾಗೂ ನಿವೃತ ಅಧಿಕಾರಿ ರವೀಂದ್ರನಾಥ ಠಾಗೂರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಜಗನ್ನಾಥ ಶೆಟ್ಟಿ ಬಾಳ, ಸ್ಟಾನ್ಲಿ ಪಿಂಟೋ , ಡಾ.ಯು.ಪಿ ಶಿವಾನಂದ ಸೇರಿದಂತೆ ರಾಜ್ಯದಿಂದ ಒಟ್ಟು 45 ಮಂದಿ ಪತ್ರಕರ್ತರಿಗೆ ಈ ಬಾರಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
Mumbai Jan.23: Shiv Sena Executive President Uddhav Thackeray, Aditya Thackeray, Sudhir Joshi, Ramdas Kadam, Anant Gite, Chandrakant Khaire & Shinde during the Nationla Executive Meeting & Election 2018 at NSCI, Worli in Mumbai.
ಕುಕ್ಕಾಜೆ: ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ
ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ಹಾಗೂ ಶರಫುಲ್ ಇಸ್ಲಾಮ್ ಕಮೀಟಿ ಕುಕ್ಕಾಜೆ ಇದರ ಆಶ್ರಯದಲ್ಲಿ 40 ನೇ ವಾರ್ಷಿಕ ಕುತುಬಿಯ್ಯತ್ ನೇರ್ಚೆ ಹಾಗೂ ಪ್ರಭಾಷಣ ಕಾರ್ಯಕ್ರಮದಲ್ಲಿ ಕೇರಳ ಪತ್ತನಾಪುರಂ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅಲ್ಲಾಹನ ಕರುಣೆ ಎಂಬ ವಿಷಯದ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದರು.
ಸಯ್ಯದ್ ಹುಸೈನ್ ಬಾಅಲವಿ ತಂಙಳ್ ದುವಾಶೀರ್ವಚನಗೈದರು. ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ಮುದರ್ರಿಸ್ ಎ.ಎಂ.ಅಬ್ದುಲ್ಲ ಮದನಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಕುಕ್ಕಾಜೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ., ಕಾರ್ಯದರ್ಶಿ ರಫೀಕ್, ಖಜಾಂಜಿ ಹಸೈನಾರ್ ಪಿ.ಕೆ., ಶರಫುಲ್ ಇಸ್ಲಾಮ್ ಕಮೀಟಿ ಅಧ್ಯಕ್ಷ ಹಂಝ ಕುರಿಯಪ್ಪಾಡಿ, ಸಾಲೆತ್ತೂರು ರೇಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಟಿ., ಪಾತೂರು ಅಹ್ಮದ್ ಉಸ್ತಾದ್, ಸಾಲೆತ್ತೂರು ರೇಂಜ್ ಮುಅಲ್ಲಿಂ ಕಾರ್ಯದರ್ಶಿ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಮಾಜಿ ಮುಕ್ರಿ ಅಬೂಬಕ್ಕರ್ ಮುಸ್ಲಿಯಾರ್, ಶರಫುಲ್ ಇಸ್ಲಾಮ್ ಕಮೀಟಿ ಕಾರ್ಯದರ್ಶಿ ಹಾರಿಸ್, ಮಾಜಿ ಕಾರ್ಯದರ್ಶಿ ಉಸ್ಮಾನ್ ಕುಕ್ಕಾಜೆ, ಕೋಶಾಧಿಕಾರಿ ಬಶೀರ್ ಮಂಚಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನೇರಪ್ರಸಾರವನ್ನು ಯೂಟ್ಯೂಬ್ನಲ್ಲಿ ಎಸ್.ಜೆ.ಎಸ್.ಮೀಡಿಯಾ ಲೈವ್ ಟಿವಿ ಪ್ರಸಾರ ಮಾಡಿದರು. ಹಿದಾಯತುಲ್ ಇಸ್ಲಾಂ ಮದರಸ ಕುಕ್ಕಾಜೆ ಸದರ್ ಮುಅಲ್ಲಿಂ ಉಮರ್ ಫಾರೂಖ್ ಅರ್ಶದಿ ಸ್ವಾಗತಿಸಿ ವಂದಿಸಿದರು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಯಾನ್, ಪುರಂದರ ದಾಸರ ಆರಾಧನೋತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ ಸಯಾನ್, ಶ್ರೀ ಪುರಂದರ ದಾಸರ ಆರಾಧನೋತ್ಸವವನ್ನು ಶನಿವಾರ ದಿನಾಂಕ ೨೦. ೧. ೨೦೧೮ ರಂದು ಸೀವುಡ್ಸ್, ನೇರೂಲ್ ನಲ್ಲಿರುವ ’ಆಶ್ರಯ’ ದಲ್ಲಿ ಸಂಭ್ರಮದಿಂದ ಆಚರಿಸಿತು. ಸಂಜೆ ಶ್ರೀ ಕೃಷ್ಣ ಬಾಲಾಲಯದಿಂದ ಶ್ರೀ ಪುರಂದರ ದಾಸರ ಭಾವಚಿತ್ರವನ್ನು, ಪುರಂದರದಾಸರಂತೆ ವೇಷ ಧರಿಸಿದ ಶ್ರೀ ರಘುಪತಿ ಉಡುಪರು ಹಾಗೂ ಭಕ್ತಾದಿಗಳ ಗೀತ ನರ್ತನದ ಮೆರವಣಿಗೆಯೊಂದಿಗೆ ಸಭಾಗೃಹಕ್ಕೆ ತಂದು ಶ್ರೀ ಗೋಪಾಲಕೃಷ್ಣ ದೇವರ ಭಾವಚಿತ್ರದೊಂದಿಗೆ, ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ, ಬಾಲ ಕಲಾವೃಂದ, ಶ್ರೀ ಕೃಷ್ಣ ಭಜನಾ ಮಂಡಳಿ, , ಹರಿಕೃಷ್ಣ ಭಜನಾ ಮಂಡಳಿಯವರಿಂದ ಪುರಂದರದಾಸರ ದೇವರನಾಮ ಸಂಕೀರ್ತನೆ ನೆರವೇರಿತು. ಬಾಲಾಲಯದ ಆರ್ಚಕರಾದ ಕೃಷ್ಣಪ್ರಸಾದ ಕೆದಿಲಾಯರು ಶ್ರೀ ದೇವರಿಗೆ .ಮಹಾ ಮಂಗಳಾರತಿಗೈದು, ತಮ್ಮ ಪ್ರಾರ್ಥನೆಯಲ್ಲಿ ಗೋಕುಲ ಕಟ್ಟಡ ನಿರ್ಮಾಣದ ಕಾರ್ಯ ನಿರ್ವಿಘ್ನವಾಗಿ ನೆರವೇರಿ, ಅತಿ ಶೀಘ್ರದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆಯಾಗಲಿ ಎಂದು ಹಾರೈಸಿ, ಅಂದಿನ ಧಾರ್ಮಿಕ ಕಾರ್ಯಕ್ಕೆ ದೇಣಿಗೆಯನ್ನಿತ್ತ ಸೇವಾರ್ಥಿಗಳಿಗೆ ಹಾಗೂ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದರು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್. ಕೆ. ಬಿ. ಎಸೋಸಿಯೇಶನ್ ನ ಪದಾಧಿಕಾರಿಗಳು ಹಾಗೂ ಕಾರ್ಯಕಾರೀ ಸಮಿತಿ ಸದಸ್ಯರುಗಳು ಸೇರಿದಂತೆ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಹಾರಾಷ್ಟ್ರದ ಅಯೋಧ್ಯೆ ಪ್ರಸಿದ್ಧಿಯ ವಡಲಾದ ಶ್ರೀರಾಮ ಮಂದಿರದ ಪ್ರತಿಷ್ಠಾ ವರ್ಧಂತಿ ಉತ್ಸವ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.23: ಮಹಾರಾಷ್ಟ್ರದ ಅಯೋಧ್ಯೆ ಪ್ರಸಿದ್ಧಿಯ ವಡಲಾ ಅಲ್ಲಿನ ದ್ವಾರಕಾನಾಥಭವನದ ಶ್ರೀರಾಮ ಮಂದಿರದ ಪ್ರತಿಷ್ಠಾ ವರ್ಧಂತಿ ಉತ್ಸವವು ಇಂದಿಲ್ಲಿ ಧಾರ್ಮಿಕ ಪೂಜಾಧಿಗಳೊಂದಿಗೆ ವಿಧಿವತ್ತಾಗಿ ನೆರವೇರಿಸಲ್ಪಟ್ಟಿತು.ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ, ಪರ್ತಗಾಳಿ ಜಿವೋತ್ತಮ ಮಠದ ಮಹಾಧಿಪತಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರು ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನೊಳಗೊಂಡು ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀರಾಮಚಂದ್ರ ದೇವರಿಗೆ ಪೂಜೆ ನೆರವೇರಿಸಿದರು.
ಮಂದಿರದ ಪ್ರಧಾನ ಅರ್ಚಕ ಶ್ರೀ ಸುಧಾಮ ಅನಂತ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ, ಸಂಪ್ರದಾಯಿಕ ಪೂಜಾಧಿಗಳÀನ್ನು ನೆರವೇರಿಸಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಎಸ್.ಭಟ್, ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಮುಕುಂದ್ ಕಾಮತ್, ಅಮುಲ್ ಪೈ, ಉಮೇಶ್ ಪೈ, ಕಮಲಾಕ್ಷ ಗಿ.ಸರಾಫ್, ಮತ್ತಿತರ ಪದಾಧಿಕಾರುಗಳು ಸೇರಿದಂತೆ ರಾಮ ಸೇವಾಕರ್ತರು, ಮಹಿಳಾ ಮಂಡಳಿ, ನೂರಾರು ಭಕ್ತರು ಉಪಸ್ಥಿತರಿದ್ದರು.
ಅಜೆಕಾರು, ಜ.22- ಅಜೆಕಾರು ಕುರ್ಪಾಡಿಯಲ್ಲಿ ನಡೆಯುವ ಆದಿಗ್ರಾಮೋತ್ಸವದಲ್ಲಿ ನೀಡಲಾಗುವ ಪ್ರತಿಷ್ಠಿತ "ಆದಿಗ್ರಾಮೋತ್ಸವ" ಗೌರವಕ್ಕೆ ಮುಂಬಯಿಯ ಹಿರಿಯ ಸಮಾಜ ಸೇವಕ- ಕಂಪನಿ ಸೆಕ್ರಟರಿಯಾಗಿ ನಿವೃತ್ತರಾದ ಮೂಲತ ಅಜೆಕಾರಿನವರಾದ ಪೂವ ಎಂ. ಸಾಲ್ಯಾನ್ ಆಯ್ಕೆ ಯಾಗಿದ್ದಾರೆ.
ಸಾಧಕರಿಗೆ ನೀಡುವ ಗ್ರಾಮ ಗೌರವಕ್ಕೆ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಮೂಲಕ ಅತ್ಯುತ್ತಮ ಸಮಾಜ ಸೇವೆಯನ್ನು ಮಾಡುತ್ತಿರುವ ಮುನಿಯಾಲು ಉದಯ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಜ. 25 ರಂದು ಸಂಜೆ ಕರ್ಪಾಡಿ ಶ್ರೀ ಪುರಾತನ ಬೊಬ್ಬರ್ಯ ದೈವಸ್ಥಾನದ ಬಳಿ ಆಕಾಶಬೆಟ್ಟು ಬಾಕಿಮಾರು ಗದ್ದೆಯ ಹಾಡಿಮನೆ ಚಿಕ್ಕಿ ನಾಯ್ಕ್ ವೇದಿಕೆಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಿಸುವರು ಎಂದು ಸಮಿತಿಯ ಗೌರವಾಧ್ಯಕ್ಷ ಡಾ| ಸಂತೋಷ್ ಕುಮಾರ್ ಶೆಟ್ಟಿ ಮತ್ತು ಗ್ರಾಮೋತ್ಸವದ ರುವಾರಿ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಿಜಾರು ಅಣ್ಣಪ್ಪ, ವಿಜಯನಾಥ ವಿಠಲ ಶೆಟ್ಟಿ, ಐಕಳ ದೇವಿಪ್ರಸಾದ ಶೆಟ್ಟಿ, ಅಂಡಾರು ದೇವಿಪ್ರಸಾದ ಶೆಟ್ಟಿ, ಸವಣೂರು ಸೀತಾರಾಮ ರೈ ಸೇರಿದಂತೆ 20ಕ್ಕೂ ಮಿಕ್ಕ ಗಣ್ಯರಿಗೆ ಈ ಗೌರವ ಸಂದಿದೆ. ಪೂವ ಎಂ. ಸಾಲ್ಯಾನ್: ಅಜೆಕಾರಿನ ದೇವೊಟ್ಟು ಎಂಬಲ್ಲಿನ ಕೃಷಿಕ ಕುಟುಂಬದಲ್ಲಿ ಹುಟ್ಟಿ ಮುಂಬಯಿ ಸೇರಿ 1966 ರಿಂದ ಮುಂಬಯಿಯ ಪ್ರತಿಷ್ಠಿತ ಬೆಹರಾಂಜಿ ಜೀಜಿಬ್ಃಆಯಿ ಗ್ರೂಫ್ ಆಫ್ ಕಂಪನಿಗಳಲ್ಲಿ ಕಂಪನಿ ಸೆಕ್ರಟರಿಯಾಗಿ ದುಡಿದು ನಿವೃತ್ತರಾಗಿದ್ದಾg É. ಮುಂಬಯಿಯ ಹಿರಿಯ ಸ್ವ ಸಮಾಜ ಸೇವಾ ಸಂಘಟನೆ 82 ಹರೆಯದ ರಜಕ ಸಂಘದ 1966 ರಿಂದ ಹತ್ತು ವರ್ಷಗಳ ಕಾಲ ಸಂಘಕ್ಕೆ ಒತ್ತಮ ನಾಯಕತ್ವ ಒದಗಿಸಿದ್ದಾರೆ. ಅಧಿಕಾರÀ ಅವಧಿಯ ಬಳಿಕವೂ ಅತ್ಯಂತ ಸಕ್ರಿಯರಾಗಿದ್ದು ಕೊಂಡು ಯುವ ಜನಾಂಗವನ್ನು ತಯಾರಿ ಮಾಡಿ ಸಂಘಕ್ಕೆ ಅತ್ಯುತ್ತಮ ಸೇವೆ ನೀಡಿದ್ದಾರೆ.
ಸಂಘದ ಬಲವರ್ಧನೆಗಾಗಿ ಪ್ರಾದೇಶಿಕ ಸಮಿತಿಗಳ ರಚನೆಯ ಕನಸುಗಾರರಾಗಿ ಸÀಂಘಕ್ಕೆ ಬಹುಮುಖಿ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅಪೂರ್ವ ದೈವಭಕ್ತರಾಗಿರುವ ಅವರು ಸಂಬಂಧಿಸಿದ ದೇವಾಲಯಗಳಿಗೆ ಉತ್ತಮ ದೇಣಿಗೆ ನೀಡಿದ್ದಾರೆ. ಕನ್ನಡ ಭವನ ಸೊಸೈಟಿಯ ಸದಸ್ಯರಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಹಿಸಿರುವ ಅವರು ವಿವಿಧ ಸಂಘ ಸಂಸ್ಥೆಗಳ ನಿಕಟ ಸಂಪರ್ಕ ಹೊಂದಿದ್ದಾರೆ.
ಅಜೆಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂಬಯಿ ಸೇರಿದ ಪೂವ ಎಂ ಸಾಲ್ಯಾನ್ ಅವರು ಮುಂಬಯಿಯ ಬಾಂಬೆ ಪೆÇೀರ್ಟ್ ಹೈಸ್ಕೂಲಿನರ್ ಎಸ್ಎಸ್ಸಿ ಪಾಸಾದರು. ಪ್ರಸಿದ್ಧ ಸಿದ್ದಾರ್ಥ ಕಾಲೇಜಿನಲ್ಲಿ
ಬಿ.ಎ ಪದವಿ, ಕೆ.ಸಿ ಕಾನೂನು ಮಹಾವಿದ್ಯಾಲಯದಿಂದ ಎಲ್ ಎಲ್ ಬಿ ಪದವಿ ಪಡೆದರು. ಸಿ.ಎ ಒಬ್ಬರ ಬಳಿ ಲೆಕ್ಕ ಶಾಸ್ತ್ರದ ಅನುಭವವನ್ನು ಪಡೆದಿರುವರು.
ಬಳಿಕ ಕಂಪೆನಿಯ ಸೆಕ್ರೆಟರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಅವರÀ ಅನುಭವದ ಕಾರಣದಿಂದ ಅವರು ಅದೇ ಕಂಪನಿಯ ಕಾನೂನು ಸಲಹೆಗಾರರಾಗಿ ಮುಂದುವರಿದಿದ್ದಾರೆ. ರಜಕ ಸಂಘಕ್ಕೆ ಉತ್ತಮ ಭವನ ನಿರ್ಮಾಣ ಮತ್ತು ಸಮಾಜ ಬಾಂಧವರಿಗೆ ಅನುಕೂಲವಾಗುವ ಹೌಸಿಂಗ್ ಸೊಸೈಟಿ ಆಗಲೇ ಬೇಕು ಎಂಬ ದೃಢ ನಿಲುವು ಹೊಂದಿದ್ದಾರೆ. ತಾಯಿಯ ಆಶೀರ್ವಾದದಿಂದ ತಾನು ಈ ಸ್ಥಿತಿಗೆ ಬಂದಿದ್ದೇನೆ ಎಂದು ನೆನಪಿಸಿಕೊಳ್ಳುವ ಅವರು ತಮ್ಮ ಹುಟ್ಟೂರನ್ನು ಎಂದೂ ಮರೆತವರಲ್ಲ.ದೋವೊಟ್ಟು ಮೀನು ಮತ್ತು ಸಾಣೂರು ಮೋಂಟು ದಂಪತಿಗಳ ಮಗನಾಗಿ ಜನಿಸಿದರು. ದಿ| ಸತ್ಯವತಿ ಅವರ ಪತ್ನಿ. ಪ್ರವೀಣಾ ಮತ್ತು ಪ್ರದೀಪ್ ಮಕ್ಕಳು ಮುಂಬಯಿಯಲ್ಲಿ ವಾಸವಾಗಿದ್ದಾರೆ. ಉತ್ತಮ ಸಮಾಜ ಸೇವಕ, ಸಂಘಟಕರ ಕಣ್ಮಣಿ ಪೂವ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮುಂಬಯಿಯ ಖ್ಯಾತ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯ ಮುದ್ರಾಡಿ ಎಸ್ ಎನ್ ಡಿ ಎಂ ಅನುದಾನಿತ ಪ್ರೌಢ ಶಾಲೆ, ಶಿರ್ಲಾಲು ಶ್ರೀ ಮಹಾಮ್ಮಯಿ ಕಲಾ ಕೇಂದ್ರ ಮತ್ತು ವರಂಗ ಗ್ರಾಮ
ಸಾಂಸ್ಥಿಕ ಗೌರವನ್ನು ನೀಡಲಾಗುತ್ತಿದೆ.
ಆದಿಗ್ರಾಮೋತ್ಸವ ಯುವ ಗೌರವಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ 15 ಮಂದಿ ಯುವ ಸಾಧಕರು ಪಾತ್ರರಾಗಲಿದ್ದಾರೆ. ಆದಿಗ್ರಾಮೋತ್ಸವ ಯುವ ಗೌರವಕ್ಕೆ ಆಯ್ಕೆಯಾದವರು:
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು-ಸಾಹಿತ್ಯ, ಅರುಣ್ ಅಜೆಕಾರು ಮಂಗಳೂರು ಸಂಘಟನೆÉ ಮಮತ ಅಧಿಕಾರಿ ಅಜೆಕಾರು. ರಾಜಕೀಯ/ ವಕಾಲತ್ತು, ರಾಘವೇಂದ್ರ ಕರ್ವಾಲೋ, ಉಡುಪಿ - ಸಂಘಟನೆ, ಆರ್. ಬಿ. ಜಗದೀಶ್ ಕಾರ್ಕಳÀ- ಪತ್ರಿಕೋದ್ಯಮ, ಗಣೇಶ್ ಜಾಲ್ಲೂರು ಕಾರ್ಕಳ- ಶಿಕ್ಷಣ- ನಿರ್ವಹಣೆ, ಸುಪ್ರಿತಾ ಜಾನುವಾರುಕಟ್ಟೆ, ಕುಂದಾಪುರ- ಶಿಕ್ಷಣ/ಸಾಹಿತ್ಯ, ವಾಣಿ ಸುಕುಮಾರ್,ಮುದ್ರಾಡಿ- ರಂಗÀ ಸಂಘಟನೆÉ, ಶಶಿ ಶಿರ್ಲಾಲ್, ಶಿರ್ಲಾಲು- ಸಿನಿಮಾ/ ಧಾರವಾಹಿ, ವಿನುತಾ ಶೆಟ್ಟಿ ದಾಸಗದ್ದೆ ಅಜೆÉಕಾರು- ಸರ್ಕಾರಿ ಸೇವೆ, ಪೂಜಾ ಆಚಾರ್ಯ ಕುರ್ಪಾಡಿ, ಅಜೆಕಾರು- ಉಪನ್ಯಾಸಕಿ, ಕÀವಿತಾ ಕುಲಾಲ್, ದೆಪ್ಪುತ್ತೆ ಅಜೆಕಾರು- ಕಬ್ಬಡಿ ಆಟ, ಪ್ರತೀಶ ಕೆ.ಆಚಾರ್ಯ, ಕುರ್ಪಾಡಿ – ಕ್ರಿಕೆಟ್ ಸಂಘಟನೆ, ಎ.ಆರ್ ಸತೀಶ ಆಚಾರ್ಯ ವರಂಗ - ನಾಟಕ-ಛಾಯಾಗ್ರಾಹಣ,, ಶೇಖರ್ ಶೇರಿಗಾರ್ ಪೆÇೀಲಿಸ್ ಹೆಬ್ರಿ-ಉತ್ಸವ ಸಂಘಟನೆಗಾಗಿ ಗೌರವ ಸ್ವೀಕರಿಸುವರು.
ಟಿವಿ ಕಾರ್ಯಕ್ರಮಗಳಲ್ಲಿ ನಾಡಿಗೆ ಪರಿಚಿತರಾಗಿರುವ ಮಜಾಭಾರತದ ಸೃಷ್ಟಿ ಆರ್ ಶೆಟ್ಟಿ ರೆಂಜಾಳ, ಆರಾಧನಾ
ಭಟ್ ನಿಡ್ಡೋಡಿ, ಅಯುಷ್ ಜೆ.ಶೆಟ್ಟಿ, ಸೌರವ್ ಸಾಲ್ಯಾನ್, ತುಷಾರ್ ಗೌಡ ಅಲ್ಲದೆ ಶ್ರೇಯಾ ಎಸ್. ಜೈನ್, ವೃಂದಾ ಕೊನ್ನಾರ್, ಶಿಖಾ, ಅಪೇಕ್ಷಾ ಎ, ಪಂಚಮಿ ಭೋಜರಾಜ್ ವಾಮಂಜೂರು, ಅಭಿನವಿ ಆರ್. ಹೊಳ್ಳ, ಪ್ರಕೃತಿ ಮಾರೂರು, ಸುಜ್ಞಾನ್ ಮೂಡಬಿದಿರೆÉ, ತೀರ್ಥ ಪೆÇಳಲಿ, ಪ್ರತೀಕ್ಷಾ ಎ. ಧನಿಶಾ ಮಂಗಳೂರು,
ಅನ್ವಿಶಾ ಅನಿಲ್ ವಾಮಂಜೂರು, ಅವನಿ ಉಪಾಧ್ಯಾ, ಅಥರ್ವ ಹೆಗ್ಡೆ ಕೆ ಮತ್ತು ಅಮೋಘ ಸಹೋದರರು ಸಹಿತ ಬಾಲ ಪ್ರತಿಭೆಗಳು ಕಾರ್ಯಕ್ರಮ ನೀಡುವರು. ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅತಿಥಿsಗಳು: ಎಚ್.ಗೋಪಾಲ ಭಂಡಾರಿ, ಕ್ಯಾ.ಗಣೇಶ ಕಾರ್ಣಿಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಧಾಕರ ನಾಯ್ಕ್ ಮುಂಬಯಿ, ಸತೀಶ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಅಧಿಕಾರಿ, ಜಡ್ಡು ಸುಂದರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಮೊದಲಾದವರು ಅತಿಥಿsಗಳಾಗಿರುವರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link