Brief Mumbai, news with pictures
ತೀಯಾ ಸಮಾಜ ಮುಂಬಯಿ ಪೂರ್ವ ವಲಯ ಪ್ರಾದೇಶಿಕ ಸಮಿತಿ ಸಂಭ್ರಮಿಸಿದ ದಶಮಾನೋತ್ಸವ ತೀಯಾ ಸಭಾಗೃಹದ ಕನಸು ನನಸಾಗಿಸೋಣ : ಚಂದ್ರಶೇಖರ ಬೆಳ್ಚಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.18: ನಮ್ಮಲ್ಲಿನ ಕೆಲವರಲ್ಲಿ ತೀಯಾ ಭವನದ ಆಶಯವಿದೆ. ಅದು ನಮ್ಮ ಯೋಚನೆಯೂ ಆಗಿದೆ. ಆದರೆ ಪ್ರಸ್ತುತ ಆಥಿರ್üಕ ಸ್ಥಿತಿಗತಿಯಲ್ಲಿ ಇದು ಸುಲಭ ಸಾಧ್ಯವಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಮುಂಬಯಿ ಮಹಾನಗರದಲ್ಲಿ ನಮ್ಮಂತಹ ಚಿಕ್ಕದಾದ ಸಮುದಾಯಕ್ಕೆ ಭವನ ನಿರ್ಮಾಣ ಕಷ್ಟಸಾಧ್ಯ. ಕನಸು ಎಲ್ಲರೂ ಕಾಣಬಹುದು ಆದರೆ ನನಸಾಗಿಸುವುದು ಸುಲಭವಲ್ಲ. ಆದರೂ ಸಮಾಜ ಬಾಂಧವರು ತಾವೆಲ್ಲರೂ ಮನಸ್ಸು ಮಾಡಿ ಪೆÇ್ರೀತ್ಸ್ಸಾಹಿಸಿದರೆ ಒಂದು ಸಭಾಗೃಹವನ್ನು ನಿರ್ಮಿಸುವತ್ತ ಮನಸ್ಸು ಮಾಡಬಹುದು. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ತಿಳಿಸಿದರು.
ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಗುರುನಾರಯಣ ಮಾರ್ಗದಲ್ಲಿನ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ತೀಯಾ ಸಮಾಜ ಮುಂಬಯಿ ಇದರ ಪೂರ್ವ ವಲಯ ಸಮಿತಿ ಸಂಭ್ರಮಿಸಿದ ದಶ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಚಂದ್ರಶೇಖರ ಬೆಳ್ಚಡ ಮಾತನಾಡಿದರು.
ಸಮಾರಂಭದಲ್ಲಿ ಮಹಾನಗರದಲ್ಲಿನ ಹಿರಿಯ ಉದ್ಯಮಿ, ಕೊಡುಗೈದಾನಿ, ತೀಯಾ ಸಮಾಜ ಮುಂಬಯಿ ಇದರ ವಿಶ್ವಸ್ಥ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್.ಬಂಗೇರ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಗೌರವ ಅತಿಥಿüಗಳಾಗಿ ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷ ಎಲ್.ವಿ ಅವಿೂನ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ್ ಆರ್. ಶೆಟ್ಟಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಠಲ್ ಬಿ.ಹೆಗ್ಗಡೆ, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಭಾರತ್ ಬ್ಯಾಂಕ್ನ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ, ಉದ್ಯಮಿ ಕೆ.ವಿ ಶಂಕರ್ ವಾರೀಯರ್ ಉಪಸ್ಥಿತರಿ ದ್ದರು.
ಸಮಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಲ್ವಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಎಲ್.ಸುವರ್ಣ, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಅಜಿಲ ಮುನಿರಾಜ್ ಜೈನ್, ದೇವಾಡಿಗ ಸಂಘ ಮುಂಬ ಯಿ ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ದೇವಾಡಿಗ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಡಾ| ಯು.ಧನಂಜಯ ಕುಮಾರ್, ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಹ್ಯಾರಿ ಆರ್. ಸಿಕ್ವೇರಾ, ತೀಯಾ ಸಮಾಜ ಮುಂಬಯಿ ಒಬಿಸಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಯಾದವ ರಾವ್, ಸಮಾಜ ಸೇವಕರಾದ ಭವಾನಿ ಸುಂದರ್ ಮತ್ತು ಆನಂದ್ ಕರ್ಕೇರ ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು.
ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ತೀಯಾ ಸಮಾಜದ ಸೇವೆ ಪ್ರಶಂಸಿದರು. ಸನ್ಮಾನಿತರೂ ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.
ವೇದಿಕೆಯಲ್ಲಿ ತೀಯಾ ಸಮಾಜದÀ ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌ| ಪ್ರ| ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್.ಸುವರ್ಣ, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ.ಎಂ, ಪಶ್ಚಿಮ ವಲಯ ಸಮಿತಿ ಕಾರ್ಯಾಧ್ಯಕ್ಷ ಬಾಬು ಕೆ.ಕೋಟ್ಯಾ ನ್, ಪೂರ್ವ ವಲಯದ ಉಪ ಕಾರ್ಯಾಧ್ಯಕ್ಷ ಅಚ್ಚುತ ಕೋಟ್ಯಾನ್, ಉಪ ಕಾರ್ಯದರ್ಶಿ ದಿವಿಜಾ ಸಿ.ಬೆಳ್ಚಡ, ಕೋಶಾಧಿಕಾರಿ ನಿತ್ಯೋದಯ ಎನ್.ಉಳ್ಳಾಲ್, ಜೊತೆ ಕೋಶಾಧಿಕಾರಿ ಲಲಿತಾ ಚಂದ್ರಶೇಖರ್ ಮತ್ತಿತರ ಪದಾಧಿಕಾರಿ ಗಳು ಉಪಸ್ಥಿತರಿದ್ದರು.
ಪದ್ಮನಾಭ ಸುವರ್ಣ ಪ್ರಾರ್ಥನೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಈಶ್ವರ ಎಂ.ಐಲ್ ಸ್ವಾಗತಿಸಿ ಅತಿಥಿü, ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಪೂರ್ವ ವಲಯ ಪ್ರಾದೇಶಿಕ ಸಮಿತಿ ಪ್ರ| ಕಾರ್ಯದರ್ಶಿ ಸಾಗರ್ ಕಟೀಲ್ ಪ್ರಸ್ತಾವಿಕ ನುಡಿಗಳನ್ನಾಡಿ ಕೃತಜ್ಞತೆ ಸಲ್ಲಿಸಿದರು.
ಪೂರ್ವ ವಲಯದ ಕಾರ್ಯಕಾರಿ ಸದಸ್ಯರಾದ ಭಗವನ್ದಾಸ್ ಕೆ.ಬಿ., ಶಶಿಧರ್ ಬಿ.ಎಂ, ಜೀವನ್ ಉಚ್ಚಿಲ್, ಹರೀಶ್ ಕುಂದರ್ ಹಾಗೂ ದಿವ್ಯಾ ಆರ್.ಕೋಟ್ಯಾನ್, ಚಂದ್ರಾ ಎಂ.ಸುವರ್ಣ, ಪ್ರತಿಮಾ ಬಂಗೇರ, ಸುಜಾತ ಸುಧಾಕರ್ ಉಚ್ಚಿಲ್, ಭವ್ಯ ಸಾಗರ್, ಕವಿತಾ, ಪುಷ್ಪಾ ಜೆ.ಕೋಟ್ಯಾನ್, ಶೋಭಾಲತಾ ಸಿ.ಸಾಲ್ಯಾನ್, ಸ್ವಪ್ನಾ ಜಿ. ಉಚ್ಚಿಲ್, ರಂಜಿನಿ ಎ.ಸುವರ್ಣ ಮತ್ತಿತರ ಸದಸ್ಯರ ಸಹಯೋಗದಲ್ಲಿ ತೀಯಾ ಸಮಾಜದ ಸಾಂಸ್ಕೃತಿಕ ಸಮಿತಿಯ ನಿರ್ದೇಶನದಲ್ಲಿ ಸಮಾಜದ ಬಂಧುಗಳು, ಮಕ್ಕಳು ನೃತ್ಯ, ವೈವಿಧ್ಯತೆ, ಹಾಡುಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಮುಂಬಯಿ ಕಲಾವಿದರು ಮನೋಹರ್ ನಂದಳಿಕೆ ಸಾರಥ್ಯದಲ್ಲಿ ದಿ| ದಿನೇಶ್ ಕಂಕನಾಡಿ ರಚಿಸಿ, ಭಾಸ್ಕರ ಸಸಿಹಿತ್ಲು ನಿರ್ದೇಶನದಲ್ಲಿ `ಯಮುನಾ ದಾನೆ ನಮೂನೆ’ ಹಾಸ್ಯಮಯ ನಾಟಕ ಪ್ರದರ್ಶಿಸಿದರು. ಹರ್ಷಾ ಚಂದ್ರಶೇಖರ್ ಬೆಳ್ಚಡ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಘಟಿಕೋತ್ಸವ-ಮೋಹನ್ ಬೊಳ್ಳಾರುಗೆ ಡಾಕ್ಟರೇಟ್ ಪ್ರದಾನ
ಅರ್ಥೈಸದವನಿಗೆ ಯಾವುದೂ ಅರ್ಥವಾಗಲ್ಲ : ಡಾ| ಎಸ್.ಎಂ ಹಿರೇಮಠ
ಮುಂಬಯಿ, ಫೆÀ.20: ಕರ್ನಾಟಕದ ಒಳ ಅಥವಾ ಹೊರನಾಡ ವಿಶ್ವವಿದ್ಯಾಲಯಗಳಲ್ಲಿ ನಾವು ಇಂತಹ ಕಾರ್ಯಕ್ರಮ ಗಳನ್ನು ಒಪ್ಪಿಕೊಂಡರೆ ಮಾತ್ರ ಕನ್ನಡ ಪ್ರಾಧ್ಯಾಪಕರ ಜೀವನ ಸಾರ್ಥಕವಾಗುವುದು. ಭಕ್ತನು ಭಕ್ತನ ಕಾಣುವುದು ಸದಾಚಾರ ಅಲ್ಲಿ ಕೂಡಿಕೊಂಡು ದಾಸೋಹ ಮಾಡಿದೊಡೆ ಕೂಡಲ ಸಂಗಮದೇವ. ಎಲ್ಲೂ ಇಲ್ಲ ಅಲ್ಲೇ ಇರ್ತಾನೆ ದೇವ ಅಂದ ಬಸವಣ್ಣವರಂತೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದಾಗ ಅದೇ ದೊಡ್ದಸ್ಥಿಕೆಯ ಬದುಕು ಆಗುತ್ತದೆ. ಮುಂಬಯಿಯಲ್ಲೂ ಗೌರಿಶಂಕರ ಸದೃಶ್ಯರಾದ ಮಹಾಜ್ಞಾನಿ ಡಾ| ಉಪಾಧ್ಯ ಅವರ ಕನ್ನಡಸೇವೆ ಅರ್ಥಪೂರ್ಣವಾದುದು. ಅವರ ಕನ್ನಡ ಪ್ರಜ್ಞೆಯನ್ನು ವಿಕಾಸ ಮಾಡುತ್ತಿರುವುದು ಇಂತಹ ಮಹಾಪ್ರಬಂಧಕ್ಕೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ನಾರಾಯಣ ಗುರುಗಳ ಬದುಕು ಬಯಲು ಸ್ವರೂಪವಾದುದು. ಬಯಲಿಗೆ ಮೇರೆಯನ್ನು ನಿರ್ಮಾಣ ಮಾಡಲು ಅಸಾಧ್ಯ. ಅವರ ಬರಹಗಳನ್ನೊಳಗೊಂಡ ಈ ಪ್ರಬಂಧ ವಿರಾಟ್ ಮತ್ತು ಭೌಮಕ್ರಿಯೆ ಆಗಿದೆ. ಇಲ್ಲಿನ ಅಧ್ಯಯನ ಅದ್ಭುತವಾಗಿದ್ದು, ಸಂಶೋಧನಾ ಹಂತ ವಿಸ್ತಾರಗಳನ್ನು ಸರಿಯಾಗಿ ಅರ್ಥೈಸಿ ಈ ಪ್ರಬಂಧ ಮಂಡಿಸಿರುವುದು ಅಭಿನಂಧನೀಯ. ಅರ್ಥೈಸದವನಿಗೆ ಯಾವುದೂ ಎಂದೂ ಅರ್ಥವಾಗಲ್ಲ ಎಂದು ಕಲಬುರ್ಗಿ ಅಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ನಾಡಿನ ಹಿರಿಯ ವಿದ್ವಾಂಸ ಡಾ| ಎಸ್.ಎಂ ಹಿರೇಮಠ ಅಭಿಪ್ರಾಯ ಪಟ್ಟರು.
ಇಂದಿಲ್ಲಿ ಮಂಗಳÀವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ವಿದ್ಯಾನಗರಿ ಅಲ್ಲಿನ ರಾನಡೆ ಭವನದಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ನಡೆಸಲ್ಪಟ್ಟ ಪಿಹೆಚ್ಡಿ ಪ್ರಬಂಧ ಮಂಡನಾ ಕಾರ್ಯಕ್ರಮದಲ್ಲಿ ಮಂಗಳೂರು ಮಣ್ಣಗುಡ್ಡೆ ಅಲ್ಲಿನ ಶ್ರೀ ಗೋಕರ್ಣಥೇಶ್ವರ ಕಾಲೇಜು ಉಪನ್ಯಾಸಕ ಮೋಹನ್ ಬೊಳ್ಳಾರು ಅವರ `ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ’ ವಿಚಾರಿತ ಮಹಾ ಪ್ರಬಂಧದ ಮೌಕಿಕ ಮೌಲ್ಯಮಾಪಣ ನಡೆಸಿ ಮೋಹನ್ ಬೊಳ್ಳಾರು ಅವರಿಗೆ `ಡಾಕ್ಟರೇಟ್ ಸನದು’ ಪ್ರದಾನಿಸಿ ಅಭಿನಂದಿಸಿ ಮಾತನಾಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಘನ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಘಟಿಕೋತ್ಸವದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಪ್ರಬಂಧದ ಮಾರ್ಗದರ್ಶಕ ಡಾ| ಕೆ.ರಘುನಾಥ್, ಮುಂಬಯಿನ ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತ್ಯ, ಶುದ್ಧತೆÉ, ಪ್ರಾಮಾಣಿಕತೆಗಳ ಸಂಗಮವೇ ಕಾಯಕವಾಗಿದ್ದು, ಇದನ್ನು ಮೀರಿ ಬೆಳೆದಾಗ ಮಾತ್ರ ತನ್ನಲ್ಲಿನ ವಿದ್ವತ್ತನ್ನು ಕೃತಿಯಾಗಿಸ ಬಹುದು. ವಿದ್ವಾಂಸನ ಪರಿಶ್ರಮ, ಶಕ್ತಿ ಮತ್ತು ಸಾಮಥ್ರ್ಯ ಎಂದಿಗೂ ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಲು ಸಾಧ್ಯ. ಇದನ್ನು ಮೋಹನ್ ಬೊಳ್ಳಾರು ತನ್ನ ಪ್ರಬಂಧದ ಮೂಲಕ ತೋರ್ಪಡಿಸಿದ್ದಾರೆ. ವಿಶ್ವಕಂಡ 2 ಅಪೂರ್ವ ವ್ಯಕ್ತಿಗಳ 2 ಶಕ್ತಿಗಳ ಸಾಮಾಜಿಕ ಸಾಧ್ಯತೆಗಳನ್ನು ಈ ಮೂಲಕ ಕಟ್ಟಿ ಕೊಟ್ಟಿದ್ದು ಮಾತ್ರವಲ್ಲದೆ ಎರಡು ಸಮುದ್ರಗಳನ್ನು ಒಗ್ಗೂಡಿಸುವ ಕ್ರಿಯೆ ಅವರ ಪ್ರಬಂಧದಲ್ಲಿ ನಡೆದಿದೆ. ಪ್ರಂಜ್ವಲ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಪಿಹೆಚ್ಡಿ ಅಧ್ಯಯನ ಮಾಡಲು ಸಾಧ್ಯ ಎಂದೂ ಅವರು ರುಜುವಾತು ಮಾಡಿದ್ದಾರೆ. ಆ ಮುಖೇನ ಪ್ರಬಂಧಕ್ಕೆ ಒಳ್ಳೆಯ ವಿಷಯ ನೀಡಿ ಪ್ರೇರೆಪಿಸಿದ ಹಿರಿಯ ಪತ್ರಕರ್ತ ಎಂ.ಬಿ ಕುಕ್ಯಾನ್ರ ಕನಸು ನನಸಾಗಿಸಿದ್ದಾರೆ ಎಂದೂ ಡಾ| ಹಿರೇಮಠ ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮಾತನಾಡಿ ಡಾ| ಹಿರೇಮಠ ಆಶಾದಯಕ ವ್ಯಕ್ತಿ, ಕನ್ನಡ ನಾಡುನುಡಿ, ಸಂಸ್ಕೃತಿಗಳ ಸಂಶೋಧಕರಾಗಿದ್ದು ನಮ್ಮಲ್ಲಿಗೆ ಇಂತಹ ಹಿರಿಯ ವಿದ್ವಾಂಸರ ಆಗಮನ ಪುಳಕ ತಂದಿದೆ. ಇಂತಹ ಹಿರಿಯ ಸಂಶೋಧಕರ ಮಾರ್ಗದರ್ಶನದಿಂದ ಹಲವು ಸಂಶೋಧನಾ ಪಿಹೆಚ್ಡಿಗಳ ಸಾಧ್ಯವಾಗಿದೆ. ಅಸ್ಪೃಶ್ಯತೆ, ಕೊಲಚೆಗೇರಿ ಶಿಕ್ಷಣದ ಜೊತೆಗೆ ವಿವಿಧತೆಯ ವಿವಿಧತೆಯ ಪ್ರೇರಣೆಗಳನ್ನು ನೀಡಿ ಸಮಾಜ ಸುಧಾರಕರಾಗಿದ್ದ ಬಸವಣ್ಣರು ಮತ್ತು ನಾರಾಯಣ ಗುರುಗಳು ಪ್ರೇರಣಾ ಚೈತನ್ಯರು. ಇಂತಹ ಮಾಹಾನ್ ಚೇತನಗಳ ಚಿಂತನೆಗಳನ್ನು ತೂಗಿ ನೋಡುವ ಕೆಲಸ ಮೋಹನ್ ಮಾಡಿದ್ದಾರೆ ಎಂದÀು ತಿಳಿಸಿದರು.
ಭಾರತೀಯ ಸಾಹಿತ್ಯ ಬೇರೆ ಭಾಷೆಗಳನ್ನು ಹೊಂದಿದ್ದು ಅವುಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕಾಯಕದ ಕಲ್ಪನೆ ಏನಿದೆ ಎನ್ನುವುದು ತಿಳಿದಾಗ ನಾರಾಯಣ ಗುರುಗಳು ಕಾಯಕಕ್ಕೆ ಕೈಗಾರಿಕೆ ಎಂದು ವ್ಯಾಖ್ಯಾನಿಸಿದರೆ ಬಸವಣ್ಣರು ಅರಿವೇಗುರು ಎಂದು ಜ್ನಾನವ ಬಣ್ಣಿಸಿದ್ದಾರೆ. ಕಲ್ಪನೆಗಳ ಮೂಲಗಳು ಕಾಲಕಾಲಕ್ಕೆ ಭಾಷೆಭಾಷೆಗಳಿಗೆ ಬದಲಾವಣೆ ಆಗುವುದು ಸಹಜ. ಆದ್ದರಿಂದ ಬದಲಾವಣೆಯ ಸ್ವರೂಪ ಏನು ಎಂದು ನಾವು ಗುರುತಿಸ ಬೇಕು ಅದನ್ನು ಮೋಹನ್ ತಿಳಿಸುವ ಪ್ರಯತ್ನ ಈ ಮೂಲಕ ಮಾಡಿದ್ದಾರೆ ಎಂದು ಡಾ| ರಘುನಾಥ್ ತಿಳಿಸಿದರು.
ಸಾಹಿತ್ಯಕ್ಕೂ ಸಾಮಾಜಿಕ ಚಳುವಳಿಗೂ ಒಂದು ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಇಬ್ಬರು ದಾರ್ಶನಿಕರ ಸಾಮಾಜಿಕ ಕೊಡುಗೆಯನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡಿರುವೆÉ. ಕರ್ನಾಟಕದ ಬಸವಣ್ಣರು, ಕೇರಳದ ನಾರಾಯಣ ಗುರು ವಿಭಿನ್ನ ಭಾಷೆ ಪ್ರದೇಶದಲ್ಲಿ ಹುಟ್ಟಿದ್ದರೂ ಇವರಿಬ್ಬರ ಸಾಮಾಜಿಕ ಕಳಕಳಿ ಮಾತ್ರ ಒಂದೇ ಆಗಿದೆ ಎಂಬ ಕಾರಣಕ್ಕೆ ಈ ವಿಷಯ ಆಯ್ಕೆ ಮಾಡಿದೆ ಎಂದು ಡಾ| ಮೋಹನ್ ಬೊಳ್ಳಾರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಜಯ ಸಿ.ಸುವರ್ಣ, ಎಂ.ಬಿ ಕುಕ್ಯಾನ್, ಡಾ| ಜಿ.ಎನ್ ಉಪಾಧ್ಯ , ವಿ.ಆರ್.ಕೋಟ್ಯಾನ್, ಡಾ| ರಘುನಾಥ್, ನಿತ್ಯಾನಂದ ಕೋಟ್ಯಾನ್ ಮತ್ತಿತರ ಸಹಯೋಗಕ್ಕೆ ಅಭಾರ ಮನ್ನಿಸಿ ದರು.
ಕಾರ್ಯಕ್ರಮದಲ್ಲಿ ರಮಾ ಉಡುಪ, ದಿನಕರ್ ಚಂದನ್, ಎಂ.ಜಿ ಶಿವರಾಜ್, ಉದಯ ಶೆಟ್ಟಿ, ಲಕ್ಷಿ ್ಮೀ ಪೂಜಾರಿ ಮತ್ತಿತರರು ಹಾಜರಿದ್ದು ಡಾ| ಮೋಹನ್ಗೆ ಶುಭಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೈ.ಮಧುಸೂದನ ರಾವ್ ವಂದಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Maundy Thursday 2024 | LIVE From St. Theresa’s Church, Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link