Brief Mumbai - Mangalore news with pictures
Kemmannu News Network, 07-06-2018 16:31:23
Nationalist Congress Party (NCP) Iftaar party at haj house CST at VT, Mumbai this Evening
BJP Nationalist President Amit Shah today meet to Industrialist Ratan Tata in Mumbai
BJP Nationalist President Amit Shah today visited to Sri Siddhivinayak Temple in Prabhadevi, Dadar West Mumbai
ಶ್ರೀರಾಮ ಕ್ಷೇತ್ರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ- ಜೂ.09: ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಸಭೆ
ಮುಂಬಯಿ,ಜೂ.06: ದಕ್ಷಿಣ ಅಯೋಧ್ಯೆ ಎಂದು ಕರೆಯಲ್ಪಡುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ ಇದರ ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ಸೆಪ್ಟೆಂಬರ್ 03.09.2018ರಂದು ಶ್ರೀರಾಮ ಕ್ಷೇತ್ರದಲ್ಲಿ ಜರಗಲಿದ್ದು ಆ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಹಿಮಾಲಯದಿಂದ ಸುಮಾರು ಎರಡು ಸಾವಿರ ಸಾಧು ಸಂತರನ್ನು ಬರಮಾಡಿ ಶ್ರೀರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದನ್ನು ಆಯೋಜಿಸಿ ಆ ಮುಖೇನ ಸಂತರಿಂದ ಲೋಕ ಕಲ್ಯಾಣಕ್ಕಾಗಿ ದಿವ್ಯ ಸಂದೇಶ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ರಾಷ್ಟ್ರದ ಅನೇಕ ನಾಯಕರು, ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಬಹುತೇಕ ಶಾಸಕರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಆ ಸಲುವಾಗಿ ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಪೂಜ್ಯ ಸ್ವಾಮೀಜಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆಗಳನ್ನು ಪೂರ್ವಭಾವಿಯಾಗಿ ಜರಗಿಸಲಾಗಿದೆ. ಅದೇ ರೀತಿ ಇದೇ ಜೂ.09ರ ಶನಿವಾರ ಸಂಜೆ ಗಂಟೆ 4.00 ಕ್ಕೆ ಸರಿಯಾಗಿ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಮಾಜದ ಮಾರ್ಗದರ್ಶಕ ಜಯ ಸಿ. ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಭಿಕರನ್ನು ಉದ್ದೇಶಿಸಿ ಮಾತನಾಡಲಿರುವರು.
ಸಮಾಜ ಬಾಂಧವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಧಾರ್ಮಿಕ ಉಪಸಮಿತಿ ಕಾರ್ಯಾಧ್ಯಕ್ಷ ಮೋಹನ್ದಾಸ್ ಜಿ.ಪೂಜಾರಿ, ಕಾರ್ಯದರ್ಶಿ ರವೀಂದ್ರ ಎ.ಅಮೀನ್ ಶಾಂತಿ ಈ ಮೂಲಕ ವಿನಂತಿಸಿದ್ದಾರೆ.
ಜೂ.16-17: ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಎರಡು ದಿನಗಳ ನಾಟಕೋತ್ಸವ
ಪ್ರಕಾಶ್ ಬೆಳವಾಡಿ ನಿರ್ದೇಶನದ `ಶಿಕಾರಿ’-ಪ್ರಮೀಳಾ ಬೆಂಗ್ರೆ ನಿರ್ದೇಶನದ`ಚಿರೇಬಂದಿ ವಾಡೆ’
ಮುಂಬಯಿ, ಜೂ.06: ಮೈಸೂರು ಅಸೋಸಿಯೇಷನ್ ಜೊತೆಗೂಡಿ ರಂಗಾಯಣ ಮೈಸೂರು ಅರ್ಪಿಸುವ ಎರಡು ದಿನಗಳ ನಾಟಕೋತ್ಸವ ಇದೇ ಜೂನ್ 16 ಶನಿವಾರ ಮತ್ತು 17ರ ಭಾನುವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ನ ಸಭಾಗೃಹದಲ್ಲಿ ನಡೆಯಲಿದೆ. ಪ್ರಕಾಶ್ ಬೆಳವಾಡಿ ಅವರು ಯಶವಂತ ಚಿತ್ತಾಲರ `ಶಿಕಾರಿ’ ಕಾದಂಬರಿಗೆ ರಂಗರೂಪ ನೀಡಿ ನಿರ್ದೇಶಿಸಿರುವ ನಾಟಕವು ಜೂ.16 ಶನಿವಾರ ಸಂಜೆ 6.00 ಗಂಟೆಗೆ ಮತ್ತು ಜೂ.17ರ ಭಾನುವಾರ ಸಂಜೆ 6.00 ಗಂಟೆಗೆ ಮರಾಠಿಯ ಪ್ರಸಿದ್ಧ ಮಹೇಶ್ ಎಲ್.ಕುಂಚವಾರ್ ಅವರ `ಚಿರೇಬಂದಿ ವಾಡೆ’ ನಾಟಕ ಪ್ರಮೀಳಾ ಬೆಂಗ್ರೆ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬಯಿ ಮಹಾನಗರ ಹಾಗೂ ಆಸುಪಾಸಿನ ಎಲ್ಲಾ ನಾಟಕ ಕಲಾಭಿಮಾನಿಗಳು ಆಗಮಿಸಿ ಎರಡೂ ನಾಟಕಗಳನ್ನು ವೀಕ್ಷಿಸ ಬೇಕಾಗಿ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ್ ಈ ಮೂಲಕ ವಿನಂತಿಸಿದ್ದಾರೆ.
ಆಧುನಿಕ ಜಗದ ಭೇಟೆ ಮತ್ತು ಸಾಮಾನ್ಯ ಬದುಕಿನ ತಲ್ಲಣ:
ಸೀಳುನಾಯಿಗಳ ಪಡೆಯೊಂದು ಮರಿ ಮೊಲವೊಂದನ್ನು ಬೆನ್ನಟ್ಟಿದೆ. ಹುಲ್ಲು ಮೇಯುತ್ತಿರುವ ಮರಿ ಗಾಬರಿಯಿಂದ `ಇದೇಣಾಗುತ್ತಿದೆ...? ಯಾಕೆ ಹೀಗೆ ಸುತ್ತಲಿನ ಅಪ್ಪ, ಅಮ್ಮ, ಅಣ್ಣ, ಅಕ್ಕ ಓಡುತ್ತಿದ್ದಾರೆ...? ನಾನೂ ಬರುತ್ತೇನೆ...ನಿಲ್ಲಿ... ಅಮ್ಮಾ...ಅಪ್ಪಾ...ಅಕ್ಕಾ....ಅಣ್ಣಾ...? ಎಂದು ಕೂಗತೊಡಗುತ್ತದೆ. ಸುತ್ತಲಿಂದ ಎಲ್ಲ ದಿಕ್ಕುಗಳಿಂದ ದಾಳಿಯಿಕ್ಕುವ ನಾಯಿಗಳಿಂದ ತಪ್ಪಿಸಿಕೊಳ್ಳಲೋಸುಗ ಮರಿ ಮನಬಂದತ್ತ ಓಡತೊಡಗುತ್ತದೆ. ಇದೆಲ್ಲಾ ಏನು...? ಏನು ನಡೆಯುತ್ತಿದೆ...? ಯಾಕೆ..? ಒಂದೂ ತಿಳಿಯುತ್ತಿಲ್ಲ. ಗಂಟಲಿನಿಂದ ತಿಳಿವು ಮೀರಿ ಉಕ್ಕಿ ಬರುತ್ತಿರುವ ಆಕ್ರಂದನ. ಓಡಿಸಿ, ಓಡಿಸಿ ಓದುವ ದಣಿವಿನಿಂದಲೇ ಕೊಲ್ಲುವ ಶೀತಲ ಕ್ರೌರ್ಯದ ನಾಯಿಗಳ ಮುಖದಲ್ಲಿ ಮಂದಹಾಸ. ಕೊನೆಗೊಮ್ಮೆ `ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್’. ಇದು ಕಾಡೀನ ಕತೆ. ಈ ಕತೆ ನಾಡಿಗೆ ವರ್ಗವಾದರೆ..! `ಕಾಂಕ್ರೀಟ್’ ಕಾಡಾಗಿರುವ ನಾಗರಿಕತೆ ನಕಲಾದರೆ.. ! ಮೊಲವೇ ಇದ್ದಕ್ಕಿಂದತೆ ನಾಯಿಯಂತಾಗಿ ಮರಿ ಮೊಲವೊಂದನ್ನು ಬೆನ್ನಟ್ಟಿ ಕೊಲ್ಲುವಂತಾದರೆ..! ಆಧುನಿಕ ಬದುಕು ಸೃಷ್ಟೀಸಿದ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯದಂತಾದರೆ..! ಮನುಷ್ಯರೇ ನಾಯಿಗಳಂತಾಗಿ ಇನ್ನೋರ್ವ ಮನುಷ್ಯನ ಮೇಲೆ ಎರಗಿದರೆ..! `ಕರಿಯರ್’, `ಮೇಲೇರುವುದು’ ಎನ್ನುವ ಮಾಯಾಮೃಗದ ಹಿಂದೆ ಬೆನ್ನಟ್ಟಿ ಪಕ್ಕದ ಜೀವವನ್ನೂ ನೋಡದಷ್ಟು, ಅದರ ಆತಂಕಗಳನ್ನೂ ಗಮನಿಸದೇ ಹೋಗುವಂತಾದರೆ..! ಆಸರೆಗಾಗಿ ಹಗ್ಗವೆಂದು ಹಿಡಿಯಲು ಹೋದದ್ದೆಲ್ಲಾ ಹಾಲಾಹಲ ಉಗುಳುವ ಕಾರ್ಕೋಟಕ ಸರ್ಪವಾದರೆ..! ತುತ್ತು ನೀಡುವ ಕೈಯೊಂದು ಅದೇ ತುತ್ತಿನಲ್ಲಿ ವಿಷ ಬೆರೆಸಿದರೆ..! ಪ್ರೀತಿ ತೋರುವ ಕೈಯೊಂದು ಕತ್ತು ಹಿಚುಕಲು ಬಂದರೆ..! ತಾಯ ಮೊಲೆ ಹಾಲು ನಂಜಾಗಿ ಕೊಲ್ಲುವುದಾದರ್...! ಈ ಇಂಥ ಕಾರಣಗಳಿಂದಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ಕಾಲಗಳೆಲ್ಲಾ ಏಕಕಾಲದಲ್ಲಿ ಆತಂಕ ಹುಟ್ಟಿಸುತ್ತಾ ಭೂತಗಳಾಗಿ ಕಾಡತೊಡಗಿದರೆ ..! ಯಾರಿಗೆ ದೂರುವುದು...! ಏನು ಮಾಡುವುದು...! ಎಲ್ಲಿಗೆ ಹೋಗುವುದು...!
ಇದು ಯಶವಂತ ಚಿತ್ತಾಲರ `ಶಿಕಾರಿ’ ಕಾದಂಬರಿಯ ಕತೆ. ಕಾಪೆರ್Çೀರೇಟ್ ಬದುಕಿನ ಗೊಂಡಾರಣ್ಯದ ಚಕ್ರವ್ಯೂಹದಲ್ಲಿ ನಮ್ಮನ್ನು ಸ್ತುತ್ತಿಸುವ ಚಿತ್ತಾಲರು ಬಾಲ್ಯದ ಕರಾಳ ನೆನಪುಗಳನ್ನು ಹೊತ್ತ, ಪ್ರಾಮಾಣಿಕವಾಗಿ ಬದುಕಲೆತ್ನಿಸುವ ನಾಗಪ್ಪನ ತಲ್ಲಣಗಳನ್ನು ನಮ್ಮ ತಲ್ಲಣಗಳನ್ನಾಗಿ ಪರಿವರ್ತಿಸುವಲ್ಲಿ ಗೆಲ್ಲುವುದಷ್ಟೇ ಅಲ್ಲ. ಸಾಮಾನ್ಯ ಬದುಕಿನ ಮುಗ್ಧ. ನಿರಾಳ ಸರಳತೆಯನ್ನು ಧಿಕ್ಕರಿಸಿದ. ಪಕ್ಕದ ಜೀವವನ್ನು ತುಳಿಯುವುದನ್ನೇ ಬದುಕಿನ ಪರಮ ಧರ್ಮವನ್ನಾಗಿ ಮಾಡಿಕೊಂಡ ?ಆಧುನಿಕ? ಜಗತ್ತಿನ ಪಾಶವೀಯ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ. ?ಏನಿಲ್ಲದಿದ್ದರೂ ಬದುಕಬಹುದೇನೋ... ಆದರೆ ಪ್ರೀತಿಯಿಲ್ಲದೇ...? ಗೆಳೆತನವಿಲ್ಲದೇ...? ಮಾನವೀಯ ಅಂತಃಕರಣವಿಲ್ಲದೇ...? ಸಹಾನುಭೂತಿ ಇಲ್ಲದೆ ಬದುಕಲು ಸಾಧ್ಯವೇ...?ಇವೆಲ್ಲ ಇಲ್ಲವಾದರೆ ಬದುಕಬೇಕಾದ ರೂ ಯಾಕೆ. .? ಚಿತ್ತಾಲರು ಇಂತಹ ಪ್ರಶ್ನೆಗಳನ್ನು ಕೇಳಿ, ಸಂವೇದನಾರಹಿತ ಸ್ವಕೇಂದ್ರಿತ ಹುಸಿ ಅವಸರದ ಮನಸ್ಸುಗಳನ್ನು ಬೆಚ್ಚಿಸುತ್ತಾರೆ. ತನ್ನೆಲ್ಲ ಕುರೂಪಗಳನ್ನು ದೌರ್ಬಲ್ಯಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ತಾಯಿ ಜೀವಕ್ಕಾಗಿ ಕಾಯುವ ತಳಮಳದ ಜೀವವೊಂದರ ಸಂಕೇತವಾಗುತ್ತಾನೆ ನಾಗಪ್ಪ.
ಈ ದಿನವನ್ನು ಎಲ್ಲ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಬಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದೇನು ಪ್ರಯೋಜನ...? ಎನ್ನುವ ನಿರಂತರವಾಗಿ ಮನುಷ್ಯ ಎನ್ನುವ ಪ್ರಾಣಿಯನ್ನು ಕಾಡುವ ಪ್ರಶ್ನೆಯನ್ನು, ಆಗಾಗ ಮರೆಯುವ ಮನುಷ್ಯ ಪ್ರಾಣಿಗೆ ?ಶಿಕಾರಿ?ಯ ಮೂಲಕ ಚಿತ್ತಾಲರು ಮತ್ತೆ ಮತ್ತೆ ನೆನಪಿಸುತ್ತಾ ಎದುರಿಗಿಡುತ್ತಾರೆ.
ಇಂಥ ಕನ್ನಡದ ಶ್ರೇಷ್ಠ ಹಾಗೂ ಸಂಕೀರ್ಣ ಕಾದಂಬರಿಯೊಂದನ್ನು ರಂಗಕ್ಕೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಸಾಹಿತ್ಯಾಭಿವ್ಯಕ್ತಿ ಹಾಗೂ ರಂಗಾಭಿವ್ಯಕ್ತಿಗಳು ಪರಸ್ಪರ ಸಂಧಿಸಿ, ಸಂಘರ್ಷಿಸಿ ಹೊಸದೊಂದು ಹುಟ್ಟೂವ ಪರಿ ಸೋಜಿಗವಾದುದು. ಈ ಸವಾಲನ್ನು ಕನ್ನಡದ ಶ್ರೇಷ್ಠ ಹಾಗೂ ಸೂಕ್ಶ್ಮ ಸಂವೇದನೆಯ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿಯವರ ಜೊತೆ ಎದುರಿಸಿದ ಈ ಹಾದಿಯ ಪಯಣವೇ ಒಂದು ಅದ್ಭುತ ಅನುಭವ. ಇಂಥ ಸವಾಲನ್ನು ಸ್ವೀಕರಿಸಿದಾಗಲೆಲ್ಲಾ ದೊಡ್ಡ ಕೃತಿಯ ದೊಡ್ಡ ಶಕ್ತಿಯ ಸಣ್ಣ ಕಂಪನವೊಂದು ನಮ್ಮಲ್ಲೂ ಪ್ರವಹಿಸುವ ಸಂಭ್ರಮ, ಸಡಗರ ನಮ್ಮದು. ಇಂಥ ದೊಡ್ಡದರ ಜೊತೆ ಸೆಣೆಸುತ್ತಾ, ನಿಮಗಿದನ್ನು ಅರ್ಪಿಸಿ ಹಿಗ್ಗುವ, ಹಿಗ್ಗಿಸುವ ಹಾಗೂ ಹಿಗ್ಗಿಸಿಕೊಳ್ಳುವ ಆಸೆ ನಮ್ಮದು.
ಜೂ.17ರ ಭಾನುವಾರ ಸಂಜೆ 6.00 ಗಂಟೆಗೆ ಮರಾಠಿಯ ಪ್ರಸಿದ್ಧ ಮಹೇಶ್ ಎಲ್.ಕುಂಚವಾರ್ ಅವರ `ಚಿರೇಬಂದಿ ವಾಡೆ’ ವಸ್ತು ಆಧುನಿಕ ದಿನಗಳು ತಂದೊಡ್ಡಿರುವ ಸಂಕೀರ್ಣ ಒತ್ತಡಗಳ ಪ್ರಭಾವಕ್ಕೆ ಒಳಗಾಗಿ ವಿಘಟನೆಗೊಳ್ಳುವ ಒಂದು ಸಂಯುಕ್ತ ಕುಟುಂಬದ ಮನೋವ್ಯಾಪಾರಗಳ ಸಂಘರ್ಷವನ್ನು ಬಿಂಬಿಸುವ ರೀತಿ ಗಮನಾರ್ಹವಾಗಿದೆ. ಮಾತು ಮಾನಗಳ ನಡುವೆ ವ್ಯಕ್ತಿ ಪಾತ್ರಗಳ ವಿಭಿನ್ನ ಲೋಕವನ್ನು ತೆರೆದು ನೋಡುವ ಈ ನಾಟಕವನ್ನು ಮಾರುತಿ ಶಾನಭಾಗ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಪ್ರಮೀಲಾ ಬೆಂಗ್ರೆಯವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಮೇಲು ನೋಟಕ್ಕೆ ಈ ನಾಟಕ ಒಂದು ವಾಡೆ ಕುಸಿದು ಬೀಳುತ್ತಿರುವ ಪ್ರಸಂಗ ಅಥವಾ ದೇಶಪಾಂಡೆ ಮನೆತನದ ಅವನತಿ ಅನ್ನಿಸಿದರೂ... ಒಳಗಣ್ಣಿಗೆ ನಮ್ಮ ಸಮಾಜ ಇಂದು ಪ್ರಗತಿ ಎನ್ನುವ ಹೆಸರಲ್ಲಿ ಕಟ್ಟಿಕೊಂಡಿರುವ ಅಥವಾ ಮುಂದೆ ಮುಂದೆ ಸಾಗುತ್ತಿದ್ದೇವೆ ಎನ್ನುವ ಭ್ರಮೆಯಿಂದ, ಕಳಚಿಕೊಳ್ಳುತ್ತಿರುವ ಮೌಲ್ಯಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತದೆ.
ಮನುಷ್ಯ ಮನುಷ್ಯನ ಸಂಬಂಧಗಳನ್ನು ಶಕ್ತಿಯುತಗೊಳಿಸುವಂತಹ ಈ ನಾಟಕ ನಮ್ಮನ್ನು ಜೀವಪರ ಮನುಷ್ಯಪರ-ಪ್ರೀತಪರ ಆಲೋಚನೆಗಳಿಗೆ ತೊಡಗಿಸುತ್ತದೆಯಾದ್ದರಿಂದ ಈ ಸ್ಥಿತ್ಯಂತರ ಅಥವಾ ಯುಗಾಂತ (ಒoಜeಡಿಟಿ ಒobiಟe ಯುಗ) ದಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ ಮತು ಅಗತ್ಯ ಕೂಡ. ಎಲ್ಕುಂಚವಾರ್ಅವರ ಮಾತುಗಳಲ್ಲೇ ಹೇಳುವುದಾದರೆ ?ಯಾವ ಗ್ರಾಮೀಣ ಸಂಸ್ಕೃತಿಯಿಂದ ಕಲಾ ಪ್ರಕಾರದ ಉದಯವಾಯಿತೋ ಆ ಸಂಸ್ಕೃತಿ ಸದ್ಯ ನಾಶಗೊಂಡು ಬಿಟ್ಟೀದೆ ಎಂದರೂ ಸರಿ. ಹಳ್ಳಿಯಲ್ಲ್ ಗಿರಣಿ ಬಂದ ಕೂಡಲೇ ಬೀಶುಗಲ್ಲು ಮೂಲೆ ಗುಂಪಾಯಿತು. ಅದರ ಜೊತೆ ಬೀಸುವ ಹಾಡುಗಳೂ ಹೋದವು. ನಲ್ಲಿಗಳಲ್ಲಿ ನೀರು ಅಂದ ಮೇಲೆ ಬಾವಿಯಿಂದ ನೀರು ಸೇದುವುದು ನಿಂತಿತು. ಟೂರಿಂಗ್ ಟಾಕೀಸು ಬಂದ ಕೂಡಲೇ ದೇವಸ್ಥಾನದಲ್ಲಿಯ ಭಜನೆ, ಕೀರ್ತನೆಗೆ ಬರುವವರೇ ಕಡಿಮೆಯಾಯಿತು.
ಚಿರೇಬಂದಿ ವಾಡೆಯ ಜನರ ಮುಂದಿರುವುದು ಕತ್ತಲೆಯ ಜಗತ್ತು. ಆದರೆ ಈ ಕತ್ತಲೆ ತಮ್ಮ ತಮ್ಮ ಕ್ಷುದ್ರ ಸ್ವಾರ್ಥಗಳನ್ನು ಸಾಧಿಸಿಕೊಳ್ಳುತ್ತ, ಕಾಪಾಡಿಕೊಳ್ಳುತ್ತ, ಇರುವಾಗಲೆ ಪರಸ್ಪರರ ಬಗ್ಗೆಯೂ ಅವರ ಜಿವ ಮಿಡಿಯುವುದನ್ನು ಕಾಣುತ್ತೇವೆ. ಕರುಳಿನ ಗಂಟನ್ನು ಬಿಡಿಸಿಕೊಳ್ಳುತ್ತಿರುವಾಗಲೇ ಅದು ಇನ್ನಷ್ಟು ಕೊಂಡಿಗಳಾಗುತ್ತ ಹೋಗುತ್ತದೆ.
ಜೀವಪರ, ಪ್ರೀತಿಪರ ಸಂಬಂಧಗಳೇ ಬಂಗಾರ. ವಾಡೆಯ ಕುಸಿತಕ್ಕೆ ಕಾರಣವಾಗಿರುವ `ಟ್ರಾಕ್ಟರ್’ ಅಗೋಚರವಾಗಿದ್ದರು ಈಗಿನ `ರೈತರ ಆತ್ಮಹತ್ಯೆ’ ಯವರೆಗೆ ರೈತರನ್ನು ಎಳೆದು ತರಲು ಕಾರಣವಾದ ಈ ತಂತ್ರಜ್ಞಾನದ `ಪ್ರತಿಮೆ’ಯಾಗಿದೆ.
ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿಗೈದ ಮುನಿಯಾಲು ಉದಯ ಶೆಟ್ಟಿ
ಮುಂಬಯಿ, ಜೂ.07: ಮುನಿಯಾಲುಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ (ರಿ.) ಅಧ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಸಮಾಕಸೇವಕ ಮುನಿಯಾಲು ಉದಯ ಶೆಟ್ಟಿ ಅವರು ನಡೆದಾಡುವ ದೇವರೆಂದೇ ಖ್ಯಾತರಾದ ತುಮಕೂರು ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿ ನೂರಹನ್ನೊಂದರ ಹರೆಯದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಇಂದಿಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಿದರು.
ಉಡುಪಿ ಜಿಲ್ಲೆಯಲ್ಲಿ ಸೇವಾ ಸಂಸ್ಥೆ ಸ್ಥಾಪಿಸಿ ವಿದ್ಯಾಥಿರ್üವೇತನ, ವಿದ್ಯಾಥಿರ್ü ವ್ಯಕ್ತಿತ್ವ ವಿಕಸನ ಚಟುವಟಿಕೆಗಳನ್ನು ಶ್ರೀ ಮಠದ ಆಪ್ತೇಷ್ಠರೊಬ್ಬರು ಸ್ವಾಮೀಜಿಗಳಿಗೆ ವಿವರಿಸಿದ ಹಿನ್ನೆಲೆಯಲ್ಲಿ ಶ್ರೀ ಮಠದ ವತಿಯಿಂದ ಉದಯ ಶೆಟ್ಟಿ ಅವರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು.
ಶ್ರೀಗಳವರ ಮಾರ್ಗದರ್ಶನಕೋರಿದ ಉದಯ ಅವರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link