Brief Mumbai, Mangalore News with pictures
Kemmannu News Network, 23-11-2019 06:23:09
ದಶಮಾನೋತ್ಸವ ಸಂಭ್ರಮದಲ್ಲಿ ಕರ್ನಾಟಕ ಸಮಾಜ ಸೂರತ್
ನ.24: ಸೂರತ್ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಸಾಂಸ್ಕೃತಿಕ ವೈಭವ
ಮುಂಬಯಿ,ನ.21: ಕರ್ನಾಟಕ ಸಮಾಜ ಸೂರತ್ (ರಿ.) ಸಂಸ್ಥೆ ಇದೇ (ನ.24ನೇ) ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ (ದಿನವಿಡೀ) ಗುಜರಾತ್ ರಾಜ್ಯದ ಸೂರತ್ ನಗರದ ನಾನ್ಪುರಾ ಅಲ್ಲಿನ ಜೀವನ ಭಾರತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ-2019, ಯಕ್ಷಗಾನ-ಸಾಂಸ್ಕೃತಿಕ ವೈಭವ ಸಡಗರದೊಂದಿಗೆ ದಶಮಾನೋತ್ಸವ ಸಂಭ್ರಮಿಸಲಿದೆ.
ಕರ್ನಾಟಕ ಸಮಾಜ ಸೂರತ್ ಇದರ ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್ಕುಮಾರ್ ಪೆÇಲಿಪು ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದು ತುಳು ಸಂಘ ಬರೋಡ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಬೆಳ್ತಂಗಡಿ ದಶಸಂಭ್ರಮ ಉದ್ಘಾಟಿಸಲಿದ್ದಾರೆ ಎಂದು ಅಧ್ಯಕ್ಷ ದಿನೇಶ್ ಬಿ.ಶೆಟ್ಟಿ ತಿಳಿಸಿದ್ದಾರೆ.
ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಬಿ.ಶೆಟ್ಟಿ ಸಾರಥ್ಯ ಹಾಗೂ ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಡುಪಿ ಜಿಲ್ಲಾ ಮಾಜಿ ಸಂಸದ ಕೆ.ಜಯಪ್ರಕಾಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಂಘದ ವಿಜೇತ ಸದಸ್ಯರು ಮತ್ತು ಮಕ್ಕಳಿಗೆ ಬಹುಮಾನ ವಿತರಿಸಲಿದ್ದಾರೆ.
ಕರ್ನಾಟಕ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಉಪಾಧ್ಯಕ್ಷರುಗಳಾದ ರಮೇಶ್ ಭಂಡಾರಿ ಬಾರ್ಡೋಲಿ, ಉಮೇಶ್ ಸಫಲಿಗ, ಅಜಿತ್ ಎಸ್.ಶೆಟ್ಟಿ ಅಂಕ್ಲೇಶ್ವರ, ಪ್ರಭಾಕರ ಶೆಟ್ಟಿ ಕೊಸಂಬಾ, ವನಿತಾ ಜೆ.ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಬಿ.ಸಫಲಿಗ, ಜೊತೆ ಕಾರ್ಯದರ್ಶಿ ಶಾಂತಿ ಡಿ.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿಗಾರ್, ಮಹಿಳಾ ವಿಭಾಗದ್ಯಕ್ಷೆ ಸೌಮ್ಯ ಪಿ.ಪೂಜಾರಿ ಮತ್ತು ಸಂಘದ ಸರ್ವ ಸದಸ್ಯರ ಸಹಯೋಗದಿಂದ ಜರುಗುವ ವಾರ್ಷಿಕೋತ್ಸವದಲ್ಲಿ ಸೂರತ್ ಹಾಗೂ ಅಂಕ್ಲೇಶ್ವರದ ಕಲಾವಿದರು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಮಸ್ಕರಿ ಕುಡ್ಲ ತಂಡವು ಕಚಗುಳಿ ಹಾಸ್ಯ ರಸದೌತಣ, ಸಂಗೀತರಂಗ ಸೂರತ್ ಕಲಾವಿದರಿಂದ ನೃತ್ಯ, ಅಭಿನಯ ಮಂಟಪ ಮುಂಬಯಿ ತಂಡವು ಕಾರಣಿಕದ ಶನೀಶ್ವರ ನಾಟಕ ಪ್ರದರ್ಶಿಸಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ.ಶೆಟ್ಟಿ ತಿಳಿಸಿದ್ದಾರೆ.
ಆ ಪ್ರಯುಕ್ತ ನಾಡಿನ ಸಮಸ್ತ ತುಳುಕನ್ನಡಿಗ ಬಂಧುಗಳು, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಪ್ರ| ಕಾರ್ಯದರ್ಶಿ ರಾಧಾಕೃಷ್ಣ ಕೆ.ಮೂಲ್ಯ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. (ರೋನಿಡಾ ಮುಂಬಯಿ)
ನ.30: ಅನಿತಾ ಪೂಜಾರಿ ಅವರಿಗೆ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಪ್ರದಾನ
ಮುಂಬಯಿ, ನ.21: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ 2019 ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ. ಪೂಜಾರಿ ತಾಕೊಡೆ ಅವರು ಚೊಚ್ಚಲ ‘ಎಂ.ಬಿ.ಕುಕ್ಯಾನ್’ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಇದೇ ಬರುವ ನವೆಂಬರ್ 30ರಂದು ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರಗುವ ಸಮಾರಂಭದಲ್ಲಿ ಈ ಪದಕವನ್ನು ವಿಶ್ವವಿದ್ಯಾಲಯದ ವತಿಯಿಂದ ಪ್ರದಾನಿಸಲಾಗುವುದು. ಮುಖ್ಯ ಅತಿಥಿsಗಳಾಗಿ ಹಿರಿಯ ಸಾಹಿತಿ ಎಂ.ಬಿ.ಕುಕ್ಯಾನ್, ರಂಗತಜ್ಞ ಜಿ.ಲೋಕೇಶ್, ಸಾಹಿತಿ ಅನುಬೆಳ್ಳೆ, ಅಖಿಲ ಭಾರತೀಯ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಾಹಿತಿ ಶಾಂತಾರಾಮ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೂಲತಃ ಮೂಡಬಿದರೆಯ ತಾಕೊಡೆಯವರಾದ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಇವರು ಪ್ರತಿಭಾವಂತ ವಿದ್ಯಾರ್ಥಿ. ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. ಎಂ.ಎ. ಪದವಿಗೆ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಿಂದ ಸಿದ್ಧಪಡಿಸಿದ, ಡಾ.ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆ ಶೋಧ ಸಂಪ್ರಬಂಧ, ‘ಸವ್ಯಸಾಚಿ ಸಾಹಿತಿ’, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ‘ಮೋಹನ ತರಂಗ’ ಹೊಸ ಪ್ರಕಟಿತ ಕೃತಿಗಳಾಗಿವೆ. ‘ಅಂತರಂಗದ ಮೃದಂಗ’ ಕೃತಿಗೆ ಜಗಜ್ಯೋತಿ ಕಲಾವೃಂದ (ರಿ) ದಿಂದ ‘ಶೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸಿ’್ತ ಹಾಗೂ ಶಿಕಾರಿಪುರದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿಯೂ ಭಾಗವಹಿಸಿದ್ದಾರೆ. ಅನಿತಾ ಪೂಜಾರಿ ಅವರ ಸಾಧನೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಅವರು ಮನಪೂರ್ವಕ ಶ್ಲಾಘಿಸಿದ್ದಾರೆ.
ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ವತಿಯಿಂದ ಬಂಬ್ರಾಣ ಉಸ್ತಾದರಿಗೆ ಸನ್ಮಾನ.
ಸಮಸ್ತ ಕೇರಳ ಜಂಇಯತುಲ್ ಉಲಮಾ ಕೇಂದ್ರೀಯ ಮುಶಾವರ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸಮಸ್ತ ಮುಶಾವರ ಪ್ರಧಾನ ಕಾರ್ಯದರ್ಶಿಯೂ, ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಕೂರ್ನಡ್ಕ ಜುಮಾ ಮಸೀದಿ ಮುದರೀಸ್ ಆದ ಬಂಬ್ರಾಣ ಉಸ್ತಾದ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಅವರನ್ನು ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ವತಿಯಿಂದ ಅದರ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲು ಶಾಲು ಹೊದಿಸಿ ಸನ್ಮಾನಿಸಿದರು. ಸಮಸ್ತ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ರವರ ಅಧ್ಯಕ್ಷತೆಯಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಮುಶಾವರ ಸಭೆಯಲ್ಲಿ ಬಂಬ್ರಾಣ ಉಸ್ತಾದರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವ್ಯವಸ್ಥಾಪಕ ಸಿರಾಜ್ ಪರ್ಲಡ್ಕ, ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ಸದಸ್ಯರಾದ ಆಶಿಕ್ ಕುಕ್ಕಾಜೆ, ಸಲೀಂ ಬರೆಪ್ಪಾಡಿ, ಸಫ್ವಾನ್ ಸವಣೂರು, ಸರಫ್ರಾಝ್ ವಳಾಲ್, ಸಿರಾಜ್ ಕೈಕಂಬ, ನೌಶಾ ಸವಣೂರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ ಗ್ರ್ಯಾಂಡ್ ಮೀಲಾದ್ ಸಮಾವೇಶ
ಶಾರ್ಜಾ: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರ 1494ನೇ ಜನ್ಮ ದಿನದ ಪ್ರಯುಕ್ತ, "ಹಬೀಬ್ (ಸ.ಅ.) ನಮ್ಮ ಜತೆಗಿರಲಿ" ಎಂಬ ಘೋಷವಾಕ್ಯದೊಂದಿಗೆ, ದಿನಾಂಕ 22-11-19 ರಂದು ಶುಕ್ರವಾರ ಸಂಜೆ 6 ಗಂಟೆಗೆ ಶಾರ್ಜಾದ ಖಾಸಿಮಿಯಾದಲ್ಲಿರುವ ರಯಾನ್ ಹೋಟೆಲಿನಲ್ಲಿ ಗ್ರ್ಯಾಂಡ್ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕೆ.ಸಿ.ಎಫ್ ಶಾರ್ಜಾ ವಲಯದ ಅಧ್ಯಕ್ಷರಾದ ಬಹು! ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಕೆ.ಸಿ.ಎಫ್ ಯು.ಎ.ಇ. ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ದುಆ ನೆರವೇರಿಸಲಿದ್ದಾರೆ. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಇದರ ಅಧ್ಯಕ್ಷರಾದ ಬಹು! ಅಬ್ದುಲ್ ಜಲೀಲ್ ನಿಝಾಮಿಯವರು ಸಮಾರಂಭದ ಉದ್ಘಾಟನೆಗೈಯಲಿದ್ದು, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಯು.ಟಿ. ನೌಶದ್ ರವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಬಹುಮಾನ್ಯ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ತಂಙಲ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ದುಆಕ್ಕೆ ನೇತೃತ್ವ ನೀಡಲಿದ್ದಾರೆ.
ಬಹು! ಮಸ್ಊದ್ ಸಖಾಫಿ ಗೂಡಲ್ಲೂರು ರವರು ಹುಬ್ಬುರಸೂಲ್ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಾರಂಭದಲ್ಲಿ ಶಾರ್ಜಾ ಝೋನ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ, ಮೌಲಿದ್ ಪಾರಾಯಣ, ಮನಮೋಹಕ ಬುರ್ದಾ ಆಲಾಪನೆ, ನಾತೇ ಶರೀಫ್ ನಡೆಯಲಿದ್ದು, ಸಮಾರಂಭದಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ನೇತಾರರು, ಉಮಾರಾ ನಾಯಕರು, ಉಲಮಾಗಳು ಭಾಗವಹಿಸುವುದಾಗಿ ಸ್ವಾಗತ ಸಮಿತಿ ನೇತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದವರು:*
ಬಹು ನೌಶಾದ್ ಯು.ಟಿ.(ಅಧ್ಯಕ್ಷರು ಮೀಲಾದ್ ಸ್ವಾಗತ ಸಮಿತಿ )
ಬಹು ಅಬೂಸ್ವಾಲಿಹ್ ಸಖಾಫಿ (ಕೆ.ಸಿ.ಎಫ್ ಶಾರ್ಜ ಝೋನ್ ಅಧ್ಯಕ್ಷರು)
ಬಹು ರಜಬ್ ಮಹಮ್ಮದ್ (ಕೆ.ಸಿ.ಎಫ್ ಶಾರ್ಜ ಝೋನ್ ಪ್ರಧಾನ ಕಾರ್ಯದರ್ಶಿ)
ಬಹು ಮುಹಮ್ಮದ್ ಹುಸೈನ್ ಇನೋಳಿ (ಕಾರ್ಯದರ್ಶಿ, ಕೆ.ಸಿ.ಎಫ್ ಶಾರ್ಜ ಝೋನ್ ಮೀಲಾದ್ ಸ್ವಾಗತ ಸಮಿತಿ)
ಬಹು ಕರೀಂ ಮುಸ್ಲಿಯಾರ್ (ಅಧ್ಯಕ್ಷರು , ಪ್ರಕಾಶನ ವಿಭಾಗ ಕೆ.ಸಿ.ಎಫ್ ಯು.ಎ.ಈ)
ಬಹು ತಾಜುದ್ಧೀನ್ ಅಮ್ಮುಂಜೆ (ಅಧ್ಯಕ್ಷರು ಮೀಡಿಯಾ ಸಮಿತಿ , ಮೀಲಾದ್ ಸ್ವಾಗತ ಸಮಿತಿ)
ಪರಂಪರಾ ವಿವಿದೊದ್ದೇಶ ಸಹಕಾರ ಸಂಘ ಕಾರ್ಕಳ ಸಂಸ್ಥೆಗೆ ಪ್ರಶಸ್ತಿ
ಮುಂಬಯಿ (ಕಾರ್ಕಳ), ನ.22: ರಾಜ್ಯ ಸಹಕಾರ ಮಹಾಮಂಡಳಿ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರ ಇಲಾಖೆ ವತಿಯಿಂದ ಕಳೆದ ಸೋಮವಾರ (ನ.18) ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾವೇಶದಲ್ಲಿ ಕಾರ್ಕಳ ತಾಲೂಕು ಇಲ್ಲಿನ ಪರಂಪರಾ ವಿವಿದೊದ್ದೇಶ ಸಹಕಾರ ಸಂಘಕ್ಕೆ `ಉತ್ತಮ ಸಹಕಾರ ಸಂಘ’ ಪ್ರಶಸ್ತಿ ನೀಡಿ ಗೌರವಿಸಿತು.
ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಉಡುಪಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದು ಸಂಘದ ಅಧ್ಯಕ್ಷ ನವೀನ್ಚಂದ್ರ ಜೈನ್, ಸಿಇಓ ಗಂಗಾಧರ್.ಆರ್ ಪಣಿಯೂರು ಅವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಹಕಾರ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟೆ ಮುಂಬಯಿ ಅಲುಮ್ನಿ ಅಸೋಸಿಯೇಶನ್ ಅಸ್ಥಿತ್ವಕ್ಕೆ
ಮುಬಯಿ, ನ.18: ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟೆ (ಸಾಂತೂರು ಪಿಲಾರು ಗ್ರಾಮ ಮದರಂಗಡಿ) ಹಳೆ ವಿದ್ಯಾಥಿರ್sಗಳ ಸಂಘವನ್ನು ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಮುಂಬಯಿ ಅಲುಮ್ನಿ ಅಸೋಸಿಯೇಶನ್ನ್ನು ಆದಿತ್ಯವಾರ ಸಾಕಿನಾಕ ಜಂಕ್ಷನ್ನಲ್ಲಿರುವ ಹೊಟೇಲ್ ಮುಂಬಯಿ ಮೆಟ್ರೋ ಪ್ಯಾಲೇಸ್ ಸಭಾಗೃಹದಲ್ಲಿ ಅಸ್ವಿತ್ವಕ್ಕೆ ತರಲಾಯಿತು.
ಶಾಲೆಯ ಮಾಲಕರುಗಳಾದ ಶ್ರೀಮತಿ ಶಶಿ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನೇರವೇರಿದ ಸಭೆಯಲ್ಲಿ ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟೆ ಮುಂಬಯಿಯಲ್ಲಿ ಸ್ಥಾಪನೆಗೊಂಡಿರುವ ರಿಜಿಸ್ಟ್ರಾರ್ ಹಳೆ ವಿದ್ಯಾಥಿರ್sಗಳ ಸಂಘಕ್ಕೆ ನಮ್ಮ ಮತ್ತು ಕುಟುಂಬದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಹಳೆ ವಿದ್ಯಾಥಿರ್s ಸಂಘ ಸ್ಥಾಪಕ ಎ.ಪಿ ಕುಮಾರ್ ಭಂಡಾರಿ ಮಾತನಾಡಿ ಸಂಘ ಸ್ಥಾಪನೆ ಮಾಡುವ ಉದ್ದೇಶ, ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾಥಿರ್sಗಳನ್ನು ಒಗ್ಗೂಡಿಸುವುದು. ಶಾಲೆಯಲ್ಲಿ ಕಲಿಯುತ್ತಿರುವ ಹಾಗೂ ಮುಂದೆ ಕಲಿಯಲಿರುವ ವಿದ್ಯಾಥಿರ್sಗಳಿಗೆ ಶೈಕ್ಷಣಿಕ ಮತ್ತು ಆಥಿರ್sಕನೆರವು. ಶಾಲೆಯ ಕುಂದು ಕೊರೆತೆಗಳಿಗೆ ಸ್ಪಂದಿಸುವ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಂದರ ಶೆಟ್ಟಿ , ಶೈಲೇಶ್ ಶೆಟ್ಟಿ, ಲೀಲಾಧರ ಪೂಜಾರಿ ಸೇರಿದಂತೆ ಅನೇಕ ಹಳೆ ವಿದ್ಯಾಥಿರ್sಗಳು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ `ಸ್ಟೈಲಿಂಗ್ ಅಟ್ ದ ಟಾಪ್’ ಕೃತಿ ಸಮರ್ಪಣೆ - ವ್ಯಕ್ತಿ ಸಾಧನೆ ಸ್ವಸಮುದಾಯ-ಹುಟ್ಟೂರಿಗೂ ಹೆಮ್ಮೆದಾಯಕ : ವಿದ್ಯಾಪ್ರಸನ್ನಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.30: ಕಾರ್ಕಳದ ಕುಗ್ರಾಮದಲ್ಲಿ ಹುಟ್ಟಿ ತೀರಾ ಬಡತನ ಎದುರಿಸಿ ತೇಜೋವಧೆಯಂತಹ ಅವಮಾನ ಸಹಿಸಿ ತುಂಬಾ ಎಳೆವಯಸ್ಸಿನಲ್ಲೇ ಬದುಕು ಕಟ್ಟಿಕೊಂಡ ನಮ್ಮೂರ ಹುಡುಗನೊಬ್ಬ ಇವತ್ತು ದೊಡ್ಡದೊಡ್ಡ ಸೆಲೆಬ್ರೆಟಿಗಳಿಗೆ ಕೇಶ ವಿನ್ಯಾಸ ಮಾಡುತ್ತಿರುವುದು ಅಭಿನಂದನಾರ್ಹ. ಜನ್ಮಭೂಮಿಯಿಂದ ಕರ್ಮಭೂಮಿಗೆ ಹೋಗಿ ಅತೀ ಶೀಘ್ರವಾಗಿ ಅತೀ ದೊಡ್ಡ ಸಾಧನೆ ಮಾಡಿರುವುದು ಆಶ್ಚರ್ಯವಾದರೂ ಅಭಿಮಾನದ ಸಂಗತಿಯೇ ಸರಿ. ಹುಟ್ಟು ಕೌರಿಕನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪ್ರಸಿದ್ಧಿ ಆಗಿರುವುದೇ ಶ್ರೇಷ್ಠ ಸಾಧನೆ. ಇದು ಹುಟ್ಟೂರ ತುಳುನಾಡಿಗೂ ಹೆಮ್ಮೆದಾಯಕವಾಗಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಕಳೆದ ಬುಧವಾರ ಪೂರ್ವಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಅಲ್ಲಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್’ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಭೇಟಿಯನ್ನಿ ತ್ತು ತನ್ನ `ಸ್ಟೈಲಿಂಗ್ ಅಟ್ ದ ಟಾಪ್’ ಕನ್ನಡ ಕೃತಿಯನ್ನು ಶ್ರೀಗಳ ಮುಖೇನ ಶ್ರೀ ಸನ್ನಿಧಿಗೆ ಸಮರ್ಪಿಸಿದ ಶುಭಾವಸರದಲ್ಲಿ ಶ್ರೀ ವಿದ್ಯಾಪ್ರಸನ್ನರು ಶಿವರಾಮ ಭಂಡಾರಿ ಅವರ ಸಾಧನೆ ಅರಿತು ಅಭಿನಂದಿಸಿ ಶಲು ಹೊದಿಸಿ ಮಂತ್ರಾಕ್ಷತೆ, ಪ್ರಸಾದವನ್ನಿತ್ತು ಅನುಗ್ರಹಿಸಿದÀರು.
ಈ ಸಂದರ್ಭದಲ್ಲಿ ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ, ಹಿರಿಮೆಯ ಪತ್ರಿಕಾ ಛಾಯಾಕಾರ ಗೋಪಾಲ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ವತಿಯಿಂದ ವಾರ್ಷಿಕ ಸ್ನೇಹ ಕೂಟ
ಮುಂಬಯಿ, ನ.16: ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ವತಿಯಿಂದ ವಾರ್ಷಿಕ ಸ್ನೇಹ ಕೂಟವು ಮತ್ತು ಕಳೆದ ಅ.21ರಂದು ರಾಜ್ಯದ ವಿಧನಸಭೆಯ ಚುನಾವಣೆಯಲ್ಲಿ ಫೆಡರೇಶನ್ ಪದಾಧಿಕಾರಿಗಳ ಪೆÇ್ರೀತ್ಸಾಹದಿಂದ ಮೂವರು ಬಹುಜನ ವಿಕಾಸ ಅಘಾಡಿಯ ಶಾಸಕರು ಚುನಾಯಿತರಾಗಿದ್ದರಿಂದ ಸ್ನೇಹ ಸಮ್ಮಿಲನ ಇತ್ತೀಚಿಗೆ (04.11.2019) ವಿರಾರ್ ಪಶ್ಚಿಮದಲ್ಲಿನ ಹೊಟೇಲ್ ಬಂಜಾರ ಗ್ರ್ಯಾಂಡ್ ಇದರ ಸಭಾಗೃಹದಲ್ಲಿ ನೇರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ಅಧ್ಯಷ ಡಾ| ವಿರಾರ್ ಶಂಕರ ಶೆಟ್ಟಿ ಅವರು ವಹಿಸಿದ್ದು, ಬಹುಜನ ವಿಕಾಸ ಅಘಾಡಿಯ ಶಾಸಕರಿಗಳಾದ ಹಿತೇಂದ್ರ ಠಾಕೂರ್, ಕ್ಷೀತಿಜ್ ಠಾಕೂರ್, ಪ್ರಥಮ ಮಹಾ ಪೌರರಾದ ಪ್ರವೀಣ್ ಶೆಟ್ಟಿ, ನವಘರ್ ಮಾಣಿಕ್ಪುರ ಮಾಜಿ ಅಧ್ಯಕ್ಷ ರಾಜೇಶ್ವರಿ ನಾರಾಯಣ್, ಬೊಯಿಸರ್ನ ಉದ್ಯಮಿ ಭುಜಂಗ ಶೆಟ್ಟಿ, ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ಗೌ|ಅಧ್ಯಕ್ಷ ಪಿ.ವಿ.ಕೆ ನಂಬಿಯಾರ್, ಕಾರ್ಯದರ್ಶಿ ನರೇಂದ್ರ ಪ್ರಭು, ಕೋಶಾಧಿಕಾರಿ ಚಕ್ರಮಣಿ, ಜೊತೆ ಕೋಶಾಧಿಕಾರಿ ಡಯಾನ್ ಡಿಸೋಜಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಾ ಪೌರರಾದ ಪ್ರವೀಣ್ ಶೆಟ್ಟಿ ಮಾತನಾಡಿ ಫೆಡರೇಶನ್ ಪೆÇ್ರೀತ್ಸಾಹ ಮತ್ತು ಪ್ರಯತ್ನದಿಂದ ನಮ್ಮ ಮೂವರು ಶಾಸಕರು ಜಯಗಳಿಸಿದ್ದಾರೆ. ಕರ್ಮಭೂಮಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯನಿರ್ವಾಹಿಸುತ್ತಿರುವುದು ಅಭಿನಂದನೀಯ. ಇದರ ಶ್ರೇಯಸ್ಸು ಫೆಡರೇಶನ್ನ ಎಲ್ಲಾ ಪಧಾಕಾರಿಗಳಿಗೆ ಪ್ರಥಮವಾಗಿ ವಿರಾರ್ ಶಂಕರ ಶೆಟ್ಟಿ ಅವರಿಗೆ ಸಲ್ಲುತ್ತದೆ. ನಾವೆಲ್ಲ ಸಂಘ ಸಂಸ್ಥೆಗಳು ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿ ದುಡಿಯೋಣ ಎಂದು ತಿಳಿಸಿದರು.
ಹಿತೇಂದ್ರ ಠಾಕೂರ್ ಮಾತನಾಡಿ ಫೆಡರೇಶನ್ ಮಾಡಿರುವ ಕೆಲಸಕ್ಕೆ ಸಂಸ್ಥೆಯ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಯಾವ ಒಳ್ಳೆಯ ಕೆಲಸಗಳಲ್ಲಿ ವಿಳಂಬ ಅಥವಾ ಆಗದಲ್ಲಿ ನನ್ನ ಗಮನಕ್ಕೆ ತರಬೇಕು. ನಗರಸೇವಕರು ಕೆಲಸಗಳಲ್ಲಿ ವಿಫಲವಾದರೆ ನಮ್ಮಲ್ಲಿ ತಿಳಿಸದರೆ ನಾವೂ ಅದನ್ನು ತಿದ್ದುಪಡಿಸಬಹುದು. ಎಲ್ಲರ ಸಹಕಾರದಿಂದ ಅಗತ್ಯವಿದೆ ಎಂದು ನುಡಿದರು.
ನಮ್ಮ ಜಯಕ್ಕೆ ಫೆಡರೇಶನ್ನ ಅಧ್ಯಕ್ಷರ ಮುಂದಾಳತ್ವದಲ್ಲಿ ಹಲವು ಸಭೆಗಳನ್ನು ನಡೆಸಿ, ಗೆಲುವಿಗೆ ಶ್ರಮ ಪಟ್ಟ ಎಲ್ಲರಿಗೂ ನಮ್ಮ ಧನ್ಯವಾದಗಳು. ವಸಾಯಿ ತಾಲೂಕನ್ನು ಅಭಿವೃದ್ಧಿ ಕ್ಷೇತ್ರವೆಂದು ಪರಿಗಣಿಸಲು ನಾವೂ ಸಂಪೂರ್ಣವಾಗಿ ಪ್ರಯತ್ನಿಸುತ್ತೇವೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ನಾಲಾಸೋಫಾರ ವಿಧಾನ ಸಭೆಯ ಶಾಸಕ ಕ್ಷಿತಿಜ್ ಠಾಕೂರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಜ್ಯಪಾಲರಿಂದ ದೊರೆತಿರುವ ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಪುರಸ್ಕಾರ ಪಡೆದಿರುವ ವಿರಾರ್ ಶಂಕರ ಶೆಟ್ಟಿ ಅವರನ್ನು ಜಯೇಂದ್ರ ಠಾಕೂರ್ ಅವರು ಅತಿಥಿsಗಳನ್ನೊಳಗೊಂಡು ಶಾಲು ಹೊದಿಸಿ, ಪೇಟವನ್ನಿಟ್ಟು ಸನ್ಮಾನಿಸಿ, ನಿಮ್ಮ ಸಮಾಜ ಸೇವೆ ನಿರಂತರ ನಡೆಯಲಿ, ಅನೇಕ ಗೌರವ ಪುರಸ್ಕಾರಗಳಿ ನಿಮ್ಮದಾಗಲಿ, ಜೀವ್ದಾನಿ ಮಾತೆ ಮತ್ತು ಸಾಯಿಬಾಬಾರ ಆಶೀರ್ವಾದ ನಿಮ್ಮೊಡನೆ ಸದಾ ಇರಲಿ ಎಂದು ಶುಭಾರೈಸಿದರು.
ವಿರಾರ್ ಶಂಕರ ಶೆಟ್ಟಿ ಅಧ್ಯಕ್ಷೀಯ ಭಾಷಣಗೈದು ಫೆಡರೇಶನ್ನ ಎಲ್ಲರು ಒಗ್ಗೂಡಿ ಮೂವರು ಶಾಸಕರನ್ನು ಜಯಭೇರಿ ಗೊಳಿಸಿದಕ್ಕೆ ಎಲ್ಲರಿಗೂ ಅಂತರಾಳದಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಿಮ್ಮೆಲ್ಲರ ಪರವಾಗಿ ನೂತನ ಶಾಸಕರನ್ನು ಸನ್ಮಾನಿಸುತ್ತೇವೆ. ನನ್ನಿಂದ ಒಬ್ಬನಿಗೆ ಸಾಧ್ಯವಿಲ್ಲ, ನಿಮ್ಮೆಲ್ಲರ ವಿಶ್ವಾಸ, ತನು ಮನ ಸಹಕಾರದಿಂದ ಸಾಧ್ಯವಾಗಿದೆ ಎಂದು ಎಲ್ಲರಿಗೂ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಲ|ಡಾ| ಕೆ.ಟಿ ಶಂಕರ ಶೆಟ್ಟಿ, ಲ| ಶಶಿಕಾಂತ್ ಸುವರ್ಣ, ವಿರಾರ್-ನಾಲಾಸೋಪಾರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ, ವಸಾಯಿ, ಡಹಾಣು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು, ಶುಭಕೋರಿದರು. ನರೇಂದ್ರ ಪ್ರಭ ಕಾರ್ಯಕ್ರಮ ನಿರೂಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link