ಬೆಳೆ ಸಮೀಕ್ಷೆ- ನಿರುದ್ಯೋಗಿ ಯುವಕರ ಸಂಪಾದನೆಗೆ ಸುವರ್ಣಾವಕಾಶ _ರೈತರಿಗೆ ಗರಿಷ್ಠ ಪರಿಹಾರ - Udupi News
Kemmannu News Network, 06-10-2018 09:06:48
ಬೆಳೆ ಸಮೀಕ್ಷೆ- ನಿರುದ್ಯೋಗಿ ಯುವಕರ ಸಂಪಾದನೆಗೆ ಸುವರ್ಣಾವಕಾಶ _ರೈತರಿಗೆ ಗರಿಷ್ಠ ಪರಿಹಾರ
ಉಡುಪಿ, ಅಕ್ಟೋಬರ್ 2 (ಕರ್ನಾಟಕ ವಾರ್ತೆ) : ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಸರಕಾರದಿಂದ ಸಂಪಾದನೆಗೆ ಉತ್ತಮ ಅವಕಾಶ, ಮನೆಯಲ್ಲಿ ಸುಮ್ಮನೆ ಕುಳಿತು , ಮೊಬೈಲ್ ನಲ್ಲಿ ಕಾಲಹರಣ ಮಾಡುವ ಬದಲು , ರಾಜ್ಯ ಸರ್ಕಾರದ ಮುಂಗಾರು ಬೆಳೆ ಸಮೀಕ್ಷೆಯಲ್ಲಿ , ಮೊಬೈಲ್ ಬಳಸಿ ತಮ್ಮ ಹಾಗೂ ಸಮೀಪದ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳ ಸಮೀಕ್ಷೆ ಕಾರ್ಯ ನಿರ್ವಹಿಸುವ ಮೂಲಕ ಅಕ್ಟೋಬರ್ 30 ರ ಒಳಗೆ ಸರಕಾರದ ವತಿಯಿಂದ 15000 ರೂ ಗಳಿಸುವ ಅತ್ಯುತ್ತಮ ಅವಕಾಶವಿದೆ.
ರಾಜ್ಯ ಸರ್ಕಾರವು, ರಾಜ್ಯದ ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ, ಕನಿಷ್ಠ ಸಮಯದಲ್ಲಿ, ಗರಿಷ್ಠ ನೆರವು ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಯನ್ನು ಕೈಗೊಂಡಿದೆ.
ಅಂಡ್ರಾಯ್ಡ್ ಸೌಲಭ್ಯ ಇರುವ ಮೊಬೈಲ್ ಹೊಂದಿರುವ ನಿರುದ್ಯೋಗಿ ಯುವ ಜನತೆ ಬೆಳೆ ಸಮೀಕ್ಷೆ ಕುರಿತ ಮೊಬೈಲ್ ಆಪ್ ನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ಈ ಸಮೀಕ್ಷೆ ಕಾರ್ಯ ಮಾಡಬಹುದಾಗಿದೆ , ಅತ್ಯಂತ ಸುಲಭವಾಗಿ, ಕನ್ನಡದಲ್ಲೇ ಇರುವ ಈ ಆಪ್ ಬಳಸುವ ಕುರಿತಂತೆ ಅಗತ್ಯ ತರಬೇತಿಯನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುತ್ತದೆ. ಈ ಸಮೀಕ್ಷೆ ನಡೆಸುವ ಯುವ ಜನತೆಗೆ ಜಿಲ್ಲಾಡಳಿತದ ವತಿಯಿಂದ ಗುರುತಿನ ಚೀಟಿ, ಅಗತ್ಯ ತರಬೇತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ನೀಡಲಾಗುವುದು ಎಂದು ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 267 ಕಂದಾಯ ಗ್ರಾಮಗಳಲ್ಲಿ ಒಟ್ಟು 9,91,895 ಪ್ಲಾಟ್ಸ್ (ಆರ್.ಟಿ.ಸಿ) ಇದ್ದು, ಒಬ್ಬರು ಗರಿಷ್ಠ 1500 ಪ್ಲಾಟ್ ಗಳನ್ನು ಸಮೀಕ್ಷೆಯನ್ನು ಮಾಡಬಹುದಾಗಿದೆ, ಪ್ರತಿ ಪ್ಲಾಟ್ ಸಮೀಕ್ಷೆಗೆ 10 ರೂ ನಂತೆ ಗೌರವಧನ ನೀಡಲಾಗುತ್ತಿದ್ದು, ಒಬ್ಬರು ದಿನಕ್ಕೆ ಗರಿಷ್ಠ 700-1000 ಪ್ಲಾಟ್ ಗಳ ಸಮೀಕ್ಷೆಯನ್ನು ಮಾಡಬಹುದಾಗಿದೆ. ಈ ಸಮೀಕ್ಷಾ ಕಾರ್ಯಕ್ಕೆ ಯಾವುದೇ ಸಂದರ್ಶನ ಇರುವುದಿಲ್ಲ, ಆಸಕ್ತ ಯುವ ಜನತೆ ತಮ್ಮ ಗ್ರಾಮದ ಗ್ರಾಮ ಕರಣಿಕರನ್ನು ಅಥವಾ ತಹಸೀಲ್ದಾರರನ್ನು ನೇರವಾಗಿ ಭೇಟಿಯಾಗಿ , ಅಗತ್ಯ ತರಬೇತಿ ಪಡೆದು ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಸಮೀಕ್ಷಾ ಕಾರ್ಯಕ್ಕೆ ನೇಮಕವಾಗುವ ಯುವಕರಿಗೆ ತಕ್ಷಣವೇ ನೇಮಕಾತಿ ಆದೇಶ ಹಾಗೂ ಸಂಬಂದಪಟ್ಟ ಗ್ರಾಮದ ಗ್ರಾಮ ಕರಣಿಕರ ಸಹಾಯದೊಂದಿಗೆ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವುದು.
