Brief Mumbai, Mangalore News with pictures
Kemmannu News Network, 12-09-2019 14:44:59
ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಡಾ| ಜಿ.ಡಿ ಜೋಶಿ ಆಯ್ಕೆ
ಮುಂಬಯಿ, ಸೆ.08: ಮುಂಬಯಿ ಅಲ್ಲಿನ ಹಿರಿಯ ಶಿಕ್ಷಕ, ಸಾಹಿತಿ ಡಾ| ಜಿ.ಡಿ ಜೋಶಿ ಅವರ ಕೃತಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ಡಾ| ಜಿ.ಡಿ ಜೋಶಿ ಅವರ ಸಮಗ್ರ ಕನ್ನಡ ಕಣ್ಮಣಿಗಳು ಕೃತಿ ಆಯ್ಕೆಯಾಗಿದ್ದು, ಬಹುಮಾನವಾಗಿ ರೂಪಾಯಿ 3,000/- ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನೀಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ ಸೆ.25ನೇ ಬುಧವಾರ ಸಂಜೆ ಬೆಂಗಳೂರು ಅಲ್ಲಿನ ಬೆಂಗಳೂರು ಜೆ.ಸಿ ರಸ್ತೆ ಇಲ್ಲಿನ ಕನ್ನಡ ಭವನನದ ನಯನ ಸಭಾಗೃಹದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷ ರಮೇಶ್ ಸುರ್ವೆ ತಿಳಿಸಿದ್ದಾರೆ.
ಇಂದಿಲ್ಲಿ ಆದಿತ್ಯವಾರ ಸಂಜೆ ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಷಿಯಾ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್ನ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಂಡಾರಿ ಸೇವಾ ಸಮಿತಿಯ 66ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಆರ್.ಎಂ ಭಂಡಾರಿ ಮಾತನಾಡಿದರು.
ಸೇವಾ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಥಾಣೆ ಮತ್ತು ಪುರುಷೋತ್ತಮ ಜಿ.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ಆರ್.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ನಿಕಟಪೂರ್ವಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ವೇದಿಕೆಯಲ್ಲಿದ್ದು, ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತÀರು.
ಸಭೆಯಲ್ಲಿ ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಮತ್ತು ನ್ಯಾ| ಶಾಂತರಾಜ ಡಿ.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಜಯ ಆರ್.ಭಂಡಾರಿ, ನಾರಾಯಣ ಆರ್.ಭಂಡಾರಿ, ಶೋಭಾ ಸುರೇಶ್ ಭಂಡಾರಿ ಕಡಂದಲೆ, ಪಲ್ಲವಿ ರಂಜಿತ್ ಭಂಡಾರಿ, ನ್ಯಾ| ಶ್ಯಾಮ ಆರ್.ಭಂಡಾರಿ, ಪ್ರಶಾಂತ್ ಭಂಡಾರಿ ಪುಣೆ, ಜಯಶೀಲ ಯು.ಭಂಡಾರಿ, ಕೇಶವ ಟಿ.ಭಂಡಾರಿ, ರಾಕೇಶ್ ಎಸ್.ಭಂಡಾರಿ, ಜಯ ಪಿ.ಭಂಡಾರಿ, ವಿಶ್ವನಾಥ್ ಬಿ.ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್ ಭಂಡಾರಿ, ಕರುಣಾಕರ ಭಂಡಾರಿ, ಪದ್ಮನಾಭ ಸಿ.ಭಂಡಾರಿ, ಪ್ರಕಾಶ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಸುಂದರ್ ಜಿ.ಭಂಡಾರಿ ಬಾಲಕೃಷ್ಣ ಪಿ.ಭಂಡಾರಿ, ಬಾಲಕೃಷ್ಣ ಪುತ್ತೂರು (ಪುಣೆ), ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ ಸೇರಿದಂತೆ ಅನೇಕ ಸದಸ್ಯರು ಭಂಡಾರಿ ಬಂಧುಗಳು ಉಪಸ್ಥಿತರಿದ್ದರು.
ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಿಕರ ಪರವಾಗಿ ರಂಜಿತ್ ಎಸ್.ಭಂಡಾರಿ, ರಮೇಶ್ ಭಂಡಾರಿ ಪೆÇವಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.
........ ಪ್ರಸ್ತಾವನೆಗೈದರು. ....... ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ....... ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಭಿತ್ತರಿಸಿದರು. ....... ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿಜಯ ಆರ್.ಭಂಡಾರಿ ಪ್ರಾರ್ಥನೆಯನ್ನಾಡಿದರು. ....... ಅಭಾರ ವ್ಯಕ್ತಪಡಿಸಿದರು. ಮಹಾ ಸಭೆಯ ನಂತರ ಪದಾಧಿಕಾರಿಗಳು ಸಮಿತಿ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಥಿರ್ü ವೇತನ ನೀಡಿ ಶುಭಾರೈಸಿದರು.
ಮುಲುಂಡ್ನಲ್ಲಿ ಭಂಡಾರಿ ಸೇವಾ ಸಮಿತಿ ಪೂರೈಸಿದ 66ನೇ ವಾರ್ಷಿಕ ಮಹಾಸಭೆ
ಸಮುದಾಯದ ಸಂಸ್ಥೆಗಳಿಂದ ಸಮಾಜದ ಸದೃಢತೆ ಸಾಧ್ಯ: ನ್ಯಾ| ಆರ್.ಎಂ ಭಂಡಾರಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಸೆ.08: ಸ್ವಸಮಾಜದ ಸರ್ವೋನ್ನತಿಗೆ ಸಮುದಾಯದ ಸಂಸ್ಥೆಗಳೇ ಬೆನ್ನೆಲೆಬು ಇದ್ದಂತೆ. ಇಂತಹ ಸಂಸ್ಥೆಗಳು ಬೆಳೆದು ಮುನ್ನಡೆದಾಗ ಪ್ರತೀ ಸಮಾಜಗಳೂ ಸ್ವಯಂವಾಗಿ ಸದೃಢಗೊಳ್ಳುವುದು. ಇದರಿಂದ ಸ್ವಜಾತೀಯ ಸಂಪ್ರದಾಯ, ಸಂಸ್ಕೃತಿಗಳೂ ತನ್ನಿಂತಾನೇ ಜೀವಾಳವಾಗಿ ಉಳಿಯ ಬಲ್ಲವು. ಆರೋಗ್ಯ ನಿಧಿ ಮತ್ತು ವಿದ್ಯಾ ನಿಧಿಯ ಸಲುವಾಗಿ ಧನ ಸಂಗ್ರಹಣಾ ಕೆಲಸ ಅಭಿವೃದ್ಧಿಯಲ್ಲಿದ್ದು, ಆಥಿರ್sಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಶೀಘ್ರವೇ ಇದನ್ನು ಕಾರ್ಯರೂಪದಲ್ಲಿ ತರುವಲ್ಲಿ ನಮ್ಮ ಸಮಿತಿ ಸದಸ್ಯರು ಕಾರ್ಯನಿರ್ವಾಹಿಸುತ್ತಿದ್ದು, ಸಮಿತಿ ಸದಸ್ಯರು ಭಂಡಾರಿ ಸಮಾಜದವರಿಗೆ ಭೇಟಿ ನೀಡಿ ಧನ ಸಂಗ್ರಹಿಸಲಿದ್ದಾರೆ. ಎಲ್ಲರೂ ಸಹಕರ ನೀಡಬೇಕು ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಷಿಯಾ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್ನ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಂಡಾರಿ ಸೇವಾ ಸಮಿತಿಯ 66ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಆರ್.ಎಂ ಭಂಡಾರಿ ಮಾತನಾಡಿದರು.
ಸೇವಾ ಸಮಿತಿಯ ಉಪಾಧ್ಯಕ್ಷÀ ಪ್ರಭಾಕರ್ ಪಿ.ಭಂಡಾರಿ ಥಾಣೆ, ಗೌ| ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ಆರ್.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ನಿಕಟಪೂರ್ವಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ವೇದಿಕೆಯಲ್ಲಿದ್ದು, ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತÀರು.
ಸಭೆಯಲ್ಲಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾರಾಯಣ ಆರ್.ಭಂಡಾರಿ, ಜಯಶೀಲ ಯು.ಭಂಡಾರಿ, ಕೇಶವ ಟಿ.ಭಂಡಾರಿ, ರಾಕೇಶ್ ಎಸ್.ಭಂಡಾರಿ, ಜಯ ಪಿ.ಭಂಡಾರಿ, ವಿಶ್ವನಾಥ್ ಬಿ.ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್ ಭಂಡಾರಿ, ಕರುಣಾಕರ ಭಂಡಾರಿ, ಪ್ರಕಾಶ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ ಸೇರಿದಂತೆ ಅನೇಕ ಸದಸ್ಯರು ಭಂಡಾರಿ ಬಂಧುಗಳು ಉಪಸ್ಥಿತರಿದ್ದರು.
ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಿಕರ ಪರವಾಗಿ ವಿನೋದ್ ಭಂಡಾರಿ ಡೊಂಬಿವಲಿ, ವಿಜಯಾನಂದ ಭಂಡಾರಿ, ಪ್ರಕಾಶ್ ಭಂಡಾರಿ ಡೊಂಬಿವಲಿ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.
ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಸ್ವಾಗತಿಸಿ, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಭಿತ್ತರಿಸಿದರು. ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶಾಲಿನಿ ರಮೇಶ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷರು ಪುರುಷೋತ್ತಮ ಜಿ.ಭಂಡಾರಿ ಅಭಾರ ವ್ಯಕ್ತಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾ ಸಭೆ ಸಮಾಪನ ಗೊಂಡಿತು.
ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಶಾಲೆ ಪುರಸ್ಕಾರ
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿ. ಪರಿಮಳಾ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. (9 ಯು.ಜೆ.ಆರ್.1)
ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಬೆಳ್ತಂಗಡಿ ತಾಲ್ಲೂಕಿನ “ಉತ್ತಮ ಶಾಲೆ” ಪುರಸ್ಕಾರ ದೊರಕಿದೆ.
ಶಿಕ್ಷಕರ ದಿನಾಚರಣೆ ಸಂದರ್ಭ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯ ಜ್ಯೋತಿ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿ. ಪರಿಮಳಾ ಅವರಿಗೆ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ದಹಿಸರ್ನ ಕಾಶೀ ಮಠದÀಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲ್ಪಟ್ಟ ವಾರ್ಷಿಕ ಲಕ್ಷ್ಮೀನಾರಾಯಣ ಹೃದಯ ಹವನ
ಮುಂಬಯಿ, ಸೆ.08: ದಹಿಸರ್ ಪೂರ್ವದ ಸುದೀಂದ್ರ ನಗರದಲ್ಲಿನ ಕಾಶೀ ಮಠದÀಲ್ಲಿ ಲಕ್ಷ್ಮೀ ನಾರಾಯಣ ಹೃದಯ ಹವನ ಇತ್ತೀಚಿಗೆ ನೇರವೇರಿಸಲ್ಪಟ್ಟಿತು. ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್ ಭಟ್ ತನ್ನ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಲಕ್ಷ್ಮೀನಾರಾಯಣ ಹೃದಯ ಹವನ ನೆರವೇರಿಸಿ ಉಪಸ್ಥಿತ ಸದ್ಭಕ್ತರನ್ನು ಹರಸಿದರು.
ಕಾಶೀ ಮಠ ಸಂಸ್ಥಾನದ ದೈವಕ್ಯ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ವೇದಮೂರ್ತಿ ವಾಲ್ಕೇಶ್ವರ ಲಕ್ಷ್ಮೀನಾರಾಯಣ ಭಟ್ ಮತ್ತಿತರ ವೈಧಿಕರು ಇತರ ಪೂಜಾಧಿಗಳನ್ನು ನಡೆಸಿದರು.
ಸುನೀಲ್ ವಾಸುದೇವ ಶೆಣೈ ಹಾಗೂ ಮೋಹನದಾಸ್ ಪಿ.ಮಲ್ಯ ಇವರ ಮುಂದಾಳತ್ವದಲ್ಲಿ ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶೋಭಾ ವಿನಾಯಕ ಕುಲಕರ್ಣಿ, ಸುಗುಣಾ ಕಮಲಾಕ್ಷ ಕಾಮತ್, ಸಾಣೂರು ಮನೋಹರ್ ವಿ.ಕಾಮತ್, ಮಧುಸೂದÀನ್ ಪೈ, ಹಾಗೂ ಜಿಎಸ್ಬಿ ಸಭಾ ದಹಿಸರ್ ಬೊರಿವಿಲಿ, ಸಾರಸ್ವತ್ ಕಲ್ಚರಲ್ ಎಂಡ್ ರಿಕ್ರಿಯೇಶನ್ ಸೆಂಟರ್ನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದಹಿಸರ್ ಬೊರಿವಿಲಿ ಭಜನಾ ಮಂಡಳಿ ಇವರಿಂದÀ ಭಜನಾ ಕಾರ್ಯಕ್ರಮ ನೆರವೇರಿಸಿತು.
ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ: ಪುನರೂರು
ಮೂಡುಬಿದಿರೆ: ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ. ಇಂಗ್ಲಿಷ್ ಕಲಿಯಿರಿ ಕನ್ನಡವನ್ನು ನಮ್ಮ ತಾಯಿಯನ್ನು ಮರೆತಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯಾಧ್ಯಕ್ಷ, ಮೂಡುಬಿದಿರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹೋಬಳಿಮಟ್ಟದ ಊರಿಗೆ ತಂದು ತಂದು ಆಧುನಿಕ ಮೂಡುಬಿದಿರೆಗೆ ಮುನ್ನುಡಿ ಬರೆದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಮೂಡುಬಿದಿರೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಟಿಸ್ಟರ್ ಡ್ಯಾನ್ಸ್ ಅಕಾಡೆಮಿ ಜಂಟಿಯಾಗಿ ಅಕಾಡೆಮಿಯ ನೂತನ ನೃಂತಾಗಣದಲ್ಲಿ ನಡೆಸಿದ ಮೂಡುಬಿದಿರೆ ತಾಲೂಕು ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡದ ಪುಸ್ತಕಗಳ ಪ್ರಕಟಣೆ ಹೆಚ್ಚಾಗಿದೆ, ಆದರೆ ಓದುಗರ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳಿಗೆ ಪಸ್ತಕಗಳನ್ನು ತಂದು ಕೊಡುವ ಮೂಲಕ ಓದುವ ಹವ್ಯಾಸವನ್ನು ಬಾಲ್ಯದಲ್ಲಿಯೇ ರೂಢಿಸ ಬೇಕೆಂದು ಅವರು ಕರೆ ನೀಡಿದರು.
ಪುನರೂರು ಅವರು ಅಕಾಡೆಮಿಯ ಸಂಸ್ಥಾಪಕ, ಪ್ರಧಾನ ಗುರು ನಿತಿನ್ ಕುಮಾರ್ ಮೂಡುಬಿದಿರೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ವಚನ ಸಾಹಿತ್ಯದ ಓದು ಮತ್ತು ಬರವಣಿಗೆ ನನ್ನ ಹವ್ಯಾಸ ನನಗೆ ಹೊಸ ಬದುಕನ್ನು ನೀಡಿತು. ಸಾಲ ಮಾಡಿ ಸಾಯಲು ಹೊರಟಿದ್ದ ಕೃಷಿಕನಾದ ನನ್ನನ್ನು ಹೊಸ ಬದುಕು ನೀಡಿ ಕರಾವಳಿಯ ಜನ ಬೆಳಸಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ರೈತ ಕವಿ ವೀರಣ್ಣ ಕುರುವತ್ತಿ ಗೌಡರ್ ಪ್ರಶಂಸಿಸಿದರು.
ಭಾವನೆಗಳು ಎಲ್ಲರ ಮನದಲ್ಲೂ ಇರುತ್ತವೆ. ಅದನ್ನು ಕವಿತೆಗಳ ಮೂಲಕ, ನೃತ್ಯ, ಕಲೆ ಪ್ರತಿಭೆಯ ಮೂಲಕ ಪ್ರದರ್ಶಿಸ ಬಹುದು. ಅದಕೆಕ ಸೂಕ್ತ ವೇದಿಕೆಯನ್ನು ನಿರಂತರವಾಗಿ ಒದಗಿಸುತ್ತಾ ಬಂದಿರುವ ಅಜೆಕಾರು ಅಭಿನಂದನಾರ್ಹರು ಎಂದು ಉದ್ಘಾಟನಾ ಕವಿತೆ ವಾಚಿಸಿ ಮಾತನಾಡಿದ ಕವಿ, ವೈದ್ಯ ಡಾ.ಸುರೇಶ ನೆಗಳಗುಳಿ ಹೇಳಿದರು.
ಸಂಘಟಕ ಸುಬ್ರಮಣ್ಯ ಪಾಲಡ್ಕ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಜಯ ಶೆಟ್ಟಿ ಮೂಲ್ಕಿ ಮೊದಲಾದವರು ಉಪಷ್ಥಿತರಿದ್ದರು.
ಬೆಳದಿಂಗಳ ಮಹಿಳಾ ಬಳಗದ ಶಶಿಕಲಾ, ಕವಿತಾ, ಜ್ಯೋತಿ ಪ್ರಾರ್ಥಿಸಿದರು, ನಿತಿನ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಅವರು ನಿರೂಪಿಸಿದರು. ಆಮಂತ್ರಣ ಪರಿವಾರದ ರೂವಾರಿ ವಿಜಯ ಕುಮಾರ್ ಜೈನ್ ವಂದಿಸಿದರು.
ಕವಿಕಾವ್ಯ ಸಂಭ್ರಮದಲ್ಲಿ ಪ್ರಹ್ಲಾದ ಮೂರ್ತಿ ಕಡಂದಲೆ, ಅವನಿ ಉಪಾಧ್ಯ ಬಿ ಕಾರ್ಕಳ, ಆರಾಧನಾ ನಿಡ್ಡೋಡಿ, ರಾಘವೇಂದ್ರ ಕರ್ವಾಲೋ ಹಿರಿಯಡಕ, ಶ್ಯಾಮಪ್ರಸಾದ್ ತೆಳ್ಳಾರು, ವಿಷ್ಣು ಪ್ರಸಾದ್ ಕೊಡಿಬೆಟ್ಟು, ಹಿದಾಯತ್ ಕಂಡ್ಲೂರಿ ಕುಂದಾಪುರ, ಸುಮತಿ ಪ್ರಭು ಅಂಡಾರು, ಪ್ರತೀಕ್ ಸಾಲ್ಯಾನ್ ಮೂಡುಬಿದಿರೆ ಮೊದಲಾದವರು ಕವಿತೆಗಳನ್ನು ವಾಚಿಸಿ ಕಾವ್ಯದ ಜೊತೆಗಿನ ಅನುಸಂಧಾನದ ಬಗ್ಗೆ ಮಾತನಾಡಿದರು.
ಸುಭಾಶಿತಕ್ಕೆ ಕಲಶಪ್ರಾಯವಾದ ಬಹುಮುಖಿ ಪ್ರತಿಭೆ ಕು| ವೃಂದಾ ಬೈಕಂಪಾಡಿ
(ಚಿತ್ರ / ಮಾಹಿತಿ: ರೊನಿಡಾ ಮುಂಬಯಿ)
ಉಕ್ತಿಯೊಂದು ಹೀಗೆ ಹೇಳುತ್ತದೆ...... ಮನೆಗೊಬ್ಬ ಮಗಳಿರಲು ಮನವೆಲ್ಲ ವೃಂದಾವನ ಎಂಬುದಾಗಿ.......
ಅಂದರೆ, ಮನೆಯ ಮುಂದಿನ ವೃಂದಾವನ ಎನ್ನುವಂಥದ್ದು ಆ ಮನೆಯ ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ, ಹಾಗೆಯೇ ಮನೆಗೊಬ್ಬ ಮಗಳಿದ್ದಾಗ ಅವಳಿಂದ ಇಡೀ ಮನೆಯ ಮನ ಸಮೃದ್ಧಿಸುವುದು ಎಂಬ ತಾತ್ಪರ್ಯ.
ಈಕೆಯೂ ಮನೆಗೊಬ್ಬ ಮಗಳು.... ಸುಭಾಶಿತಕ್ಕೆ ಕಲಶಪ್ರಾಯವಾದಂತೆ ಇವಳ ಸುನಾಮಧೇಯ ವೃಂದಾ ಕೊನ್ನಾರ್ ಎನ್ನುವುದಾಗಿ . ಸಾಧನೆಯನ್ನೇ ಉಸಿರಾಗಿಸಿಕೊಂಡ ಈಕೆಯ ಬಗ್ಗೆ, ಅವಳ ಸಾಧನೆಗಳ ಬಗ್ಗೆ ಸಂಕ್ಷಿಪ್ತ ಮುನ್ನೋಟ.
ಕರ್ನಾಟಕ ಕರಾವಳಿಯ ಮಂಗಳೂರು ಇಲ್ಲಿನ ಬೈಕಂಪಾಡಿ ನಿವಾಸಿಗಳಾದ ಬಿ.ಸುಬ್ಬರಾವ್ ಹಾಗೂ ವಿದ್ಯಾ ಎಸ್.ರಾವ್ ದಂಪತಿಯ ಸುಪುತ್ರಿಯಾಗಿ ವೃಂದಾ ಜನಿಸಿದರು. ಸುಸಂಸ್ಕೃತ ಕೃಷಿ ಕುಟುಂಬದವರಾದ ಇವರು, ಆಥಿರ್üಕವಾಗಿ ಮಧ್ಯಮ ವರ್ಗದ ಜೀವನಶೈಲಿ ನಡೆಸಿಕೊಂಡು ಬಂದವರು. ವೃಂದಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಎನ್ಎಂಪಿ ಮಹಿಳಾ ಸಮಾಜ ನರ್ಸರಿ ಶಾಲೆ, ಮಾಧ್ಯಮಿಕ-ಪ್ರೌಢ ಶಿಕ್ಷಣವನ್ನು ಎನ್ಎಂಪಿಟಿ ಹೈಸ್ಕೂಲು ಪಣಂಬೂರು ಇಲ್ಲಿ ಪೂರೈಸಿ, ಪದವಿಪೂರ್ವ ಹಾಗೂ ಬಿ.ಕಾಂ ಪದವಿ ಶಿಕ್ಷಣವನ್ನು ಸುರತ್ಕಲ್ನ ಗೋವಿಂದದಾಸ ಕಾಲೇಜ್ನಲ್ಲಿ ಪಡೆದರು. ಪ್ರಸ್ತುತ ಸಿಎ| ಬಿ.ಸುದೇಶ್ ಕುಮಾರ್ ರೈ ಇವರಲ್ಲಿ ಚಾರ್ಟಡ್ ಅಕೌಂಟೆಂಟ್ ವೃತ್ತಿಶಿಕ್ಷಣ ಪಡೆಯುತ್ತಿದ್ದಾರೆ. ಇವಿಷ್ಟು ಈಕೆಯ ಶೈಕ್ಷಣಿಕ ಮುನ್ನೋಟವಾದರೆ, ಸಾಧನೆಗಳ ಪಟ್ಟಿ ಇನ್ನೂ ದೊಡ್ಡದು ಎಂದು ಈಕೆಯ ಕುಟುಂಬ ಸಂಬಂಧಿ ತೋನ್ಸೆ ಬಿ.ರಮಾನಂದ ರಾವ್ (ಕಲೀನಾ, ಮುಂಬಯಿ) ವರ್ಣಿಸುತ್ತಿದ್ದಾರೆ.
ಬಾಲ್ಯದಿಂದಲೇ ಕಲೆ-ಸಂಸ್ಕೃತಿಗಳತ್ತ ಆಕರ್ಷಿತಳಾಗಿದ್ದ ಈಕೆ, ತನ್ನ ಪ್ರಾಥಮಿಕ ತರಗತಿಗಳಿಂದಲೂ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವಳು. ತನ್ನ ಎರಡನೇ ತರಗತಿಯಲ್ಲೇ ಆರನೇ ಅಂತರ್ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ , ಇಡೀ ರಾಜ್ಯಕ್ಕೆ 8 ನೇ ಸ್ಥಾನವನ್ನು ಪಡೆದು, ಬಾಲ್ಯದಲ್ಲೇ ಸಾಧನೆಯ ಭರವಸೆಯನ್ನು ಮೂಡಿಸಿದವಳು. ಹಾಗೆಯೇ 2005ರಲ್ಲಿ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವಳು. ಇನ್ನು ಈಕೆಯ ಅಭಿರುಚಿ-ಹವ್ಯಾಸಗಳು ಒಂದೇ ಎರಡೇ.....
ಚಿತ್ರಕಲೆ (ವೇಗದ ಚಿತ್ರಕಲೆ, ಮುಖವರ್ಣಿಕೆ, ಗ್ಲೋ ಆರ್ಟ್, ವರ್ಲಿ ಆರ್ಟ್, ಯಕ್ಷಗಾನ, ಭಾಷಣ, ನಿರೂಪಣೆ, ರಂಗಭೂಮಿ, ಛದ್ಮವೇಷ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ರಂಗೋಲಿ, ಏಕಪಾತ್ರಾಭಿನಯ, ಬೀದಿನಾಟಕ , ಸೃಜನಾತ್ಮಕ ಬರವಣಿಗೆ ( ಪ್ರಬಂಧ ಹಾಗೂ ಕವನಗಳು), ಪೇಪರ್ ಪ್ರೆಸೆಂಟೇಷನ್, ಚರ್ಚೆ , ಪಿಕ್ & ಸ್ಪೀಕ್, ರಸಪ್ರಶ್ನೆ , ಜಾನಪದ ನೃತ್ಯ , ಯೋಗ ಇನ್ನೂ ಅನೇಕ. ಇದಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಸಹ ತನ್ನ ಇರವನ್ನು ಬಿಟ್ಟುಕೊಡದ ಈಕೆ, ಕಬಡ್ಡಿ, ಹೈ ಜಂಪ್ ಕ್ರೀಡೆಗಳಲ್ಲೂ ಕೂಡ ಭಾಗವಹಿಸಿ (ಶಾಲಾ ದಿನಗಳಲ್ಲಿ ಜಿಲ್ಲಾ ಹಾಗು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ).
ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವುದು ಮಾತ್ರ ಈಕೆಯ ಅಭಿರುಚಿಯಲ್ಲ. ತಾನು ಕಾಲಿಟ್ಟ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಲೇಬೇಕು ಎನ್ನುವ ಛಲ ಅವಳದ್ದು. ಕಲೆ-ಸಾಹಿತ್ಯ -ಸಂಸ್ಕೃತಿ-ಕ್ರೀಡೆ ಜೊತೆಗೆ, ಶೈಕ್ಷಣಿಕ ಕ್ಷೇತ್ರದಲ್ಲೂ ಈಕೆಯ ಸಾಧನೆಗಳು, ಈಕೆ ಪಡೆದ ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಎರಡು ನುಡಿಗಳಲ್ಲಿ ಹೇಳಲೇಬೇಕಾಗುತ್ತದೆ.
ಮೊದಲಾಗಿ ಶೈಕ್ಷಣಿಕ ಸಾಧನೆಯನ್ನು ಹೇಳುವುದಾದರೆ, 2013ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 98.24% ಅಂಕ ಪಡೆದು, ರಾಜ್ಯಕ್ಕೆ 9ನೇ ಸ್ಥಾನ ಪಡೆದವಳು. ಹಾಗೇ 2015ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.98.17% ಅಂಕ ಪಡೆದು, ರಾಜ್ಯಕ್ಕೆ 5ನೇ ಸ್ಥಾನವನ್ನು ಗಳಿಸಿದ್ದೇ ಅಲ್ಲದೆ, ಸಿಎ-ಸಿ.ಪಿ.ಟಿ ಹಾಗೂ ಸಿ.ಎ-ಐ.ಪಿ.ಸಿ.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದರೊಂದಿಗೆ, ಪದವಿ ಶಿಕ್ಷಣ (ಬಿ.ಕಾಂ ಪದವಿ), 94.84% ಅಂಕದೊಂದಿಗೆ ಪೂರೈಸಿ, ವಿಶ್ವವಿದ್ಯಾಲಯಕ್ಕೆ ಎರಡನೇ ರ್ಯಾಂಕ್ ಪಡೆದದ್ದು ಈಕೆಯ ಶೈಕ್ಷಣಿಕ ಸಾಧನೆಗೆ ಮುಕುಟಪ್ರಾಯ.
ಇನ್ನು ಈಕೆಯ ಕಲಾಜೀವನದ ಸಾಧನೆಗಳನ್ನು ನೋಡುವುದಾದರೆ, ಚಿತ್ರಕಲೆಯ ಕ್ಷೇತ್ರದಲ್ಲಿ ಸೀನಿಯರ್ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಮಂಗಳೂರಿನಲ್ಲಿ ಪ್ರಥಮ ಸ್ಥಾನ ವಿಜೇತೆ ಈಕೆ. ಅದಲ್ಲದೆ ವಿಜಯ ಕರ್ನಾಟಕ ಪತ್ರಿಕೆಯ ರಾಜ್ಯಮಟ್ಟದ ಚಿತ್ರಕಲಾಸ್ಪರ್ಧೆಯಲ್ಲಿ , ಆರು ಸಾವಿರ ಸ್ಪರ್ಧಿಗಳ ನಡುವೆ ಅಗ್ರ 10ರ ಯಾದಿಯಲ್ಲಿ ಸ್ಥಾನ ಪಡೆದ ಸಾಧಕಿ ಈಕೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದಿದ್ದಾಳೆ. ಜಲವರ್ಣ, ತೈಲವರ್ಣ, ಅಕ್ರಿಲಿಕ್ ಪೆನ್ಸಿಲ್ ಸ್ಕೆಚ್ ,ಚಾರ್ ಕೋಲ್ ,ಪೆನ್ ಡ್ರಾಯಿಂಗ್ ,ಪೆÇೀರ್ಟ್ರೇಟ್ ಇತ್ಯಾದಿಗಳಲ್ಲಿ ಪರಿಣತಿ ಹೊಂದಿದ್ದಾರೆ.
ಅನೇಕ ಶಾಲಾ ಕಾಲೇಜುಗಳು, ಫ್ಲೈ ಓವರ್ ಗಳಲ್ಲಿ ವರ್ಲಿ ಆರ್ಟ್ನ್ನು ಬಿಡಿಸಿ, ತನ್ನ ಚಿತ್ರಕಲಾಪಾಂಡಿತ್ಯವನ್ನು ಪ್ರದರ್ಶಿಸಿದವಳು. ಇನ್ನು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಶೇಷ ಛಾಪನ್ನು ಮೂಡಿಸಿರುವ ಈಕೆ , ಯಕ್ಷಕಲೆಯನ್ನು ತನ್ನ ದೇವರಂತೆ ಪೂಜಿಸುತ್ತಾಳೆ. ಕನ್ನಡ, ಇಂಗ್ಲಿಷ್, ತುಳು ಹಾಗೂ ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಈಕೆ, ಸಾತ್ವಿಕ, ಪುಂಡುವೇಷ, ರೌದ್ರ, ಸ್ತ್ರೀವೇಷ ಹಾಗೂ ಎಲ್ಲಾ ತರಹದ ಯಕ್ಷವೇಷಗಳನ್ನೂ ನಿಭಾಯಿಸಿ, ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದು, ಜೊತೆಗೆ ಆಕಾಶವಾಣಿಯಲ್ಲಿ ಕೂಡ ಹಲವು ಪೆÇ್ರೀಗ್ರಾಂಗಳನ್ನು ಕೊಟ್ಟಿದ್ದಾರೆ.
ಶ್ರೀ ದೇವಿ, ಭೀಷ್ಮ, ಶಶಿಪ್ರಭೆ, ರಾಮ, ಕೃಷ್ಣ, ಮೈಂದ, ವಿಷ್ಣು, ದೇವೇಂದ್ರ, ರಕ್ತಬೀಜ, ಕಾರ್ತವೀರ್ಯ, ಮಾಲಿನಿ ದ್ರೌಪದಿ, ಸತ್ಯಭಾಮೆ, ಕಿರಾತಕ, ವಿಜಯ, ಸುದೇವ ,ಜಮದಗ್ನಿ ಇತ್ಯಾದಿ. ಅನೇಕ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡ ಪ್ರಶಸ್ತಿಗೆ ತನ್ನ ಕೊಡುಗೆ ನೀಡಿದ್ದಾಳೆ. ಈಕೆಯ ಶ್ರೀ ಕೃಷ್ಣನ ಪಾತ್ರಕ್ಕೆ ವೈಯಕ್ತಿಕ ಬಹುಮಾನ ಪಡೆದಿದ್ದಾಳೆ. ಪಣಂಬೂರು ಮಕ್ಕಳ ಮೇಳ, ಶಾರದಾ ಯಕ್ಷ ಕಲಾ ಕೇಂದ್ರ ಉರ್ವಸ್ಟೋರ್, ಸನಾತನ ಯಕ್ಷಾಲಯ ಮಂಗಳೂರು, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಸಂಘ ಬಾಳ, ಯಕ್ಷಾರಾಧನ ಕಲಾಕೇಂದ್ರ ಉರ್ವಸ್ಟೋರ್ ಮುಂತಾದ ಕಡೆಗಳಲ್ಲಿ ವೇಷ ನಿರ್ವಹಿಸಿದ್ದಾಳೆ.
ಇನ್ನು ಭಾಷಣ -ಆಶುಭಾಷಣ- ನಿರೂಪಣೆ ಎಂದರೆ ಈಕೆಗೆ ಎಲ್ಲಿಲ್ಲದ ಪ್ರೀತಿ...
2013 ರಲ್ಲಿ ಗುಲ್ಬರ್ಗಾದ ರಾಣದಾಲಾದಲ್ಲಿ ನಡೆದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹಾಗೂ 2018 ರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನವಾಚನಗೈದದ್ದು ಈಕೆಯ ಹೆಮ್ಮೆ..
ಹಾಗೇ , 2016 ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿರುವ ಈಕೆ, ಇನ್ನೂ ಅನೇಕಾನೇಕ ಕಾರ್ಯಕ್ರಮಗಳ ನಿರೂಪಕಿ ಆಗಿಯೂ, ದಿಕ್ಸೂಚಿ ಭಾಷಣಕಾರಳಾಗಿಯೂ ಮಿಂಚಿದ್ದಾಳೆ.
ಇನ್ನು ರಂಗಭೂಮಿ-ನಟನೆಯತ್ತ ಕೂಡ ಈಕೆಯ ಒಲವು ಕಮ್ಮಿಯಿಲ್ಲ. ಉಡುಪಿಯಲ್ಲಿ ನಡೆದ 2016ರ ರಾಷ್ಟ್ರೀಯ ಪ್ರತಿಭೋತ್ಸವದಲ್ಲಿ ಭಾಗವಹಿಸಿದ್ದು, ಎಸ್ಡಿಎಂ ಉಜಿರೆ ಇಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಪ್ರಶಸ್ತಿ ಪಡೆದದ್ದು ಅಲ್ಲದೇ, ನಾಟಕಕ್ಷೇತ್ರದಲ್ಲಿ ಈಕೆಯ ಸಾಧನೆಗೆ ಕಲಶಪ್ರಾಯವಾಗಿ , 2017ರಲ್ಲಿ ಚೆನ್ನೈನಲ್ಲಿ ನಡೆದ ಸೌತ್ ಝೋನ್ ನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಎರಡನೇ ಸ್ಥಾನವನ್ನು ಪಡೆದ ಸಾಧಕಿ ಈಕೆ. ಅದಲ್ಲದೆ, 2018ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ನಾಟಕ ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನ ಪಡೆದು , ಸೌತ್ ಏಷ್ಯನ್ ಮಟ್ಟದ ಸ್ಪರ್ಧೆಗೆ ಆಯ್ಕೆಯಾದದ್ದು , ಕರುನಾಡಿಗೇ ಹೆಮ್ಮೆ ತರುವಂತಹ ವಿಷಯ. ರಸಪ್ರಶ್ನೆಯಲ್ಲೂ ಈಕೆ ಸಾಧನೆಗಳನ್ನು ಗೈದಿರುವಳೆಂದರೆ, ಅದು ಮೂಗಿನ ಮೇಲೆ ಬೆರಳಿಡಬೇಕಾದ್ದೇ. 2013ರ ಶಾರದಾ ಜ್ಞಾನ ಸುಧಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಈಕೆ, 2017ರ ಅಖಿಲ ಭಾರತ ಪ್ರಬಂಧ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆರನೇ ಸ್ಥಾನಕ್ಕೆ ಭಾಜನರಾಗಿದ್ದಾರೆ.
ಇನ್ನು ಈಕೆ ಪಡೆದ ಪ್ರಶಸ್ತಿ ಪುರಸ್ಕಾರಗಳು ಒಂದೇ ಎರಡೇ.
ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯಿಂದ ಕರ್ನಾಟಕ ಚೇತನ ರಾಜ್ಯಪ್ರಶಸ್ತಿ, ಮಂಗಳೂರು ಕಲಾಸಂಗಮ ವೇದಿಕೆಯಿಂದ ಕಲಾಸಂಗಮ ಪುರಸ್ಕಾರ, ಮೂಡುಬಿದ್ರೆಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪುರಸ್ಕಾರ, 2017 ರಲ್ಲಿ ರೋಟರ್ಯಾಕ್ಟ್ ಯೂತ್ ಲೀಡರ್ ಶಿಪ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಔಟ್ ಸ್ಟಾಂಡಿಂಗ್ ಪರ್ಫಾರ್ಮರ್ ಅವಾರ್ಡ್ , ದಿವ್ಯಾಸ್ ಬೆಸ್ಟ್ ಸ್ಟುಡೆಂಟ್ ಆಫ್ ದ ಯಿಯರ್ -2017-18 ರಾಜ್ಯಪ್ರಶಸ್ತಿ, ವಿಶ್ವವಿದ್ಯಾಲಯ ಮಟ್ಟದ ನಿರೂಪಣೆ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ, 2005ರಲ್ಲಿ ಹೀರಾಕ್ ಪಂಖ್ ಸರ್ಟಿಫಿಕೇಟ್ ( ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ಅವರ ಹಸ್ತಾಕ್ಷರವುಳ್ಳ ಪ್ರಮಾಣಪತ್ರ ಗಳಿಸಿ), ಯಕ್ಷಪ್ರತಿಭಾ ಪ್ರಶಸ್ತಿ, ಬೆಸ್ಟ್ ಔಟ್ ಗೊಯಿಂಗ್ ಸ್ಟುಡೆಂಟ್-2015 ಹಾಗೂ ಬೆಸ್ಟ್ ಔಟ್ ಗೊಯಿಂಗ್ ಸ್ಟೂಡೆಂಟ್-2018ನ್ನು ಗೋವಿಂದದಾಸ್ ಕಾಲೇಜ್ನಲ್ಲಿ ಕ್ರಮವಾಗಿ ತನ್ನ ಪಿಯು ವಿದ್ಯಾಭ್ಯಾಸ ಹಾಗೂ ಜುಬಿಲಿ ಸೆಲೇಬ್ರೇಷನ್ ಅವಧಿಯಲ್ಲಿ ಪಡೆದವಳು.
ತನ್ನ ಪಿಯು ಶೈಕ್ಷಣಿಕ ಸಾಧನೆಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ರಾಜ್ಯಪ್ರಶಸ್ತಿ ಕೂಡ ಪಡೆದವಳು. ಇದಲ್ಲದೆ, 520ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಈಕೆಯ ಸಾಧನೆ ಅಮೋಘ. ಸುಮಾರು 70 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಈಕೆಯನ್ನು ಗೌರವಿಸಿದೆ.
ಈಕೆಯ ಅನನ್ಯ ಸಾಧನೆಯನ್ನು ಗುರುತಿಸಿ, 2017ರಲ್ಲಿ ಡೈಜಿವರ್ಲ್ಡ್ ವಾಹಿನಿಯವರು ಹಾಗೂ ಮುಕ್ತ ವಾಹಿನಿಯವರು, ಹಾಗೇ 2018 ರಲ್ಲಿ ನಮ್ಮಕುಡ್ಲ 24ಘಿ7 ವಾಹಿನಿ ಅವರು ಅನುಕ್ರಮವಾಗಿ ದೀಪಾವಳಿ, ದಸರಾ ವಿಶೇಷ ಸಂದರ್ಭದಲ್ಲಿ ಇವರ ಸಂದರ್ಶನ ನಡೆಸಿದ್ದಾರೆ. ಇದಲ್ಲದೆ, ಗೋವಿಂದದಾಸ ಕಾಲೇಜಿನ ಸಾಂಸ್ಕೃತಿಕ ಹಬ್ಬ, ದಿಗಂತ-2018ರ ಕೋ ಆರ್ಡಿನೇಟರ್ ಆಗಿ ಕೂಡ ಈಕೆ ಕಾರ್ಯನಿರ್ವಹಿಸಿದ್ದು, ಸಾಂಸ್ಕೃತಿಕ ಕಾರ್ಯದರ್ಶಿ ಆಗಿ, ರೋಟರ್ಯಾಟ್ ಕ್ಲಬ್ನ ಕಾರ್ಯದರ್ಶಿ ಹಾಗೂ ಅಧ್ಯಕ್ಷೆಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಇದು ಅವಳ ಬಹುಮುಖಿ ಚೈತನ್ಯವನ್ನು ತೋರಿಸುತ್ತದೆ.
ಈಕೆಯ ಸಾಧನೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ದೇಶಾದ್ಯಂತ ಅದೆಷ್ಟೋ ವೇದಿಕೆಗಳಲ್ಲಿ ಗ್ಲೋ ಆರ್ಟ್, ಚಿತ್ರಕಲೆ , ನಾಟಕ ಮುಂತಾದ ಕಲೆಗಳನ್ನು ಪ್ರದರ್ಶಿಸಿ ತುಳುನಾಡ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಈಕೆಯ ಬೆಂಗಾವಲಾಗಿ ನಿಂತವರು ಮೊದಲಾಗಿ ಈಕೆಯ ತಂದೆ ತಾಯಿ ಹಾಗೂ ಈಕೆಯ ಚಿತ್ರಕಲೆಯ ಗುರುಗಳಾದ ಉಮೇಶ್ ಎಸ್ಜೆ, ಯಕ್ಷಗಾನ ಗುರುಗಳಾದ ಶಂಕರ್ ನಾರಾಯಣ ಮೈರ್ಪಾಡಿ, ಶಿವರಾಮ್ ಪಣಂಬೂರು, ರಾಕೇಶ್ ರೈ ಅಡ್ಕ, ಹಾಗೂ ನಾಟಕ ಗುರುಗಳಾದ ವಿನೋದ್ ಶೆಟ್ಟಿ ಕೃಷ್ಣಾಪುರ ಹಾಗೂ ಕ್ಲೇ ಮಾಡೆಲಿಂಗ್ ಗುರುಗಳಾದ ವೆಂಕಿ ಪಲಿಮಾರ್ ಹಾಗೂ ಅವಳ ಎಲ್ಲಾ ಶಿಕ್ಷಕವರ್ಗ ಎನ್ನುವುದನ್ನು ಆಕೆ ಯಾವಾಗಲೂ ಸ್ಮರಿಸುತ್ತಿರುತ್ತಾಳೆ.
ತನ್ನ ಸಾಧನೆಯ ಹಾದಿಯಲ್ಲಿ ಪ್ರತ್ಯಕ್ಷ-ಪರೋಕ್ಷ ಸಹಾಯ-ಸಹಕಾರಗಳನ್ನು ನೀಡಿದ ಎಲ್ಲಾ ಹಿತೈಷಿ ವರ್ಗದವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ. ತುಳುನಾಡಿನ ಒಡಲಲ್ಲಿ ಇಂತಹ ಒಬ್ಬ ಮಹಾನ್ ಸಾಧಕಿ ಆಗುವ ಭರವಸೆಯನ್ನು ಮೂಡಿಸಿರುವ ಈ ಪ್ರತಿಭೆಗೆ, ನಮ್ಮ ನಿಮ್ಮೆಲ್ಲರ ಆಶೀರ್ವಾದ ಎಂದೆಂದೂ ಇರಲಿ , ಆಕೆಯ ಕೀರ್ತಿಶಿಖರ ಇನ್ನಷ್ಟು ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link