Brief Mumbai - Mangalore news with pictures
Kemmannu News Network, 30-05-2018 15:07:57
ಧರ್ಮಸ್ಥಳದಲ್ಲಿ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ಆರ್ಸೆಟಿ) ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆ
ಹೊಸ ಅವಕಾಶಗಳಿಂದ ಆರ್ಥಿಕ ಸ್ವಾವಲಂಬನೆ ಹಾಗೂ ಪ್ರಗತಿ ಸಾಧ್ಯ.
ಚಿತ್ರಶೀರ್ಷಿಕೆ: ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಎರಡು ದಿನ ನಡೆಯುವ ಆರ್ಸೆÀಟಿಗಳ ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆಯನ್ನು ಮಂಗಳವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಉಜಿರೆ: ಹಿಂದಿನ ವರ್ಷಗಳ ಸಾಧನೆ ಹಾಗೂ ಅನುಭವದ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ನಿರುದ್ಯೋಗಿ ಯುವ ಜನತೆಗೆ ಹೊಸ ಉದ್ಯೋಗಾವಕಾಶ ಕಲ್ಪಿಸುವುದರಿಂದ ಆರ್ಥಿಕ ಸ್ವಾವಲಂಬನೆ ಹಾಗೂ ಉತ್ತಮ ಪ್ರಗತಿ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಎರಡು ದಿನ ನಡೆಯುವ ಆರ್ಸೆಟಿಗಳ ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರತಿ ರಾಜ್ಯದಲ್ಲಿ ಸಮಸ್ಯೆಗಳು, ಸವಾಲುಗಳು ವಿಭಿನ್ನವಾಗಿರುತ್ತವೆ. ಆಯಾ ರಾಜ್ಯದ ಹವಾಮಾನ, ಪ್ರಾಕೃತಿಕ ಸಂಪನ್ಮೂಲ, ಪರಿಸರ, ಲಭ್ಯವಿರುವ ಕಚ್ಛಾ ಪರಿಕರಗಳನ್ನು ಹೊಂದಿಕೊಂಡು ಯೋಜನೆ ರೂಪಿಸಬೇಕು.
ಯುವಜನತೆಗಲ್ಲದೆ 25 ರಿಂದ 50 ವರ್ಷ ಪ್ರಾಯದ ಮಧ್ಯವಯಸ್ಕರಿಗೆ ಹಾಗೂ ಗೃಹಿಣಿಯರಿಗೂ ಸ್ವ-ಉದ್ಯೋಗದ ಬಗ್ಗೆ ಮಾಹಿತಿ, ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಕೃಷಿಯಲ್ಲಿ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿದಾಗ ಕೃಷಿ ಲಾಭದಾಯಕವಾಗುತ್ತದೆ. ಕೃಷಿಯೊಂದಿಗೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ ಸಾಕಣೆ, ಜೇನು ಕೃಷಿ ಇತ್ಯಾದಿ ಉಪ ಕಸುಬುಗಳನ್ನು ಮಾಡಿದಾಗ ಹೆಚ್ಚು ಪ್ರಯೋಜನವಾಗುತ್ತದೆ. ಎಂಜಿನಿಯರ್ ಪದವೀಧರರು ಕೂಡಾ ಇಂದು ನೌಕರಿಗಿಂತ ಕೃಷಿ ಬಗ್ಗೆ ಒಲವು ತೋರುತ್ತಿರುವುದು ಆಶಾದಾಯಕವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಎಂ. ಮೋಹನ ರೆಡ್ಡಿ ಮಾತನಾಡಿ, ಆರ್ಸೆಟಿಗಳು ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಸಾಧಿಸಬೇಕು. ಪ್ರತಿ ವರ್ಷ ಒಂದು ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಿತ ಪ್ರಾಯೋಜಿತ ಬ್ಯಾಂಕುಗಳ ಹಿರಿಯ ಅಧಿಕಾರಿಗಳನ್ನು ನಿರ್ದೇಶಕರುಗಳು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಎಲ್ಲಾ ನಿರ್ದೇಶಕರುಗಳು ಬದ್ಧತೆ ಮತ್ತು ಪ್ರಾಮಾಣಿಕತೆಯೊಂದಿಗೆ ಸೇವಾ ಮನೋಭಾವದಿಂದ ತಮ್ಮ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಕೆ.ಎನ್. ಜನಾರ್ದನ್, ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ, ಕೌಶಲಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಆರ್ಸೆಟಿಗಳು ಮಾಡಿದ ಸೇವೆ-ಸಾಧನೆಯ ವಿವರ ನೀಡಿದರು. ಆರ್ಸೆಟಿಗಳು ನೀಡುವ ತರಬೇತಿ ದೇಶದಲ್ಲೆ ಉತ್ಕøಷ್ಟ ಮಟ್ಟದ್ದಾಗಿದೆ ಎಂಬ ಮಾನ್ಯತೆ ಪಡೆದಿದೆ ಎಂದರು.
ಆರ್ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಸಂತೋಷ್ ಪಿ. ಸ್ವಾಗತಿಸಿದರು.
ವಾಸುದೇವ ಕೆ. ಕಲ್ಕುಂದ್ರಿ ಧನ್ಯವಾದವಿತ್ತರು. ಎಂ. ವಾಸುದೇವ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.
ಎರಡು ದಿನ ನಡೆಯುವ ಸಭೆಯಲ್ಲಿ ದೇಶದ 24 ರಾಜ್ಯಗಳ ಆರ್ಸೆಟಿ ನಿರ್ದೇಶಕರುಗಳು ಭಾಗವಹಿಸುತ್ತಿದ್ದಾರೆ.
ಎ.ಜಿ.ಎಂ. ಗೆ ಸನ್ಮಾನ
ಚಿತ್ರಶೀರ್ಷಿಕೆ: ಹೆಗ್ಗಡೆಯವರು ಎ.ಜಿ.ಎಂ. ಕೆ.ಎಸ್. ಜನಾರ್ದನ್ ಅವರನ್ನು ಸನ್ಮಾನಿಸಿದರು.
ಸನ್ಮಾನ: ಆರ್ಸೆಟಿಗಳ ರಾಷ್ಟ್ರೀಯ ನಿದೇಶಕ ಕೆ.ನ್. ಜನಾರ್ದನ್ ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕರಾಗಿ ವರ್ಗಾವಣೆಗೊಂಡಿದ್ದು ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.
ರುಡ್ಸೆಟಿ ಮತ್ತು ಆರ್ಸೆಟಿಗಳ ಪ್ರಗತಿಯಲ್ಲಿ ಜನಾರ್ದನ್ರ ಸೇವೆಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು.
ಸುದ್ದಿಗೋಷ್ಠಿ
ಉಜಿರೆ: ಪ್ರಸ್ತುತ ದೇಶದಲ್ಲಿ 586 ಆರ್ಸೆಟಿಗಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರದ ಗ್ರಾಮಾಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಕಳೆದ ಆರು ವರ್ಷಗಳಲ್ಲಿ ಇಪ್ಪತೇಳು ಲಕ್ಷ ಮಂದಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ. ಇವರಲ್ಲಿ ಹದಿನೆಂಟು ಲಕ್ಷ ಮಂದಿ ಯಶಸ್ವಿಯಾಗಿ ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರ್ಸೆಟಿಗಳಲ್ಲಿ 61 ಬಗೆಯ ವಿವಿಧ ತರಬೇತಿಗಳನ್ನು ನೀಡುತ್ತಿದ್ದು ಇವು ಸರ್ಕಾರದಿಂದ ಮಾನ್ಯತೆ ಹೊಂದಿವೆ. ಆರ್ಸೆಟಿಗಳ ಸಾಧನೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಮೂರು ಪ್ರತಿಷ್ಠಿತ ಪ್ರಶಸಿಗಳನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ತೀಲಿಸಿದರು.
Mumbai May 28: FASHION NITE POOJA MISRRA, MYRRA & YASH WADALI AT NVU STORE LAUNCH.ROCKING ......It was a classy fashion nite on Saturday that marked the grand launch of NVU (New In Vogue for U) shopping fashion store at LG Floor,Phoenix Marketcity,Kurla(W) with a mega brand fashion-show of celebrity show-stoppers featuring former Bigg Boss participant model-actress Pooja Misrra (for Myrra) and actor Abhishek Awasthi (for Oxemberg) and Myrra Bakshi herself as other beautiful models also walked the ramp amidst thundering cheers from the guests and the crowds upstairs in the popular mall. The glittering show was brilliantly anchored by Femina Miss India Goa 2017, Audrey D’Silva. There was also a special performance by the very talented singer Yash Wadali. The chief of NVU store Jayakar Shettigar said, "For us the quality matters and the customers will never be disappointed with the products we sell." Sameet Neb,celeb fashion brands promoter of repute told,"NVU has an excellent track-record." NVU promises "to introduce latest and trendy fashion every time customers who aspire for modern lifestyle" and "to deliver best price for the trendiest and quality merchandise."
Mumbai May.29: Former Captain of Indian Cricket team Sachin Tendulkar met the Governor of Maharashtra CH. Vidyasagar Rao at Raj Bhavan, Mumbai on Tuesday. This was a courtesy call. Sports journalist Sunandan Lele and CEO of SRT Sports Management Mrinmoy Mukherjee were also present.
ಹೆಚ್ಎಸ್ಸಿ ಪರೀಕ್ಷೆ-ಮೇಘ್ನಾ ಜಿ. ಗಾಣಿಗ 80.61% ಅಂಕಗಳು
ಮುಂಬಯಿ, ಮೇ.30: ಮಹಾರಾಷ್ಟ್ರ ರಾಜ್ಯದÀ 2018ನೇ ಸಾಲಿನ ಹೆಚ್ಎಸ್ಸಿ ಪರೀಕ್ಷೆಯಲ್ಲಿ ಕಾಂದಿವಿಲಿ ಠಾಕೂರ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಸಯನ್ಸ್ ಇದರ ವಿದ್ಯಾಥಿರ್üನಿ ಮೇಘ್ನಾ ಜಿ.ಗಾಣಿಗ ಇವರು ವಾಣಿಜ್ಯ ವಿಭಾಗದಲ್ಲಿ 80.61% ಅಂಕಗಳನ್ನು ಗಳಿಸಿದ್ದಾರೆ.
ಈಕೆ ಉದ್ಯಮಿ, ಗಾಣಿಗ ಸಮಾಜ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಗೋಪಾಲಕೃಷ್ಣ ಗೋವಿಂದ ಗಾಣಿಗ (4ಜಿ) ಮತ್ತು ಶ್ರೀಮತಿ ಸುಮನ್ ಜಿ.ಗಾಣಿಗ ದಂಪತಿ ಸುಪುತ್ರ್ರಿ ಆಗಿದ್ದಾರೆ.
ಜೆಡಿಎಸ್ ಪಕ್ಷದ ಧುರೀಣ ಶಾಸಕ ನಾರಾಯಣ ಆರ್.ಗೌಡ ಅವರ ವಿಜಯೋತ್ಸವ
ಅಭಿವೃದ್ಧಿಯೇ ಮೂಲಮಂತ್ರ-ಎಲ್ಲಾ ಗ್ರಾಮಗಳಿಗೂ ಭೇಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಮೇ.27: ದ್ವಿತೀಯ ಬಾರಿಗೆ ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಧುರೀಣ ಶಾಸಕ ನಾರಾಯಣ ಆರ್.ಗೌಡ ಅವರಿಗೆ ಜೆಡಿಎಸ್ ಕಾರ್ಯಕರ್ತರ ವಿಜಯೋತ್ಸವ ಸಭೆ ಹಾಗೂ ಕೃತಜ್ಞತೆ ಸಮರ್ಪಣಾ ಸಮಾರಂಭ ಇಂದು ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಡೆಸಲ್ಪಟ್ಟಿತು. ಅಪಾರ ಸಂಖ್ಯೆಯ ಕಾರ್ಯಕರ್ತರು ನೀಡಿದ ಆತ್ಮೀಯ ಅಭಿನಂದನೆಯನ್ನು ಶಾಸಕ ನಾರಾಯಣ ಗೌಡ ಭಾಗವಹಿಸಿ ಸ್ವೀಕರಿಸಿ ತನ್ನ ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಾರಮನ್ನಿಸಿದರು.
ತಾಲೂಕಿನ ಇತಿಹಾಸದಲ್ಲಿ ಒಮ್ಮೆ ಶಾಸಕರಾಗಿ ಆಯ್ಕೆ ಆದವರು ಮತ್ತೊಮ್ಮೆ ಆಯ್ಕೆಯಾದ ಉದಾಹರಣೆಯೇ ಇಲ್ಲ, ಆದರೆ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ತಾಲೂಕಿನ ಪ್ರಬುದ್ಧ ಮತದಾರರು ಶಾಸಕನಾಗಿ ನನ್ನನ್ನು ಭಾರೀ ಬಹುಮತಗಳ ಅಂತರದಿಂದ ಪುನರಾಯ್ಕೆ ಮಾಡುವ ಮೂಲಕ ತಾಲೂಕಿನ ರಾಜಕೀಯ ಚರಿತ್ರೆಯನ್ನೇ ಬದಲಾಯಿಸಿದ್ದಾರೆ. ಕಾಂಗ್ರೇಸ್ ಅಭ್ಯಥಿರ್ü ಹಣ ಮತ್ತು ಹೆಂಡದ ಹೊಳೆಯನ್ನೇ ಹರಿಸಿದರೂ, ನಮ್ಮ ಪಕ್ಷದ ನೂರಾರು ಮುಖಂಡರುಗಳಿಗೆ ಆಮಿಷಗಳನ್ನು ಒಡ್ಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡರೂ ಮತದಾರರು ಮಾತ್ರ ಗೂಂಢಾ ರಾಜಕಾರಣವನ್ನು ಸಾರಾ ಸಗಟಾಗಿ ತಿರಸ್ಕರಿಸಿ ಸಜ್ಜನ ರಾಜಕಾರಣವನ್ನು ಬೆಂಬಲಿಸಿ 18ಸಾವಿರಕ್ಕೂ ಅಧಿಕ ಮತಗಳ ಮೂಲಕ ನನ್ನನ್ನು ಪುನರಾಯ್ಕೆ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಉಸಿರಿನವರೆಗೂ ತಾಲೂಕಿನ ಜನತೆಯ ಋಣವನ್ನು ತೀರಿಸುವ ಪ್ರಾಮಾಣಿಕವಾದ ಕೆಲಸ ಮಾಡುತ್ತೇನೆ. ವಿರೋಧಶ ಪಕ್ಷದ ಶಾಸಕನಾಗಿ ಕೆಲಸ ಮಾಡಿರುವ ನನಗೆ ಸುದೈವವೆಂಬಂತೆ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ, ನಮ್ಮ ಪಕ್ಕದ ಕ್ಷೇತ್ರ ಮೇಲುಕೋಟೆಯ ಶಾಸಕರಾದ ಸಿ.ಎಸ್ ಪುಟ್ಟರಾಜು ಪ್ರಭಾವಿ ಮಂತ್ರಿಗಳಾಗಲಿದ್ದಾರೆ. ಆದ್ದರಿಂದ ಜಿಲ್ಲೆ ಹಾಗೂ ತಾಲೂಕಿನ ಬಾಗ್ಯದ ಬಾಗಿಲು ತೆರೆಯಲಿದೆ. ತಾಲೂಕು ಸಮಗ್ರವಾದ ಅಭಿವೃದ್ಧಿಯಾಗಲಿದೆ ಎಂದು ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಿಂದಲೇ ವಿಶ್ವಾಸ ದ್ರೋಹ: ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಮತ್ತು ಮುಖಂಡ ಬಸ್ ಕೃಷ್ಣೇಗೌಡ ಪಕ್ಷದ್ರೋಹ ಮಾಡಿ ಕಾಂಗ್ರೇಸ್ ಅಭ್ಯಥಿರ್üಯ ಗೆಲುವಿಗಾಗಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ದೇವರಾಜು ಅವರನ್ನೇ ವರಿಷ್ಠರು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದರೆ ಹಿರಿಯರಾದ ದೇವರಾಜು ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದೆ. ಜೆಡಿಎಸ್ ಪರವಾಗಿ ಪ್ರಚಾರ ಮಾಡುವಂತೆ ಕಾಲಿಗೆ ಬಿದ್ದು ಬೇಡಿ ಕೊಂಡರೂ ದೇವರಾಜು ಪಕ್ಷದ್ರೋಹ ಮಾಡಿ ಪಕ್ಷದ ವಿರುದ್ಧವಾಗಿ ಪ್ರಚಾರ ಮಾಡಿದರು. ಕೃಷ್ಣೇಗೌಡ ಕಾಂಗ್ರೇಸ್ ಅಭ್ಯಥಿರ್üಯ ಮಗನೊಂದಿಗೆ ಹಣ ಹಂಚಿ ನನ್ನನ್ನು ಸೋಲಿಸಲು ಸಂಚು ನಡೆಸಿದರು. ಆದರೆ ತಾಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಆಸೆ-ಆಮಿಷಗಳಿಗೆ ಬಲಿಯಾಗದೇ ನಾಯಕರು ಪಕ್ಷಾಂತರ ಮಾಡಿ ಪಕ್ಷದ್ರೋಹದ ಕೆಲಸ ಮಾಡಿದರೂ ಜೆಡಿಎಸ್ ಅಭ್ಯಥಿರ್üಯಾದ ನನ್ನ ಗೆಲುವಿಗಾಗಿ ಹಗಲಿರುಳೆನ್ನದೇ ಕೆಲಸ ಮಾಡಿ ಚರಿತ್ರಾರ್ಹವಾದ ಗೆಲುವು ತಂದುಕೊಟ್ಟರು. ಇನ್ನು ಮುಂದೆ ಪಕ್ಷದ್ರೋಹಿಗಳಿಗೆ ಪಕ್ಷದಲ್ಲಿ ಜಾಗವಿಲ್ಲ. ಹೆತ್ತತಾಯಿಯಂತಿರುವ ಪಕ್ಷಕ್ಕೆ ದ್ರೋಹಬಗೆಯುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ. ಪಕ್ಷದ ವರಿಷ್ಠರಿಗೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇನೆ. ಇನ್ನು ಮುಂದೆ ನಿಷ್ಠಾವಂತ ಕಾರ್ಯಕರ್ತರ ಪಡೆಯೊಂದಿಗೆ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ ಎಂದು ಶಾಸಕ ನಾರಾಯಣ ಗೌಡ ಗುಡುಗಿದರು.
ಅಭಿವೃದ್ಧಿಯೇ ಮೂಲಮಂತ್ರ: ಒಬ್ಬ ವಿರೋಧ ಪಕ್ಷದ ಶಾಸಕನಾಗಿದ್ದಾಗಲೇ ತಾಲೂಕಿನ ಅಭಿವೃದ್ಧಿಗಾಗಿ ನನ್ನನ್ನು ತೊಡಗಿಸಿಕೊಂಡು ಕೆಲಸ ಮಾಡಿದ್ದೆ. ಈಗ ನಮ್ಮ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದು ಜೆಡಿಎಸ್ ಕಾಂಗ್ರೇಸ್ ನೇತೃತ್ವದ ಮಹಾಮೈತ್ರಿಯ ಸಮ್ಮಶ್ರ ಸರ್ಕಾರವು ಅಸ್ಥಿತ್ವದಲ್ಲಿರುವುದರಿಂದ ಹೆಚ್ಚಿನ ಅನುದಾನವನ್ನು ತಂದು ಅಗತ್ಯವಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪುಟ್ಟರಾಜು ಅವರು ಜಿಲ್ಲೆಯ ಕೋಟಾದಿಂದ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಮ್ಮ ಜಿಲ್ಲೆಯಿಂದ ಇಬ್ಬರು ಶಾಸಕರಿಗೆ ಮಂತ್ರಿಗಳಾಗುವ ಯೋಗವಿದೆ. ಆದ್ದರಿಂದ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಗ್ರಾಮಗಳಿಗೂ ಭೇಟಿ: ಮಂತ್ರಿ ಮಂಡಲದ ವಿಸ್ತರಣೆಯ ಪ್ರಕ್ರಿಯೆಯು ಮುಗಿದ ನಂತರ ಕ್ಷೇತ್ರದ ಎಲ್ಲಾ 34 ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಕೆಲಸವನ್ನು ಇನ್ನು ಮುಂದೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಪಕ್ಷದ್ರೋಹ ಮಾಡಿದ ಮುಖಂಡರನ್ನು ಹತ್ತಿರಕ್ಕೆ ಸೇರಿಸಲ್ಲ, ನನ್ನ ಗೆಲುವಿಗಾಗಿ ದುಡಿದ ಕಾರ್ಯಕರ್ತ ಬಂಧುಗಳು ನೇರವಾಗಿ ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ ಶಾಸಕ ನಾರಾಯಣಗೌಡ ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತ ಗೊಂಡಿವೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ, ಇನ್ನು ಮುಂದೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ನೀಡಲು ನಾನು ಬಿಡಲ್ಲ. ಜನರ ರಕ್ತ ಹೀರುವ ಭ್ರಷ್ಠ ಅಧಿಕಾರಿಗಳನ್ನು ತಾಲೂಕಿನಿಂದ ಹೊರಗೆ ಕಳಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಜನಪರವಾಗಿ ಕೆಲಸ ಮಾಡುವ ನೌಕರರಿಗಷ್ಠ ಅವಕಾಶ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸವನ್ನು ತುಂಬಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಧಾನಪರಿಷತ್ತ್ನ ಉಪಸಭಾಪತಿ ಮರಿತಿಬ್ಬೇ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿಸಮಿತಿಯ ಅಧ್ಯಕ್ಷ ವಿಜಯಕುಮಾರ್ ಪಕ್ಷದ ಮಾಜಿ, ಹಾಲಿ ಪದಾಧಿಕಾರಿಗಳು,ಮತದಾರರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link