Brief Mumbai, Mangalore news with pictures
Kemmannu News Network, 02-08-2019 12:02:38
ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ವತಿಯಿಂದ ರಂಗ ತರಭೇತಿ ಶಿಬಿರ
ಸಂವೇದನಾಶೀಲ ನಾಟಕಕಾರ ಸಾ.ದಯಾ ಅವರಿಂದ ಶಿಬಿರಭ್ಯಾಸ
ಮುಂಬಯಿ, ಜು.30: ಮುಂಬಯಿ ಉಪನಗರ ಕಾಂದಿವಲಿಯಲ್ಲಿನ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್ ಕನ್ನಡಿಗರ ಬಳಗವು ರಂಗ ತರಭೇತಿ ಶಿಬಿರವನ್ನು ಆಯೋಜಿಸಿದ್ದು, ಇದೇ ಬರುವ ಆ.04ನೇ ಆದಿತ್ಯವಾರ ಸಂಜೆ 4.00 ಗಂಟೆಗೆ ಸರಿಯಾಗಿ ಕಾಂದಿವಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನದ ಸಭಾಗೃಹದಲ್ಲಿ ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷರಾದ ಎಂ.ಕೃಷ್ಣ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಶಿಬಿರವನ್ನು ಬಳಗದ ಗೌರವ ಅಧ್ಯಕ್ಷರೂ, ಸ್ಥಳಿಯ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ, ವೆಜ್ ಟ್ರೀಟ್ನ ಮಾಲಕರಾದ ರವೀಂದ್ರ ಎಸ್. ಶೆಟ್ಟಿ ಆಗಮಿಸಲಿರುವರು.
ರಂಗಭೂಮಿ ಮತ್ತು ಸಿನೆಮಾ ರಂಗದ ಪ್ರಸಿದ್ಧ ಕಲಾವಿದರಾದ ಘನಶ್ಯಾಮ ಶ್ರೀವಾಸ್ಥವ ಹಾಗೂ ಮುಂಬೈಯ ಖ್ಯಾತ ರಂಗತಜ್ಞ, ಸಂವೇದನಾಶೀಲ ನಾಟಕಕಾರ, ಕವಿ, ಸಾ.ದಯಾ (ದಯಾನಂದ ಸಾಲ್ಯಾನ್) ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರ ನಡೆಸಿ ಕೊಡÀುವರು.
ಮುಂಬಯಿ ಉಪನಗರ ಕಾಂದಿವಲಿಯಲ್ಲಿನ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್ ಕನ್ನಡಿಗರ ಬಳಗವು ಕಳೆದ ಹಲವು ವರ್ಷಗಳಿಂದ ಹತ್ತು ಹಲವು ಸಾಂಸ್ಕೃತಿಕ ,ಸಾಹಿತ್ಯಕ ಕಾರ್ಯಕೃಮಗಳು , ಶೈಕ್ಷಣಿಕ, ಸಾಮಾಜಿಕವಾಗಿ ಅನೇಕ ಜನಪರ ಚಟುವಟಿಗಳಿಂದ ಮಹಾನಗರದಲ್ಲಿ ತನ್ನದೇ ಆದ ಮಹತ್ತರ ಹೆಜ್ಜೆ ಗುರುತನ್ನು ದಾಖಲಿಸಿದೆ. ಇದೀಗ ಸಂಸ್ಥೆಯು ರಂಗಭೂಮಿಯಲ್ಲಿಆಸಕ್ತಿವುಳ್ಳವರಿಗೆ, ಕಲಾವಿದರಿಗೆ ಪೆÇ್ರೀತ್ಸಾಹಿಸುವ ಹಿನ್ನಲೆಯಲ್ಲಿ, ರಂಗ ತರಭೇತಿ ಶಿಭಿರ ಏರ್ಪಡಿಸಲು ನಿರ್ಧರಿಸಿದೆ. ಮೂರು ದಿನಗಳ ಈ ಶಿಭಿರದಲ್ಲಿ ರಂಗಭೂಮಿಯ ಕುರಿತು ಅಧ್ಯಯನಪೂರ್ವಕ ಮೂಲಭೂತ ಶಿಕ್ಷಣನೀಡುವತ್ತ ಗಮನ ಹರಿಸಲಾಗುವುದು.
ಬಳಗದ ಸದ್ರಿ ಕಾರ್ಯಕಾರಿ ಸಮಿತಿಯ ಸಹಕಾರ ಮತ್ತು ಅಧ್ಯಕ್ಷ ಕೃಷ್ಣ ಶೆಟ್ಟಿ ಅವರ ಮುಂದಾಳುತನದಲ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಶೆಟ್ಟಿ ಮುತುವರ್ಜಿಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಸಂಘದ ಸದಸ್ಯರು, ಮಕ್ಕಳು ಮತ್ತು ಚಾರ್ ಕೋಪ್ ಆಸುಪಾಸಿನ ಪರಿಸರದ ಕರ್ನಾಟಕ ಮೂಲದ ಆಸಕ್ತರೆಲ್ಲರು ಭಾಗವಹಿಸಬಹುದು. ಶಿಬಿರಾಥಿರ್üಗಳ ಶಿಸ್ತುಬದ್ಧವಾದ ನೋಂದಣಿಗಾಗಿ ಕೇವಲ ರೂ.100 ನೋಂದಣಿ ಶುಲ್ಕವನ್ನು ವಿಧಿಸಲಾಗುವುದು. ಬಳಗದ ಸಾಹಿತ್ಯ ಮತ್ತು ಸಾಂಸ್ಕ್ರಿಕ ಉಪಸಮಿತಿ ಹಮ್ಮಿಕೊಂಡ ಈ ತರಭೇತಿ ಶಿಬಿರ ದಿಂದ ಕಲಾವಿದರ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಮತ್ತು ಆ ಮೂಲಕ ರಂಗಭೂಮಿಯಲ್ಲಿ ಮುನ್ನಡೆಯಲು ಸದಾವಕಾಶ ಇದಾಗಲಿ ಎಂಬ ಮಹದಾಶೆಯಿದೆ. ಮುಂದಿನ ದಿನಗಳಲಿ ಯಕ್ಷಗಾನ, ತಾಳಮದ್ದಳೆ ಮುಂತಾದ ಶಿಭರಗಳನ್ನೂ ಹಮ್ಮಿಕೊಳ್ಳುವ ಆಲೋಚನೆ ಇದೆ ಎಂದು ಉಪಸಮಿತಿ ಸಂಚಾಲಕ ಭಾಸ್ಕರ ಸರಪಾಡಿ ತಿಳಿಸಿರುವರು.
ಈ ಮೂರು ದಿನಗಳ ರಂಗ ಶಿಭಿರಕ್ಕೆ ಉಪ ಸಮಿತಿಯ ವಿಶೇಷ ಆಮಂತ್ರಿತ ಕವಿ, ಕಲಾವಿದ ಗೋಪಾಲ ತ್ರಾಸಿ ಹಾಗು ಇನ್ನಿತರ ಎಲ್ಲ ಸದಸ್ಯರ ಉಪಸ್ಥತಿ ಹಾಗೂ ನೆರವು ಲಭಿಸಲಿದೆ. ಆಸಕ್ತರು ತನುಜಾ ಭಟ್-ಮೊ. 98201 25830 ಅಥವಾ ರೂಪಾ ಭಟ್-ಮೊ.98212 97562 ಇವರನ್ನು ಸಂಪರ್ಕಿಸ ಬೇಕಾಗಿ ಬಳಗದ ಸಂಘಟಕರು ತಿಳಿಸಿರುತ್ತಾರೆ.
ಮಾಜಿ ಎಂಪಿ ಏಕ್ನಾಥ್ ಗಾಯಕ್ವಾಡ್ ಅವರನ್ನು ಅಭಿನಂದಿಸಿದ ಜಯರಾಮ ಶೆಟ್ಟಿ ಬಳಗ
ಮುಂಬಯಿ, ಜು.30: ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ್-2017 ಪುರಸ್ಕೃತ ಬೃಹನ್ಮುಂಬಯಿಯ ಪ್ರತಿಷ್ಠಿತ ಹೊಟೇಲು ಉದ್ಯಮಿ ಇನ್ನ ಜಯರಾಮ ಶೆಟ್ಟಿ (ಅಜಂತಾ ಕ್ಯಾಟರರ್ಸ್), ಹೊಟೇಲ್ ಉದ್ಯಮಿ ಲತೀಶ್ ಗೋಪಾಲ್ ಶೆಟ್ಟಿ ಮತ್ತು ಸಮಾಜ ಸೇವಕ ಪಿ.ಡಿ ಶೆಟ್ಟಿ ಸಯಾನ್ ಇವರು ಕಾಂಗ್ರೆಸ್ ಪಕ್ಷದ ಮುಂಬಯಿ ಪ್ರದೇಶ ಕಾರ್ಯಾಧ್ಯಕ್ಷ ಆಗಿ ಆಯ್ಕೆಯಾದ ಬೃಹನ್ಮುಂಬಯಿಯಲ್ಲಿನ ಹಿರಿಯ ರಾಜಕಾರಣಿ, ಕಾಂಗ್ರೇಸ್ (ಐ) ಪಕ್ಷದ ಧುರೀಣ, ಮುಂಬಯಿ ದಕ್ಷಿಣ ಮಧ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಏಕ್ನಾಥ್ ಗಾಯಕ್ವಾಡ್ ಅವರನ್ನು ಸಯನ್ ಕಚೇರಿಯಲ್ಲಿ ಭೇಟಿ ನೀಡಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.
‘ಹಣ ಪೀಕುವ ನಕಲಿ ನಿಯತಕಾಲಿಕೆಗಳ ಬಗ್ಗೆ ಎಚ್ಚರವಿರಲಿ’
ವಿವಿ ಕಾಲೇಜು: ಸಂಶೋಧನೆ ಕುರಿತ ಕಾರ್ಯಾಗಾರದಲ್ಲಿ ಡಾ. ಅಮಿತಾಬ್ ಆನಂದ್ ಕಿವಿಮಾತು
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ (ಐಕ್ಯೂಎಸಿ) ಮತ್ತು ಸಿಪಿಇ ಸಹಯೋಗದಲ್ಲಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರಿಸರ್ಚ್ ಮೆಥಡಾಲಜಿಯ ಕುರಿತಾಗಿ ಅಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರ ಆಯೋಜಿಸಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಫ್ರಾನ್ಸ್ನ ಸ್ಕೇಮಾ ಬ್ಯುಸಿನೆಸ್ ಸ್ಕೂಲ್ನ ಡಾ. ಅಮಿತಾಬ್ ಆನಂದ್ ಸಂಶೋಧನೆಯಲ್ಲಿ ಅನುಸರಿಸಬಹುದಾದ ಸೂಕ್ಷ್ಮಗಳನ್ನು ತಿಳಿಸಿಕೊಟ್ಟರು. ವಿಷಯದ ಆಯ್ಕೆಯಲ್ಲಿ ವಹಿಸಬೇಕಾದ ಜಾಗ್ರತೆ, ಸಾಹಿತ್ಯ ವಿಮರ್ಶೆಗೆ ಬಳಸಬಹುದಾದ ಸರಳ ವಿಧಾನಗಳು, ಪ್ರಬಂಧ ಮಂಡನೆಗೆ ಆರಿಸಿಕೊಳ್ಳಬೇಕಾದ ನಿಯತಕಾಲಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಬಂಧ ಮಂಡನೆಗೆ ಹಣ ಪೀಕುವ ನಕಲಿ ನಿಯತಕಾಲಿಕೆಗಳ ಕುರಿತು ಎಚ್ಚರಿಸಿದರು. ಸಂಶೋಧನೆಗಳ ನಡುವೆ ಇರುವ ಭಿನ್ನತೆ, ಒತ್ತಿಹೇಳಬೇಕಾದ ಅಂಶಗಳ ಪ್ರಾಮುಖ್ಯತೆ ಮತ್ತು ವಿಭಿನ್ನತೆ ಕಾಯ್ದುಕೊಳ್ಳುವ ಜೊತೆಗೆ ಅತ್ಯಲ್ಪ ಸಮಯದಲ್ಲಿ ಗುಣಮಟ್ಟದ ಸಂಶೋಧನೆ ಕೈಗೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.
ಈ ಮೊದಲು ಕಾರ್ಯಾಗಾರ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಉದಯಕುಮಾರ ಎಂ.ಎ, ಶಿಕ್ಷಣದ ಹರಿಕಾರ ಹರೇಕಳ ಹಜಬ್ಬ ಅವರ ಉದಾಹರಣೆ ನೀಡಿ, ಎಷ್ಟೇ ಸಂಶೋಧನೆ ಕೈಗೊಂಡರೂ ಸರಿ ನಾವು ಸಮಾಜಮುಖಿಯಾಗಿ ಬದುಕಬೇಕು ಎಂದರು. ಜಿಲ್ಲೆಯ ವಿವಿಧ ಕಾಲೇಜುಗಳ 60 ಕ್ಕೂ ಹೆಚ್ಚು ಮಂದಿ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಿಪಿಇ ಸಂಯೋಜಕಿ ಡಾ. ಲತಾ ಎ. ಪಂಡಿತ್, ಐಕ್ಯೂಎಸಿ ಸಂಯೋಜಕ ಡಾ. ವೀರಭದ್ರಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಜಯಶ್ರೀ ಭರತ್ ಕಾರ್ಯಕ್ರಮ ನಿರೂಪಿಸಿದರು.
Bombay Bunts Association Youthwing - One Day Trek to Sudhagad Trek
Mumbai, Jul.29: "Keeping up with the calendar of events of the Youthwing activities, a one-day trek was organized on Sunday, 28th of July to Sudaghad Fort by the Bombay Bunts Association Youthwing. The hill fort situated at an elevation of 600 m from the ground in the Raighad district of Maharashtra. Sudhagad trek which is a short and sweet weekend gateway for trekkers from Mumbai and Pune. The fort is almost equidistant from both the cities. One can see the peaks of Sarasgad, Tail Baila and Ghangad from the top. The trek was organized by Youthwing Chairman Charan R Shetty, Vice chairman Shashikant Rai, Secretary Smruthi Shetty, Treasurer Dhananjay Shetty, Joint secretary Rajeev Shetty, Joint treasurer Nishaan Shetty along with Pratik Shetty and other committee members and attended by Youth of our community"
ತುಳುನಾಡ ಐಸಿರಿ ವಾಪಿ ಸಂಸ್ಥೆಯಿಂದ `ಆಟಿಡ್ ಒಂಜಿ ದಿನ’ ಸಂಭ್ರಮ
ಸಂಪ್ರದಾಯಿಕತೆಗಳಿಂದಲೇ ಮನುಜ ಜೀವನದ ಜೀವಾಳÀ : ಶಶಿಧರ ಬಿ.ಶೆಟ್ಟಿ
ಮುಂಬಯಿ (ವಾಪಿ-ಗುಜರಾತ್), ಜು.30: ನಾನು ಇನೊಮ್ಮೆ ಮನುಷ್ಯನಾಗಿ ಹುಟ್ಟಿದರೆ ನನ್ನ ತಾಯಿಯ ಉದರದಲ್ಲೇ ಹುಟ್ಟಬೇಕು. ಬಡ ಕುಟುಂಬದಲ್ಲಿ ಹುಟ್ಟಿದರೆ ಬಹುಶಃ ಮನುಷ್ಯ ಜೀವನ ಸಾರ್ಥಕ ಅನ್ನಬೇಕೋ ಏನೋ..? ಯಾಕೆಂದರೆ ನಮ್ಮ ಹಿರಿಯ ಆಚರಣೆಗಳು, ವಿಚಾರಧಾರೆಗಳು ಜೀವಂತ ಉಳಿದಿದ್ದರೆ ಅದು ಖಂಡಿತ ಬಡತನದ ನೋವನು ಉಂಡವರಿಂದ ಮಾತ್ರ. ನಾವು ಚಿಕ್ಕದಿರುವಾಗ ಆಟಿ ತಿಂಗಳು ಬಂದರೆ ಸಾಕು, ನಮ್ಮ ತಾಯಿ ನಮಗೆ ತೆರೆದಿರೆತ ಚಟ್ನಿ , ತಜಂಕ್ ಉಪ್ಪುಕಾರಿ, ತಿಮರೆ ಚಟ್ನಿ, ಪಾಲೆದ ಕಷಾಯ ಮತ್ತು ಪ್ರಕೃತಿಯಲ್ಲಿ ಅಡಗಿರುವ ಗಿಡಗಳ ಔಷಧಿಗಳು ನಮಗೆ ಕೊಡುತಿದ್ದರು. ಈ ವಿಷಯಗಳು ನಮ್ಮ ಮಕ್ಕಳು ತಿಳಿಯಬೇಕು. ಹಿರಿಯರನ್ನು ಇದನ್ನು ಮಕ್ಕಳಲ್ಲಿ ಪರಿಪಠಿಸಬೇಕು ಯಾಕೆಂದರೆ ಸಂಪ್ರದಾಯಿಕತೆಗಳಿಂದಲೇ ಮನುಜ ಜೀವನದ ಜೀವಾಳÀ ಸಾಧ್ಯ ಎಂದು ಗುಜರಾತ್ನ ಉದ್ಯಮಿ, ಹಿರಿಯ ಸಮಾಜ ಸೇವಕ, ತುಳು ಸಂಘ ಬರೋಡ ಇದರ ವಿಶ್ವಸ್ಥ ಶಶಿಧರ ಬಿ.ಶೆಟ್ಟಿ ಕರೆಯಿತ್ತರು.
ವಾಪಿ ಇಲ್ಲಿನ ವಾಪಿ-ದಮನ್ ಪರಿಸರದ ತುಳುನಾಡ ಐಸಿರಿ, ಸಂಸ್ಥೆಯು ಕಳೆದ ಭಾನುವಾರ ಸಂಜೆ ದಮನ್ ಇಲ್ಲಿನ ಹನಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ `ಆಟಿಡ್ ಒಂಜಿ ದಿನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ಶಶಿಧರ ಶೆಟ್ಟಿ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಸಮಾಜ ಸೇವಕಿ ಖಜಾನೆ ಹೊಸಮನೆ ಅಕ್ಕು ಭೋಜ ಶೆಟ್ಟಿ ಕಾರ್ಕಳ ಅಭ್ಯಾಗತರಾಗಿದ್ದು ಕಳಸೆಗೆ ಬತ್ತ ಸುರಿದು ಕಲ್ಪವೃಕ್ಷ ಹಿಂಗಾರ ಅರಳಿಸಿ ಮಂಗಳೂರು ಮಲ್ಲಿಗೆ ಮುಡಿದು ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಶುಭಕೋರಿದರು. ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಜಿ.ಪೂಜಾರಿ ಅವರು ನೆರೆದ ತುಳು ಬಾಂಧವರಿಗೆ ಆಟಿ ಸಂಭ್ರಮಕ್ಕೆ ಶುಭಕೋರಿದರು.
ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡುನಲ್ಲಿ ಪ್ರತಿಯೊಂದು ಸಂಪ್ರದಾಯಗಳಿಗೂ ಒಂದೊಂದು ಸ್ವಂತಿಕೆಯ ವೈಶಿಷ್ಟ್ಟತೆಗಳಿವೆ, ತುಳುನಾಡು ಕೋಟಿ ಚೆನ್ನಯ, ಕಾಂತಾಬಾರೆ ಬೂದಬಾರೆ, ಅಂಬಗ ಧಾರಗ, ಸಿರಿ ಕೊಂಡೆ, ಕೋಟೆದ ಬಭೂವು, ಅಗೋಳಿ ಮಂಜನ ಹೀಗೆ ಅನೇಕ ವೀರಪುರುಷರನ್ನು ಹೊಂದಿದ್ದ ಪುರಾತನ ಚರಿತ್ರೆವುಳ್ಳ ನಾಡಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಷಾಡ ತಿಂಗಳಿಗೆ ಬಹಳ ಮಹತ್ವವಿದ್ದು, ಹಿರಿಯರು ತುಳುನಾಡ ಪದ್ದತಿಯನ್ನು ಇಷ್ಟ ಪಡುತಿದರು, ಆಟಿ ತಿಂಗಳು ಕಷ್ಟದ ತಿಂಗಳೆಂದು ಪ್ರತೀತಿ ಇದೆಯಾದರೂ ಈಗ ನಗರದ ಬೇರೆಬೇರೆ ಕಡೆಗಳಲ್ಲಿ ಆಟಿ ತಿಂಗಳ ಆಚರಣೆಯನ್ನು ಸಂಭ್ರಮಿಸುವ ಕಾಲವಾಗಿದೆ. ಸÀಂಪ್ರದಾಯಿಕವಾಗಿ ಆಚರಿಸುವ ಈ ತಿಂಗಳನ್ನು ಭವಿಷ್ಯದ ಜನತೆ ಕಾಪಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅರುಣ್ ಶೆಟ್ಟಿ, ಉದಯ ಬಿ.ಶೆಟ್ಟಿ, ಪ್ರದೀಪ್ ಪೂಜಾರಿ, ಗಣೇಶ್ ಶೆಟ್ಟಿ, ಸುಕೇಶ್ ಎ.ಶೆಟ್ಟಿ ಮುಗೇರಿಮನೆ, ಕಿರಣ್ ಅಂಚನ್, ಮಹೇಶ್ ಶೆಟ್ಟಿ, ಜೀವನ ಶೆಟ್ಟಿ, ದಿವಾಕರ್ ಶೆಟ್ಟಿ, ಹರೀಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಪುತ್ತೂರು, ರಮೇಶ ಪೂಜಾರಿ, ಅಶೋಕ್ ಕೋಟ್ಯಾನ್, ಜನಾರ್ದನ್ ಮೇಲಂಟ ಪುತ್ತೂರು, ಶ್ರೀಧರ್ ಎನ್. ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಬರೋಡ, ಮಾದವ ಶೆಟ್ಟಿ ಬರೋಡ, ಗೋವಿಂದ ಶೆಟ್ಟಿ ಸಿಲ್ವಾಸ, ರಜನಿ ಗೋವಿಂದ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಅಧ್ಯಕ್ಷ ದಿನೇಶ್ ಶೆಟ್ಟಿ, ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ.ಎಸ್.ಕಾರಂತ್, ನಿಶಾ ನಾರಾಯಣ್ ಶೆಟ್ಟಿ, ರವಿನಾಥ್ ಶೆಟ್ಟಿ, ಅಜಿತ್ ಶೆಟ್ಟಿ ಅಂಕಲೇಶ್ವರ್ ಮತ್ತಿತರರು ಹಾಜರಿದ್ದು, ಸಂಘಟಕ, ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ವಿಶ್ವಸ್ಥ ಭಾಸ್ಕರ್ ಸರಪಾಡಿ ಉಪಸ್ಥಿತರಿದ್ದು, ಏಳುವರೆ ಲಕ್ಷ ಮಿಕ್ಕಿ ಮರಗಳನ್ನು ನೆಟ್ಟು ವಿಶ್ವದಾಖಲೆ ಮಾಡಿದ ಆರ್.ಕೆನಾಯರ್ ಇವರನ್ನು ಸನ್ಮಾನಿಸಲಾಯಿತು
ಉಪಾಧ್ಯಕ್ಷ ನವೀನ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಸದಸ್ಯ ಮಲ್ಕೋಮ್ ಪಿರೇರಾೀರಾ, ಆಟಿದ ತಿಂಗೊಲು ಇದರ ಮಹತ್ವ, ಆಚರಣೆಗಳ ವಿಶಿಷ್ಟ ್ಯತೆ ಇದರಿಂದ ಜನತೆಗೆ ಆಗುವÀ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು. ಗೌರವ ಪ್ರದಾನ ಕಾರ್ಯದರ್ಶಿ ಉದಯ ಬಿ.ಶೆಟ್ಟಿ ಪ್ರಸ್ತಾವನೆಗೈದರು. ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ರಜನಿ ಬಾಲಕೃಷ್ಣ ಶೆಟ್ಟಿ ಮತ್ತು ಅರುಂಧತಿ ನವೀನ್ ಶೆಟ್ಟಿ ನಿರೂಪಿಸಿದರು. ಉದಯ ಬಿ.ಶೆಟ್ಟಿ ವದನಾರ್ಪಣೆಗೈದರು.
ವಾಪಿ, ದಮನ್ ವಲ್ಸಡ್, ಸಿಲ್ವಾಸ, ಉಮ್ಮರ್ಗಾಂವ್ ಈ ಪಂಚ ಗ್ರಾಮಗಳನ್ನೊಂದಿರುವ ವಾಪಿ ಪ್ರಾದೇಶಿಕರು ತುಳುನಾಡ ಪರಂಪರೆ ಆಚಾರ ವಿಚಾರ ಅರಿವು ತಮ್ಮ ಮಕ್ಕಳಲ್ಲಿ ರೂಪಿಸಬೇಕು ಎಂಬ ವಿಚಾರಧಾರೆಯನ್ನಿ -ರಿಸಿ ಆಚರಿಸಲಾಗಿದ್ದ ಕಾರ್ಯಕ್ರಮದಲ್ಲಿ ಮನೋರಂಜನೆ ಕಾರ್ಯಕ್ರಮವಾಗಿ ತುಳುನಾಡ ಕ್ರೀಡಾಟಗಳು ಆಯೋಜಿಸಲಾಗಿತ್ತು. ಚಂದ್ರಿಕಾ ಅಶೋಕ್ ಕೋಟ್ಯಾನ್ ಮತ್ತು ಕುಮಾರಿ ಪ್ರತಿಷ್ಠಾ ನಾಗರಾಜ್ ಶೆಟ್ಟಿ ಮತ್ತಿತರರು ಆಟಿ ಕಡೆಂಜ ಕುಣಿತ, ಜಾನಪದ ಹಾಡುಗಳನ್ನಾಡಿ ಸಭೀಕರ ಮನ ಸೆಳೆದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link