Brief Mumbai, Mangalore News with pictures


Rons Bantwal
Kemmannu News Network, 26-01-2020 09:40:50


Write Comment     |     E-Mail To a Friend     |     Facebook     |     Twitter     |     Print


ಧರ್ಮಸ್ಥಳದಲ್ಲಿ ಧರ್ಮಶ್ರೀ ನೂತನ ವಿಸ್ತøತ ಕಟ್ಟಡ ಉದ್ಘಾಟನೆ
ಧರ್ಮಸ್ಥಳದ ಸೇವಾ ಕಾರ್ಯಗಳಿಂದ ಸರ್ಕಾರಕ್ಕೆ ಪ್ರೇರಣೆ-ಡಿ.ವಿ ಸದಾನಂದ ಗೌಡ

ಮುಂಬಯಿ (ಉಜಿರೆ), ಜ.24: ಸ್ವಾತಂತ್ರ್ಯ ಆಂದೋಲನದ ರೀತಿಯಲ್ಲಿ ಸ್ವಚ್ಛತಾ ಅಭಿಯಾನ ಆಂದೋಲನವಾಗಿ ಸ್ವಚ್ಛ ಭಾರತದ ಕನಸು ನನಸಾಗಬೇಕು. ಸೈನಿಕರು ದೇಶದ ರಕ್ಷಣೆ ಮಾಡಿದಂತೆ ನಾವು ಸಮಾಜದ ರಕ್ಷಣೆ ಮಾಡೋಣ ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಕಚೇರಿ

ಧರ್ಮಶ್ರೀ ನೂತನ ವಿಸ್ತøತ ಕಟ್ಟಡವನ್ನು ಶುಕ್ರವಾರ ಅವರು ಉದ್ಘಾಟಿಸಿ ಮಾತನಾಡಿ ಕೇವಲ ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿ ಆದರೆ ಅದು ಪ್ರಗತಿಯ ದ್ಯೋತಕವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸ್ವ-ಸಾಮಥ್ರ್ಯದಿಂದ, ಸರ್ಕಾರದ ಹಂಗಿಲ್ಲದೆ ಸಮಾಜದ ಸತ್ವಯುತ ಶಕ್ತಿಯಾಗಿ ಬೆಳೆದರೆ ಅದು ನಿಜವಾದ ಪ್ರಗತಿಯಾಗಿದೆ. ಸಮಾಜದ ಅಭಿವೃದ್ಧಿಯ ಮೂಲಮಂತ್ರ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅದ್ಭುತ ಯೋಜನೆಯಾಗಿದ್ದು ಸರ್ಕಾರ ಕೂಡಾ ಹೆಗ್ಗಡೆಯವರಿಂದ ಮಾರ್ಗದರ್ಶನ, ಪ್ರೇರಣೆ ಪಡೆಯುತ್ತದೆ. ಧರ್ಮಸ್ಥಳ ದ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದೊಂದಿಗೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಯೊಂದಿಗೆ ಸಾಮಾಜಿಕ ಸಾಮರಸ್ಯದ ಜೀವನಕ್ಕೆ ಪ್ರೇರಕ ಶಕ್ತಿಯಾಗಿದೆ. ಮಾನವೀಯ ಸಂಬಂಧವೂ ಬೆಳೆಯುತ್ತದೆ ಎಂದರು.

ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳನ್ನು ವಿತರಿಸಿದ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರದ ಜನಮಂಗಳ ಕಾರ್ಯಗಳಿಗೆ ಹೆಗ್ಗಡೆಯವರೇ ಪ್ರೇರಕ ಶಕ್ತಿಯಾಗಿದ್ದಾರೆ. ಧರ್ಮಸ್ಥಳದ ಮಾದರಿಯಲ್ಲೆ ಎಪ್ರಿಲ್ 26 ರಂದು ರಾಜ್ಯದ 110 ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲಾಗುವುದು. ಯಾವುದಾದರೂ ಒಂದು ದೇವಸ್ಥಾನದ ಸಾಮೂಹಿಕ ವಿವಾಹಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬಂದು ಆಶೀರ್ವದಿಸಬೇಕು ಎಂದು ಸಚಿವರು ಅವರನ್ನು ಆಮಂತ್ರಿಸಿದರು.

ಎಲ್ಲಾ ದೇವಸ್ಥಾನಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ಸುಂದರವಾಗಿದ್ದು ಭಕ್ತರನ್ನು ಆಕರ್ಷಿಸುವ ಕೇಂದ್ರಗಳಾಗಬೇಕು ಎಂದು ಅವರು ಸಲಹೆ ನೀಡಿದರು. ಜಲಾಭಿಷೇಕ ಯೋಜನೆ: ನೂತನ ಜಲಾಭಿಷೇಕ ಯೋಜನೆಯಡಿ ರಾಜ್ಯದಲ್ಲಿ ದೇವಸ್ಥಾನಗಳ ಬಳಿ ಇರುವ ಕೆರೆಗಳನ್ನು (ಪುಷ್ಕರಣಿ) ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶುಚೀಕರಣಗೊಳಿಸಲಾಗುವದು ಎಂದು ಸಚಿವರು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯದೆಲ್ಲೆಡೆ 1500 ಮಂದಿ ಸೇವಾ ಪ್ರತಿನಿಧಿಗಳು ಸೇವೆ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಜನರ ವ್ಯಕ್ತಿತ್ವದಲ್ಲಿ, ಜೀವನ ಶೈಲಿಯಲ್ಲಿ ಸುಧಾರಣೆಯಾಗಿ ಸಾಮಾಜಿಕ ಪರಿವರ್ತನೆಯಾಗಿದೆ. ದುಶ್ಚಟಗಳು ದೂರವಾಗಿವೆ. ಶುಚಿತ್ವದ ಕಲ್ಪನೆ ಸಾರ್ವತ್ರಿಕವಾಗಿ ಮೂಡಿ ಬಂದಿದೆ. ಫಲಾನುಭವಿಗಳೆಲ್ಲ ಪ್ರಗತಿಯ ಹರಿಕಾರರಾಗಿ ಯೋಜನೆಯ ಯಶಸ್ಸಿನ ಪಾಲುದಾರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಶಾಸಕ ಹರೀಶ್ ಪೂಂಜ ಸಲಕರಣೆಗಳನ್ನು ವಿತರಿಸಿ
ಮಾತನಾಡಿ ಭಜನಾ ಮಂದಿರಗಳಲ್ಲಿ ಮೂಲ ದಾಖಲೆಗಳು ಇಲ್ಲದ ಕಾರಣ ಅಡಚಣೆಯಾಗುತ್ತಿದೆ. ಈ ದಿಸೆಯಲ್ಲಿ ಸಚಿವರು ಸೂಕ್ತ ಸಹಕಾರ ನೀಡಬೇಕು ಎಂದು ಕೋರಿದರು.

ಆಶಯ ಭಾಷಣ ಮಾಡಿದ ಹೇಮಾವತಿ ವಿ.ಹೆಗ್ಗಡೆ ಅವರು, ಸಾರ್ವಜನಿಕರು ಸಂವೇದನಾಶೀಲರಾಗಿ, ಆಯಾ ಊರಿನ ದೇವಸ್ಥಾನಗಳು, ನದಿಗಳು ಹಾಗೂ ಕೆರೆಗಳನ್ನು ಸ್ವಚ್ಛವಾಗಿರಿಸುವ ಬಗ್ಯೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಶುದ್ಧ ಗಾಳಿ, ನೀರು ಮತ್ತು ಸ್ವಚ್ಛ ಪರಿಸರ ನಮ್ಮ ಆರೋಗ್ಯ ರಕ್ಷಣೆಗೆ ಅತಿ ಅಗತ್ಯ ಎಂದು ಹೇಳಿದರು.
ಧರ್ಮಸ್ಥಳ ವಲಯದ 9 ಒಕ್ಕೂಟಗಳ ಪದಗ್ರಹಣ ಸಮಾರಂಭ ನಡೆಯಿತು. ಕಟ್ಟಡ ನಿರ್ಮಾಣದ ರೂವಾರಿ ಡಿ. ಹರ್ಷೇಂದ್ರ ಕುಮಾರ್, ವಾಸ್ತು ಶಿಲ್ಪಿ ಬ್ರಹ್ಮೆ ಮತ್ತು ಗೋಪಾಲ ಮೆನನ್ ಅವರನ್ನು ಗೌರವಿಸಲಾಯಿತು. ಡಾ| ಎಲ್.ಹೆಚ್ ಮಂಜುನಾಥ್ ಸ್ವಾಗತಿಸಿದರು. ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮತ್ತು ಮಮತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು.

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ 
ಮುಂಬಯಿ, ಜ.23: ಗಾಣಿಗ ಸಮಾಜ ಮುಂಬಯಿ (ರಿ.) ಇದರ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಭಾನುವಾರ ಕುರ್ಲಾದಲ್ಲಿನ ಗುಲ್‍ರಾಜ್ ಟವರ್‍ನಲ್ಲಿನ ಗಾಣಿಗ ಸಮಾಜ ಮುಂಬಯಿ ಕಛೇರಿಯಲ್ಲಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿದ್ದುÀ್ಸಭೆಯಲ್ಲಿ 2020-2022ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲ್ಪಟ್ಟಿದ್ದು, ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ  (ಗೌರವಾಧ್ಯಕ್ಷ), ವಿಜಯೇಂದ್ರ ವಿ.ಗಾಣಿಗ ಮತ್ತು ಭಾಸ್ಕರ ಎಂ.ಗಾಣಿಗ (ಉಪಾಧ್ಯಕ್ಷರು), ಚಂದ್ರಶೇಖರ್ ಆರ್.ಗಾಣಿಗ (ಗೌರವ ಪ್ರಧಾನ ಕಾರ್ಯದರ್ಶಿ), ಜಯಂತ ಪದ್ಮನಾಭ ಗಾಣಿಗ (ಗೌ| ಪ್ರ| ಕೋಶಾಧಿಕಾರಿ), ಜಗದೀಶ್ ಗಾಣಿಗ (ಜೊತೆ ಕಾರ್ಯದರ್ಶಿ), ಬಾಲಕೃಷ್ಣ ಗಾಣಿಗ ತೋನ್ಸೆ  (ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ), ತಾರಾ ಎನ್.ಭಟ್ಕಳ್ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ), ಗಣೀಶ್ ಆರ್.ಕುತ್ಪಾಡಿ (ಯುವ ವಿಭಾಗ ಕಾರ್ಯಾಧ್ಯಕ್ಷ), ಪದ್ಮನಾಭ ಎನ್.ಗಾಣಿಗ (ಕಚೇರಿ ಉಸ್ತುವರಿ), ಜಗನ್ನಾಥ ಎಂ.ಗಾಣಿಗ, ಯು.ಬಾಲಚಂದ್ರ ರಾವ್ ಕಟಪಾಡಿ, ಸದಾನಂದ ಕಲ್ಯಾಣ್ಫುರ್, ರಮೇಶ್ ಎನ್.ಗಾಣಿಗ, ಜಿ.ಕಾಳಿಂಗ ರಾವ್, ಗಂಗಾಧರ ಎನ್.ಗಾಣಿಗ, ಸೀತರಾಮ ಮಾರಾಳಿ, ಮೋಹನ್ ಎನ್.ಆರ್ ರಾವ್, ರಾಜೇಶ್ ಕುತ್ಪಾಡಿ, ಟಿ.ಎಸ್.ಎನ್ ದಿನೇಶ್ ರಾವ್, ದಿನೇಶ್ ಗಾಣಿಗ ಭಯಂದರ್, ವಿನಾಯಕ ಭಟ್ಕಳ, ನರೇಂದ್ರ ರಾವ್, ವೀಣಾ ದಿನೇಶ್ ಗಾಣಿಗ, ಆರತಿ ಸತೀಶ್ ಗಾಣಿಗ, ಆಶಾ ಹರೀಶ್ ತೋನ್ಸೆ, ಮಮತಾ ದೇವೇಂದ್ರ ರಾವ್ (ಕಾರ್ಯಕಾರಿ ಸಮಿತಿಯ ಸದಸ್ಯರು) ಆಯ್ಕೆಗೊಂಡರು.

ನಿರ್ಗಮನ ರಾಮಚಂದ್ರ ಗಾಣಿಗ ಅವರು ಪುಷ್ಫಗುಪ್ಚವನ್ನಿತ್ತು ನೂತನ ಅಧ್ಯಕ್ಷ ಬಿ.ವಿ ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು.

ಬೈಕಾಡಿ ವಾಸುದೇವ ರಾವ್:
ಉಡುಪಿ ಜಿಲ್ಲೆಯ ಬ್ರಹ್ಮಾವರ ಇಲ್ಲಿನ ಬೈಕಾಡಿ ಮೂಲತಃ ವಾಸುದೇವ ರಾವ್ ಮುಂಬಯಿನಲ್ಲಿ ಬಿ.ವಿ ರಾವ್ ಎಂದೇ ನಾಮಾಂಕಿತರು. ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಆಸ್ತಿತ್ವದಿಂದಲೇ ಸಕ್ರೀಯ ಸದಸ್ಯರಾಗಿದ್ದು ಸಂಸ್ಥೆಯ ಹನ್ನೆರಡು ವರ್ಷಗಳಿಂದ ಗೌರವ ಪ್ರಧಾನ ಕಾರ್ಯದರ್ಶಿ ಆಗಿ, ಐದಾರು ವರ್ಷ ಉಪಾಧ್ಯಕ್ಷರಾಗಿ ಶ್ರಮಿಸಿರುವರು. ಸ್ಟಾರ್ ಎಲಿವೇಟರ್ಸ್ ಸಂಸ್ಥೆಯ ಪ್ರವರ್ತಕರಾಗಿ ಮುಂಬಯಿನ ಯಶಸ್ವಿ ಉದ್ಯಮಶೀಲರಾಗಿ ಪರಿಚಯಿತರಾಗಿದ್ದಾರೆ.

ಮಹಾರಾಷ್ಟ್ರದ ಆಹಾರ-ನಾಗರಿಕ ಸರಬರಾಜು ಮಂತ್ರಿ ಛಗ್‍ನ್ ಭುಜಬಲ್‍ಗೆ  -ಶುಭೇಚ್ಛ ಕೋರಿದ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ

ಮುಂಬಯಿ, ಜ.22: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಮರ್ಥ ನಾಯಕರೂ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ ಅವರು ಇಂದಿಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಚಿವ ಸಂಪುಟದ ಹಾಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಛಗ್‍ನ್ ಭುಜಬಲ್ ಅವರನ್ನು ಸಚಿವರ ಕಛೇರಿಯಲ್ಲಿ ಭೇಟಿ ನೀಡಿ ಪುಷ್ಫಗುಪ್ಚವನ್ನಿತ್ತು ಅಭಿನಂದಿಸಿದರು. 

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ) ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪು, ಲೀಲಾಧರ್ ಸುವರ್ಣ ಉಪಸ್ಥಿತರಿದ್ದರು.

ಡೊಂಬಿವಲಿಯಲ್ಲಿ ಜರುಗಿದ ಕನ್ನಡ ಗಾದೆಗಳ ವೈಭವ ವಿಚಾರ ಸಂಕಿರಣ -ಸೂಚ್ಯವಾಗಿ ಹೇಳಲು ಗಾದೆಗಳÀು ಉಪಯೋಗಿ : ರಮಣ್ ಶೆಟ್ಟಿ ರೆಂಜಾಳ

ಮುಂಬಯಿ ಜ.22:  ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಫ್ರೆಂಡ್ ಸ್ವಾವಲಂಬನ ಕೇಂದ್ರ ಡೊಂಬಿವಲಿ ಇವರ ಸಂಯುಕ್ತ ಆಶ್ರಯದಲ್ಲಿ ಕಳೆದ  ಶನಿವಾರ ಸಂಜೆ ಡೊಂಬಿವಲಿಯ ಗಣೇಶ ಮಂದಿರ ಸಭಾಗೃಹದಲ್ಲಿ `ಕನ್ನಡ ಗಾದೆಗಳ ವೈಭವ’  ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಹೆಸರಾಂತ ಲೇಖಕ ರಮಣ್ ಶೆಟ್ಟಿ ರೆಂಜಾಳ ಉಪನ್ಯಾಸ ನೀಡಿ ಗಾದೆಗಳು ನೆಲದ ಸಂಸ್ಕೃತಿಯ ಪ್ರತೀಕ ಮತ್ತು ಸೂಚ್ಯವಾಗಿ ಹೇಳಲು ಗಾದೆಗಳÀು ಉಪಯೋಗಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೇಳಬೇಕಾದದ್ದನ್ನು ಸೂಚ್ಯವಾಗಿ ಹೇಳಲು ಗಾದೆಗಳನ್ನು ಉಪಯೋಗಿಸುತ್ತೇವೆ. ಪ್ರತಿಗಾದೆಯು ಒಂದು ರೀತಿಯಲ್ಲಿ ಬಿಡಿ ಕವಿತೆಗಳಿದ್ದಂತೆ. ಪ್ರಾಸ, ಛಂದೋಬದ್ಧ, ಅಲಂಕಾರಿಕ,  ಅಭಿವ್ಯಕ್ತಿ, ವ್ಯಂಗ್ಯ, ವೈಚಾರಿಕತೆ ಇತ್ಯಾದಿ ಕಾವ್ಯದ ಸೃಜನಾತ್ಮಕ ಶಕ್ತಿಯನ್ನು ಗಾದೆ ಒಳಗೊಂಡಿರುತ್ತದೆ. ಆದಿಪ್ರಾಸ ಮತ್ತು ಅಂತ್ಯ ಪ್ರಾಸ ಎರಡು ಅಪರೂಪವಾಗಿದ್ದು ಆಲಿಸುವಾತನ ನೆನಪಿನಲ್ಲುಳಿಯಲು ಸಹಾಯಕವಾಗಿದೆ. ಈ ಲಯಬದ್ಧತೆಯಿಂದಾಗಿ ಯೇ ಗಾದೆಗಳು ಜನಾಂಗದಿಂದ ಜನಾಂಗಕ್ಕೆ ಸಲೀಸಾಗಿ ಹಸ್ತಾಂತರಗೊಂಡು ಇಂದಿಗೂ ತಮ್ಮಜೀವಂತಿಕೆ ಉಳಿಸಿಕೊಂಡಿವೆ ಎಂದರು.

`ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಅದೆಷ್ಟು ಸ್ವಾರಸ್ಯಕರವಾಗಿದೆಎಂದರೆ ಮನಸ್ತಾಪ ಮಾಡಿಕೊಂಡ ಪತಿ-ಪತ್ನಿ ಈ ಗಾದೆ ಕೇಳಿ ರಾಜಿಯಾಗಲೂ ಬಹುದು. ಜನಗಳ ಆರೋಗ್ಯವೇ ತಿರ್ಕೊಂಡು ತಿಂದ್ರೂ ಕರ್ಕೊಂಡು ಉಣ್ಣು, `ಹೂ ಹಂಚಿ ಮುಡಿ ಹಣ್ಣು ಹಂಚಿತಿನ್ನು’ ಎಂಬ ಗಾದೆಗಳು ಒಳ್ಳೆಯ ವಸ್ತುಗಳು ಎಲ್ಲರಿಗೂ ದೊರಕಬೇಕು. ಕಷ್ಟ ಬಂದರೂ ಒಬ್ಬರಿಗೊಬ್ಬರು ನೆರವಾಗಬೇಕು ಎಂಬ ಅಂಶವನ್ನು ಅರುಹುತ್ತವೆ.

`ಮುದ್ದಾಟಕ್ಕೆ ಹೋಗಿ ಗುದ್ದಾಟವಾಯಿತು’ ಮನೋರಂಜಕ ಗಾದೆಗಳಾದರೆ, `ಉದ್ಯೋಗಂ  ಪುರುಷ ಲಕ್ಷಣಂ’ ದುಡಿಮೆಯೇ ದೇವರು ಎಂಬುದಾಗಿ ಸಾರ್ಥಕ ಜೀವನದ ವಿವೇಕದ ದಾರಿದೀಪದಂತಹ ನುಡಿ ಮುತ್ತುಗಳು.`ಸೂಳೆಯ ಮನೆ ಉರಿಯುವಾಗ ಸನ್ಯಾಸಿಯ ಕುಂಡೆ ಎಬ್ಬಿತು’ ತಿಳಿಹಾಸ್ಯ ಭರಿತ ಲೈಂಗಿಕ ಕಟು ವ್ಯಂಗ್ಯದ ಜೊತೆಗೆ ವಿಡಂಬನೆ ನೀತಿ ಬೋಧಕತೆಯಿಂದ ಕೂಡಿದೆ. ಹೀಗೆ ವೈವಿಧ್ಯತೆಯಿಂದ ಕೂಡಿದ ಗಾದೆಗಳು ಆ ಕಾಲದ ಸ್ಥಿತಿಗತಿಗಳ ಪರಿಚಯವನ್ನು ಹೇಳುತ್ತವೆ.

`ಅತ್ತೆ ಮನೆಯಲ್ಲಿ ಹೇಗಿದೆ ಮಗಳೆ’ ಎಂದು ವಿವಾಹದ ನಂತರ ಪತಿ ಮನೆಯಿಂದತವರಿಗೆ ಆಗಮಿಸಿದ ಪ್ರೀತಿಯ ಮಗಳನ್ನು ಕೇಳಿದಾಗ, `ಮುಳ್ಳಾಗೆ ಹಾದಿನಡೆದಂಗೆ ಮೊಳಕೈಗೆ ಚಿಲಕ ಹೊಡೆದಂಗೆ’ ಅತ್ತೆ ಮನೆಯ ಪರಿಸ್ಥಿತಿಯನ್ನು ಮಗಳು ಎಷ್ಟು ಸೂಚ್ಯವಾಗಿ ಹೇಳುತ್ತಾಳೆ.ಇಲ್ಲಿ ಬಳಸಿದ ಉಪಮೇಯಗಳಿಂದ ಧ್ವನಿಪೂರ್ಣವಾಗಿ, ಸಮರ್ಥವಾಗಿ ಚಿತ್ರಿಸಿದ್ದಾಳೆ.

`ಗಂಡಿಗೆ ಚಟವಿರಬಾರದು, ಹೆಣ್ಣಿಗೆ ಹಟವಿರಬಾರದು’ ಹೀಗೆ ಸಾಂಸಾರಿಕ ವ್ಯವಸಾಯಕ್ಕೆ ಸಂಬಂಧಿಸಿದ ಗಾದೆಗಳು ಪರಿಶ್ರಮದ ಮಹತ್ವವನ್ನು ಸಾರಿದರೆ ಧಾರ್ಮಿಕತೆಗೆ ಮೂಢನಂಬಿಕೆಗೆ, ದಾಂಪತ್ಯಕ್ಕೆ, ಕೌಟುಂಬಿಕ, ವ್ಯಾವಹಾರಿಕ, ಬಡತನ, ಆಹಾರ, ಹಣ್ಣುತರಕಾರಿ, ಊರು - ಕೇರಿ, ಹಣ, ಪಶುಪಕ್ಷಿ, ಮಾತು, ಹುಟ್ಟುಸಾವು, ಗೆಳೆತನ, ಊಟ, ಮದುವೆ, ಹೀಗೆ ಯಾವುದಕ್ಕೆಗಾದೆಇಲ್ಲ?! ಎಲ್ಲದಕ್ಕೂ ಗಾದೆಗಳಿವೆ. ಹಿಂದಿನವರ ಅನುಭವದ ಭಂಡಾರವೇ ಈ ಗಾದೆಗಳು. ಅದಕ್ಕೆ ಹೇಳುತ್ತಾರೆ-`ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’. ಗಾದೆಗಳು ಅನುಭವದಿಂದ ಬಂದವುಗಳು. `ಮಾತಿಗೊಂದು ಮಾತು ಚಕ್ಲಿಗೊಂದು ತೂತು’ ಎನ್ನುವಂತೆ ನಮ್ಮ ಜಾನಪದರ ಬಹುದೊಡ್ಡ ಆಸ್ತಿಗಳಲ್ಲಿ ಗಾದೆಗಳೂ ಒಂದು ಎಂದು ತಮ್ಮಉಪನ್ಯಾಸದಲ್ಲಿ ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶೆಣೈ ಶಾಮ್ ಭಟ್ `ಆದದ್ದೆಲ್ಲ ಒಳ್ಳೆಯದಕ್ಕೆ’ ಎಂಬ ಗಾದೆ, ರಾಜಮಂತ್ರಿಯಕಥೆ, ಸುಳ್ಳು ಸತ್ಯದ ಕಥೆಗಳ ಮೂಲಕ ಗಾದೆಗಳ ವಿಶಾಲತೆ ಹಾಗೂ ದೈನಂದಿನ ಜೀವನದಲ್ಲಿ ಅವುಗಳ ಪಾತ್ರದಕುರಿತು ವಿವರಿಸಿದರು. ಫ್ರೆಂಡ್ಸ್ ಸ್ವಾವಲಂಬನ ಕೇಂದ್ರದ ಕಾರ್ಯಕರ್ತರಿಂದ ಗಾದೆಗಳ ಕ್ವಿಜ್ ಏರ್ಪಡಿಸಲಾಗಿತ್ತು.

ಶೆಣೈ ಶ್ಯಾಮ ಭಟ್ ದಂಪತಿಗಳು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿದರು. ಕಸ್ತೂರಿ ಐನಾಪುರೆ ಪ್ರಾಸ್ತಾವನೆಗೈದರು. ಸಭಾಧ್ಯಕ್ಷರು ಕ್ವಿಜ್‍ನಲ್ಲಿ  ಭಾಗವಹಿಸಿದವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಪ್ರತಿಭಾ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಸ್ವಾವಲಂಬನ ಕೇಂದ್ರದ ಪ್ರಬಂಧಕಿ ಜ್ಯೋತಿ ಹೆಗ್ಡೆ ವಂದಿಸಿದರು.

ಹಿರಿಯರ ವಿಭಾಗದಲ್ಲಿ ನÀಡಿಗೆ ಸಾಧನೆಯೆಡೆಗೆ ಸಾಗಿ ಬಂದ ಕೆ.ಸದಾನಂದ ಪ್ರಭು
ಮುಂಬಯಿ, ಜ.23: ಪ್ರಯತ್ನ ಪಟ್ಟರೆಏನನ್ನೂ ಸಾಧಿಸಬಹುದು.ಅದುಚಿಕ್ಕದಾಗಿರಲಿ ಅಥವಾ ದೊಡ್ಡದೇ ಇರಲಿ, ಅದನ್ನು ಉಪೇಕ್ಷಿಸದೆ ಮನಸಿಟ್ಟು ವ್ಯವಸ್ಥಿತವಾಗಿ ಮಾಡಬೇಕಾಗಿದೆ. ಅದಕ್ಕೆ ಸಾಕಷ್ಟು ಸಮಯ, ಸತತ ಪ್ರಯತ್ನ ಮತ್ತು ಪ್ರೇರಣೆಯಅಗತ್ಯವಿದೆ. ಏಕಾಗ್ರತೆ, ಶ್ರಮ, ಸಾಧನೆ ಮೈಗೂಡಿರಬೇಕು. ಹಾಗೆಯೇ ಕಳೆದ ಹದಿನೆಂಟು ವರುಷಗಳ ನಿರಂತರ ಶ್ರಮ-ಸಾಧನೆಗಳಿಂದ ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸ ತೊಡಗಿ, ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆಯುತ್ತಾ, ರಾಷ್ಟೀಯ ಹಾಗೂ ಅಂತರ್ ರಾಷ್ಟೀಯ ಸ್ಪರ್ಧಾಕೂಟಗಳಲ್ಲಿ ಮಿಂಚತೊಡಗಿದ ಮಂಗಳೂರಿನ ಕೆ.ಸದಾನಂದ ಪ್ರಭುರವರ ಹೆಸರು ಇದೀಗ ಚಿರಪರಿಚಿತ.
ಮಂಗಳೂರಿನ ಮಣ್ಣಗುಡ್ಡ ನಿವಾಸಿಯಾಗಿರುವ ಶ್ರೀಯುತರು 1957 ಜೂನ್ 27 ರಂದು ಜನಿಸಿದ್ದು, ನಗರದಕೆನರಾ ಹೈಸ್ಕೂಲಿನಲ್ಲಿ ಪ್ರಾಥಮಿಕ ಹಾಗೂ ನವಭಾರತರಾತ್ರಿ ಶಾಲೆಯಲ್ಲಿತನ್ನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರೈಸಿರುವರು.ಪ್ರಸ್ತುತ ಬೇಕರಿ ವ್ಯವಹಾರ ನಡೆಸುತ್ತಿರುವರು.
ಸ್ಟೈಲಿಷ್ ವಾಕ್
ಪ್ರಭುಅವರದು ಸ್ಟೈಲಿಷ್ ವಾಕ್, ಮಂಗಳಾ ಸ್ಟೇಡಿಯಂನಲ್ಲಿಅವರು ನಡೆಯೋದನ್ನು ನೋಡೋದೇಚೆಂದ.ರಾಷ್ಟ್ರ ಮಟ್ಟದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ನಡಿಗೆಯ ಕೆಲವೊಂದು ಸ್ಟೈಲ್‍ಗಳನ್ನು ಕಲಿತುಕೊಂಡರು.ಟಿವಿಯಲ್ಲಿ ವೀಕ್ಷಿಸಿ ಅದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡರು.
ರಾಷ್ಟೀಯ ಮಟ್ಟದಲ್ಲಿ ನಡೆದಕೂಟವೊಂದರಲ್ಲಿಇವರ ನಡಿಗೆ ಮೋಡಿಗೆ ನೆರೆದಕ್ರೀಢಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು.ಅಂತರಾಷ್ಟ್ರೀಯ ಮಟ್ಟದ ವಾಕರ್ಗೆಇರುವಎಲ್ಲಾರೀತಿಯ ನಡಿಗೆ ಸ್ಷೈಲ್ ಗಳು ಸದಾನಂದರಿಗೆ ಈಗ ಕರಗತ.ಅಚ್ಚರಿಎಂದರೆ, ಸದಾನಂದರುಅಭ್ಯಾಸ ಮಾಡುವುದು ಬರಿಗಾಲಲ್ಲಿ, ಬಿರುಬಿಸಿಲಲ್ಲಿ, ಸ್ಪರ್ಧೆಗಳು ಬಿಸಿಲಲ್ಲೇ ನಡೆಯುವುದರಿಂದಅದಕ್ಕೆ ಹೊಂದಿಕೆಯಾಗುವಂತೆ ಈ ಅಭ್ಯಾಸ ಮಾಡುತ್ತಿದ್ದಾರೆ.
ಸದಾನಂದ ಪ್ರಭುರಇತ್ತೀಚೆಗಿನ ಸಾಧನೆ:
* ಬಿಜಾಪುರದಲ್ಲಿ 12-11-2009ರಂದು ನಡೆದಕ್ರೀಡಾಕೂಟದಲ್ಲಿ 10,000 ಮೀಟರ್‍ಓಟದಲ್ಲಿಚಿನ್ನದ ಪದಕ, 5000 ಮೀಟರ್ ನಡಿಗೆಯಲ್ಲಿ ಬೆಳ್ಳಿಯ ಪದಕ, 5000 ಮೀ. ನಲ್ಲಿ ಕಂಚಿನ ಪದಕದೊಂದಿಗೆರಾಷ್ಟ್ರ ಮಟ್ಟಕ್ಕೆ ಆಯ್ಕೆ.
* ಮಹಾರಾಷ್ಟ್ರದಲ್ಲಿ ನಡೆದರಾಷ್ಟ್ರಮಟ್ಟದ 15-2-2010ರಂದು ನಡೆದಕ್ರೀಡಾಕೂಟದಲ್ಲಿ 5000ಸಾವಿರ ಮೀಟರ್ ನಡಿಗೆ ಸ್ಫರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ.
*2010ರ ಡಿಸೆಂಬರ್ 12ರಂದು ಮಲೇಶಿಯಾದ ಕೌಲಲಂಪುರದಲ್ಲಿ  ನಡೆದ ಏಷ್ಯಾ ಮಾಸ್ಟರ್ಸ್ ರೋಡ್‍ಜೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ 5ನೇ ಸ್ಥಾನ.
* 28-29ರ ಜುಲೈ2012ರ ಶ್ರೀಲಂಕಾದ ಸುಜಕಾದಾಸ್ ಸ್ಟೇಡಿಯಂ ಕೊಲೆಂಬೋದಲ್ಲಿ ನಡೆದ ಓಪನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ನಡಿಗೆಯಲ್ಲಿ ತೃತೀಯ  ಸ್ಥಾನವನ್ನು ಗಳಿಸಿದ್ದಾರೆ.
* ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಸದಾನಂದ ಪ್ರಭುರವರಿಗೆ ನವೆಂಬರ್ 1,2012ರಂದು ಜಿಲ್ಲಾಮಟ್ಟದರಾಜ್ಯೋತ್ಸವ ಪ್ರಶಸ್ತಿ ವಿಶೇಷ ಪುರಸ್ಕಾರ ಪ್ರಶಸ್ತಿ ಪತ್ರ ನೀಡಿಗೌರವಿಸಲಾಗಿದೆ.
* 2015 ಮಾರ್ಚ್‍ನಲ್ಲಿ ಥಾಯಿಲ್ಯಾಂಡ್‍ನಲ್ಲಿ ಥಾಯ್ವೆಟರನ್ಸ್ ಅಥ್ಲೆಟಿಕ್ ಆಶ್ರಯದಲ್ಲಿ ಮಾ.6 ರಿಂದ 8ರ ವರೆಗೆ ನಡೆದಥಾಯ್ಲೆಂಡ್ ಓಪನ್ ಮಾಸ್ಟರ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ 30-43 ನಿಮಿಷಗಳಲ್ಲಿ ಕ್ರಮಿಸುವುದರೊಂದಿಗೆ ತೃತೀಯ ಸ್ಥಾನÀದೊಂದಿಗೆ ಕಂಚಿನ ಪದಕ.
*8-9 ಜನವರಿ 2011ರಲ್ಲಿ ತಮಿಳುನಾಡಿನಲ್ಲಿ ಅಂತರಾಜ್ಯ ಮಟ್ಟದಲ್ಲಿ ನಡೆದ ಫಸ್ಟ್ ಸೌತ್‍ಝೊನ್ ಅಥ್ಲೆಟಿಕ್ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನÀÀ.
* 13-11-2016 ದಕ್ಷಿಣ ಕನ್ನಡ ಜಿಲ್ಲಾ  ಮಟ್ಟದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿಚಿನ್ನದ ಪದಕ.
* 24-9-2017 ದಕ್ಷಿಣಕನ್ನಡಜಿಲ್ಲಾ ಮಟ್ಟದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನÀ.
* 3-10-2017, ಇಂಟರ್ ಡಿಸ್ಟ್ರಿಕ್ ಮಟ್ಟದಉಡುಪಿ ಅಜ್ಜರ್‍ಕಾಡುಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ.
* 23 ಮತ್ತು 24 ಡಿಸೆಂಬರ್ 2017 ರಂದು ನಡೆದ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಮಾಸ್ಟರ್‍ಅತ್ಲೆಟಿಕ್ ಅಸೋಸಿಯೇಶನ್ ಇವರು ಹೊಸಕೊಟೆ ಸ್ಟೇಡಿಯಂನಲ್ಲಿ ಆಯೋಜಿಸಿದ 38ನೇ ಸ್ಟೇಟ್ ಮಾಸ್ಟರ್ಸ್‍ಅತ್ಲೆಟಿಕ್ ಮೀಟ್ 2017-18 ಇದರಲ್ಲಿ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (ಖeಛಿಚಿಡಿಜ27:44 seಛಿ)
* ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್‍ಅತ್ಲೆಟಿಕ್ ಬೆಂಗಳೂರಿನಲ್ಲಿ ಕಂಠೀರವಕ್ರೀಡಾಂಗಣದಲ್ಲಿ 2018 ಜನವರಿ 22-25ರ ತನಕ ನಡೆದ 5000ಸಾವಿರ ಮೀಟರ್ ನಡಿಗೆ ಸ್ಪರ್ಧೆಯಲ್ಲಿತೃತೀಯ ಸ್ಥಾನ.
* 15-16 ನವೆಂಬರ್ 2019ರಂದು ನಡೆದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿಜರುಗಿದ 40ನೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 5,000 ಸಾವಿರ ಮೀಟರ್ ನಡಿಗೆಯಲ್ಲಿ ಚಿನ್ನದ  ಪದಕ ಪಡೆದು 2020ರ ಮಣಿಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ಜ.24-26: ಮೈಸೂರು ಅಸೋಸಿಯೇಷÀನ್‍ನಲ್ಲಿ  ಶ್ರೀ  ಶ್ರೀರಂಗ ರಂಗೋತ್ಸವ - ಬಹುಮಾನ ವಿಜೇತ ಮೂರು ನಾಟಕಗಳ ಪ್ರದರ್ಶನ-ರಂಗೋತ್ಸವ ಉದ್ಘಾಟನೆ

ಮುಂಬಯಿ, ಜ.22: ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು 2010ರಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಮೂರು ದಿನಗಳ ನಾಟಕೋತ್ಸವ ‘ಶ್ರೀರಂಗ ರಂಗೋತ್ಸವ’ವನ್ನು ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್‍ನ ಸಭಾಗೃಹದಲ್ಲಿ  ಇದೇ ಜ.24ನೇ ಶುಕ್ರವಾರದಿಂದ ಜ.26ನೇ ರವಿವಾರ ವರೆಗೆ ಮೈಸೂರು ಅಸೋಸಿಯೇಷನ್‍ನ ಸಭಾಗೃಹದಲ್ಲಿ ಪ್ರಸ್ತುತ ಪಡಿಸಲಿದೆ.

ಜ.24ನೇ ಶುಕ್ರವಾರ ಮೊದಲ ದಿನ ಶುಕ್ರವಾರ ಸಂಜೆ 6.30 ಗಂಟೆಗೆ ರಂಗೋತ್ಸವದ ಉದ್ಘಾಟನೆ ಆದ್ಯ ರಂಗಾಚಾರ್ಯರ ಪುತ್ರಿ ಡಾ| ಉಷಾ ದೇಸಾಯಿ ನೆರವೇರಿಸಲಿದ್ದಾರೆ. ಅಂದು ಡಾ| ಅಶುತೋಷ್ ದಿವಾಣ್ ರಚನೆಯ ಮತ್ತು  ಶ್ರೀ ಅಭಿಜಿತ್ ಜುನ್ಜಾರರಾವ್ ನಿರ್ದೇಶನದ ‘ಅಭಿನಯ’ ತಂಡ ಕಲ್ಯಾಣ್ ಇವರಿಂದ ‘ಘಟೋತ್ಕಚ’ ಮರಾಠಿ ನಾಟಕ ಪ್ರಯೋಗವಿದೆ.
ಜ.25ನೇ ಶನಿವಾರ ಸಂಜೆ 7.00 ಗಂಟೆಗೆ ಮೈಸೂರು ಅಸೋಸಿಯೇಷನ್ ಏರ್ಪಡಿಸಿದ್ದ ಈ ಸಾಲಿನ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ವಿಜೇತ  ಡಾ|  ಮಮತಾ ರಾವ್ ಮುಂಬಯಿ ರಚನೆ ಹಾಗೂ ಉಡುಪಿಯ ಹೆಸರಾಂತ ಯುವ ನಾಟಕಕಾರ ಗಣೇಶ್ ಮಂದರ್ತಿ ನಿರ್ದೇಶನದ ‘ಚಂದ್ರನಖಾಯಣ’ ನಾಟಕವನ್ನು ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಪ್ರಸ್ತುತಗೊಳಿಸಲಿದೆ. ಭಾರ್ಗವ ಭಾಗವತ್ ಅವರ ಸಂಗೀತ ಮತ್ತು ಪ್ರಥ್ವಿನ್ ಕೆ. ವಾಸು ಅವರ ಸಹ ನಿರ್ದೇಶನ ಹಾಗೂ ವಸ್ತ್ರ ವಿನ್ಯಾಸದೊಂದಿಗೆ ಈ ನಾಟಕ ಪ್ರದರ್ಶನವಾಗಲಿದೆ.  

ಮೂರನೆಯ ಮತ್ತು ಕೊನೆಯ ನಾಟಕ ಜ.26ನೇ ರವಿವಾರ ಸಂಜೆ 6.30 ಗಂಟೆಗೆ ಡಾ| ಉಷಾ ನರಸಿಂಹನ್ ರಚನೆಯ ಮೈಸೂರು ಅಸೋಸಿಯೇಷನ್ ಏರ್ಪಡಿಸಿದ್ದ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ “ಕಂಚುಗನ್ನಡಿ” ಕನ್ನಡ ನಾಟಕ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾಥಿರ್üಗಳ ‘ಸಾಂಸ್ಕೃತಿಕ ರಂಗ ತಂಡ’ವು ಪ್ರಸ್ತುತ ಪಡಿಸಲಿದ್ದಾರೆ. ಡಾ| ಉಷಾ ನರಸಿಂಹನ್ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿದ್ದಾರೆÀ. ಈ ನಾಟಕದ ನಿರ್ದೇಶನವನ್ನು ಶ್ರೀ. ವಿಕ್ರಮ್ ಜಿ.ಟಿ. ಮತ್ತು ಶ್ರೀಮತಿ ಚಾಂದಿನಿ ಪಿ. ಇವರು ನಿರ್ವಹಿಸುತ್ತಾರೆ. ಈ ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ, ಬೆಂಗಳೂರು ಹಾಗೂ ಶ್ರೀಮತಿ ಉಷಾ ದೇಸಾಯಿ ಇವರ ಸಹ ಪ್ರಾಯೋಜಕತ್ವವಿದೆ.

ಈ ಮೂರು ದಿನಗಳ ಈ ನಾಟಕಗಳ ರಸದೌತಣವನ್ನು ಸ್ವೀಕರಿಸಿ ಆಸ್ವಾದಿಸಲು ಮುಂಬಯಿಯ ಸಮಸ್ತ ಕನ್ನಡ ಜನತೆಗೆ ಈ ಮೂಲಕ ಆಹ್ವಾನ ನೀಡಿ, ರಂಗೋತ್ಸವವನ್ನು ಯಶಸ್ವಿ ಗೊಳಿಸಬೇಕೆಂದು ಮೈಸೂರು ಅಸೋಸಿಯೆ ೀಷನ್‍ನ ಪರವಾಗಿ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಿನಂತಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi