Brief Mumbai, Mangalore News with pictures
Kemmannu News Network, 03-10-2019 09:47:45
ದಾದರ್ ಪಶ್ಚಿಮದ ಶಾರದಾಶ್ರಮ ವಿದ್ಯಾಮಂದಿರ್ ಮಂಡಳಿಗೆ
ಜೋನ್ ಡಿಸಿಲ್ವಾ-ಮೌರಿಸ್ ಪಿಂಟೋ-ಗಜೇಂದ್ರ ಶೆಟ್ಟಿ ಆಯ್ಕೆ
ಮುಂಬಯಿ, ಅ.01: ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೆಂದೆಣಿಸಿದ ಶಾರದಾಶ್ರಮ ವಿದ್ಯಾಮಂದಿರ್ ಇದರ ಆಡಳಿತ ಮಂಡಳಿಗೆ ತುಳು-ಕನ್ನಡಿಗ ಮಹಾನೀಯರು ಆಯ್ಕೆಯಾಗಿದ್ದಾರೆ.
ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಮಹಾನಗರ ಮುಂಬಯಿಯಲ್ಲಿ ನಾಲೈದು ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿ, ಸಹಕಾರಿ ರಂಗದ ಪಿತಾಮಹ ಎಂದೇ ಖ್ಯಾತಿ ಗಿಟ್ಟಿಸಿಕೊಂಡ ಪ್ರಸಿದ್ಧ ಆಥಿರ್üಕತಜ್ಞ ಜೋನ್ ಡಿಸಿಲ್ವಾ ಕಾರ್ಕಳ (ಸರ್ಕಾರದ ಕೌನ್ಸಿಲ್ ಸದಸ್ಯರಾಗಿ) ಹಾಗೂ ಮೌರಿಸ್ ಪಿಂಟೋ ಬೆಳ್ಮಣ್ ಮತ್ತು ಗಜೇಂದ್ರ ಶೆಟ್ಟಿ ಆಯ್ಕೆ ಆಗಿದ್ದಾರೆ. ಸಂಸ್ಥೆಯ 2019-2022ನೇ ಅವಧಿಗೆ ಇತ್ತೀಚೆಗೆ ನಡೆಸಲ್ಪಟ್ಟ ಚುನಾವಣೆ ನಡೆಸಲ್ಪಟ್ಟಿತ್ತು.
ಈ ವಿದ್ಯಾಲಯದಲ್ಲಿ ಜೋನ್ ಡಿಸಿಲ್ವಾ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೌರಿಸ್ ಪಿಂಟೋ ಕಳೆದ ಸುಮಾರು 32 ವರ್ಷಗಳಿಂದ ಈ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದು, ವಿಶ್ವಸ್ಥ, ಕಾರ್ಯದರ್ಶಿ ಆಗಿರುವರು. ಗಜೇಂದ್ರ ಶೆಟ್ಟಿ ¨ಜ್ಪೆ ಅವರು 5 ವರ್ಷಗಳಿಂದಿದ್ದು ಇದೀಗ ಜೊತೆ ಕಾರ್ಯದರ್ಶಿ ಆಗಿ ಸೇವಾ ನಿರತರಾದ್ದಾರೆ.
ಶಾರದಾಶ್ರಮ ವಿದ್ಯಾಮಂದಿರ್:
1949,ಜೂನ್.9ರಂದು ಸ್ಥಾಪನೆಯಾದ `ಶಾರದಾಶ್ರಮ ವಿದ್ಯಾಮಂದಿರ್’ ಕಳೆದ ಏಳು ದಶಕಗಳಿಂದ ಶೈಕ್ಷಣಿಕ ಸೇವೆಯಲ್ಲಿ ಶ್ರಮಿಸುತ್ತಿದೆ, ಮುಖ್ಯವಾಗಿ ಕೆಳಮಧ್ಯಮ ವರ್ಗದ ಮತ್ತು ಸಮಾಜದ ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಸೌಲಭ್ಯಗಳೊಂದಿಗೆ ಶೈಕ್ಷಣಿಕ ನೀಡುತ್ತ್ತಿದೆ. ಮಹಾರಾಷ್ಟ್ರದ ಓರ್ವ ಪ್ರಖ್ಯಾತ ಸಮಾಜ ಸೇವಕ (ಅಂದಿನ ಕೇಂದ್ರ ಸರ್ಕಾರದ) ರೈಲ್ವೆ ಸಚಿವ ದಿವಂಗತ ಆಚಾರ್ಯ ಭೀಸೆ ಮತ್ತು ಕಾನೂನು ಸಚಿವ ನ್ಯಾಯಮೂರ್ತಿ ಎಂ.ಸಿ ಛಗಲಾ ಸಾರಥ್ಯದ ವಿದ್ಯಾಲಯ ಇದಾಗಿದೆ.
ದಾದರ್ ಪಶ್ಚಿಮದ ಭವಾನಿಶಂಕರ್ ರಸ್ತೆಯಲ್ಲಿನ ಶಾರದಾಶ್ರಮ ವಿದ್ಯಾಮಂದಿರ್ ಇಂದು ಟ್ರಸ್ಟ್ ಕೈಗಾರಿಕಾ ತರಬೇತಿ ಕೇಂದ್ರ ತಾಂತ್ರಿಕ ಪ್ರೌಢಶಾಲೆ ಸೇರಿದಂತೆ ಮಾಂಟೆಸ್ಸರಿ ಯಿಂದ ಜೂನಿಯರ್ ಕಾಲೇಜು ಸೇರಿದಂತೆ 13 ಶಿಕ್ಷಣಾಲಯಗಳÀನ್ನು ನಡೆಸುತ್ತಿದೆ. ಬಾಲಕರ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜ್ ಆಫ್ ಕಾಮರ್ಸ್, ಬಾಲಕಿಯರ ಹೈಸ್ಕೂಲು, ಇಂಗ್ಲಿಷ್ ಮಧ್ಯಮ ಪ್ರೌಢಶಾಲೆ, ತಾಂತ್ರಿಕ ಪ್ರೌಢಶಾಲೆ ಮತ್ತು ಜೆಆರ್ ಕಾಲೇಜ್ ಆಫ್ ಸೈನ್ಸ್ (ವಿಒಸಿ), ಪ್ರಾಥಮಿಕ ಮರಾಠಿ/ ಪ್ರಾಥಮಿಕ ಇಂಗ್ಲಿಷ್ ಶಾಲೆ, ಬಾಲಕ್ಮಂದಿರ್, ಕಿಂಡರ್ ಗಾರ್ಡನ್ ಇಂಗ್ಲಿಷ್, ಕೈಗಾರಿಕಾ ತರಬೇತಿ ಕೇಂದ್ರ ಇತ್ಯಾದಿಗಳನ್ನು ಹೊಂದಿದೆ.
ಪ್ರಸ್ತುತ ಸುಮಾರು 300 ಸುಶಿಕ್ಷಿತ ಅನುಭವಿ ಬೋಧಕ ಮತ್ತು ಇತರ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಶಾಲೆಗಳು ಮಾನ್ಯತೆ ಪಡೆದಿವೆ. ನಡೆಸುವ ಕೋರ್ಸ್ಗಳಿಂದ ಸುಮಾರು 5500 ವಿದ್ಯಾಥಿರ್üಗಳು ಪ್ರಯೋಜನ ಪಡೆಯುತ್ತಾರೆ. ಆಚಾರ್ಯ ಭೀಸೆ ಅವರು ರೂಪಿಸಿದ ನಿಸ್ವಾರ್ಥ ಸೇವೆ ಮತ್ತು ಪ್ರಜಾಪ್ರಭುತ್ವದ ಕಾರ್ಯ ಚಟುವಟಿಕೆಯ ಸಂಪ್ರದಾಯವು ಟ್ರಸ್ಟ್ ನಿರ್ವಹಣೆಯಲ್ಲಿ ಪ್ರತಿಫಲಿಸುತ್ತದೆ, ಇದನ್ನು ಅರ್ಹ ಮತ್ತು ಅನುಭವಿ ವೃತ್ತಿಪರರು ನೋಡಿಕೊಳ್ಳುತ್ತಾರೆ. ಈ ಟ್ರಸ್ಟ್ ವಿದ್ಯಾಥಿರ್üಗಳ ಸರ್ವತೋಮುಖ ಅಭಿವೃದ್ಧಿಗೆ ಬಹುಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡಿತ್ತಾ ಗ್ರಂಥಾಲಯಗಳು, ಪ್ರಯೋಗಾಲಯಗಳು, ಕಂಪ್ಯೂಟರ್ ಕೇಂದ್ರಗಳು, ಅಂಚಿನ ತಂತ್ರಜ್ಞಾನಗಳು / ವಿಷಯ ಮತ್ತು ಹೌಸ್ ಮ್ಯಾಗಜೀನ್ ಹೊಂದಿದ ಸ್ಮಾರ್ಟ್ ತರಗತಿ ಕೊಠಡಿ ಇತ್ಯಾದಿಗಳನ್ನೂ ಹೊಂದಿದೆ.
ವೆನ್ಲಾಕ್ ಕಾರುಣ್ಯಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನೆರವು
ಮಂಗಳೂರು: ಎಂಫ್ರೆಂಡ್ಸ್ ಟ್ರಸ್ಟ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ಪ್ರತಿದಿನ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆ ಜಾಗತಿಕ ಬಂಟರ ಸಂಘ ಗಳ ಒಕ್ಕೂಟ ಒಂದು ತಿಂಗಳ ವೆಚ್ಚ 2.25 ಲಕ್ಷ ರೂ. ನೆರವು ನೀಡಿದೆ.
ನಗರದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ವಿವಿಧ ಫಲಾನುಭವಿ ಗಳಿಗೆ ನೆರವು ನೀಡುವ ಸಮಾರಂಭ ದಲ್ಲಿ ಕಾರುಣ್ಯ ಯೋಜನೆಗೆ ನೆರವಿನ ಘೋಷಣಾ ಪತ್ರವನ್ನು ಎಂಫ್ರೆಂಡ್ಸ್ ಟ್ರಸ್ಟ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಮತ್ತು ಟ್ರಸ್ಟಿ ಹಮೀದ್ ಅತ್ತೂರುರಿಗೆ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಸ್ತಾಂತರಿಸಿದರು.
ಒಕ್ಕೂಟವು ಬಂಟ ಸಮುದಾಯದ ಸಹಿತ ಇತರರಿಗೆ ನಿರಂತರ ನೆರವು ನೀಡುತ್ತಾ ಬಂದಿದೆ. ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆಯು ಅತ್ಯುತ್ತಮ ಮಾನವೀಯ ಸೇವೆಯಾ ಗಿದೆ. ಇಲ್ಲಿ ಜಾತಿ, ಧರ್ಮದ ಭೇದ ವಿಲ್ಲದೆ ಹಸಿದವರ ಹೊಟ್ಟೆ ತಣಿಸುವ ಕಾರ್ಯ ನಡೆಸುತ್ತಿದೆ. ಈ ಯೋಜನೆಗೆ ಕಳೆದ ವರ್ಷದಂತೆ ಈ ವರ್ಷವೂ ಒಂದು ತಿಂಗಳ ವೆಚ್ಚ ನೀಡುತ್ತಿದ್ದೇವೆ ಎಂದು ಹರೀಶ್ ಶೆಟ್ಟಿ ಹೇಳಿದರು.
ಎಂಫ್ರೆಂಡ್ಸ್ ಸುಮಾರು ಎರಡು ವರ್ಷಗಳಿಂದ ಕಾರುಣ್ಯ ಯೋಜನೆ ಮೂಲಕ ಕಷ್ಟದಲ್ಲಿರುವವರಿಗೆ ರಾತ್ರಿ ಊಟ ನೀಡುತ್ತಾ ಬಂದಿದೆ. ಬಂಟರ ಸಂಘಗಳ ಒಕ್ಕೂಟದ ನೆರವಿನಿಂದ ಯೋಜನೆಗೆ ಶಕ್ತಿ ಬಂದಿದೆ ಮತ್ತು ಇದು ಇತರರಿಗೆ ಪ್ರೇರಣೆ ನೀಡಿದೆ ಎಂದು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮುಹಮ್ಮದ್ ಆರಿಫ್ ಕೃತಜ್ಞತೆ ಸಲ್ಲಿಸಿದರು.
ಮುಖ್ಯಅತಿಥಿ ವಿರಾರ್ ಶಂಕರ್ ಶೆಟ್ಟಿ ಮುಂಬೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.
ಘಾಟ್ಕೋಪರ್ ಪಶ್ಚಿಮದ ಹವ್ಯಕರ ಸಭಾಗೃಹದಲ್ಲಿ
ಹವ್ಯಕ ವೆಲ್ಫೇರ್ ಟ್ರಸ್ಟ್ ಆಚರಿಸಿದ ದಸರೋತ್ಸವ ಆಚರಣೆ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಸೆ.29: ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ನವರಾತ್ರಿ ಉತ್ಸವವನ್ನು ಇಂದಿಲ್ಲಿ ಭಾನುವಾರ ಘಾಟ್ಕೋಪರ್ ಪಶ್ಚಿಮದ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ದಸರೋತ್ಸವ ವಿಧಿವತ್ತಾಗಿ ಆಚರಿಸಲಾಯಿತು.
ಶ್ರೀ ಗೋಪಾಲ ಭಟ್ ಗಾಯತ್ರಿ ಇವರ ಪೌರೋಹಿತ್ಯದಲ್ಲಿ ಡಾ| ಎನ್.ಜಿ ಭಟ್ ಹಾಗೂ ಶಾಂತಾ ಭಟ್ ದಂಪತಿ ಮುಂದಾಳುತ್ವದಲ್ಲಿ ದುರ್ಗಾಪೂಜೆಯ ಸಂಕಲ್ಪ ನಡೆಸಲಾಯಿತು. ನಂತರ ಸುಮಂಗಲೆಯರಿಂದ ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡ್ಡವು. ಹವ್ಯಕ ಭಜನಾ ಮಂಡಳಿ ಡೊಂಬಿವಲಿ ಇದರ ಸದಸ್ಯರು ಸುಶ್ರಾವ್ಯವಾಗಿ ಭಜನೆ ನಡೆಸಿಸಿದ್ದು, ನಂತರ ದೇವಿಯ ವಿಧ್ಯುಕ್ತಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ದಸರೋತ್ಸವ ಆಚರಿಸಲಾಯಿತು.
ಅಪರಾಹ್ನ ಸಮಾಜದ ಹಿರಿಯ ನಾಗರಿಕರಾದ ಡಾ| ಎನ್.ಜಿ ಭಟ್, ಎಂ.ಎಸ್ ಭಟ್, ಎನ್.ಎಸ್ ಹೆಗಡೆ ಹಾಗೂ ಆರ್ ಜಿ. ಹೆಗಡೆ ಇವರನ್ನು ಶಾಲು ಹೊದೆಸಿ ಫಲಪುಷ್ಪ ಕಾಣಿಕೆಗಳನಿತ್ತು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಅಂತೆಯೇ ಪ್ರತಿಭಾನ್ವಿತ ವಿದ್ಯಾಥಿರ್üಗಳಿಗೆ ಪ್ರಮಾಣಪತ್ರ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತ ಹಿರಿಯನಾಗರಿಕರು ಮತ್ತು ಪುರಸ್ಕøತರು ತಮ್ಮ ಮನದಾಳದ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡು ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಸದಸ್ಯೆಯರಾದ ಶಶಿಕಲಾ ಹೆಗಡೆ, ತನುಜಾ ಹೆಗಡೆ, ಶಾಂತಾ ಭಟ್ ಹಾಗೂ ಪೂರ್ಣಿಮಾ ಅಕ್ಕದಾಸ ಇವರು ಸಮ್ಮಾನಿತ ಹಿರಿಯ ನಾಗರಿಕರನ್ನು ಪರಿಚಯಿಸಿದರು.
ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಶ್ರೀಪಾದ ಭಟ್, ಕಡತೋಕಾ ಹಾಗೂ ಡಾ| ಜಿ.ಕೆ ಹೆಗಡೆ, ಹರಿಕೇರಿ ಕನ್ನಡದಲ್ಲಿ ಗೀತರಾಮಾಯಣ ನಡೆಸಿಕೊಟ್ಟರು. ಶ್ರೀಪಾದ ಭಟ್ ಇವರ ಹಾರ್ಮೋನಿಯಂ ಜೊತೆಗಿನ ಸುಶ್ರಾವ್ಯಕಂಠ ಸಿರಿ ಮರಾಠಿ ಗೀತರಾಮಾಯಣಕ್ಕೆ ಸರಿಸಮಾನವಾಗಿದ್ದು, ಜಿ.ಕೆ ಭಟ್ ಇವರ ತಬಲಾ ವಾದನ ಹಾಗೂ ಕಥಾ ವ್ಯಾಖ್ಯಾನ ಸಭಿಕರನ್ನು ಮೋಡಿಮಾಡಿತ್ತು.
ಟ್ರಸ್ಟ್ನ ಅಧ್ಯಕ್ಷ ಶಿವಕುಮಾರ ಭಾಗವತ್, ಉಪಾಧ್ಯಕ್ಷ ಸಂಜಯ ಭಟ್, ಗೌರವ ಕಾರ್ಯದರ್ಶಿ ನಾರಾಯಣ ಅಕ್ಕದಾಸ, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾ| ಅಮಿತಾ ಎಸ್.ಭಾಗವತ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರ ಸಹಯೋಗದಿಂದ ನಡೆಸಲ್ಪಟ್ಟ ಕಾರ್ಯಕ್ರಮವನ್ನು ಶಶಿಕಲಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ
100 ಮನೆಗಳ ಯೋಜನೆಗೆ ಮಂಜೂರಾತಿ ಪತ್ರ ವಿತರಣೆ
ಮಂಗಳೂರು: ಬಂಟ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಪರಿಹಾರ ಒದಗಿಸಿಕೊಡಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಅವರು ನಗರದ ಬಂಟ್ಸ್ಹಾಸ್ಟೆಲ್ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳÀ ಒಕ್ಕೂಟದ ಕಚೇರಿಯಲ್ಲಿ ಸುಮಾರು 46 ಮಂದಿ ಫಲಾನುಭವಿಗಳಿಗೆ ಪರಿಹಾರಧನ ವಿತರಿಸಿ ಮಾತನಾಡಿದರು.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಳನದಲ್ಲಿ ಅಶಕ್ತ ಕುಟುಂಬಗಳ ನೂರು ಮನೆಗಳಿಗೆ ಒಕ್ಕೂಟದ ವತಿಯಿಂದ ಧನ ಸಹಾಯ ನೀಡುವುದೆಂದು ಘೋಷಿಸಲಾಗಿತ್ತು. ಅದರಂತೆಯೇ ಒಂದು ವರ್ಷದ ಅವಧಿಯಲ್ಲಿ 112 ಮನೆಗಳನ್ನು ಮಂಜೂರು ಮಾಡಿದ್ದು, ಸಮಾಜದಲ್ಲಿರುವ ಬಡ ಜನರೊಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನೆರವಿನ ಹಸ್ತ ನೀಡಿ ಕೆಲಸ ಮಾಡುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಕಳೆದ ಎಪ್ರಿಲ್ 1ರಿಂದ ಸೆಪ್ಟಂಬರ್ನವರೆಗೆ ರೂ. 75 ಲಕ್ಷಕ್ಕೂ ಮಿಕ್ಕಿ ಸಹಾಯಧನವನ್ನು ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದೆ. ಖಾಯಿಲೆಗೆ ತುತ್ತಾಗಿರುವ ಪುಷ್ಪವತಿ, ಬಾಲಪ್ಪ, ಸೌಮ್ಯ, ಸುರೇಶ್ ಶೆಟ್ಟಿ, ಪುಷ್ಪಲತ, ಕೃಷ್ಣಪ್ಪ ಶೆಟ್ಟಿ, ಬಾಲಕೃಷ್ಣ ರೈ, ರೇವತಿ ಶೆಟ್ಟಿ, ಉದಯ ರೈ, ಜ್ಯೋತಿ ಕೆ. ಶೆಟ್ಟಿ, ಸುಮಲತ ಶೆಟ್ಟಿ, ಪೂಜಾ ಶೆಟ್ಟಿ, ಜಯಂತಿ ಹೆಗ್ಡೆ, ಸಂತೋಷ್ ಹೆಗ್ಡೆ, ದೀಪ ಶೆಟ್ಟಿ, ಹಾಗೂ ಇತರರಿಗೆ, ವಿದ್ಯಾಭ್ಯಾಸಕ್ಕೆ ನೆರವು ಕೋರಿ ಅರ್ಜಿ ಸಲ್ಲಿಸಿದ ಸ್ಥಿತಿ ಜೆ. ಶೆಟ್ಟಿ, ಪ್ರಣಾಮ್ ಶೆಟ್ಟಿ, ವಿನ್ಯಾಸ್ ವಿ. ಶೆಟ್ಟಿ, ಶ್ರಾವ್ಯ ಕೆ. ಶೆಟ್ಟಿ, ಹರೀಶ್ಚಂದ್ರ ವಿ. ಶೆಟ್ಟಿ, ಅತೀಶ್ ವೈ. ಶರಣ್ ಶೆಟ್ಟಿ, ರೇವತಿ ಶೆಟ್ಟಿ, ತೇಜಸ್ವಿ ಶೆಟ್ಟಿ, ವಿಕಾಸ್ ಪಿ. ಶೆಟ್ಟಿ, ಮುಕ್ತ ಸತೀಶ್ ಶೆಟ್ಟಿ, ವಾಣಿಶ್ರೀ, ನಂದಿತಾ ಶೆಟ್ಟಿ, ವಂದನ, ವನಿತಾ ಶೆಟ್ಟಿ, ವಿವಾಹಕ್ಕೆ ನೆರವು ಯಾಚಿಸಿದ ಕವಿತ ತಾಯಿ ಉಷಾ ಆರ್ ಶೆಟ್ಟಿ, ರಮ್ಯ ಶೆಟ್ಟಿ, ಪ್ರಿಯಾಂಕ ತಂದೆ ಸುಂದರ ಶೆಟ್ಟಿ ಮತ್ತು ಆಶ್ರಯ ಯೋಜನೆಯಡಿ ಸುಲೋಚನಾ ಶೆಡ್ತಿ, ಗಿರಿಜ ಶೆಡ್ತಿ, ಹೇಮ ಶೆಟ್ಟಿ, ಸವಿತ ರೈ, ಶಶಿಪ್ರಭ ಎಸ್, ಗಂಗಾಧರ್ ಶೆಟ್ಟಿ, ಪಾರ್ವತಿ ಶೆಟ್ಟಿ ಇವರಿಗೆ ಹಾಗೂ ಇತರ ಯೋಜನೆಗಳಡಿ ಪುಷ್ಪಲತಾ ಆರ್. ಶೆಟ್ಟಿ, ಜಲಜಾಕ್ಷಿ ಆರ್. ಶೆಟ್ಟಿ ಮೊದಲಾದವರಿಗೆ ಪರಿಹಾರ ಧನ ವಿತರಿಸಲಾಯಿತು.
ಈಗಾಗಲೇ ಮಂಜೂರು ಮಾಡಲಾಗಿರುವ ಒಟ್ಟು 64 ಮನೆ ಗಳ ಪೈಕಿ 30 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳ ಕಾಮಗಾರಿ ಬೇರೆ ಬೇರೆ ಹಂತದಲ್ಲಿ ಪ್ರಗತಿಯಲ್ಲಿದ್ದು, ಕಾರ್ಯಕ್ರಮದಲ್ಲಿ ಹೊಸದಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ 48 ಮಂದಿ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿ ಘೋಷಣಾ ಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಎಂ.ಫ್ರೆಂಡ್ಸ್ ವತಿಯಿಂದ ಕಾರುಣ್ಯ ಯೋಜನೆಯಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ಇರುವ ಒಳ ರೋಗಿಗಳ ಪೋಷಕರು/ ಸಂಬಂಧಿಕರಿಗೆ ಒಂದು ತಿಂಗಳ ರಾತ್ರಿ ಊಟದ ವೆಚ್ಛವನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ 2.25 ಲಕ್ಷ ರೂ. ನೀಡಿದ್ದು, ಈ ವರ್ಷ 2019ರ ಒಂದು ತಿಂಗಳ ವೆಚ್ಛಕ್ಕೆ ರೂ. 2.25 ಲಕ್ಷ ನೆರವಿನ ಘೋಷಣಾ ಪತ್ರವನ್ನು ಎಂ.ಫ್ರೆಂಡ್ಸ್ನ ಕಾರ್ಯದರ್ಶಿ ಮುಹಮ್ಮದ್ ಆರೀಫ್ ಪಡುಬಿದ್ರಿ ಮತ್ತು ಟ್ರಸ್ಟಿ ಹಮೀದ್ ಅತ್ತೂರು ರವರಿಗೆ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಹಸ್ತಾಂತರಿಸಿದರು.
ಸಮಾರಂಭದಲ್ಲಿ ಒಕ್ಕೂಟದ ಪೋಷಕ ಸದಸ್ಯರಾದ ಶಂಕರ್ ಶೆಟ್ಟಿ ವಿರಾರ್ ಮುಖ್ಯ ಅತಿಥಿಯಾಗಿದ್ದರು ಹಾಗೂ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್, ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ರೈ ಕೊಲ್ಲಾಡಿ, ಬಟ್ಟೆಮಲ್ಲಪ್ಪ ಬಂಟರ ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿ, ಕುಂದಾಪುರ ಬಂಟರ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ, ಸುಳ್ಯ ಬಂಟರ ಸಂಘದ ದಯಕರ್ ಆಳ್ವ, ಚಂದ್ರಶೇಖರ ಹೆಗ್ಡೆ ಶಾನಾಡಿ, ವಿಶೇಷ ಆಹ್ವಾನಿತರಾದ ಜಗನ್ನಾಥ್ ಶೆಟ್ಟಿ ಬಾಳ, ಸುರೇಶ್ ಶೆಟ್ಟಿ ಸೂರಿಂಜೆ, ಹೇಮಂತ್ ಶೆಟ್ಟಿ ಮಂಗಳೂರು, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಜಿ.ಎಸ್.ಬಿ ಮಂಡಲ ಡೊಂಬಿವಲಿ 21 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ.
ಜಿ.ಎಸ್.ಬಿ ಮಂಡಲ ಡೊಂಬಿವಲಿ 21 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ದಿನಾಂಕ 4 ರಿಂದ 8 ಅಕ್ಟೋಬರ್ 2019 ತನಕ ಡೊಂಬಿವಲಿ ಪೂರ್ವದ ಸ್ವಯಂವರ ಸಭಾಗೃಹ, ಪಾತರ್ಲಿ ಇಲ್ಲಿ ಜರಗಲಿದೆ
ದಿ. 4 ಶುಕ್ರವಾರ 11.30 ದೇವತಾ ಪ್ರಾಥನೇ ಗಣಹೋಮ ಹಾಗೂ 12.30ಕ್ಕೆ ಮೂಲಾ ನಕ್ಷತ್ರ ದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ
ದಿನನಿತ್ಯ ಬೆಳಗ್ಗೆ ಚಂಡಿಕಾ ಹವನ, ಪಂಚ ದುರ್ಗಾ ಹವನ, ಹಾಗೂ ಲಕ್ಷ್ಮೀನಾರಾಯಣ ಹೃದಯ ಹವನ, ಉಪಾಸನ, ಭಜನೆ, ಮದ್ಯಾನ್ನ ಪೂಜೆ ಸಮಾರಾಧನೆ, ಸಂಜೆ 6.30 ರಿಂದ ದುರ್ಗಾ ನಮಸ್ಕಾರ, ರಂಗ ಪೂಜೆ ಹಾಗೂ ರಾತ್ರಿ ಪೂಜೆ ನಡೆಯಲಿದೆ
ಆದಿತ್ಯವಾರ ದಂದು ಸುಹಾಸಿನಿಯರಿಂದ ದೇವಿಗೆ ಲಕ್ಷ ಕುಂಕುಮಾರ್ಚನೆ, ತುಲಾಭಾರ ನಡೆಯಲಿದೆ. ಅದಲ್ಲದೆ ಪ್ರತಿನಿತ್ಯ ದೇವಿಗೆ ವಿವಿಧ ರೂಪದಲ್ಲಿ ಅಲಂಕರಿಸಲಾಗುವದು
ಅಕ್ಟೋಬರ 8 ವಿಜಯ ದಶಮಿ ಯಂದು ದೇವಿಗೆ. ಮಂಗಳೂರು ಮಲ್ಲಿಗೆಯ ಸೋಣ ಪೂಲ್ (ಮುಡಿ ಇಂದ ಜಡೆ ವರೆಗೆ) ನಿಂದ ಅಲಂಕರಿಸಿ ಸಂಜೆ ವಿಜೃಂಭಣೆಯಿಂದ ವಿಸರ್ಜಿಸಲಾಗುವದು ಎಲ್ಲ ಭಕ್ತರು ಬಂದು ಶ್ರೀ ಶಾರದಾಮಾತೇ ಶ್ರೀಮುಡಿ ಪ್ರಸಾದ ವನ್ನು ಸ್ವೀಕರಿಸ ಬೇಕಾಗಿ ಜಿ.ಎಸ್. ಬಿ. ಮಂಡಳ ಡೊಂಬಿವಲಿ ವತಿಯ ಕೋರಲಾಗಿದೆ.
ಗುಜರಾತ್ ರಾಜ್ಯದಲ್ಲಿ ತುಳು ಸಂಘ ಅಹ್ಮದಾಬಾದ್ ಅಸ್ತಿತ್ವಕ್ಕೆ - ತುಳುಭಾಷೆ ಬದುಕು ರೂಪಿಸುವ ಶಕ್ತಿಯಾಗಿಸೋಣ : ಶಶಿಧರ್ ಬಿ.ಶೆಟ್ಟಿ
ಮುಂಬಯಿ, ಸೆ.29: ನಾವು ಬದುಕುವ ಸಂಸ್ಕೃತಿಯೇ ತುಳುವಾಗಿದ್ದು ಇದು ತುಳುನಾಡು ಮಾತ್ರವಲ್ಲ, ಕರ್ನಾಟಕ ರಾಜ್ಯ ಸೇರಿದಂತೆ ಸಮಗ್ರ ಭಾರತ, ವಿಶ್ವವ್ಯಾಪಿಯಾಗಿ ಬೆಳೆಯಬೇಕು. ಹಲವು ಭಾಷಿಗರ ಏಕೈದ ಭಾಷೆ ತುಳು ಆಗಿದ್ದು ಇದು ಸಾಮರಸ್ಯತ್ವದ ಧ್ಯೋತಕವಾಗಿದೆ. ತುಳು ಅಂದರೆ ಜಾತಿ, ಮತ, ಧರ್ಮ, ಜನಾಂಗದ ಪರಿದಿಯಿಲ್ಲ. ಆದುದರಿಂದ ಪ್ರಾಚೀನ ಇತಿಹಾಸ ಇರುವ ತುಳುಭಾಷೆ ಬದುಕು ರೂಪಿಸುವ ಶಕ್ತಿಯಾಗಲಿ. ಇದಕ್ಕೆ ತುಳು ಸಂಸ್ಕೃತಿ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ತುಳು ಸಂಘ ಬರೋಡಾ ಇದರ ಅಧ್ಯಕ್ಷ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡಾ ಇದರ ಆಡಳಿತ ನಿರ್ದೇಶಕ ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ ನುಡಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಗುಜರಾತ್ನ ಅಹಮಬಾದ್ ಇಲ್ಲಿನ ಲಾ ಗಾರ್ಡನ್ನಲ್ಲಿ ಇರುವ ಠಾಕೋರ್ ಭಾಯಿ ದೇಸಾಯಿ ಸಭಾಗೃಹದÀಲ್ಲಿ ಆಯೋಜಿಸಲಾಗಿದ್ದು ಗುಜರಾತ್ ರಾಜ್ಯದ ಅಹ್ಮದಾಬಾದ್ನಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಮತ್ತೊಂದು ತುಳು ಸಂಸ್ಥೆ ತುಳು ಸಂಘ ಅಹಮದಾಬಾದ್ ಇದರ ಸಮಾಲೋಚನಾ ಸಭೆ ಮತ್ತು ತೌಳವ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಶಶಿಧರ್ ಶೆಟ್ಟಿ ಮಾತನಾಡಿ ಜಾಗತಿಕವಾಗಿ ತುಳುವಿನ ಕೊಡುಗೆ ಅನನ್ಯವಾದುದು ಆದುದರಿಂದ ತುಳು ಬಗ್ಗೆ ಜಾಗತಿಕ ಜಾಗೃತಿ ಮೂಡಬೇಕಾದಗಿದೆ. ತವರೂರ ಭಾರತ ರಾಷ್ಟ್ರದಲ್ಲೇ ಇದರ ಮಹತ್ವ ಬಲಿಷ್ಠವಾಗಿ ನೆಲೆಯೂರಿದಾಗ ವಿಶ್ವವ್ಯಾಪಿಯಾಗಿ ಈ ಭಾಷೆ ವಿಸ್ತಾರಬಲ್ಲದು. ಆ ಮುನ್ನ ಕರ್ನಾಟಕದಲ್ಲಿ ತುಳುವಿಗೆ ದ್ವಿತೀಯ ಭಾಷಾ ಮಾನ್ಯತೆ, ಆದ್ಯತೆ ಸಿಗಬೇಕು. ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇಯದಲ್ಲೂ ಮೆರೆಯಬೇಕು. ಇವೆಲ್ಲಕ್ಕೂ ತುಳುಭಾಷಾ ಮೇಲಿನ ಹಿಡಿತದಲ್ಲಿ ನಮ್ಮಲ್ಲಿನ ಅಡಿಪಾಯ ಗಟ್ಟಿಯಾಗಿಸಬೇಕು ಎಂದರು.
ಗುಜರತ್ನ ಹೆಸರಾಂತ ಹಿರಿಯ ಉದ್ಯಮಿ ಮೋಹನ್ ಸಿ.ಪೂಜಾರಿ (ಗೌರವಾಧ್ಯಕ್ಷ) ಮತ್ತು ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಸಹಯೋಗದೊಂದಿಗೆ ಉಗಮಗೊಂಡ ತುಳು ಸಂಘ ಅಹಮದಾಬಾದ್ ಇದರ ಪ್ರಾರಂಭಿಕ ಹಂತದ ಕಾರ್ಯಕ್ರಮಕ್ಕೆ ತುಳು ಸಂಘ ಅಹಮದಾಬಾದ್ನ ಚಿಣ್ಣರು ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ನಂದಾದೀಪವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿಯೋಜಿತ ಪದಾಧಿಕಾರಿಗಳಾದ ಅಪ್ಪು ಪಿ.ಶೆಟ್ಟಿ (ಅಧ್ಯಕ್ಷ) ಸುಖಾಗಮನ ಬಯಸಿ ಗುಜರಾತ್ನ ತುಳುವ ಜನನಾಯಕ, ಅಪದ್ಭಾಂಧವ, ತುಳು ಸಂಘ ಅಹಮದಾಬಾದ್ನ ನಿರ್ಮಾತೃ, ಸ್ಪೂರ್ತಿಯ ಸೆಲೆ, ಅಪಾಧ್ಬಂದವ ಶಶಿಧರ್ ಶೆಟ್ಟಿ ಅವರು ತುಳು ಸಂಘ ಅಹಮದಾಬಾದ್ ಸಂಸ್ಥೆಗೆ ರೂಪಾಯಿ 5 ಲಕ್ಷ ಧನ ಸಹಾಯ ನೀಡಿ ಸಂಸ್ಥೆಯ ಉನ್ನತೀಕರಣಕ್ಕೆ ಪ್ರೇರೇಪಿಸಿದ್ದಾರೆ. ಅವರ ಈ ಸಹಾಯ ಧನಕ್ಕಾಗಿ ತುಳು ಸಂಘದ ಎಲ್ಲ ಸದಸ್ಯರು ಹಾಗೂ ಸಮಸ್ತ ತುಳುವರು ಅತ್ಯಂತ ಕೃತಜ್ಞ ರಾಗಿದ್ದೇವೆ ಎಂದರು.
ಎಂ.ಎಸ್ ರಾವ್ ಅಹ್ಮದಾಬಾದ್ (ಸಲಹೆಗಾರ) ಮಾತನಾಡಿ ಶಶಿಧರ್ ಶೆಟ್ಟಿ ಸಾರಥ್ಯ ಮತ್ತು ಮುಂದಾಳುತ್ವದಲ್ಲಿ ಗುಜರಾತ್ನ ಅಹ್ಮದಾಬಾದ್ನಲ್ಲಿ ಮತ್ತೊಂದು ತುಳು ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು ಈ ಮೂಲಕ ಗುಜರಾತ್ನಲ್ಲಿ ತುಳು ಸಂಘಸಂಸ್ಥೆಗಳ ಮುಕುಟಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ. ಶಶಿಧರ್ ಅವರಿಗೆ ಋಣಿ ಅಂದರೆ ಅದು ಉಪಚಾರದ ಮಾತಾದೀತು, ಅವರ ಸಹಾಯ, ಸಹಕಾರ ಇಲ್ಲದಿದ್ದರೆ ತುಳು ಸಂಘ ಅಹಮದಾಬಾದ್ ಹುಟ್ಟು ಅಸಾಧ್ಯವಾಗುತಿತ್ತು, ಅವರ ಸಮಯೋಚಿತ ಸ್ಪಂದನೆ, ಸಹಯೋಗಕ್ಕಾಗಿ ಅತ್ಯಂತ ಆಭಾರಿ ಆಗಿದ್ದೇವೆ ಎಂದರು.
ಓರ್ವ ಅಪ್ಪಟ ತುಳುವನಾಗಿದ್ದು ಮಾತೃ ಭಾಷೆ, ಸಂಸ್ಕೃತಿಯನ್ನು ಜೀವನ, ಜೀವಾಳವಾಗಿಸಿರುವ ಶಶಿಧರ್ ಶೆಟ್ಟಿ ಅವರು ಹೃಯಯಶ್ರೀಮಂತರು. ಅವರ ಈ ಸಹಾಯ, ಉತ್ತೇಜನ, ಒತ್ತಾಸೆ, ಪೆÇ್ರೀತ್ಸಾಹವನ್ನು ಗುಜರಾತ್ ನೆಲೆಯ ತುಳುವರಂದೂ ಮರೆಯಲಾರೆವು . ಅವರು ತಮ್ಮ ಬಿರುಸಿನ ಚಟುವಟಿಕೆ, ಕೆಲಸ, ಒತ್ತಡದ ಮಧ್ಯೆಯೂ ತುಳುವರಿಗಾಗಿ ಎಲ್ಲವನ್ನು ಬದಿಗಿಟ್ಟು ತುಳು ಸಂಘ ಅಹ್ಮದಾಬಾದ್ ನಿರ್ಮಾಣಕ್ಕಾಗಿ ಮಾಡಿದ ಚಿಂತನೆ, ರಚಿಸಿದ ಯೋಜನೆ ಅನನ್ಯವಾದುದು ಎಂದು ಗಣಪತಿ ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ) ನುಡಿದರು.
ಅಹ್ಮದಾಬಾದ್ನ ತುಳುವ ಧುರೀಣರಾದ ಆರ್.ಕೆ ಶೆಟ್ಟಿ, ಮನೋಜ್ ಎಂ.ಪೂಜಾರಿ, ಹರೀಶ್ ಎಂ.ಪೂಜಾರಿ, ಮನೋಜ್ ಶೆಟ್ಟಿ, ನಿತೀನ್ ಅವಿೂನ್, ಶವಿನಾ ಶೆಟ್ಟಿ, ಸುಮನ್ ಕೋಡಿಯಾಲ್ಬೈಲ್, ಬ್ರಿಜೇಶ್ ಪೂಜಾರಿ, ಅಶೋಕ್ ಸಸಿಹಿತ್ಲು ಸೇರಿದಂತೆ ಸ್ಥಾನೀಯ ಅನೇಕ ಗಣ್ಯರು ರಾಜ್ಯದಾದ್ಯಂತದ ವಿವಿಧ ತುಳುವ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಕಲಾವಿದರನ್ನು ಗೌರವಿಸಿದರು.
ಕಿಕ್ಕಿರಿರಿದು ತುಂಬಿದ ಸಭಾಗೃಹದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶಿಸಿದ್ದು ನೋಡುಗರಿಗೆ ತುಳುನಾಡುವೇ ಸೃಷ್ಠಿ ಆಗಿರುವುದು ತುಳು ಬಲಾಢ್ಯತೆ, ಭವಿಷ್ಯಕ್ಕೆ ಸಾಕ್ಷಿಯಾಗಿರುವುದುದಾಗಿ ಗಣಪತಿ ಶೆಟ್ಟಿಗಾರ್ ವಂದನಾರ್ಪಣೆಯಲ್ಲಿ ಅಭಿಮತ ವ್ಯಕ್ತಪಡಿಸಿದರು.
ನವೀಕೃತ ಪ್ರವಚನ ಮಂಟಪ ಉದ್ಘಾಟನೆ
ಚಿತ್ರಶೀರ್ಷಿಕೆ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಭಾನುವಾರ ನವೀಕೃತ ಪ್ರವಚನ ಮಂಟಪವನ್ನು ಉದ್ಘಾಟಿಸಿದರು.
ಉಜಿರೆ: ಧರ್ಮಸ್ಥಳದಲ್ಲಿ ಭಾನುವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನವೀಕೃತ ಪ್ರವಚನ ಮಂಟಪವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಉಪಸ್ಥಿತರಿದ್ದರು.
ಜನಜಾಗೃತಿ ಸಮಾವೇಶ, ಪಾನಮುಕ್ತರ ಅಭಿನಂನಾ ಸಮಾರಂಭ
ಉಜಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಅ. 2 ರಂದು ಬುಧವಾರ ಎಸ್.ಡಿ.ಎಂ. ಕಲಾ ಭವನದಲ್ಲಿ ಜನಜಾಗೃತಿ ಸಮಾವೇಶ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ಪಾೈಸ್ ತಿಳಿಸಿದ್ದಾರೆ.
ಶಾಸಕ ಹರೀಶ್ ಪೂಂಜ ಸಮಾವೇಶ ಉದ್ಘಾಟಿಸುವರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.
ಜನಜಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ ಆರ್. ರೈ ಅಧ್ಯಕ್ಷತೆ ವಹಿಸುವರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link