Brief Mumbai Managalore news with pictures.
Kemmannu News Newtwork, 25-02-2020 19:16:57
ಫೆ.29: ಗುಜರಾತ್ನ ವಾಪಿಯಲ್ಲಿ ತುಳುನಾಡ ಐಸಿರಿ (ರಿ.) ಸೇವಾರ್ಪಣೆ
ಮುಂಬಯಿ (ವಾಪಿ-ಗುಜರಾತ್), ಫೆ.14: ಕರ್ನಾಟಕದ ಜನತೆ ತವರೂರನ್ನು ತೊರೆದು ಉದರ ಪೆÇೀಷಣೆಗೆ ಆಸರೆ ಹುಡುಕುತ್ತಾ ದೇಶವಿದೇಶಗಳಲ್ಲಿ ನೆಲೆಯಾದರೂ ತಮ್ಮತಮ್ಮ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಉಳಿಸಿ ಬೆಳೆಸುವಲ್ಲಿ ಯಶ ಕಂಡಿದ್ದಾರೆ. ಆ ಪಯ್ಕಿ ಗುಜರಾತ್ ರಾಜ್ಯದಾದ್ಯಂತ ನೆಲೆಯಾಗಿರುವ ತುಳು-ಕನ್ನಡಿಗರ ಸಾಧನೆಯೂ ಮಹತ್ತರವಾದುದು. ಇಲ್ಲಿನ ವಲ್ಸಾಡ್, ವಾಪಿ, ದಮನ್, ಸಿಲ್ವಾಸಾ ಮತ್ತು ಉಂಬರ್ಗಾಂವ್ ಪ್ರದೇಶದ ಎಲ್ಲಾ ತುಳುವರ ಏಕೈತೆಯ ವೇದಿಕೆಯಾಗಿಸಿ ರೂಪುಗೊಂಡ ತುಳುನಾಡ ಐಸಿರಿ (ರಿ.) ವಿಧ್ಯುಕ್ತವಾಗಿ ಸೇವಾರ್ಪಣೆಗೆ ಸಜ್ಜುಗೊಂಡಿದ್ದು ಫೆ.29ನೇ ಶನಿವಾರ ವಾಪಿ ಚಾಲ್ರಸ್ತಾ ಇಲ್ಲಿನ ವಿಐಪಿ ಸಭಾಗೃಹÀದಲ್ಲಿ ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಭವ್ಯ ಸಮಾರಂಭದಲ್ಲಿ ಸೇವಾರ್ಪಣೆಗೆ ಗೊಳ್ಳಲಿದೆ.
ಸಮಾರಂಭದಲ್ಲಿ ಅತಿಥಿs ಅಭ್ಯಾಗತರಾಗಿ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಬೆಳ್ತಂಗಡಿ ಆಗಮಿಸಿ ತುಳುನಾಡ ಐಸಿರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿsಯಾಗಿ ವಿೂರಾ-ಡಹಾಣು ಬಂಟ್ಸ್ನ ಗೌರವಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಗೌರವ ಅತಿಥಿsಗಳಾಗಿ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬಿಲ್ಲವ ಸಂಘ ಗುಜರಾತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಗುಜರಾತ್ನ ಶಾಸಕ ಕನ್ನುಭಾೈ ದೇಸಾಯಿ (ಪರ್ಡಿ-ವಲ್ಸಾಡ್), ಕರ್ನಾಟಕದ ಶಾಸಕ ಹರೀಶ್ ಪೂಂಜ (ಬೆಳ್ತಂಗಡಿ), ಜೆಡಿಎಸ್ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ಅ.ಭಾ.ರಾ.ಕಾಂ ಸೇವಾದಳ ಗುಜರಾತ್ ಜತೆ ಕಾರ್ಯದರ್ಶಿ ರಾಕೇಶ್ ಶೆಟ್ಟಿ, ಕಲಾ ಜಗತ್ತು ಮುಂಬಯಿ ಅಧ್ಯಕ್ಷ ಡಾ| ವಿಜಯಕುಮಾರ್ ಶೆಟ್ಟಿ ತೋನ್ಸೆ, ಹೇರಂಭ ಕೆಮಿಕಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಆರ್.ಕೆ ಶೆಟ್ಟಿ, ಬಿಲ್ಲವ ಸಂಘ ಗುಜರಾತ್ ಗೌರವಾಧ್ಯಕ್ಷ ದಯಾಂದ ಆರ್.ಬೋಂಟ್ರಾ, ಸೂರತ್ನ ಹೆಸರಾಂತ ಹೊಟೇಲು ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಮತ್ತು ಶಿವರಾಮ ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ಇದರ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ವಿಶೇಷ ಆಮಂತ್ರಿತ ಅತಿಥಿüಗಳಾಗಿ ತುಳು ಸಂಘ ಅಹ್ಮದಾಬಾದ್ ಗೌರವಾಧ್ಯಕ್ಷ ಮೋಹನ್ ಸಿ.