Brief Mumbai, Mangalore News with pictures
Kemmannu News Network, 18-06-2019 18:59:29
ಡಾ| ರಜನಿ ವಿ.ಪೈ ಅವರಿಗೆ `ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019’
ಮುಂಬಯಿ,ಜೂ.17: ಕರ್ನಾಟಕ ಮೈಸೂರು ಅಲ್ಲಿನ ರೋಟರಿ ಸಭಾಂಗಣದಲ್ಲಿ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ಇತ್ತೀಚೆಗೆ (ಜೂ.09) ಆಯೋಜಿಸಿದ್ದ ಪ್ರೇಮಕವಿ ಕೆ.ಎಸ್.ನ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಂಬಯಿ ಅಲ್ಲಿನ ಹೆಸರಾಂತ ಸಮಾಜ ಸೇವಕಿ ಡಾ| ರಜನಿ ವಿ. ಪೈ ಇವರಿಗೆ ಹೊರನಾಡಿನ ಸಮಾಜ ಸೇವೆಗಾಗಿ "ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019"
ಪ್ರದಾನಿಸಿ ಗೌರವಿತು.
ಈ ಕಾರ್ಯಕ್ರಮದಲ್ಲಿ ನಾಡೋಜ ಡಾ| ಮಹೇಶ್ ಜೋಶಿ, ಡಾ| ಲತಾ ರಾಜಶೇಖರ್, ಡಾ| ಸಿ.ಪಿ.ಕೆ ಹಾಗೂ ಅನೇಕ ಹಿರಿಯ ಸಾಹಿತಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಡಾ| ಭೇರ್ಯ ರಾಮಕುಮಾರ್ (ಅಧ್ಯಕ್ಷರು) ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ರಜನಿ ಪೈ ಅವರು ಕಳೆದ ಒಂದು ದಶಕದಿಂದ ಮುಂಬಯಿಯಲ್ಲಿನ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ (ಮಾಟುಂಗ) ಇದರ ಮಹಿಳಾ ವಿಭಾಗಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬಯಿ ಮುಲುಂಡ್ ಪ್ರದೇಶದಲ್ಲಿ ನೆಲೆಸಿರುವ ಇವರು ಮಹಿಳೆ, ಮಕ್ಕಳಿಗಾಗಿ, ಬಡ ಮತ್ತು ದಲಿತರಿಗಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
ರಜನಿ ಪೈ ಅವರ ಸೇವೆಗಾಗಿ ಡಾಕ್ಟರೇಟ್, ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್ ಅಚೀವ್ಮೆಂಟ್ ಪ್ರಶಸ್ತಿ ಹೀಗೆ ಅನೇಕ ಪುರಸ್ಕಾರಗಳು ದೊರೆತಿವೆ.
ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ಮುಂಬಯಿ, ಜೂ.17: ಕರ್ನಾಟಕ ಕರಾವಳಿಯ ಹಿರಿಯ ಸಾಮಾಜಿಕ ಚಿಂತಕ, ಜಾತ್ಯಾತೀತತೆ, ಸಮಾಜವಾದಿ, ಜನಪರ ನಿಸ್ವಾರ್ಥ ಸಾಮಾಜಿಕ ಹೋರಾಟಗಾರ, ಭಾರತ ರಾಷ್ಟ್ರದ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ನೇತಾರ ಹೆಚ್.ಡಿ ದೇವೇಗೌಡ ಪರಮಾತ್ಮ ಮಿತ್ರ, ಮಂಗಳೂರು ಅರ್ಬನ್ ಡೆವಲಪ್ಮೆಂಟ್ ಅಥೋರಿಟಿ (ಮುಡಾ) ಇದರ ಮಾಜಿ ಅಧ್ಯಕ್ಷ ಎಂ.ಸಂಜೀವ (86.) ಇಂದಿಲ್ಲಿ ಮುಂಜಾನೆ ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ಮಂಗಳೂರು ಅಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು.
ಇತ್ತೀಚೆಗಷ್ಟೇ ಮಂಗಳೂರು ನಗರದಲ್ಲಿನ ಯುನಿಟಿ ಆಸ್ಪತ್ರೆಯಲ್ಲಿ ವೃದ್ಧಾಪ್ಯದಿಂದ ದಾಖಲಾಗಿ ಶುಶೂಷೆ ಪಡೆಯುತ್ತಿದ್ದಾಗ ಹೆಚ್.ಡಿ ದೇವೇಗೌಡ ಅವರು ಸಂಜೀವರನ್ನು ಭೇಟಿಗೈದು ಎಂ.ಸಂಜೀವ ಅವರ ಜೀವನ ಅನುಪಮವಾದುದು. ನಾವು ಸಮಾನ ವಯಸ್ಕರಾಗಿ, ಸಮಕಾಲೀನರಾಗಿ, ಸಮಾನ ಮನಸ್ಕರಾಗಿ, ಒಂದೇ ರೀತಿಯ ರಾಜಕಾರಣ ಆಯ್ಕೆ ಮಾಡಿಕೊಂಡ ಬಗ್ಗೆ ಗುಣಗಾನಗೈದು ಅವರಿಬ್ಬರ ಒಡನಾಟವನ್ನು ಬಣ್ಣಿಸಿದ್ದರು.
ಇದೇ ಸಂದರ್ಭದಲ್ಲಿ ಸಂಜೀವರ ತಂಗಿ ಸುಕಲಾಕ್ಷಿ ಸುವರ್ಣ ರಚಿತ ಎಂ.ಸಂಜೀವರ ಜೀವನ ಕಥನ `ಸಂಜೀವನ’ ಜನನಾಯಕ ಎಂ.ಸಂಜೀವ ಜೀವನ ಕಥನ ಕೃತಿಯನ್ನು ದೇವೇಗೌಡರು ಬಿಡುಗಡೆ ಗೊಳಿಸಿದ ಸಂಜೀವÀರಂಥಹ ಒಳ್ಳೆಯ ಜನ ಇಂದಿನ ದಿನಗಳಲ್ಲಿ ಕಾಣ ಸಿಗುವುದು ಕಷ್ಟ. ಅವರಿಗೆ ಇಂಥಹ ಕಷ್ಟ ಬರಬಾರದಿತ್ತು. ಶ್ರೀಹರಿ ತಮಗೆ ಆರೋಗ್ಯ ದಯಪಾಲಿಸಿ ತಾವು ಆದಷ್ಟು ಬೇಗ ಗುಣಮುಖರಾಗುವಂತೆ ಹಾರೈಸಿದ್ದರು.
ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ಸದಾ ಸರಕಾರಗಳಿಗೆ ಮನವರಿಕೆ ಮಾಡಿ ಕೊಡುತ್ತಿದ್ದ ಸಂಜೀವರು ದಕ್ಷಿಣ ಕನ್ನಡ ಜಿಲ್ಲೆಯ ಬಾಡಿಗೆದಾರ ಸಂಘದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಆಯ್ಕೆ ಸಾರ್ವಜನಿಕ ಬದುಕಿನ ಹೋರಾಟಗಾರರಾಗಿ ರೂಪುಗೊಂಡಿದ್ದ ಸಂಜೀವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸ್ವರ್ಗೀಯ ರಾಮಕೃಷ್ಣ ಹೆಗಡೆ ಮತ್ತು ದೇವರಾಜು ಅರಸು ಅವರ ಒಡನಾಡಿ ಆಗಿದ್ದರು.
ಮೃತರು ಅವಿವಾಹಿತರಾಗಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಸೋಮವಾರ ಸಂಜೆ ಅವರ ನಿವಾಸವಾದ ಕದ್ರಿ ಅಲ್ವಾರೆಸ್ ರಸ್ತೆಯಲ್ಲಿನ ಸ್ವಸ್ತಿಕ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದ್ದು ಮಾಜಿವರುಗಳಾದ ಸಚಿವ ಕೆ.ಅಮರನಾಥ ಶೆಟ್ಟಿ, ವಿನಯಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ರಾಜಕೀಯ ಧುರೀಣರಾದ ಹರೀಶ್ಕುಮಾರ್ ಬೆಳ್ತಂಗಡಿ, ಐವಾನ್ ಡಿಸೋಜಾ, ಹರಿಕೃಷ್ಣ ಬಂಟ್ವಾಳ, ಎಸ್.ಸದಾಶಿವ್, ಸಹೋದರಿ ಕೃಪಾ ಭೋಜರಾಜ್, ಕುಳಾಯಿ ಭೋಜರಾಜ್ ಥಾಣೆ ನೂರಾರು ಗಣ್ಯರು, ರಾಜಕಾರಣಿಗಳು, ಮುಖಂಡರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಬಂಧುಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದÀು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದರು. ಬಳಿಕ ಸಂಜೆ ವೇಳೆಗೆ ಕದ್ರಿ ರುಧ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ - ಸಮಾಜಮುಖಿ ಕಾರ್ಯ: ಐಕಳ ಹರೀಶ್ ಶೆಟ್ಟಿ- ಸುರತ್ಕಲ್ನಲ್ಲಿ ಎರಡು ಮನೆಗಳ ಹಸ್ತಾಂತರ
ಸುರತ್ಕಲ್: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಮುಖಿ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿದೆ. ಅದಕ್ಕೆ ಎಲ್ಲರ ಸಹಕಾರವೂ ಬೇಕಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರದಲ್ಲಿ ಚೇಳ್ಯಾರ್ ಖಂಡಿಗೆ ಮತ್ತು ಬಾಳ ಒಟ್ಟೆಕಾಯರ್ನಲ್ಲಿ ನಿರ್ಮಿಸಿದ ಎರಡು ಮನೆಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ಸಮಾಜದಲ್ಲಿ ಬಡವರನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ, ವೈದ್ಯಕೀಯಕ್ಕೆ ಹಾಗೂ ಮನೆ ನಿರ್ಮಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಹಾಯ ಮಾಡುತ್ತಾ ಬಂದಿದೆ. ಅಲ್ಲದೇ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುವ ಕೆಲಸ ಕಾರ್ಯಗಳೂ ನಡೆದಿದೆ ಎಂದು ಅವರು ತಿಳಿಸಿದರು. ಬೇರೆ ಬೇರೆ ಬಂಟರ ಸಂಘಗಳಿಂದ ಬರುತ್ತಿರುವ ಅರ್ಜಿಗಳನ್ನು ಪರಿಶೀಲಿಸಿ ನೆರವು ನೀಡಲಾಗುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಚೇಳ್ಯಾರ್ ಖಂಡಿಗೆ ನಿವಾಸಿ ಹರೀಶ್ ಶೆಟ್ಟಿ ಮತ್ತು ಬಾಳ ಒಟ್ಟೆಕಾಯರ್ ನಿವಾಸಿ ವಿಜಯಲಕ್ಷ್ಮೀ ಶೆಟ್ಟಿ ಅವರಿಗೆ ಕಟ್ಟಿ ಕೊಡಲಾದ ಮನೆಯನ್ನು ಹಸ್ತಾಂತರಿಸಲಾಯಿತು. ಮನೆಯ ಕೀ ಯನ್ನು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ನೀಡಿದರು.
ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ ದಾಸ ಶೆಟ್ಟಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜಾ ಹೊಸಬೆಟ್ಟು, ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ, ಕಾರ್ಯದಶಿ ಲೋಕಯ್ಯ ಶೆಟ್ಟಿ ಮುಂಚೂರು, ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಖಂಡಿಗೆಬೀಡು ಆದಿತ್ಯ ಮುಕಾಲ್ದಿ, ಬಂಟರ ಸಂಘದ ಪದಾಧಿಕಾರಿಗಳಾದ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸುಧಾಕರ ಶೆಟ್ಟಿ ಚೆಳ್ಯಾರು, ಪ್ರವೀಣ್ ಶೆಟ್ಟಿ , ರತ್ನಾಕರ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ಜನಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ : ಜಯ ಸಿ.ಸುವರ್ಣ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.16: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇದರ ಮಹಾಸಭೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಭವನದಲ್ಲಿ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆಯಲ್ಲಿ ಜರಗಿದ್ದು ಸಭೆಯಲ್ಲಿ 2019 ಹಾಗೂ 2021ರ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ನಡೆಸಲ್ಪಟ್ಟಿದ್ದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ನೂತನ ಅಧ್ಯಕ್ಷರಾಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ನಿವೃತ್ತ ಸಹಕಾರಿ ಅಧಿಕಾರಿ ಚಂದ್ರಶೇಖರ ಸುವರ್ಣ ಅವರು ಚುನಾವಣಾಧಿಕಾರಿಯಾಗಿ ಅಯ್ಕೆ ಪ್ರಕ್ರಿಯೆ ನಡೆಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಮಾಜದ ಸಂಘಟನೆಯನ್ನು ಕಟ್ಟಿಕೊಂಡು ಒಂದಾಗಿ ದುರ್ಬಲ ವರ್ಗದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ ಎಂದು ಮಹಾಮಂಡಲದ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಎಂದು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ - ಪ್ರತಿಸ್ಪರ್ಧಿ ಕಣದ ಮೂವರೂ ಉಮೇದುವಾರರೂ ಪರಾಜಿತ
ಮುಂಬಯಿ, ಜೂನ್.17: ಮಯಾನಗರಿ ಮುಂಬಯಿಯಲ್ಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಘಗಳಲ್ಲೇ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಎಂದೆಣಿಸಿ ಒಂಬತ್ತನೇ ದಶಕದತ್ತ ಮುನ್ನಡೆಯುತ್ತಿರುವ ಕರ್ನಾಟಕ ಸಂಘ ಮುಂಬಯಿ ಇದರ 2019-22ರ ಮೂರು ಸಾಲಿನ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಇಂದಿಲ್ಲಿ ಚುನಾವಣೆ ನಡೆಯಿತು.
ಹೊರನಾಡಿನಲ್ಲಿ ಎಲ್ಲಾ ಜಾತಿ-ಮತ, ಸಮುದಾಯಗಳ ಪ್ರಾತಿನಿಧ್ಯ ಹೊಂದಿರುವ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆಗೆ ನಗರದ ಮಾಟುಂಗಾ ಪಶ್ಚಿಮದ ಟಿ.ಹೆಚ್.ಕಟರಿಯಾ ಮಾರ್ಗದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಆವರಣದಲ್ಲಿ ಪೂರ್ವಾಹ್ನದಿಂದ ಸಂಜೆ ವರೆಗೆ ಮತದಾನ ನಡೆಸಲ್ಪಟ್ಟಿತು. ಶಾಂತಯುತವಾಗಿಯೇ ನಡೆದ ಮತದಾನದಲ್ಲಿ ಸುಮಾರು 500 ಸದಸ್ಯರು ಮತ ಚಲಾಯಿಸಿದರು.
ಹಾಲಿ ಅಧ್ಯಕ್ಷ ಮನೋಹರ ಎಂ.ಕೋರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು 355 ಮತಗಳನ್ನು ಪಡೆದು ವಿಜೇತರೆಣಿಸಿದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ರಾಮೇಶ್ವರ ಎನ್.ಹತ್ತರ್ಕರ್ ಅವರು ಬರೇ 121 ಮತಗಳನ್ನು ಪಡೆದು ಹೀನಾಯವಾಗಿ ಪರಾಜಿತಗೊಂಡÀರು. ಅಧ್ಯಕ್ಷ ಸ್ಥಾನದಲ್ಲಿ 24 ಮತಗಳು ಅಸಿಂಧುಗೊಂಡವು. ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರು ಸೆÉೀರಿದಂತೆ ಅನೇಕ ಗಣ್ಯ ಸದಸ್ಯರು ಆಗಮಿಸಿ ಮತ ಚಲಾಯಿಸಿದರು. ಎಸ್.ಬಿ ರಾಮಣ್ಣ, ಸುಧಾಕರ ಮೈಂದನ್ ಮತ್ತು ಸದಾನಂದ ಅವಿೂನ್ ಚುನಾವಣಾ ಅಧಿಕಾರಿಗಳಾಗಿದ್ದು ಸಂಜೆ ವೇಳೆಗೆ ಚುನಾವಣಾ ಫಲಿತಾಂಶ ಪ್ರಕಟಿಸಿದ್ದರು.
ಸಾಮಾನ್ಯ ವಿಭಾಗದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಹಾಲಿ ಆಡಳಿತ್ವ ತಂಡದ ಪರವಾಗಿ ಅಭ್ಯಥಿರ್üಗಳಾಗಿದ್ದ ನರಸಿಂಹ ಎಂ.ಗುಡಿ (332), ಸೋಮನಾಥ ಸಿ.ಹಲಗತ್ತಿ (326), ಸುಂದರ ಸಿ.ಕೋಟ್ಯಾನ್ (361), ವಿದ್ಯಾ ವಿ. ಚಿಟಗುಪಿ (327) ವಿಜೇತರೆಣಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ವಿಶ್ವನಾಥ ಎಸ್.ಶೆಟ್ಟಿ (151) ಮತ್ತು ಹ್ಯಾರಿ ರೋಸಾರಿಯೋ ಸಿಕ್ವೇರಾ (141) ಮತಗಳನ್ನು ಪಡೆದು ಪರಾಜಿತ ಗೊಂಡರು. ಸಂಘದ ಸಂವಿಧಾನಾತ್ಮಕ ನಿಯಮಗಳಾನುಸರವೇ ಚುನಾವಣೆ ನಡೆಸಲ್ಪಟ್ಟಿದ್ದು, ಈ ಬಾರಿ ಮತದಾರರ ಮನವೊಲಿಸುವಲ್ಲಿ ಪ್ರತಿಸರ್ಧಿಗಳು ಭಾರೀ ಪ್ರಯತ್ನ ನಡೆಸಿದ್ದು, ಪರಿಣಾಮವಾಗಿ ಮತದಾನದಲ್ಲಿ ಏರಿಕೆ ಕಂಡಿತ್ತು.
ಪ್ರಸ್ತುತ ಮನೋಹರ ಎಂ.ಕೋರಿ (ಅಧ್ಯಕ್ಷರು) ಡಾ| ಈಶ್ವರ್ ಅಲೆವೂರು (ಉಪಾಧ್ಯಕ್ಷರು), ಡಾ| ಭರತ್ಕುಮಾರ್ ಪೆÇಲಿಪು (ಗೌರವ ಕಾರ್ಯದರ್ಶಿ), ಅಮರೇಶ್ ಸಿ.ಪಾಟೀಲ್ (ಗೌರವ ಜೊತೆ ಕಾರ್ಯದರ್ಶಿ), ನ್ಯಾ| ಎಂ.ಡಿ ರಾವ್ (ಗೌರವ ಕೋಶಾಧಿಕಾರಿ), ದಿನೇಶ್ ಎ.ಕಾಮತ್ (ಗೌರವ ಜೊತೆ ಕೋಶಾಧಿಕಾರಿ) ಪದಾಧಿಕಾರಿಗಳಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ| ಎಸ್.ಕೆ ಭವಾನಿ, ಸುಧಾಕರ್ ಪಾಲನ್, ರಾಜೀವ್ ಎನ್.ನಾಯಕ್, ಲಲಿತಾ ಪಿ.ಅಂಗಡಿ, ಓಂದಾಸ್ ಕಣ್ಣಂಗಾರ್, ಡಾ| ಮಮತಾ ಟಿ.ರಾವ್, ಡಾ| ಜಿ.ಪಿ ಕುಸುಮಾ, ದುರ್ಗಪ್ಪ ಎಲ್ಲಪ್ಪ ಕೊಟ್ಯಾವರ್, ಸುಶೀಲಾ ಎಸ್.ದೇವಾಡಿಗ ಸೇರಿದಂತೆ ಒಟ್ಟು 16 ಸದಸ್ಯರ ಮಂಡಳಿ ಕಾರ್ಯನಿರತವಾಗಿದೆ.
ಸಂಘದ 85ನೇ ವಾರ್ಷಿಕ ಮಹಾಸಭೆಯು ಬರುವ (23.06.2019) ಭಾನುವಾರ ಸಂಜೆ 5.00 ಗಂಟೆಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್ನ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂಘದ ಗೌ| ಕಾರ್ಯದರ್ಶಿ ಭರತ್ಕುಮಾರ್ ಪೆÇಲಿಪು ತಿಳಿಸಿದ್ದಾರೆ.
ನೂತನ ಅಧ್ಯಕ್ಷ ರಾಜೇಶೇಖರ ಕೋಟ್ಯಾನ್ ಮಾತನಾಡಿ, ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾಜ ಪ್ರತಿನಿಧಿಗಳನ್ನು ಬೆಳೆಸೋಣ, ದುರ್ಬಲ ಸಮಾಜವನ್ನು ಬಲಿಷ್ಠರನ್ನಾಗಿ ಮಾಡಲು ಒಮ್ಮನಸ್ಸಿನ ಕಾರ್ಯಕ್ರಮ ರೂಪಿಸೋಣ ಎಂದು ಕರೆಯಿತ್ತರು.
ಸಭೆಯ ಮಧ್ಯಾಂತರದಲ್ಲಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ಅವರು ಪುತ್ತೂರು ಅಲ್ಲಿ ನಿರ್ಮಿತ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರಕ್ಕೆ ರೂಪಾಯಿ 5 ಲಕ್ಷ ದೇಣಿಗೆ ಹಸ್ತಾಂತರಿಸಿದರು. ನಂತರ ಜಯ ಸುವರ್ಣ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಸಲ್ಪಟ್ಟಿತು.
ವೇದಕುಮಾರ್ ಬೆಂಗಳೂರು, ಕಟಪಾಡಿ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಶಂಕರ ಕೆ.ಸುವರ್ಣ ಮುಂಬಯಿ, ಹರೀಶ್ಚಂದ್ರ ಅಮೀನ್ ಕಟಪಾಡಿ ಅಭಿನಂದನಾ ಮಾತುಗಳನ್ನಾಡಿ ಶುಭಾರೈಸಿದರು.
ಉಪಾಧ್ಯಕ್ಷ ಪಿತಾಂಬರ ಹೆರಾಜೆ ಬೆಳ್ತಂಗಡಿ, ನೂತನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಸಹ ಕಾರ್ಯದರ್ಶಿಗಳಾದ ಗಣೇಶ್ ಎಲ್.ಪೂಜಾರಿ ಬೈಂದೂರು ಮತ್ತು ಗಂಗಾಧರ ಪೂಜಾರಿ ಬಾಳ ಚೆಳ್ಯಾರು, ಸಹ ಕೋಶಾಧಿಕಾರಿ ಶಿವಾಜಿ ಸುವರ್ಣ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು, ಪ್ರಧಾನ ಕಾರ್ಯದರ್ಶಿ ಮೋಹನ್ದಾಸ್ ಪಾವೂರು ಭಂಡಾರಮನೆ ಸ್ವಾಗತಿಸಿ ವರದಿ ಮಂಡಿಸಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ನರೇಂದ್ರ ಕೆರೆಕಾಡು ಸಭಾ ಕಲಾಪ ನಿರೂಪಿಸಿದರು.
ಡಾ| ರಾಜಶೇಖರ ಆರ್.ಕೋಟ್ಯಾನ್:
ಮುಂಬಯಿನ ತುಳು ಕನ್ನಡಿಗ ನಿರ್ದೇಶಕ-ನಟ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳು ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್ ಇವರಿಗೆ ಮಲೇಷಿಯಾ ರಾಷ್ಟ್ರದ ದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಸಂಸ್ಥೆಯು ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ. ವಿಶ್ವದಾದ್ಯಂತ ಸೇವಾ ನಿರತ ಬಿಲ್ಲವ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಒಡನಾಟದಲ್ಲಿರುವ ಯುವ ಧುರೀಣ. ಇವರು ಸರಳ ಸಜ್ಜನಿಕಾ, ನಿಷ್ಠಾವಂತ ಯುವ ಬಿಲ್ಲವ ನಾಯಕ. ಮುಂಬಯಿನಲ್ಲಿ ಯುವ ಹೊಟೇಲು ಉದ್ಯಮಿ ಆಗಿದ್ದು ಸಮಾಜ ಸೇವಕರಾಗಿರುವರು.
ಕಳೆದ ವರ್ಷ ಎಐಸಿಐ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಕÀರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ರಾಜಶೇಖರ ಕೋಟ್ಯಾನ್ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್ವುಡ್ ನಟ, ನಿರ್ಮಾಪಕÀ, ನಿರ್ದೇಶಕ, ಡಾ| ರಾಜಶೇಖರ ಕೋಟ್ಯಾನ್ ಯುವ ಹೊಟೇಲು ಉದ್ಯಮಿ ಆಗಿ, ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದ ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್’ನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.
ಕಳೆದ ನವೆಂಬರ್ನಲ್ಲಿ ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ರಾಜಶೇಖರ ಕೋಟ್ಯಾನ್ ಅವರಿಗೆ ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪುರಸ್ಕಾರ ಸಮಾರಂಭದಲ್ಲಿ ಪ್ರದಾನಿಸಿದ್ದು `ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ’ ಪ್ರಶಸ್ತಿ ವಿಭಾಗದ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link