Brief Mumbai, Mangalore news with pictures


Rons Bantwal
Kemmannu News Network, 22-11-2018 10:16:09


Write Comment     |     E-Mail To a Friend     |     Facebook     |     Twitter     |     Print


ನ.25:ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯಿಂದ ಹವ್ಯಕರ ಸಭಾಗೃಹದಲ್ಲಿ
ಕವಿ ವಿ.ಜಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ-ಕವನ ಸ್ಪರ್ಧೆಯ ಬಹುಮಾನ ವಿತರಣೆ
ಮುಂಬಯಿ, ನ.18: ಮಹಾನಗರದಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಇದೇ ನ.25ನೇ ರವಿವಾರ ಸಂಜೆ 4.00 ಗಂಟೆಗೆ ಘಾಟ್ಕೋಪರ್ ಪಶ್ಚಿಮದಲ್ಲಿನ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ನಾಡಿನ ಹೆಸರಾಂತ ಕವಿವರ್ಯ ವಿ.ಜಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ ಮತ್ತು ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಿದೆ.

ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಅಧ್ಯಕ್ಷತೆಯಲ್ಲಿ  ಜರಗಲಿರುವ ಕವಿಗೋಷ್ಠಿಯಲ್ಲಿ ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಕೆ.ಗೋವಿಂದ ಭಟ್, ವಿಶ್ವನಾಥ ಶೆಟ್ಟಿ ಪೇತ್ರಿ, ಶಾಂತಾ ಶಾಸ್ತ್ರಿ, ಮಹೇಶ್ ಹೆಗ್ಡೆ ಪುಣೆ, ನ್ಯಾ| ಅಮಿತಾ ಭಾಗವತ್, ಡಾ| ಜಿ.ಪಿ ಕುಸುಮಾ, ಶೈಲಜಾ ಹೆಗ್ಡೆ, ಅನಿತಾ ಪಿ.ಪೂಜಾರಿ ತಾಕೋಡೆ, ಸುನಂದ ಭಟ್, ಡಾ| ದಾಕ್ಷಾಯನಿ ಯೆಡಹಳ್ಳಿ, ಶಾರದಾ ಅಂಬಸಂಗೆ ಪಾಲ್ಗೊಂಡು ತಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಕವಿಗೋಷ್ಠಿ ಬಳಿಕ ಟ್ರಸ್ಟ್ ಆಯೋಜಿಸಿದ್ದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿüಯಾಗಿ ವಿ.ಎನ್ ಹೆಗಡೆ ಕಲ್ವಾ, ಅತಿಥಿüಗಳಾಗಿ ಕವನ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಾರವಿತ್ತ ಲೇಖಕ,ಕವಿ ಶರದ್ ಸೌಕೂರು, ಲೇಖಕಿ ತುಳಸಿ ವೇಣುಗೋಪಾಲ್ ಉಪಸ್ಥಿತರಿರುವರು.

ಕವನ ಸ್ಪರ್ಧೆಯ  ವಿಜೇತರು:
ಪ್ರಜ್ಞಾ  ಮತ್ತಿಹಳ್ಳಿ, ಧಾರವಾಡ (ಪ್ರಥಮ),  ಸ್ಮಿತಾ ಅಮೃತ್‍ರಾಜ್ ಸಂಪಾಜೆ (ದ್ವಿತೀಯ), ಧೀರೇಂದ್ರ ನಾಗರಹಳ್ಳಿ, ಬೆಂಗಳೂರು (ತೃತೀಯ), ಹೇಮಾ ಎಸ್.ಅಮೀನ್ ಮುಂಬಯಿ (ಸಮಾಧಾನಕರ) ಇವರಿಗೆ ಪ್ರಾಪ್ತಿಯಾಗಿದೆ ಎಂದು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಕಾರ್ಯದರ್ಶಿ ಎನ್.ಆರ್ ಆಕದಾಸ ತಿಳಿಸಿದ್ದಾರೆ.

 

ಭರತನಾಟ್ಯಂ ಪ್ರವೀಣೆ ಕು| ನಮ್ರತಾ ಪ್ರಭಾಕರ್ ಸುವರ್ಣ
ನ.23: ಚೆಂಬೂರುನ ಫೈನ್‍ಆಟ್ರ್ಸ್ ಸಭಾಗೃಹದಲ್ಲಿ ರಂಗಪ್ರವೇಶ
ಮುಂಬಯಿ, ನ.20: ಗುರು ಶ್ರೀ ಎ.ಟಿ ಗೋವಿಂದ್‍ರಾಜ್ ಪಿಳ್ಳೈ ಅವರಿಂದ 1945ರಲ್ಲಿ ಅಂದರೆ ಸ್ವಾತಂತ್ರ ್ಯ ಪೂರ್ವದಲ್ಲೇ ಮುಂಬಯಿನಲ್ಲಿ ಸ್ಥಾಪಿತ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರ್ ಮಾಟುಂಗಾ ಇದರ ಕಲಾ ವಿದ್ಯಾಥಿರ್üನಿ ಆಗಿ ತರಬೇತಿ ಪಡೆದು ಪರಿಣತ ಕಲಾವಿದೆಯಾಗಿರುವ ಭರತನಾಟ್ಯಂ ಪ್ರವೀಣೆ ಕು| ನಮ್ರತಾ ಪ್ರಭಾಕರ್ ಸುವರ್ಣ ಇದೇ ನ.23ನೇ ಶುಕ್ರವಾರ ಗುರು ನಾನಕ್ ಜಯಂತಿ ದಿನ ಸಂಜೆ 7.00 ಗಂಟೆಗೆ ಚೆಂಬೂರು ಅಲ್ಲಿನ ಫೈನ್ ಆಟ್ರ್ಸ್ ಕಲ್ಚರಲ್ ಸೆಂಟರ್‍ನ ಶಿವಸ್ವಾಮಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಟ್ಯ ರಂಗಪ್ರವೇಶ (ಅರಂಗೇಟ್ರಮ್) ನಡೆಸಲಿದ್ದಾರೆ.

ಚೆಂಬೂರು ಇಲ್ಲಿನ ಸೈಂಟ್ ಗ್ರೆಗೋರಿಯಸ್ ಹೈಸ್ಕೂಲು ಮತ್ತು ಸ್ವಾಮಿ ವಿವೇಕಾನಂದ ಜೂನಿಯರ್ ಕಾಲೇಜು ಚೆಂಬೂರು ವಿದ್ಯಾಥಿರ್üನಿ ಆಗಿ, ವಿಜೆಟಿಐ ಮಾಟುಂಗಾ ಕಾಲೇಜ್‍ನಲ್ಲಿ ಇನ್‍ಫರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಬಿ.ಟೆಕ್ ಪದವೀಧರೆ ಆಗಿದ್ದಾರೆ. ತನ್ನ ಆರನೇ ವರ್ಷದಲ್ಲೇ ಶ್ರೀ ರಾಜರಾಜೇಶ್ವರಿ ಕಲಾ ಮಂದಿರ್‍ಗೆ ಸೇರ್ಪಡೆ ಗೊಂಡು ಸುಮಾರು ಹತ್ತು ವರ್ಷಗಳಿಂದ ಸತತ ಭರತ ನಾಟ್ಯ ಅಭ್ಯಾಸಗೈದು ಗುರು ಜಿ.ವಸಂತ್ ಕುಮಾರ್ ಅವರ ಗರಡಿಯಲ್ಲಿ ನಾಟ್ಯ ಕಲಾವಿದೆಯಾಗಿ ಪಳಗಿದ್ದಾರೆ.

ನೃತ್ಯ, ಕ್ರೀಡೆ ಮತ್ತು ಚಿತ್ರಕಲಾ ರಂಗದಲ್ಲಿ ಬಾಲ್ಯದಿಂದಲೇ ಆಸಕ್ತ ಈಕೆ ಕಲಾ ಮಂದಿರದ ನಿರ್ದೇಶಕ ಗುರು ಕೆ. ಕಲ್ಯಾಣಸುಂದರಂ, ಗುರು ಕೆ.ಮಿಥಿüಲಿ, ಗುರು ಜಿ.ವಸಂತ್ ಕುಮಾರ್, ಗುರು ಕೆ.ಹರಿಕೃಷ್ಣ  ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ರಂಗಪ್ರವೇಶ ನಡೆಸಲಿದ್ದಾರೆ. ಅಂದು ವಿನಾಯಕ ಸ್ತುತಿ, ಕವುಥ್ವಸಂ, ಜಥಿüಸ್ವರಂ, ಮೀನಾಕ್ಷಿ ಮೇಮುಧಂ, ವರ್ಣಂ, ಆನಂದ ತಾಂಡವಂ ಆದಿನಾರ್, ಥಾಯೇ ಯಶೋದ, ಥಿüಲ್ಲನ, ತಿರುಪ್ಪವೈ, ಮಂಗಳಂ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.

ಉಡುಪಿ ಜಿಲ್ಲೆಯ ಶಂಕರಪುರ ಇನ್ನಂಜೆ ನಿವಾಸಿ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ ಮತ್ತು ಭಾರತೀ ಪ್ರಭಾಕರ್ ಹಳೆಯಂಗಡಿ ದಂಪತಿ ಸುಪುತ್ರಿ ನಮ್ರತಾ ಸುವರ್ಣ ಆಗಿದ್ದಾರೆ.  : ರೋನಿಡಾ ಮುಂಬಯಿ

ಎಂ.ಸಂಜೀವರು ನಿಸ್ವಾರ್ಥ ಹೋರಾಟಗಾರ : ಮಾಜಿ ಪ್ರಧಾನಿ ದೇವೇಗೌಡ
ಸುಕಲಾಕ್ಷಿ ಸುವರ್ಣ ರಚಿತ `ಸಂಜೀವನ’ ಕೃತಿ ಯುನಿಟಿ ಆಸ್ಪತ್ರೆಯಲ್ಲಿ ಬಿಡುಗಡೆ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.19: ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗ ಹೋರಾಟದ ಕಾವು ಮತ್ತು ಕೆಚ್ಚನ್ನು ಕಳೆದುಕೊಂಡು, ಜಾತ್ಯಾತೀತತೆ, ಸಮಾಜವಾದ, ಜನಪರ ಹೋರಾಟಗಳ ಲಕ್ಷಣಗಳನ್ನು ಕಳೆದುಕೊಂಡು ಮೂಲಭೂತವಾದಿಗಳ ರಣಾಂಗಣವಾಗಿರುವುದು ಅತ್ಯಂತ ಗಂಭೀರವಾದ ಸಂಗತಿ. ಸುಮಾರು ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಿಕೊಂಡು ಬಂದಿರುವ ನನಗೆ ಉಡುಪಿ ಮತ್ತು ಮಂಗಳೂರು ಪ್ರದೇಶಗಳ ಸ್ವರೂಪ ಬದಲಾಗುತ್ತಾ ಬಂದದ್ದನ್ನು ಅತ್ಯಂತ ನೋವಿನಿಂದ ಗಮನಿಸಿದ್ದೇನೆ. ಹೀಗೆ ಗಮನಿಸಿದಾಗಲೆಲ್ಲಾ ನನಗೆ ಥಟ್ಟನೆ ನೆನಪಿಗೆ ಬರುವುದು ನನ್ನೊಟ್ಟಿಗೆ ನನ್ನದೇ ವಯಸ್ಕರಾಗಿ, ನನ್ನ ಸಮಕಾಲೀನರಾಗಿ, ನನ್ನ ಪಕ್ಷದಲ್ಲಿ ನಿಷ್ಠರಾಗಿ ಜನಪರ ಹೋರಾಟಗಳ ಮುಂದಾಳಾಗಿ ಕೆಲಸ ಮಾಡಿ ಈಗ 85ರ ಇಳಿವಯಸ್ಸಿನಲ್ಲಿಯೂ ಕರಾವಳಿಯ ಹಿರಿಯ ಚಿಂತಕರಾಗಿ ನಮ್ಮ ಮಧ್ಯೆ ಇರುವ ಎಂ.ಸಂಜೀವ ಅವರು ಅವರ ಜೀವನ ಅನುಪಮವಾದುದು ಎಂದು ಭಾರತ ರಾಷ್ಟ್ರದ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ನೇತಾರ ಹೆಚ್.ಡಿ ದೇವೇಗೌಡ ತಿಳಿಸಿದರು.

ಮಂಗಳೂರು ನಗರದಲ್ಲಿನ ಯುನಿಟಿ ಆಸ್ಪತ್ರೆಯಲ್ಲಿ ವೃದ್ಧಾಪ್ಯದಿಂದ ದಾಖಲಾಗಿ ಶುಶೂಷೆ ಪಡೆಯುತ್ತಿರುವ ತಮ್ಮ ಪರಮಾತ್ಮ ಮಿತ್ರ ಎಂ.ಸಂಜೀವ ಅವರನ್ನು ಕಳೆದ ಶನಿವಾರ ಭೇಟಿ ನೀಡಿದ ಹೆಚ್.ಡಿ ದೇವೇಗೌಡ ಅವರು ಸಂಜೀವರ ತಂಗಿ ಸುಕಲಾಕ್ಷಿ ಸುವರ್ಣ ರಚಿತ ಎಂ.ಸಂಜೀವರ ಜೀವನ ಕಥನ `ಸಂಜೀವನ’ ಜನನಾಯಕ ಎಂ.ಸಂಜೀವ ಜೀವನ ಕಥನ ಬಿಡುಗಡೆ ಗೊಳಿಸಿ ಸಂಜೀವರ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು.

ಎಂ.ಸಂಜೀವ ಅವರು ಮತ್ತು ನಾನು ಒಂದೇ ವಯಸ್ಸಿನವರು ಮತ್ತು ತಲೆಮಾರಿನವರು. ನಾನು ಮತ್ತು ಸಂಜೀವರು ಮೇ.1933ರಲ್ಲಿ ಹುಟ್ಟಿದ್ದು. ನಾನು ಸಂಜೀವರವರಿಗಿಂತ 10 ದಿನ ದೊಡ್ಡವನು ಅಷ್ಟೇ. ಅದೇನು ಯೋಗಾನು ಯೋಗವೋ ನಾವಿಬ್ಬರೂ ಸಮಾನ ವಯಸ್ಕರಾಗಿ, ಸಮಕಾಲೀನರಾಗಿ, ಸಮಾನ ಮನಸ್ಕರಾಗಿ, ಒಂದೇ ರೀತಿಯ ರಾಜಕಾರಣವನ್ನು ಆಯ್ಕೆ ಮಾಡಿಕೊಂಡದ್ದು ನಮ್ಮ ಸಂಬಂಧವನ್ನು ಬಹಳಷ್ಟು ಬೆಸೆದಿದೆ. 1952ರಿಂದ ನಾನು ಹಾಸನ ಜಿಲ್ಲೆಯನ್ನು ನನ್ನ ಕರ್ಮಭೂಮಿಯನ್ನಾಗಿ ಆರಿಸಿಕೊಂಡರೆ, ಸಂಜೀವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿ ಕೊಂಡವರು. 1972 ರಲ್ಲಿ ನಾನು ವಿರೋಧಪಕ್ಷದ ನಾಯಕನಾದಾ ಗ ಸಂಜೀವ ಅವರ ಆತ್ಮೀಯ ಒಡನಾಟವನ್ನು ಪಡೆದು ಕೊಂಡು ವಿರೋಧಪಕ್ಷದ ನಾಯಕನಾಗಿ ನಾನು ನಮ್ಮ ಪಕ್ಷದ ಸಂಘಟನೆಯ ಜೊತೆ ಕಾರ್ಯಕರ್ತರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಾ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರ ಬಹುದಾದ ಜನವಿರೋಧಿ ಕೃತ್ಯಗಳ ಮಾಹಿತಿ ಕಲೆ ಹಾಕಿಕೊಂಡು ಅದನ್ನು ವಿಧಾನಸಭೆಯಲ್ಲಿ ಸಶಕ್ತವಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದು ಆ ದಿನಗಳಲ್ಲಿ ನನಗೆ ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡುತ್ತಿದ್ದವರು ಗೆಳೆಯ ಸಂಜೀವ ಅವರು. ದಕ್ಷಿಣ ಕನ್ನಡ ಜಿಲ್ಲೆಯ ಬಾಡಿಗೆದಾರ ಸಂಘದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಆಯ್ಕೆ ಸಾರ್ವಜನಿಕ ಬದುಕಿನ ಹೋರಾಟಗಾರರಾಗಿ ರೂಪುಗೊಂಡರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ದೇವರಾಜು ಅರಸು ಅವರ ಒಡನಾಡಿ ಆಗಿದ್ದರು ಎಂದು ದೇವೇಗೌಡರು ಸಂಜೀವರ ಸ್ನೇಹತ್ವದ ನೆನಪುಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಸಂಜೀವರ ಸಹೋದರ ಸಂತೋಷ್, ಕೃಪಾ ಭೋಜರಾಜ್ ಮುಂಬಯಿ, ಚಿತ್ರನಟ ಪ್ರಜ್ವಲ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಎಂ.ಬಿ ಸದಾಶಿವ, ಮಹಮ್ಮದ್ ಕುಂಞÂ್ಞ , ಯುನಿಟಿ ಆಸ್ಪತ್ರೆಯ ವೈ.ಮಹಮ್ಮದ್ ಕುಂಞÂ್ಞ , ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇ±ಕ ಡಾ| ಹಬೀಬ್ ರೆಹ್ಮಾನ್, ಡಾ| ಮಹಮ್ಮದ್ ಇಸ್ಮಾಯಿಲ್, ಮತ್ತು ಸಂಜೀವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಮೈಸೂರು ಅಸೋಸಿಯೇಷನ್-ನವಿ ಮುಂಬಯಿ ಕನ್ನಡ ಸಂಘ ಸಂಯೋಜನೆಯಲ್ಲಿ
ನ.24-ನವಿ ಮುಂಬಯಿ ಮತ್ತು ನ.25-ವಡಾಲಾದಲ್ಲಿ ಜಾನಪದಜಾತ್ರೆ
ಮುಂಬಯಿ,ನ.19: ಕನ್ನಡ-ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರದ ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ನೆರವಿನಲ್ಲಿ, ಮುಂಬಯಿಯ ಮೈಸೂರು ಅಸೋಸಿಯೇಷನ್, ನವಿ ಮುಂಬಯಿ ಕನ್ನಡ ಸಂಘ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಗಳು  ಸೇರಿಕೊಂಡು ನವೆಂಬರ್.24 ಮತ್ತು 25, 2018 ರಂದು, `ಜಾನಪದಜಾತ್ರೆ’ಯನ್ನು ಜರುಗಿಸುತ್ತಿದೆ.

ಶನಿವಾರ ನವೆಂಬರ್ 24, 2018 ರಂದು ನವಿ ಮುಂಬಯಿ ಕನ್ನಡ ಸಂಘದಲ್ಲಿ, ಅಂತೆಯೇ ಭಾನುವಾರ ನವೆಂಬರ್ 25, 2018 ರಂದು ರಾಷ್ಟ್ರೀಯಕನ್ನಡ ಶಾಲೆ ವಡಾಲಾದಲ್ಲಿ ಈ ಜಾನಪದಜಾತ್ರೆ ಜರುಗಲಿದೆ. ಎರಡೂ ದಿನಗಳಂದು, ಹಗಲು 3.00 ಘಂಟೆಗೆ ಮೆರವಣಿಗೆ ಹೊರಟು, ಆ ಪ್ರದೇಶದಲ್ಲಿಕುಣಿಯುತ್ತಾ ಆಮೇಲೆ 5.00 ಘಂಟೆಯಿಂದ 8.00 ಘಂಟೆಯವರೆಗೆಎಲ್ಲಾ ಕುಣಿತಗಳ ಹಾಡುಗಳ ಪ್ರದರ್ಶನ ನಡೆಯುತ್ತದೆ. ಇದರಲ್ಲಿ ಜಾನಪದ ಗಾಯನ, ತತ್ವಪದ, ಸುಗಮ ಸಂಗೀತ, ತೊಗಲುಬೊಂಬೆ, ಹುಲಿವೇಷ, ಪೂಜಾಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ,ಡೊಳ್ಳು ಕುಣಿತ, ಗೊರವರಕುಣಿತ, ನಗಾರಿ ವಾದನ ಮತ್ತು ಹಲವಾರು ಕುಣಿತಗಳಿರುತ್ತದೆ.

ಕರ್ನಾಟಕ ಕಲೆಗಳ ಬೀಡಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗರು, ಹಾಡು, ಕುಣಿತ, ನಾಟಕಗಳಿಗೆ ಹೆಸರಾದವರು. ತಮಿಳಿನ `ಚಿಲಪಡಿಕ್ಕಾರಂ’. ಐದನೆಯ ಶತಮಾನದಲ್ಲಿ ಕೂಡ, `ಕರುನಾಡರ್ ಆಡಿದರ್’ಎಂದು ಉಲ್ಲೇಖಿಸುತ್ತದೆ. ಜನರು, ತಮ್ಮ ಬೇಸಾಯದಲ್ಲಿ, ಅಕ್ಕಿ–ರಾಗಿ ಕುಟ್ಟುವುದರಲ್ಲಿ ಮಗುವನ್ನು ತೂಗುವುದರಲ್ಲಿಯೇ ಅಲ್ಲದೆ, ತಮ್ಮ ದೇವರ ಮೆರವಣಿಗೆಗಳಲ್ಲಿ, ಕುಣಿದು ಆ ದೇವರುಗಳನ್ನು ಕೊಂಡಾಡುತ್ತಿದ್ದುದು, 2000ಕ್ಕೂ ಮಿಕ್ಕ ವರ್ಷಗಳಿಂದ ನಡೆದು ಬಂದಿದೆ. ವೀರಗಾಸೆ, ಕಳಸ ಕುಣಿತ, ಪೂಜಾ ನೃತ್ಯ, ಪಟಕುಣಿತ, ಹುಲಿ ವೇಷ, ಮುಂತಾದವುಗಳು ಇಂದೂಕನ್ನಡ ನಾಡಿನ ಹಳ್ಳಿಗಳಲ್ಲಿ ಮೆರೆಯುತ್ತಿವೆ.

ಅಳಿದು ಹೋಗುತ್ತಿದ್ದ ಈ ಕಲೆಗಳನ್ನು 2000ದಿಂದ ಅನೇಕರು ಮತ್ತೆಎತ್ತಿ ಹಿಡಿದಿದ್ದಾರೆ. ಐ.ಎಂ ವಿಠ್ಠಲಮೂರ್ತಿ, ಶ್ರೀನಿವಾಸ ಜಿ.ಕಪ್ಪಣ್ಣ, ನಾಗರಾಜಮೂರ್ತಿ ಇವರು ಕರ್ನಾಟಕದುದ್ದಕ್ಕೂ ಜಾನಪದ ಜಾತ್ರೆಗಳನ್ನು ಆಡಿಸಿ, ಅವುಗಳನ್ನು ಮತ್ತೆಎತ್ತಿ ಹಿಡಿದಿದ್ದಾರೆ. ತಾಳವೇ ಜೀವವಾದ ಈ ಕುಣಿತಗಳ ಹಾಡುಗಳಿಗೆ, ಮತ್ತೆ ಹೊಸ ಮೆರುಗನ್ನುಕೊಟ್ಟುಜನಪ್ರಿಯವಾಗಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ಮತ್ತುಕನ್ನಡ-ಸಂಸ್ಕೃತಿಇಲಾಖೆಯ ಪಾತ್ರ, ಈ ಪುನರುಜ್ಜೀವನದಲ್ಲಿ ಅಪಾರವಾಗಿದೆ. 2006ರಲ್ಲಿ, `ಸುವರ್ಣ ಕರ್ನಾಟಕ’ ಜಾತ್ರೆಯಲ್ಲಿ, ಮುಂಬಯಿಯ 30 ಕನ್ನಡ ಸಂಘಗಳು ಒಡಗೂಡಿ ರಾಷ್ಟ್ರೀಯ ಕನ್ನಡ ಶಾಲೆ ವಡಾಲದಲ್ಲಿ ಬರಮಾಡಿಕೊಂಡು ಅದ್ಧೂರಿಯಾಗಿ ಮೆರವಣಿಗೆಯನ್ನು ನಡೆಸಿದ್ದನ್ನು ನಾವಿಲ್ಲಿ ನೆನಸಬಹುದು. ಅಂತೆಯೇ 2017ರಲ್ಲಿ, ತರಳಬಾಳು ಮಠದ ಶ್ರೀ ಶಿವಾಚಾರ ಸ್ವಾಮಿಗಳು, ತಮ್ಮಅಡಿಯಲ್ಲಿ ತಯಾರಾದ 200 ಕಲಾವಿದರನ್ನು ಮುಂಬಯಿಗೆ ಕರೆತಂದು, ಆಡಿಸಿದ್ದನ್ನು ಕೂಡ ಮರೆಯುವಂತಿಲ್ಲ.
ಈ ಎಲ್ಲಾ ಕಲಾವಿದರೂ ಕೂಡ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದಾರೆ. ಇವರ ಕುಣಿತಗಳನ್ನು ನೋಡುವ, ಹಾಡುಗಳನ್ನು ಕೇಳುವ ಒಂದು ಅಪೂರ್ವ ಅವಕಾಶ ಮುಂಬಯಿಗರಿಗೆ ದೊರೆಯಲಿದೆ. ಎಲ್ಲರಿಗೂ ನಲ್ಮೆಯ ಬರುವನ್ನು ಸಂಯೋಜಕರು ಕೋರುತ್ತಿದ್ದಾರೆ.

ವಿಶ್ವ ತುಳು ಸಮ್ಮೇಳನದ
ಮಾಧ್ಯಮಗೋಷ್ಠಿಗೆ ಡಾ.ಸದಾನಂದ ಪೆರ್ಲ

      ಮಂಗಳೂರು: ವಿಶ್ವ ತುಳು ಸಮ್ಮೇಳನವು ನವೆಂಬರ್ 23 ಮತ್ತು 24 ರಂದು ದುಬಾಯಿಯ ಐಸ್‍ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್‍ನಾಸರ್ ಲೀಸರ್‍ಲ್ಯಾಂಡ್‍ನಲ್ಲಿ ನಡೆಯಲಿದ್ದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಭಾಗವಹಿಸಲಿದ್ದಾರೆ.

      ಕೊಲ್ಲಿ ರಾಷ್ಟ್ರದ ತುಳುವರ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿರುವರು. ಕಬಿಕೂಟ, ತುಳು ಚಲನಚಿತ್ರ ಹಾಗೂ ರಂಗಭೂಮಿ, ಜಾನಪದ ಆಚರಣೆ ಗೋಷ್ಠಿ, ಮಾಧ್ಯಮ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

     ಮಾಧ್ಯಮ ಗೋಷ್ಠಿಯು ನವೆಂಬರ್ 24 ರಂದು ನಡೆಯಲಿದ್ದು ವಾಲ್ಟರ್ ಡಿ’ಸೋಜ ನಂದಳಿಕೆ ಅಧ್ಯಕ್ಷತೆ ವಹಿಸಲಿರುವರು. ಆಕಾಶವಾಣಿಯ ಡಾ.ಸದಾನಂದ ಪೆರ್ಲ, ಬಿ.ಕೆ.ಗಣೇಶ್ ರೈ, ಬಾಳಜಗನ್ನಾಥ ಶೆಟ್ಟಿ, ದಿನೇಶ್ ಅಮೀನ್ ಮಟ್ಟು ಮತ್ತು ಡಾ.ಉಮ್ಮರ್ ಉಪನ್ಯಾಸ ನೀಡಲಿರುವರು. “ತುಳು ಭಾಷೆ ಮತ್ತು ಸಂಸ್ಕøತಿ ಬೆಳವಣಿಗೆಗೆ ಧ್ವನಿ ಮಾಧ್ಯಮದ ಕೊಡುಗೆ” ಕುರಿತಾಗಿ ಡಾ.ಪೆರ್ಲ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದ ಇವರು ಕರ್ನಾಟಕ ಸರಕಾರದ ‘ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿ ಪುರಸ್ಕøತರು. ಕಾಸರಗೋಡು ಕನ್ನಡ ಹೋರಾಟದ ಕುರಿತಾಗಿ ಸಮಗ್ರ ಅಧ್ಯಯನ ನಡೆಸಿ ಮಹಾಪ್ರಬಂಧ ಮಂಡಿಸಿದ್ದು, ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಅನುಭವಿ. ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾಗಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ತುಳು ಭಾಷೆಯ ಸಮೃದ್ಧಿಗೆ ನೆರವಾಗಿದ್ದಾರೆ. ‘ಗಾಂಪಣ್ಣನ ತಿರ್ಗಾಟ’,ಸ್ವರಮಂಟಮೆ’, ‘ಸಿರಿದೊಂಪ’, ‘ಪದರಂಗೀತ’, ‘ಚಾವಡಿ ಮದಿಪು’ ಮುಂತಾದವುಗಳ ಮೂಲಕ ನಾಡಿನ ಸಾಂಸ್ಕøತಿಕ ಸಿರಿವಂತಿಕೆಯನ್ನು  ಪಸರಿಸುವ ಕಾರ್ಯನಿರತರಾಗಿದ್ದಾರೆ.

******

ಮೂಡುಬಿದಿರೆ ವಲಯ ಕ್ರೈಸ್ತ ಉದ್ಯಮಿಗಳ ಸಂಘಟನೆ  `ಸಾಧನಾ’ಸೇವಾರ್ಪಣೆ - ಸಕಾರಾತ್ಮಕ ಚಿಂತನೆಗಳಿಂದ ಉದ್ಯಮದ ಯಶಸ್ಸು ಸಾಧ್ಯ-ವಾಲ್ಟರ್ ನಂದಳಿಕೆ
ಮುಂಬಯಿ (ಮೂಡುಬಿದಿರೆ), ನ.19: ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ಕಳೆದ ವರ್ಷ ಆಚರಿಸಿದ್ದ ರಜತ ಸಂಭ್ರಮದ ಸವಿನೆನಪಿಗಾಗಿ ಮೂಡುಬಿದಿರೆ ವಲಯದ ಉದ್ಯಮಿಗಳ ಸಂಘಟನೆ ಆಗಿಸಿ ಆಸ್ತಿತ್ವಕ್ಕೆ ತರಲಾಗಿದ್ದ `ಸಾಧನಾ’ ಸಂಘಟನೆಯನ್ನು ಕಳೆದ ರವಿವಾರ ಇಲ್ಲಿನ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಉದ್ಘಾಟಿಸಿದರು.

ದಾಯ್ಜಿವಲ್ರ್ಡ್ ಮಾಧ್ಯಮ ಸಮೂಹದ ಸ್ಥಾಪಕ ವಾಲ್ಟರ್ ನಂದಳಿಕೆ ದಿಕ್ಸೂಚಿ ಭಾಷಣಕಾರರಾಗಿದ್ದು ಮಾತನಾಡಿ `ಉದ್ಯಮದಲ್ಲಿ ಹಿನ್ನಡೆಗಳೇನಿದ್ದರೂ ಅಲ್ಪಕಾಲಿಕ. ಸಕಾರಾತ್ಮಕ ಚಿಂತನೆ, ಅತ್ಯುತ್ತಮ ಆಲೋಚನೆಗಳು, ಸವಾಲುಗಳನ್ನು ಎದುರಿಸುವ ಛಲ ಉದ್ಯಮದಲ್ಲಿ ಯಶಸ್ಸಿನ ಮೆಟ್ಟಿಲುಗಳಾಗುತ್ತವೆ. ಸಾಧನಾ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ಯುವಕರು ಉದ್ಯಮ ರಂಗದಲ್ಲಿ ಯಶಸ್ವಿಯಾಗುವಂತಾಗಲಿ’ ಎಂದರು.

ಮುಖ್ಯ ಅತಿಥಿüಯಾಗಿದ್ದ ಎಂಸಿಸಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್ ಮಾತನಾಡಿ `ಉದ್ಯಮಿಗಳು ಒಗ್ಗಟ್ಟಿನಿಂದ ಇದ್ದು ಪರಸ್ಪರ ಸಹಕರಿಸುತ್ತಿದ್ದರೆ ಯಶಸ್ಸು ಸಾಧ್ಯ. ಸಾಧನಾ ಸಂಘಟನೆಯ ಮೂಲಕ ಸರಕಾರ ಉದ್ಯಮಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ, ಹಾಗೂ ಹೊಸದಾಗಿ ಉದ್ಯಮರಂಗವನ್ನು ಪ್ರವೇಶಿಸುವವರಿಗೆ ಮಾರ್ಗದರ್ಶನ ಲಭಿಸುವಂತಾಗಲಿ’ ಎಂದು ಶುಭಾರೈಸಿದರು.

ಸಾಧನಾ ಅಧ್ಯಕ್ಷÀ ಉದ್ಯಮಿ ರಾಜೇಶ್ ಮೆಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಹ್ಯಾರಿ ರೆಗೋ ಪ್ರಾಸ್ತಾವಿಕವಾಗಿ ಮಾತನಾಡಿ ಕಥೋಲಿಕ್ ಸಭಾ ವತಿಯಿಂದ ಸಾಧನಾ ಸಂಘಟನೆಗೆ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು.

 
ಮೆಲ್ವಿನ್ ಡಿಕೋಸ್ತಾ, ಜೆರಾಲ್ಡ್ ಡಿಕೋಸ್ತಾ, ಜೋಯ್ಲಸ್ ಡಿಸೋಜಾ ಅತಿಥಿüಗಳನ್ನು ಪರಿಚಯಿಸಿದರು. ಅವಿಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಾಧನಾ ಕಾರ್ಯದರ್ಶಿ ರೊನಾಲ್ಡ್ ಸೆರಾವೋ ವಂದಿಸಿದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi