Brief Mumbai, Mangalore news with pictures


Rons Bantwal
Kemmannu News Network, 26-07-2019 10:53:15


Write Comment     |     E-Mail To a Friend     |     Facebook     |     Twitter     |     Print



ಆಟಿದೊಂಜಿ ದಿನ ಆಚರಿಸಿದ ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಸಮಿತಿ
ಪೂರ್ವಜರ ತಿಂಡಿ ತಿನಿಸುಗಳೇ ಆರೋಗ್ಯಕರವಾದವು : ಡಾ| ಸುನೀತಾ ಎಂ. ಶೆಟ್ಟಿ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜು.24: ಅಗೋಳಿ ಮಂಜಣ್ಣನಂತಹ ವೀರ ಪುರುಷರು ಹುಟ್ಟಿದ ನಮ್ಮ ತುಳುನಾಡಿನಲ್ಲಿ ವರ್ಷವಿಡೀ ನಾವು ಹಬ್ಬಹರಿದಿನಗಳನ್ನು ಆಚರಿಸುತ್ತೇವೆ. ಆ ಪಯ್ಕಿ ಆಟಿ (ಅಷಾಢ) ಮಾಸವೂವೊಂದಾಗಿದೆ. ಆಟಿ ಅಂದರೆ ಕಷ್ಟದ ತಿಂಗಳೆಂಬ ಪ್ರತೀತಿ ಈ ಹಿಂದಿತ್ತು. ಆಟಿ ತಿಂಗಳಿಗೆ ವಿಶೇಷ ಪ್ರಾಮುಖ್ಯತೆ ಏಕೆಂದರೆ ಲಗ್ನವಾಗಿ ಹೋದ ಹೆಣ್ಣು ಮಕ್ಕಳು ತಾಯಿಯ ಮನೆಗೆ ಬಂದಾಗ ವಿಶೇಷ ಖಾದ್ಯಗಳನ್ನು ಮಾಡಿ ತಿನಿಸುವುದು, ಆಟಿ ಕಳಂಜ, ಆಟಿದಮವಾಸ್ಯೆ, ಪಾಲೆದ ಕೆತ್ತೆಯನ್ನು ನಸುಕಿನಲ್ಲಿ ಬತ್ತಲೆ ಹೋಗಿ ಕಲ್ಲಿನಿಂದ ಕುಟ್ಟಿ ಆ ಕೆತ್ತೆಯಿಂದ ಹಾಲು ತೆಗೆದು ಅದಕ್ಕೆ ಬೋರ್‍ಗಲ್ಲನ್ನು ಕಾಯಿಸಿ ಬೆಳ್ಳುಳ್ಳಿ ಹಾಕಿ ಬಿಸಿ ಬೋರ್‍ಗಲ್ಲಿನಿಂದ ಒಗ್ಗರಣೆ ನೀಡುವ ವಿಶೇಷತೆ ಇದೆ. ಇದನ್ನು ಕುಡಿದವರ ರೋಗ ರುಜಿನಗಳು ಮಾಯವಾಗುತ್ತವೆ ಎಂಬ ಪ್ರತೀತಿ ಇದೆ. ಭಾರತದ ಸಂಸ್ಕೃತಿ-ಸಂಸ್ಕಾರದಲ್ಲಿ ನಮ್ಮ ಆಚಾರ-ವಿಚಾರಗಳು ವಿಭಿನ್ನವಾಗಿವೆ ಎಂದು ಬೃಹನ್ಮುಂಬಯಿಯ ಹಿರಿಯ ಸಾಹಿತಿ, ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಕಳೆದ ರವಿವಾರ ಉಪನಗರ ಅಂಧೇರಿ ಪೂರ್ವದ ಮಾತೋಶ್ರೀ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ, ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಸಾರಥ್ಯದಲ್ಲಿ ನಡೆಸಲ್ಪಟ್ಟ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯು ಪ್ರಾರಂಭದಿಂದಲ್ಲೂ ವಿವಿಧ ಕಾರ್ಯಾಧ್ಯಕ್ಷರ ಮುಂದಾಳುತ್ವದಲ್ಲಿ ಅವರವರ ಕಲಾನುಸಾರ ಉತ್ತಮ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಸಮಿತಿಯ ಸಂಚಾಲಕನಾಗಿ ದುಡಿದ ಅನುಭವ ನನಗಿದೆ. ಬಂಟರ ಸಮ್ಘದ ಮೂಲ ಉದ್ದೇಶ ಸಮಾಜ ಬಾಂಧವರೆಲ್ಲರನ್ನೂ ಒಗ್ಗೂಡಿಸಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು. ಸುಖ-ಕಷ್ಟಗಳಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುವುದು. ನಮ್ಮ ಪೂರ್ವಜರು ಆಟಿ ತಿಂಗಳ ವಿಶೇಷ ತಿಂಡಿ-ತಿನಿಸು ಹಾಗೂ ಪ್ರಾಕೃತಿಕ ಪದಾರ್ಥಗಳನ್ನು ಸೇವಿಸುತ್ತಿರಬೇಕೆಂದು ನಮಗೆಲ್ಲಾ ತಿಳಿಸಿರುವುದರಲ್ಲಿ ಸತ್ಯವಿದೆ ಎಂದು ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ನಾವು ದೈನಂದಿನವಾಗಿ ತಿನ್ನುವ ದಿನಸಿ  ಸಾಮಾನು, ತಿಂಡಿ ತಿನಿಸುಗಳು, ಹಾಲು, ಹಣ್ಣು-ಹಂಪಲುಗಳಲ್ಲಿ ವ್ಯಾಪರಸ್ಥರು ತಮ್ಮ ಲಾಭಕ್ಕಾಗಿ ರಾಸಾಯನಿಕ ವಸ್ತುಗಳನ್ನು ಬೆರೆಸುತ್ತಿದ್ದು, ನಾವು ಇದನ್ನು ತಿಳಿದೋ ತಿಳಿಯದೋ ಸೇವಿಸುತ್ತೇವೆ. ರಾಸಾಯನಿಕ ಮಿಶ್ರಣವಿರುವ ವಸ್ತುಗಳನ್ನು ಸೇವಿಸಿದ ಪರಿಣಾಮವೇ ನಮ್ಮ ಆರೋಗ್ಯ ಹದಗೆಡುತ್ತದೆ ಎಂದಾದರೂ ಶುದ್ಧತೆ, ಆರೋಗ್ಯದಾಯಕ ತಿನಿಸುಗಳ ಬಗ್ಗೆ ಸಮಾಜ ಇನ್ನೂ ವಿದ್ಯಾವಂತ ಜಾಗೃತರಾಗದಿರುವುದು ಶೋಚನೀಯ. ಆದರೆ ಓದು ಬರಹ ತಿಳಿದಯ ಪೂರ್ವಜರು ಭವಿಷ್ಯದ ಆರೋಗ್ಯಕ್ಕಾಗಿ ಕಾಲಾನುಸಾರ ಆಹಾರವನ್ನು ಔಷಧಿಯಾಗಿಯೇ ಬಳಸುತ್ತಿದ್ದ ಕಾರಣ ಶತಾಯುಷ್ಯವನ್ನು ಕಾಯ್ದಿರಿಸಿದ್ದಾರೆ. ವರ್ಷದ ಎಲ್ಲಾ ತಿಂಗಳುಗಳಲ್ಲಿ ಕಾಲಾನುಸಾರ ಆಹಾರವನ್ನು ಸೇವಿಸುತ್ತಾ ಬದುಕನ್ನು ನೆಮ್ಮದಿಯಾಗಿರಿಸಿರುವರು. ಆ ಪಯ್ಕಿ ಆಹಾರ ಪದ್ಧತಿಗೆ ಅತೀ ಮಹತ್ವದ ತಿಂಗಳನ್ನು ಆಟಿ ತಿಂಗಳು (ಅಷಾಢ) ಆಗಿಸಿ ರೋಗ ನಿರೋಧ ಶಕ್ತಿಗಳಿರುವ ಕೆಸುವಿನ ಎಲೆ (ತೇವು), ಹಾಳೆÉ ಮರದ ತೊಗಡು, ನುಗ್ಗೆ ಸೊಪ್ಪು, ಮೆತ್ತೆ ಗಂಜಿ ಇತ್ಯಾದಿಗಳನ್ನು ತಿನ್ನಿತ್ತಿದ್ದರು. ಇವೆಲ್ಲವೂ ಕಾಯಿಲೆಮುಕ್ತ, ರೋಗನಿವಾರಕ ತಿನಿಸುಗಳಾಗಿದ್ದ ಕಾರಣ ಈ ಬಗ್ಗೆ ನಾವೂ ನಮ್ಮ ಮಕ್ಕಳಲ್ಲಿ ಇವುಗಳ ಮಹತ್ವದ ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.
ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯದರ್ಶಿ ಮನೋರಮ ಎನ್.ಬಿ ಶೆಟ್ಟಿ, ಪಶ್ಚಿಮ ಪ್ರಾದೇಶಿಕ ವಲಯಗಳ ಸಮನ್ವಯಕ ಸಂಘದ ಡಾ| ಪ್ರಭಾಕರ್ ಶೆಟ್ಟಿ ಬೋಳ ಸಮಯೋಚಿತವಾಗಿ ಮಾತನಾಡಿ ಶುಭಾರೈಸಿದರು.

ಪ್ರಾದೇಶಿಕ ಸಮಿತಿಯ ಸಂಚಾಲಕ ಡಿ.ಕೆÉ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಪ್ರೇಮಾ ಬಿ.ಶೆಟ್ಟಿ,  ಮಹಿಳಾ  ಜತೆ ಕಾರ್ಯದರ್ಶಿ ಜ್ಯೋತಿ ಆರ್.ಜಿ ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ, ರತ್ನಾ ಪಿ.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.

ಯಶವಂತ ಶೆಟ್ಟಿ, ಕೃಷ್ಣ ಶೆಟ್ಟಿ, ಜಯರಾಮ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಶೋಭಾ ರಮೇಶ್ ರೈ, ಶೋಭಾ ಶಂಕರ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು, ಅನೇಕರು ಕಾರ್ಯಕ್ರಮದ ಅಂಗವಾಗಿ ಸಿದ್ಧ ಪಡಿಸಲಾದ ಹಳೆಕಾಲದ ಸಾಂಪ್ರದಾಯಿಕ ನೂರಾರು ಬಗೆಯ ತಿಂಡಿತಿನಿಸುಗಳ ಬಗ್ಗೆ ತಿಳಿಸಿದರು. ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾದೇಶಿಕ ಸಮಿತಿಯ ಮಹಿಳಾ ಉಪ ಕಾರ್ಯಾಧ್ಯಕ್ಷೆ  ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಜ್ರಾ ಕೆ.ಪೂಂಜ ಅಭಾರ ಮನ್ನಿಸಿದರು.

ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್‍ರಿಗೆ `ತುಳು ಜಾನಪದ ಸಂಶೋಧಕ ಪ್ರಶಸ್ತಿ’ ಪ್ರದಾನ

ಮುಂಬಯಿ, ಜು.23: ಮಂಗಳೂರು ಮೂಲ್ಕಿ ಇಲ್ಲಿನ ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರು ತುಳುನಾಡಿನ ಭೂತಾರಾಧನೆ ಹಾಗೂ ತುಳುನಾಡಿನ ಕಟ್ಟು ಕಟ್ಟಲೆಯ ಬಗ್ಗೆ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿರುವುದಲ್ಲದೆ ಪತ್ರಿಕೆಗಳಲ್ಲಿ ಅಂಕಣ ಬರಹದಲ್ಲಿ ಪ್ರಕಟವಾಗಿರುತ್ತದೆ. ಇದನ್ನು ಪರಿಗಣಿಸಿ ತುಳುನಾಡ ಸೇವಾ ಸಮಾಜ (ರಿ.) ಮೀರಾ-ಭಾಯಂದರ್ ಇವರು ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ದಿನಾಂಕ 28-7-2019ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ `ತುಳು ಜಾನಪದ ಸಂಶೋಧಕ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಿದ್ದಾರೆ. ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ ಮದುಮದಿಪು ನುಡಿಕಟ್ಟು ಜನಪ್ರೀಯವಾಗಿ ಇದು ಎಂಟು ಬಾರಿ ಮುದ್ರಣ ಗೊಂಡಿದೆ.

ಶಾಲಾ ಮಕ್ಕಳ ಚಾಲಕರ ಸಂಘದಿ0ದ ರಸ್ತೆಯ ಸ್ವಚ್ಛತೆ

ಮುಂಬಯಿ (ಕೋಡಿಕಲ್), ಜು.24:ಕಳೆದೊಂದು ತಿಂಗಳಿಂದ ಹೂಳು, ಕೆಸರು ನೀರು ತುಂಬಿಕೊಂಡು ವಾಹನ ಸವಾರರಿಗೆ ಕಂಟಕಪ್ರಾಯವಾಗಿದ್ದ ರಾ.ಹೆ. 66ರ ಕೊಟ್ಟಾರ ಫ್ಲೈ ಓವರ್-ಕೋಡಿಕಲ್ ತಿರುವಿನ ರಸ್ತೆಯನ್ನು ದ.ಕ. ಜಿಲ್ಲಾ ಶಾಲಾ ಮಕ್ಕಳ ಚಾಲಕರ ಸಂಘದ ಸದಸ್ಯರೇ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ಇಲ್ಲಿನ ರಸ್ತೆಯ ಬದಿ ನಿಂತಿದ್ದ ನೀರನ್ನು ತೆಗೆದು ಹೆದ್ದಾರಿ ಶುಚಿಗೊಳಿಸುವಂತೆ ಕೆಲವು ಬಾರಿ ಮಹಾನಗರಪಾಲಿಕೆಗೆ ದೂರನ್ನೂ ನೀಡಲಾಗಿತ್ತು. ಆದರೂ ಮನಪಾ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಫ್ಲೈ ಓವರ್‍ನಿಂದ ಸಾಗಿಬರುವ ವಾಹನ ಸವಾರರಿಗೆ ಹೆದ್ದಾರಿಯಲ್ಲಿ ನೀರು ನಿಂತಿದ್ದು ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇತ್ತು. ಇದನ್ನು ಮನಗಂಡ ಶಾಲಾ ಮಕ್ಕಳ ಚಾಲಕರ ಸಂಘದ ಸದಸ್ಯರು ತಾವೇ ಮುಂದೆ ನಿಂತು ಸ್ವಚ್ಛತಾ ಕಾರ್ಯ ನಡೆಸಿಕೊಟ್ಟಿದ್ದಾರೆ. ಇಂದು ಮುಂಜಾನೆ ಸ್ವಯಂಪ್ರೇರಿತರಾಗಿ ಸಂಘದ ಸದಸ್ಯರು ಹಾರೆ, ಗುದ್ದಲಿ ಹಿಡಿದು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಕೆಸರು ನೀರು, ಹೂಳು, ಕಸವನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಸಂಘದ ಪದಾಧಿಕಾರಿಗಳಾದ ಮೋಹನ್ ಅತ್ತಾವರ, ಕುಮಾರ್ ಮಾಲೆಮಾರ್, ಕಿರಣ್ ಲೇಡಿಹಿಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಸತೀಶ್ ಪೂಜಾರಿ, ಶಂಕರ್ ಶೆಟ್ಟಿ, ಚರಣ್, ರಾಘವೇಂದ್ರ, ನಟೇಶ್, ದಿನೇಶ್, ಮಹೇಶ್, ನರೇಂದ್ರ, ಹರೀಶ್, ನವೀನ್, ನಾಗರಾಜ್, ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ಪವನ್ ಮುಂತಾದವರು ಉಪಸ್ಥಿತರಿದ್ದರು.


ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟ
ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಆಯ್ಕೆ


ಮುಂಬಯಿ, ಜು.19: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಇದೇ ಮೊದಲ ಬಾರಿಗೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟಿಸಿದ್ದು, ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾಯವಾದಿ ವಸಂತ ಕಲಕೋಟಿ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ವಾರ್ಷಿಕ ಪುರಸ್ಕಾರದ ಬಗ್ಗೆ ನಿರ್ಧಾರಿಸಿದ್ದು ಪುರಸ್ಕಾರಕ್ಕಾಗಿ ತೀರ್ಪುಗಾರರ ಸಮಿತಿ ನಡೆಸಲಾಗಿದ್ದು ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ ಇವರನ್ನು ಪುರಸ್ಕಾರ ಸಮಿತಿ ಕಾರ್ಯಧ್ಯಕ್ಷೆಯನ್ನಾಗಿ ಹಾಗೂ ಸಮಿತಿ ಸದಸ್ಯರನ್ನಾಗಿ ಸಂಘದ ವಿಶೇಷ ಆಮಂತ್ರಿತ ಸದಸ್ಯರುಗಳಾದ ಹರೀಶ್ ಹೆಜ್ಮಾಡಿ (ಮಾಜಿ ಗೌರವ ಕಾರ್ಯದರ್ಶಿ) ಹಾಗೂ ಸಾ.ದಯಾ (ದಯಾನಂದ ಸಾಲ್ಯಾನ್) ಇವರನ್ನು ಆಯ್ಕೆ ನಡೆಸಲಾಗಿದೆ. ವಾರ್ಷಿಕವಾಗಿ ಪ್ರದಾನಿಸಲ್ಪಡುವ ಈ ಪುರಸ್ಕಾರವು ರೂಪಾಯಿ 25,000/- ನಗದು, ಸ್ಮರಣಿಕೆ  ಮತ್ತು ಪುರಸ್ಕಾರಪತ್ರ ಹೊಂದಿರುತ್ತದೆ.

ಸಮಾಜಮುಖಿ ದೃಷ್ಠಿಕೋನವುಳ್ಳವರಾಗಿ, ಪತ್ರಿಕೋದ್ಯಮವನ್ನು ಪ್ರತಿಷ್ಠಿತವಾಗಿರಿಸಿ ಓರ್ವ ಹಿರಿಯ ಪತ್ರಕರ್ತನಾಗಿ ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಅನುಪಮ, ಅತ್ಯಮೂಲ್ಯ ಸೇವೆಗೈದಿರುವರು. ನಿಷ್ಠುರತೆಯೊಂದಿಗೆ ಅಗ್ರಗಣ್ಯ ಪತ್ರಕರ್ತರೆನಿಸಿದ ಸ್ವರ್ಗೀಯ ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸೇವೆ ಅನನ್ಯವೂ ಸ್ಮರಣೀಯವೂ ಆಗಿದೆ. ಕಥೆಗಾರನೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಹಿರಿಯ ಸದಸ್ಯರಾಗಿದ್ದು ಸಂಘದ ಸಂವಿಧಾನ ರಚನಾ ಸಮಿತಿ ಕಾರ್ಯಾಧ್ಯಕ್ಷ ಆಗಿದ್ದ ಶ್ರೀಯುತರು ತಮ್ಮ ನಿವೃತ್ತ ಜೀವನದ ಬಳಿಕ ಪುಣೆಯಲ್ಲಿ ನೆಲೆಯಾಗಿದ್ದು 2009ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರೂ ಈಗಲೂ ಜನಮಾನಸದಲ್ಲಿ ನೆಲೆಯಾಗಿರುವ ಶ್ರೇಷ್ಠ ಪತ್ರಕರ್ತರಾಗಿದ್ದಾರೆ. ಪತ್ರಿಕೋದ್ಯಮದ ಘನತೆಯನ್ನೇ ಪ್ರತಿಷ್ಠಿತವಾಗಿರಿಸಿದ ಕೆಟಿವಿ ನಿಷ್ಠೆಯನ್ನು ಭವಿಷ್ಯತ್ತಿನ ಪತ್ರಕರ್ತ ಸಮುದಾಯಕ್ಕೆ ಮಾದರಿ ಆಗಿಸುವ ನಿಟ್ಟಿನಲ್ಲಿ  ಕೆ.ಟಿ ವೇಣುಗೋಪಾಲ್ ಸ್ಮರಣಾರ್ಥ ಕನ್ನಡಿಗ ಪತ್ರಕರ್ತರ ಸಂಘವು ವರ್ಷಂಪ್ರತಿ (ಅಂದಾಜು ಪ್ರತೀ ವರ್ಷದ ಜುಲಾಯಿ ತಿಂಗಳಲ್ಲಿ ಅಥವಾ ತನ್ನ ಸಂಘದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಈ ಪುರಸ್ಕಾರ ಪ್ರದಾನಿಸಲಿದೆ. ಒಂದು ವರ್ಷಕ್ಕೆ ಮುಂಬಯಿ/ ಮಹಾರಾಷ್ಟ್ರದೊಳಗಿನ ಕನ್ನಡಿಗ ಪತ್ರಕರ್ತರಿಗೆ ಹಾಗೂ ಮತ್ತೊಂದು ವರ್ಷಕ್ಕೆ ರಾಷ್ಟ್ರದಾದ್ಯಂತದ (ವಿಶೇಷವಾಗಿ ಒಳನಾಡ ಕರ್ನಾಟಕ ರಾಜ್ಯ ಅಥವಾ ಕೇರಳ ರಾಜ್ಯದೊಳಗಿನ) ಕನ್ನಡಿಗ ಪತ್ರಕರ್ತರಿಗೆ ಪ್ರದಾನಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ತಿಳಿಸಿದ್ದಾರೆ.
ಇದೇ ಜು.28ನೇ ಭಾನುವಾರ ಬೆಳಿಗ್ಗೆ ಸ್ವರ್ಗೀಯ ಸಂಪದಮನೆ ಶ್ರೀ ನಾಗಯ್ಯ ಶೆಟ್ಟಿ ವೇದಿಕೆ, ಲೋಟಸ್ ಸಭಾಗೃಹ, ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘವು ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಪತ್ರಕರ್ತರ ದಿನಾಚರಣೆ ಆಚರಿಸಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಡಾ| ಪದ್ಮರಾಜ ದಂಡಾವತಿ, ಮುಂಬಯಿ ಮರಾಠಿ ಪತ್ರಕಾರ್ ಸಂಘ್ ಅಧ್ಯಕ್ಷ ನರೇಂದ್ರ ವಿ.ವಾಬ್ಲೆ ಅವರು ವಸಂತ ಕಲಕೋಟಿ ಇವರಿಗೆ ಪುರಸ್ಕಾರ ಪ್ರದಾನಿಸಲಿದ್ದಾರೆ ಎಂದು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ತಿಳಿಸಿದ್ದಾರೆ.

ಮುಂಬಯಿಗರು ಕಂಡ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ

 

ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿ ಕಂಡ ಹಿರಿಯ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪೆÇೀಷಕ ಸದಸ್ಯ ನ್ಯಾಯವಾದಿ ವಸಂತ ಎಸ್.ಕಲಕೋಟಿ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿಲ್ಲಿ 20.04.1939ರಂದು (ಇದೀಗ ಎಂಭತ್ತು ವರ್ಷಗಳ ಹರೆಯ) ಶ್ರೀನಿವಾಸ ಕಲಕೋಟಿ ಮತ್ತು ಶ್ರೀಮತಿ ಲಂಕುಭಾಯಿ ದಂಪತಿ ಸುಪುತ್ರರಾಗಿ ಜನಿತ ವಸಂತ ಕಲಕೋಟಿ ಅವರು 1958ರಲ್ಲಿ ಎಲ್ಲರಂತೇ ಉದರ ಪೆÇೀಷಣೆಗಾಗಿ ಮುಂಬಯಿ ಸೇರಿದ ಕನ್ನಡಿಗರಲ್ಲೊಬ್ಬರು. ಸರಳ ಸಜ್ಜನಿಕಾ ಅಜಾತಶತ್ರು ವ್ಯಕ್ತಿಯಾಗಿದ್ದು ಇದೀಗ ಕಲ್ಯಾಣ್ ಕೋರ್ಟ್‍ನಲ್ಲಿ ವಕೀಲರಾಗಿ ಕಾರನಿರತರಾಗಿದ್ದಾರೆ.

ಪತ್ರಕರ್ತರಾಗಿ....
ಪ್ರಪಂಚ್ ಪಬ್ಲಿಕೇಶನ್ಸ್‍ನ ಪ್ರಪಂಚ ಕನ್ನಡ ವಾರಪತ್ರಿಕೆಯ ಮುಂಬಯಿ ವರದಿಗಾರರಾಗಿ, 1960-65ರ ವೇಳೆಗೆ ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಪ್ರಕಾಶಿತ ಮನೋರಮ ಕನ್ನಡ ಸಿನೇಮಾ ತ್ರೈಮಾಸಿಕದ ಭಾತ್ಮಿದಾರರಾಗಿ, ಕರ್ಮವೀರ ಕನ್ನಡ ಸಾಪ್ತಾಹಿಕ, ಸಂಯುಕ್ತ ಕರ್ನಾಟಕ ರಾಷ್ಟ್ರೀಯ ಕನ್ನಡ ದೈನಿಕ ಇತ್ಯಾದಿ ಪತ್ರಿಕೆಗಳ ಮುಂಬಯಿ ವರದಿಗಾರರಾಗಿ, ಲಯನ್ಸ್ ಕ್ಲಬ್ ಆಫ್ ಡ್Éೂಂಬಿವಿಲಿ ಇದರ ಬುಲೆಟಿನ್‍ನ ಸಂಪಾದಕರಾಗಿ ಪತ್ರಿಕೋದ್ಯಮದ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದರು.

500ಕ್ಕೂ ಮಿಕ್ಕಿದ ಲೇಖನಗಳು, ಕಿರು ಕಥೆಗಳು, ಸಂದರ್ಶನಗಳು, ವೈಶಿಷ್ಟ್ಯ ಲೇಖನಗಳು, ವ್ಯಕ್ತಿಚಿತ್ರ ಬರಹಗಳು,  ವಿಶೇಷ ಆಚ್ಛಾದನಾ ಲೇಖನ ಇತ್ಯಾದಿಗಳನ್ನು ತಾಯ್ನುಡಿ, ಪ್ರಜಾವಾಣಿ, ಉದಯವಾಣಿ, ಸಂದರ್ಶನ, ಜಯಂತಿ, ಸಚೇತ್ನಾ, ಕಲ್ಯಾಣ್, ಪಂಚಾಮೃತ ಸೇರಿದಂತೆ ರಾಷ್ಟ್ರದ ಹತ್ತಾರು ಪತ್ರಿಕೆಗಳಲ್ಲಿ ಪ್ರಕಟಿಸಿರುವರು. ಅಲ್ಲದೆ ಹಳೆಯದು ಹೊನ್ನಲ್ಲವೇ... ಕನ್ನಡ ಕೃತಿಯನ್ನೂ ಪ್ರಕಟಿಸಿದ್ದಾರೆ. ಆಲ್‍ಇಂಡಿಯಾ ರೇಡಿಯೋ, ಮುಂಬಯಿ ಆಕಾಶವಾಣಿಯಲ್ಲೂ ಕನ್ನಡದಲ್ಲಿ ವಿಶೇಷ ಸಮಕಾಲೀನ ಲೇಖನ, ಕಿರು ಕಥೆಗಳು, ಚರ್ಚೆಗಳಲ್ಲಿ ಭಾಗವಹಿಸಿ ಸಂದರ್ಶನಗಳನ್ನು ನೀಡಿರುವರು. 1983ರಲ್ಲಿ ನಡೆದ ಬೋಂಬೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕನ್ನಡ ಪತ್ರಿಕೋದ್ಯಮದ ಬಗ್ಗೆ ಭಾಷಣ ಮಂಡಿಸಿದ್ದಾರೆ. 1997ರಲ್ಲಿ ಮುಂಬಯಿಯಲ್ಲಿ ಯಶÀವಂತ ಚಿತ್ತಾಲರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾರಾಷ್ಟ್ರ ಕನ್ನಡ ಸಮ್ಮೇಳನದಲ್ಲಿ ಮುಂಬಯಿ ಕನ್ನಡಿಗ ಅಂದು ಇಂದು ಮುಂದು ವಿಚಾರವನ್ನೂ ಮಂಡಿಸಿರುವರು. ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಇವರ ನೂರಾರು ಲೇಖನಗಳು ರಾಷ್ಟ್ರದ ಮತ್ತು ಹೊರನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. 1969ರಿಂದ ಮುಂಬಯಿಯಲ್ಲಿನ ಹೆಸರಾಂತ ಕಾರ್ಯನಿರತ ಪತ್ರಕರ್ತರಾಗಿ ಪರಿಚಿತ ಇವರು ಸುಮಾರು ನಾಲ್ಕುವರೆ ದಶಕಗಳಿಂದ ಹೆಸರಾಂತ ಲೇಖಕ, ಪತ್ರಕರ್ತರಾಗಿ ಮೆರೆದಿದ್ದಾರೆ. ಕಲಕೋಟಿ ಅವರು ಪ್ರಪಂಚ, ಕರ್ಮವೀರ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಮುಂಬಯಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಹುಮುಖ ವ್ಯಕ್ತಿತ್ವದ ಇವರಿಗೆ ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಶ್ರೇಷ್ಠ ಪತ್ರಕರ್ತ ಗೌರವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ಮುಂಬಯಿ, ಥಾಣೆ, ಅಂಬರ್‍ನಾಥ್, ಕಲ್ಯಾಣ್ ಇನ್ನಿತರ ಪ್ರದೇಶಗಳಲ್ಲಿನ ಹತ್ತಾರು ಕನ್ನಡ ಸಂಸ್ಥೆಗಳೂ ಇವರ ಸೇವೆ ಗುರುತಿಸಿ ಗೌರವಿಸಿದೆ. 2013ರಲ್ಲಿ ಡೊಬಿವಿಲಿಯಲ್ಲಿ ನಡೆದ ಅಖಿಲ ಭಾರತ ಹೊರನಾಡ ಕನ್ನಡಿಗರ ಸಮ್ಮೇಳನ ಸಮಾರಂಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರಿಂದ ಹೊರನಾಡ ಶ್ರೇಷ್ಠ ಕನ್ನಡಿಗರಾಗಿ ಸನ್ಮಾನಿಸಲ್ಪಟ್ಟಿದ್ದಾರೆ.

2003ರಲ್ಲಿ ಪತ್ನಿ ಗೀತಾ ವಸಂತ್ ಇಹಲೋಕ ತ್ಯಜಿಸಿಸಿದ್ದು, ವಸಂತ ಕಲಕೋಟಿ ಸದ್ಯ ತಮ್ಮ ನಾಲ್ವರು ಪದವೀಧರೆ ಮತ್ತು ವಿವಾಹಿತ ಸುಪುತ್ರಿಯರಾದ ಉಮಾ, ವರ್ಷ, ವೀಣಾ ಮತ್ತು ಜಯ ಅವರೊಂದಿಗೆ ತಮ್ಮ ಬದುಕನ್ನು ಕಳೆಯುತ್ತಿದ್ದಾರೆ. ಸುಪುತ್ರ ವಿದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ನಿರತರಾಗಿದ್ದಾರೆ. ಸಿಂಗಾಪುರಾ, ಮಲೇಷಿಯಾ, ಥೈಲ್ಯಾಂಡ್, ಯೂರೋಪ್, ಇಂಗ್ಲೆಂಡ್, ಲಂಡನ್, ಫ್ರಾನ್ಸ್, ಪ್ಯಾರಿಸ್, ಸ್ವಿಸರ್‍ಲ್ಯಾಂಡ್, ಇಟೆಲಿ, ರೋಮ್ ಸೇರಿದಂತೆ ವಿಶ್ವದ ಹತ್ತಾರು ರಾಷ್ಟ್ರಗಳನ್ನು ಸುತ್ತಾಡಿ ಅಪಾರ ಅನುಭವ ಮೈಗೂಡಿಸಿರುವ ವಸಂತ ಕಲಕೋಟಿ ಅವರು ಅಪರೂಪದ ಸಜ್ಜನ ಬದುಕಿನ ಅಜಾತಶತ್ರು ವ್ಯಕ್ತಿಯಾಗಿ ನಮ್ಮೊಂದಿಗಿರುವುದು ಕನ್ನಡಿಗರ ಹಿರಿಮೆಯಾಗಿದೆ.

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವೀಧರರಾಗಿ ನಂತರ ಕಾನೂನು ಪದವಿಯೊಂದಿಗೆ ಎಲ್‍ಎಲ್‍ಬಿಯನ್ನೂ ಪೂರೈಸಿದರು. ಜಮ್ನಾಲಾಲ್ ಬಜಾಜ್ ಇನ್‍ಸ್ಟಿಟ್ಯೂಟ್ ಆಫ್ ಮೇನೆಜ್‍ಮೆಂಟ್ ಸ್ಟಡೀಸ್ ಸಂಸ್ಥೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಮೇನೆಜ್‍ಮೆಂಟ್‍ನಲ್ಲೂ ಡಿಪೆÇ್ಲೀಮಾ ಓದುತ್ತಲೇ ಇಂಗ್ಲೀಷ್, ಹಿಂದಿ ಮರಾಠಿ ಕನ್ನಡ ಭಾಷಾ ಪ್ರವೀಣತರಾದರು. ಎಂಎಎಲ್‍ಎಲ್, ಬಿಡಿಎಎಂ ವ್ಯಾಸಂಗ ಪಡೆದ ಬಲು ಅಪರೂಪದ ತೀರಾ ಸೌಮ್ಯತನದ ವಸಂತ ಕಲಕೋಟಿ ಅವರು 1965-1984ರ ಇಸವಿ ಮಧ್ಯೆ ಮುಂಬಯಿ ವಿವಿಯ ಕೆಮಿಕಲ್ ಟೆಕ್ನಾಲಜಿ ವಿಭಾಗದಲ್ಲಿ ಸ್ಟೋರ್ ಪರ್ಚಸ್ ಅಧಿಕಾರಿಯಾಗಿ ನಂತರ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪಕುಲ ಸಚಿವರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿ ಹೊಂದಿದರು. ಕ್ರಮೇಣ ಕಲ್ಯಾಣ್, ಥಾಣೆ, ಮುಂಬಯಿ ಜಿಲ್ಲಾ ಕೋರ್ಟ್‍ಗಳಲ್ಲಿ ಮತ್ತು ಮುಂಬಯಿ ಉಚ್ಛನ್ಯಾಯಲಯದಲ್ಲಿ ಸಿವಿಲ್, ಕ್ರಿಮಿನಲ್, ಕೋ.ಆಪರೇಟಿವ್ ಮತ್ತು ಗ್ರಾಹಕ ವಿಷಯಗಳಲ್ಲಿ ವಕೀಲ ವೃತ್ತಿಯಲ್ಲಿ ಪಳಗಿದ ನ್ಯಾಯವಾದಿ ಕಲಕೋಟಿ ಅವರು ಕಾನೂನುತಜ್ಞರಾಗಿ  ಶ್ರಮಿಸಿರುವರು.

1987-92ರಲ್ಲಿ ಬೊಂಬೇ ಯುನಿವರ್ಸಿಟಿ ಆಫೀಸರ್ಸ್ ಅಸೋಸಿಯೇಶನ್‍ನ ಗೌ| ಕಾರ್ಯದರ್ಶಿಯಾಗಿ 1992-94ರ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅಸೋಸಿಯೇಶನ್ ಆಫ್ ಯುನಿವರ್ಸಿಟಿ ಅಡ್ಮಿನಿಸ್ಟ್ರೇಟರ್ಸ್ ಇಂಡಿಯಾ ಇದರ ಮಹಾರಾಷ್ಟ್ರ ರಾಜ್ಯ ವಿಭಾಗೀಯ ಗೌ| ಕಾರ್ಯದರ್ಶಿಯಾಗಿ ರಾಜ್ಯ ಮಟ್ಟದ ಸಮಾವೇಶ ನಡೆಸಿದ ಕೀರ್ತಿ ಇವರದ್ದಾಗಿದೆ. ನೇಶನಲ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಸೋಸಿಯೇಶನ್‍ನ ಆಫ್ ಯುನಿವರ್ಸಿಟಿ ಅಡ್ಮಿನಿಸ್ಟ್ರೇಟರ್ಸ್‍ನ ಸದಸ್ಯರಾಗಿ ನಾಗ್ಪುರಾ, ನವದೆಹಲಿ ಮತ್ತು ಪಾಂಡಿಚೇರಿಯಲ್ಲಿ ನಡೆಸಲ್ಪಟ್ಟ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವರು.

1967-68ರಲ್ಲಿ ಕರ್ನಾಟಕ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ, 1968-70ರಲ್ಲಿ ಕರ್ನಾಟಕ ಸಂಘ ಮುಂಬಯಿ, 1973-78ರಲ್ಲಿ ಕನ್ನಡ ಸಾಹಿತ್ಯ ಕೂಟ ಮುಂಬಯಿ ಇತ್ಯಾದಿ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆಗಿ, 1971-78ರಲ್ಲಿ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸ್ಮಾರಕ ಕಟ್ಟಡ ಸಮಿತಿಯ ಆಡಳಿತ ಸಮಿತಿ ಸದಸ್ಯರಾಗಿ, 1969ರಿಂದ ಕರ್ನಾಟಕ ಸಂಘ ಡೊಂಬಿವಿಲಿ ಸಂಸ್ಥೆಯಲ್ಲಿ ಸಕ್ರೀಯರಾಗಿ, ವಿವಿಧ ಹುದ್ದೆಗಳನ್ನಲಂಕರಿಸಿ 1990-99 ಮತ್ತು 2005-2008ರ ಅಧ್ಯಕ್ಷರಾಗಿ, ಮಂಜುನಾಥ ವಿದ್ಯಾಲಯ ಡೊಂಬಿವಿಲಿ ಇದರ ವಿದ್ಯಾ ಸಂಘಟನಾ ಸಮಿತಿ ಕಾರ್ಯಧ್ಯಕ್ಷರಾಗಿ, 2005-2011ರ ಸಾಲಿಗೆ ಶಾಲಾ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷರಾಗಿ, 2002-2005 ರಲ್ಲಿ ಗವರ್ನಿಂಗ್ ಬಾಡಿ ಆಫ್ ಮಂಜುನಾಥ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಕಾಮರ್ಸ್ ಡೊಂಬಿವಿಲಿ ಇದರ ಕಾರ್ಯಧ್ಯಕ್ಷರಾಗಿ ಅಂತೆಯೇ ಲಯನ್ಸ್ ಕ್ಲಬ್ ಆಫ್ ಇಂಟರ್‍ನೇಶನಲ್ ಸಂಸ್ಥೆಯಲ್ಲೂ ಸೇವೆ ಸಲ್ಲಿಸುವ ಜೊತೆಗೆ ಮುಂಬಯಿ ಹಾಗೂ ಉಪನಗರಗಳಲ್ಲಿನ ಅನೇಕ ಕನ್ನಡ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವರು. ಹಿರಿಯ ಪತ್ರಕರ್ತರಾಗಿರುವ ಕಲಕೋಟಿ ಅವರನ್ನು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ತನ್ನ ದಶಮಾನೋತ್ಸವ ಸಂಭ್ರಮದಲ್ಲಿ (2018ರ ಆ.22ರಂದು ಕುರ್ಲಾ ಪೂರ್ವದಲ್ಲಿನ ಬಂಟರ ಭವನÀದಲ್ಲಿ) ಸನ್ಮಾನಿಸಿ ಗೌರವಿಸಿದೆ.

ಇಂದು (ಜು.24) ಬುಧವಾರ ಬೆಳಿಗ್ಗೆ ಸಾಂತಾಕ್ರೂಜ್‍ನ ಬಿಲ್ಲವ ಭವನಕ್ಕೆ 
ಪ್ರಕಾಶ್ ಅಂಚನ್ ನೇತೃತ್ವದ ಭಾರತ ಶಿಕ್ಷಣ ಯಾತ್ರೆ ರಥ ಆಗಮನ 
ಮುಂಬಯಿ, ಜು.23: ಭಾರತ ರಾಷ್ಟ್ರದಾದ್ಯಂತ ಒಂದೇ ದೇಶ-ಒಂದೇ ಶಿಕ್ಷಣ ಜಾರಿಗಾಗಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮತ್ತು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಭಾರತ ಶಿಕ್ಷಣ ಯಾತ್ರೆ ರಥ ಮಹಾರಾಷ್ಟಕ್ಕೆ ಆಗಮಿಸುತ್ತಿದೆ. ಇಂದು (ಜುಲೈ.24) ಬುಧವಾರ ಪೂರ್ವಾಹ್ನ10.00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನಕ್ಕೆ ಭಾರತ ಶಿಕ್ಷಣ ಯಾತ್ರೆ ರಥ ಆಗಮಿಸಲಿದೆ.

 ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮತ್ತು ಪದಾಧಿಕಾರಿಗಳು, ಅಸೋಸಿಯೇಶನ್‍ನ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ, ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಮುಂದಾಳುತ್ವದಲ್ಲಿ ಶಿಕ್ಷಣ ಯಾತ್ರೆ ರಥ ಬರಮಾಡಿ ಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಬೃಹನ್ಮುಂಬಯಿಯಲ್ಲಿನ ಎಲ್ಲಾ ಕನ್ನಡ ಕಲಿಕಾ ಶಾಲೆಯ ಶಿಕ್ಷಕರು, ವಿದ್ಯಾಥಿರ್üಗಳು, ಶಿಕ್ಷಕೇತರರು, ಶಿಕ್ಷಣಾಭಿಮಾನಿಗಳು ಗಣ್ಯರು ಸಕಾಲದಲ್ಲಿ ಆಗಮಿಸಿ ಶಿಕ್ಷಣ ಯಾತ್ರೆ ರಥವನ್ನು ಸ್ವಾಗತಿಸಬೇಕು ಎಂದು  ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದೇ ದೇಶ-ಒಂದೇ ಶಿಕ್ಷಣ ಜಾರಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಸಾಗುತ್ತಿರುವ ಮಧ್ಯೆ ಇಂದಿಲ್ಲಿ ಮುಂಬಯಿ ಆಗಮಿಸಿದೆ. ವಿದ್ಯೆಯಿಂದ ಸ್ವಾತಂತ್ರರಾಗಿರಿ... ಸಂಘಟನೆಯಿಂದ ಬಲಯುತರಾಗಿರಿ ಎಂಬ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ರೂಢಿಸಿ ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಹೋರಾಟಗಾರ, ಏಕರೂಪಿ ಶಿಕ್ಷಣ ಹೋರಾಟಗಾರ  ಪ್ರಕಾಶ್ ಅಂಚನ್ ತಿಳಿಸಿದ್ದಾರೆ.

ಕಳೆದ ಜು.21ನೇ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೆÇಳಲಿ ಇಲ್ಲಿ ಆರಂಭಗೊಂಡ ಈ ಯಾತ್ರೆಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಮಾಜಿ ಸಭಾಪತಿ, ಕರ್ನಾಟಕ ರಾಜ್ಯ ಸರಕಾರದ ಸಾಮ್ಯತ್ವದ (ವಿಧಾನ ಪರಿಷತ್ ಆಡಳಿತ್ವದ) ಗಡಿನಾಡ ಕನ್ನಡಿಗರ ಸೇವಾಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ಹೆಚ್ ಶಂಕರಮೂರ್ತಿ ಉದ್ಘಾಟಿಸಿದ್ದರು. ಬಳಿಕ ಗೋವಾ, ಮಹಾರಾಷ್ಟ್ರ ರಾಜ್ಯಕ್ಕೆ (ಮುಂಬಯಿಗೆ) ಇಂದು ಪ್ರವೇಶಿಸಿದೆ. ಇಲ್ಲಿಂದ  ಗುಜರಾತ್, ರಾಜಸ್ಥಾನ, ಹರಿಯಾಣ ಮೂಲಕ ದೆಹಲಿ ಸೇರಿ ವಿನಂತಿಸಿದ್ದಾರೆ. ಆ.01ನೇ ಗುರುವಾರ ಬೆಳಿಗ್ಗೆ ದೆಹಲಿಯಲ್ಲಿ ಜಂತರ್-ಮಂತರ್ ಇಲ್ಲಿ ಸಮಾಪನ ಆಗಲಿದೆ ಎಂದು ಪತ್ರಕರ್ತ ಹಾಗೂ ಕಾರ್ಯಕರ್ತ ಸಂದೀಪ್ ಸಾಲ್ಯಾನ್ ತಿಳಿಸಿದ್ದಾರೆ.

ನಾಗೇಶ್ ಪಡು ರವರ’ ಸಾವು,ಜಿಲ್ಲಾಡಳಿತಕ್ಕೆ ಎಚ್ಚರಿಕೆ ಗಂಟೆಯಾಗಲಿ.! : ಫಾರೂಕ್ ಉಳ್ಳಾಲ್
ಮುಂಬಯಿ (ಮಂಗಳೂರು), ಜು.29:ಮಿತಭಾಷಿ , ನಗು ಮುಖದ ಸುಂದರ ತರುಣ ನಾಗೇಶರ ನಿಧನ,ಅಘಾತವಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಯ ಅಚಾತುರ್ಯ ಮತ್ತು ಉದಾಸೀನತೆಯ ಬಗ್ಗೆ ಅಪರಾಧ ಪ್ರಜ್ಞೆ ಕಾಡುತ್ತದೆ.!
ಈ ಸಾವಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯ ವೈಫಲ್ಯ ವೂ ಅಡಗಿದೆ!? ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ತಮ್ಮ ಸಂತಾಪ ಪ್ರಕಟನಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಲೋಕದ ಸರಿ-ತಪ್ಪುಗಳನ್ನು ಸಾಕೆನ್ನಿಸುವಷ್ಟು ಬಾರಿ ಹೇಳುತ್ತಲೇ ಇರುವ ಮಾಧ್ಯಮಗಳು ಅದರಲ್ಲೂ ನಾಗೇಶ್ ಉದ್ಯೋಗದಲ್ಲಿದ್ದ *’ದೃಶ್ಯ ಮಾಧ್ಯಮ’ಕ್ಕೆ(,ಗಳಿಗೆ) ಊರಿಗೆ ಮಹಾ ಮಾರಿಯಂತೆ ವಕ್ಕರಿಸಿರುವ ’ಡೆಂಗ್ಯೂ ಜ್ವರ’ ದ ಜಾಗೃತಿ ಮೂಡಿಸಲು, ಸಂಬಂಧ ಪಟ್ಟ ಇಲಾಖೆಯನ್ನು ಎಚ್ಚರಿಸಲು ಸಕಾಲಿಕ ಕಾರ್ಯಕ್ರಮ ನೀಡ ಬೇಕೆಂದು ಅನಿಸದೇ ಹೋದದ್ದು, ’ದೀಪದ ಕೆಳಗೆ’ ಕತ್ತಲೆಯಾಗಿರುತ್ತದೆ ಎನ್ನುವಂತಾಗಿದೆ ನಿಜಕ್ಕೂ ಇದು ದುರಂತವೇ ಸರಿ. ಖಂಡನಾರ್ಹ ಕೂಡಾ.

ಇನ್ನಾದರೂ, ಸ್ಥಳೀಯವಾಗಿಯಾದರೂ ಮಾಧ್ಯಮಗಳು ವೃತ್ತಿ ಬಾಂಧವರ ಕ್ಷೇಮ, ತಮ್ಮ ಕರ್ತವ್ಯ ಎಂದು ಪರಿಗಣಿಸುವಂತಾಗಲಿ‌. ಎಂದು ಮಾಧ್ಯಮ ವ್ಯವಸ್ಥಾಪಕರನ್ನು ಒತ್ತಾಯಿಸಿರುವ ಫಾರೂಕ್ ಉಳ್ಳಾಲ್,
*ಮಾಧ್ಯಮ ಮಿತ್ರನ ಬಲಿದಾನ, ಡೆಂಗ್ಯೂ ಎಂಬ ಮಾರಕ ರೋಗವನ್ನು ಕನಿಷ್ಠ ಪಕ್ಷ ಕರಾವಳಿಯ ಮಟ್ಟಿಗಾದರೂ ಮೂಲೋತ್ಪಾಟನೆ ಮಾಡಲು ಜಿಲ್ಲಾಡಳಿತಕ್ಕೆ ಪ್ರೇರಣೆಯಾಗಲಿ.*ಎಂದೂ ಆಗ್ರಹಿಸಿದ್ದಾರಲ್ಲದೆ, ಗೆಳೆಯನ ’ರೋಗ ಶಮನ’ಕ್ಕಾಗಿ ಹೆಗಲೆಣೆಯಾಗಿ ಸ್ಪಂದಿಸಿದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ತತ್ಪರತೆಯನ್ನು ಅಭಿನಂದಿಸಿ, *ಪತ್ರಕರ್ತರ ಜಾಗೃತ ಮನಸ್ಸು, ನಾಡ ಸೌಖ್ಯ ಕಟ್ಟಲು ಇನ್ನಷ್ಟು ಸೇವಾನಿರತ ವಾಗಲಿ ಎಂದು ಆಶಿಸಿದ್ದಾರೆ.
ಇನ್ನಷ್ಟು ಕಾಲ ಬದುಕಿ ಬಾಳ ಬೇಕಾದ ಮನೆ ಮಗನ ಅಕಾಲಿಕ ಅಗಲಿಕೆಯ ಆಘಾತವನ್ನು ಸಹಿಸುವ  ಸಹನಾ ಶಕ್ತಿಯನ್ನು ದೇವರು ನಾಗೇಶ್ ರ ಕುಟುಂಬಕ್ಕೆ  ದಯಾಪಾಲಿಸಲಿ.ಮೃತರ ಆತ್ಮಕ್ಕೆ ಚಿರಶಾಂತಿಯನ್ನೂ ಕರುಣಿಸಲಿ ಎಂದೂ ಶ್ರೀ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆ ಕೋರಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi