Brief Mumbai, Mangalore News with pictures


Rons Bantwal
Kemmannu News Network, 06-01-2020 11:32:48


Write Comment     |     E-Mail To a Friend     |     Facebook     |     Twitter     |     Print


ಹೊಸ ವರ್ಷದ ಶುಭಾರಂಭ: ಧರ್ಮಸ್ಥಳದಲ್ಲಿ ಭಕ್ತರ ಗಡಣ
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರ ದರ್ಶನ ಪಡೆದು ಸೇವೆ ಸಲ್ಲಿಸಿದರು.
    ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮ ಸೇವೆ ಸಲ್ಲಿಸಿದ್ದಾರೆ.
    ಅನೇಕ ಮಂದಿ “ಮುಡಿ” ಅರ್ಪಿಸಿ (ತಲೆ ಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
    ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
    ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಮಂಜುನಾಥೇಶ್ವರ ಸಂಸ್ಕøತಿ ಸಂಶೋಧನಾ ಪ್ರತಿಷ್ಠಾನ ವೀಕ್ಷಿಸಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡರು.
   
ಬೆಂಗಳೂರಿನ ಭಕ್ತಾದಿಗಳಿಂದ ಪುಷ್ಪಾಲಂಕಾರ ಸೇವೆ:
    ಬೆಂಗಳೂರಿನ ಚಂದ್ರಾ ಲೇಔಟ್ ನಿವಾಸಿಗಳಾದ ಸಾಯಿ ಸರವಣ, ಗೋಪಾಲ ರಾವ್, ಆನಂದ, ಮಂಜುನಾಥ ರಾವ್, ಧರ್ಮಸ್ಥಳಕ್ಕೆ ಮಂಗಳವಾರವೇ ಬಂದು ದೇವಸ್ಥಾನ ಮತ್ತು ಹೆಗ್ಗಡೆಯವರ ಬೀಡು (ನಿವಾಸ) ಹಾಗೂ ಇತರ ಕಟ್ಟಡಗಳನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದಾರೆ.
    ಭತ್ತದ ತೆನೆ, ಕಬ್ಬು, ದಾಳಿಂಬೆ, ಬಾಳೆ ದಿಂಡು, ತೆಂಗಿನ ಗರಿ, ತಾವರೆ, ಲಿಲಿಯಂ, ಆಂತೂರಿಯಂ, ಜಮೈಕಾನ್ ಎಲೆ ಸೇರಿದಂತೆ ಆರು ಲೋಡ್ ಪರಿಸರ ಸ್ನೇಹಿ ಅಲಂಕಾರಿಕ ಪರಿಕರಗಳನ್ನು ಬಳಸಿ ಆಕರ್ಷಕವಾಗಿ ಸಿಂಗರಿಸಿ ಸೇವೆ ಮಾಡಿ ಧನ್ಯತೆಯನ್ನು ಹೊಂದಿದ್ದಾರೆ.
    ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಹೊಸವರ್ಷ ಶುಭಾರಂಭದ ದಿನ ತಾವು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದು ಅಲಂಕಾರ ಸೇವೆ ಮಾಡುತ್ತಿದ್ದು ತಮ್ಮ ವ್ಯವಹಾರದಲ್ಲಿ ಅಭಿವೃದ್ಧಿಯಾಗಿ, ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಸೇವಾಕರ್ತರ ತಂಡದ ನಾಯಕ ಎಸ್. ಗೋಪಾಲ ರಾವ್ “ಪ್ರಜಾವಾಣಿಗೆ” ತಿಳಿಸಿದ್ದಾರೆ.

ಮಾಧ್ಯಮಗಳ ಬಗ್ಯೆ ಮಾಹಿತಿ
ಉಜಿರೆ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಇದೇ 4 ರಂದು ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದ ಬಗ್ಯೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಮತ್ತು ಕಾರ್ಯದರ್ಶಿ ಎಚ್. ಪದ್ಮಕುಮಾರ್ ತಿಳಿಸಿದ್ದಾರೆ.
    ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಯನ್. ಪೂವಣಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸುವರು.
    ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಶುಭಾಶಂಸನೆ ಮಾಡುವರು.

ಮಂಗಳೂರು ಪುರಭವನದಲ್ಲಿ ಸಂಗೀತ ಸಂಜೆಗೆ ಪ್ರತಿಭೆಗಳ ಧ್ವನಿಪರೀಕ್ಷೆ
ಮುಂಬಯಿ (ಮಂಗಳೂರು), ಡಿ.31: ನಗರದ ನೆಹರು ಮೈದಾನದಲ್ಲಿ ಜ.19ರಂದು ಆಯೋಜಿಸಿರುವ ಸಂಗೀತ ಲೋಕದ ದಂತಕತೆ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸಂಗೀತ ಸಂಜೆಯ ಲೈವ್ ಕಾರ್ಯಕ್ರಮದಲ್ಲಿ ಹಾಡಲು ಸ್ಥಳೀಯ ಪ್ರತಿಭೆಗಳ ಧ್ವನಿಪರೀಕ್ಷೆ (ಆಡಿಶನ್) ನಗರದ ಪುರಭವನದಲ್ಲಿ ಶನಿವಾರ ನಡೆಯಿತು.

ಜ.19ರಂದು ಸಂಗೀತ ಸಂಜೆ ಮಂಗಳೂರು ನೆಹರೂ ಮೈದಾನದಲ್ಲಿ ಜ.19ರಂದು ಸಾಯಂಕಾಲ 6.00 ರಿಂದ ಎಸ್.ಪಿ ಬಾಲಸುಬ್ರಮಣ್ಯಂ ಸಂಗೀತ ಸಂಜೆ ನಡೆಯಲಿದೆ. ಎಸ್‍ಪಿಬಿ ಪಂಚ ಭಾಷೆಗಳಲ್ಲಿ ಹಾಡಲಿದ್ದು, ಗಾಯಕಿ ದಿವ್ಯಾ ರಾಘವಾನ್ ಹಾಡುಗಳಲ್ಲಿ ಸಾಥ್ ನೀಡಲಿದ್ದಾರೆ. ಕರ್ನಾಟಕ ನೆರೆ ಸಂತ್ರಸ್ತರ ಸಹಾಯಾರ್ಥ ನಡೆಯಲಿರುವ ಸಂಗೀತ ಸಂಜೆಯ ಧ್ವನಿ ಪರೀಕ್ಷೆಯ ಕಾರ್ಯಕ್ರಮವನ್ನು ಎಸ್.ಕೆ ಮುಸ್ಸಿಪ್ ಎಂಪ್ಲಾಯ್ಸ್ ಯೂನಿಯನ್ ಮತ್ತು ಸ್ವಾಮಿ ಎಂಟರ್‍ಪ್ರೈಸಸ್ ಜಂಟಿಯಾಗಿ ಆಯೋಜಿಸಿದ್ದೆವು.

ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಭಾಸ್ಕರ್ ದೀಪ ಬೆಳಗಿಸಿ ಉದ್ಘಾಟಿಸಿ ಎಸ್.ಪಿ ಬಾಲಸುಬ್ಯಮಣ್ಯಂ ಅವರು ಸಂಗೀತ ಕ್ಷೇತ್ರದ ಮೇರು ವ್ಯಕ್ತಿ ಅವರ ತಂಡದ ಸಂಗೀತ ಸಂಜೆ ಹಲವು ವರ್ಷಗಳ ನಂತರ ಮಂಗಳೂರಿನ ನೆಹರೂ ಮೈದಾನದಲ್ಲಿ ಮತ್ತೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಸಮಾರಂಭ ಅತ್ಯಂತ ಯಶಸ್ವಿಯಾಗಲಿ ಎಂದು ಶುಭಕೋರಿದರು. ಪೆÇೀಲೀಸ್ ಇನ್ಸ್‍ಪೆಕ್ಟರ್ ಶ್ರೀಮತಿ ಭಾರತಿಯವರು ಮಾತನಾಡಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡವರು ಕ್ರೈಂ ಚಟುವಟಿಕೆಗಳಿಂದ ದೂರವಿರುತ್ತಾರೆ. ಹಾಗಾಗಿ ನಾವು ಮಕ್ಕಳಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿ ಸಬೇಕು ಎಂದರು.

ಹೃದಯವಾಹಿನಿ ಕರ್ನಾಟಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ಎಸ್ಪಿ ಬಿ ಸಂಗೀತ ಸಂಜೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಇದೇ ಮೊದಲು ಈ ಸುಸಂದರ್ಭವನ್ನು ಉದಯೋನ್ಮುಖ ಸಂಗೀತಗಾರರು ಸಮರ್ಥವಾಗಿ ಬಳಿಸಿಕೊಳ್ಳಬೇಕು ಎಂದರು.

ಎಸ್.ಕೆ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್  ಅಧ್ಯಕ್ಷ ಬಾಲು, ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ನಗರ ಯೋಜನಾಧಿಕಾರಿ ಶಿವರಾಜ್ ಪಾಂಡೇಶ್ವರ, ಸಹಾಯಕ ನಗರ ಯೋಜನಾಧಿಕಾರಿ ದಿಲೀಪ್ ಗಧ್ಯಾಳ್, ದಕ್ಷಿಣ ಕನ್ನಡ ಕಲಾವಿದರ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಒಮೆಗಾ ಆಸ್ಪತ್ರೆ ಆಡಳಿತಾಧಿಕಾರಿ ಎಸ್.ಎಲ್ ಭಾರದ್ವಜ್ ಮತ್ತು ಗೋ.ನಾ ಸ್ವಾಮಿ ಅತಿಥಿüಗಳಾಗಿದ್ದು ಶುಭ ಹಾರೈಸಿದರು.

108 ವಿಮಲ ಸಾಗರ ಮುನಿ ಮಹಾರಾಜರ ರಜತ ಪುಣ್ಯತಿಥಿü ಮಹೋತ್ಸವ
ಮುಂಬಯಿ, ಡಿ.31: ಜೈನರ ಶಾಶ್ವತ ಸಿದ್ದ ಕ್ಷೇತ್ರ ಜಾಖಂಡ್ ರಾಜ್ಯದ ಸಮ್ಮೇದ ಗಿರಿ ಕ್ಷೇತ್ರದ ಸುಮಾರು 27   ಕಿ.ಮೀ ವಿಸ್ತರಣೆಯನ್ನೊಳಗೊಂಡ ತೀರ್ಥದ 18ನೇ ತೀರ್ಥಯಾತ್ರೆಯನ್ನು ಮೂಡುಬಿದಿರೆ  ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರನ್ನು ಇಂದಿಲ್ಲಿ ದರ್ಶನ ಮಾಡಿದರು. ವಾತ್ಸಲ್ಯ ರತ್ನಾಕರ 108 ವಿಮಲ ಸಾಗರ ಮುನಿ ಮಹಾರಾಜರ ರಜತ ಪುಣ್ಯತಿಥಿü ಮಹೋತ್ಸವ ವಾತ್ಸಲ್ಯ ರತ್ನಾಕರ 108 ವಿಮಲ ಸಾಗರ್, ಸ್ಥವಿರ ಆಚಾರ್ಯ, 108 ಶಂಭವ ಸಾಗರ್108 ಆಚಾರ್ಯ, ವಿರಾಗ ಸಾಗರ್ 108 ಆಚಾರ್ಯ, ಅನೇಕಾಂತ್ ಸಾಗರ್ ಮುನಿ ಮಹಾರಾಜ್‍ರ ಪಾವನ ಉಪಸ್ಥಿತಿಯಲ್ಲಿ ಜರುಗಿತು. ಮೂಡುಬಿದಿರೆ, ಕನಕಗಿರಿ, ಅರಹಂತಗಿರಿ, ನಾಠದಿಣಿ ಶ್ರೀಗಳವರು ಭಗವಾನ್ ಪಾರ್ಶ್ವನಾಥ ಸ್ವಾಮಿ ಭಗವಾನ್ ಅಜಿತನಾಥ ಸ್ವಾಮಿ ಕೂಟದಲ್ಲಿ ಪಂಚಾಮೃತ ಅಭಿಷೇಕ ಮಹಾ ಶಾಂತಿಧಾರ ತಮ್ಮ ಉಪಸ್ಥಿತಿಯಲ್ಲಿ ಮಹೋತ್ಸವ ನೆರವೇರಿಸಿದರು.

ಪ್ರಥಮ ಬಾರಿ ಶಿಖರ್ಜಿ ಬೆಟ್ಟದ ಮೇಲಿನಿಂದ ಇಡೀ ಪರ್ವತ ಕ್ಕೆ  ಪುಷ್ಪವೃಷ್ಠಿಯನ್ನು  ವಿಮಲ ಭಕ್ತ ಪರಿವಾರ ದೊಂದಿಗೆ ಮೂಡುಬಿದಿರೆ ಶ್ರೀಗಳವರು  ನೆರವೇರಿಸಿದರು. ಬಳಿಕ ಮಧ್ಯಲೋಕ ದ ಬಳಿ ಇರುವ ವಿಮಲ ಸಾಗರ ಪುತ್ಥಳಿಯ ಬಳಿ ನಡೆದ ಭಕ್ತಿ ಸಂಧ್ಯಾ ಭಜನಾ ಕಾರ್ಯಕ್ರಮದಲ್ಲಿ ಆಚಾರ್ಯ ವಿಮಲಸಾಗರ್ ಮುನಿ ಪಾಲ್ಗೊಂಡು ಆಶೀರ್ವಚನ ನೀಡಿ ಅನೇಕ ಸಾಧಕರಿಗೆ ದೀಕ್ಷೆ ನೀಡಿ ಆತ್ಮಕಲ್ಯಾಣದ ಮಾರ್ಗವನ್ನು ವಿಸ್ತರಿಸಿ ಧರ್ಮ ಪ್ರಭಾವನೆ ಉಂಟು ಮಾಡಿದರು.

ವಿಮಲಸಾಗರ್ ಅನೇಕ ಸಾಹಿತ್ಯ ಧಾರ್ಮಿಕ ಗ್ರಂಥ ರಚನೆ ಮಾಡಿದರು. ಅನೇಕ ತೀರ್ಥ ಕ್ಷೇತ್ರಗಳ ಜೀರ್ಣೋದ್ದಾರಕ್ಕೆ ಪ್ರೇರಣೆ ನೀಡಿದವರು ಭಾರತದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿ 1980-81 ರಲ್ಲಿ ಕರ್ನಾಟಕ ದ ಜೈನ ಕಾಶಿ ಮೂಡುಬಿದಿರೆಗೆ ಆಚಾರ್ಯರು  ಆಗಮಿಸಿ ಧರ್ಮ ಪ್ರಭಾವನೆ ಉಂಟು ಮಾಡಿದ್ದರು ಎಂಬುದನ್ನು ನೆನಪಿಸಿದ  ಶ್ರೀಗಳು ಆಚಾರ್ಯ ವಿಮಲ ಸಾಗರ್ ಮಹಾರಾಜರು ಸರ್ವ ಜನ ಸರ್ವ ಪ್ರಾಣಿ ಪಕ್ಷಿಗಳ ಬಗ್ಗೆ ಅನುಕಂಪ ತೋರಿಸುತ್ತಿದ್ದರು. ಸಾಮಾಜಿಕ ಸಮಸ್ಯೆಗಳ ನಿವಾರಣೆ,  ಶಿಕ್ಷಣ ಪ್ರಸಾರಕ್ಕೆ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿ ಧರ್ಮಜಾಗೃತಿ ಉಂಟು ಮಾಡಿದ್ದರು ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವರ್ಷಿಯ  ತೀರ್ಥ ಕ್ಷೇತ್ರ ಸಮಿತಿ ವತಿಯಿಂದ ಅಧ್ಯಕ್ಷ ಶಿಖರ್ ಚಂದ್ ಪಹಾಡಿಯ  ಮೂಡುಬಿದಿರೆ ಶ್ರೀ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರಿಗೆ, ಕನಕ ಗಿರಿ, ಅರಹಂತ ಗಿರಿ, ನಾಂದಿಣಿ ಶ್ರೀ ಮಠದ ಶ್ರೀ ಶ್ರೀ ಗಳ ವರಿಗೆ ತಾಮೃ ಪತ್ರದ ತತ್ವರ್ಥ  ಸೂತ್ರ  ಆಗಮ ಗ್ರಂಥ, ರಜತ ಮಯೂರ ಪಿಂಚ ಶ್ರೀಫಲ ಕಾಣಿಕೆ ನೀಡಿ ವಿನಾಯಾ0ಜಲಿ  ಅರ್ಪಿಸಿದರು. ಪ್ರಸಿದ್ಧ ಉದ್ಯಮಿ ಸಂಘಟಕ ಆರ್.ಕೆ ಜೈನ ಮುಂಬಯಿ, ಚಿಂತಾಮಣಿ ಭಜ, ಅಜಿತ್ ಕಾಸ್ಲೀವಾಲ, ಸೇಲಂ  ಮಹಾವೀರ್ ಸೇಥಿü ಸಿಲ್ಚರ್ ಅಸ್ಸಾಂ  ಮೊದಲಾದವರು ಉಪಸ್ಥಿತರಿದ್ದರು.

ಮೂಡುಬಿದಿರೆಯ  ಶ್ರೀ ಗಳವರು ಡಿಸೆಂಬರ್  ತಿಂಗಳಲ್ಲಿ  ಉತ್ತರ ಪ್ರದೇಶದ ಬರೇಲಿಯ  ಅಹಿಛತ್ರ, ರಾಜ ಸ್ಥಾನದ  ಸಾಗವಾಡ ಮದ್ಯ ಪ್ರದೇಶದ ನೇಮವರ್, ಊನ್, ಇಂದೂರ್, ಉತ್ತರ ಕರ್ನಾಟಕ ಬಳ್ಳಾರಿ, ಬೆಳಗಾವಿಗಳ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ದಿನ  ಪಾಲ್ಗೊಂಡು ಧರ್ಮ ಪ್ರಭಾವ ಮಾಡಿದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರತಿಮೆಯ ಅನಾವರಣ-ಸಂಸ್ಮರಣೆ - ಸಂಜೀವನಿ ಟ್ರಸ್ಟ್ ಮುಂಬಯಿನ ಡಾ| ಸುರೇಶ್ ಎಸ್.ರಾವ್‍ಗೆ ಸನ್ಮಾನ
ಮುಂಬಯಿ, ಜ.01: ಕಟೀಲು ಗೋಪಾಲಕೃಷ್ಣ ಆಸ್ರಣ್ಣರು ಧಾರ್ಮಿಕತೆ, ಕಲಾ ಸೇವೆ, ಸಮಾಜ ಸೇವೆ ಹಾಗೂ ಭಕ್ತಿ ನಿಷ್ಠೆಯ ಸದ್ಗುಣಗಳನ್ನು ಹೊಂದಿದ್ದರಿಂದ ಎಲ್ಲರಿಗೂ ಪೂಜ್ಯನೀಯರಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.

ಕಳೆದ ಶನಿವಾರ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಪ್ರತಿಮೆ ಅನಾವರಣ, ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಟೀಲು ದಿವಂಗತ ಗೋಪಾಲಕೃಷ್ಣ ಆಸ್ರಣ್ಣರ ಪ್ರತಿಮೆ ಅನಾವರಣ ಗೊಳಿಸಿ, ಸಾಧಕರಾದ ಕಟೀಲು ಸಂಜೀವನಿ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ)ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಉದಯ ಕುಮಾರ್ ಸರಳತ್ತಾಯ ಅವರನ್ನು ಸನ್ಮಾನಿಸಿ ಅಭಿನಂದಿಸಿ ಡಾ| ಹೆಗ್ಗಡೆ ಮಾತನಾಡಿದರು. 

ಗೋಪಾಲಕೃಷ್ಣ ಆಸ್ರಣ್ಣ ಸಾತ್ವಿಕತೆ, ದೇವಿಯ ಮೇಲಿಟ್ಟ ಶ್ರದ್ಧೆಯಿಂದ ಅವರ ವ್ಯಕ್ತಿತ್ವ ಬೆಳೆದು ಇಂದು ಎಲ್ಲರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಪ್ರತಿಮೆ ಅನಾವರಣ ಕೆಲಸ ಶ್ಲಾಘನೀಯ ಎಂದು ಉಡುಪಿ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ತಿಳಿಸಿದರು. 

ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಮಾತನಾಡಿ ಪೂಜ್ಯ ಗೋಪಾಲಕೃಷ್ಣ ಆಸ್ರಣ್ಣರ ಧಾರ್ಮಿಕತೆ, ಸೇವಾ ಮನೋಭಾವನೆ ಹಾಗೂ ಧಾರ್ಮಿಕ ಪರಂಪರೆ ಇನ್ನೂ ಕೂಡಾ ಮುಂದುವರಿಯಬೇಕು ಎಂದು ಹೇಳಿದರು.

ಗೋವಾದ ಎನ್‍ಐಟಿ ನಿರ್ದೇಶಕ ಡಾ| ಗೋಪಾಲ ಮೊಗೆರಾಯ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ.ಚೌಟ, ಮುಂಬಯಿ ಉದ್ಯಮಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಪ್ರವೀಣ್ ಸೋಮೇಶ್ವರ, ಸಾಯಿ ರಾಧಾ ಸಮೂಹದ ಆಡಳಿತ ನಿರ್ದೇಶಕ ಮನೋಹರ್ ಎಸ್.ಶೆಟ್ಟಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ್ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ವಾಸುದೇವ ರಾವ್ ಪುನರೂರು, ಶ್ರೀಪತಿ ಭಟ್ ಮೂಡಬಿದಿರೆ, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಯಕ್ಷ ಲಹರಿ ಅಧ್ಯಕ್ಷ ಪಿ.ಸತೀಶ್ ರಾವ್, ಮೋಹನ್ ಮೆಂಡನ್, ದೇವಪ್ರಸಾದ್ ಪುನರೂರು, ದೊಡ್ಡಯ್ಯ ಮೂಲ್ಯ, ಈಶ್ವರ್ ಕಟೀಲು, ಲೋಕಯ್ಯ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಸಂಘಟಕ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪು. ಗುರುಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಡಾ| ರಮ್ಯ ರವಿತೇಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಚೆಂಬೂರು ಕರ್ನಾಟಕ ಶಾಲೆಯಲ್ಲಿ ನಾಗರಿಕ ತರಬೇತಿ ಶಿಬಿರ
ವಿದ್ಯಾಥಿರ್üಗಳಿಗೆ ರಸಪ್ರಶ್ನೆ-ನೃತ್ಯ-ಭಾಷಣ-ಕವನ ರಚನೆಗಳ ಕಮ್ಮಟ
ಮುಂಬಯಿ, ಡಿ.31: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾಥಿರ್üಗಳಿಗಾಗಿ ಮೂರು ದಿನಗಳ ನಾಗರಿಕ ಶಿಬಿರವನ್ನು ಕಳೆದ ಡಿ.26-28ರ ಮೂರು ದಿನಗಳಲ್ಲಿ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷ ಅಡ್ವೋಕೇಟ್ ಎಚ್.ಕೆ ಸುಧಾಕರ ಹಾಗೂ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಶಿಬಿರ ಉದ್ಘಾಟಿಸಿದರು.

ನಿವೃತ್ತ ಶಿಕ್ಷಕ ಸದಾಶಿವ ಶೆಟ್ಟಿ ಅವರು ಶಿಬಿರದ ಮುಖ್ಯ ಉದ್ದೇಶ ಹಾಗೂ ಶಿಬಿರದಿಂದ ದೊರೆಯುವ ಲಾಭವನ್ನು ವಿದ್ಯಾಥಿರ್üಗಳೆಲ್ಲರೂ ಪಡೆದು ಕೊಳ್ಳಬೇಕೆಂಬ ಅಭಿಪ್ರಾಯ ನೀಡಿದರು.


ಶಿಬಿರದ ಮೊದಲನೇ ದಿನ ಶಿಕ್ಷಕರು ವಿದ್ಯಾಥಿರ್üಗಳಿಗೆ ರಸಪ್ರಶ್ನೆ, ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ ಮುಂತಾದ ಚಟುವಟಿಕೆಗಳನ್ನು ಮಾಡಿದರು. ನಿವೃತ್ತ ಶಿಕ್ಷಕಿ ಪ್ರತಿಭಾ ವೈದ್ಯ ಅವರು ವಿದ್ಯಾಥಿರ್üಗಳಿಗೆ ಒಂದೊಂದು ವಿಷಯಗಳನ್ನು ನೀಡಿ, ಆ ವಿಷಯಕ್ಕೆ ಸಂಬಂದಪಟ್ಟ ನೃತ್ಯ, ಭಾಷಣ, ಕವನ ರಚನೆ ಮುಂತಾದ ಚಟುವಟಿಕೆಗಳನ್ನು ಮಾಡಿಸಿ ವಿದ್ಯಾಥಿರ್üಗಳನ್ನು ರಂಜಿಸಿದರು.
ಶಿಬಿರದಲ್ಲಿ ವಿಶೇಷವೆಂದರೆ ಮಹಾರಾಷ್ಟ್ರ ಸರಕಾರದ ಮಾರುಕಟ್ಟೆ ಹಾಗೂ ಜವಳಿ ಇಲಾಖೆಯ ಕಾರ್ಯದರ್ಶಿ ಕೆ ಎಚ್ ಗೋವಿಂದರಾಜ್  (ಐಎಎಸ್) ಶಿಬಿರಕ್ಕೆ ಆಗಮಿಸಿ ಕನ್ನಡದ ಕವಿಗಳ ಕವಿತೆಯ ಸಾಲುಗಳನ್ನು ವಿವರಿಸಿ ಕನ್ನಡಾಭಿಮಾನವನ್ನು ತಾವೆಲ್ಲರೂ ಬೆಳೆಸಬೇಕೆಂದು ವಿದ್ಯಾಥಿರ್üಗಳಿಗೆ ಕರೆ ನೀಡಿದರು.

ಶಿಬಿರದ ಎರಡನೇ ದಿನ ಸಂಘದ ಮಾಜಿ ಪದಾಧಿಕಾರಿ ವಿಶ್ವನಾಥ ಶೇಣವ ಅವರು ವಿದ್ಯಾಥಿರ್üಗಳಿಗೆ ಯೋಗದ ಮಹತ್ವ, ಲಾಭ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಯೋಗ್ಯಭ್ಯಾಸ ಮಾಡಿಸಿ, ಒತ್ತಡದ ಬದುಕಿಗೆ ಯೋಗ ಒಳ್ಳೆಯ ಔಷಧಿ ಎಂದು ತಿಳಿಸಿ ಯೋಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿ ಬಹುಮಾನಗಳನ್ನಿತ್ತು ಪೆÇ್ರೀತ್ಸಾಹಿಸಿದರು.

ನಂತರ ಗ್ರಹ ಹಾಗೂ ಆಕಾಶಕಾಯಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ವಿದ್ಯಾಥಿರ್üಗಳಿಗೆ ಮಾಹಿತಿ ನೀಡಿ ಟೆಲಿಸ್ಕೋಪ್‍ನಿಂದ ಆಕಾಶ ವೀಕ್ಷಣೆ ಮಾಡಿ ನಕ್ಷತ್ರಗಳ ಮಾಹಿತಿಯನ್ನು ನೀಡಲಾಯಿತು. ಶಿಬಿರದಲ್ಲಿ ನೃತ್ಯ, ನಾಟಕ ಹಾಗೂ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾಥಿರ್üಗಳ ಪ್ರತಿಭೆಗಳನ್ನು ತೋರಿಸುವ ವೇದಿಕೆಯನ್ನು ನಿರ್ಮಾಣ ಮಾಡಲಾಯಿತು.

ಶಾಲೆಯ ನಿವೃತ ಶಿಕ್ಷಕರಾದ ರವೀಂದ್ರ, ಅಂಜಲಿ ಶಿಧೋರೆ ಹಾಗೂ ವಿಪಿಎಂ ಶಾಲೆಯ ನಿವೃತ ಶಿಕ್ಷಕಿ ದಾಕ್ಷಾಯಿಣಿ ಅವರು ಕಥೆ, ಕವನ ,ರಸಪ್ರಶ್ನೆ ಮುಂತಾದ ಚಟುವಟಿಕೆಗಳನ್ನು ಮಾಡಿ ವಿದ್ಯಾಥಿರ್üಗಳನ್ನು ಪೆÇ್ರೀತ್ಸಾಹಿಸಿದರು. ಶಿಕ್ಷಕಿಯರಾದ ನಸೀಮ ಶೇಕ್ ಹಾಗೂ ಚರಣ್ ಜೀತ್ ಕೌರ್ ಶಿಬಿರಾಗ್ನಿಯನ್ನು ಪ್ರಜ್ವಲಿಸಿ ಶಿಬಿರಗೀತೆಯನ್ನಾಡಿ ಶಿಬಿರಾಗ್ನಿಯ ಮಹತ್ವವನ್ನು ವಿದ್ಯಾಥಿರ್üಗಳಿಗೆ ತಿಳಿಸಿದರು.

ಶಾಲೆಯ ಹಳೆ ವಿದ್ಯಾಥಿರ್üಗಳಾದ ಅನಿಲ್ ಶೆಟ್ಟಿ ಹಾಗೂ ಪ್ರಮೋದ ಶೆಟ್ಟಿ ಅವರು ಶಿಬಿರಕ್ಕೆ ಆಗಮಿಸಿ ವಿದ್ಯಾಥಿರ್üಗಳಿಗೆ ಕೆಲವು ಚಟುವಟಿಕೆಗಳನ್ನು ಮಾಡಿಸಿ, ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತು ಇಂದು ಉನ್ನತ ಹುದ್ದೆಯಲ್ಲಿದ್ದೇವೆ ಎಂಬ ಪೆÇ್ರೀತ್ಸಾಹದಾಯಕ ಮಾತುಗಳನ್ನಾಡಿದರು. ಶಿಬಿರದ ಕೊನೆಯ ದಿನ ಯೋಗಾಭ್ಯಾಸ ಹಾಗೂ ಸರ್ವಧರ್ಮ ಪ್ರಾರ್ಥನೆಯ ನಂತರ ಕವಿ ಗೋಪಾಲ ತ್ರಾಸಿ ಅವರು ಕಥೆ ,ಕವನ ಹಾಗೂ ಹಿತನುಡಿಗಳನ್ನು ಹೇಳಿ ವಿದ್ಯಾಥಿರ್üಗಳ ಮನ ಗೆದ್ದರು. ನಿವೃತ ಶಿಕ್ಷಕ ಸದಾಶಿವ ಶೆಟ್ಟಿ ಅವರು ಮೂರು ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಯಶಸ್ಸಿಗಾಗಿ ಶ್ರಮಿಸಿದರು.

ಸಂಘದ ಉಪಾಧ್ಯಕ್ಷ ಪ್ರಭಾಕರ್ ಬೋಳಾರ್ ವಿದ್ಯಾಥಿರ್üಗಳಿಗೆ ಕವನ ರಚನೆ ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನಿತ್ತು ಪೆÇ್ರೀತ್ಸಾಹಿಸಿದರು ಹಾಗೂ ತಾವು ರಚಿಸಿದ ನೆನಪು ಕವನ ವಾಚಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಘದ ಹೆಚ್ಚಿನ ಪದಾಧಿಕಾರಿಗಳು ಪಾಲ್ಗೊಂಡು ವಿದ್ಯಾಥಿರ್üಗಳಿಗೆ ಹಿತವಚನ ನೀಡಿದರು.
ಕನ್ನಡ ಮಾಧ್ಯಮ ಹಾಗೂ ಕನ್ನಡಭಾಷೆಯನ್ನು ಉಳಿಸಲು ಚೆಂಬೂರು ಕರ್ನಾಟಕ ಸಂಘವು ಸತತವಾಗಿ ಪ್ರಯತ್ನ ಪಡುತ್ತಿದ್ದು ಸುಮಾರು 10 ವರ್ಷಗಳಿಂದ ಕನ್ನಡ ಮಾಧ್ಯಮದ ವಿದ್ಯಾಥಿರ್üಗಳಿಗಾಗಿ ಈ ನಾಗರಿಕ ಶಿಬಿರ ಆಯೋಜಿಸುತ್ತ ಬಂದಿದೆ. ಸಂಘದ ಅಧ್ಯಕ್ಷ ಅಡ್ವೋಕೇಟ್ ಹೆಚ್.ಕೆ ಸುಧಾಕರ, ಉಪಾಧ್ಯಕ್ಷ ಪ್ರಭಾಕರ ಬೋಳಾರ್, ಗೌ| ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ ಶೆಟ್ಟಿಗಾರ್, ಗೌ| ಕೋಶಾಧಿಕಾರಿ ಟಿ.ಆರ್‍ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ್ ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಕೋಟ್ಯಾನ್ ಹಾಗೂ ಸಂಘದ  ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೇಶ್ ಗುಜರನ್, ರಾಮ ಪೂಜಾರಿ, ದಯಾಸಾಗರ ಚೌಟ, ವಿಶ್ವನಾಥ ಶೇಣವ, ಅಶೋಕ್ ಸಾಲಿಯನ್, ಗುಣಾಕರ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯಿನಿ ರಾಜಿ ರಮೇಶ್, ಉಪ ಮುಖ್ಯೋಪಾದ್ಯಾಯಿನಿ ಗೀತಾಂಜಲಿ ಎಲ್.ಸಾಲಿಯನ್, ಶ್ಯಾಮಲಾ ಉಚ್ಚ್ಚಿಲ್, ಜಯಲಕ್ಷ್ಮಿ ಪೂಜಾರಿ, ಶೈಲೇಶ್ ಹಾಗೂ ಶಿಕ್ಷಕೇತರ ಸಿಬಂದಿಗಳಾದ ಭಾರತಿ ಶೆಟ್ಟಿ, ಮೋಹನ್ ಅಂಚನ್, ಸುರೇಂದ್ರ ಆಚಾರ್ಯ, ಎಸ್.ಪ್ರೀತಂ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದ್ದರು.

ಶಿಬಿರದಲ್ಲಿ ಸರ್ವಧರ್ಮಗಳ ಪ್ರಾರ್ಥನೆಯನ್ನು ಮಾಡುವುದರ ಮೂಲಕ ದೇವನೊಬ್ಬ ನಾಮ ಹಲವುಎಂಬ ಸತ್ಯವನ್ನು ವಿದ್ಯಾಥಿರ್üಗಳು ತಿಳಿದು ಕೊಂಡರು. ಮುಂಬಯಿಯ ನ್ಯೂಸ್‍ನ ವಾಣಿ ಪ್ರಸಾದ್ ಉಪಸ್ಥಿತರಿದ್ದು, ಶಿಕ್ಷಕಿ ವಿಜೇತಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ಯಾಮಲಾ ಉಚ್ಚಿಲ್ ಬಹುಮಾನ ವಿಜೇತರ ಯಾದಿ ವಾಚಿಸಿದರು ಶಿಕ್ಷಕಿ ಅಕ್ಷತ ರಾವ್ ಅವರು ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi