Brief Mumbai, Mangalore News with pictures
Kemmannu News Network, 29-09-2019 21:39:48
ಸೆ.29-ಅ.08: ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾದಲ್ಲಿ56ನೇ ವಾರ್ಷಿಕ ನವರಾತ್ರಿ ಮಹೋತ್ಸವ ಆಚರಣೆಗೆ ಸಿದ್ಧತೆ
ಮುಂಬಯಿ, ಸೆ.27: ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾದಲ್ಲಿ ಈ ಬಾರಿ 56ನೇ ವಾರ್ಷಿಕ ನವರಾತ್ರಿ ಮಹೋತ್ಸವ ಆಚರಿಸಲಾಗುವುದು. ಆ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಇದೇ ಸೆ.29 ರಿಂದ ಅ.08ರ ವಿಜಯ ದಶಮಿ ತನಕ ವಾರ್ಷಿಕ ನÀವರಾತ್ರಿ ಮಹೋತ್ಸವ ಸಂಭ್ರಮಿಸಲಾಗುವುದು.
ಸೆ.29ನೇ ರವಿವಾರ ಬೆಳಿಗ್ಗೆ 8.00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಧ್ವಜರೋಹಣ, 8.15 ಗಂಟೆಗೆ ಘಟಸ್ಥಾಪನೆ, 9.00 ಗಂಟೆಗೆ ಗಣಹೋಮ, 9.00 ಗಂಟೆಗೆ ಪಂಚಾಭಿಷೇಕ, ರಾತ್ರಿ 7.00 ಗಂಟೆಯಿಂದ ಭಜನೆ, ದುರ್ಗಾ ನಮಸ್ಕಾರ ಪೂಜೆ, ಪುಷ್ಪ ಪೂಜೆ, ಮಂಗಳಾರತಿ, ಸೆ.30ನೇ ಸೋಮವಾರ ರಾತ್ರಿ 7.00 ಗಂಟೆಯಿಂದ ಭಜನೆ, ಅ.01ನೇ ಮಂಗಳವಾರ ರಾತ್ರಿ 7.00 ಗಂಟೆಯಿಂದ ಭಜನೆ, ಅ.02ನೇ ಬುಧವಾರ ರಾತ್ರಿ 7.00 ಗಂಟೆಯಿಂದ ಭಜನೆ, ಅ.03ನೇ ಗುರುವಾರ ರಾತ್ರಿ 7.00 ಗಂಟೆಯಿಂದ ಮಹಿಳಾ ವಿಭಾಗದಿಂದ, ಹಳದಿಕುಂಕುಮ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಶೋಭಾ ಸುರೇಶ್ ಭಂಡಾರಿ, ವರ್ಷಾ ರಾಮ್ ಕದಂ, ಅಶ್ವಿನಿ ಭರತ್ ಮಟೆ, ಅನಿತಾ ಕಿರಣ್ ಲಾಡ್ಗೆ, ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಮತ್ತಿತರ ಮಹಿಳಾ ಮಹಾನೀಯರು ಆಗಮಿಸುವರು. ಅ.04ನೇ ಶುಕ್ರವಾರ ರಾತ್ರಿ 7.00 ಗಂಟೆಯಿಂದ ಭಜನೆ, ಭಾಸ್ಕರ ಶೆಟ್ಟಿ ಮತ್ತು ದೇವದಾಸ್ ಪೂಜಾರಿ ಕುಟುಂಬದಿಂದ ಅನ್ನ ಸಂತರ್ಪಣೆ . ಅ.05ನೇ ಶನಿವಾರ ರಾತ್ರಿ 7.00 ಗಂಟೆಯಿಂದ ಭಜನೆ, ದೈನಂದಿನ ಪೂಜಾಧಿಗಳು, ಅ.06ನೇ ರವಿವಾರ ರಾತ್ರಿ 7.00 ಗಂಟೆಯಿಂದ ಭಜನೆ, ಅ.07ನೇ ಸೋಮವಾರ ಬೆಳಿಗ್ಗೆ 7.00 ಗಂಟೆಯಿಂದ ಪ್ರಾರ್ಥನೆ, 8.00 ಗಂಟೆಗೆ ಗಣಹೋಮ, 9.30 ಗಂಟೆಗೆ ದುರ್ಗಾಹೋಮ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ನಿಟ್ಟೆ ಕರುಣಾಕರ ಶೆಟ್ಟಿ (ಕಾರ್ಯಾಧ್ಯಕ್ಷರು, ಕಮಲ್ ಎಂಟರ್ಪ್ರೈಸಸ್) ಪರಿವಾರದಿಂದ ಅನ್ನದಾನÀ. ಸಂಜೆ 5.30 ಗಂಟೆಯಿಂದ ಭಜನೆ, ರಾತ್ರಿ 8.00 ಗಂಟೆಗೆ ರಂಗಪೂಜೆ, ರಾತ್ರಿ ಮಹಾಮಂಗಳಾರತಿ, ರಾತ್ರಿ 9.15 ಗಂಟೆಯಿಂದ ಶ್ರೀದೇವಿ ದರ್ಶನ ಬಲಿ, 9.30 ಗಂಟೆಗೆ ತುಲಾಭಾರ, 11.00 ಗಂಟೆಯಿಂದ ದಿ| ಡೊಜನ್ ನಾರಾಯಣ ಶೆಟ್ಟಿ ಮತ್ತು ದಿ| ರುದ್ರಾಕ್ಷಿ ಎನ್.ಶೆಟ್ಟಿ ನೆನಪಿನಲ್ಲಿ ಮುದ್ರಾಡಿ ದಿವಾಕರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಇವರಿಂದ ಮಣಿಕಂಠ ವಿಜಯ ತುಳು ಪೌರಣಿಕ ಯಕ್ಷಗಾನ ಬಯಲಾಟ ಪ್ರದರ್ಶನ, ಅ.07ನೇ ಮಂಗಳವಾರ ಬೆಳಿಗ್ಗೆ 06.00 ಗಂಟೆಯಿಂದ ಶ್ರೀ ದೇವಿ ದರ್ಶನ, ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತಣೆ. ದಿನಾ ಮಧ್ಯಾಹ್ನ 12.00 ಗಂಟೆಗೆ ಮಂಗಳಾರತಿ, ತೀರ್ಥಪ್ರಸಾದ. ದುರ್ಗಾ ನಮಸ್ಕಾರ ಪೂಜೆ, ಪುಷ್ಪಪೂಜೆ, ತೀರ್ಥಪ್ರಸಾದ ಮತ್ತು ಅನ್ನ ಸಂತರ್ಪಣೆ ಜರುಗಲಿದೆ.
ಆ ನಿಮಿತ್ತ ಶ್ರೀ ಕ್ಷೇತ್ರದಲ್ಲಿ ಜರುಗಿಸಲಾಗುವ ವಾರ್ಷಿಕ ದಸರೋತ್ಸವದಲ್ಲಿ ನಾಡಿನ ಸಮಸ್ತ ಭಕ್ತಮಹಾಶಯರು ಪಾಲ್ಗೊಂಡು ಶ್ರೀದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಸಮಿತಿ ವಿನಂತಿಸಿದೆ.
ಸದ್ಯ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ, ಗೌರವಾಧ್ಯಕ್ಷರಾಗಿ ಮುದ್ರಾಡಿ ದಿವಾಕರ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಪಾಲ ಕೋಟ್ಯಾನ್, ಕೋಶಾಧಿಕಾರಿ ಆಗಿ ವಿಕ್ರಮ್ ಸುವರ್ಣ, ಉಪಾಧ್ಯಕ್ಷರಾಗಿ ಸತೀಶ್ ಕೆ.ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಕಾರ್ಯನಿರತ ಅಧ್ಯಕ್ಷ ಸುರೇಶ್ ಪಿ.ಕೋಟ್ಯಾನ್ ಸೇರಿದತೆ ಕಾರ್ಯಕಾರಿ ಸಮಿತಿ, ಮಹಿಳಾ ಮಂಡಳಿ, ಪೂಜಾ ಸಮಿತಿ, ಭಜನಾ ಸಮಿತಿ ಸೇವೆ ಸಲ್ಲಿಸುತ್ತಿದೆ.
ನಾಡಿನ ಹೆಸರಾಂತ ಕಲಾ ಸಂಘಟಕ ಮುಳೂರು ಸಂಜೀವ ಡಿ.ಕಾಂಚನ್ ಸಂಸ್ಥಾಪಣೆಯಲ್ಲಿ ಸ್ಥಾಪಿತ ಶ್ರೀ ಗೀತಾಂಬಿಕಾ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಇದರ ಗೌರವಾಧ್ಯಕ್ಷರಾಗಿ ಪೆÇಲ್ಯ ಲಕ್ಷಿ ್ಮೀ ನಾರಾಯಣ ಶೆಟ್ಟಿ, ಅಧ್ಯಕ್ಷರಾಗಿ ಕರ್ನೂರು ಮೋಹನ್ ರೈ, ಕಾರ್ಯಾಧ್ಯಕ್ಷರಾಗಿ ದಾಮೋದರ ಶೆಟ್ಟಿ, ಕಾರ್ಯದರ್ಶಿಯಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಸಂಚಾಲಕರಾಗಿ ಸುನೀಲ್ ಎಂ.ಅವಿೂನ್ ಶ್ರಮಿಸುತ್ತಿದ್ದಾರೆ.
ಗುಜರಾತ್ನಲ್ಲಿ ತುಳು ಸಂಘಸಂಸ್ಥೆಗಳ ಮುಕುಟಕ್ಕೆ ಮೂಡಿದ ಇನ್ನೊಂದು ಗರಿ - ಅಹ್ಮದಾಬಾದ್ನಲ್ಲಿ ಶಶಿಧರ್ ಬಿ.ಶೆಟ್ಟಿ ಸಾರಥ್ಯದಲ್ಲಿ ಮತ್ತೊಂದು ತುಳು ಸಂಸ್ಥೆ ಅಸ್ತಿತ್ವಕ್ಕೆ
ಮುಂಬಯಿ, ಸೆ.27: ಗುಜರಾತ್ನ ತುಳುವ ಜನನಾಯಕ, ಅಪದ್ಭಾಂಧವ, ತುಳು ಸಂಘ ಬರೋಡಾ ಇದರ ಅಧ್ಯಕ್ಷ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡಾ ಇದರ ಆಡಳಿತ ನಿರ್ದೇಶಕ ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ ಸಾರಥ್ಯ ಮತ್ತು ಮುಂದಾಳುತ್ವದಲ್ಲಿ ಗುಜರತ್ನ ಹೆಸರಾಂತ ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಇವರ ಸಹಯೋಗದೊಂದಿಗೆ ಗುಜರಾತ್ ಇಲ್ಲಿನ ಅಹ್ಮದಾಬಾದ್ನಲ್ಲಿ ಮತ್ತೊಂದು ತುಳು ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು ಈ ಮೂಲಕ ಗುಜರಾತ್ನಲ್ಲಿ ತುಳು ಸಂಘಸಂಸ್ಥೆಗಳ ಮುಕುಟಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ.
ತುಳು ಸಂಘ ಅಹಮದಾಬಾದ್ ಇದರ ಪ್ರಧಾನ ಪದಾಧಿಕಾರಿಗಳ ಆಯ್ಕೆ ಇದೀಗಲೇ ನಡೆಸಲಾಗಿದ್ದು ಗುಜರಾತ್ನ ಪ್ರತಿಷ್ಠಿತ ಮತ್ತು ಹೆಸರಾಂತ ಹಿರಿಯ ಉದ್ಯಮಿಗಳಾದ ಮೋಹನ್ ಸಿ.ಪೂಜಾರಿ (ಗೌರವಾಧ್ಯಕ್ಷ), ಅಪ್ಪು ಪಿ.ಶೆಟ್ಟಿ (ಅಧ್ಯಕ್ಷ), ಗಣಪತಿ ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ), ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ (ಸಂಚಾಲಕ) ಮತ್ತು ಎಂ.ಎಸ್ ರಾವ್ ಅಹ್ಮದಾಬಾದ್ (ಸಲಹೆಗಾರ) ಇವರನ್ನು ನೇಮಿಸಲಾಗಿದೆ.
ಸಮಾಲೋಚನಾ ಸಭೆಯನ್ನು ಇದೇ ಬರುಅ ರವಿವಾರ ಸೆಪ್ಟೆಂಬರ್ 2019, ಮಧ್ಯಾಹ್ನ 2.30 ಗಂಟೆಯಿಂದ ಅಹಮಬಾದ್ ಇಲ್ಲಿನ ಲಾ ಗಾರ್ಡನ್ನಲ್ಲಿ ಇರುವ ಠಾಕೋರ್ ಭಾಯಿ ದೇಸಾಯಿ ಸಭಾಗೃಹದÀಲ್ಲಿ ಆಯೋಜಿಸಲಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮೋಹನ್ ಸಿ.ಪೂಜಾರಿ ತಿಳಿಸಿದ್ದಾರೆ.
ತುಳು ಭಾಷೆ, ಸಂಸ್ಕೃತಿ, ಸಂಘಟನೆ, ತುಳುವರ ಐಕ್ಯತೆ ಮೂಲಕ ತುಳುನಾಡ ಹೊರನಾಡು, ರಾಷ್ಟ್ರದ ಪ್ರಧಾನಿ ಮೋದಿ ತವರೂರು ಗುಜರಾತ್ನಲ್ಲೇ ತುಳುವ ಭವಿಷ್ಯಕ್ಕೆ ನಾಂದಿಯಾಡಿದ ಈ ಸಂಘಟನೆ ಇದೇ ನವೆಂಬರ್ನಲ್ಲಿ ರಾಷ್ಟ್ರದ, ಕರ್ನಾಟಕ, ತುಳುನಾಡು ಅಲ್ಲಿನ ಘಣಾನುಘಟಿ ನಾಯಕರ, ತುಳುವ ಧುರೀಣರ ಉಪಸ್ಥಿತಿ ಹಾಗೂ ಸಾವಿರಾರು ತುಳುವರ ಸಮ್ಮುಖದಲ್ಲಿ ಈ ಸಂಸ್ಥೆಯನ್ನು ವಿಧ್ಯುತವಾಗಿ ಸೇವಾರ್ಪಣೆ ಮಾಡಲಾಗುವುದು ಎಂದು ಶಶಿಧರ್ ಬಿ.ಶೆಟ್ಟಿ ತಿಳಿಸಿದ್ದಾರೆ.
ಆ ಪ್ರಯುಕ್ತ ಗುಜರಾತ್ ರಾಜ್ಯದಾದ್ಯಂತ ನೆಲೆಯಾಗಿರುವ ತುಳು ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಆಗಮಿಸಿ ಸಂಸ್ಥೆಯ ಬಲಾಢ್ಯತೆಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.
ಎಡನೀರು ಕ್ಷೇತ್ರದÀಲ್ಲಿ ಶ್ರೀಕೇಶವಾನಂದ ಭಾರತೀ ಶ್ರೀಗಳ ಜನ್ಮದಿನೋತ್ಸವ
ಮುಂಬಯಿ (ಬದಿಯಡ್ಕ), ಸೆ.27: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀಮಠದಲ್ಲಿ ಗುರುವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ರಿಂದ 9ರ ವರೆಗೆ ಶ್ರೀದೇವರಿಗೆ ವಿಶೇಷ ಅಭಿಷೇಕ, ಮಹಾಪೂಜೆ ನಡೆಯಿತು. ಬಳಿಕ 12 ರಿಂದ ವಿಶೇಷ ಹವನದ ಪೂರ್ಣಾಹುತಿ. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 7.30 ರಿಂದ ಮಹಾಪೂಜೆ, ಭಜನಾ ಸಂಕೀರ್ತನೆ, ಗುರುವಂದನೆಗಳು ನೆರವೇರಿದವು. ರಾತ್ರಿ 8.30 ರಿಂದ ವಿದುಶಿಃ ಸುಜಯ್ ಕೃಷ್ಣಮೂರ್ತಿ ಚೆನ್ನೈ ಹಾಡುಗಾರಿಕೆಯಲ್ಲಿ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್ ಮಂಗಳೂರು (ವಯಲಿನ್), ವಿದ್ವಾನ್ ಅನೂರು ದತ್ತಾತ್ರೇಯ ಶರ್ಮಾ (ಮೃದಂಗ), ವಿದ್ವಾನ್ ಜಗದೀಶ ಕುರ್ತಕೋಟಿ (ತಬ್ಲಾ)ದಲ್ಲಿ ಸಾಥ್ ನೀಡಿದರು.
ಅ.12: ಸ್ಪರ್ಶಾದಲ್ಲಿ `ನಮ್ಮ ಮಕ್ಕಳು ನಾಳೆಯ ಸಂಪತ್ತು’ ಘೋಷವಾಕ್ಯದಲ್ಲಿಎಸ್ಬಿಎಸ್ ಜಿಲ್ಲಾ ಪ್ರತಿನಿಧಿ ಸಮಾವೇಶ-ಲಾಂಛನ ಬಿಡುಗಡೆ
ಮುಂಬಯಿ (ಮಂಗಳೂರು), ಸೆ.28: ಸುನ್ನಿ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ (ಪಶ್ಚಿಮ) ಇದರ ಸುನ್ನೀ ಬಾಲ ಸಂಘ SಃS ಇದರ ಪ್ರತಿನಿಧಿ ಸಮಾವೇಶ ಇದೇ ಅ.12ರ ಶನಿವಾರ ಬಿ.ಸಿ.ರೋಡ್ ಸ್ಪರ್ಶಾ ಸಭಾಂಗಣದಲ್ಲಿ ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದೆ.
`ನಮ್ಮ ಮಕ್ಕಳು ನಾಳೆಯ ಸಂಪತ್ತು’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಸಮಾವೇಶದ ಈ ಲಾಂಛನ (ಲೋಗೋ) ವನ್ನು ಪಡೀಲಿನಲ್ಲಿ ನಡೆದ ಸಭೆಯಲ್ಲಿ ಶಿಕ್ಷಕ ಒಕ್ಕೂಟದ ಉಪಾಧ್ಯಕ್ಷ ಒ.ಕೆ ಸಈದ್ ಮುಸ್ಲಿಯಾರ್ ಬಿಡುಗಡೆ ಗೊಳಿಸಿದರು
ಈ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮದ್ರಸಗಳಿಂದ ನಿಗದಿತ 3 ಮಂದಿ ಭಾಗವಹಿಸಲಿದ್ದು ಸಂಪನ್ಮೂಲ ವ್ಯಕ್ತಿಗಳಿಂದ 2 ತರಗತಿಗಳು ನಡೆಯಲಿದ್ದು ಸಮಾವೇಶ ಜಿಲ್ಲಾಧ್ಯಕ್ಷ ಪಿ.ಎಂ ಮುಹಮ್ಮದ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುನ್ನೀ ಸಂಘ ಕುಟುಂಬದ ನಾಯಕರು ಗಣ್ಯರು ಭಾಗವಹಿಸಲಿದ್ದಾರೆ.
ಅಪರಾಹ್ನ 2:30 ಬಿ.ಸಿ. ರೋಡಿನಲ್ಲಿ SಃS ವಿದ್ಯಾಥಿರ್üಗಳಿಂದ ಆಕರ್ಷಕ ಬಾಲ ಸಂಚಯನ ಜಾಥಾ ನಡೆಯಲಿದೆ ಎಂದು ಶಿಕ್ಷಕರ ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link