Brief Udupi News with pictures
Kemmannu News Network, 05-01-2019 20:41:48
ಎಲ್ಲರೊಳಗೊಂದಾಗು ಮಂಕುತಿಮ್ಮಉಡುಪಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಎಮ್. ಬಿ. ಪಾಟೀಲ್ ಭೇಟಿ
ದಿನಾಂಕ 05-01-2019ನೇ ಶನಿವಾರ ಸಂಜೆ 6.00 ಗಂಟೆಗೆ ಕರ್ನಾಟಕ ರಾಜ್ಯ ಸರಕಾರದ ಗೃಹ ಸಚಿವರಾದ ಶ್ರಿ ಎಂ.ಬಿ. ಪಾಟೀಲ್ರವರು ಉಡುಪಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಜನಾರ್ದನ ತೋನ್ಸೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 05-01-2018 ಅಪರಾಹ್ನ 3 ಗಂಟೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಚಾಂತಾರು ಮತ್ತು ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನ ಸಭೆಯು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ರಘುಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಆರೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ನಾಯಕ್, ಉಪಾಧ್ಯಕ್ಷರಾದ ಉದಯ್ ಕಾಮತ್, ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ ರಾಜು, ತಹಶೀಲ್ದಾರಾದ ಶ್ರೀ ಕಿರಣ್ ಬೋರಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜನಸ್ಪಂದನ ಸಭೆಯಲ್ಲಿ ವಿವಿಧ ಇಲಾಖೆಯ ಸವಲತ್ತುಗಳನ್ನು ಮಾನ್ಯ ಶಾಸಕರು ಫಲಾನುಭವಿಗಳಿಗೆ ವಿತರಿಸಿದರು. 32 ಮಂದಿಗೆ ಸಂಧ್ಯಾ ಸುರಕ್ಷಾ, 41 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 11 ಮಂದಿಗೆ 94 ಸಿಸಿ ಅಡಿ ಹಕ್ಕು ಪತ್ರ, 22 ಮಂದಿಗೆ ನೀರಿನ ಟ್ಯಾಂಕಿ, 6 ಮಂದಿಗೆ ವೃದ್ದಾಪ್ಯ ವೇತನ, 6 ಮಂದಿಗೆ ಪ್ಲಾಸ್ಟಿಕ್ ಕುರ್ಚಿಗಳನ್ನು, 3 ಮಂದಿಗೆ ವಿಧವಾ ವೇತನ, ಒಬ್ಬರಿಗೆ ಮನಸ್ವಿನಿ ವೇತನಾ ಮತ್ತು ಪಶುಸಂಗೋಪನಾ ಇಲಾಖೆಯಿಂದ ಕುರಿ ಸಾಕಾಣೆಗೆ ಇಬ್ಬರಿಗೆ ತಲಾ 15,000 ನಂತೆ ಸಹಾಯಧನವನ್ನು ವಿತರಿಸಲಾಯಿತು. ನಂತರ ಸಭೆಯಲ್ಲಿ ಶಾಸಕರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಮೂಲಕ ಚರ್ಚಿಸಿ ಸೂಕ್ತ ಪರಿಹಾರ ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಬ್ರಹ್ಮಾವರ ಹೋಬಳಿಯ ಕಂದಾಯ ನಿರೀಕ್ಷರಾದ ಶ್ರೀ ಲಕ್ಷ್ಮೀ ನಾರಾಯಣ ಭಟ್ ಇವರು ನಿರೂಪಿಸಿದರು. ಹಾಗೂ ಈ ಕಾರ್ಯಕ್ರಮಕ್ಕೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಶ್ರೀ ದಿನೇಶ್ ಚಾಂತಾರು ಕಾರ್ಯಕ್ರಮ ಆಯೋಜನೆಗೆ ಸಂಪೂರ್ಣ ಸಹಕಾರ ನೀಡಿದರು.
ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ನಾವು ಕಟಿಬದ್ಧರಾಗೊಣ - ಪ್ರದೀಪ್ ಕುರ್ಡೇಕರ್
ಉದ್ಯಾವರ: ಇಂದು ಆಂಗ್ಲ ಮಾಧ್ಯಮದ ಸವಾಲನ್ನು ಎದುರಿಸಲು ಸಾಧ್ಯವಾಗದೆ ಕನ್ನಡ ಶಾಲೆಗಳು ಮುಚ್ಚುವ ಆತಂಕದ ಸ್ಥಿತಿಯಲ್ಲಿದೆ. ಕನ್ನಡ ಶಾಲೆಗಳು ಮುಚ್ಚಿದರೆ ನಮ್ಮ ಸಂಸ್ಕøತಿಯೇ ನಮ್ಮ ಮಕ್ಕಳು ಕಲಿಯದಂತಾಗುತ್ತದೆ. ಹಾಗಾಗಿ ಕನ್ನಡ ಶಾಲೆಗಳು ಮುಚ್ಚದಂತೆ ನಾವು ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಬೇಕೋ ಅವುಗಳನ್ನು ಮಾಡಬೇಕಾಗಿದೆ. ಕನ್ನಡ ಭಾಷೆಯನ್ನು ಕಲಿಯುವುದೆಂದರೆ ಅದು ಕೇವಲ ಭಾಷಾ ಕಲಿಕೆಯಲ್ಲ ಸಂಸ್ಕøತಿಯ ಕಲಿಕೆಯೂ ಆಗಿರುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ಖ್ಯಾತನಾಮರಾಗಿದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಬೇಡ ಎಂದು ಉಡುಪಿ ತಹಶೀಲ್ದಾರರಾದ ಶ್ರೀ ಪ್ರದೀಪ್ ಕುರ್ಡೇಕರ್ ಹೇಳಿದರು.
ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ “ವರ್ಷದ ಹರ್ಷ 158”ರ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅವರು ಮುಂದುವರಿಯುತ್ತಾ 158 ವರ್ಷಗಳ ಹಿಂದೆ ಈ ಶಾಲೆಯನ್ನು ಕಟ್ಟಿದ ಆ ಶಕ್ತಿಗಳಿಗೆ ತಲೆಬಾಗಬೇಕು. ಅವರ ಕನಸು ನನಸಾಗಿಸಲು ಊರ ಶಿಕ್ಷಣಾಭಿಮಾನಿಗಳು ಈ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಕನ್ನಡ ಮಾಧ್ಯಮಗಳು ನಶಿಸುತ್ತಿರುವ ಈ ಹೊತ್ತಿನಲ್ಲಿ ಕೂಡಾ ಸುಮಾರು 400 ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಇದೆ ಎಂದರೆ ಅದು ಈ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ. ಹಾಗಾಗಿ ಈ ಶಾಲೆ ಮುಂದಕ್ಕೂ ಬಾಳಿ ಬದುಕುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.
ಅತಿಥಿಗಳಾಗಿ ಆಗಮಿಸಿದ ಹಲಿಮಾ ಸಾಬ್ಜೂ ಆಡಿಟೋರಿಯಂ ಟ್ರಸ್ಟಿನ ಆಡಳಿತ ವಿಶ್ವಸ್ಥರಾದ ಶ್ರೀ ಅಬ್ದುಲ್ ಜಲೀಲ್ ಸಾಹೇಬರು ಮಾತನಾಡುತ್ತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಯಾಕೆಂದರೆ ನಾನು ಈ ಶಾಲೆಯ ಹಳೆ ವಿದ್ಯಾರ್ಥಿ. ನನ್ನ ಗತದ ನೆನಪುಗಳು ಈಗ ಮರುಕಳಿಸುತ್ತಾ ಇದೆ. ಸುಮಾರು 60 ವರ್ಷಗಳ ಹಿಂದೆ ಈ ಶಾಲೆಯ ವಿದ್ಯಾರ್ಥಿಯಾಗಿದ್ದ ನನಗೆ ಪಾಠ ಮಾಡಿದ ಗುರುಗಳು, ನಾನು ಆಡಿದ ಆಟ, ಗಳಿಸಿದ ಬಹುಮಾನ ಮತ್ತೊಮ್ಮೆ ನನಗೆ ನೆನಪಾಯಿತು. ನನ್ನ ಬದುಕಿನ ಯಶಸ್ಸಿನಲ್ಲಿ ನನಗೆ ಅಕ್ಷರವನ್ನು ಕಲಿಸಿದ ಈ ಶಾಲೆಯ ಪಾತ್ರ ಮಹತ್ತರವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಆಗಿ ಆಗಮಿಸಿದ ಹಳೆ ವಿದ್ಯಾರ್ಥಿ ಮೈಸೂರು ವಿ.ಜಿ.ಕೆ. ಮ್ಯೂಸಿಕ್ ಅಕಾಡಮಿಯ ನಿರ್ದೇಶಕರಾದ ಶ್ರೀ ವೇಣುಗೋಪಾಲ ಕೃಷ್ಣ ಅವರು ಮಾತನಾಡುತ್ತಾ ತನ್ನ ಬದುಕನ್ನು ರೂಪಿಸಲು ಈ ಶಾಲೆ ಹೇಗೆ ಸಹಕಾರಿಯಾಯಿತು ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿ ತನ್ನ ಗುರುಗಳನ್ನು ನೆನೆಪಿಸಿಕೊಂಡರು. ಕಛೇರಿಯ ಏಕತಾನತೆಯಿಂದ ಬೇಸತ್ತು ಸಂಗೀತ ಕ್ಷೇತ್ರವನ್ನು ಆಯ್ದುಕೊಳ್ಳಲು ನನಗೆ ಈ ಶಾಲೆಯಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ ಸಹಾಯವನ್ನು ಮಾಡಿತು ಎಂದ ಅವರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮುಂದೊಂದು ದಿನ ಅದು ತಮ್ಮ ಬದುಕನ್ನು ಕಟ್ಟಲು ಸಹಾಯವಾಗಬಹುದು. ನಮ್ಮ ಭವಿಷ್ಯ ರೂಪಿಸುವ ಹೊಣೆಗಾರಿಕೆ ನಮ್ಮದು ಎಂದು ನೀವು ಮುನ್ನಡೆಯಿರಿ ಎಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಲರ್ಸ್ ಸೂಪರ್ ವಾಹಿನಿಯ ಕನ್ನಡ ಕೋಗಿಲೆ ಸಂಗೀತ ರಿಯಾಲಿಟಿ ಶೋ ದಲ್ಲಿ ಸೆಮಿ ಫೈನಲನ್ನು ತಲುಪಿ ತನ್ನ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ ಶಾಲಾ 4ನೇ ತರಗತಿಯ ವಿದ್ಯಾರ್ಥಿ ಮಾ| ಲಿಖಿತ್ ಉಮೇಶ್ ಕರ್ಕೇರ ಅವರನ್ನು ಸಂಮಾನಿಸಲಾಯಿತು. ಶಾಲೆಗೆ ಆರ್ಥಿಕವಾಗಿ ಸಹರಿಸಿದ ದಾನಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಯು. ಆರ್. ಚಂದ್ರಶೇಖರ್, ಶಾಲಾಬಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್, ವಿದ್ಯಾರ್ಥಿ ನಾಯಕ ಪೂರ್ಣೇಶ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಚಾಲಕರಾದ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾರಾದ ಗಣಪತಿ ಕಾರಂತ್ ವರದಿಯನ್ನು ವಾಚಿಸಿದರು. ಹಿರಿಯ ಸಹ ಶಿಕ್ಷಕಿ ಹೇಮಲತಾ ಅವರು ವಂದಿಸಿದರು. ಸಹ ಶಿಕ್ಷಕಿ ಅನುರಾಧ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ಸುಣ್ಣದ ಸುತ್ತು (ನಿರ್ದೇಶನ ಉದ್ಯಾವರ ನಾಗೇಶ್ ಕುಮಾರ್, ಸಂಗೀತ ಯು. ಯಜ್ಞೇಶ್ ಆಚಾರ್ಯ) ನಾಟಕ ಪ್ರದರ್ಶನಗೊಂಡಿತು.
ಕನ್ನಡ ಪುಸ್ತಕ ಪ್ರಾಧಿಕಾರ: ಶೇ.50 ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ) : ಗಣರಾಜ್ಯೋತ್ಸವದ ಅಂಗವಾಗಿ 2019 ರ ಜನವರಿ ತಿಂಗಳಲ್ಲಿ ಪ್ರಾಧಿಕಾರದ ಎಲ್ಲ ಪುಸ್ತಕಗಳನ್ನು ಶೇ. 50% ರ ರಿಯಾಯಿತಿಯಲ್ಲಿ ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಎಲ್ಲಾ ಜಿಲ್ಲೆಯ ಸಹಾಯಕ ನಿರ್ದೆಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಾದ ಎಲ್ಲಾ ಜಿಲ್ಲಾವಾರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರಪಟ್ಟಿ ಆಹ್ವಾನ
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ) : ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿಗಳ ಕಚೇರಿ, ಉಡುಪಿ ಇಲ್ಲಿಗೆ ಎಂ.ಐ.ಎಸ್. ಸ್ಟಾಫ್ ನ್ನು ಒದಗಿಸುವ ಬಗ್ಗೆ ನೊಂದಾಯಿತ ಮಾನವ ಸಂಪನ್ಮೂಲ ಸಂಸ್ಥೆಯಿಂದ ದರಪಟ್ಟಿಯನ್ನು ಜನವರಿ 10 ವರೆಗೆ ಆಹ್ವಾನಿಸಲಾಗಿದೆ.
ದರಪಟ್ಟಿಗೆ ಸಂಬಂದಪಟ್ಟ ನಮೂನೆಗಳನ್ನು ಹಾಗೂ ನಿಬಂಧನೆಗಳನ್ನು ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿಗಳ ಕಚೇರಿಯಲ್ಲಿ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಕಾಣೆಯಾದವರ ಕುರಿತು
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ) :ಪರ್ವಿಜ್ ಅಹಮ್ಮದ್ (41 ವರ್ಷ) ಎಂಬುವವರು ಡಿಸೆಂಬರ್ 24 ರಂದು, ಮಿಶನ್ ಕಂಪೌಂಡ್, ಮಸೀದಿ ರಸ್ತೆ, ಉಡುಪಿ ಇಲ್ಲಿಂದ ಕಾಣೆಯಾಗಿದ್ದು, 173 ಸೆಂ.ಮೀ. ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಉರ್ದು, ಇಂಗ್ಲೀಷ್, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
ಅಪರಿಚಿತ, ಮೃತ ವ್ಯಕ್ತಿಯ ಮಾಹಿತಿ ಪತ್ತೆ ಬಗ್ಗೆ
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ) : ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾದ ದಾಖಲಾದ ಭಾಸ್ಕರ (42 ವರ್ಷ) ಎಂಬ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ವಾರಸುದಾರರು ಯಾರಾದರು ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಪ್ರಕಟಣೆ ತಿಳಿಸಿದೆ.
ಮೃತ ವ್ಯಕ್ತಿಮಾಹಿತಿ ಪತ್ತೆ ಬಗ್ಗೆ
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ) : ಜನವರಿ 3 ರಂದು ರಾತ್ರಿ ಪರ್ಕಳ ಹೈಸ್ಕೂಲ್ ಸಮೀಪ 40-45 ವರ್ಷ ವಯಸ್ಸಿನ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿರುವುದರಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದೇಹವನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ, ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ(9480805401), ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ( 9480805420), ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ(9480805448), ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ( 9480805475) ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ. 0820-2526444 ಅನ್ನು ಸಂಪರ್ಕಿಸುವಂತೆ ಮಣಿಪಾಲ ಪೊಲೀಸ್ ಉಪ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ
ಉಡುಪಿ, ಜನವರಿ 3 (ಕರ್ನಾಟಕ ವಾರ್ತೆ) : ಅಂತರ್ಜಲ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಅಂತರ್ಜಲ ಕಚೇರಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ಮರು ಬಳಕೆ, ನಿರ್ವಹಣೆ, ಅತಿಬಳಕೆ, ಅಂತರ್ಜಲ ಮಾಲಿನ್ಯ ನಿಯಂತ್ರಣ ಹಾಗೂ ತೆರದ/ತ್ಯಕ್ತ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ಜಾಗರೂಕತೆ ಕುರಿತು 2018-19ನೇ ಸಾಲಿನ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ ಕಾರ್ಯಕ್ರಮವು ಜನವರಿ 4 ರಂದು ಬೆಳಿಗ್ಗೆ 10 ಕ್ಕೆ ಅಂಪಾರಿನ ಸಂಜಯ ಗಾಂಧಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕುಂದಾಪುರ ವಲಯ ಕೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಉದ್ಘಾಟಿಸಲಿದ್ದು, ಅಂಪಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
ಉಡುಪಿ, ಜನವರಿ 3 (ಕರ್ನಾಟಕ ವಾರ್ತೆ) :ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ.ನಾಗಲಕ್ಷ್ಮೀ ಬಾಯಿ ಜನವರಿ 4 ಮತ್ತು 5 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಜನವರಿ 4 ರಂದು ಸಂಜೆ ಕುಂದಾಪುರಕ್ಕೆ ಆಗಮಿಸಿ, ರಾತ್ರಿ 8.30ಕ್ಕೆ ಸ್ಥಳೀಯ ಕಾರ್ಯಕ್ರದಲ್ಲಿ ಭಾಗವಹಿಸಿ, ನಂತರ ಕುಂದಾಪುರ ಅಥಿತಿ ಗೃಹದಲ್ಲಿ ವಾಸ್ಥವ್ಯ ಮಾಡುವರು. ಜ. 5 ರಂದು ಬೆಂಗಳೂರಿಗೆ ತೆರಳುವರು.
ಆಹಾರ ಪರವಾನಗಿ/ ನೊಂದಾವಣೆ ಮಾಡುವ ಬಗ್ಗೆ
ಉಡುಪಿ, ಜನವರಿ 3 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಆಗಸ್ಟ್ 5 ರಿಂದ ಜಾರಿಗೆ ಬಂದಿರುವುದರಿಂದ ಈ ಕಾಯ್ದೆಯಡಿಯಲ್ಲಿ ಆಹಾರ ಪದಾರ್ಥಗಳ ವ್ಯವಹಾರಗಳು, ಪರವಾನಗಿ ಮತ್ತು ನೊಂದಣಿ ನಿಯಂತ್ರಣ 2011ರ ಕಲಂ 31ರ ಅಡಿಯಲ್ಲಿ ಎಲ್ಲಾ ಬಗೆಯ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾಣಿಗೆ ಹಾಗೂ ನೊಂದಾವಣಿ ಮಾಡುವುದು ಕಡ್ಡಾಯವಾಗಿರುತ್ತದೆ. ನೋಂದಾವಣಿ ಮತ್ತು ಲೈಸೆನ್ಸ್ ಮಾಡಿಸಲು ಜನವರಿ 31 ಕೊನೆಯ ದಿನವಾಗಿರುತ್ತದೆ.
ಜಿಲ್ಲೆಯಲ್ಲಿ ಎಲ್ಲಾ ಅಂಕಿತ ಅಧಿಕಾರಿಗಳು ಲೈಸೆನ್ಸ್ ಮಾಡಿಸುವ ಪ್ರಾಧಿಕಾರಿಯಾಗಿದು, ಆಹಾರ ಸುರಕ್ಷತಾ ಅಧಿಕಾರಿಗಳು ನೊಂದಾವಣಿ ಮಾಡುವ ಅಧಿಕಾರಿಗಳಾಗಿರುತ್ತಾರೆ. ಜನವರಿ 31 ರ ಒಳಗೆ ಆಹಾರ ಪರವಾನಗಿ/ನೊಂದಾವಣಿ ಮಾಡಿಸಿಕೊಳ್ಳದಿದ್ದಲ್ಲಿ 5 ಲಕ್ಷ ರೂ.ಗಳ ದಂಡ ಮತ್ತು 6 ತಿಂಗಳು ಸೆರೆವಾಸ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು ಆಹಾರ ನೊಂದಾವಣಿ/ಪರವಾನಗಿ ಪಡೆಯತಕ್ಕದ್ದು. ಎಲ್ಲಾ ಬೇಕರಿಗಳು, ಬಾರ್ ಆಂಡ್ ರೆಸ್ಟೋರೆಂಟ್ಗಳು, ವೈನ್ ಸ್ಟೋರ್ಗಳು, ಹೋಟೆಲ್ಗಳು, ಕ್ಯಾಂಟೀನ್ಗಳು, ಕ್ಲಬ್ಗಳು, ತಂಪು ಪಾನೀಯ ತಯಾರಿಕಾ ಘಟಕಗಳು, ಪ್ಯಾಕೇಜ್ಡ್ ಡ್ರಿಂಕ್ಸ್ ನೀರಿನ ಘಟಕಗಳು, ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ ಕಾಲೇಜು ಕಚೇರಿಯ ಕ್ಯಾಂಟೀನ್, ವಸತಿ ನಿಲಯಗಳು, ನ್ಯಾಯ ಬೆಲೆ ಅಂಗಡಿ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯಗಳು, ಕೋಳಿ ಮೀನು ಮತ್ತು ಮಾಂಸದ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಧಾರ್ಮಿಕ ಸ್ಥಳಗಳು, ಸಮುದಾಯ ಭವನ, ಕಲ್ಯಾಣ ಮಂಟಪ ಇತರ ಸ್ಥಳಗಳಲ್ಲಿ ಊಟದ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಮೀನು ಹಾಗೂ ಇತರ ಆಹಾರ ಪದಾರ್ಥಗಳ ಸಾಗಣೆದಾರರು, ಆಹಾರ ಉಗ್ರಾಣ ಸಂಘಟನೆಗಳ ಎಲ್ಲಾ ಆಹಾರ ಸಂಸ್ಕರಣೆ ಘಟಕಗಳು ಮತ್ತು ಆಹಾರ ಪದಾರ್ಥಗಳ ಅಮದುದಾರರು, ಎಲ್ಲಾ ಆಹಾರ ಪದಾರ್ಥ ವಹಿವಾಟುದಾರರು ಕಡ್ಡಾಯವಾಗಿ ಜನವರಿ 31 ರ ಒಳಗೆ ನೊಂದಾವಣಿ, ಪರವಾನಗಿ ನವೀಕರಣ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳು(ಎಫ್.ಎಸ್.ಎಸ್.ಎ), ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಚೇರಿ, ಕ್ಷಯರೋಗ ನಿಯಂತ್ರಣ ಕಟ್ಟಡ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2522880, ಡಾ.ವಾಸುದೇವ್, ಅಂಕಿತ ಅಧಿಕಾರಿಗಳು ದೂ.ಸಂಖ್ಯೆ: 9449843271, ಉಚಿತ ಕರೆ ಸಂಖ್ಯೆ: 1800-112100.
ತಾಲೂಕುವಾರು ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ: ಉಡುಪಿ ತಾಲೂಕು-ಕೆ.ಎಸ್.ವೆಂಕಟೇಶ್(9449996945), ಕಾರ್ಕಳ ತಾಲೂಕು-ಡಾ.ಕೃಷ್ಣಾನಂದ ಶೆಟ್ಟಿ(8277505892), ಕುಂದಾಪುರ ತಾಲೂಕು –ಡಾ.ನಾಗಭೂಷಣ್, ಉಡುಪಿ(8277505911) ಅನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯಡಕ: ರಾಷ್ಟ್ರೀಯ ಸೇವಾ ಯೋಜನೆ-ಸಮಾರೋಪ ಸಮಾರಂಭ
ಉಡುಪಿ, ಜನವರಿ 3 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುವ ಕಾರ್ಯವನ್ನು ಮಾಡುತ್ತಿದ್ದು, ಇದರೊಂದಿಗೆ ಭಾರತದ ಜೀವನಾಡಿಯಾದ ಗ್ರಾಮಗಳ ಅಭಿವೃದ್ಧಿ ಯುವ ಸಮೂಹವನ್ನು ಪ್ರೇರೇಪಿಸಬೇಕು ಎಂದು ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತರಾದ ಕುದಿ ಶ್ರೀನಿವಾಸ ಭಟ್ ಸಲಹೆ ನೀಡಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಲೂರ್ಡ ಹಿರಿಯ ಪ್ರಾಥಮಿಕ ಶಾಲೆ ಕಣಜಾರು ಇಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಇತ್ತೀಚೆಗೆ ಯುವಕರು ಕೃಷಿ ಕೇತ್ರದಿಂದ ವಿಮುಖರಾಗುತ್ತಿದ್ದು, ವೈಜ್ಞಾನಿಕ ಕೃಷಿ ವಿಧಾನ ಅಳವಡಿಸಿಕೊಂಡು ಲಾಭಗಳಿಸಲು ಅವಕಾಶವಿದೆ ಇದರಿಂದ ಗ್ರಾಮಗಳ ಅಭಿವೃದ್ಧಿಯೂ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಸುಜಯಾ ಕೆ.ಎಸ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಚೆ ಮಾಲತಿ ಜೆ.ಶೆಟ್ಟಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಆಚಾರ್ಯ, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಕಣಜಾರು, ಚರ್ಚ್ ಕಾರ್ಯದರ್ಶಿ ರಾಬರ್ಟ್ ಮೆಂಜಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಗಾಯತ್ರಿ ಮತ್ತು ತಂಡ ಪ್ರಾರ್ಥಿಸಿದರು. ಶಿಬಿರಾಧಿಕಾರಿ ಸುಭಾಷ್ ಹೆಚ್ ಕೆ. ಸ್ವಾಗತಿಸಿದರು. ಎನ್.ಎಸ್.ಎಸ್. ನಾಯಕ ರಾಹುಲ್ ಕೆ ಎಸ್ ವರದಿ ವಾಚಿಸಿದರು. ಶಿಬಿರಾಧಿಕಾರಿ ಪ್ರವೀಣ್ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಾವರ -ಸ್ವಚ್ಛತ ಪಾಕ್ಷಿಕ ಕಾರ್ಯಕ್ರಮ
ಉಡುಪಿ, ಜನವರಿ 3 (ಕರ್ನಾಟಕ ವಾರ್ತೆ) : ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಉಡುಪಿ ಜಿಲ್ಲೆ ಇವರ ವತಿಯಿಂದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಛೇರಿಯ ಸ್ವಚ್ಛತೆಯಿಂದ ಆರಂಭಗೊಂಡು ಕಛೇರಿ ಆವರಣ, ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ಪಂಚಾಯತಿ ಆವರಣ, ರೈತರಿಗೆ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ನೀಡಿದಲ್ಲದೆ ಕಸಗಳನ್ನು ಒಟ್ಟು ಮಾಡಿ ಅದರಲ್ಲಿ ಕೊಳೆಯುವ ಮತ್ತು ಕೊಳೆಯದೆ ಇರುವ ವಸ್ತುಗಳನ್ನು ಬೇರ್ಪಡಿಸಿ, ಕಸದಿಂದ ರಸವೆಂಬಂತೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತುಪಡಿಸಿ ವಿವಿಧ ಕೃಷಿ ತ್ಯಾಜ್ಯಗಳನ್ನು ಮತ್ತು ಕಸಗಳನ್ನು ಕಾಂಪೋಸ್ಟ್ ಮಾಡುವ ಮತ್ತು ಎರೆಗೊಬ್ಬರ ತಯಾರಿಸುವ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಯನ್ನು ತೆಂಕನಿಡಿಯೂರು ಗ್ರಾಮ ಪಂಚಾಯತಿಗೆ ಒಳಪಡುವ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಮಾಹಿತಿ ನೀಡಲಾಯಿತು.
ಡಿಸೆಂಬರ್ 21 ಮತ್ತು 22 ರಂದು ರೈತ ದಿನಾಚರಣೆಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಅದೇ ರೀತಿ ಕೊಳಚೆ ನೀರಿನ ನಿರ್ವಹಣೆ ಮತ್ತು ಅಡುಗೆ ಕೋಣೆಯಿಂದ ಹೊರಬರುವಂತಹ ತ್ಯಾಜ್ಯ ನೀರಿನ ಸದ್ಬಳಕೆಯ ಬಗ್ಗೆ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗೆ ಮತ್ತು ರೈತ ಬಾಂಧವರಿಗೆ ತಿಳಿಸುತ್ತಾ ಹೈನುಗಾರಿಕಾ ಘಟಕದಿಂದ ಹೊರ ಬರುವಂತಹ ಗೋಮೂತ್ರ ಮತ್ತು ಹಟ್ಟಿ ತೊಳೆದ ನೀರಿನ ಸಂಗ್ರಹ ಮತ್ತು ಸದುಪಯೋಗದ ಬಗ್ಗೆ ಮಾಹಿತಿ ಕೊಡಲಾಯಿತು.
ಸ್ವಚ್ಛತಾ ಅಭಿಯಾನದ ಬಗ್ಗೆ ಹಮ್ಮಿಕೊಂಡಂತಹ ಕಾರ್ಯಕ್ರಮಗಳ ಬಗ್ಗೆ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮತ್ತು ಉಡುಪಿ ಶಾಸಕ ಕೆ. ರಘುಪತಿ ಭಟ್, ಮತ್ತು ಉಡುಪಿ ಪಟ್ಟಣ ಪಂಚಾಯತ್ ಸದಸ್ಯರಿಗೆ ದೊಡ್ಡಣಗುಡ್ಡೆಯಲ್ಲಿ ನಡೆದ ಮೇಲ್ಛಾವಣಿ ತರಕಾರಿ ಕೃಷಿ ಕಾರ್ಯಕ್ರಮದಲ್ಲಿ ವಿವರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link