Brief Udupi News with Pictures 23-0-2018
Kemmannu News Network, 23-08-2018 17:13:38
ವಿದ್ಯುತ್ ಆಘಾತದಿಂದ ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ: ಕುಟುಂಬಕ್ಕೆ ಸಾಂತ್ವನ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ, ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಗುರುವಾರ ಭೇಟಿ ಮಾಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೊದಲು ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲಾ ಅವರು ಮೃತ ಕೀರ್ತನ್ ಅವರ ತಂದೆ , ತಾಯಿ ಹಾಗೂ ಅವರ ಬಂಧುಗಳಿಗೆ ಸಾಂತ್ವನ ಹೇಳಿದರು. ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಮೃತ ಇಬ್ಬರೂ ಯುವಕರಾಗಿದ್ದು, ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು, ಆದರೆ ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ, ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವ ರೀತಿಯಲ್ಲೂ ಹೋದ ಜೀವವನ್ನು ಮರಳಿ ತರಲಾಗದು, ಕುಟುಂಣಬಕ್ಕೆ ಆಧಾರವಾಗಬೇಕಿದ್ದ ಈ ಯುವಕರ ಸಾವು ಇವರ ಕುಟುಂಬದ ಆಧಾರ ಸ್ಥಂಬವನ್ನೇ ಕಳಚಿದಂತೆ ಮಾಡಿದೆ.
ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಂ ಇಲಖೆಯ ವತಿಯಿಂದ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಕುಟುಂಬಿಕರ ಭೇಟಿಯ ನಂತರ ತಿಳಿಸಿದರು.
ಮೃತರ ಮನೆ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ
ಜನವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸುವಂತೆ ಸಚಿವರು ಸ್ಥಳದಲ್ಲಿಯೇ ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ , ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್.ಟಿ.ಸಿ.ಪಿ ಹಾಗೂ ಎನ್.ಪಿ.ಸಿ.ಡಿ.ಸಿ.ಎಸ್ ವಿಭಾಗ) ಉಡುಪಿ ಹಾಗೂ ಎನ್.ಡಿ.ಸಿ.ಪಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ , ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಹಯೋಗದಲ್ಲಿ , ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಗಸ್ಟ್ 25 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಆಸ್ಪತ್ರೆಯ ಹಿರಿಯ ನಾಗರೀಕ ವಾಡ್ ್ ನಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಉಚಿತ ಮಧುಮೇಹ ಮತ್ತು ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ಹೃದಯ ಮತ್ತು ಕ್ಯಾನ್ಸರ್ ಪರೀಕ್ಷೆ ನಡೆಸಲಾಗುವುದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಪ್ರಕಟಣೆ ತಿಳಿಸಿದೆ.
ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಕಾರ್ಯಕ್ರಮವು ಆಗಸ್ಟ್ 27 ರಂದು ಬೆಳಗ್ಗೆ 10 ಕ್ಕೆ ಜಿಲ್ಲಾ ಬಿಲ್ಲವ ಸಮುದಾಯ ಭವನ, ಶ್ರೀ ವಿಶ್ವನಾಥ ಕ್ಷೇತ್ರ, ಕಟಪಾಡಿ, ಉಡುಪಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕನ್ನಡ ಸಂಸ್ಕøತಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಉದ್ಘಾಟಿಸಲಿದ್ದು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೈಂದೂರು : ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಬೈಂದೂರು ಉಪ ನೋಂದಣಿ ಕಚೇರಿ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಸರ್ಕಾರ ಮತ್ತು ಕೇಂದ್ರೀಯ ಮೌಲ್ಯ ಸಮಿತಿಯ ನಿರ್ದೇಶನದಂತೆ, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ, ಕುಂದಾಪುರ ತಾಲೂಕು ಇವರಿಂದ 2018-19 ನೇ ಸಾಲಿಗೆ ಪರಿಷ್ಕರಿಸಲ್ಪಟ್ಟಿರುತ್ತದೆ. ಪರಿಷ್ಕರಿಸಿದ ಮಾರ್ಗಸೂಚಿ ದರಪಟ್ಟಿಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ತರಲು, ಉಪ ನೋಂದಣಿ ಕಛೇರಿ ಬೈಂದೂರು ಇಲ್ಲಿ ಆಗಸ್ಟ್ 23 ರಂದು ಪ್ರಕಟಿಸಲಾಗಿರುತ್ತದೆ.
ಈ ದರಪಟ್ಟಿಯ ಬಗ್ಗೆ ಸಲಹೆಗಳು/ಆಕ್ಷೇಪಣೆಗಳು ಇದ್ದಲ್ಲಿ, ಸಾರ್ವಜನಿಕರು ಲಿಖಿತ ರೂಪದಲ್ಲಿ ಪ್ರಕಟಗೊಂಡ ದಿನದಿಂದ 15 ದಿನಗಳ ಒಳಗೆ ಉಪ ನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪ ಸಮಿತಿ, ಶಂಕರನಾರಾ ಯಣ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪುರ : ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಕುಂದಾಪುರ ಉಪ ನೋಂದಣಿ ಕಚೇರಿ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಸರ್ಕಾರ ಮತ್ತು ಕೇಂದ್ರೀಯ ಮೌಲ್ಯ ಸಮಿತಿಯ ನಿರ್ದೇಶನದಂತೆ, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ, ಕುಂದಾಪುರ ತಾಲೂಕು ಇವರಿಂದ 2018-19 ನೇ ಸಾಲಿಗೆ ಪರಿಷ್ಕರಿಸಲ್ಪಟ್ಟಿರುತ್ತದೆ. ಪರಿಷ್ಕರಿಸಿದ ಮಾರ್ಗಸೂಚಿ ದರಪಟ್ಟಿಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ತರಲು, ಉಪ ನೋಂದಣಿ ಕಛೇರಿ, ಮಿನಿ ವಿಧಾನಸೌಧ ಸಂಕೀರ್ಣ, ಕುಂದಾಪುರ ಇಲ್ಲಿ ಆಗಸ್ಟ್ 23 ರಂದು ಪ್ರಕಟಿಸಲಾಗಿರುತ್ತದೆ.
ಈ ದರಪಟ್ಟಿಯ ಬಗ್ಗೆ ಸಲಹೆಗಳು/ಆಕ್ಷೇಪಣೆಗಳು ಇದ್ದಲ್ಲಿ, ಸಾರ್ವಜನಿಕರು ಲಿಖಿತ ರೂಪದಲ್ಲಿ ಪ್ರಕಟಗೊಂಡ ದಿನದಿಂದ 15 ದಿನಗಳ ಒಳಗೆ ಉಪ ನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪ ಸಮಿತಿ, ಕುಂದಾಪುರ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶಂಕರನಾರಾಯಣ : ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಶಂಕರನಾರಾಯಣ ಉಪ ನೋಂದಣಿ ಕಚೇರಿ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಸರ್ಕಾರ ಮತ್ತು ಕೇಂದ್ರೀಯ ಮೌಲ್ಯ ಸಮಿತಿಯ ನಿರ್ದೇಶನದಂತೆ, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ, ಕುಂದಾಪುರ ತಾಲೂಕು ಇವರಿಂದ 2018-19 ನೇ ಸಾಲಿಗೆ ಪರಿಷ್ಕರಿಸಲ್ಪಟ್ಟಿರುತ್ತದೆ. ಪರಿಷ್ಕರಿಸಿದ ಮಾರ್ಗಸೂಚಿ ದರಪಟ್ಟಿಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ತರಲು, ಉಪ ನೋಂದಣಿ ಕಛೇರಿ, ಶಂಕರನಾರಾಯಣ ಇಲ್ಲಿ ಆಗಸ್ಟ್ 23 ರಂದು ಪ್ರಕಟಿಸಲಾಗಿರುತ್ತದೆ.
ಈ ದರಪಟ್ಟಿಯ ಬಗ್ಗೆ ಸಲಹೆಗಳು/ಆಕ್ಷೇಪಣೆಗಳು ಇದ್ದಲ್ಲಿ, ಸಾರ್ವಜನಿಕರು ಲಿಖಿತ ರೂಪದಲ್ಲಿ ಪ್ರಕಟಗೊಂಡ ದಿನದಿಂದ 15 ದಿನಗಳ ಒಳಗೆ ಉಪ ನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪ ಸಮಿತಿ, ಶಂಕರನಾರಾಯಣ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತೆಂಕನಿಡಿಯೂರು ಕಾಲೇಜು :ಸದ್ಭಾವನಾ ದಿನಾಚರಣೆ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಆಂಗ್ಲಭಾಷಾ ಪ್ರಾಧ್ಯಾಪಕ ಪ್ರೊ. ಪ್ರಸಾದ್ ರಾವ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ – "ಇಂದಿನ ಸಮಾಜದಲ್ಲಿ ಆಧುನಿಕತೆಗೆ ಹಾಗೂ ಆಡಂಬರಕ್ಕೆ ಒತ್ತು ನೀಡುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಪರಸ್ಪರ ಸಹಕಾರ, ಏಕತೆಯ ಭಾವನೆಯ ಕೊರತೆಯಿಂದಾಗಿ ವೈಮನಸ್ಸು ಹಾಗೂ ಸಾಮಾಜಿಕ ಆಶಾಂತಿಗೆ ಕಾರಣವಾಗುತ್ತಿದೆ.
ಬದಲಾವಣೆ ಜಗದ ನಿಯಮವಾಗಿದ್ದು, ಆಧುನೀಕತೆಗೆ ಭಾವನಾತ್ಮಕ ಸ್ಪರ್ಶ ದೊರೆತಾಗ ಜೀವನ ಸುಖಮಯವಾಗಿರುತ್ತದೆ. ಯುವ ಜನತೆ ಜಾತಿ, ಮತ, ಪಂಗಡಗಳೆಂಬ ಗೋಡೆಯನ್ನು ಒಡೆದು ಹಾಕಿ ಎಲ್ಲರೊಳಗೊಂದಾಗಿ ಬದುಕುವ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು" ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ "ಇತರರನ್ನು ನಮ್ಮವರೆಂದು ಭಾವಿಸಿ ಸಮಾನತೆಯ ಆಶಯದೊಂದಿಗೆ ಜೀವಿಸುವ, ಭೇದ ಭಾವಗಳನ್ನು ಬದಿಗಿಟ್ಟು ಒಂದಾಗಿ ಭಾವಿಸುವ ಸದ್ಭಾವನೆ ಬಂದಾಗ ದೇಶದ ಪ್ರಗತಿಯಾಗಲು ಸಾಧ್ಯ" ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕ-1 ರ ಕಾರ್ಯಕ್ರಮಾಧಿಕಾರಿ ಪ್ರೊ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ಯೂತ್ ರೆಡ್ಕ್ರಾಸ್ ಸಂಚಾಲಕಿ ಪ್ರೊ. ಗೀತಾ ಎನ್. ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಯನ್ನು ನೀಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ-2 ರ ಕಾರ್ಯಕ್ರಮಾಧಿಕಾರಿ ಪ್ರೊ. ಶರ್ಮಿಳಾ ಹಾರಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಮಟ್ಟದ ಪ್ರಥಮ ಸ್ವಚ್ಛಭಾರತ ಸಮ್ಮರ್ ಇಂಟರ್ನ್ಶಿಪ್ : ಪ್ರಶಸ್ತಿ ಪ್ರಕಟ
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿದೆ. ಜನ ಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಭಾರತವನ್ನು ಸ್ವಚ್ಛಗೊಳಿಸುವ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಸ್ತೆಗಳನ್ನು ಗುಡಿಸಲು ಪೊರಕೆಗಳನ್ನು ಕೈಗೆ ತೆಗೆದುಕೊಂಡಿದ್ದಾರೆ. ಕಸವನ್ನು ತೆಗೆದು ಬೇರೆಡೆಗೆ ಸಾಗಿಸುತಿದ್ದಾರೆ. ನೈರ್ಮಲೀಕರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆರೊಗ್ಯದ ಬಗ್ಗೆ ಮಾಹಿತಿ ನೀಡುತಿದ್ದಾರೆ. ಹೀಗೆ ನಾನಾ ವಿಧಾನಗಳ ಮೂಲಕ ದೇಶಸೇವೆ ಮಾಡುತ್ತಿದ್ದಾರೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂಬ ಅರಿವು ಎಲ್ಲರಲ್ಲಿ ಮೂಡತೊಡಗಿದೆ.
ಸ್ವಚ್ಛ ಭಾರತ ಅಭಿಯಾನವು ನಗರ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ, ಸಮುದಾಯ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜನರ ಮನಸ್ಥಿತಿ ಬದಲಾವಣೆ, ವ್ಯಕ್ತಿಗತ ಸಂವಹನ ಮುಂತಾದ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಲಾಗುತ್ತಿರುವ ಪ್ರಸ್ತೂತ ಕಾಲಘಟ್ಟದಲ್ಲಿ ನೆಹರು ಯುವ ಕೇಂದ್ರದ ಸಹಕಾರದೊಂದಿಗೆ ಸ್ವಚ್ಛ ಭಾರತ ಬೇಸಿಗೆ ತರಬೇತಿ ಕಾರ್ಯಕ್ರಮದಡಿಯಲ್ಲಿ " ಸ್ವಚ್ಛ ಭಾರತ ನಿರ್ಮಾಣದತ್ತ" ಯುವಕ ಮಂಡಳಗಳು ಚಿತ್ತ ಹರಿಸಿ, ಮಾಹಾತ್ಮ ಗಾಂಧಿಜಿಯವರ ನಿರ್ಮಲ ಭಾರತ ಕನಸನ್ನು ಸಾಕಾರಗೊಳಿಸುವಲ್ಲಿ ಈ ಮೂಲಕ ಪ್ರಯತ್ನ ಮಾಡುತ್ತಿದೆ.
ಕೇಂದ್ರ ಸರ್ಕಾರದ ‘ಸ್ವಚ್ಛಭಾರತ ಸಮ್ಮರ್ ಇಂಟರ್ನ್ಶಿಪ್ ಯೋಜನೆಯ’ ಭಾಗವಾಗಿ ಕಳೆದ 3 ತಿಂಗಳಲ್ಲಿ( ಮೇ 1 ರಿಂದ ಜುಲೈ31 ರ ತನಕ) 32ಕ್ಕೂ ಹೆಚ್ಚು ಯುವಕ/ಯುವತಿ ಮಂಡಳಿಗಳು ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿ 100 ಗಂಟೆಗೂ ಜಾಸ್ತಿ ಶ್ರಮಧಾನ ಹಾಗೂ ಸ್ವಯಂ ಸೇವೆ ಜಿಲ್ಲೆಯ ಹಲವಾರು ಕಡೆ ನಡೆಸಿಕೊಂಡು ಬಂದಿದ್ದು ಇದು ಸ್ಥಳೀಯರ ಹಾಗೂ ಜಿಲ್ಲಾ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ‘ಸ್ವಚ್ಛಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮ’ದ ಅಂತಿಮ ವಿಜೇತರ ಪಟ್ಟಿ ಇಂತಿದೆ.
ಪ್ರಥಮ ಸ್ಥಾನ -ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ ಬ್ರಹ್ಮಾವರ, ದ್ವಿತೀಯ ಸ್ಥಾನ -ಯುವಕ ಮಂಡಳಿ, ಸಾಣೂರು, ಕಾರ್ಕಳ, ತೃತೀಯ ಸ್ಥಾನ -ಮಹಿಳಾ ಮಂಡಳಿ ಕೊಲ್ಲುರು ಬೈಂದೂರು.
ಈ 3 ಸಂಘಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ- ಪ್ರಥಮ 30000 ರೂ., ದ್ವಿತೀಯ ಪ್ರಶಸ್ತಿ 20,000 ರೂ., ತೃತೀಯ 10000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಜಿಲ್ಲಾ ಮಟ್ಟದ ‘ಸ್ವಚ್ಛಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮ’ದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸದ್ಯದಲ್ಲೆ ಜಿಲ್ಲಾ ಮಟ್ಟದಲ್ಲಿ ರೂಪಿಸಿಕೊಂಡು ಬರಲಾಗುವುದು. ಈ ಮೇಲೆ ತಿಳಿಸಿರುವಂತೆ ಜಿಲ್ಲಾ ಮಟ್ಟದ ‘ಸ್ವಚ್ಛಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮ’ದಲ್ಲಿ ಉಡುಪಿ ಜಿಲ್ಲೆಯ 29 ಯುವಕ/ಯುವತಿ ಮಂಡಳಿಗಳು ಹಾಗೂ ಮೂವರು ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಿದ್ದರು. ವಿಜೇತರಾದ ಎಲ್ಲಾ ಯುವಕ/ಯವತಿ ಮಂಡಳಿಗಳು ತುಂಬಾ ಶ್ರದ್ಧೆ ಹಾಗೂ ಸಂಯಮದಿಂದ ಸಮಯದ ಅಭಾವವಿದ್ದರು ಶನಿವಾರ ಮತ್ತು ಭಾನುವಾರದಂದು ಜೊತೆಗೂಡಿ ಸ್ವಯಂ ಸೇವೆ ಮಾಡಿ ಸ್ವಚ್ಛ ಭಾರತ ಅಭಿಯಾನದ ಅರಿವು ಮೂಡಿಸುವಲ್ಲಿ ನಿಜವಾಗಿಯು ಉತ್ತಮ ಕಾರ್ಯವನ್ನು ನಿರ್ವಹಿಸಿ ಪ್ರಶಸ್ತಿಗೆ ಪಾತ್ರವಾದವು.
ಯುವ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಯುವಕ/ಯುವತಿ ಮಂಡಳಗಳ ಆಶ್ರಯದಲ್ಲಿ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದಂಗವಾಗಿ ಹಮ್ಮಿಕೊಂಡು ಜನಜಾಗೃತಿ, ಸ್ವಚ್ಛತೆ ಕಡೆಗೆ ನಮ್ಮೆಲ್ಲರ ನಡಿಗೆ ಇದೀಗ ಗ್ರಾಮದ ಮನೆ-ಮನ ಮುಟ್ಟುವಲ್ಲಿ ನೆರವಾಗಿದೆ. ಯುವಕ/ಯುವತಿ ಮಂಡಳ ಮನೆ-ಮನಗಳಲ್ಲಿ ಬಿಡುಗಡೆಗೊಳಿಸಿದೆ. ಸ್ವಚ್ಛ ಮನೆ, ಸ್ವಚ್ಛ ಭಾರತ ಪರಿಕಲ್ಪನೆ ಮೂಡಿಸುತ್ತಿದೆ. ಜಾಗೃತಿ ಮೂಡಿಸಲು ಭಿತ್ತಿಪತ್ರ ಶಾಲೆ, ಸ್ವಚ್ಛ ನಗರ ಮತ್ತು ಸ್ವಚ್ಛತೆ ಸ್ವಾಭಿಮಾನದ ಸಂಕೇತ, ಇದು ಸರಕಾರಿ ಕಾರ್ಯಕ್ರಮವಲ್ಲ- ಪ್ರತಿಯೊಬ್ಬರ ಜವಾಬ್ದಾರಿ, ಕಸ ಡಬ್ಬದೊಳಗೆ ಹಾಕುವಂತೆ, ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡದಂತೆ, ಕುಡಿಯುವ ನೀರಿನಲ್ಲಿ ಸ್ವಚ್ಛತೆ ಕಾಪಾಡುವಂತೆ, ಬಳಸಿದ ನೀರನ್ನು ಸಸ್ಯಕ್ಕೆ ಮರು ಬಳಕೆ ಮಾಡುವಂತೆ, ಮಣ್ಣಿನ ಮಾಲಿನ್ಯ ತಡೆಗೆ ಸಾವಯವ ಗೊಬ್ಬರ ಬಳಸುವಂತೆ, ಗಿಡ ಬೆಳೆಸಿ ಪರಿಸರ ರಕ್ಷಿಸುವಂತೆ ಗ್ರಾಮ ನೈರ್ಮಲ್ಯ ಕಾಪಾಡಿ ರೋಗ ತಡೆಗಟ್ಟುವಂತೆ ಶಾಲಾ ವಠಾರ, ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳ, ರಸ್ಥೆಗಳನ್ನು ಸ್ವಚ್ಛಗೊಳಿಸುವಂತೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಸರ ಸ್ವಚ್ಛವಾಗಿಡುವ ಪ್ರತಿಜ್ಞೆ ಕೈಗೊಳ್ಳುವಂತೆ ಭಿತ್ತಿ ಪತ್ರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಕಾಣೆಯಾದವರ ಕುರಿತು
ಉಡುಪಿ, ಆಗಸ್ಟ್ 23 (ಕರ್ನಾಟಕ ವಾರ್ತೆ) : ರೆನಿಟಾ ಪ್ರಿಯಾ (21 ವರ್ಷ) ಎಂಬುವವರು ಆಗಸ್ಟ್ 20 ರಂದು, ಬಿರ್ತಿ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ಇಲ್ಲಿಂದ ಕಾಣೆಯಾಗಿದ್ದು, 5 ಅಡಿ 3 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ , ಕನ್ನಡ ,ತುಳು, ಕೊಂಕಣ, ಇಂಗ್ಲೀಷ್, ಹಿಂದಿ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿರವರ ಪ್ರಕಟಣೆ ತಿಳಿಸಿದೆ.
ಉದ್ಯಾವರ ಹಿಂದೂ ಶಾಲಾ ವಿದ್ಯಾರ್ಥಿಗಳಿಗೆ 11 ರಾಷ್ಟ್ರೀಯ ಕರಾಟೆ ಪ್ರಶಸ್ತಿ
ಉದ್ಯಾವರ: ಇತ್ತೀಚಿಗೆ ಬೆಂಗಳೂರಿನ ಕೊರಮಂಗಲ ಒಳ ಕ್ರೀಡಾಂಗಣದಲ್ಲಿ ಜರಗಿದ ಅಖಿಲ ಭಾರತ ಮಟ್ಟದ ಹಕ್ವುಕೈ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ 8 ವಿದ್ಯಾರ್ಥಿಗಳು 11 ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಅವರ ವಿವಿರ ಈ ಕೆಳಗಿನಂತಿದೆ.
(ನಿಂತವರು ಎಡದಿಂದ ಬಲಕ್ಕೆ) ಪವನ್ ಪೂಜಾರಿ 7ನೇ ತರಗತಿ 12-13 ವರ್ಷ ವಿಭಾಗದಲ್ಲಿ ಕಟಾ ತೃತಿಯ ಕುಮೆಟೆ ದಲ್ಲಿ ತೃತಿಯ, ಕೀರ್ತನ್ ಜಿ. 6ನೇ ತರಗತಿ 12-13 ವರ್ಷ ವಿಭಾಗದಲ್ಲಿ ಕಟಾ ದಲ್ಲಿ ತೃತಿಯ. ಪ್ರಣ್ವೀತ್ 2ನೇ ತರಗತಿ 7-8 ವರ್ಷ ವಿಭಾಗದಲ್ಲಿ ಕಟಾ ದಲ್ಲಿ ಪ್ರಥಮ ಕುಮೆಟೆ ದಲ್ಲಿ ದ್ವಿತೀಯ. ಸಮರ್ಥ್ ಸಿ.ಎಸ್. 6ನೇ ತರಗತಿ 10-11 ವರ್ಷ ವಿಭಾಗದಲ್ಲಿ ಕಟಾ ಪ್ರಥಮ. ನಿಹಾಲ್ 5ನೆ ತರಗತಿ 7-8 ವರ್ಷ ವಿಭಾಗದಲ್ಲಿ ಕಟಾ ದಲ್ಲಿ ದ್ವಿತೀಯ ಕುಮೆಟೆ ದಲ್ಲಿ ಪ್ರಥಮ, ಆದೇಶ್ ಕುಂದರ್ 10-11 ವರ್ಷ ವಿಭಾಗ ಕಟಾ ಮತ್ತು ಕುಮೆಟೆದಲ್ಲಿ ಪ್ರಥಮ, ಪ್ರಜ್ವಲ್ ಪೂಜಾರಿ 7ನೇ ತರಗತಿ 14-15 ವರ್ಷ ವಿಭಾಗ ಕಟಾದಲ್ಲಿ ತೃತೀಯ ಕುಮೆಟೆದಲ್ಲಿ ದ್ವಿತೀಯ. ರಕ್ಷಿತ್ – 5ನೇ ತರಗತಿ 10-11 ವರ್ಷ ವಿಭಾಗ ಕಟಾದಲ್ಲಿ ದ್ವಿತೀಯ.
(ಕುಳಿತವರು ಎಡದಿಂದ ಬಲಕ್ಕೆ) ದೀಪಕ್ ಪಿರೇರಾ(ಕರಾಟೆ ಶಿಕ್ಷಕರು), ಉದ್ಯಾವರ ನಾಗೇಶ್ ಕುಮಾರ್ (ಶಾಲಾ ಸಂಚಾಲಕರು) ಗಣಪತಿ ಕಾರಂತ್ (ಮುಖ್ಯೋಪಾಧ್ಯಾಯರು) ಯೋಗೀಶ್ ಪೂಜಾರಿ (ಕರಾಟೆ ಶಿಕ್ಷಕರು)
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Maundy Thursday 2024 | LIVE From St. Theresa’s Church, Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link