ಮಂಗಳವಾರ ಉಡುಪಿ ಪುತ್ತೂರು ಗ್ರಾಮದ ಸರ್ವೆ ನಂ.102 ರಲ್ಲಿ , ರೈತ ವಿಠಲ ಶೆಣ್ಯೆ ಅವರ ಜಮೀನಿನಲ್ಲಿ ಬೆಳದ ಭತ್ತದ ಬೆಳ ಸಮೀಕ್ಷಾ ಕಾರ್ಯವನ್ನು ಪ್ರಾಯೋಗಿಕವಾಗಿ ತೋರಿಸಿದ ತಹಸೀಲ್ದಾರ್ ಕುರ್ಡೇಕರ್ , ಕೇವಲ 5 ರಿಂದ 7 ನಿಮಿಷದಲ್ಲಿ ಒಂದು ಫ್ಲಾಟ್ ನ ಸಮೀಕ್ಷೆ ಮಾಡಬಹುದು , ಯುವ ಜನರು ವಾಟ್ಸಾಪ್, ಫೆಸ್ಬುಕ್ ನ್ನು ಬಳಸುವ ರೀತಿಯಲ್ಲಿ ಅತ್ಯಂತ ಸುಲಭವಾಗಿ ಈ ಸಮೀಕ್ಷೆ ಮಾಡಬಹುದು ಎಂದು ಹೇಳಿದರು.
ಪ್ರಾಕೃತಿಕ ವಿಕೋಪಗಳು ಯಾವುದೇ ಮುನ್ಸೂಚನೆ ನೀಡದೇ ಸಂಭವಿಸುವುದರಿಂದ , ಆ ಸಂದರ್ಭದಲ್ಲಿ ಜಿಲ್ಲೆಯ ರೈತರು ನಷ್ಠಕ್ಕೆ ಒಳಗಾಗುವುದನ್ನು ತಪ್ಪಿಸಲು , ಹಾಗೂ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಮಾಡುವ ಉದ್ದೇಶದಿಂದ ಕೈಗೊಂಡಿರುವ ಈ ಸಮೀಕ್ಷಾ ಕಾರ್ಯಕ್ಕೆ, ತಮ್ಮ ಜಮೀನಿಗೆ ಆಗಮಿಸುವ ಸಮೀಕ್ಷೆದಾರರಿಗೆ ಜಿಲ್ಲೆಯ ಎಲ್ಲಾ ರೈತರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಪುತ್ತೂರು ಗ್ರಾಮದಲ್ಲಿ ಮಂಗಳವಾರ ನಡೆದ ಸಮೀಕ್ಷಾ ಕಾರ್ಯದಲ್ಲಿ ಕಂದಾಯ ನಿರೀಕ್ಷಕ ಉಪೇಂದ್ರ, ಗ್ರಾಮ ಕರಣಿಕ ಪುನೀತ್, ಗ್ರಾಮ ಸಹಾಯಕ ವಿಶಾಲ್ ಭಾಗವಹಿಸಿದ್ದರು.
ಮೋದಿ ಸರಕಾರದ ವಿಫಲತೆಯನ್ನು ಜನತೆಯ ಮನ ಮನೆಗಳಿಗೆ ತಲುಪಿಸಿ - ವಿನಯ ಕುಮಾರ್ ಸೊರಕೆ
ಉದ್ಯಾವರ: ಎನೋ ಇಲ್ಲದ್ದನ್ನು ಸೃಷ್ಟಿ ಮಾಡುತ್ತೇನೆ ಎಂದು ಸುಳ್ಳು ಭರವಸೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಇದೀಗ ರಫೆಲ್ ಯುದ್ಧ ವಿಮಾನ ಖರೀದಿಯ ಪೆಡಂಬೂತ ಕೇಂದ್ರ ಸರಕಾರದ ಕೊರಳಿಗೆ ಸುತ್ತಿ ಕೊಂಡಿದೆ. ಅದನ್ನು ಬಿಡಿಸಲಿಕ್ಕೆ ಆಗದೆ ವಿಷಯವನ್ನು ವಿಷಯಾಂತರಗೊಳಿಸಿ ಪ್ರಚಾರ ಮಾಡಲಾಗುತ್ತಿದೆ. ಮೋದಿ ಸರಕಾರದ ಈ ವಿಫಲತೆಯನ್ನು ಕಾರ್ಯಕರ್ತರು ಜನತೆಯ ಮನ ಮತ್ತು ಮನೆಗಳಿಗೆ ತಲುಪಿಸಬೇಕು. ಕಾಂಗ್ರೆಸ್ ಪಕ್ಷವನ್ನು ದೂರಲು ಸದಾ ತುರ್ತು ಪರಿಸ್ಥಿತಿಯನ್ನು ಹೇಳುವ ಬಿಜೆಪಿಗೆ ಈ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇರೋದು ಕಾಣದೇ ಇರೋದು ಒಂದು ದೊಡ್ಡ ವಿಪರ್ಯಾಸ. ಪ್ರಧಾನಿ ಮೋದಿಯವರು ರಫೆಲ್ ಡೀಲ್ ಬಗ್ಗೆ ತಮ್ಮದೇ ಪಕ್ಷದ ಹಿರಿಯ ನಾಯಕರಾದ ಯಶವಂತ ಸಿನ್ನರವರು ಕೇಳಿದ ಆರು ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗದೇ ಪರದಾಡುತ್ತಿದ್ದಾರೆ. ಕೇಂದ್ರ ರಕ್ಷಣ ಸಚಿವರು ಇರದೇ ಪ್ರಾನ್ಸ್ ಸರಕಾರದೊಂದಿಗೆ ತಾನು ಏಕಾಏಕಿ ಮೊದಲ ಒಪ್ಪಂದ ರದ್ದುಗೊಳಿಸಿ ಮಾಡಿದ ನೂತನ ಒಪ್ಪಂದ ಸಾಚವಾಗಿದ್ದರೆ ತನಿಖೆಗೆ ಏಕೆ ಮೀನ ಮೇಷ ಏಣಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಅದರಲ್ಲಿ ಗೋಲ್ಮಾಲ್ ಆಗಿದೆ ಎಂದು. ಎಂದು ಮಾಜಿ ಸಚಿವರೂ ಮಾಜಿ ಕಾಪು ಶಾಸಕರಾದ ಶ್ರೀ ವಿನಯ ಕುಮಾರ್ ಸೊರಕೆಯವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಭಾಗವಹಿಸಿ ನುಡಿದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ( ಉತ್ತರ ವಲಯ) ಅಧ್ಯಕ್ಷರಾದ ಶ್ರೀ ಸುಧೀರ್ ಹೆಗ್ಡೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರೀಯಾಝ್ ಪಳ್ಳಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಶೇಖರ್ ಕೆ. ಕೋಟ್ಯಾನ್, ಶ್ರೀಮತಿ ಚಂದ್ರಾವತಿ ಎಸ್ ಭಂಡಾರಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರು ಬುಧವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 17 ಮಂದಿಗೆ ಹಕ್ಕುಪತ್ರ ಹಾಗೂ ಮನೆ ಮಂಜೂರಾತಿ ಆದೇಶಗಳನ್ನು ವಿತರಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿರವರಿಂದ ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಉಡುಪಿ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುತ್ತದೆ. ಬೆಳೆ ಸಮೀಕ್ಷೆ ಕಾರ್ಯವನ್ನು ಆಯ್ಕೆ ಮಾಡಲಾದ ಖಾಸಗಿ ನಿವಾಸಿಗಳ ಮೂಲಕ ಕೈಗೊಳ್ಳಲಾಗುತ್ತಿದ್ದು, ಅಕ್ಟೋಬರ್ 3 ರಂದು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಭಾ.ಆ.ಸೇ., ಇವರು ಉಪ್ಪೂರು ಮತ್ತು ಹಾವಂಜೆ ಗ್ರಾಮಗಳಿಗೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಪರಿಶೀಲಿಸಿ, ಈ ಕಾರ್ಯದಲ್ಲಿ ನಿರತರಾಗಿರುವ ಖಾಸಗಿ ನಿವಾಸಿಗಳು ಹಾಗೂ ಇಲಾಖಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಬೆಳೆ ಸಮೀಕ್ಷೆ ಕಾರ್ಯವು ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ರೈತರು ಸಮೀಕ್ಷೆ ಕಾರ್ಯಕ್ಕೆ ಭೇಟಿ ನೀಡುವ ಖಾಸಗಿ ನಿವಾಸಿಗಳು ಹಾಗೂ ಅಧಿಕಾರಿಗಳಿಗೆ ಅಗತ್ಯ ಸಹಕಾರ ಹಾಗೂ ಮಾಹಿತಿಯನ್ನು ನೀಡಲು ಈ ಸಂದರ್ಭದಲ್ಲಿ ತಿಳಿಸಿದರು. ಬೆಳೆ ಸಮೀಕ್ಷೆ ಕಾರ್ಯವನ್ನು ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ್ಯಂತ ಕೈಗೊಳ್ಳಲಾಗುತ್ತಿದ್ದು, ಪಾಕೃತಿಕ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ, ಬೆಂಬಲ ಬೆಲೆ ನಿಗದಿ, ವಿವಿಧ ಬೆಳೆಗಳ ಉತ್ಪಾದನೆ ಅಂದಾಜಿಸುವಿಕೆ, ರೈತಪರ ಯೋಜನೆಗಳ ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂಬ ಮಾಹಿತಿಯನ್ನು ನೀಡಿದರು.
ಸಾರಿಗೆ ಸಮಸ್ಯೆ ವಾಟ್ಸಾಪ್ ಮಾಡಿ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯಾದ್ಯಂತ ಸಾರಿಗೆ ಸಮಸ್ಯೆಗಳು/ ಯಾವುದೇ ವಾಹನಗಳ ಹಾಗೂ ಇತರೆ ದೂರುಗಳನ್ನು ಸಾರ್ವಜನಿಕರು ಸಂದೇಶ/ ವಿಡಿಯೋ ಕ್ಲಿಪಿಂಗ್ ಮೂಲಕ ದೂ.ಸಂ. 9449864020 ಗೆ ವಾಟ್ಸಾಪ್ ಮೂಲಕ ಸಲ್ಲಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ.ರಾ.ಮು.ವಿ.: ಕೋರ್ಸುಗಳ ಪ್ರವೇಶಾತಿಗೆ ಅ.20 ಕೊನೆಯ ದಿನ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಕೋರ್ಸ್ಗಳಾದ ಬಿ.ಎ/ಬಿ.ಕಾಂ.., ಎಂ.ಎ/ಎಂ.ಕಾಂ.., ಬಿ.ಲಿಬ್.ಐಸ್ಸಿ,/ಎಂ.ಲಿಬ್.ಐಸ್ಸಿ ಮತ್ತು ಎಂ.ಎಸ್ಸಿ (ಪರಿಸರ ವಿಜ್ಞಾನ) ವಿಷಯಗಳ ಪ್ರವೇಶಾತಿಯ ದಿನಾಂಕವನ್ನು Uಉಅ ವಿಸ್ತರಿಸಿದೆ. ಆದ್ದರಿಂದ ಅಕ್ಟೋಬರ್ 20, 200 ರೂ. ದಂಡ ಶುಲ್ಕದೊಂದಿಗೆ ಪ್ರವೇಶಾತಿಗೆ ಕೊನೆಯ ದಿನವಾಗಿರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (Sಅ/Sಖಿ)ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸರ್ಕಾರವು ಮಿತಿಗೊಳಿಸಿರುವ ಅದಾಯದ ಮಿತಿಯೊಳಗಿದ್ದರೆ, ಅಂತಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಷರತ್ತಿಗೊಳಪಟ್ಟು ಶುಲ್ಕ ವಿನಾಯಿತಿಯಡಿಯಲ್ಲಿ ಉಚಿತ ಪ್ರವೇಶಾತಿ ಪಡೆಯಬಹುದು.
ಅರ್ಜಿಗಳನ್ನು ಖುದ್ದಾಗಿ ಕರಾಮುವಿ ಪ್ರಾದೇಶಿಕ ಕೇಂದ್ರ ಕಛೇರಿ, ಹಳೇ ಜಿಲ್ಲಾ ಪಂಚಾಯತ್ ಕಟ್ಟಡ, 2ನೇ ಮಹಡಿ, ಬನ್ನಂಜೆ, ಉಡುಪಿ ಇಲ್ಲಿ ಪಡೆದುಕೊಂಡು, ಅಕ್ಟೋಬರ್ 20 ರ ಒಳಗೆ ಪ್ರಾದೇಶಿಕ ಕೇಂದ್ರ ಕಛೇರಿಗೆ ಸಲ್ಲಿಸಿ, ಸಿದ್ಧಪಾಠಗಳನ್ನು ಪಡೆದುಕೊಳ್ಳಬಹುದು.
ಅಕ್ಟೋಬರ್ 20 ರ ತನಕ ಎಲ್ಲಾ ಸರ್ಕಾರಿ ರಜಾದಿನಗಳು ಮತ್ತು ಭಾನುವಾರ ಸಹ ಕಛೇರಿ ತೆರೆದಿರುತ್ತದೆ. ಪ್ರವೇಶಾತಿ ಶುಲ್ಕವನ್ನು ಕಛೇರಿಯಲ್ಲೆ ಸಂದಾಯ ಮಾಡಬಹುದಾಗಿದೆ ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಕೆ.ಪಿ. ಮಾಹಾಲಿಂಗಯ್ಯ ತಿಳಿಸಿದ್ದಾರೆ.
ಹೆಚ್ಚಿನ ವಿವಿರಗಳಿಗೆ ವಿವಿ ನಿಲಯದ ವೆಬ್ಸೈಟ್ ತಿತಿತಿ.ಞsoumಥಿsoಡಿe.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ಪ್ರಾದೇಶಿಕ ಕೇಂದ್ರ ಉಡುಪಿ, ದೂರವಾಣಿ ಸಂಖ್ಯೆ:- 0820-2522247 ಮತ್ತು 9972526647 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಕ.ರಾ.ಮು.ವಿ. ನಿಲಯದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಥಳೀಯ ದೂರು ಸಮಿತಿ ರಚನೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) :ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯು ಜಿಲ್ಲಾದಿಕಾರಿಯವರ ಆದೇಶದನ್ವಯ ರಚನೆಗೊಂಡಿದ್ದು, ಯಾವುದೇ ಕಚೇರಿ /ಸಂಸ್ಥೆಯಲ್ಲಿ 10 ಕ್ಕಿಂತ ಹೆಚ್ಚು ಕೆಲಸಗಾರರು ಹೊಂದಿರದ ಕಾರಣದಿಂದಾಗಿ ಆಂತರಿಕ ದೂರು ಸಮಿತಿಯು ಸ್ಥಾಪನೆಯಾಗದಿದ್ದಲ್ಲಿ ಮತ್ತು ಮಾಲೀಕರ ವಿರುದ್ದವೇ ದೂರುಗಳನ್ನು ಸ್ವೀಕರಿಸಲು, ಅಸಂಘಟಿತ ಕಾರ್ಮಿಕ ವಲಯದ ದೂರುಗಳನ್ನು (ಉದಾ: ಕಟ್ಟಡ ಕಾರ್ಮಿಕರು, ಮನೆ ಕೆಲಸಗಾರರು) ಸ್ವೀಕರಿಸಲು ಮತ್ತು ವಿಚಾರಣೆ ಮಾಡಲು ಉಡುಪಿ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿ ರಚನೆಯಾಗಿರುತ್ತದೆ. ವಸಂತಿ ರಾವ್ ಕೊರಡ್ಕಲ್, ಕಾರ್ಯದರ್ಶಿಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಉಡುಪಿ- ಅಧ್ಯಕ್ಷರು, ಲಲಿತಾ ಬಾಯಿ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ- ಸದಸ್ಯರು, ರೇಖಾ ಹೆಗ್ಡೆ, ನ್ಯಾಯಾವಾದಿ ಕಾರ್ಕಳ- ಸದಸ್ಯರು, ಗುಣರತ್ನ ಸಮಾಜಸೇವಾ ಕಾರ್ಯಕರ್ತರು, ಕುಂದಾಪುರ- ಸದಸ್ಯರಾಗಿರುತ್ತಾರೆ.
ಈ ಸಮಿತಿಯನ್ನು ಕಿರುಕುಳಕ್ಕೊಳಗಾದ ಮಹಿಳೆಯರು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ: 0820-2574978 ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಆರೂರು ಗ್ರಾಮ ಪಂಚಾಯತ್: ಗಾಂಧಿ ಜಯಂತಿ ಆಚರಣೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : 21 ನೇ ಆರೂರು ಗ್ರಾಮ ಪಂಚಾಯತ್ನಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯನ್ನು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಸ್ವಚ್ಛತಾ ಹೀ ಸೇವಾ: ಗಾಂಧೀ ಜಯಂತಿ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಂಗನವಾಡಿ ಮತ್ತು ಶಾಲೆಗಳಿಗೆ ಸ್ವಚ್ಛತಾ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ರಾಷ್ಟ್ರೀಯ ಮಟ್ಟದ ಪತ್ರ ಲೇಖನ ಸ್ಪರ್ಧೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಭಾರತೀಯ ಅಂಚೆ ಇಲಾಖೆಯು ಐeಣಣeಡಿ ಣo ಒಥಿ ಒoಣheಡಿಟಚಿಟಿಜ (ನನ್ನ ಮಾತೃ ಭೂಮಿಗೆ ಪತ್ರ) ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಮಟ್ಟದ ಪತ್ರ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದ್ದು, ಎಲ್ಲ ವಯೋಮಿತಿಯವರಿಗೂ ಭಾಗವಹಿಸಲು ಅವಕಾಶವಿದೆ. ಪತ್ರಗಳನ್ನು ಕನ್ನಡ, ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆದು ಕವರ್ ಅಥವಾ ಇನ್ಲ್ಯಾಂಡ್ ಲೆಟರ್ನಲ್ಲಿ ಪೋಸ್ಟ್ ಮಾಡಬಹುದು. ಸ್ಪರ್ಧಾ ಪತ್ರಗಳು ತಮ್ಮ ಸಮೀಪದ ಅಂಚೆ ಕಚೇರಿಗೆ ತಲುಪಲು ಅಕ್ಟೋಬರ್ 31 ಕೊನೆಯ ದಿನ.
ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ತಿತಿತಿ.iಟಿಜiಚಿಠಿosಣ.gov.iಟಿ ಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಅಂಚೆ ಅಧೀಕ್ಷಕರು, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದುಳಿದ ವರ್ಗದವರಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2018-19 ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ವೆಬ್ಸೈಟ್ ವಿಳಾಸ ಏಚಿಡಿeಠಿಚಿss.ಛಿgg.gov.iಟಿ ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ. ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 0820-2573881 ,2574881 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಚಿತ ಕಂಪ್ಯೂಟರ್ ತರಬೇತಿ: ನೋಂದಾವಣೆಗೆ ಸೂಚನೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) :ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿ, ಸಾಫ್ಟ್ ಸ್ಕೀಲ್ಸ್ ಮತ್ತು ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಪಡೆಯಲು ಇಚ್ಚಿಸುವ ಆಸಕ್ತ ಯುವಕ,ಯುವತಿರು ವಿದ್ಯಾರ್ಥಿಗಳು ನೋಂದಾವಣಿ ಮಾಡಬಹುದಾಗಿದೆ. ತರಬೇತಿಯು ಉಚಿತವಾಗಿದ್ದು ಕಛೇರಿಯನ್ನು ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಬಿ,ಬ್ಲಾಕ್ ಕೊಠಡಿ ಸಂಖ್ಯೆ 201-ಅಥವಾ 0820-2574869,9480259790
ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳು
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : 2018-19 ನೇ ಸಾಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಬೇಕಾಗಿದ್ದು, ಯೋಜನೆಗಳ ವಿವರ ಹೀಗಿದೆ.
ಸಮೃದ್ಧಿ ಯೋಜನೆ: 18 ರಿಂದ 60 ವರ್ಷ ವಯಸ್ಸಿನ ನಗರ ಮತ್ತು ಗ್ರಾಮೀಣ ಪ್ರದೇಶದ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ 10000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು.
ಧನಶ್ರೀ ಯೋಜನೆ: 18 ರಿಂದ 60 ವಯೋಮಿತಿಯ ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25000 ರೂ.ಗಳ ಬಡ್ಡಿ ರಹಿತ ನೇರ ಸಾಲ ಹಾಗೂ 25000 ರೂ.ಗಳ ಸಹಾಯಧನವನ್ನು ನೀಡಲಾಗುವುದು.
ಚೇತನ ಯೋಜನೆ: 18 ರಿಂದ 60 ವರ್ಷ ವಯಸ್ಸಿನ ಲೈಂಗಿಕ ವೃತ್ತಿ ನಿರತ ಮಹಿಳೆಯರಿಗೆ ವೃತ್ತಿಯಿಂದ ಹೊರಬಂದು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 25000 ರೂ.ಗಳ ಬಡ್ಡಿ ರಹಿತ ನೇರ ಸಾಲ ಹಾಗೂ 25000 ರೂ.ಗಳ ಸಹಾಯಧನವನ್ನು ನೀಡಲಾಗುವುದು
ಕಿರುಸಾಲ: ಸ್ತ್ರೀ ಶಕ್ತಿ ಗುಂಪು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಗುಂಪಿಗೆ 2 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲ ನೀಡಲಾಗುವುದು.
ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ: ಈ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು 25000 ರೂ. ಗಳ ಬಡ್ಡಿ ರಹಿತ ನೇರ ಸಾಲ ಹಾಗೂ 25000 ರೂ.ಗಳ ಸಹಾಯಧನವನ್ನು ನೀಡಲಾಗುವುದು.
ಈ ಎಲ್ಲಾ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಗಳ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಕ್ಟೋಬರ್ 25 ರ ಒಳಗೆ ಸಲ್ಲಿಸಬೇಕು.
ಹೆಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574978 ಅನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಹಿರಿಯಡಕ: ಗಾಂಧಿ ಜಯಂತಿ ಆಚರಣೆ
ಉಡುಪಿ, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಸರಕಾರ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ, ಎನ್.ಎಸ್.ಎಸ್. ಘಟಕ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ-ಉಡುಪಿ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ 150ನೇ ಗಾಂಧಿ ಜಯಂತಿ ಕಾರ್ಯಕ್ರಮವು ಅಕ್ಟೋಬರ್ 2 ರಂದು ವಿನೂತನವಾಗಿ ಜರಗಿತು.
ಚರಕದ ರಾಟೆಗೆ ಖಾದಿ ನೂಲು ಹಾಕುವುದರ ಮೂಲಕ ಹಿರಿಯಡ್ಕದ ಮದ್ದಳೆಯ ಮಾಂತ್ರಿಕ ಗೋಪಾಲರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಬಾಲ್ಯದಲ್ಲಿ ಚರಕ ನೂಲುವುದನ್ನು ಸ್ಮರಿಸಿಕೊಂಡು ಕ್ವಿಟ್-ಇಂಡಿಯಾ ಸಂದರ್ಭದ ಬಹಿಷ್ಕಾರದ ಘೋಷಣೆ-ಹಾಡುಗಳನ್ನು ಉತ್ಸಾಹದಿಂದ ಹೇಳುತ್ತಾ ನಾವೆಲ್ಲಾ (ಸರ್ವ ಧರ್ಮೀಯರು) ಒಂದು ವಂದೇ ಮಾತರಂ ಎಂಬ ಘೋಷ ವಾಕ್ಯಗಳೊಂದಿಗೆ ಯುವಪೀಳಿಗೆಯನ್ನು ತಮ್ಮ ಮಾತಿನಲ್ಲಿ ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸೇನಾನಿ/ಯೋಧ ಕರ್ನಲ್ ಬಿ. ರಾಮಚಂದ್ರರಾವ್ ಹಾಗೂ ಸಮಾಜಸೇವಾ ನಿರತ ಮಾಲತಿ ರಾವ್ ಇವರನ್ನು ಸನ್ಮಾನಿಸಲಾಯಿತು, ಕರ್ನಲ್ ಅವರು ಮಾತನಾಡುತ್ತಾ ದೇಶ ಎನ್ನುವುದು ತಾಯಿಗೆ ಸಮಾನ, ಪ್ರಕೃತಿ, ಗೋವು, ಎಲ್ಲವೂ ತಾಯಿ ಸಮಾನವಾಗಿದ್ದು, ತಾಯ್ನಾಡನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸೆಲ್ಯೂಟ್ ನಮನ ನೀಡಿದರು. ಗೋಪಾಲರಾವ್ ಇವರಿಗೂ ಸನ್ಮಾನ ಮಾಡಲಾಯಿತು.
ಪ್ರಾಚ್ಯಸಂಚಯ ಸಂಶೋಧನ ಕೇಂದ್ರ, ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಅತಿಥಿ ಭಾಷಣದಲ್ಲಿ ಗಾಂಧೀಜಿ ಅನುಸರಿಸಿದ ಸರಳ ಜೀವನ ಹಾಗೂ ಅಹಿಂಸಾ ಮಾರ್ಗ ಜೀವನ ಇಂದಿಗೂ ಪ್ರಸ್ತುತ, ಇವೆಲ್ಲವನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ನಿಯಂತ್ರಣಕ್ಕೆ ಸಿಗದ ಪೈಪೋಟಿಗಳು ನಡೆದಿವೆ, ಹೀಗಾಗಿ ‘ಸಬ್ ಕೋ ಸನ್ಮತಿ ದೇ ಭಗವಾನ್’ ಎನ್ನುವುದನ್ನು ಉಚ್ಚರಿಸುತ್ತಿದ್ದೇವೆ. ಗಾಂಧಿತತ್ವ ಎಲ್ಲರ ಅನುಭವಕ್ಕೆ ಸ್ಪರ್ಶವಾಗಬೇಕಾದರೆ ಪುನರಪಿ ಚರಕ ಸಾಧನ ನೀಡುವ ಅತೀತ-ಅನುಭವ ತಮ್ಮದಾಗಿಸಿಕೊಳ್ಳಬೇಕು ಎಂದರು, ಶಿಕ್ಷಣ ವ್ಯವಸ್ಥೆಯಲ್ಲಿ ಖಾದಿ ವಸ್ತ್ರ ಸಂಹಿತೆ ಜಾರಿಯಾಗಲಿ, ತಿಂಗಳಿಗೊಮ್ಮೆಯಾದರೂ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಬೆಸ್ಟ್-ಪ್ರಾಕ್ಟೀಸ್ ಹಿನ್ನಲೆಯಲ್ಲಿ ಖಾದೀ ವಸ್ತ್ರ ಸಂಹಿತೆ ಅಳವಡಿಸಿಕೊಂಡಾಗ ಮಾತ್ರ ಗಾಂಧಿ ತಿಳಿಸಿದ ಸರಳ ಜೀವನ ಶಕ್ತಿ ವೇದ್ಯವಾಗಬಲ್ಲದು, ಹೊಸ ಚಿಂತನೆಗಳು ಕೂಡಿ ಸಾಮರಸ್ಯದ ಬದುಕಿಗೆ ನಮ್ಮನ್ನು ತೆರೆದುಕೊಳ್ಳಬೇಕಾಗಿದೆ. ಎಂದರು. ಇಂದಿನ ಬದಲಾವಣೆ ಎಂದರೆ ‘ಪರಿಸರಾವರಣದಲ್ಲಿ ಸ್ವಚ್ಛ ಬದುಕು’ ಮತ್ತು ಹಸಿರು ಶಿಷ್ಟಾಚಾರ ಪಾಲಿಸಿ ಎಂದು ಕರೆ ನೀಡಿದರು.
“ಸಬ್ ಕೊ ಸನ್ಮತಿ ದೇ ಭಗವಾನ್” ಸಂದೇಶವನ್ನು ನೀಡುತ್ತಾ ಗೋಪಾಲರಾವ್ ಹಿರಿಯಡ್ಕ ಹಾಗೂ ಕರ್ನಲ್ ಬಿ. ರಾಮಚಂದ್ರರಾವ್ ಮಾತಿನ ಮೂಲಕ ಸಂವಾದ ನಡೆಸಿದರು, ಸ್ವಾತಂತ್ರ್ಯಪೂರ್ವದ ಘಟನೆಗಳನ್ನು ಮೆಲುಕು ಹಾಕಿದರು.
ಸ್ವಾತಂತ್ರ್ಯ ಹೋರಾಟದ ಚಳುವಳಿಯ ಸ್ಮøತಿಸ್ಮರಣೆಯ ದಾಖಲೆಗಳು (ಮೌಖಿಕ ಹೇಳಿಕೆ) ಕಣ್ಣಳತೆಯಲ್ಲಿ ನೋಡಿದ ವಿವರಗಳು ಇಂದಿಗೂ ನಮ್ಮ ನಡುವೆ ಇರುವ ಅನೇಕ ಹಿರಿಯರಲ್ಲಿದೆ, ಕೆಲವೊಮ್ಮೆ ಹೋರಾಟಗಾರರ ಕುಟುಂಬದ ಮನೆಗಳ ಅಟ್ಟಶೋಧ ನಡೆಸಿದರೆ ಅಪೂರ್ವ ದಾಖಲೆ ದೊರಕಬಹುದು, ಇವುಗಳನ್ನು ಸಂಚಯನ ಮಾಡಲು ಗ್ರೇಟ್ ಟೀಮ್ ಇಂಡಿಯ 1947 ಎನ್ನುವ ಸಂಪನ್ಮೂಲ ಕೋಶ ತಯಾರಿಸುತ್ತಿದ್ದು, ಇತಿಹಾಸ ಪುಟಗಳಲ್ಲಿ ದಾಖಲಾಗದ ಅನೇಕ ಮಾಹಿತಿಗಳು ಈಗಾಗಲೇ ದೊರೆತಿವೆ, ಅವುಗಳನ್ನು ಬಳಸಿ ಪುನಃ ರಾಷ್ಟರೀಯ ಇತಿಹಾಸ ಕಟ್ಟಬೇಕೆಂದರೆ ಯುವ ಶಕ್ತಿಯ ಮೂಲಕ ಶೋಧನೆ ಅಗತ್ಯ ಎಂದು ಎಸ್. ಎ. ಕೃಷ್ಣಯ್ಯ ನುಡಿದು ಕಟಪಾಡಿ ಸ್ವಾತಂತ್ರ್ಯ ಹೋರಾಟಗಾರರಾದ ಮಂಜುನಾಥ ನಾಯಕ್, ಗೋಪಾಲಕೃಷ್ಣ ನಾಯಕ್ ಇವರ ಬಳಿ ಇದ್ದ ಸ್ವರಾಜ್ಯ ಡೈರಿ 1933 ಅನೇಕ ಮಾಹಿತಿಗಳನ್ನು ಕೊಟ್ಟಿವೆ ಎಂದರು. ಕಾರ್ಯಕ್ರಮದಲ್ಲಿ ಹವ್ಯಾಸಿ ಇತಿಹಾಸ ಸಂಶೋಧಕ ಶ್ರೀಧರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಪ್ರೊ. ಸುಜಯಾ ಕೆ. ಎಸ್. ಗೋಪಾಲ್ ರಾವ್ ಇವರನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಇವರ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಅಂತರ್ಗತ ಮಾಡಿಕೊಂಡ ಗೋಪಾಲ್ ರಾವ್ ಅವರ ಉತ್ಸಾಹ ನಮಗೆ ಮಾದರಿಯಾಗಿದೆ, ಅವರ ಪ್ರಜ್ಞೆ ಎಂದರೆ ಸತ್ಯದ ಮಾರ್ಗ, ಗಾಂಧೀಜಿ ಹೇಳಿದಂತೆ “ನನ್ನ ಜೀವನವೇ (‘ಸ್ವಾತಂತ್ರ್ಯ) ಸಂದೇಶ”, ಎಂದರು.
ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಎಸ್. ಎ. ಕೃಷ್ಣಯ್ಯ ಹಾಗೂ ಮ್ಯೂಸಿಕ ಸುಪ್ರಿಯ (ಮಣಿಪಾಲ ವಿ.ವಿ. ತಂತ್ರಜ್ಞಾನ) ಕಾರ್ಯಕ್ರಮ ಪರಿಕಲ್ಪನೆ ಸಾಕಾರಗೊಳ್ಳಲು ಸಹಕರಿಸಿದರು. ಗಾಯತ್ರಿ ಮತ್ತು ಬಳಗ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕಾಲೇಜಿನ ಐಕ್ಯುಎಸಿ ಸಂಚಾಲಕಿ ಸುಮನಾ ಬಿ. ನಿರ್ವಹಿಸಿದರು. ಎನ್. ಎಸ್. ಎಸ್. ಯೋಜನಾಧಿಕಾರಿಗಳಾದ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಶೆಟ್ಟಿ ಮತ್ತು ಸುಭಾಷ್ ಹೆಚ್. ಕೆ. ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮಕ್ಕೆ ಕೈ-ಮುಸುಕುಗಳನ್ನು ಅತಿಥಿಗಳಿಂದ ಪಡೆದರು. ಶ್ರೀತಾಳ ಬೀಜಗಳನ್ನು ಪ್ರಾಚ್ಯಸಂಚಯ ಕೇಂದ್ರದಿಂದ ಪಡೆಯುವ ಮೂಲಕ ಹಸಿರ ಹೊನ್ನ ಸಿರಿ ಬಿತ್ತೋಣ ಜಗದಗಲದಲಿ ಎನ್ನುವ ಘೋಷ ವಾಕ್ಯ ನೆನಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link