Brief Mumbai, Mangalore news with pictures
Kemmannu News Network, 21-07-2019 14:53:26
ದೆಹಲಿಯಲ್ಲಿ ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗುರುವಂದನೆ
(ರೊನಿಡಾ ಮುಂಬಯಿ)
ಮುಂಬಯಿ, ಜು.16: ಗುರುಪೂರ್ಣಿಮೆಯ ಶುಭಾವಸರದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ದೆಹಲಿಯಲ್ಲಿ ಮೊಕ್ಕಂ ಹೂಡಿದ್ದು, ಭಾರತ ರಾಷ್ಟ್ರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ಎಲ್ಲ ಮಹತ್ವದ ನೀತಿ ವಿಚಾರಗಳ ಇತ್ಯಾದಿ ಖಾತೆಗಳ ಹೊಣೆ ವಹಿಸಿ ವಿಶ್ವಮಾನ್ಯ ಪ್ರಧಾನಿ ಹೆಸರಾಂತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಮತ್ತು ಸೂಕ್ಷ ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವ ನಿತಿನ್ ಜೈರಾಮ್ ಗಡ್ಕರಿ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ (ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ) ಡಿ.ವಿ ಸದಾನಂದ ಗೌಡ, ಮಾಜಿ ಸಚಿವೆ ಉಮಾ ಭಾರತಿ, ಹರೀಶ್ ಪೆÇಕ್ರೈಲ್ ಸೇರಿದಂತೆ ನೂರಾರು ಗಣ್ಯರು ಆಗಮಿಸಿ ಗುರುವಂದನೆ ಸಲ್ಲಿಸಿದರು.
ಕನ್ಯಾಡಿರಾಮಕ್ಷೇತ್ರದಲ್ಲಿ ಗುರುವಂದನೆ-ಗುರುಪೂಜೆ-ಆಶೀರ್ವಚನ
ಗುರು ಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಮುಂಬಯಿ (ಉಜಿರೆ), ಜು.17: ಅಜ್ಞಾನದಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವಾತ ನೇಗುರು. ಗುರುಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವವಾಗಿದೆ ಎಂದು ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ಮಂಗಳವಾರ ಧರ್ಮಸ್ಥಳ ಗ್ರಾಮದಕನ್ಯಾಡಿಯಲ್ಲಿರುವರಾಮಕ್ಷೇತ್ರದಲ್ಲಿ ಪಾದ ಪೂಜೆ, ಗುರುವಂದನೆ ಬಳಿಕ ಅವರು ಆಶೀರ್ವಚನ ನೀಡಿದರು.
ಎಲ್ಲರ ಆತ್ಮನೂ ಪರಮಾತ್ಮನ ಅಂಗವಾಗಿದ್ದು ಪರಿಶುದ್ಧ ಮನಸ್ಸಿನಿಂದ ಮಾಡಿದ ಜಪ, ತಪ, ಧ್ಯಾನದಿಂದ ಆತ್ಮನೇ ಪರಮಾತ್ಮನಾಗಬಲ್ಲ. ಮಾನವನೇ ಮಾಧವನಾಗುತ್ತಾನೆ ಎಂದು ಹೇಳಿದರು. ಪಂಚೇಂದ್ರಿಯಗಳನ್ನು ನಿಯಂತ್ರಿಸಿ ಮನಸ್ಸಿಗೆ ವೈರಾಗ್ಯ ಬಂದಾಗ ಸತ್ಯದ ಅರಿವು ನಮಗಾಗುತ್ತದೆ. ಪ್ರಕೃತಿಯೇ ನಮ್ಮಗುರು. ಸ್ವಧರ್ಮದ ಪಾಲನೆ ಮಾಡಿ, ಅಚಲವಾದ ಆತ್ಮವಿಶ್ವಾಸದಿಂದ ಸ್ವಾಧ್ಯಾಯ ಹಾಗೂ ಆಧ್ಯಾತ್ಮ ಚಿಂತನೆಯಿಂದ ಲೋಕ ಕಲ್ಯಾಣವಾಗುತ್ತದೆ. ದಿನದಲ್ಲಿ ಸ್ವಲ್ಪ ಸಮಯವಾದರೂ ಆಧ್ಯಾತ್ಮಚಿಂತನೆಗೆ ಮೀಸಲಿಡಬೇಕು. ವಿದ್ಯಾಥಿರ್üಗಳು ಅಧ್ಯಯನಶೀಲರಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಭಕ್ತರಿಂದ ಭಜನೆ, ಪ್ರಾರ್ಥನೆ, ನವಗ್ರಹ ಶಾಂತಿ, ಹೋಮ, ಸ್ವಾಮೀಜಿಯವರ ಪಾದಪೂಜೆ, ಕಿರೀಟಧಾರಣೆ ಮೊದಲಾದ ಕಾರ್ಯಕ್ರಮಗಳು ನಡೆದವು.
ಮೂಡಬಿದ್ರೆಯ ಜೋತಿಷಿ ವೆಂಕಟೇಶಕಿಣಿ ಮಾತನಾಡಿ ಗುರು ಪೂರ್ಣಿಮೆಯ ಆಚರಣೆಯ ಮಹತ್ವವನ್ನು ವಿವರಿಸಿದರು. ಸುಜಿತಾ ವಿ.ಬಂಗೇರ, ಪೀತಾಂಬರ ಹೇರಾಜೆ, ಚಿತ್ತರಂಜನ್ ಗರೋಡಿ, ಜಯಂತ ಕೋಟ್ಯಾನ್, ಬೆಳಾಲು ತಿಮ್ಮಪ್ಪ ಗೌಡ, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಪೆÇ್ರ| ಕೇಶವ ಬಂಗೇರ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
ಧರ್ಮಸ್ಥಳದಲ್ಲಿ ಪುರಾಣ ಕಾವ್ಯ ವಾಚನ - ಪ್ರವಚನ ಪ್ರಾರಂಭ
ಪುರಾಣ ವಿಚಿತ್ರವಾದ ವಿಷಯ
ಚಿತ್ರಶೀರ್ಷಿಕೆ: ಹಿರಿಯ ವಿದ್ವಾಂಸ ಬಿ.ಎಲ್. ನಾಗರಾಜ ಪುರಾಣ ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಉಜಿರೆ: ಪುರಾಣ ವಿಚಿತ್ರವಾದ ವಿಷಯವಾಗಿದೆ. “ಪುರಂ ಅಣತಿ ಇತಿ ಪುರಾಣ”: ಅಂದರೆ ಪುರದ ಬಗ್ಯೆ ಹೇಳುವುದೇ ಪುರಾಣ. ಪುರಾಣ ಎಂಬ ಪದಕ್ಕೆ ದೇಹ, ಪ್ರಪಂಚ ಮೊದಲಾದ ಅನೇಕ ಅರ್ಥಇದೆ. ವೇದಗಳು ಪುರಾಣ ಮತ್ತು ಇತಿಹಾಸದ ಮೂಲಕ ಅಭಿವ್ಯಕ್ತವಾಗುತ್ತವೆ. ಇತಿಹಾಸ ಮತ್ತು ಪುರಾಣದ ಕಲ್ಪನೆ ಇದ್ದರೆ ವೇದಗಳ ಅಧ್ಯಯನ ಸುಲಭ ಸಾಧ್ಯವಾಗುತ್ತದೆ. ಎಂದು ಮಂಗಳೂರಿನ ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕ ಬಿ.ಎಲ್. ನಾಗರಾಜ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 64 ದಿನಗಳಲ್ಲಿ ನಡೆಯುವ ಪುರಾಣ ಕಾವ್ಯ ವಾಚನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಮೂರು ಮೂಲಭೂತ ಕಾಯಕಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯದ ಬಗ್ಯೆ ಪುರಾಣ ವಿವರಿಸುತ್ತದೆ. ಸೃಷ್ಟಿಯ ಅಧಿಪತಿ ಬ್ರಹ್ಮ, ಸ್ಥಿತಿಯ ಅಧಿಪತಿ ವಿಷ್ಣು ಹಾಗೂ ಲಯದ ಅಧಿಪತಿ ಶಿವನ ಬಗ್ಯೆ ಪುರಾಣದಲ್ಲಿ ವಿವರವಾದ ಮಾಹಿತಿ, ಮಾರ್ಗದರ್ಶನವಿದೆ.
ನಮ್ಮ ಜೀವನದಲ್ಲಿ ಭಾವನೆಗಳು ಶ್ರೇಷ್ಠವಾಗಿವೆ. ಅನೇಕ ಭಾವನೆಗಳಿದ್ದು ಒಂದು ಭಾವನೆಗಿಂತ ಇನ್ನೊಂದು ಭಾವನೆ ವಿಭಿನ್ನವಾಗಿದ್ದು ಶ್ರೇಷ್ಠವಾಗಿವೆ. ಭಾವನೆಗಳನ್ನು ಗೌರವಿಸಬೇಕು. ಎಲ್ಲಾ ಭಾವನೆಗಳನ್ನು ನಿರಪೇಕ್ಷ ಭಾವದಿಂದ ಸ್ವೀಕಾರ ಮಾಡಬೇಕು. ಬೆಳಕಿನಲ್ಲಿ ಏಳು ಬಣ್ಣಗಳು ಲೀನವಾಗಿದ್ದರೂ ಸಹಜವಾಗಿ ನಾವು ಅದನ್ನು ಪ್ರತ್ಯೇಕವಾಗಿ ಬಣ್ಣವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲಾ ಭಾವನೆಗಳನ್ನು ಸಹಜವಾಗಿ ಹೊಂದಿರಬೇಕು ಎಂದು ಅವರು ಹೇಳಿದರು.
ಗಾಯತ್ರಿ ಮಂತ್ರ ಪಠಣದಿಂದ ರೋಗ ಗುಣಮುಖ:
ಪರಿಶುದ್ಧ ಮನಸ್ಸಿನಿಂದ ನಾವು ಪರಮಾತ್ಮನನ್ನು ನಮ್ಮ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಿ ಆರಾಧಿಸಬೇಕು. ವ್ರತ-ನಿಯಮಗಳ ಅನುಷ್ಠಾನದಿಂದ, ಉಪಾಸನೆಯಿಂದ ಹಾಗೂ ನಿತ್ಯವೂ ಗಾಯತ್ರಿ ಮಂತ್ರ ಪಠಣದಿಂದ ವೈದ್ಯರಿಂದ ಗುಣಪಡಿಸಲಾಗದ ತನ್ನ ರೋಗವು ಸಂಪೂರ್ಣ ಶಮನಗೊಂಡಿದೆ ಎಂದು ಅವರು ತಮ್ಮ ಸ್ವಾನುಭವವನ್ನು ವಿವರಿಸಿದರು.
ಇದೇ ರೀತಿ ಲಲಿತೋಪಖ್ಯಾನ, ಶ್ರೀ ಧಾರಣಾ ಸರಸ್ವತಿ ಮಂತ್ರ ಪಠಣದಿಂದ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವಸ್ಥಾನದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಅನೇಕ ರೀತಿಯ ಪೂಜೆಗಳನ್ನು, ಸೇವೆಗಳನ್ನು ಅರ್ಪಿಸಲಾಗುತ್ತದೆ. ಕಳೆದ 47 ವರ್ಷಗಳಿಂದ ಪ್ರತಿ ವರ್ಷ ಎರಡು ತಿಂಗಳು ನಡೆಯುವ ಪುರಾಣ ವಾಚನ-ಪ್ರವಚನವೂ ಅಮೂಲ್ಯ ಸೇವೆಯಾಗಿದೆ. ಇದರಿಂದಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಅನೇಕ ಮಂದಿ ಉದಯೋನ್ಮುಖ ಗಮಕಿಗಳು, ಕಲಾವಿದರು ಮೂಡಿ ಬಂದಿದ್ದಾರೆ. ಸ್ವಾಧ್ಯಾಯ ಹಾಗೂ ವಿಶೇಷ ಅಧ್ಯಯನಕ್ಕೂ ಅವಕಾಶವಾಗಿದೆ. ಇತರ ದೇವಸ್ಥಾನಗಳಲ್ಲಿಯೂ ಧರ್ಮಸ್ಥಳದ ಮಾದರಿಯಲ್ಲಿ ಪುರಾಣ ವಾಚನ-ಪ್ರವಚನ ಏರ್ಪಡಿಸುತ್ತಿರುವುದು ಸಂತಸದಾಯಕವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಖ್ಯಾತ ವಿದ್ವಾಂಸರಾದ ಬಿ.ಎಲ್. ನಾಗರಾಜ ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಹೇಮಾವತಿ ವಿ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹರಿಕೃಷ್ಣ ಪುನರೂರು ಗಣಪತಿ ಪದ್ಯಾಣ ಮತ್ತು ಉಜಿರೆ ಅಶೋಕ ಭಟ್ ಉಪಸ್ಥಿತರಿದ್ದರು.
ಎ.ವಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಕೊನೆಯಲ್ಲಿ ಧನ್ಯವಾದವಿತ್ತರು.
ಮುಖ್ಯಾಂಶಗಳು:
ಅಮೃತವರ್ಷಿಣಿ ಸಭಾ ಭವನದಲ್ಲಿ 64 ದಿನಗಳಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯುತ್ತದೆ.
17 ಮಂದಿ ಪುರಾಣ ವಾಚನ ಮಾಡುವರು, 27 ಮಂದಿ ಪ್ರವಚನ ನೀಡುವರು.
ಗಣಪತಿ ಪದ್ಯಾಣ ವಾಚನ ಮಾಡಿದರು. ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು.
ಶ್ರೀ ಲಿತೋಪಖ್ಯಾನ, ಸೋಮೇಶ್ವರ ಶತಕ, ಶಿಶುನಾಳ ಷರೀಫರ ಗೀತೆಗಳು, ಭಗವದ್ಗೀತೆ, ಶಂಕರ ಸಂಹಿತೆ, ನಳಚರಿತ್ರೆ, ರಾಮಾಶ್ವಮೇಧ, ರಾಮಾಯಣ ದರ್ಶನಂ ಮೊದಲಾದ ಪುರಾಣ ಕಾವ್ಯಗಳ ವಾಚನ-ಪ್ರವಚನ ನಡೆಯುತ್ತದೆ.
ಹಿರಿಯ ವಿದ್ವಾಂಸ ಬಿ.ಎಲ್. ನಾಗರಾಜ ಜ್ಞಾನಪೀಠ ಪುರಸ್ಕಾರದ ಅರ್ಹತೆ ಹೊಂದಿದ್ದಾರೆ.
ಮದುವೆ, ಉಪನಯನ, ಸತ್ಕಾರ ಕೂಟ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಪುರಾಣ ವಾಚನ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹವಾಗಿದೆ.
ಗಾಯತ್ರಿ ಮಂತ್ರ ಪಠಣದಿಂದ ರೋಗ ಶಮನವಾಗುತ್ತದೆ.
ಬಾಕ್ಸ್ ಐಟಂ: ನಿಂತುಕೊಂಡು ಮಾತನಾಡುವವರು ಅಪರಾಧಿಗಳು. ಕುಳಿತುಕೊಂಡು ಮಾತನಾಡುವವರು ನ್ಯಾಯಾಧೀಶರು (ತೀರ್ಪುಗಾರರು) ನ್ಯಾಯಾಲಯದಲ್ಲಿ ಅಪರಾಧಿಗಳು ನಿಂತುಕೊಂಡು ಮಾತನಾಡುತ್ತಾರೆ. ನ್ಯಾಯಾಧೀಶರು ಕುಳಿತುಕೊಂಡು ತೀರ್ಪು ಕೊಡುತ್ತಾರೆ ಎಂದು ಹಿರಿಯ ವಿದ್ವಾಂಸ ಬಿ.ಎಲ್. ನಾಗರಾಜ ಹೇಳಿದರು.
ತರಗತಿಯಲ್ಲಿ ಶಿಕ್ಷಕರು (ಅಪರಾಧಿಗಳು) ನಿಂತುಕೊಂಡು ಮಾತನಾಡುತ್ತಾರೆ. ತೀರ್ಪುಗಾರರಾದ (ನ್ಯಾಯಾಧೀಶರು) ವಿದ್ಯಾರ್ಥಿಗಳು ಕುಳಿತುಕೊಂಡು ಮಾತನಾಡುತ್ತಾರೆ ಎಂದು ಅವರು ಹಾಸ್ಯಮಯವಾಗಿ ವಿವರಿಸಿದರು.
ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣದಲ್ಲಿ ಗುರುಗಳೂ, ಶಿಷ್ಯರೂ ಆಸನವಿಲ್ಲದೆ ನೆಲದ ಮೇಲೆಯೇ ಕುಳಿತು ಗುರುಗಳು ಕಲಿಸುತ್ತಿದ್ದರು, ಶಿಷ್ಯರೂ ಕಲಿಯುತ್ತಿದ್ದರು.
ಸಯ್ಯದ್ ಮದನಿ ಅರಬಿಕ್ ಕಾಲೇಜು ಉಳ್ಳಾಲ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ
ಮುಂಬಯಿ (ಉಳ್ಳಾಲ), (ಬಂಟ್ವಾಳ),ಜು.16: ಸಯ್ಯದ್ ಮದನಿ ಅರಬಿಕ್ ಕಾಲೇಜಿನ 2019-20ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಮುಹಮ್ಮದ್ ತ್ವಾಹ ಹಾಜಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶೈಖುನಾ ತೋಡಾರು ಉಸ್ಮಾನುಲ್ ಫೈಝಿ ಉಸ್ತಾದ್ ದುಆಶಿರ್ವಾಚನ ಗೈದು ಶಿಕ್ಷಣವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ
ಎಂದು ತಿಳಿಸದರು. ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಹಾಗೂ ಹಾಜಿ ಇಲ್ಯಾಸ್ ಕಾರ್ಯಕ್ರಮದಲ್ಲಿ ಹಿತ ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಇಬ್ರಾಹೀಂ ಮದನಿ, ಇಬ್ರಾಹಿಂ ಅಹ್ಸನಿ, ಹಾಫಿಳ್ ಝೈನ್ ಸಖಾಫಿ, ಶರೀಫ್ ಮದನಿ, ಮುಫತ್ತಿಶ್ ಹನೀಫ್ ಸಖಾಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಸ್ವಾಗತಿಸಿ ವಂದಿಸಿದರು.
ಶ್ರೀ ಪೇಜಾವರ ಮಠ ಮುಂಬಯಿಯ ಡಾ| ರಾಮದಾಸ ಉಪಾಧ್ಯಾಯ ಬಳಗದಿಂದ
ಭೂವೈಕುಂಠ ತಿಮ್ಮಪ್ಪನ ಸನ್ನಿಧಿಯಲ್ಲಿ ಜಯ ತೀರ್ಥರ ಶ್ರೀ ಸುಧಾ ಗ್ರಂಥ ಪಾರಾಯಣ
ಮುಂಬಯಿ, ಜು.16: ಆಂಧ್ರಪ್ರದೇಶದಲ್ಲಿನ ಶ್ರೀ ವೆಂಕಟೇಶ್ವರ ದೇವರ (ತಿಮ್ಮಪ್ಪನ) ಹಾಗೂ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಪರಮಾನುಗ್ರಹದಿಂದ ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಮತ್ತು ಬಳಗವು ಇತ್ತೀಚೆಗೆ ತಿರುಪತಿ ಅಲ್ಲಿನ ಭೂವೈಕುಂಠ ತಿಮ್ಮಪ್ಪನ ಸನ್ನಿಧಿಯಲ್ಲಿ ಜಯ ತೀರ್ಥರ ಶ್ರೀ ಸುಧಾ ಗ್ರಂಥ ಪಾರಾಯಣ ನೆರವೇರಿಸಿತು.
ವಿದ್ವಾನ್ ವಂದನಯ ನಾರಾಯಣ, ಡಾ| ರಾಮದಾಸ ಉಪಾಧ್ಯಾಯ ಸೇರಿದಂತೆ ಸುಮಾರು 11 ಮಂದಿ ಸೇರಿ ಪಾರಾಯಣ ಹಾಗೂ ಅನುವಾದಗೈದರು. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ, ತಿರುಪತಿ ಮತ್ತು ತಿರುಮಲ ಜಂಟಿ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದು ದೇವಸ್ಥಾನದ ಅನುಗ್ರಹ ಸಂಭಾವನೆ, ಶ್ರೀ ಬಾಲಾಜಿಯ ಪ್ರಸಾದವನ್ನಿತ್ತು ಸಮ್ಮಾನಗೈದರು. ಯೋಜನಾ ಅಧಿಕಾರಿ ಆನಂದ ತೀರ್ಥರ ವಿಶೇಷ ಸಹಕಾರದಿಂದ ಇದು ಸಾಧ್ಯವಾಗಿದ್ದು, ಪೇಜಾವರಶ್ರೀಗಳ ಶುಭಾನುಗ್ರಹದಿಂದ ಜೀವಮಾನದಲ್ಲಿ ಪ್ರಾಪ್ತಿ ಯೋಗದಲ್ಲೊಂದು ಇದಾಗಿದೆ ಎಂದು ಗಳಲ್ಲಿ ದರ್ಶನ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link