Brief Mumbai, news with pictures


Rons Bantwal, 25-02-2018 21:36:46


Write Comment     |     E-Mail To a Friend     |     Facebook     |     Twitter     |     Print


Brief Mumbai, news with pictures

Bantwala Buntara LADIES WING Advance NEWS

ಬಂಟರ ಸಂಘ ಬಂಟವಾಳ ತಾಲೂಕು ಇದರ ಮಹಿಳಾ ವಿಭಾಗ ಅಸ್ತಿತ್ವಕ್ಕೆ

ಮಹಿಳಾ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆಯಾಗಿ ಆಶಾ ಪ್ರಸಾದ್ ರೈ ಆಯ್ಕೆ

ಬಂಟ್ವಾಳ, ಫೆ.25: ಬಂಟರ ಸಂಘ ಬಂಟವಾಳ ತಾಲೂಕು (ರಿ.) ಮಹಿಳಾ ವಿಭಾಗ ಅಸ್ತಿತ್ವಕ್ಕೆ ಮಹಿಳಾ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆ ಆಗಿ ಆಶಾ ಪ್ರಸಾದ್ ರೈ ಸರ್ವಾನುಮತದಿಂದ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಪ್ರತಿಭಾ ಎ.ರೈ (ಉಪ ಕಾರ್ಯಾಧ್ಯಕ್ಷೆ), ರಮಾ.ಎಸ್.ಭಂಡಾರಿ (ಕಾರ್ಯದರ್ಶಿ), ಶಿವಾನಿ ಬಿ.ಶೆಟ್ಟಿ (ಕೋಶಾಧಿಕಾರಿ), ಜ್ಯೋತಿ ಪ್ರವೀಣ್ ಶೆಟ್ಟಿ (ಜೊತೆ ಕಾರ್ಯದರ್ಶಿ), ಸುಮಾ ಎನ್.ಶೆಟ್ಟಿ (ಜೊತೆ ಕೋಶಾಧಿಕಾರಿ) ಸೇರಿದಂತೆ ಸುಮಾರು 64 ಕಾರ್ಯಕರ್ತೆಯರು ಕಾರ್ಯಕಾರಿ ಸಮಿತಿ ಸದಸ್ಯೆಯರುಗಳಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭ ಮತ್ತು ಪದಾಗ್ರಹಣ ಸಮಾರಂಭವು ಇದೇ ಮಾ.04ನೇ ಆದಿತ್ಯವಾರ ಅಪರಾಹ್ನ 3.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಸಂಕೀರ್ಣದ ಬಂಟವಾಳ ಬಂಟರ ಭವನದಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಹಾಯಕಿ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ಎಸ್. ಇವರು ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು ಸೇರಿದಂತೆ ಇತರ ಪದಾಧಿಕಾರಿಗಳು ಸದಸ್ಯರನೇಕರು ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ತಿಳಿಸಿದ್ದಾರೆ.

Karki Ventatramana Award News & Photos by Rons Bantwal

`ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2018’ ಮುಡಿಗೇರಿಸಿದ ಎನ್.ಎಸ್ ಹೆಗಡೆ 

ಮನುಷ್ಯ ಮೊದಲು ದ್ವೇೀಷ ರಹಿತನಾಗಬೇಕು : ಡಾ| ಸುರೇಶ್ ರಾವ್ ಕಟೀಲು

ಮುಂಬಯಿ, ಫೆ.25: ಸಮಾಜ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಾಧನೆಗೈದ ಕುಂದರಗಿ ಅವರು ನಿಜಕ್ಕೂ ಅಭಿನಂದನಾರ್ಹರು. ಸರಕಾರವೇ ಗುರುತಿಸುವಂತಹ ಕಾರ್ಯ ಮಾಡಿದ್ದಾರೆ. ಹವ್ಯಕ ವೆಲ್ಫೇರ್ ಕರ್ಕಿ ಪ್ರಶಸ್ತಿ ಮೂಲಕ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಮನುಷ್ಯ ಮೊದಲು ದ್ವೇೀಷವನ್ನು ಬಿಡಬೇಕು. ಲೋಕಕ್ಕೆಒಳ್ಳೆಯದಾಗಲಿ ಎಂದು ಹಾರೈಸುವ ಮನಸ್ಸು ಮಾಡಬೇಕು. ಲೋಕದ ಏಳಿಗೆಯನ್ನೇ ಮುಖ್ಯ ಗುರಿಯಾಗಿಸಿ ಬದುಕುತ್ತಿರುವವರು ಎಲ್ಲರನ್ನು ಪ್ರೀತಿಸುತ್ತಿರುವ ಕುಂದರಗಿ ಅಂತಹ ಹಿರಿಯರು ಅಖಂಡ ಸಮಾಜದ ಹಿರಿಮೆಯಾಗಿದ್ದಾರೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ, ಬಿಎಸ್‍ಕೆಬಿ ಅಸೋಸಿಯೇಶನ್   ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕ ಸಭಾಗೃಹದಲ್ಲಿ ಪ್ರದಾನಿಸಿದ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2018’ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಡಾ| ಸುರೇಶ್ ರಾವ್ ಮಾತನಾಡಿದರು.

ಕರ್ನಾಟಕ ಮಲ್ಲ ದೈನಿಕದ ಸಹಯೋಗದೊಂದಿಗೆ ನಡೆಸಲ್ಪಟ್ಟ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗವತ್ ಅಧ್ಯಕ್ಷತೆ ವಹಿಸಿದ್ದು ಗೌರವ ಅತಿಥಿüಗಳಾಗಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಮಂಡಳಿ ಸಲಹಾಗಾರ ಡಾ| ಆರ್.ಎನ್ ಬಂಡೀಮನೆ, ಟ್ರಸ್ಟ್‍ನ ಉಪಾಧ್ಯಕ್ಷ ಸಂಜಯ ಭಟ್, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್.ಅಕದಾಸ,  ಗೌರವ ಕೋಶಾಧಿಕಾರಿ ಎ.ಜಿ ಭಟ್ ಉಪಸ್ಥಿತರಿದ್ದು ಅತಿಥಿüಗಳು ವಾರ್ಷಿಕ  `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್ ಹೆಗಡೆ ಕುಂದರಗಿ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

ನಿಷ್ಠಾವಂತ ಸೇವಾಕರ್ತರಿಗೆ ಅರ್ಹ ಗೌರವಗಳು ಸಲ್ಲಲೇ ಬೇಕು. ಇವು ವೀ ಜನಾಂಗಕ್ಕೆ ಮಾದರಿ ಆಗಲಿವೆ. ಕುಂದರಗಿ ಅವರು ಇಂತಹ ಘನತೆಗೆ ಸಲ್ಲುವವರು ಎಂದು ಅಭಿನಂದನಾ ಭಾಷಣದಲ್ಲಿ ಆರ್.ಎನ್ ಹೆಗಡೆ ತಿಳಿಸಿದರು.

ಸಾರ್ವಜನಿಕ ಕ್ಷೇತ್ರದಲ್ಲಿ ನಾನು ತೋಡಗಿಸಿಕೊಳ್ಳಲು ಸಾಹಿತಿಕ, ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಸಾಧ್ಯವಾಗಿದೆ. ಆವಾಗ ಇಡೀ ಜಿಲ್ಲೆಯಲ್ಲಿ 5 ಹೈಸ್ಕೂಲು ಮಾತ್ರವಿತ್ತು. ಪ್ರಾಥಮಿಕ ಶಾಲೆಯು ಹೆಚ್ಚಾಗಿರಲಿಲ್ಲ. ಸಂಯುಕ್ತ ಕರ್ನಾಟಕದಲ್ಲಿ ನಾನು ಕೆಲವು ಕಾಲ ಪತ್ರಕರ್ತ ಆಗಿದ್ದೆ. ಅದನ್ನು ಬಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಮನಸ್ಸು ಮಾಡಿದೆ. ಇಂದು ಗ್ರಾಮಾಂತರ ಪ್ರದೇಶಗಳು ಖಾಲಿಯಾಗಿ ಪಟ್ಟಣ ಬೆಳೆಯುತ್ತಿವೆÉ. ಇದು ನಾನು ಗಮನಿಸಿದ ಸಮಕಾಲೀನ ಚಿತ್ರಣ. ಇದು ಕಾಲಕ್ಕಾನುಗುಣವಾದ ಪರಿವರ್ತನೆಯೂ ಹೌದು. ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕು. ನಾವು ಮೂಲಭೂತ ಅವಶ್ಯಕತೆಗೆ ಗೌರವ ನೀಡಬೇಕು. ಇದಕ್ಕೆ ಶೈಕ್ಷಣಿಕ ಅಭಿವೃದ್ಧಿಯೂ ಅಗತ್ಯ. ಮುಂದಿನ ಜನಾಂಗಕ್ಕೆ ನಮ್ಮ ಆದರ್ಶವನ್ನು ತೋರಿಸಬೇಕು. ಆಗಲೇ ಸಮಾಜದ ಅಭಿವೃದ್ಧಿ ಸಾಧ್ಯ. ಮುಂದಿನ ಸವಾಲುಗಳನ್ನು  ಎದುರಿಸುವ ಕಾರ್ಯಚಟುವಟಿಕೆ ಸಮಾಜಕ್ಕೆ ನಾವೂ ಮಾಡಬೇಕಾಗಿದೆ. ಹವ್ಯಕ ಸಮಾಜ ಶಕ್ತಿಯುತ ಸಮಾಜ. ಮುಂಬಯಿ ಹವ್ಯಕರು ಅದನ್ನು ಸಾಧಿಸಿ ತೋರಿಸಿದ್ದಾರೆ. ನನ್ನ ಸಾರ್ವಜನಿಕ ಕೆಲಸಕ್ಕೆ ಮುಂಬಯಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಪುರಸ್ಕಾರಕ್ಕೆ ಉತ್ತರಿಸಿ ಎನ್.ಎಸ್ ಹೆಗಡೆ ತಿಳಿಸಿದರು. 

ಹವ್ಯಕ ಸಮಾಜಕ್ಕೆ ಕುಂದರಗಿ ಅವರ ಕೊಡುಗೆ ಬಹಳಷ್ಟಿದೆ. ಉತ್ತಮ ಗುರಿವುಳ್ಳವರಾದ ಕುಂದರಗಿ ಸಮಾಜದ ಎಲ್ಲರ ಅಭಿವೃದ್ಧಿಗೆ ಮುಂದಾದವರು. ಸಮಾಜ ಸೇವೆ, ಶಿಕ್ಷಣ, ಪತ್ರಿಕೋದ್ಯಮ  ಹೀಗೆ ಬಹುಮುಖ ಸಮಾಜ ಮುಖಿ ಕಾರ್ಯಗಳನ್ನು ಕೈಗೂಂಡು ಯಶಸ್ಸು ಪಡೆದಿದ್ದಾರೆ ಕುಂದರಗಿ ಎಂದು ಶಿವಕುಮಾರ್ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನುಡಿದರು. 

ಟ್ರಸ್ಟ್‍ನ ಇತರೇ ಪದಾಧಿಕಾರಿಗಾಳು ಸೇರಿದಂತೆ ಅನೇಕರು ಹಾಜರಿದ್ದು ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ’ ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗವತ್ ಪ್ರಸ್ತಾವನೆಗೈದÀು ವೆಂಕಟರಮಣ ಶಾಸ್ತ್ರಿ ಅವರ ಜೀವನ ಚರಿತ್ರೆಯನ್ನು ಸ್ಥೂಲವಾಗಿ ಮತ್ತು ಹೃದಯಾಂಗವಾಗಿ ತೆರೆದಿಟ್ಟರು. 

ರೇಖಾ ಹೆಗಡೆ ಪ್ರಾರ್ಥನೆ ಹಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು.  ಪೂರ್ಣಿಮಾ ಅಕದಾಸ ಸನ್ಮಾನಪತ್ರ ವಾಚಿಸಿದರು. ಉಮೇಶ್ ಹೆಗಡೆ ಅತಿಥಿüಗಳನ್ನು ಪರಿಚಯಿಸಿದರು. ಹವ್ಯಕ ಸಂದೇಶ  ಮಂಡಳಿ ಸದಸ್ಯೆ ಹಾಗೂ ಶೈಲಜಾ ಹೆಗಡೆ ಪೂರ್ಣಿಮಾ ಶುಭ ಸಂದೇಶÀಗಳನ್ನು ವಾಚಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಸಿ.ಎಂ ಜೋಶಿ ಅಭಾರ ಮನ್ನಿಸಿದರು. 

ನೃತ್ಯ ವಿದ್ಯಾಲಯದ ಕಲಾವಿದೆಯರು ಗುರು ಶ್ರೀಮತಿ ಶೈಲಜಾ ಮಧುಸೂದನ ನಿರ್ದೇಶನದಲ್ಲಿ ನೃತ್ಯರೂಪಕ, ವೆಲ್ಫೇರ್ ಟ್ರಸ್ಟ್‍ನ ಸದಸ್ಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನಂತರ ಜಾನಪದ ಹಾಡುಗಳ ಸಮೂಹ ಸ್ಪರ್ಧೆ ನಡೆಸಲ್ಪಟ್ಟವು.

Billawar Assn. Mahila OLUME Inauguration News & photos

ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಪ್ರಸ್ತಿತಿಯ `ಒಲುಮೆ’ ಉದ್ಘಾಟನೆ 

ಮಹಿಳೆಯರು ಪುರುಷ ಸಮಾನರಾಗಿದ್ದಾರೆ: ಮೇಯರ್ ಕವಿತಾ ಸನಿಲ್

ಮುಂಬಯಿ, ಫೆ.25: ಪ್ರೀತಿಯಿಂದ ಮಾತ್ರ ಎಲ್ಲರನ್ನೂ ಗೆಲ್ಲಬಹುದು. ಇಂತಹ ಒಲುಮೆಯಿಂದ ಎಲ್ಲವನ್ನೂ ಸಂಪಾದಿಸಬಹುದು. ಆದುದರಿಂದ ಇಂತಹ ಕಾರ್ಯಕ್ರಮಕ್ಕೆ ಮಂಗಳೂರಿನಿಂದ ಬಂದು ಪಾಲ್ಗೊಳ್ಳುವುದು ನನ್ನ ಸೌಭಾಗ್ಯವಾಗಿದೆ. ನಿಮ್ಮನ್ನು ಮುಖತಃ ನೋಡಿ ಪ್ರೀತಿ ಹಂಚಿಕೊಳ್ಳುವ ಅವಕಾಶ ಅಭಿಮಾನ ತಂದಿದೆ. ನನ್ನ ಸಾಧನೆಗೆ ನನ್ನ ಕ್ರೀಡಾಸಕ್ತಿಯೇ ಪ್ರೇರಣೆ ಆಗಿದ್ದು ಇದರ ಹಿಂದೆ ಮುಂಬಯಿವಾಸಿ ಬಿಲ್ಲವ ಬಂಧುಗಳ ಸಹಯೋಗ ಪ್ರಧಾನವಾದುದು. ನನಗೆ ಪ್ರಥಮ ಅಂತರಾಷ್ಟ್ರೀಯ ಪದಕ ಪ್ರಾಪ್ತಿಸಿದ ನಗರ ಮುಂಬಯಿ ಆಗಿದ್ದು, ಇದೊಂದು ಸರ್ವಧರ್ಮ ಸಮನ್ವಯ ಸಾರುವ ನಗರವಾಗಿದೆ. ಏಕಮಾತಾ ಮಕ್ಕಳಾಗಿ ಬಾಳುವುದೇ ಇಲ್ಲಿನ ವೈಶಿಷ್ಟ ್ಯತೆ. ಪ್ರಸಕ್ತಾವಧಿಯಲ್ಲಿ ಮಹಿಳೆಯರು ಪುರುಷ ಸಮಾನರಾಗಿದ್ದಾರೆ. ಇದನ್ನು ಇನ್ನಷ್ಟು ಸಮಾನತೆಯತ್ತ ಒಯ್ಯುವಲ್ಲಿ ಇಂತಹ ವೇದಿಕೆಗಳು ಅನುಕರಣೀಯ. ಅವಾಗಲೇ ನಮ್ಮ ಸಂಸ್ಕಾರÀ, ಸಂಸ್ಕೃತಿ ಉಳಿವು ಸಾಧ್ಯ   ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರೆ ಕವಿತಾ ಸನಿಲ್ ತಿಳಿಸಿದರು.

ಇಂದಿಲ್ಲಿ ಭಾನುವಾರ ಸಂಜೆ ಸಾಂತಾಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗವು ಮುಂಬಯಿಯ ತುಳು ಕನ್ನಡಿಗರ ಸಂಸ್ಥೆಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸದಸ್ಯೆಯರನ್ನೊಳಗೊಂಡು ಆಯೋಜಿಸಿದ್ದ `ಒಲುಮೆ’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮೇಯರ್ ಸನಿಲ್ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸಾರಥ್ಯ ಮತ್ತು ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ್ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ವೈಶಿಷ್ಟ್ಯಮಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಅಭ್ಯಾಗತರಾಗಿ ಅಸೋಸಿಯೇಶನ್‍ನ ಮಾಜಿ ಮಹಿಳಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿ ಆಸೀನರಾಗಿದ್ದರು. 

ಇವತ್ತು ನನ್ನ ಜೀವನದ ಒಂದು ಶ್ರೇಷ್ಠ ಸುದಿನ. ಕಾರಣ ನಾನು ಹಲವು ವರ್ಷಗಳಿಂದ ಬಿಲ್ಲವರ ಭವನನ ಮುಂದಿನಿಂದ ಸಾಗುತ್ತಿದ್ದೆ. ಆದರೆ ಇದೇ ಮೊದಲ ಬಾರಿ ಭವನದೊಳಗೆ ಭೇಟಿ ನೀಡುವ ಅವಕಾಶ ದೊರೆಯಿತು. ಮಹಿಳೆಯರು ಪರಸ್ಪರ ಕುಷಲೋಪರಿ ನಡೆಸಿ ಒಬ್ಬರನ್ನೊಬ್ಬರು ಅರ್ಥೈಸಿ ಬಾಳಲು ಇಂತಹ ವೇದಿಕೆಗಳು ಪ್ರೇರಣೆ. ಇದರಿಂದ ಸ್ನೇಹ ಸೌಹಾರ್ದ ಹೆಚ್ಚಾಗುತ್ತದೆ ಮತ್ತು ಪ್ರೀತಿ ಸಂಬಂಧ ಬೆಳೆಯುತ್ತದೆ. ಒಲುಮೆ ಅಂದರೆ ಪ್ರೀತಿ. ಇದರ ವಿನಃ ಬದುಕೇ ಏಕಾಂತÀ. ನಮ್ಮೆಲ್ಲರ ಬಾಳಿಗೆ ಈ ಒಲುಮೆ ಪ್ರೇರಕವಾಗಲಿ ಎಂದು ರಂಜನಿ ಹೆಗ್ಡೆ ಆಶಯ ವ್ಯಕ್ತ ಪಡಿಸಿದರು.

ನಿತ್ಯಾನಂದ್ ಕೋಟ್ಯಾನ್ ಅಧ್ಯಕ್ಷೀಯ ನುಡಿಗಳನ್ನಾಡಿ ಈ ಒಲುಮೆಯು ಎಲ್ಲ ವರ್ಗದ ನಾರಿಯರನ್ನೂ ಒಗ್ಗೂಡಿಸಲಿ. ಮತ್ತು ಮಹಿಳಾಪರ ದನಿಯಾಗಿ ಮುನ್ನಡೆಸಲಿ. ಪರಸ್ಪರ ಪ್ರೀತಿ ಹಂಚಿಕೊಂಡು ಸಮಾನತಾ ಮನೋಭಾವವುಳ್ಳ ಅಬಲೆರಾಗಿ ಬಾಳಲು ಪೂರಕವಾಗಲಿ ಎಂದರು. 

ಕಾರ್ಯಕ್ರಮದ ಮಧ್ಯಾಂತರದಲ್ಲಿ  ಮಹಾನಗರದಲ್ಲಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ `ವರ್ತಮಾನದ ಮಹಿಳೆ-ತಲ್ಲಣ-ಪರಿಹಾರ’ ವಿಚಾರಗೋಷ್ಠಿ ನಡೆಸಲ್ಪಟ್ಟಿತು. ತೀಯಾ ಸಮಾಜ ಮುಂಬಯಿ ಸಂಸ್ಥೆಯ ದಿವಿಜಾ ಚಂದ್ರಶೇಖರ್, ಮೊಗವೀರ ಮಾಸಿಕ ಮಾಜಿ ಸಂಪಾದಕಿ ಡಾ| ಜಿ.ಪಿ ಕುಸುಮ, ಪ್ರಶಸ್ತಿ ಪುರಸ್ಕೃತ ಕವಯತ್ರಿ ಅನಿತಾ ಪಿ.ಪೂಜಾರಿ ತಾಕೋಡೆ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಸ್ಥೆಗಳ ಮಹಿಳಾ ಸದಸ್ಯೆಯರ ತಂಡಗಳು ವೈವಿಧ್ಯಮಯ ನೃತ್ಯಾವಳಿ, ಸಂಗೀತ ಯೋಗ, ಜಾನಪದ ಗಾಯನ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಮಹಾನಗರದ ಹೆಸರಾಂತ ಸಮಾಜ ಸೇವಕಿ ಪ್ರಮೀಳಾ ಜಿ.ಪೂಜಾರಿ, ಬಿಎಸ್‍ಕೆಬಿ ಅಸೋಸಿಯೇಶನ್‍ನ ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮ ಎಸ್.ರಾವ್, ಗಾಣಿಗ ಸಮಾಜ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ತಾರಾ ಎನ್. ಭಟ್ಕಳ್,  ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ  ಸರೋಜಿನಿ ಶೆಟ್ಟಿಗಾರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮಹಿಳಾ ಕಾರ್ಯಾಧ್ಯಕ್ಷೆ ರಾಜೀವಿ ಕಾಂಚನ್, ದೇವಾಡಿಗ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್.ಮೊೈಲಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಕುಲಾಲ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ಎಸ್.ಗುಜರನ್, ತೀಯಾ ಸಮಾಜ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಲತಾ ಡಿ.ಉಳ್ಳಾಲ್, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬ ಯಿ ಮಹಿಳಾ ಕಾರ್ಯಾಧ್ಯಕ್ಷೆ ಶುಭಾ ಎಸ್.ಆಚಾರ್ಯ, ರಜಕ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ  ಸರೋಜಿನಿ ಡಿ.ಕುಂದರ್, ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಹಿಳಾ ಕಾರ್ಯಾಧ್ಯಕ್ಷೆ  ಶಾರದಾ ಶ್ಯಾಮ ಶೆಟ್ಟಿ, ಸಾಫಲ್ಯ ಸೇವಾ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ  ಶೋಭಾ ವಿ.ಬಂಗೇರ  ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಡಾ| ಯು.ಧನಂಜಯ ಕುಮಾರ್, ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಬಿಲ್ಲವರು ಕುಡ್ಲ ಇದರ ಉದಯ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. 

ಜೊತೆ ಕಾರ್ಯದರ್ಶಿ ಲಕ್ಷ್ಮೀ ಎಸ್.ಪೂಜಾರಿ, ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್.ಸಾಲ್ಯಾನ್ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದು  ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಕೆ.ಸಾಲ್ಯಾನ್, ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ.ಬಂಗೇರ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಸೋಸಿಯೇಶನ್ ನ ಗೌ| ಪ್ರ| ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.

People Art Chatrapati Shivaji Awar Photo & News 

ಪ್ರತಿಷ್ಠಿತ ದ ಪೀಪಲ್’ಸ್ ಆರ್ಟ್ ಸೆಂಟರ್ ಮುಂಬಯಿ ಆರÀನೇ ವಾರ್ಷಿಕ ಸಂಭ್ರಮ 

ತುಳು ಕನ್ನಡಿಗರಿಗೆ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ’ ಪ್ರದಾನ  

ಮುಂಬಯಿ, ಫೆ.25:  ದ ಪೀಪಲ್’ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಆರನೇ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018’ ಪ್ರದಾನ ಸಮಾರಂಭ ಇಂದಿಲ್ಲಿ ಆದಿತ್ಯವಾರ ಸಂಜೆ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಪ್ರದಾನಿಸಲ್ಪಟ್ಟಿತು. ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಮರಾಠಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ದತ್ತಾ, ಗೌರವ ಅತಿಥಿüಗಳಾಗಿ  ಡಾ| ಸಂದೇಶ್ ಎಂ.ವಾಘ್ ಉಪಸ್ಥಿತರಿದ್ದು ಪೀಪಲ್’ಸ್ ಆರ್ಟ್ ಸ್ಮರಣಿಕೆ ಬಿಡುಗಡೆ ಗೊಳಿಸಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಿಸಿದರು.  

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯರುಗಳಾದ ಡಾ| ಸುರೇಶ್ ಎಸ್.ರಾವ್ ಕಟೀಲು (ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷರು), ನ್ಯಾ| ರೋಹಿಣಿ ಜೆ.ಸಾಲ್ಯಾನ್ (ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ), ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಒಕ್ಕಲಿಗ ಸಮೂದಾಯ ಮುಂಬಯಿ ಇದರ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರಂಗಪ್ಪ ಸಿ.ಗೌಡ ಹಾಗೂ ಉದ್ಯಮಿಗಳಾದ ಸಾಬು ಡೇನಿಯಲ್, ಕೆ.ಶ್ರೀನಿವಾಸನ್,  ವೇಣು ಪಿ.ನಾಯರ್,  ಎಂ.ಜಿ ಅರವಿಂದಕ್ಷನ್ ಮೆನನ್, ಟಿ.ಗಣಪತಿ, ಪ್ರಕಾಶ್ ಮೆನನ್, ಅಪ್ಪ ದುರೈ ಇವರಿಗೆ ಅತಿಥಿüಗಳು `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018’ ಪ್ರದಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕೆ.ರಾಜೇ ಗೌಡ, ಜಯರಾಮ ಶೆಟ್ಟಿ, ಪಿ.ಡಿ ಶೆಟ್ಟಿ, ಪದ್ಮನಾಭ ಸಸಿಹಿತ್ಲು, ಜಿತೇಶ್ ಗೌಡ ಮತ್ತಿತರು ಉಪಸ್ಥಿತರಿದ್ದು  ಪುರಸ್ಕೃತರಿಗೆ ಅಭಿನಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ನಾಗೇಶ್‍ಕುಮಾರ್ ಸುರ್ವೆ ಮತ್ತು ಕು| ರೂಪಾಲಿ ಸುರ್ವೆ ವಿಸ್ಹಿಲ್ ಸಂಗೀತವನ್ನಿತ್ತರು. ಆರ್ಟ್ ಸೆಂಟರ್‍ನ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿದರು. ನಿಹಾ ರಿಖಾ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು. 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi