Sahitya Balaga Silver Year Valedictory & 12 Book Released
Kemmannu News Network, 13-12-2019 09:33:10
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪÀ-ಅಭಿನಂದನಾ ಗೌರವ
ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದೆ : ನಾ.ಮೊಗಸಾಲೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.08: ಪ್ರಸುತ ಸನ್ಮಾನ ತೆಗೆದುಕೊಳ್ಳುವುದು ಬಹಳ ಕಷ್ಟ ಅನಿಸುತ್ತಿದೆ. ಆದರೂ ಈ ಗೌರವ ನಾಡೋಜ ಪ್ರಶಸ್ತಿ ಸಿಕ್ಕಿದಷ್ಟೇ ಗೌರವ ಸ್ವೀಕರಿಸಿದ ಅನುಭವವಾಗುತ್ತಿದೆ. ಇಂದು ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದ್ದು, ನಿಮ್ಮ ಸಂಸ್ಕಾರ, ಸಂಸ್ಕೃತಿಯ ಬೇರು ಕರಾವಳಿಯಲ್ಲಿ ನೆಲೆಯಾಗಿದೆ. ಪ್ರೀತಿಸುವುದಲ್ಲಿ ಎರಡು ಕಾರಣಗಳಿದ್ದು, ಒಂದು ಅಂತರಂಗವಾಗಿ ಪ್ರೀತಿಸುವುದು, ಇನ್ನೊಂದು ಕಾರಣವಾಗಿ ಪ್ರೀತಿಸುವುದು. ನಾವೂ ಅಕ್ಷರಗಳ ಮೂಲಕ ನಾಡಿಗೆ ಮೂಡಬೇಕು. ನೀವು ನೀಡಿರುವ ಈ ಪ್ರೀತಿ ನನ್ನ ತಂದೆ ತಾಯಿಗಳಿಗೆ ಸಲ್ಲುವಂತದ್ದು. ನಾಡಿಗೆ ನಮನ ಮಾಲೆಯನ್ನು ಕರ್ನಾಟಕ ಗುರುತಿಸಿದೆ ಎಂದು ನಾಡಿನ ಹಿರಿಯ ವಿದ್ವಾಂಸ, ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ| ನಾ.ಮೊಗಸಾಲೆ ಮಾತನಾಡಿದರು.
ಸಾಹಿತ್ಯ ಬಳಗ ಮುಂಬಯಿ ತನ್ನ ರಜತೋತ್ಸವ ಸಮಾರೋಪ ಸಮಾರಂಭ ಇಂದಿಲ್ಲಿ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಆಚರಿಸಿದ್ದು, ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ, ತ್ರಿಭಾಷಾ ಪಂಡಿತ ಡಾ| ಎಸ್.ಕೆ ಭವಾನಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಋಗ್ವೇದ ಘನಪಾಠಿ ದುರ್ಗಾಪ್ರಸಾದ್ ಭಟ್ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸ್ವಸ್ತಿ ವಾಚನಗೈದರು.
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗ ದಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ನಾಡಿಗೆ ನಮಸ್ಕಾರ ಯೋಜನೆಯಡಿ 228 ಕೃತಿಗಳನ್ನು ಪ್ರಕಟಿಸಿ ವಿಜಯರಥ ಶಾಂತಿ ಆಚರಿಸಿದ ನಾಡಿನ ಹಿರಿಯ ಸಾಹಿತಿ ಡಾ| ನಾ.ಮೊಗಸಾಲೆ ಇವರಿಗೆ ಅಭಿನಂದನಾ ಗೌರವ ಪ್ರದಾನಿಸಿ ಅಭಿನಂದಿಸಿದ್ದು, ಗೌರವಕ್ಕೆ ಉತ್ತರಿಸಿ ಮೊಗಸಾಲೆ ಮಾತನಾಡಿದರು.
ಕೆ.ಎಲ್ ಕುಡಂತ್ತಾಯ ಅಭಿನಂದನಾ ಭಾಷಣಗೈದು ಕೃಷಿ ಹಿನ್ನಲೆಯಿಂದ ಬಂದ ಡಾ| ಮೊಗಸಾಲೆ ಕಾಂತಾವರಕ್ಕೆ ಬಂದಾಗ ಕಾತೇಶ್ವರ ದೇವಸ್ಥಾನದ ಗಂಟೆಯ ಕಲರವ ಮಾತ್ರ ಇತ್ತು. ಈಗ ಅಲ್ಲಿ ಸಾಹಿತ್ಯದ ಕಲರವ ಕೇಳಿಬರುತ್ತದೆ. ಒಂದು ವಿವರಿಸಲಾಗದ ವ್ಯಕ್ತಿತ್ವ ನಾ.ಮೊಗಸಾಲೆ ಅವರದ್ದು, ಸಾಹಿತ್ಯವನ್ನು ಮಾತ್ರ ಪ್ರೀತಿಸುವುದಲ್ಲ, ಸಾಹಿತ್ಯ ಸಂಸ್ಕೃತಿಯನ್ನು ಒಂದುಗೂಡಿಸಿ ಮುನ್ನಡೆದವರು ಮೊಗಸಾಲೆ ಎಂದು ತಿಳಿಸಿದರು.
ತಾವು ಬೆಳೆಯುತ್ತಾ ಇತರರನ್ನು ಬೆಳೆಸಿದವರು ಎಂಬತ್ತೇಳರ ಹೆಚ್.ಬಿ.ಎಲ್ ರಾವ್ ಹಾಗೂ ಎಪ್ಪತ್ತೈದರ ನಾ.ಮೊಗಸಾಲೆ. ಇತಿಹಾಸದ ಬಗ್ಗೆ ನಾವು ಗಂಭೀರವಾದ ಆರೋಪ ಇದೆ ಇದು ನಿಜವೂ ಹೌದು. ನಮ್ಮ ಸಾಧನೆಗಳ ಸುತ್ತ ಇತಿಹಾಸ ಹುಟ್ಟುತ್ತಿದೆ. ಅದನ್ನು ದಾಖಲಿಸುವ ಕೆಲಸ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಾ.ಮೊಗಸಾಲೆ ಹಾಗೂ ಅವರಿಂದ ಪ್ರೇರಣೆ ಪಡೆದು ಹೆಚ್.ಬಿ.ಎಲ್ ರಾವ್ ಇವರ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ ಕಾರ್ಯಸ್ತುತ. ಇದು ನಾಡನ್ನು, ದೇಶವನ್ನು ಕಟ್ಟಿಸುವ ಕಾರ್ಯ ಎಂದು ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ (ಎನ್ಐಎ) ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಡಾ| ವ್ಯಾಸರಾಯ ನಿಂಜೂರು, ಟಿ.ಎನ್ ಅಶೋಕ, ಶ್ರೀನಿವಾಸ ಜೋಕಟ್ಟೆ, ಯು. ವೆಂಕಟ್ರಾಜ್, ಶ್ಯಾಮ ಎನ್.ಶೆಟ್ಟಿ ವಾಶಿ, ಡಾ| ಕೆ.ಗೋವಿಂದ ಭಟ್, ಸಾಹಿತ್ಯ ಬಳಗದ ಉಪಾಧ್ಯಕ್ಷರುಗಳಾದ ಡಾ| ಕೆ.ಗೋವಿಂದ ಭಟ್ ಮತ್ತು ಡಾ| ಕರುಣಾಕರ ಎನ್.ಶೆಟ್ಟಿ, ಬಳಗದ ಗೌ| ಕಾರ್ಯದರ್ಶಿ ಎಸ್.ಕೆ.ಸುಂದರ್, ಕೋಶಾಧಿಕಾರಿ ಸಾ.ದಯಾ (ದಯಾನಂದ ಸಾಲ್ಯಾನ್), ರಾಜು ಶ್ರೀಯಾನ್, ಅನುರಾಧ ರಾವ್, ಎ.ಆರ್ ನಾರಾಯಣ ರಾವ್, ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದÀರು.
ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿದರು. ಡಾ| ಜ್ಯೋತಿ ಸತೀಶ್, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಿ.ಎಸ್ ನಾಯಕ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯ ವಿದುಷಿ ಸಹನಾ ಭಾರದ್ವಾಜ್ ಸ್ವಾಗತಂ ಕೃಷ್ಣ ನೃತ್ಯರೂಪಕ, ಪದ್ಮಾವತಿ ಯು.ಭಟ್ ಮತ್ತು ತಂಡವು ಜಾನಪದ ನೃತ್ಯ ಹಾಗೂ ಡಾ| ಎ.ವಿ ರಾವ್ ಪ್ರಾಯೋಜಕತ್ವದಲ್ಲಿ ನಾಟ್ಯ ವಿದುಷಿ ಮೈತ್ರೀ ರಾವ್ ಬೆಂಗಳೂರು ಬಳಗವು ಭರತನಾಟ್ಯ ಪ್ರದರ್ಶಿಸಿತು.
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪ-ಸಾಧಕರಿಗೆ ನಮನ ಕೃತಿಗಳ ಅನಾವರಣ
ಮುಂಬಯಿನಲ್ಲಿ ಕನ್ನಡದ ಸಾಹಿತ್ಯ ಕ್ರಿಯಾಶೀಲವಾಗಿದೆ : ಪ್ರಕಾಶ್ ಎಲ್.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.08: ಎಚ್.ಬಿ.ಎಲ್ ರಾವ್ ಅವರ ಕನ್ನಡ ಸಾಹಿತ್ಯ ಸೇವೆ ನಿಜವಾಗಿ ಅತ್ಯಾದ್ಭುತವೂ ಮತ್ತು ಶ್ಲಾಘನೀಯವಾದುದು. ಸಾಹಿತ್ಯ ರಚನೆ ಕಾರ್ಯ ಒಳನಾಡಿಗಿಂತ ಹೊರನಾಡಿನಲ್ಲಿ ಹೆಚ್ಚಾಗುತ್ತಿದ್ದು, ಅದರಲ್ಲೂ ಮುಂಬಯಿಯಲ್ಲಿ ವರ್ಷಾವಧಿ ಹೆಚ್ಚುವರಿಯಾಗಿ ಕೃತಿಗಳ ಲೋಕಾರ್ಪಣೆ ಆಗುತ್ತಿವುದು ಹೆಮ್ಮೆಯ ಸಂಗತಿ. ಮುಂಬಯಿ ಕನ್ನಡ ಸಾಹಿತ್ಯ ಚಟುವಟಿಕೆಗಳು ತುಂಬಾ ಕ್ರಿಯಾಶೀಲವಾಗಿ ಸಾಗುವಂತೆ ಮಾಡುತ್ತಿರುವ ತುಳು ಕನ್ನಡಿಗರ ಕಾರ್ಯ ಉಲ್ಲೇಖನೀಯ. ಯಕ್ಷಗಾನ, ತುಳುಭಾಷೆ ಕನ್ನಡ ಸಾಹಿತ್ಯಕ್ಕೆ ತನ್ನ ಶಕ್ತಿ ಮಿರಿ ದುಡಿದ ಚೇತನ ಎಚ್.ಬಿ.ಎಲ್ ಅವರದ್ದು ಎಂದು ಮಹಾರಾಷ್ಟ್ರ ಸರಕಾರದ (ಎನ್ಐಎ) ವಿಶೇಷ ವ್ಯಾಜ್ಯದಾರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಲಹಾಗಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಸಾಹಿತ್ಯ ಬಳಗ ಮುಂಬಯಿ ತನ್ನ ರಜತೋತ್ಸವ ಸಮಾರೋಪ ಸಮಾರಂಭದಲ್ಲಿನ ಸಾಧಕರಿಗೆ ನಮನ ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಕಾಶ್ ಶೆಟ್ಟಿ ಮಾತನಾಡಿದರು.
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗದ ಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ಹಿರಿಯ ಸಾಹಿತಿ ಡಾ| ನಾ.ಮೊಗಸಾಲೆ, ವಿದ್ವಾಂಸ ಕೆ.ಎಲ್ ಕುಂಡತ್ತಾಯ, ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದÀರು.
ಕಾರ್ಯಕ್ರಮದಲ್ಲಿ ನಾರಾಯಣ ಬಲ್ಲಾಳ ಉಡುಪಿ ರಚಿತ ಜಾನಪದ ವಿದ್ವಾಂಸ ಕೆ.ಎಲ್ ಕುಂಡತ್ತಾಯ ಸಾಧಕ ಕೃತಿಯನ್ನು ಪ್ರಕಾಶ್ ಎಲ್.ಶೆಟ್ಟಿ, ಶ್ರೀಮತಿ ಅಶ್ವಿನಿ ರಾಜನ್ ರಚಿತ ಮಾರ್ವಿ ಕಲಾ ಪರಂಪರೆ ಸಾಧಕ ಕೃತಿಯನ್ನು ಸಾಹಿತಿ ಡಾ| ವ್ಯಾಸರಾಯ ನಿಂಜೂರು, ಸದಾನಂದ ನಾರಾವಿ ರಚಿತ ರಾಷ್ಟ್ರೀಯ ಸ್ವಯಂಸೇವಾ ಸಂಘದ ಕಾರ್ಯಕರ್ತ ಗುರುಪುರ ಜಿ.ಟಿ ಗೋಪಾಲ ಭಟ್ ಸಾಧಕ ಕೃತಿಯನ್ನು ನಿತ್ಯಾನಂದ ಡಿ.ಕೋಟ್ಯಾನ್, ಅನುರಾಧ ರಾಮಚಂದ್ರ ರಾವ್ ರಚಿತ ಪಂಚವಾದ್ಯ ಪ್ರವೀಣ ದಿ| ಬಾಲಪ್ಪ ಗುರಿಕಾರ ಸೀತಾರಾಮ ರಾವ್ ಸಾಧಕ ಕೃತಿಯನ್ನು ಸಂಗೀತ ವಿದ್ವಾನ ಟಿ.ಎನ್ ಅಶೋಕ, ಅನುರಾಧ ವಿದ್ಯಾಧರ ರಚಿತ ಧೃತಿಗೆಡದ ಸಮಾಜಸೇವಕ ಪೆÇ್ರ| ಪಿ. ಸೋಮಶೇಖರ ರಾವ್ ಸಾಧಕ ಕೃತಿಯನ್ನು ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಎಚ್.ಬಿ.ಎಲ್.ರಾವ್ ರಚಿತ 1ನೇ ಕೃತಿ ವಾಸುದೇವ ರಾವ್ ಕಾಣೆಮಾರ್ ಅವÀರ ಸಾಹಿತ್ಯ ಕೃಷಿ ಸಾಧಕ ಕೃತಿಯನ್ನು ಡಾ| ಸುರೇಶ್ ಎಸ್.ರಾವ್ ಕಟೀಲು, 2ನೇ ಕೃತಿ ಅನಾವರಣ ಸತ್ಯಾನ್ವೇಷಣೆ ಕೃತಿಯನ್ನು ಯು.ವೆಂಕಟ್ರಾಜ್, ಗೋಪಾಲ ತ್ರಾಸಿ ರಚಿತ ಮೊಗವೀರ ಪತ್ರಿಕೆಯ ಸಮರ್ಥ ಸಂಪಾದಕ ಅಶೋಕ್ ಎಸ್.ಸುವರ್ಣ ಸಾಧಕ ಕೃತಿಯನ್ನು ಮೊಗವೀರ ಬ್ಯಾಂಕ್ನ ಕಾರ್ಯಾಧ್ಯಕ್ಷ ಸದಾನಂದ ಎ.ಕೋಟ್ಯಾನ್, ಡಾ| ಕರುಣಾಕರ ಶೆಟ್ಟಿ ರಚಿತ ಭಾವಜೀವಿ ರಾಮ ಮೋಹನ ಶೆಟ್ಟಿ ಬಳ್ಕುಂಜೆ ಸಾಧಕ ಕೃತಿಯನ್ನು ಉದ್ಯಮಿ ಶ್ಯಾಮ ಎನ್.ಶೆಟ್ಟಿ, ಚಿತ್ರಾಪು ಕೆ.ಎಂ.ಕೋಟ್ಯಾನ್ ರಚಿತ ಶತಮಾನ ಕಂಡ ವಿದ್ಯಾದಾಯಿನಿ ಸಭಾ ಸಾಧಕ ಕೃತಿಯನ್ನು ಕೆ.ಎಲ್ ಕುಂಡತ್ತಾಯ, ವಿದ್ವಾನ್ ಎಂ.ಕೆ ರಾಮಶೇಷನ್ ರಚಿತ ಮುದ್ದಣ ಸೇವಾ ನಿರತ ನಂದಳಿಕೆ ಬಾಲಚಂದ್ರ ರಾವ್ ಸಾಧಕ ಕೃತಿಯನ್ನು ಸಾಹಿತಿ ಡಾ| ಕೆ.ಗೋವಿಂದ ಭಟ್, ಡಾ| ಈಶ್ವರ ಅಲೆವೂರು ರಚಿತ ಮುಂಬಯಿ ಕನ್ನಡ ಸಂಘದ ಬೆನ್ನಲೆಬು ಗುರುರಾಜ ಸರ್ವೊತ್ತಮ ನಾಯಕ್ ಸಾಧಕ ಕೃತಿಯನ್ನು ಡಾ| ಎಸ್.ಕೆ ಭವಾನಿ ಹೀಗೆ ಸಾಹಿತ್ಯ ಬಳಗ ಪ್ರಕಾಶಿತ ಒಟ್ಟು ಹನ್ನೆರಡು ಕೃತಿಗಳನ್ನು ಅತಿಥಿüಗಳು ಏಕಕಾಲಕ್ಕೆ ಬಿಡುಗಡೆ ಗೊಳಿಸಿದರು.
ನಾಟ್ಯ ವಿದುಷಿ ಸಹನಾ ಭಾರದ್ವಾಜ್ ಸ್ವಾಗತಂ ಕೃಷ್ಣ ನೃತ್ಯರೂಪಕದೊಂದಿಗೆ ಸಮಾರಂಭ ಆದಿಗೊಂಡಿತು. ಪದ್ಮಾವತಿ ಯು.ಭಟ್ ಬಳಗವು ಜನಪದ ಕಾರ್ಯಕ್ರಮವನ್ನು ಹಾಗೂ ಡಾ| ಎ.ವಿ ರಾವ್ ಪ್ರಾಯೋಜಕತ್ವದ ಡಾ| ಎ.ವಿ ರಾವ್ ಪ್ರಾಯೋಜಕತ್ವದಲ್ಲಿ ನಾಟ್ಯ ವಿದುಷಿ ಮೈತ್ರೀ ರಾವ್ ಬೆಂಗಳೂರು ತಂಡವು ಭರತನಾಟ್ಯ ಪ್ರದರ್ಶಿಸಿತು.
ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಋಗ್ವೇದ ಘನಪಾಠಿ ದುರ್ಗಾಪ್ರಸಾದ್ ಭಟ್ ಮೂಕಾಂಬಿಕೆ ಭಟ್, ಬಳಗದ ಉಪಾಧ್ಯಕ್ಷ ಡಾ| ಕರುಣಾಕರ ಎನ್.ಶೆಟ್ಟಿ, ಜೊತೆ ಕಾರ್ಯದರ್ಶಿ ಜಿ.ಎಸ್ ನಾಯಕ್, ವೈ.ವಿ ಮಧುಸೂದನ ರಾವ್, ರಾಜು ಶ್ರೀಯಾನ್, ಎ.ಆರ್ ನಾರಾಯಣ ರಾವ್ ಉಪಸ್ಥಿತರಿದ್ದು, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಬಳಗದ ಕೋಶಾಧಿಕಾರಿ ಸಾ.ದಯಾ (ದಯಾನಂದ ಸಾಲ್ಯಾನ್) ಮತ್ತು ಅನುರಾಧ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಗದ ಗೌ| ಕಾರ್ಯದರ್ಶಿ ಎಸ್.ಕೆ.ಸುಂದರ್ ಉಪಕಾರ ಸ್ಮರಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link