Brief Mumbai - Mangalore news with pictures


Rons Bantwal
Kemmannu News Network, 03-07-2018 19:59:25


Write Comment     |     E-Mail To a Friend     |     Facebook     |     Twitter     |     Print



ರಾಜ್ಯ ವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ - ವ್ಯಸನದಿಂದ ವ್ಯಕ್ತಿತ್ವ ನಾಶ

ಉಜಿರೆ: ಸುಸಂಸ್ಕøತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಾಯೋಜಕತ್ವದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವೇಚ್ಛೆಯಿಂದ, ಸಹವಾಸ ದೋಷದಿಂದ ಹಾಗೂ ಕ್ಷಣಿಕ ಸಂತೋಷಕ್ಕಾಗಿ ವಿದ್ಯಾರ್ಥಿಗಳು ಆಕರ್ಷಣೆಗೊಳಗಾಗಿ ಮದ್ಯ ವ್ಯಸನಕ್ಕೆ ಬಲಿಯಾಗಬಾರದು. ಧರ್ಮ ಎಂಬುದು ಕೇವಲ ಹಣೆಪಟ್ಟಿಗಾಗಿ ಅಲ್ಲ. ಧರ್ಮದ ಹಿನ್ನೆಲೆಯಲ್ಲಿ ನಡೆಸುವ ಆಚರಣೆಗಳು, ನಂಬಿಕೆ-ನಡವಳಿಕೆಗಳು ಮನಸ್ಸಿನ ನಿಯಂತ್ರಣದೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ. ಪ್ರಪಂಚದಲ್ಲಿ ಕತ್ತಲು-ಬೆಳಕಿನಂತೆ ಸತ್ಕಾರ್ಯ ಹಾಗೂ ದುಷ್ಕøತ್ಯ ಮಾಡಲು ಸಮಾನ ಅವಕಾಶಗಳಿವೆ. ಆಯ್ಕೆ ನಿಮ್ಮದು ಎಂದು ಹೇಳಿದರು. ಧರ್ಮ ಮಾರ್ಗದಲ್ಲಿ ನಡೆದು ಸದಾ ಜಾಗೃತರಾಗಿ, ಎಂದೂ ದುಶ್ಚಟಗಳಿಗೆ ಬಲಿಯಾಗಬೇಡಿ. ಆದರ್ಶ ವ್ಯಕ್ತತ್ವದೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ವಯಸ್ಕರು ಹಾಗೂ ಹಿರಿಯರು ಕೂಡಾ ವ್ಯಸನಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿ, ಬೀದಿ ನಾಟಕ, ಆಕಾಶವಾಣಿ ಹಾಗೂ ಇತರ ಸಮೂಹ ಮಾಧ್ಯಮಗಳ ಮೂಲಕ ಮಂಡಳಿಯು ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುತ್ತಿದೆ ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮೀನಾ ಕುಮಾರಿ ಈಶ್ವರ್ ಪಟಗಾರ್ ಸ್ವಾಸ್ಥ್ಯ ಸಂಕಲ್ಪದ ಕೈಪಿಡಿ ಬಿಡುಗಡೆಗೊಳಿಸಿದರು.
ಸಾಲುಮರದ ತಿಮ್ಮಕ್ಕ ಮಾತನಾಡಿ ಮನೆಯ ವಠಾರದಲ್ಲಿ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ಔಷಧಿಗಳ ರೂಪದಲ್ಲಿ, ಮಾಧ್ಯಮಗಳ ಮೂಲಕ ಮದ್ಯ ಮಾರಾಟದ ಜಾಲ ಯುವ ಜನತೆಯನ್ನು ಅಡ್ಡ ದಾರಿಗೆ ಹೋಗುವಂತೆ ಮಾಡುತ್ತದೆ.
ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಶಾಲಾ-ಕಾಲೇಜುಗಳಲ್ಲಿ ವರ್ಷಕ್ಕೆ ಒಂದು ಸಾವಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸಿ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದಕ್ಕಾಗಿ 918 ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಪ್ರಮಾಣ ವಚನ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ: ಮದ್ಯಪಾನಾದಿ ಮಾದಕ ದ್ರವ್ಯಗಳ ಆಕರ್ಷಣೆಗೊಳಗಾಗದೆ, ದುಶ್ಚಟಗಳಿಂದ ದೂರವಾಗಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಉತ್ತಮ ಸಂಸ್ಕಾರವಂತರಾಗಿ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜದ ಸತ್ಪ್ರಜೆಗಳಾಗಿ ಉತ್ತಮ ಜೀವನ ನಡೆಸುವುದಾಗಿ ಗಣ್ಯರ ಎದುರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎನ್. ಕೇಶವ್ ಉಪಸ್ಥಿತರಿದ್ದರು.
ಡಾ. ಬಿ. ಎ. ಕುಮಾರ ಹೆಗ್ಡೆ ಧನ್ಯವಾದವಿತ್ತರು.
ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:
ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.108 ವರ್ಷ ವಯಸ್ಸಿನ ಸಾಲುಮರದ ತಿಮ್ಮಕ್ಕ ಪ್ರಮುಖ ಆಕರ್ಷಣೆಯ ಕೇಂದ್ರವಾದರು.ಸಾಲುಮರದ ತಿಮ್ಮಕ್ಕ ವಿದ್ಯಾರ್ಥಿ ಪ್ರತಿನಿಧಿಗೆ ಒಂದು ಮಾವಿನ ಗಿಡ ನೀಡಿದರು. ಅದನ್ನು ಕಾಲೇಜು ವಠಾರದಲ್ಲಿ ನೆಡಲಾಯಿತು.ಹೀರೋ-ಹಿರೊಯಿನ್ ಆಗಬೇಕಾದರೆ ಹೆರಾಯಿನ್ ಕುಡಿಯಬೇಕು.ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ.ಧರ್ಮರಾಯನಿಗೆ ಜೂಜಿನ ವ್ಯಸನವಿತ್ತು.ದೀಪದ ಬೆಳಕಿಗೆ ಆಕರ್ಷಿತವಾಗಿ ಕ್ರಿಮಿ-ಕೀಟಗಳು ಬಲಿಯಾಗುವಂತೆ ವ್ಯಸನಗಳಿಗೆ ದಾಸರಾದವರು ತಮ್ಮ ವ್ಯಕ್ತಿತ್ವ, ಪ್ರಾಣ-ಮಾನ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.ವ್ಯಸನಮುಕ್ತರಾದರೆ ಸಾಲು ಮರದ ತಿಮ್ಮಕ್ಕನಂತೆ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ ಬದುಕಬಹುದು.ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಮದ್ಯ ವ್ಯಸನಕ್ಕೆ ದಾಸರಾಗುತ್ತಿರುವುದು ಖೇದಕರವಾಗಿದೆ.ಅನಧಿಕೃತ ಮದ್ಯ ಉತ್ಪಾದನೆ, ಮಾರಾಟ, ಸೇವನೆ ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಶಾಲೆಗಳಿಗೆ ಡೆಸ್ಕ್, ಬೆಂಚು ವಿತರಣೆ

ಚಿತ್ರಶೀರ್ಷಿಕೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳವಾರ ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಜಯಪುರ, ಯಾದಗಿರಿ, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳ 453 ಶಾಲೆಗಳಿಗೆ 2.16ಕೋಟಿ ರೂ. ವೆಚ್ಚದಲ್ಲಿ 4214 ಜೊತೆ ಡೆಸ್ಕ್-ಬೆಂಚುಗಳನ್ನು ವಿತರಿಸಿದರು.

ವಿಜಯಪುರ (134 ಶಾಲೆಗಳಿಗೆ 5500 ಜೊತೆ), ಯಾದಗಿರಿ (109 ಶಾಲೆಗಳಿಗೆ 1000 ಜೊತೆ) ಕಲ್ಬುರ್ಗಿ (103 ಶಾಲೆಗಳಿಗೆ 995 ಜೊತೆ) ಬೀದರ್ (107 ಶಾಲೆಗಳಿಗೆ 1038 ಜೊತೆ)
ಈ ವರೆಗೆ ರಾಜ್ಯದ 29 ಜಿಲ್ಲೆಗಳ 9831 ಶಾಲೆಗಳಿಗೆ 21.46 ಕೋಟಿ ರೂ. ಮೌಲ್ಯದ 56,930 ಜೊತೆ ಡೆಸ್ಕ್, ಬೆಂಚುಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಶೇ.80ರ ಸಹಾಯಧನದಲ್ಲಿ 18.13 ಕೋಟಿ ರೂ. ವಿನಿಯೋಗಿಸಲಾಗಿದೆ. ಇದರಿಂದಾಗಿ 2.70 ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ಆಸನ ವ್ಯವಸ್ಥೆ ಒದಗಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಜಯಪುರ, ಯಾದಗಿರಿ, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳ 453 ಶಾಲೆಗಳಿಗೆ ಡೆಸ್ಕ್-ಬೆಂಚುಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.
ಪರಿಸರ ಸ್ನೇಹಿ ಪೀಠೋಪಕರಣಗಳು: ಡೆಸ್ಕ್, ಬೆಂಚುಗಳ ತಯಾರಿಕೆಯಲ್ಲಿ ಮರದ ಬಳಕೆ ಮಾಡದೆ ಸಿಮೆಂಟಿನಿಂದ ರಚಿಸಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಒಂದು ಜೊತೆ ಡೆಸ್ಕ್ ಮತ್ತು ಬೆಂಚು ತಯಾರಿಸಲು 3 ಘನ ಅಡಿ ಮರದ ಅಗತ್ಯವಿದ್ದು ಸಿಮೆಂಟ್ ಬಳಸಿ ತಯಾರಿಸುವುದರಿಂದ ಈ ವರೆಗೆ 1,58,716 ಜೊತೆ ಡೆಸ್ಕ್, ಬೆಂಚು ತಯಾರಿಸಿ 1,58,148 ಘನ ಅಡಿ ಮರ ಉಳಿತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶೇ. 20 ಶಾಲಾಭಿವೃದ್ಧಿ ಸಮಿತಿಯವರು ಭರಿಸಿದರೆ, ಶೇ.80 ರಷ್ಟು ಹಣ ಧರ್ಮಸ್ಥಳದ ವತಿಯಿಂದ ನೀಡಲಾಗುತ್ತದೆ. ನೇರವಾಗಿ ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುತ್ತದೆ.

ತೆಂಗಿನ ನಾರಿನ ಡೆಸ್ಕ್, ಬೆಂಚುಗಳು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನು ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ವಿಜಯಪುರ ಜಿಲ್ಲೆಗೆ 66 ಲಕ್ಷ ರೂ. ಮೌಲ್ಯದ 1200 ಜೊತೆ ಡೆಸ್ಕ್, ಬೆಂಚುಗಳನ್ನು ನೀಡಲಾಗುತ್ತದೆ.
ಪರಿಸರ ಸ್ನೇಹಿ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನುಒದಗಿಸಲು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟನೂರು ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರಿ ಸಂಸ್ಥೆ ಒಪ್ಪಿಕೊಂಡಿದೆ.
ತೆಂಗಿನ ಕಾಯಿಯ ಸಿಪ್ಪೆಯಿಂದ ತೆಗೆದ ನಾರಿನಿಂದ ಪರಿಸರ ಸ್ನೇಹಿ ಡೆಸ್ಕ್ ಬೆಂಚುಗಳನ್ನು ತಯಾರಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಸಿ ನಾಟಿ, ಸಾಲು ಮರ ನಾಟಿ ಬೀಜದುಂಡೆಗಳ ಬಳಕೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾ£,À ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಾ ಬಂದಿದ್ದು ಇದೀಗ ತೆಂಗಿನ ನಾರಿನ ಪೀಠೋಪಕರಣಗಳ ಬಳಕೆ ಮತ್ತೊಂದು ವಿನೂತನ ಕಾರ್ಯಕ್ರಮವಾಗಿದೆ. ತೆಂಗು ಬೆಳೆಯುವ ರೈತರಿಗೂ ಹೊಸ ಮನ್ನಣೆ ದೊರಕಿದೆ.
ಹೇಮಾವತಿ ವಿ. ಹೆಗ್ಗಡೆ, ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಉಜಿರೆಯ ಲಕ್ಷ್ಮಿ ಗ್ರೂಪ್ಸ್‍ನ ಮಾಲಕ ಮೋಹನ ಉಜಿರೆ ಮತ್ತು ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.

ಹನ್ನೆರಡನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕರ್ನಾಟಕ ಸಂಘ ಮುಂಬಯಿ
(ರೋನಿಡಾ ಮುಂಬಯಿ)
ಮುಂಬಯಿ, ಜು.03: ಬಂಟರ ಸಂಘ ಕುರ್ಲಾ ಇಲ್ಲಿ ಇದೇ. ಜುಲೈ.08ರ ಆದಿತ್ಯವಾರ ಮಧ್ಯಾಹ್ನ 2.30 ಗಂಟೆಗೆ ಸಂಘವು 12ನೇ ವಾರ್ಷಿಕೋತ್ಸವ ಸಂಭ್ರಮಿಸಲಿಸಿದೆ ಎಂದು ಸಂಘದ ಅಧ್ಯಕ್ಷ ಹ್ಯಾರಿ ಆರ್.ಸಿಕ್ವೇರ ತಿಳಿಸಿದ್ದಾರೆ.

ವಾರ್ಷಿಕೋತ್ಸವ ಪ್ರಯುಕ್ತ ಮಂಗಳೂರು ಮತ್ತು ಮುಂಬಯಿ ಮಹಾನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ಭಜನೆ ಮಂಡಳಿಗಳಿಗೆ ಕುಣಿತ, ಭಜನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. (ಮೊದಲನೆ ಬಹುಮಾನ 20,000/- ದ್ವಿತೀಯ 15,000/- ತೃತೀಯ 10,000/-) ನೀಡಲಾಗುವುದು ಎಂದು ಗಣೇಶ್ ಬಲ್ಯಾಯ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಸಚಿವರು, ಅನೇಕ ಸರಕಾರೇತರ ವ್ಯಕ್ತಿಗಳು ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಅನೇಕ ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಕೊನೆಯಲ್ಲಿ ತುಳು ಕನ್ನಡ ಮಕ್ಕಳಿಗೆ ವಿದ್ಯಾಥಿರ್ü ವೇತನವನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ತುಳುಕನ್ನಡಾಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಹಕರಿಸಬೇಕು ಎಂದು ಕಾರ್ಯದರ್ಶಿ ರಾಜೇಂದ್ರ ರಾವ್ ಈ ಮೂಲಕ ತಿಳಿಸಿದ್ದಾರೆ.


ಸಂಘದ ಕುರಿತು.....
ಕರ್ನಾಟಕ ಮತ್ತು ಮುಂಬಯಿಯ ಅನೇಕ ಸಂಘ ಸಂಸ್ಥೆಗಳು ಹುಟ್ಟಿ ಹೆಮ್ಮರವಾಗಿ ಬೆಳೆದು ನಾನಾ ರೀತಿಯ ಸಮಾಜಪರ ಕಾರ್ಯವೆಸಗುತ್ತಾ, ಜಾತೀಯ ಹಾಗೂ ಇನ್ನಿತರ ಜಾತೀಯ ಹೆಸರುಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ತಮ್ಮದೇ ಆದ ಛಾಪನ್ನು ಪ್ರಕಟಿಸಿವೆ. ಈ ರೀತಿಯ ಸಂಘ ಸಂಸ್ಥೆಗಳಿಂದ ನಮ್ಮ ಕನ್ನಡ, ತುಳು ಬಾಂಧವರು ಸದುಪಯೋಗ ಪಡೆದುಕೊಂಡಿರುತ್ತಾರೆ. ಒಂದು ಸಂಸ್ಥೆ ಇನ್ನೊಂದು ಸಂಸ್ಥೆಗೆ ಮಾದರಿ ಎಂಬಂತೆ ಅನ್ಯೋನ್ಯತೆಯಿಂದ ಹಲವಾರು ಬಾರಿ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣುತ್ತಾರೆ. ಇದೇ ಮಾದರಿಯಲ್ಲಿ 2006ರಲ್ಲಿ ಅಂಧೇರಿ ಪರಿಸರದ ಕನ್ನಡ, ತುಳು ಹಾಗೂ ಕೊಂಕಣಿ ಜನರೊಂದಿಗೆ ಮರೋಲ್, ಸಾಕಿನಾಕ, ಪೆÇವಾಯಿ, ಕಮಾನಿ ಮತ್ತು ಅಂಧೇರಿ ಇತರ ಪರಿಸರದ ಸಮಾನಮನಸ್ಕರಿಂದ ಹುಟ್ಟಿಕೊಂಡ ಸಂಸ್ಥೆ0iÉುೀ ಕರ್ನಾಟಕ ಸಂಘ ಅಂಧೇರಿ.

ಜಾತಿ ಮತ ಭೇದವಿಲ್ಲದೆ ಮುಂದುವರಿದ ಈ ಸಂಸ್ಥೆ ಮಹಾರಾಷ್ಟ್ರದಲ್ಲಿ ಸರಕಾರದಲ್ಲಿನೋಂದಣಿಯಾಗಿ ತನ್ನದೇ ಆದ ಕಛೇರಿಯನ್ನು ಮರೋಲ್‍ನಲ್ಲಿ ಹೊಂದಿರುತ್ತದೆ. ಕೃಷ್ಣ ಬಿ. ಶೆಟ್ಟಿ ಮುಂದಾಳತ್ವದಲ್ಲಿ ಸ್ಥಾಪನೆಯಾದ ಈ ಸಂಘದ ಅಧ್ಯಕ್ಷರಾಗಿ ಭಾಸ್ಕರ್ ಸುವರ್ಣ ಸಸಿಹಿತ್ಲು, ಕೆಂಜೂರುಮನೆ ಆಶಿತ್ ಶೆಟ್ಟಿ ಅವರು ಮತ್ತು ಹಾಲಿ ಅಧ್ಯಕ್ಷರಾಗಿ ಹ್ಯಾರಿ ಆರ್.ಸಿಕ್ವೇರ ಮೂಡುಪೆರಾರ್ ಸಂಘದ ಉಸ್ತುವರಿಯನ್ನು ಜವಾಬ್ದಾರಿಯುತ ಮತ್ತು ಯಶಸ್ವಿಯಾಗಿ ಪೂರೈಸಿದ್ದಾರೆ. ಪ್ರತೀ ವರ್ಷ ಸಂಘವು 160 ಬಡ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನವನ್ನು ನೀಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಪೆÇ್ರೀತ್ಸಾಹ ನೀಡುತ್ತಾ ಬಂದಿರುತ್ತದೆ. ಅನೇಕ ವಿದ್ವಾಂಸರು, ಮೇಧಾವಿಗಳು ಹಾಗೂ ಹೆಸರಾಂತ ವೈಧ್ಯರೂ ಸಂಘದ ಕರೆಗೆ ಓಗೊಟ್ಟು ವರ್ಷಂಪ್ರತಿ ವಿದ್ಯಾಥಿರ್üಗಳಿಗಾಗಿ ವ್ಯಕ್ತಿತ್ವ ವಿಕಸನಗಳ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಅನೇಕ ಸಮಾಜಪರ ಗಣ್ಯರನ್ನೂ ಸಮಾಜ ಸೇವಾಕಾರ್ಯಕರ್ತರನ್ನೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿರುವ ಮಹನೀಯರನ್ನು ಗುರುತಿಸಿ ಅವರವರ ಸೇವೆಗಳಿಗನುಗುಣವಾಗಿ ಸನ್ಮಾನಿಸಲಾಗಿದೆ.

ವೃದ್ಧಾಶ್ರಮವೊಂದನ್ನು ಸ್ಥಾಪಸಿ, ವೃದ್ಧಾಪ್ಯದಿಂದ ಬಳಲುವ ನಿರಾಶ್ರಿತ ಒಡಲುಗಳನ್ನು ಹಾಗೂ ನೊಂದ ಮನಸ್ಸುಗಳನ್ನು ಸಾಂತ್ವನಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಕನಸು ಕಾಣುತ್ತಿದೆ. ಅಂತೆ0iÉುೀ ನಮ್ಮ ಪದಾಧಿಕಾರಿüಗಳೆಲ್ಲರ ಮತ್ತು ಮುಂಬಯಿಯ ಕೊಡುಗೈ ಧಾನಿಗಳ ನೆರವಿನಿಂದ ಉಡುಪಿ ಹೆಬ್ರಿ ಸಮೀಪ, ಸಂತ್ತೆಕಟ್ಟೆಯಲ್ಲಿ 4 ಎಕರೆ ಭೂಮಿಯನ್ನು ಈಗಾಗಲೇ ಖರೀದಿಸಿದ್ದೇವೆ ಎನ್ನಲು ಹೆಮ್ಮೆಯಾಗುತ್ತಿದೆ.

ಸಂಘದ ದ್ಯೇಯೋದ್ದೇಶಗಳಿಗುಣವಾಗಿ ಬಡತನದ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ವಿಧವೆಯವರನ್ನು ಗುರುತಿಸಿ ಅವರಿಗೂ ಧನ ಸಹಾಯಗೈಯುವ ಉದ್ದೇಶದಿಂದ ನಮ್ಮ ಮುಂಬಯಿ ಪರಿಸರದ ಸುಮಾರು 103 ಬಡ ವಿಧವೆಯರನ್ನು ಆ0iÉ್ಕು ಮಾಡಿ ಪ್ರತೀಯೊಬ್ಬರಿಗೂ ಮಾಸಿಕವಾಗಿ ತಲಾ 500/- ರೂಪಾಯಿ ಅಂತೆ ವಿಧವಾ ವೇತನವನ್ನು ಸಂಘವು ಸತತವಾಗಿ ಕಳೆದ 10 ವರ್ಷಗಳಿಂದ ನೀಡುತ್ತಿದೆ. ಜಾತಿ ಮತ ಬೇದವಿಲ್ಲದ ಈ ಯೋಜನೆಯನ್ನು ಹಮ್ಮಿಕೊಂಡಿರುವ ನಮ್ಮ ಸಂಘವು ಸರಕಾರೇತರ ಪ್ರಪ್ರಥಮ ಸಂಘ ಎಂದು ಹೇಳಿ ಕೊಳ್ಳಲು ಅಭಿಮಾನವಾಗುತ್ತಿದೆ.

ನಮ್ಮ ಈ ಸಂಘದಿಂದ ರಕ್ತದಾನ ಶಿಬಿರ, ವಾರ್ಷಿಕ ಸತ್ಯನಾರಾಯಣ ಪೂಜೆ, ಹಳದಿ ಕುಂಕುಮ, ವಾರ್ಷಿಕ ಗಣೋಶೋತ್ಸವವು ನಿರಂತರ ನಡೆಯುತ್ತಿದೆ. ಅಂಗವಿಕಲರಿಗಾಗಿ ಸಲಕರಣೆಗಳನ್ನು ವಿತರಿಸಲಾಗಿದೆ. ಸಂಘದ ಕಛೇರಿಯಲ್ಲಿ ಉಚಿತವಾಗಿ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ತರಬೇತಿಯನ್ನು ಕಳೆದ 9 ವರ್ಷಗಳಿಂದ ನಡೆಸುತ್ತಿದ್ದೇವೆ. ಬಡವರ ಮತ್ತು ನಿರಾಶ್ರಿತರ ಮದುವೆ ಸಮಾರಂಭಗಳಿಗಾಗಿ ಜಾತಿ ಮತ ಭೇದವಿಲ್ಲದೆ ಧನ ಸಹಾಯ ಮಾಡಿರುತ್ತೇವೆ.


ಸಂಘದ ಈ ಚಟುವಟಿಕೆಗಳನ್ನು ಗಮನಿಸಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಲಿಖಿತಪತ್ರವನ್ನು ನೀಡಿರುತ್ತಾರೆ. ಮುಂಬಯಿಯ ಅನೇಕ ಗಣ್ಯರ ಮನ್ನಣೆಗೂ ಪಾತ್ರರಾಗಿದ್ದೇವೆ. ಡಾ| ಸುನಿತಾ ಎಂ.ಶೆಟ್ಟಿ ಅವರು ಸ್ವತ:ಸಂಘದ ಕಛೇರಿಗೆ ಆಗಮಿಸಿ ವಿಧವಾ ವೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನ್ನ ಕೈಯಿಂದಲೇ ವಿಧವಾ ವೇತನ ವಿತರಣೆ ಮಾಡಿರುತ್ತಾರೆ. ಈ ಸಂಘದ ವಿಧವಾ ವೇತನ ಉದ್ಘಾಟನಾ ಸಮಾರಂಭವನ್ನು ಭಂಟರ ಭವನ ಸಭಾಗೃಹದಲ್ಲಿ ಬಿಜೆಪಿ ನೇತಾರ ದಿವಂಗತ ಪ್ರಮೋದ್ ಮಹಾಜನ್‍ರ ಪತ್ನಿ ರೇಖಾ ಮಹಾಜನ್ ಮತ್ತು ಕರ್ನಾಟಕ ಸರಕಾರದ ಒಐಅ ಭಾರತಿ ಶೆಟ್ಟಿಯವರು ಉದ್ಘಾಟಿಸಿದ್ದರು.
ಕೇವಲ ಮಹಿಳೆಯರೇ ಈ ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.

ಜಯಕೃಷ್ಣ ಎ.ಶೆಟ್ಟಿ, ವೀಕೇ ಸಮೂಹದ ಕರುಣಾಕರ್ ಶೆಟ್ಟಿ, ಕಡಂದಲೆ ಸುರೇಶ್ ಭಂಡಾರಿ, ನಾಗರಾಜ ಪಡುಕೋಣೆ, ಬಿ. ಗಣಪತಿ, ಮಾಹಿಮ್ ವಿಶ್ವನಾಥ ಶೆಟ್ಟಿ, ಎನ್.ಟಿ ಪೂಜಾರಿ, ಪ್ರಕಾಶ್ ಡಿಸೋಜ (ಡೆನ್), ಅಶೋಕ್ ಕೋಟ್ಯಾನ್, ಸುಧಾಕರ್ ಪೂಜಾರಿ ಪೆÇವಾಯಿ, ಲತಾ ಜಯರಾಮ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಶ್ರೀನಿವಾಸ ಸಾಲಿಯನ್, ಕಾಪು ಬೈರುಗುತ್ತಿನ ರಮೇಶ್ ಶೆಟ್ಟಿ, ಸ್ಟ್ರಯ್ಕಾನ್ ಬಿಲ್ಡರ್ ಹಾಗೂ ಡೆವಲಾಪರ್ಸ್‍ನ ಸುರೇಶ್ ಶೆಟ್ಟಿ, ಸಾಯಿಕೇರ್‍ನ ಸುರೇಂದ್ರ ಎ.ಪೂಜಾರಿ, ರವಿ ಕೋಟ್ಯಾನ್, ಮಾಧವ್ ಶೆಟ್ಟಿ, ಮಾಣಿಲ ಕ್ಷೇತ್ರ ಮೋಹನ್‍ದಾಸ್ ಸ್ವಾಮಿಜಿ, ಕೈರಬೆಟ್ಟು ವಿಶ್ವನಾಥ ಭಟ್, ಎಸ್.ಎನ್ ಉಡುಪ, ರಾಜೇಶ್ ಸಾಮಗ, ಪಿ.ಧನಂಜಯ ಶೆಟ್ಟಿ ಹಾಗೂ ಇನ್ನಿತರ ಹಲವಾರು ಕೊಡುಗೈ ದಾನಿಗಳು ಈ ಸಂಘದ ಬೆನ್ನೆಲುಬು ಆಗಿದ್ದಾರೆ. ಇವರೆಲ್ಲರಿಗೂ ನಮ್ಮ ಈ ಸಂಘದಿಂದ ಆಥಿರ್üಕ ಸಹಾಯ ಪಡೆಯುತ್ತಿರುವ ನೂರಾರು ಬಡ ಹಿರಿಯ ಮಹಿಳೆಯರ ಆಶೀರ್ವಾದ ಸದಾ ಇರಲೆಂದು ಹಾರೈಸುತ್ತೇವೆ.

2013ರಲ್ಲಿ ಬಂಟರ ಭವನದಲ್ಲಿ ಮಹಾರಾಷ್ಟ್ರದ ಕನ್ನಡ ತುಳು ಸಂಘ ಸಂಸ್ಥೆಗಳಿಂದ ನೃತ್ಯೋತ್ಸವ ಮತ್ತು ನೃತ್ಯ ಸ್ಪರ್ದೆಯನ್ನು ಯಶಸ್ವಿಯಾಗಿ ಏರ್ಪಡಿಸಿ ಪ್ರಶಸ್ತಿಯನ್ನು ವಿತರಣೆ ಮಾಡಿರುತ್ತೆವೆ. ಈ ಸ್ಪರ್ಧೆಯಲ್ಲಿ ಸುಮಾರು 20 ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನವನ್ನು ದೇವಾಡಿಗ ಸಂಘ ಕು0ದಾಪುರ (ಮು0ಬೈ) ಇವರು ಮತ್ತು ದ್ವಿತೀಯ ಬಹುಮಾನವನ್ನು ಬ0ಟರ ಸ0ಘದ ಪ್ರಾದೇಶಿಕ ಸಮಿತಿ ಮೀರ ಬಯ0ದರ್‍ರವರು ಹಾಗೂ ತೃತೀಯ ಬಹುಮಾನವನ್ನು ಕಲ್ಯಾಣ ಕನ್ನಡ ಸ0ಘದವರು ಪಡೆದಿರುತ್ತಾರೆ. ಕ್ರಮವಾಗಿ 15000/-, 10000/-, 5000/- ಬಹುಮಾನ ಮತ್ತು ಪ್ರಶಸ್ತಿ ಪತ್ರದೊ0ದಿಗೆ ವಿಜೇತರ ತ0ಡಗಳನ್ನುಸನ್ಮಾನಿಸಲಾಗಿದೆ.

ಅ0ಧೇರಿ ಪರಿಸರದ ಧಾರ್ಮಿಕ ಸ0ಸ್ಥೆಗಳ ಅನೇಕ ಪ್ರಮುಖರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗಿದೆ. ಮತ್ತು ಮು0ಬೈಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಧವಿ ಪಡೆದ ಅನೇಕರನ್ನು ಸನ್ಮಾನಿಸಲಾಗಿದೆ. ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಯ ಸಾಧಕರನ್ನು ಸಹ ಸನ್ಮಾನಿಸಿದ್ಧೇವೆ. ನಮ್ಮ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವಕ್ಕೆ ಶ್ರೀ ಶ್ರೀ ಪೇಜಾವರ ಸ್ವಾಮಿಯವರು ಆಗಮಿಸಿ ಆಶೀರ್ವದಿಸಿದ್ದಾರೆ.

ಶ್ರೀ ಧ.ಮಂ.ಆಂ. ಮಾಧ್ಯಮ ಶಾಲೆಯಲ್ಲಿ ಭತ್ತದ ನಾಟಿ

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಪರಿಸರ ಸಂಘದ ವತಿಯಿಂದ, ಮಕ್ಕಳಲ್ಲಿ ಕೃಷಿಯ ಬಗ್ಗೆ ಒಲವು, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ನಾಟಿಯನ್ನು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಜಂಟಿಯಾಗಿ ನಿರ್ವಹಿಸಿದರು. ಈ ಕಾರ್ಯಕ್ರಮವು ಸಂತೋಷ್‍ರವರ ಮಾರ್ಗದರ್ಶನ ಹಾಗೂ ಶ್ರೀ ಕ್ಷೇತ್ರದ ತೋಟದ ಸಿಬ್ಬಂದಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮೂಡಿಬಂದಿದೆ.

ಗದ್ದೆಯ ಉಳುಮೆಗಾಗಿ ನೇಗಿಲಿನ ಬದಲು ಮಕ್ಕಳಿಂದ ಕೆಸರಿನಾಟವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳೆಲ್ಲಾ ತುಂಬು ಆಸಕ್ತಿಯಿಂದ ಇದರಲ್ಲಿ ಪಾಲ್ಗೊಂಡಿದ್ದು ಉಲ್ಲೇಖನೀಯ. ಈ ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಶಾಲಾ ಸºಶಿP್ಪ್ಷಕಿಯರಾದ ಶ್ರೀಮತಿ ಸೌಮ್ಯಾ ಹಾಗು ಶ್ರೀಮತಿ ಸಂಧ್ಯಾ ನಿರ್ವಹಿಸಿದರು. ಈ ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ಯಶಸ್ವಿ ಯಾಗಿ ನಡೆಸಿಕೊಂಡು ಬಂದಿರುವುದಾಗಿ ಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ.ಯವರು ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi