Brief Mumbai, Mangalore News with pictures


Rons Bantwal
Kemmannu News Network, 22-09-2019 15:58:27


Write Comment     |     E-Mail To a Friend     |     Facebook     |     Twitter     |     Print


ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಭಜನಾ ಪರಿಷತ್
ಭಜನಾ ತರಬೇತಿಗೆ ಶಿಬಿರ ಮತ್ತು ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರ
ಪರಮಪೂಜ್ಯ ಡಾ| ಡಿ. ವೀರೇ0ದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 21 ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಹಾಗೂ ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರದಲ್ಲಿ ಎರಡನೇ ದಿನ ಪೂಜ್ಯನೀಯ ಡಾ| ಡಿ ವೀರೇ0ದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀಮತಿ ಸುಪ್ರಿಯಾ ಹರ್ಷೇ0ದ್ರ ಕುಮಾರ್, ಶ್ರೀಮತಿ ಸೋನಿಯಾ ಯಶೋವರ್ಮರವರು ಉಪಸ್ಥಿತರಿದ್ದು ಪ್ರೇರಣೆ ನೀಡಿದರು.
‘ಮಾನವ ಧರ್ಮದ ನಿರ್ಮಾಣ ಭಜನೆಯಿ0ದ ಸಾಧ್ಯ. ಒಳ್ಳೆಯ ವ್ಯಕ್ತಿತ್ವ ನಿರ್ಮಾಣ, ಕುಟು0ಬದ ನಿರ್ಮಾಣ, ಸಮಾಜ ನಿರ್ಮಾಣದ ಮೂಲಕ ಉತ್ತಮ ದೇಶ ನಿರ್ಮಾಣ ಸಾಧ್ಯ’
ಡಾ| ಎಲ್ ಎಚ್ ಮ0ಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ (ರಿ) ಧರ್ಮಸ್ಥಳ ಇವರು ಸ0ಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
ಮನುಷ್ಯನಿಗೆ ಅ0ತ: ಪ್ರೇರಣೆ ಇರಬೇಕು, ನಾನು ಸಾಧಿಸಬೇಕೆ0ಬ ಪ್ರೇರಣೆ, ಅಧಿಕಾರ ಪ್ರೇರಣೆ ಸೇವಾಪ್ರೇರಣೆ ಇರಬೇಕು. ಉತ್ತಮ ಧೋರಣೆಗಳಿ0ದ ಮನುಷ್ಯ ಉನ್ನತಿ ಹೊ0ದುತ್ತಾನೆ ಸಕಾರಾತ್ಮಕ, ಧನಾತ್ಮಕ ಯೋಚನೆಗಳಿರಬೇಕು. ನಮ್ಮ ಬದುಕಿಗೆ ಪ್ರೇರಕ  ಆರ್ಥಿಕತೆ ಇರಬೇಕು. ಎ0ದು ಗ್ರಾಮೀಣ ಅಭಿವೃದ್ಧಿ ಹಾಗೂ ಭಜನಾ ಮ0ಡಳಿಗಳು ಎ0ಬ ವಿಷಯಕ್ಕೆ ಪೂರಕ  ಉಪನ್ಯಾಸವನ್ನು ನೀಡಿದರು.
ನಾವು ಅಹ0ಕಾರವನ್ನು ಬಿಡಬೇಕಾಗಿದೆ. ತ್ಯಾಗ ಮನೋಭಾವನೆ ಬೆಳೆಸಬೇಕು ಹೃದಯವ0ತಿಕೆ ಬೆಳೆಸಬೇಕಾಗಿದೆ. ಅಹ0ಕಾರ ಬಿಟ್ಟು ತ್ಯಾಗದಿ0ದ ಸಮಾಜ ಸೇವೆ ಮಾಡಿದಾಗ ದೇಶ ನಿರ್ಮಾಣ ಸಾಧ್ಯ ಎ0ದರು.
ಸ0ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶ್ರೀಮತಿ ಉಷಾಹೆಬ್ಬಾರ್, ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ ಶ್ರೀಮತಿ ಅನುಸೂಯ ಪಾಠಕ್ ಅವರು ಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಿಸಿದರು. ಶ್ರೀ ರಮೇಶ್ ಕಲ್ಮಾಡಿ, ಶ್ರೀ ಶ0ಕರ್, ಕು. ಚೈತ್ರಾ ಇವರು ಕುಣಿತ ಭಜನೆಗೆ ತರಬೇತಿ ನೀಡಿದರು. ಕ್ಷೇತ್ರ ಪರಿಚಯದ ಬಗ್ಗೆ ಸುಬ್ರಹ್ಮಣ್ಯ ಪ್ರಸಾದ್ ಸ0ಚಾಲಕರು, ಶ್ರೀಮತಿ ಮಮತಾ ರಾವ್ ಕಾರ್ಯದರ್ಶಿಗಳು ಭಜನಾ ತರಬೇತಿ ಕಮ್ಮಟ ಇವರು ಪರಿಚಯ  ಹಾಗೂ ಸಲಹೆ ಸೂಚನೆ ನೀಡಿದರು. ಕಾರ್ಯಕಾರಿ ಮ0ಡಳಿಯ ಸೀತಾರಾಮ ತೋಳ್ಪಡಿತ್ತಾಯ, ವೀರುಶೆಟ್ಟಿ, ಭುಜಬಲಿ, ಭವಾನಿ, ನಾಗೇ0ದ್ರ ಅಡಿಗ, ಶಶಿಧರ್ ಉಪಾಧ್ಯಾಯ, ದಿವಾಕರ್ ಭಟ್, ಶ್ರೀಮತಿ ಸುನೀತಾ, ಸತೀಶ್ ಪೈ, ಜಯರಾಮ ನೆಲ್ಲಿತ್ತಾಯ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀನಿವಾಸ್‍ರಾವ್, ಯೋಜನಾಧಿಕಾರಿಗಳಾದ ಪ್ರದೀಪ್, ದಿನೇಶ್ ಹಾಗೂ ರಾಜೇಶ್,  ಗೋಪಾಲ್, ಶ್ರೀಮತಿ ಪದ್ಮರೇಖ, ಶ್ರೀಮತಿ ಚೈತ್ರ ಕಾರ್ಯಕ್ರಮಕ್ಕೆ ಸಹಕರಿಸಿದರು.

ಧರ್ಮಸ್ಥಳದಲ್ಲಿ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ
ಸ್ವ-ಉದ್ಯೋಗಿಗಳು ಆನ್‍ಲೈನ್ ಸೇವೆಯನ್ನೂ ಪ್ರಾರಂಭಿಸಬೇಕು.

ಚಿತ್ರಶೀರ್ಷಿಕೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗುರುವಾರ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರು ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು (19 ಯು.ಜೆ.ಆರ್.1)

ಉಜಿರೆ: ಸ್ವ-ಉದ್ಯೋಗಿಗಳು ಆಯಾ ಊರಿನಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಿ ಪ್ರಾಮಾಣಿಕತೆ, ತ್ಯಾಗ ಮತ್ತು ಬದ್ಧತೆಯಿಂದ ಸೇವೆ ಮಾಡಬೇಕು. ಆನ್‍ಲೈನ್ ಸೇವೆಯನ್ನೂ ಪ್ರಾರಂಭಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

    ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
    ಉದ್ಯಮಿಗಳಿಗೆ ಗ್ರಾಹಕರೆ ಉತ್ತಮ ಜಾಹಿರಾತು ಹಾಗೂ ಪ್ರಚಾರಕರು. ಸ್ವ-ಉದ್ಯೋಗದಿಂದ ಆದಾಯ ಹೆಚ್ಚಾಗುವುದಲ್ಲದೆ ಜೀವನ ಶೈಲಿ ಸುಧಾರಣೆಯೊಂದಿಗೆ ಕುಟುಂಬದ ಪ್ರಗತಿಯೂ ಆಗುತ್ತದೆ. ಮಹಿಳೆಯರು ನಿರುದ್ಯೋಗಿಗಳಲ್ಲ. ಅನೇಕ ಮಹಿಳೆಯರು ಕೂಡಾ ಸ್ವ-ಉದ್ಯೋಗದ ಮೂಲಕ ಉನ್ನತ ಸಾಧನೆ ಮಾಡಿರುವುದು ರುಡ್‍ಸೆಟ್  ಸಂಸ್ಥೆಗೆ ಕೀರ್ತಿ ತಂದಿದೆ. ಈಗಾಗಲೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ರುಡ್‍ಸೆಟ್  ಸಂಸ್ಥೆಗಳ ಸೇವೆ ಜಾಗತಿಕ ಮಟ್ಟಕ್ಕೆ ತಲುಪಲಿ ಎಂದು ಹೆಗ್ಗಡೆಯವರು ಹಾರೈಸಿದರು.
    ಸ್ವ-ಉದ್ಯೋಗ ತರಬೇತಿಯೊಂದಿಗೆ ನೈತಿಕ ಶಿಕ್ಷಣವನ್ನೂ ನೀಡಿ ಮಾನವೀಯ ಮೌಲ್ಯಗಳೊಂದಿಗೆ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರನ್ನಾಗಿ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
    568 ರುಡ್‍ಸೆಟ್  ಸಂಸ್ಥೆಗಳ ಮೂಲಕ ಈಗಾಗಲೆ ಮೂವತ್ತೇಳು ಲಕ್ಷ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ.
    ಮಂಗಳೂರಿನ ಎಂ.ಆರ್.ಪಿ.ಎಲ್.ನ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ದೇಶದಲ್ಲಿ ನಾವೀಗ ಶಕ್ತಿಯ ಕೊರತೆಯನ್ನು ಕಾಣುತ್ತಿದ್ದೇವೆ. ದೇಶದ ಪ್ರಗತಿಗಾಗಿ ಶಕ್ತಿಯ ಉತ್ಪಾದನೆ ಮಾಡಿ ಬಳಕೆಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹೆಗ್ಗಡೆಯವರು ಕೌಶಲಾಭಿವೃದ್ಧಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
    ವೆಲ್ಡರ್, ಫಿಟ್ಟರ್ಸ್, ಎಲೆಕ್ಟ್ರಿಕಲ್ ಕೆಲಸದವರಿಗೆ ಇಂದು ಸಾಕಷ್ಟು ಬೇಡಿಕೆ ಇದೆ ಎಂದು ಅವರು ಹೇಳಿದರು.
    ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಸಾಯಿರಾಂ ಹೆಗ್ಡೆ ಮತ್ತು ಕೆನರಾ ಬ್ಯಾಂಕಿನ ಡಿ.ಜಿ.ಎಂ. ಅಂಬುಕ್ಕರನು ರುಡ್‍ಸೆಟ್   ಸಂಸ್ಥೆಗಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
    ರುಡ್‍ಸೆಟ್   ತರಬೇತಿಯಿಂದ ಯಶಸ್ವಿ ಉದ್ಯಮಿಗಳಾದ ಗದಗದ ಸಾವಿತ್ರಿ, ಕಣ್ಣೂರಿನ ಪ್ರಿಯಾ, ಮಧುರೈನ ದುರ್ಗಾ ಮತ್ತು ಉಜಿರೆಯ ಜೀವನ್ ತಮ್ಮ ಸಾಧನೆಯ ಯಶೋಗಾಥೆಯನ್ನು ವಿವರಿಸಿದರು.
    ರುಡ್‍ಸೆಟ್   ಸಂಸ್ಥೆಗಳ ಕೇಂದ್ರೀಯ ಆಡಳಿತ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ನಿರ್ದೇಶಕ  ವಿನಯಕುಮಾರ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನುಸೂಯ ಕಾರ್ಯಕ್ರಮ ನಿರ್ವಹಿಸಿದರು.

ಬಿ.ಎಸ್.ಕೆ.ಬಿ ಎಸೋಸಿಯೇಶನ್-ಗೋಕುಲ ಯುವ ವಿಭಾಗದ ಆಯೋಜನೆಯಲ್ಲಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ- ಯುಫೆÇೀರಿಯಾ
ಮುಂಬಯಿ, ಸೆ.18: ಬಿ.ಎಸ್.ಕೆ.ಬಿ ಎಸೋಸಿಯೇಶನ್, ಸಾಯನ್, ಗೋಕುಲ ಯುವ ವಿಭಾಗದ ಆಯೋಜನೆಯಲ್ಲಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ -ಯುಫೆÇೀರಿಯಾವು  ಆಶ್ರಯ, ನೇರೂಲ್‍ನಲ್ಲಿ ಕಳೆದರವಿವಾರ ರಂದು ಜರಗಿತು. ಯುವ ವಿಭಾಗದ ಸಂಚಾಲಕ ನಾರಾಯಣ ಮೂರ್ತಿಯವರಿಂದ ಸ್ವಾಗತ, ಜಾಹ್ನವಿ ಪೆÇೀತಿ ಮತ್ತು ಭಾರ್ಗವಿ ಪೆÇೀತಿ ಯವರ ಗಣೇಶ ಸ್ತುತಿಯೊಂದಿಗೆ  ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್  ಹಾಗೂ ಸಂಸ್ಥೆಯ ಪದಾಧಿಕಾರಿಗಳು, ದೀಪ ಪ್ರಜ್ವಲನೆ ಗೈದು  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಬಯಿ ಹಾಗೂ ಉಪನಗರಗಳಿಂದ ಸ್ವಾಮಿ ವಿವೇಕಾನಂದ ಹೈಸ್ಕೂಲ್, ಚೆಂಬೂರು, ಚೆಂಬೂರ್ ಕರ್ನಾಟಕ ಹೈಸ್ಕೂಲ್, ಚೆಂಬೂರು, ವಿಬ್‍ಗ್ಯಾರ್ ಹೈಸ್ಕೂಲ್, ಖಾರ್‍ಘರ್, ಜನರಲ್ ಎಜುಕೇಶನ್ ಅಕಾಡೆಮಿ, ಚೆಂಬೂರ್, ಶಿವಾಜಿ ಶಿಕ್ಷಣ ಸಂಸ್ಥಾನ, ಘಾಟ್ಕೋಪರ್, SIಇS (ಎಪಿಜೆ ಅಬ್ದುಲ್ ಕಲಂ ಮೆಮೋರಿಯಲ್)  ಘಾಟ್ಕೋಪರ್, ಪ್ರೆಸೆಂಟೇಷನ್ ಸ್ಕೂಲ್, ನೇರೂಲ್, ಎನ್‍ಕೆಇಎಸ್ ವಡಾಲ,  ಗುರು ಗೋಬಿಂದ್ ಸಿಂಗ್ ಎಜುಕೇಶನ್ ಅಕಾಡೆಮಿ, ನೇರೂಲ್, ರೆಡ್ಕ್ಲಿಫ್ ಸ್ಕೂಲ್, ಖಾರ್‍ಘರ್,  ಸೈಂಟ್ ಆಗಸ್ಟಿನ್ ಹೈಸ್ಕೂಲ್, ನೇರೂಲ್, ಸಾಯಿ ಹೋಲಿ  ಫೈತ್ ಸ್ಕೂಲ್, ಕೋಪರ್‍ಖೈರಣೆ  ಶಾಲೆಗಳಿಂದ ಸುಮಾರು 150 ವಿದ್ಯಾಥಿರ್üಗಳು ಪಾಗ್ಲೊಂಡು ಸುಗಮ ಸಂಗೀತ, ಭಾಷಣ, ರಸಪ್ರಶ್ನೆ, ಸೃಜನಾತ್ಮಕ ಲೇಖನ,  ಡಿಸ್ಕವರಿ ಇಂಡಿಯಾ (ಜಾನಪದ ನೃತ್ಯ) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಿಸ್ಕವರಿ  ಇಂಡಿಯಾ ನೃತ್ಯ ಸ್ಪರ್ಧೆಯಲ್ಲಿ, ಭಾರತದ  ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿ ವಿವಿಧ ರಾಜ್ಯಗಳ ವೈವಿಧ್ಯಮಯ ಜಾನಪದ ನೃತ್ಯಗಳನ್ನು ಶಾಲಾ ಬಾಲಕ ಬಾಲಕಿಯರು  ಪ್ರಸ್ತುತ ಪಡಿಸಿದರು.

ಸುಗಮ ಸಂಗೀತದಲ್ಲಿ ಸಿದ್ಧಿ ಶೇಲರ್, ಸ್ವಾಮಿ ವಿವೇಕಾನಂದ ಹೈಸ್ಕೂಲ್,  ಶ್ರವಣ್ ಶೆಟ್ಟಿ,  ಎನ್‍ಕೆಇಎಸ್ ವಡಾಲ, ಅರ್ಮಾನ್-ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಭಾಷಣ ಸ್ಪರ್ಧೆಯಲ್ಲಿ ತಹರೀಂ ಖಾನ್, ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಿಯಾ  ಗುಪ್ತಾ, ಎನ್‍ಕೆಇಎಸ್ ವಡಾಲ, ಅಹ್ಮದ್ ಖಾನ್, ಚೆಂಬೂರು ಕರ್ನಾಟಕ ಹೈಸ್ಕೂಲ್  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಸೃಜನಾತ್ಮಕ ಲೇಖನ ಸ್ಪರ್ಧೆಯಲ್ಲಿ   ಆಯೇಷಾ, ಗುರು ಗೋಬಿಂದ್ ಹೈಸ್ಕೂಲ್, ಸೆಸಿಲ್ಲ ಪಾಸ್ಕಲ್, ಸೈ0ಟ್  ಆಗಸ್ಟಿನ್ ಹೈಸ್ಕೂಲ್, ಅಂಬರೀಷ್ ಕೃಷ್ಣನ್,  SIಇS (ಎಪಿಜೆ ಅಬ್ದುಲ್ ಕಲಂ ಮೆಮೋರಿಯಲ್)  ಘಾಟ್ಕೋಪರ್  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.

ರಸಪ್ರಶ್ನೆಯಲ್ಲಿ ನಿಕೇತ್ ಶೆಟ್ಟಿ ಮತ್ತು ಸ್ವೇಧ ಮುತ್ತುಸ್ವಾಮಿ, ಪ್ರೆಸೆಂಟೇಷನ್ ಸ್ಕೂಲ್ ನೇರೂಲ್, ತನಿಷ್ಕಾ ಖನ್ನಾ, ಸಯನ್ ಬೇರ, ರೆಡ್ಕ್ಲಿಫ್ಫ್ ಸ್ಕೂಲ್, ಖಾರ್ಘರ್, ಹಾಗೂ ಚಾರ್ಮಿ ಸಂಗೊಯಿ, ಮನೀಶ್ ಮುಸಲೆ  SIಇS ಘಾಟ್ಕೋಪರ್, ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು ಹಾಗೂ ಡಿಸ್ಕವರಿ  ಇಂಡಿಯಾ (ಜಾನಪದ ನೃತ್ಯ), ಸ್ಪರ್ಧೆಯಲ್ಲಿ    ಚೆಂಬೂರ್ ಕರ್ನಾಟಕ ಹೈಸ್ಕೂಲ್,  ಜನರಲ್ ಎಜುಕೇಶನ್ ಅಕಾಡೆಮಿ, ಚೆಂಬೂರ್,  ವಿಬ್‍ಗ್ಯಾರ್ ಹೈಸ್ಕೂಲ್, ಖಾರ್ಘರ್  ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಅತ್ಯುತ್ತಮ ಪ್ರದರ್ಶನವಿತ್ತ  ಶಾಲೆಗಳಿಗೆ ನೀಡುವ  ಟ್ರೋಫಿಯನ್ನು ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಥಮ ಮತ್ತು ಎನ್‍ಕೆಇಎಸ್ ವಡಾಲ  ದ್ವಿತೀಯ ಸ್ಥಾನಗಳನ್ನು ಗಳಿಸಿ ಪಡೆದವು.   ಶ್ರೀಲಕ್ಷ್ಮಿ ಉಡುಪ ವಿಜೇತರ ಯಾದಿ  ವಾಚಿಸಿದರು.

ಪ್ರಥಮ  ಬಹುಮಾನ ಹಾಗೂ ಉತ್ತಮ ಶಾಲೆ ಪ್ರಾಯೋಜಕರಾಗಿ  ವೈಬ್ರಾ ್ಯಂಟ್ ಎಕ್ಸ್‍ಪೆÇೀಟೆಕ್ಸ್,  ದ್ವಿತೀಯ ಬಹುಮಾನ ಹಾಗೂ ರನ್ನರ್ ಅಪ್   ಪ್ರಾಯೋಜಕರಾಗಿ ಓIIಈ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್, ದಿ| ತಾರಾ ರಾವ್ ಸ್ಮರಣಾರ್ಥ, ತೃತೀಯ ಬಹುಮಾನ ಪ್ರಾಯೋಜಕರಾಗಿ ಸುಬ್ರಹ್ಮಣ್ಯ ರಾವ್ ಬಾಳ, ಸಹಕರಿಸಿದರು. ಇತರ ಪ್ರಾಯೋಜಕರಾಗಿ ಪಿಎಮ್‍ಸಿ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಮತ್ತು ಉಖS ಫುಡ್ ಕಾನ್ಸೆಪ್ಟ್ಸ್  ಸಹಕರಿಸಿದರು.

ಸಂಘದ ಉಪಾಧ್ಯಕ್ಷ ವಾಮನ್ ಹೊಳ್ಳರವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆಯ ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಸುಬ್ರಹ್ಮಣ್ಯ ರಾವ್ ಬಾಳ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. 

ತೀರ್ಪುಗಾರರಾಗಿ ಡಾ| ಸಹನಾ ಪೆÇೀತಿ, ಭಾರತಿ ಡಂಬಲ್,  ಡಾ| ವಿಮಲಾ,  ಜಗದೀಶ್ ಆಚಾರ್ಯ, ಸೌಮ್ಯ ಉಪಾಧ್ಯಾಯ ಮತ್ತು ಅರ್ಚನಾ ಕೊಲ್ಗೆ ಸಹಕರಿಸಿದ್ದು, ವಾಮನ್ ಹೊಳ್ಳರವರು ತೀರ್ಪುಗಾರರಿಗೆ ಹಾಗೂ ಪ್ರಾಯೋಜಕರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.

ಸುಪ್ರಿಯಾ ಉಡುಪ, ಕೃತಿ ಚಡಗ, ಗುರುಪ್ರಸಾದ್  ಭಟ್,ಶ್ರೀಲಕ್ಷ್ಮಿ ಉಡುಪ, ಪ್ರಶಾಂತ್ ರಾವ್,  ಪ್ರಶಾಂತ್ ಹೆರ್ಲೆ, ಜಾಹ್ನವಿ ಪೆÇೀತಿ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೆÇೀತಿ ಮತ್ತು ಪವಿತ್ರಾ ರಾವ್  ಕ್ವಿಜ್ ಮಾಸ್ಟರ್ ಆಗಿ ಸಹಕರಿಸಿದ್ದು,  ನಾರಾಯಣ ಮೂರ್ತಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯಲ್ಲಿ 165ನೇ ನಾರಾಯಣ ಗುರುಜಯಂತಿ ಕಾರ್ಯಕ್ರಮ

ಮುಂಬಯಿ, ಸೆ.18: ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯ ವತಿಯಿಂದ  ಬ್ರಹ್ಮ ಶ್ರೀ ನಾರಾಯಣ ಗುರುಗಳ 165ನೇ ಗುರುಜಯಂತ್ಯೋತ್ಸವ ಸೆಪ್ಟೆಂಬರ್ 15ರಂದು ಸುಮಿತ್ರ ಪ್ಯಾಲೇಸ್ ಭಂಗಾರ್‍ವಾಡಿ ಲೋನಾವಾಲ ಇಲ್ಲಿ ವಿಜ್ರಂಬಣೆಯಿಂದ ಆಚರಿಸಲಾಯಿತು. 

ಲೋನಾವಾಲ ಮುನಿಸಿಪಾಲ್ ಕಾಪೆರ್Çೀರೇಶನ್‍ನ ಉಪಾಧ್ಯಕ್ಷರಾದ ಶ್ರೀಧರ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲೋನಾವಾಲ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶ್ರೀ ಗಣೇಶ್ ಎ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಶೇಖರ್ ಎಮ್. ಪೂಜಾರಿ, ಶ್ರೀ ಶೇಖರ್ ಬಿ. ಪೂಜಾರಿ, ಶ್ರೀ ಸುರೇಶ್ ಡಿ. ಪೂಜಾರಿಯವರ ನೇತೃತ್ವದಲ್ಲಿ ಜರಗಿತು. ನಂತರ ಗುರುದೇವರ ಸನ್ನಿಧಾನದಲ್ಲಿ ರಾಧ ಕೃಷ್ಣ ಭಜನಾ ಮಂಡಳಿ, ಡೊಂಬಿವಾಲಿಯವರ ಭಜನಾ ಕಾರ್ಯಕ್ರಮ ತದನಂತರ ಗುರುಪೂಜೆ ಮಹಾಮಂಗಳಾರತಿ ಅನ್ನಪ್ರಸಾದ ನಡೆಯಿತು.

ಈ ಸಂದರ್ಭದಲ್ಲಿ ರಾಜಕೀಯ ಗಣ್ಯರಾದ ಲೋನಾವಾಲ ಮುನಿಸಿಪಾಲ್ ಕಾಪೆರ್Çೀರೇಶನ್‍ನ ಅಧ್ಯಕ್ಷೆ ಶ್ರೀಮತಿ ಸುರೇಖಾ ಜಾಧವ್, ಬೃಂದಾ ಗನಂತ್ರ, ಜಯಶ್ರೀ ಅಯ್ಯರ್, ನಾರಾಯಣ ಗುರು ಸೇವಾ ಸಂಘ ಪಿಂಪ್ರಿಯ ಅಧ್ಯಕ್ಷರಾದ ಶರತ್ ಕೋಟ್ಯಾನ್, ಕಾರ್ಯದರ್ಶಿಯಾದ ಪ್ರವೀಣ್ ಅಂಚನ್, ಮಹಿಳಾ ಮಂಡಲದ ಅಧ್ಯಕ್ಷರಾದ ಗುಣ ಪೂಜಾರಿ, ರಂಗ ನಾಯಕ್, ಸುನಿಲ್ ತವಾರೆ, ಹೋಟೆಲ್ ರಂಗೋಲಿಯ ಮಾಲಕರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi