Brief Mumbai, news with pictures
rief Mumbai, news with pictures Rekha honours Asha Bhosle at the 5th Yash Chopra Memorial Award at JW
Shanishwara Khar Shani POOJE 2018 NEWS & PHOTOS by Rons Bantwal
ಖಾರ್ ಪೂರ್ವದ ಜವಹಾರ್ನಗರ್ನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯಿಂದ
ಶನೀಶ್ವರ ಗ್ರಂಥ ಪಾರಾಯಣದೊಂದಿಗೆ ಆಚರಿಸಿದ 51ನೇ ವಾರ್ಷಿಕ ಪೂಜೋತ್ಸವ
ಮುಂಬಯಿ, ಫೆ:17: ಕಲಿಯುಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀ ರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಎಂದೇ ಕರೆಯಲ್ಪಡುವ ಶ್ರೀ ಶನೈೀಶ್ವರ ದೇವರ ಆರಾಧಕರಾಗಿ ಉಪನಗರ ಖಾರ್ ಪೂರ್ವದ ಜವಹಾರ್ನಗರ್ ಅಲ್ಲಿನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಇಂದಿಲ್ಲಿ ಶನಿವಾರ 51ನೇ ವಾರ್ಷಿಕ ಪೂಜೋತ್ಸವ ಆಚರಿಸಿತು. ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ದೀಪ ಪ್ರಜ್ವಲಿಸಿ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನಿತ್ತರು.
ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್ನಗರ್ನ ಪಹೇಲ್ವಾನ್ ಚಾಳ್ನಲ್ಲಿ ಸ್ಥಾನೀಯ ತುಳು-ಕನ್ನಡಿಗ ಭಕ್ತರುಗಳಿಂದ ಸ್ಥಾಪಿಸಿ ಸದ್ಯ ಸ್ಥಳೀಯ ಸಾಯಿಧಾಮ್ ಬಿಲ್ಡಿಂಗ್ನಲ್ಲಿ ಪ್ರತಿಷ್ಠಾಪಿತ ಮಂದಿರದಲ್ಲಿ ಗಣಹೋ ಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಕಲಶ ಪ್ರತಿಷ್ಠೆ, ಭಜನೆ, ಶನೀಶ್ವರ ಗ್ರಂಥ ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ, ಶ್ರೀ ಶನೈೀಶ್ವರನ ಆರಾಧನೆಗಳೊಂದಿಗೆ ವಾರ್ಷಿಕ ಉತ್ಸವ ಭಕ್ತಿಪೂರ್ವಕವಾಗಿ ಆಚರಿಸಲ್ಪಟ್ಟಿತು.
ಪುರೋಹಿತಶ್ರೀನಿವಾಸ ಜೋಯೀಷ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿಗೈದು ನೆರೆದ ಭಕ್ತರಿಗೆ ಗಂಧ ಪ್ರಸಾದವನ್ನಿತ್ತು ಹರಸಿದರು. ಉಷಾ ಗಣೇಶ್ ಜತ್ತನ್, ಶೋಭಾ ವಸಂತ್ ಸಾಲ್ಯಾನ್ ಮತ್ತು ಪಾರ್ವತಿ ರವಿ ನಾಯ್ಕ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಸಾಮೂಹಿಕ ಶನೀಶ್ವರ ಗ್ರಂಥ ಪರಾಯಣದಲ್ಲಿ ಪಾಲ್ಗೊಂಡÀು ಶ್ರೀ ಶನೈೀಶ್ವರನ ಕೃಪೆಗೆ ಪಾತ್ರರಾದರು. ತೀರ್ಥ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ವಾರ್ಷಿಕ ಪೂಜೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಮಿತಿ ಗೌರವ ಅಧ್ಯಕ್ಷ ಶ್ರೀಧರ್ ಜೆ.ಬಂಗೇರ, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಜೊತೆ ಕಾರ್ಯದಶಿ ರಮೇಶ್ ಎನ್.ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥರುಗಳಾದ ಕೇಸರಿ ಬಿ.ಅಮೀನ್ ಮತ್ತು ಶೋಭ ವಿ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳು ಮಹಿಳಾ, ಯುವ ವಿಭಾಗದ ಕಾರ್ಯಕರ್ತರು, ಸದಸ್ಯರನೇಕರು ಉಪಸ್ಥಿತರಿದ್ದರು.
ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ನಾಳೆ ಸೋಮವಾರ (ಫೆ.19) ಅಪರಾಹ್ನ 3.00 ಗಂಟೆಯಿಂದ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ವೈಭವ, ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಕ್ರೂಜ್ ಮೇಳದ `ತುಳುನಾಡ ಸಿರಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದೊಂದಿಗೆ ಆಚರಿಸÀಲಿದೆ ಎಂದು ಸದಸ್ಯರೆಲ್ಲರ ಪರವಾಗಿ ಸಮಿತಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಈ ಮೂಲಕ ತಿಳಿಸಿದ್ದಾರೆ.
Pejawara Magane Meeting News & Photos by Rons Bantwal
ಪೇಜಾವರ ಮಾಗಣೆ ಪೆÇರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಮಾಲೋಚನೆ ಸಭೆ
ಶ್ರೀ ಕ್ಷೇತ್ರದ ಬ್ರಹ್ಮಕಲಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.17: ಪೇಜಾವರ ಮಾಗಣೆ ಪೆÇರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕೆಂಜಾರು ಪೆÇರ್ಕೋಡಿ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶ ಉತ್ಸವದ ನಿಮಿತ್ತ ಸಮಾಲೋಚನಾ ಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಸಯನ್ ಪಶ್ಚಿಮದ ಸದ್ಗುರು ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಮುಂಬಯಿ ಸಮಿತಿ ಅಧ್ಯಕ್ಷ ನವೀನ್ ಎನ್.ರೈ ಚಿಕ್ಕಪರಾರಿ ಅಧ್ಯಕ್ಷತೆಯಲ್ಲಿ ನೇರವೇರಿಸಲ್ಪಟ್ಟ ಸಭೆಯನ್ನು ಕಾರ್ಯಾಧ್ಯಕ್ಷರು ಡಾ| ಜಯರಾಮ ಶೆಟ್ಟಿ ಬಜಪೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ವಿಶ್ವರ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಅಡ್ವಕೇಟ್ ಸುಭಾಷ್ ಬಿ.ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ.ಅಮೀನ್ ಉಪಸ್ಥಿತರಿದ್ದರು.
ಡಾ| ಜಯರಾಮ ಶೆಟ್ಟಿ ಮಾತನಾಡಿ ದೇವಸ್ಥಾನದ ಸಾನಿಧ್ಯ ಶುದ್ದಿ ಸಮರ್ಪಣೆಗೆ ಶುಭಾವಸರವಾಗಿದೆ. ಅಂತೆಯೇ ಬ್ರಹ್ಮಕಲಶೋತ್ಸವವನ್ನು ವಿಧಿವತ್ತಾಗಿ ಹಮ್ಮಿಕೊಂಡಿದ್ದೇವೆ. ಈ ಉತ್ಸವ ಆಡಂಬರ ಅಲ್ಲದಿದ್ದರೂ ಕ್ರಮಬದ್ಧವಾಗಿ, ಧಾರ್ಮಿಕವಾಗಿ ನಡೆಸುವವರಿದ್ದೇವೆ. ನಮ್ಮ ದೇವಸ್ಥಾನ ನಮ್ಮ ಕಾಯಕ ಎನ್ನುವ ಮನೋಭಾವವಿರಿಸಿ ಆಗಮಿಸಿ ಕ್ಷೇತ್ರದ ಮತ್ತು ನಾಡಿನ ಸರ್ವೋನ್ನತಿಗಾಗಿ ಶ್ರಮಿಸುವರೇ ಕೋರುತ್ತೇನೆ ಎಂದರು.
ನವೀನ್ ಎನ್.ರೈ ಮಾತನಾಡಿ ದೇವಸ್ಥಾನಗಳು ಸಂಸ್ಕಾರ ನೀಡುವ ಕ್ಷೇತ್ರಗಳಾಗಿವೆ. ಆದುದರಿಂದ ತವರೂರ ಕ್ಷೇತ್ರಗಳ ಎಲ್ಲಾ ಕೆಲಸಗಳು ಪ್ರತೀಯೋರ್ವ ಆಸ್ತಿಕರದ್ದಾಗಿದೆ. ಅಂತೆಯೇ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಎಲ್ಲಾ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿರಿ ಎಂದರು.
ಸಭೆಯಲ್ಲಿ ಕೋಶಾಧಿಕಾರಿ ಸುರೇಶ ಶೆಟ್ಟಿ ಬಜಪೆ ಅರೆಕಲ್ಲು, ಸುನೇತ್ರ ಶೆಟ್ಟಿ, ಸುಕೇಶ್ ಶೆಟ್ಟಿ, ಸುರೇಂದ್ರ ಪೆರ್ಗಡೆ, ಮುಂಬಯಿ ಸಮಿತಿ ಸದಸ್ಯರುಗಳಾದ ವಿಜಯ ಶೆಟ್ಟಿ ಚಿಕ್ಕಪರಾರಿ, ಕರುಣಾಕರ ಶೆಟ್ಟಿ ನಾರ್ಯನಡಿಗುತ್ತು, ಪ್ರತಾಪ್ ಜಿ.ಶೆಟ್ಟಿ ಪಡ್ಡೋಡಿಗುತ್ತು, ಲೀಲಾ ಶೆಟ್ಟಿ ಪಡ್ಡೋಡಿಗುತ್ತು, ವನಜ ಕೆ.ಶೆಟ್ಟಿ ಪಡ್ಡೋಡಿಗುತ್ತು, ಮನೋರಮಾ ಎಸ್.ಶೆಟ್ಟಿ ಪಡ್ಡೋಡಿಗುತ್ತು, ಲೋಕನಾಥ ಎ.ಶೆಟ್ಟಿ, ಸೋಮಶೇಖರ ಶೆಟ್ಟಿ ಚಿಕ್ಕಪರಾರಿ, ಶಂಕರ ಎಲ್.ಶೆಟ್ಟಿ ಅಚಾರಿಬೆಟ್ಟು, ರವಿ ಶೆಟ್ಟಿ ಹೊಸಮನೆ, ಪೂವಣಿ ಮಡಿವಾಳ, ಸುಭಾಶ್ ಶೆಟ್ಟಿ ಅರೆಕಲ್ಲು, ಮಾಧವ ಕಯ್ಯ ಚಾವಡಿದಡಿ, ಭಗವಾನ್ ಆಳ್ವ ಮುಂಡಾರುಗುತ್ತು, ಶೇಖರ ಜೋಗಿ ಪೆÇರ್ಕೋಡಿ, ಪೂವಪ್ಪ ಪೂಜಾರಿ ಪಿಲ್ಚಂಡಿ ಗುಡ್ಡೆ, ಸುರೇಂದ್ರ ಶೆಟ್ಟಿ ಹೊಸಮನೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಭಕ್ತಾಭಿಮಾನಿಗಳಿಗೆ ವಿತರಿಸಿದರು.
ಉದಯ ಶೆಟ್ಟಿ ಪಡ್ಡೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು. ಇದೇ ಮಾ.26ರಿಂದ ಎಪ್ರಿಲ್ 05 ವರೆಗೆ ಶ್ರೀ ಕ್ಷೇತ್ರದಲ್ಲಿ ಜರುಗುವ ಉತ್ಸವದಲ್ಲಿ ಮುಂಬಯಿ ನೆಲೆವಾಸಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನವೀನ್ ಎನ್.ರೈ ಕೋರಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link