Breif Mumbai News with Pictures
Kemmannu News Network, 26-03-2018 11:13:07
ಕೋಪರ್ಖೈರ್ನೆಯಲ್ಲಿ ಯಶಸ್ವಿಯಾಗಿ ತೆರೆಕಂಡ `ಅಂಬರ್ ಕ್ಯಾಟರರ್ಸ್’ ಸಿನೆಮಾ ಪೆÇ್ರತ್ಸಾಹಕ ಹಿತದೃಷ್ಠಿಯಿಂದಾದರೂ ಸಿನೆಮಾ ನೋಡಬೇಕು : ಅಣ್ಣಿಶೆಟ್ಟಿ
ಮುಂಬಯಿ, ಮಾ.25: ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ತೌಳವ ಸೂಪರ್ಸ್ಟಾರ್ ಬಿರುದಾಂಕಿತ ಸೌರಭ್ ಸುರೇಶ್ ಭಂಡಾರಿ ನಾಯಕ ನಟನೆಯಲ್ಲಿ ನಿರ್ಮಿತ ಕರ್ನಾಟಕದ ಕರಾವಳಿಯಾದ್ಯಂತ ಭಾರೀ ಜನಮನ್ನಣೆ ಪಡೆದ `ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ನವಿ ಮುಂಬಯಿ ಅಲ್ಲಿನ ಕೋಪರ್ ಖೈರ್ನೆಯ ಬಾಲಾಜಿ ಮೂಬಿ ಪ್ಲೆಕ್ಸ್ ಟಾಕೀಸ್ನಲ್ಲಿ ಯಶಸ್ವಿಯಾಗಿ ತೆರೆಕಂಡಿತು.
ಅತಿಥಿüಗಳಾಗಿ ಬಂಟರ ಸಂಘ ಮುಂಬಯಿ ಇದರ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ನವಿ ಮುಂಬಯಿ ಹೊಟೇಲ್ಸ್ ಒನರ್ಸ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಶಹಾಡ್ ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಪಾಂಗಾಳ, ಚಿಣ್ಣರ ಬಿಂಬದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದು ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ದೀಪ ಪ್ರಜ್ವಲಿಸಿ ಇಂದಿನ ಪ್ರದರ್ಶನಕ್ಕೆ ಚಾಲನೆಯನ್ನೀಡಿದರು.
ಸಿನೆಮಾ ಅಂದರೆ ತನ್ನೊಳಗಿನ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಒಂದು ಸಿನೆಮಾವನ್ನೇ ಅವಲಂಬಿಸಿ ಬದುಕುವ ನೂರಾರು ಜನÀರಿದ್ದಾರೆ. ಅವರ ಉದರ ಮತ್ತು ಕುಟುಂಬ ಪೆÇೀಷಣೆಗೂ ಒಂದು ಸಿನೆಮಾ ಭವ್ಯ ವೇದಿಕೆಯಾಗುತ್ತದೆ. ಒಂದು ಸಿನೆಮಾ ನಿರ್ಮಾಣದ ಹಿಂದೆ ಎಷ್ಟು ಶ್ರಮ, ಕಷ್ಟನಷ್ಟವಿದೆ ಎಂದು ನಿರ್ಮಾಪಕ ಮತ್ತು ಸಿನೆಮಾ ತಂಡಕ್ಕೆ ಮಾತ್ರ ತಿಳಿಯುವುದು. ಆದುದರಿಂದ ತಮ್ಮೊಳಗಿನ ಪ್ರತಿಭೆಗಳಿಗೆ ಪೆÇ್ರತ್ಸಾಹಿಸುವ ಮತ್ತು ಅದನ್ನವಲಂಬಿಸಿ ಬದುಕುವ ಜನರಿಗೆ ಪ್ರೇರೆಪಿಸುವ ಹಿತದೃಷ್ಠಿಯನ್ನಿರಿಸಿ ಸಿನೆಮಾವನ್ನು ನೋಡಬೇಕು. ನಮ್ಮ ಮಾತೃಭಾಷೆಯ ಬೆಳವಣಿಗೆ ಉದ್ದೇಶವಿರಿಸಿ ಸುರೇಶ್ ಭಂಡಾರಿ ಮತ್ತು ಸೌರಭ್ ಭಂಡಾರಿ ಅವರಿಂದ ರಚಿಸಲ್ಪಟ್ಟ ಅಂಬರ್ ಕ್ಯಾಟರರ್ಸ್ ತುಳು ಚಿತ್ರವಂತೂ ಸಮಗ್ರ ತುಳುವರ ಹಿರಿಮೆಯಾಗಿದೆ. ಇಂತಹ ಚಿತ್ರವನ್ನು ನೋಡುವುದರಿಂದ ನಾವೂ ನಮ್ಮ ಮಾತೃಭಾಷೆಯ ಋಣ ಪೂರೈಸುವಂತಾಗುತ್ತದೆ ಎಂದು ಧರ್ಮದರ್ಶಿ ಅಣ್ಣಿ ಶೆಟ್ಟಿ ತಿಳಿಸಿದರು.
ನಾನೂ ಓರ್ವ ಸಿನೆಮಾ ನಿರ್ಮಾಪಕ, ನಿರ್ದೇಶಕ, ನಟನಾಗಿಯೂ ಚಿತ್ರರಂಗದಲ್ಲಿ ಪಳಗಿದ್ದೇನೆ. ಅನೇಕ ಏರುಪೇರುಗಳ ಮಧ್ಯೆ ಸಾವಿರಾರು ಗಂಟೆಗಳ ಕಾಲಾವಧಿಯನ್ನು ವಿನಿಯೋಗಿಸಿ ಒಂದೆರಡು ಗಂಟೆಯ ಚಲನಚಿತ್ರ ನಿರ್ಮಾಣ ತಯಾರಿ ಅಂದರೆ ಅದೊಂದು ಅಂದಾಜಿಸಲಾಗದ ಪ್ರಯತ್ನ. ಜನಮೆಚ್ಚಿದರೆ ಓಕೆ, ಇಲ್ಲವಾದರೆ ಇದೆಲ್ಲಾ ಬೇಕೇ ಅನ್ನುವಷ್ಟರ ಮಟ್ಟಕ್ಕೆ ಸಿದ್ಧರಾಗಬೇಕಾಗುತ್ತದೆ. ಒಂದು ಸಿನೆಮಾ ರಚನೆ ಅಂದರೆ ಜಗತ್ತನ್ನು ಮುಷ್ಠಿಯಲ್ಲಿರಿಸುವ ಪ್ರಯತ್ನವೇ ಸರಿ ಎಂದು ಶ್ಯಾಮ ಶೆಟ್ಟಿ ತಿಳಿಸಿದರು.
ಹೊಟೇಲ್ ಉದ್ಯಮಿಗಳಾದ ಮೋಹನ್ ಶೆಟ್ಟಿ ಮಜ್ಜಾರು, ಉದಯ ಆರ್.ಹೆಗ್ಡೆ ಶಿರ್ವಾ, ಸತೀಶ್ ಪೂಜಾರಿ, ನಾಗರಾಜ್ ಶೆಟ್ಟಿ, ಅರುಣ್ ಶೆಟ್ಟಿ, ಸುಜೀತ್ ಶೆಟ್ಟಿ ಸಾಂತೂರು, ಅಶೋಕ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸೇರಿದಂತೆ ಅಕೇಕ ಗಣ್ಯರು ಉಪಸ್ಥಿತರಿದ್ದು ಸುರೇಶ್ ಭಂಡಾರಿ ಮತ್ತು ಸೌರಭ್ ಭಂಡಾರಿ ಸಾಧನೆಗೆ ಶುಭಾರೈಸಿದರು.
ಸೌರಭ್ ಸುರೇಶ್ ಭಂಡಾರಿ ಸುಖಾಗಮನ ಬಯಸಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.
ನವೀನ್ ಜೆ.ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್’ ಸಂಸ್ಥೆಯ 4ನೇ ಶಾಖೆ ಥಾಣೆ ಪಶ್ಚಿಮದ ಗಜಾನನ್ ಕಾಂಪ್ಲೆಕ್ಸ್ನಲ್ಲಿ ಸೇವಾರಂಭ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.25: ಉಡುಪಿ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಕೋಣಿ ಮೂಲದವರಾಗಿದ್ದು ಕೇಶ ವಿನ್ಯಾಸ ಹಾಗೂ ಅತಿಗಾಮಿ ಸಾಂಪ್ರದಾಯಿಕ ಕೇಶÀ ಪದ್ಧತಿಯನುಸಾರ ಶಸ್ತ್ರ ಚಿಕಿತ್ಸೆ ರಹಿತ ಕೂದಲುಗಳ ಅಳವಡಿಕೆಯಲ್ಲಿ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿರುವ ನವೀನ್ ಜೆ.ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್’ ಸಂಸ್ಥೆಯ ಮಹಾನಗರ ಮುಂಬಯಿಯೊಳಗಿನ ನಾಲ್ಕನೇ ಶಾಖೆಯು ರಾಮ ನವಮಿ ಶುಭಾವಸರವಾದ ಇಂದಿಲ್ಲಿ ಭಾನುವಾರ ಮಧ್ಯಾಹ್ನ ಉಪನಗರ ಥಾಣೆ ಪಶ್ಚಿಮದ ಗಜಾನನ್ ಕಾಂಪ್ಲೆಕ್ಸ್ನಲ್ಲಿ ಸೇವಾರಂಭಿಸಿತು.
ಸಮಾರಂಭದಲ್ಲಿ ವಿಶೇಷ ಸೆಲೆಬ್ರೆಟಿ ಅತಿಥಿüಯಾಗಿ ಉಪಸ್ಥಿತ 2017 ಮತ್ತು 2018ರ ಸಾಲಿನ ಮಿಸೆಸ್ ಏಷಿಯಾ ವಿಜೇತೆ ಪಿಂಕಿ ಪ್ರಶಾಂತ್ ರಾಜ್ಗರಿಯಾ ಅವರು ರಿಬ್ಬನ್ ಕತ್ತರಿಸಿ ಹಾಗೂ ದೀಪಪ್ರಜ್ವಲಿಸಿ ನೂತನ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಜಯ ಸಿ.ಪೂಜಾರಿ, ಶಾಂತಾ ಜೆ.ಭಂಡಾರಿ, ವೀಣಾ ಭಂಡಾರಿ, ಕು| ವೃದ್ಧಿ ಭಂಡಾರಿ, ಮಾ| ವಂಶ್ ಭಂಡಾರಿ, ರಾಘವೇಂದ್ರ ಭಂಡಾರಿ, ಸ್ಮೀತಾ ರಾಘವೇಂದ್ರ, ಸುನೀತಾ ಹರೀಶ್ ಕುಂದರ್, ಕೃಷ್ಣಪ್ಪ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.
ಶುಭಾರಂಭ ನಿಮಿತ್ತ ಬೆಳಿಗ್ಗೆ ಗಣೇಶ ಹವನ, ಗಣಹೋಮ ಇತ್ಯಾದಿ ಧಾರ್ಮಿಕ ಪೂಜೆಗಳÀು ನಡೆಸಲ್ಪಟ್ಟಿದ್ದು, ವಿದ್ವಾನ್ ವಿಷ್ಣ ಅಡಿಗ ಬೋರಿವಿಲಿ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ಉಪಸ್ಥಿತ ಗಣ್ಯರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.
ಫಿನಿಶಿಂಗ್ ಟಚ್ ಸಂಸ್ಥೆಯ ಸಂಸ್ಥಾಪಕ ಆಡಳಿತ ನಿರ್ದೇಶಕ ನವೀನ್ ಜೆ.ಭಂಡಾರಿ ಆಹ್ವಾನಿತರಿಗೆ ಸುಖಾಗಮನ ಬಯಸಿ ತನ್ನ ಸಸ್ಥೆಯ ಸೇವಾ ವೈಖರಿಯನ್ನು ಪ್ರಸ್ತಾಪಿಸಿದರು. ಹಾಗೂ ತನ್ನ ಕುಲಕಸುಬು ಕ್ಷೌರಿಕ ವೃತ್ತಿಗೆ ಮಾರ್ಗದರ್ಶಕರಾಗಿ ಪ್ರೇರಕರಾದ ಮಾತಾಪಿತರಾದ ಜಗನ್ನಾಥ್ ಭಂಡಾರಿ ಮತ್ತು ಶಾಂತಾ ಭಂಡಾರಿ, ಮಾವಂದಿರಾದ ಸುರೇಶ್ ಭಂಡಾರಿ ಅಶ್ವಥಪುರ (ಮೂಡಬಿದ್ರೆ) ಹಾಗೂ ಗೋವಿಂದ ಭಂಡಾರಿ ಸುರತ್ಕಲ್ ಅವರನ್ನು ಮನಸಾರೆ ಸ್ಮರಿಸಿ ಅಭಾರ ಮನ್ನಿಸಿದÀರು.
ನವಿಮುಂಬಯಿ (ವಾಶಿ)ಯಲ್ಲಿ ನೆಲೆನಿಂತ ನೂತನ ಕರ್ನಾಟಕ ಭವನ ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಮುಂಬಯಿ, ಮಾ.24: ಕರ್ನಾಟಕ ಸರಕಾರವು ನವಿಮುಂಬಯಿನ ವಾಶಿಯಲ್ಲಿ ನಿರ್ಮಿಸಿದ ಕರ್ನಾಟಕ ಭವನ ಮುಂಬಯಿ ಮತ್ತು ಉಪನಗರಗಳ ಸಮಸ್ತ ಕನ್ನಡಿಗರ ಸೇವೆಗೂ ಅನುಕೂಲಕರವಾಗಿ, ಕಾರ್ಯಕ್ರಮಗಳ ಸದ್ಭಳಕೆಗೆ ವರವಾಗಬೇಕು ಎಂದು ಹಿರಿಯ ನ್ಯಾಯವಾದಿ, ಸಂಘಟಕ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಆಶಯ ವ್ಯಕ್ತಪಡಿಸಿದರು.
ಇಂದಿಲ್ಲಿ ಶನಿವಾರ ಸಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಭೆಯೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಬಿ.ಎಲ್ ರಾವ್ ಕರ್ನಾಟಕದ ಜನತೆ, ಹೆಸರಲ್ಲಿ ನಿರ್ಮಿಸಲಾದ ಈ ಭವನ ಈಗ ಯಾರಿಗೆ ವರದಾನ ಎನ್ನುವುದು ಸದ್ಯ ಪ್ರೆಶ್ನೆಯಾಗಿದೆ. ಇದು ಬರೇ ಶಾಸನದ ತಾಣವೋ ಅಥವಾ ಕರ್ನಾಟಕ ಸರಕಾರದ ಸೊಗಸಿನ ಮಹಡಿಯೋ.? ಎಂದು ಸಂದೇಹ ಪಡುವಂತಾಗಿದೆ. ಇದು ಮುಂಬಯಿಯಾದ್ಯಂತ ನೆಲೆಯಾಗಿರುವ ಪ್ರತೀಯೋರ್ವ ಕರ್ನಾಟಕದ ಜನತೆಯ ಆಶಯ-ಆಶ್ರಯದ ಭವನ ಆಗಬೇಕಾಗಿದೆ ಎಂದು ಅಪೇಕ್ಷಿಸುತ್ತಿದ್ದೇವೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಪಂಡಿತ್ ನÀವೀನ್ಚÀಂದ್ರ ಆರ್.ಸನಿಲ್, ಲೇಖಕ ಪ್ರಭಾಕರ್ ಬೆಳುವಾಯಿ, ಎಸ್.ಕೆ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 40 ಕೋಟಿ ಮೊತ್ತಕ್ಕಿಂತಲೂ ಅಧಿಕ ಮೌಲ್ಯದ ಈ ಭವನ ಕರ್ನಾಟಕ ಸರಕಾರದ ಆಡಳಿತ್ವದ ಮೈಸೂರು ಸೇಲ್ಸ್ ಇಂಟರ್ ನೇಷನಲ್ ಲಿಮಿಟೆಡ್ (ಎಂಎಸ್ಐಎಲ್) ಸಂಸ್ಥೆಯ ಅಧೀನದಲ್ಲಿ ಸಿದ್ಧಗೊಂಡಿರುವುದು ನಿಜ. ಆದರೆ ಕರ್ನಾಟಕದ ಹೆಸರಿನಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರದ ಸಹಯೋಗ ಪಡೆದು ಭವನ ನಿರ್ಮಿಸಿದೆ. ಆದುದರಿಂದ ಮಹಾನಗರದಲ್ಲಿನ ಕಾರ್ಯನಿರತ ಕನ್ನಡಿಗರ, ಕರ್ನಾಟಕದ ಜನತೆಯ ಸಂಸ್ಥೆಗಳಿಗೂ ಈ ಕರ್ನಾಟಕ ಭವನದ ಅವಕಾಶ ಸಿಗಬೇಕು. ಆದುದರಿಂದ ನಮ್ಮ ಅಂದೋಲನಕ್ಕೆ ಕರ್ನಾಟಕದ ಜನತೆ, ಸಂಘಸಂಸ್ಥೆಗಳ ಎಲ್ಲರ ಸಹಕಾರ ಲಭ್ಯವಾಗಬೇಕು ಎಂದು ಈ ಭವನದ ಅವಕಾಶದ ಹಿಂದೆ ಹಗಲಿರುಳು ಶ್ರಮಿಸಿದ ಹೆಚ್.ಬಿ.ಎಲ್ ರಾವ್ ಪ್ರಸ್ತಾವನೆ ಮೂಲಕ ಸ್ಥೂಲವಾದ ಮಾಹಿತುಯನ್ನಿತ್ತರು.
ಈ ಭವನದ ಫಲಾನುಭವಿಗಳು ಯಾರು ಎನ್ನುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದೆ. ಮುಂಬಯಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರತೀಯೋರ್ವ ಕನ್ನಡಿಗ, ಕನ್ನಡ-ಕರ್ನಾಟಕ ಸಂಸ್ಥೆಗಳು, ಕರ್ನಾಟಕದಿಂದ ಬಂದು ಮುಂಬಯಿಯಲ್ಲಿ ನೆಲೆಯಾಗಿರುವ ಎಲ್ಲಾ ಜಾತೀಯ, ಭಾಷಿಗರೂ ಸೇರಿದಂತೆ ಇನ್ನಿತರ ಸಮಗ್ರ ಕರ್ನಾಟಕದ ಜನತೆಯ ಮುಖ್ಯಸ್ಥರು, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಈ ಬಗ್ಗೆ ಚಿಂತಿಸಿ ವಿಷಯವನ್ನು ನಿರ್ಲಕ್ಷಿಸದೆ ನಮ್ಮ ಪ್ರಯತ್ನಕ್ಕೆ ಬೆಂಬಲಿಸುವ ಅಗತ್ಯವಿದೆ ಎಂದು ಪಾಲೆತ್ತಾಡಿ ಕರೆಯಿತ್ತರು.
ಮಹಾನಗರಿಯಲ್ಲಿನ ಕನ್ನಡಿಗರೆಲ್ಲರೂ ಜಾತಿ ಮತ ಧರ್ಮ ಪಂಕ್ತಿ ಮರೆತು ನ್ಯಾಯಬದ್ಧರಾಗಿ ಒಗ್ಗೂಡಿ ಭವನದ ಔಚಿತ್ಯಕ್ಕಾಗಿ ಒಮ್ಮತದಿಂದ ಶ್ರಮಿಸುವುದು ಅಗತ್ಯವಿದೆ ಎಂದು ಮೂರ್ನಾಲ್ಕು ವರ್ಷಗಳಿಂದ ನಾನೂ ಮಾಧ್ಯಮಗಳ ಮೂಲಕ ತಿಳಿಸುತ್ತಾ ಬಂದಿದ್ದೇನೆ. ಕರ್ನಾಟಕ ಭವನದಲ್ಲಿ ತಮ್ಮ ಸಂಸ್ಥೆಗಳ ಪ್ರತಿನಿಧಿತ್ವ ಕಾಯ್ದು ಕೊಳ್ಳಲು ನಗರದಲ್ಲಿನ ಪ್ರತೀಯೋರ್ವ ಕನ್ನಡಿಗನಿಗೆ ಹಕ್ಕಿದೆ. ಈಗಲೇ ಭವನವನ್ನು ಪ್ರತಿನಿಧಿಸುವ ಪ್ರಯತ್ನ ಆಗದಿದ್ದರೆ ಭವಿಷ್ಯತ್ತಿನಲ್ಲಿ ಕರ್ನಾಟಕದ ಸಾಮಾನ್ಯ ಜನತೆಗೆ ಬಿಡಿ, ಕನ್ನಡ ಸಾಹಿತಿ, ಲೇಖಕರು, ಪತ್ರಕರ್ತರು, ಕನ್ನಡಿಗರು, ಇಲ್ಲಿನ ಕರ್ನಾಟಕದ ಸಂಘ-ಸಂಸ್ಥಗಳು, ಸಂಸ್ಥೆಗಳ ಪದಾಧಿಕಾರಿಗಳೂ ಭವನವನ್ನು ಬರೇ ಹೊರಗಿನಿಂದಲೇ ನೋಡಿ ಖುಷಿ ಪಡೆಯುವಂತಾಗ ಬಹುದು. ಈಗ ಅದೇ ಆಗುತ್ತಿದೆ. ಇನ್ನಾದರೂ ನಾವೆಲ್ಲರೂ ಜೊತೆಗೂಡಿ ಈ ಕರ್ನಾಟಕ ಭವನದಲ್ಲಿ ನಮಗೂ ಅವಕಾಶ ನೀಡುವಲ್ಲಿ ಪ್ರಯತ್ನಿಸೋಣ ಎಂದು ಪತ್ರಕರ್ತ ರೋನ್ಸ್ ಬಂಟ್ವಾಳ್ ತಿಳಿಸಿದರು.
ಕರ್ನಾಟಕ ಭವನದಲ್ಲಿ ತಮ್ಮ ಪಾತ್ರ ಏನು ಎನ್ನುವ ವಿಷಯ ಮನವರಿಸಿಕೊಂಡು ಸಿದ್ಧರಾಗುವುದು ಉಚಿತವೆಣಿಸಿದೆ. ಈ ಬಗ್ಗೆ ಸಭೆ ಸೇರಿ ಸಮಾಲೋಚನಾ ಸಭೆ ಕೈಗೊಂಡು ಮೊದಲಾಗಿ ಎಂಎಸ್ಐಎಲ್ ಸಂಸ್ಥೆಯ ಆಡಳಿತ ನಿರ್ದೇಶಕರನ್ನು ಭೇಟಿ ಮಾಡಿ ಮುಂದಿನ ಕ್ರಮಕ್ಕೆ ಸಜ್ಜಾಗೋಣ ಎಂದು ಡಾ| ಮೂಡಿಗೆರೆ ತಿಳಿಸಿದರು.
ಭವನಕ್ಕೆ ಸಂಬಂಧಿತ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ನಮ್ಮ ಮತ್ತು ಎಂಎಸ್ಐಎಲ್ನ ಅಭಿಪ್ರಾಯಗಳನ್ನು ಪಡೆದು ಸಾರ್ವಜನಿಕವಾಗಿ ಚರ್ಚಿಸೋಣ. ಆದರೆ ಈ ಭವನ ಕನ್ನಡಿಗರಿಗೆಲ್ಲರ ಕಾರ್ಯಕ್ರಮಗಳಿಗೆ ಸಲ್ಲುವಂತಾಗಬೇಕು ಎಲ್ಲರಿಗೂ ಲಭಿಸುವಂತಾಗಬೇಕು ಎನ್ನುತ್ತಾ ಸಭೆಗೆ ನೆರೆದವರಿಗೆ ವಂದಿಸಿದರು.
ಮಹಾರಾಷ್ಟ್ರದ ಅಯೋಧ್ಯನಗರಿ ಪ್ರಸಿದ್ಧಿ ವಡಾಲದ ಶ್ರೀ ರಾಮ ಮಂದಿರದಲ್ಲಿ ಅದ್ದೂರಿಯಾಗಿ ಸಂಭ್ರಮಿಸಲ್ಪಟ್ಟ ಶ್ರೀ ರಾಮ ನವಮಿ-ಬ್ರಹ್ಮ ರಥೋತ್ಸವ
ಮುಂಬಯಿ, ಮಾ.25: ವಡಾಲದ ಕತ್ರಾಕ್ ರಸ್ತೆಯಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ರವಿವಾರ ದಿನಪೂರ್ತಿಯಾಗಿ ಶ್ರೀ ರಾಮೋತ್ಸವ ವನ್ನು ವಿಧಿವತ್ತಾಗಿ ಆಚರಿಸಲ್ಪಟ್ಟಿತು. ನಿರಂತರ ಅಖಂಡ ರಾಮನಾಮ ಸಂಕೀರ್ತನೆಯೊಂದಿಗೆ ಪೂರ್ವ ಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವ ಅದ್ದೂರಿಯಾಗಿ ಸಂಭ್ರಮಿಸಿತು.
ಇಂದಿಲ್ಲಿ ಮುಂಜಾನೆಯಿಂದಲೇ ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿ ಸೇರಿದಂತೆ ಭಕ್ತರನೇಕರು ವಿಶೇಷ ಪೂಜೆಗಳನ್ನು ನೆರವೇರಿಸಿದ್ದು, ಮಂದಿರದ ಪ್ರಧಾನ ಅರ್ಚಕ ಸುಧಾಮ ಅನಂತ ಭಟ್ ಮತ್ತು ಪುರೋಹಿತ ವರ್ಗವು ಬೆಳಿಗ್ಗೆ ಅಭಿಷೇಕ, ನೈವೇದ್ಯ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ, ಸಮಾರಾಧನೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಲಘು ವಿಷ್ಣು ಹವನ ಇತ್ಯಾದಿಗಳನ್ನು ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸುಮಂಗಳೆಯರು ಶ್ರೀರಾಮನ ಪ್ರತಿಮೆಯನ್ನು ತೊಟ್ಟಿಲ್ಲರಿಸಿ ವಿಧಿವತ್ತಾಗಿ ರಾಮ ಜನ್ಮೋತ್ಸವ ನಡೆಸಿದರು. ಅಪರಾಹ್ನ ಶ್ರೀರಾಮನ ಪ್ರತಿಮೆ ರಥದಲ್ಲಿರಿಸಿ ಬ್ರಹ್ಮರಥೋತ್ಸವ ಸಂಭ್ರಮಿಸಿದರು.
ರಾಮನವಮಿ ಅಂಗವಾಗಿ ರಥ ವಾಸ್ತು ಶಾಂತಿ ಹವನ, ಸಮಾರಾಧನೆ, ರಥರೋಹಣ, ಬ್ರಹ್ಮರಥ ಸಮರ್ಪಣೆ, ರಥೋತ್ಸವ ನೆರವೇರಿಸಿ ಶ್ರೀರಾಮ ಜಯಂತ್ಯೋತ್ಸವ ಸಂಭ್ರಮಿಸಲಾಯಿತು. ಮಹಿಳಾ ಭಕ್ತೆಯರು ಸಾಂಪ್ರದಾಯಿಕ ವಿಧಿಗಳೊಂದಿಗೆ ಪೂಜಾಧಿಗಳನ್ನು ನೆರವೇರಿಸಿ ನಾಮಕರಣೋತ್ಸವ ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸೇವೆಗಳಿಂದ ರಾಮನವಮಿ ಅದ್ದೂರಿಯಾಗಿ ನಡೆಸಲ್ಪಟ್ಟಿತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link