Brief Mumbai, Managalore news with pictures
Kemmannu News Network, 31-01-2018 09:19:37
Mumbai Jan.30: On the death anniversary of Mahatma Gandhi, ordinary people offered candles to the devotees at Hutatma Chowk in Mumbai.
ಫೆ.17: ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಕಟ್ಟಡದ ಕಿರು ಸಭಾಗೃಹದಲ್ಲಿ ವಿಜಯ ಕಾಲೇಜು ಹಳೆ ವಿದ್ಯಾಥಿರ್ü ಸಂಘದ ವಾರ್ಷಿಕ ಸ್ನೇಹ ಸಮ್ಮೀಲನ
ಮುಂಬಯಿ, ಜ.30: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇದೇ ಫೆ.17ರ ಶನಿವಾರ ಸಂಜೆ 6.00 ಗಂಟೆಗೆ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ರಂಜನಿ ಸುಧಾಕರ್ ಎಸ್.ಹೆಗ್ಡೆ ಅನೆಕ್ಸ್ ಕಟ್ಟಡದ ಕಿರು ಸಭಾಗೃಹದಲ್ಲಿ ಆಯೋಜಿಸಲಾಗಿದೆ.
ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ಅಧ್ಯಕ್ಷ ಸಿಎ| ಸೋಮನಾಥ ಕುಂದರ್ ಅಧ್ಯಕ್ಷತೆಯಲ್ಲಿ ನೇರವೇರಲಿದ್ದು, ಸಂಘದ ಮುಂಬಯಿ ಘಟಕದ ಗೌರವಾಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿsಯಾಗಿ ವಿದ್ಯಾಥಿರ್s ಸಂಘದ ಸ್ಥಾಪಕಾಧ್ಯಕ್ಷ, ಬಂಟ್ಸ್ ಸಂಘ ಮುಂಬಯಿ ಇದರ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮಿತಿ ಕಾರ್ಯಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ, ಗೌರವ ಅತಿಥಿsಗಳಾಗಿ ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ವಿಜಯ ಕಾಲೇಜು ಮೂಲ್ಕಿ ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ, ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಇಂಗ್ಲೀಷ್ ಬೋಧಕ ನಿವೃತ್ತ ಪ್ರಾಂಶುಪಾಲ ಪೆÇ್ರ| ಕೃಷ್ಣ ಭಟ್ ಹಾಗೂ ವಿಶ್ರಾಂತ ಪ್ರಾಚಾರ್ಯ ಪೆÇ್ರಫೆಸರ್ ಡಾ| ಕೆ.ಜಗದೀಶ್ ಅವರಿಗೆ ಗುರುವಂದನೆ ಮತ್ತು ಮಹಾನಗರದ ಉದ್ಯಮಿ ಯದುನಾರಾಯಣ ಎಂ.ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು ಹಾಗೂ ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ| ವಸಂತ್ ಪೂಜಾರಿ ಅವರಿಗೆ ಸಾಧಕ ಗೌರವವನ್ನಿತ್ತು ಅಭಿನಂದಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ವಿಜಯ ಕಾಲೇಜು ಮೂಲ್ಕಿ ಇದರ ಎಲ್ಲಾ ಹಳೆ ವಿದ್ಯಾಥಿರ್üಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಉಪಾಧ್ಯಕ್ಷ ಆನಂದ್ ಶೆಟ್ಟಿ , ಕಾರ್ಯದರ್ಶಿ ವಾಸುದೇವ ಎಂ. ಸಾಲ್ಯಾನ್ ಮತ್ತು ಕೋಶಾಧಿಕಾರಿ ಹರೀಶ್ ಕೆ.ಹೆಜ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬರನಾಥ ಕನ್ನಡ ಶಿಕ್ಷಕರಿಂದ ನಡೆಸಲ್ಪಟ್ಟ ಸಾಂಸ್ಕøತಿಕ ಸಂಭ್ರಮ-ಗೌರವ ಸಮರ್ಪಣೆ - ಸೇವೆ ಹೆಚ್ಚಿಸಿ ಕನ್ನಡ ಭಾಷೆಗೆ ಗೌರವ ತನ್ನಿ-ಮಲ್ಲಿನಾಥ ಜಲದೆ
ಮುಂಬಯಿ, ಜ.30: ಕನ್ನಡ ನಾಡಿಗೆ, ದೇಶಕ್ಕೆ ಕೀರ್ತಿ ಆಗುವಂತಹ ಸಾಧನೆಗಳು ಮುಂಬಯಿ ಕನ್ನಡಿಗರಿಂದ ಆಗಿದೆ ಮತ್ತು ನಿರಂತರ ಆಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ಮುಂಬಯಿ ಬರಹಗಾರರಿಂದ ಬಹು ಅಮೂಲ್ಯವಾದ ಕಾಣಿಕೆ ಲಭ್ಯವಾಗಿದೆ. ಇಲ್ಲಿ ಗೌರವಿಸಲ್ಪಟ್ಟ ವ್ಯಕ್ತಿಗಳು ಮುಂದೆ ತಮ್ಮ ಜವಾಬ್ದಾರಿ ಹೆಚ್ಚಿಸಿಕೊಂಡು ಸಮಾಜಕ್ಕೆ, ಕನ್ನಡ ಭಾಷೆಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದು ಮಲ್ಲಿನಾಥ ಜಲದೆ ತಿಳಿಸಿದರು.
ಕಳೆದ ರವಿವಾರ ಉಪನಗರ ಅಂಬರನಾಥನಲ್ಲಿ ನೆಲೆಸಿರುವ ಕನ್ನಡ ಶಿಕ್ಷಕರು ಒಂದಾಗಿ ಮಕ್ಕಳಿಗೆ ಸೂಕ್ತ ವೇದಿಕೆ ದೊರೆಯುವಂತೆ, ಮಕ್ಕಳ ಪ್ರತಿಭೆಗೆ ಪೆÇ್ರೀತ್ಸಾಹ ನೀಡುವ ನೆಲೆಯಲ್ಲಿ ಸಾಂಸ್ಕøತಿಕ ಸಂಭ್ರಮ ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಲದೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿüಯಾಗಿ ಅಂಬರನಾಥ ನಗರ ಪರಿಷದ್ನ ನಗರ ಸೇವಕ ನಿಖಿಲ್ ವಾಳೇಕರ್, ಸ್ಥಾನೀಯ ಹೆಚ್ಇ ಶಿಕ್ಷಣ ವಿಭಾಗೀಯ ನಿರೀಕ್ಷಕ ಚಂದ್ರಕಾಂತ ಭಂಡಾರಿ ಉಪಸ್ಥಿತರಿ ದ್ದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು ತಮ್ಮ ಶಿಕ್ಷಕವೃತ್ತಿಯಿಂದ ಆದರ್ಶತೆ ಮೆರೆದ ಅವರ ಅಭ್ಯಾಸನದ ವೈಶಿಷ್ಟ್ಯತೆ ಗುರುತಿಸಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಆದರ್ಶ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗಪ್ಪ ಕಾಸಪ್ಪ ಕೇಶಗೊಂಡ ಅವರಿಗೆ ಈ ಶುಭಾವಸರದಲ್ಲಿ ಅಂಬರನಾಥ ಶಿಕ್ಷಕ ವೃಂದವು ಶಾಲು ಹೊದಿಸಿ ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿತು. ಇತ್ತೀಚೆಗೆ ಮುಂಬಯಿಯಲ್ಲಿ ಕನ್ನಡದ ಡಿಂಡಿಮ ಕೃತಿ ಪ್ರಕಟಿಸಿದ ದುರ್ಗಪ್ಪ ಯ.ಕೋಟಿಯವರ್ ಅವರಿಗೂ ಸನ್ಮಾನಿಸಿ ಅಭಿನಂದಿಸಿತು.
ಮುಂಬಯಿಯ ನಗರ-ಉಪನಗರಗಳಲ್ಲಿ ಕನ್ನಡಿಗರು ನೆಲೆಸಿದ್ದು ಹೊರವಲಯಗಳಲ್ಲೂ ಕನ್ನಡಿಗರು ಆವರಿಸಿ ಕೊಂಡಿದ್ದಾರೆ. ತಾವು ನೆಲೆಸಿದ ಪರಿಸರದಲ್ಲಿ ಕನ್ನಡಿಗರು ಒಂದಾಗಿ ನಮ್ಮ ನಾಡಿನ ಸಂಸ್ಕøತಿ. ಭಾಷೆ, ಸಾಹಿತ್ಯ, ಸಂಗೀತ ಕಲೆ, ನಾಟಕ ಇತ್ಯಾದಿ ಸಾಂಸ್ಕøತಿನ ಚಟುವಟಿಕೆಗಳನ್ನು ನಡೆಸುತ್ತಿರುವುದು ಸ್ತುತ್ಯರ್ಹ. ಮುಂಬಯಿ ಕನ್ನಡಿಗರು ಬೇರೆ ಭಾಷೆಯ ಜನರ ಜೊತೆ ಸೌಹಾರ್ದತೆಯನ್ನು ಮೆರೆಯುತ್ತಾರೆ. ಮುಂಬಯಿ ಇತರ ಭಾಷಿಕರಿಗೆ ಕನ್ನಡ ಭಾಷೆಯ ಪ್ರೀತಿಯನ್ನು ತೋರಿಸುತ್ತಾರೆ, ತೋರಿಸುತ್ತಿದ್ದಾರೆ ಎಂದು ದುರ್ಗಪ್ಪ ಕೋಟಿಯವರ್ ಅಭಿಪ್ರಾಯ ಪಟ್ಟರು.
ಶಿಕ್ಷಕರು ಮತ್ತು ಮಹಿಳೆಯರಿಂದ ನಾಟಕ, ನೃತ್ಯ, ಗಾಯನ ಪ್ರಸ್ತುತ ಪಡಿಸಿದರು. ಶ್ರೀಮಂತ ಕಟ್ಟಿಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉನ್ನಯ ಆನಂದ ಭಾವಿಕಟಿ ಮತ್ತು ಅಂಬಾಜಿ ಕಾಟಗಾಂವ್ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ಖಿಲಾರಿ ವಂದನಾರ್ಪಣೆಗೈದರು.
ಮುಂಬಯಿ ಸಿನಿಜಗತ್ತಿನ ಕನ್ನಡದ ಪ್ರತಿಭೆ ಅಶ್ಮಿತ್ ಕುಂದರ್
ಮುಂಬಯಿ, ಜ.29: ಮುಂಬಯಿ ಸಿನೆಮಾ ಜಗತ್ತಿನ ವಿವಿಧ ರಂಗಗಳಲ್ಲಿ ಮಿಂಚಿರುವ ಕರುನಾಡ ಹುಡುಗ ಅಶ್ಮಿತ್ ಕುಂದರ್, ಇದೀಗ ನಟನಾಗಿ ಹೊಮ್ಮಿರುವ ಬಹುಮುಖಿ ಪ್ರತಿಭೆ. ಈ ವರೆಗೆ ಹಲವಾರು ಪ್ರಮುಖ ಚಲಚ್ಚಿತ್ರಗಳಲ್ಲಿ ಫಿಲ್ಮ್ ಎಡಿಟರ್ ಆಗಿ ಯಶಸ್ವಿಯಾದ ಅಶ್ಮಿತ್ ಸಂಕಲನಗೈದ ಚಿತ್ರಗಳಲ್ಲಿ ಕಮಲ ಹಾಸನ್ನ `ದಶಾವತಾರಮ್’ ಮತ್ತು `ಮುಂಬೈ ಎಕ್ಸ್ಪ್ರೆಸ್’, ಏಕತಾ ಕಪೂರ್ ಅವರ `ಶೋರ್ ಇನ್ ದ ಸಿ’ ಮತ್ತು ಸಂಜಯ್ ದತ್ ನಟನೆಯ `ಲಮ್ಹಾ’ ಹಾಗೂ ಫ್ರೆಂಚ್ ನಿರ್ಮಾಪಕತ್ವದ `ಮಾತೃಭೂಮಿ ನೇಶನ್ ವಿದೌಟ್ ವಿಮೆನ್’ ಪ್ರಮುಖವಾದವು. ಕ್ರಮೇಣ ಜಾಹೀರಾತು ಕ್ಷೇತ್ರದತ್ತಲೂ ತಿರುಗಿದ ಅಶ್ಮಿತ್ ಕುಂದರ್, ಡೋವ್, ಪಿರಮಲ್, ಮ್ಯಾಟ್ಲ್ ಆಟಿಕೆಗಳು ಮತ್ತು ನೆಸ್ಲೆ ಮುಂತಾದ ಪ್ರಮುಖ ಉತ್ಪಾದನೆಗಳ ಪ್ರಚಾರಕ್ಕಾಗಿ ಆಡ್ ಫಿಲ್ಮ್ಗಳನ್ನೂ ನಿರ್ದೇಶಿಸಿದರು.
ಇತ್ತೀಚೆಗೆ ನಟ ನವಾಜುದ್ದೀನ್ ಸಿದ್ದಿಖಿ ನಟಿಸಿರುವ `ಬಾಬುಮೋಶಾಯ್ ಬಂದೂಕ್ಬಾಜ್’ ಎಂಬ ಜನಪ್ರಿಯ ಹಿಂದೀ ಚಿತ್ರದ ನಿರ್ಮಾಪಕನಾಗಿಯೂ ಅವರು ಹೆಸರಾದರು. ಈ ಬಹುಮುಖ ಪ್ರತಿಭೆಯ ಕನ್ನಡಿಗ ಅಶ್ಮಿತ್ ಕುಂದರ್ ಈಗ ಹೊಸದಾಗಿ ನಟನಾಗಿಯೂ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಅವರ ಪ್ರಪ್ರಥಮ ನಟನೆಯ ಚಲನಚಿತ್ರ `ಅಗಾಮ್’ ಪ್ರತಿಷ್ಠಿತ ಕೈರೋ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಬನಾರಸ್ ನಗರದಲ್ಲಿ ತೆರೆದುಕೊಳ್ಳುವ ಚಿತ್ರಕಥೆಯಿರುವ ಚಿತ್ರ, `ಅಗಾಮ್’. ಪರಶಿವನ, ಮೋಕ್ಷಕ್ಕಾಗಿ ಕಾದ ಹೆಣಗಳ ಮತ್ತು ತಾಂತ್ರಿಕರ ನಾಡು ಬನಾರಸ್! ಈ ನಗರಿಯಲ್ಲಿ ಮೂರು ವಿಭಿನ್ನ ಜೀವಗಳು ಅದೆಂತು ಪರಸ್ಪರ ತಳಕು ಹಾಕಿಕೊಳ್ಳುತ್ತವೆ, ಎಂಬುದನ್ನು ಬಿಡಿಸಿಡುವ ಚಿತ್ರ `ಅಗಾಮ್’. ಸತ್ಯಾನ್ವೇಷಣೆಯಲ್ಲಿ ಹಿಂದೂ ಮಠಗಳ ಶೃಂಖಲೆಯನ್ನು ಕಳಚಿ ಹೊರಬಂದ ಮನುಷ್ಯನೊಬ್ಬ; ಗಂಗಾ ತೀರದಲ್ಲಿ ಸದಾ ಉರಿಯುತ್ತಿರುವ ಅಸಂಖ್ಯ ಚಿತೆಗಳಿಗೆದುರಾಗಿ ಆ ದುಸ್ಸಹ ನೋಟ ಹಾಗೂ ಅಸಹನೀಯ ದುರ್ಗಂಧದ ನಿತ್ಯ ಅನುಭವವನ್ನೇ ನೀಡುವ ಮನೆಗೆ ವಿವಾಹವಾಗಿ ಬಂದ ನವವಿವಾಹಿತೆಯೊಬ್ಬಳು; ಮತ್ತು ತಾಂತ್ರಿಕ ವಿದ್ಯಾಪಾರಂಗತನಾಗಿ ಸಿಧ್ಧಿಯ ಪರಾಕಾಷ್ಠೆ ತಲುಪಿಯೂ, ದೈಹಿಕ ಆಕರ್ಷಣೆ ಹಾಗೂ ಪ್ರೇಮದ ಹೊಸ್ತಿಲಲ್ಲಿ ತನ್ನ ಸಿಧ್ಧಿಯೆಲ್ಲವನ್ನೂ ಬಲಿಕೊಡುವ ಸಾಧಕನೊಬ್ಬ! ಈ ಮೂವರ ಸುತ್ತ ಸುತ್ತುವ ಕಥೆಯಲ್ಲಿ ತಾಂತ್ರಿಕನಾಗಿ ಅಶ್ಮಿತ್ ನಟಿಸಿದ್ದಾರೆ.
ಹಲವು ಚಿತ್ರಗಳಲ್ಲಿ ಆರ್ಟ್ ಡೈರೆಕ್ಟರ್ ಆಗಿ ಹೆಸರು ಮಾಡಿದ ಸುಮಿತ್ ಮಿಶ್ರಾ ಈ ಚಿತ್ರದ ನಿರ್ದೇಶಕರು. ಕೈರೋ ಇಂಟರ್ನಾಶನಲ್ ಫಿಲ್ಮ್ ಫೆಸ್ಟಿವಲ್ನ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ನಡೆಯಲ್ಲಿ ಅತ್ಯುತ್ತಮ ಉಡುಪಿನಿಂದಲಂಕೃತನೆಂಬ ಶ್ರೇಯವನ್ನು ಹಾಲಿವುಡ್ ತಾರೆಗಳಾದ ಆಡ್ರಿಯನ್ ಬಾರ್ಡಿ ಮತ್ತು ಹಿಲರಿ ಸ್ವಾಂಕ್ ಅವರೊಂದಿಗೆ ಹಂಚಿಕೊಂಡವರು, ಅಶ್ಮಿತ್ ಕುಂದರ್. ಶ್ರೇಯಸ್ಸಿನ ಪಥದಲ್ಲಿ ಸಾಗಿರುಚ ಅಶ್ಮಿತ್ ಕುಂದರ್, ಕನ್ನಡ ಚಿತ್ರರಂಗಕ್ಕೂ ಕಾಲಿರಿಸುವ ಆಶಯ ಹೊಂದಿದ್ದಾರೆ. ಅಲ್ಲೂ ಈ ಕರುನಾಡ ಪ್ರತಿಭೆ ತೆರೆಯನ್ನು ಬೆಳಗಲೆಂದೇ ನಮ್ಮ ಆಶಯ.
ಬಹುಮುಖ ಪ್ರತಿಭೆಯ ಕನ್ನಡಿಗ ಅಶ್ಮಿತ್ ಕುಂದರ್, ಮಂಗಳೂರಿನ ಭೋಜ ಕುಂದರ್-ಗೀತಾಂಜಲಿ ದಂಪತಿಯ ಸುಪುತ್ರ. ಅಶ್ಮಿತ್ ಸೋದರ ಶಿರೀಷ್ ಕುಂದರ್, ಪತ್ನಿ ಫರಾ ಖಾನ್ರೊಡನೆ ಸಿನಿ ಜಗತ್ತಿನಲ್ಲಿ ಚಿತ್ರ ಸಂಕಲನ, ನಿರ್ದೇಶನ ಕ್ಷೇತ್ರದಲ್ಲಿ ಈಗಾಗಲೇ ಹೆಸರಾದವರು. ಕಲಾರಂಗದಲ್ಲಿ ನಮ್ಮ ಕರುನಾಡ ಪ್ರತಿಭೆಗಳು ಹೀಗೇ ವಿಕಸಿಸುತ್ತಿರಲಿ.
ಪಡುಬಿದ್ರೆ ನಾರಿ ರೂವಾರಿ ಸ್ಪರ್ಧೆ-ಸುರತ್ಕಲ್ ಬಂಟರ ಸಂಘಕ್ಕೆ ಪ್ರಥಮ ಸ್ಥಾನ
ಮುಂಬಯಿ, ಜ.30: ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗವು ಪಡುಬಿದ್ರಿ ಬಂಟರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾರಿ ರೂವಾರಿ ಕಾರ್ಯಕ್ರಮದಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು 50ಸಾವಿರ ರೂಪಾಯಿ ನಗದು ಶಾಶ್ವತ ಫಲಕದೊಂದಿಗೆ ಕೂಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆÉ.
ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
20 ನಿಮಿಷಗಳ ಕಾಲಾವಧಿಯ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡದಲ್ಲಿ ಮೂರು ತಿಂಗಳ ಮಗುವಿನಿಂದ ಹಿಡಿದು 70ರ ಹರೆಯದ ವರೆಗೆ ಸುಮಾರು 65ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಹೆಣ್ಣು ಶಕ್ತಿ ಸ್ವರೂಪಿಣಿ, ಪ್ರಕೃತಿಯ ಪ್ರತಿರೂಪ, ಪ್ರಕೃತಿಯ ಪಂಚ ತತ್ವಗಳು ಅವಳೊಳಗೆ ಅಡಕವಾಗಿವೆ ಎನುವುದನ್ನು ನೃತ್ಯ, ಸಮೂಹ ಗಾಯನ, ಅಭಿನಯ, ಪ್ರಹಸನಗಳ ಮೂಲಕ ಒಂದೊಂದಾಗಿ ರಂಗದ ಮೇಲೆ ನಿರೂಪಿಸುತ್ತಾ ಸಾಗಿದ ಪ್ರದರ್ಶನ, ಸುಂದರವಾದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸದೊಂದಿಗೆ ಕಾರ್ಯಕ್ರಮ ಮೂಡಿಬಂದಿತ್ತು. ರಾಜೇಶ್ವರಿ ಡಿ ಶೆಟ್ಟಿ ಅವರ ಕಲ್ಪನೆ, ಸಾಹಿತ್ಯ ನಿರ್ದೇಶನದಲ್ಲಿ ಮೂಡಿ ಬಂದ ಪ್ರಹಸನ ಪ್ರಥಮ ಸ್ಥಾನ ಗೆದ್ದುಕೊಂಡಿತು. ಕೂಟದಲ್ಲಿ ಶ್ರೇಷ್ಟ ನಟನೆ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಸದಸೆÀ್ಯ ಪ್ರತಿಷ್ಠಾ ರೈ ಚೇಳ್ಯಾರ್, ದಾಕ್ಷಾಯಿನಿ ಪಾತ್ರದ ನಿರ್ವಹಣೆಗಾಗಿ ಪಡೆದುಕೊಂಡರು.
ಈ ಕೂಟದಲ್ಲಿ ಪದಾಧಿಕಾರಿಗಳಾದ ಬೇಬಿ ಶೆಟ್ಟಿ ಕುಡುಂಬೂರು, ವೀಣಾ ಶೆಟ್ಟಿ, ವಿಜಯಭಾರತಿ ಶೆಟ್ಟಿ , ಚಿತ್ರಾ ಜೆ. ಶೆಟ್ಟಿ, ಭಾರತಿ ಜಿ. ಶೆಟ್ಟಿ, ತಂಡದ ನಿರ್ದೇಶಕಿ ರಾಜೇಶ್ವರಿ ಡಿ. ಶೆಟ್ಟಿ ಮತ್ತು ಒಟ್ಟು 12 ತಂಡಗಳು ಭಾಗವಹಿಸಿತ್ತು. ತೀರ್ಪುಗಾರರಾಗಿ ಕೃಷ್ಣಮೂರ್ತಿ ಕವತ್ತಾರು, ಗುರುಪ್ರಸಾದ್ ಹೆಗ್ಡೆ, ಡಾ| ನಿಕೇತನ ಉಡುಪಿ ಭಾಗವಹಿಸಿದ್ದರು.
Governor of Wakayama Prefecture meets Governor
The Governor of Wakayama Prefecture of Japan Yoshinobu Nisaka met the Governor of Maharashtra Ch. Vidyasagar Rao at Raj Bhavan, Mumbai on Tuesday (30th Jan). The Visiting Governor was accompanied by a large business delegation.
Minister of Tourism Jaykumar Rawal and State Chief Secretary Sumit Mallick were presen
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link