ಪೂಜಾರಿ, ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ ಅಧ್ಯಕ್ಷ ಮುದ್ದು ಕೃಷ್ಣ ಎನ್.ಶೆಟ್ಟಿ, ತುಳು ಸಂಘ ಅಂಕಲೇಶ್ವರ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಎಲ್.ಶೆಟ್ಟಿ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ನಿತೇಶ್ ಶೆಟ್ಟಿ, ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ, ಬಿಲ್ಲವ ಸಂಘÀ ಸೂರತ್ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಡೋಳಿ, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಬಿ.ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಘಟಕಧ್ಯಕ್ಷ ಅಜಿತ್ ಎಸ್.ಶೆಟ್ಟಿ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.
ದಿನಪೂರ್ತಿಯಾಗಿಸಿ ನೆರವೇರಲಿರುವ ಸಮಾರಂಭದಲ್ಲಿ ಪೂರ್ವಾಹ್ನ ಶ್ರೀದೇವಿಯ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 1.45 ಗಂಟೆಗೆ ಸಭಾ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಆಗಿಸಿ ನೃತ್ಯ ಭಜನೆ, ಭರತನೃತ್ಯ, ಜಾನಪದ ನೃತ್ಯ, ಪಿಲಿನಲಿಕೆ (ಹುಲಿವೇಷ ನೃತ್ಯ), ತುಳುನಾಡ ವೈಭವ, 3.45 ಗಂಟೆಗೆ ಸಮಾರೋಪ ಸಮಾರಂಭ, 6.30 ಗಂಟೆ ಬಳಿಕ ಮನೋರಂಜನಾ ಕಾರ್ಯಕ್ರಮಗಳು ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇವರಿಂದ ದೇವ ಪೂಂಜ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಘುನಾಥ್ ಎನ್.ಶೆಟ್ಟಿ ಮತ್ತು ರಜನಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ತುಳುನಾಡ ಐಸಿರಿ ಇದರ ಪ್ರಸಕ್ತ ಸಮಿತಿಯಲ್ಲಿ ಗೌರವಾಧ್ಯಕ್ಷ ಸದಾಶಿವ ಜಿ.ಪೂಜಾರಿ, ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಉಪಾಧ್ಯಕ್ಷ ನವೀನ್ ಎಸ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉದಯ ಬಿ.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಪ್ರದೀಪ್ ಆರ್.ಪೂಜಾರಿ, ಜೊತೆ ಕಾರ್ಯದರ್ಶಿ ಸುಕೇಶ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಗಣೇಶ್ ಎನ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಬಿ.ಶೆಟ್ಟಿ, ಕಾರ್ಯದರ್ಶಿ ಅರುಣಾದತ್ತಿ ಎನ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಕೋಮ್ ಪಿರೇರಾ, ಪುಷ್ಪರಾಜ್ ಜಿ.ಶೆಟ್ಟಿ ಪುತ್ತೂರು, ಕಿರಣ್ಕುಮಾರ್ ಎಸ್.ಅಂಚನ್, ದಿವಾಕರ್ ಜಿ.ಶೆಟ್ಟಿ, ಗೋವಿಂದ ಎಸ್.ಶೆಟ್ಟಿ, ಡಾ| ಆರ್.ಕೆ ನಾಯರ್, ಶ್ರೀಧರ್ ಎನ್.ಶೆಟ್ಟಿ, ಅಶೋಕ್ ಬಿ.ಶೆಟ್ಟಿ, ಬಾಲಕೃಷ್ಣ ಎಸ್.ಶೆಟ್ಟಿ ಸಿಲ್ವಾಸ, ದಿವಾಕರ್ ಜಿ.ಶೆಟ್ಟಿ ವಲ್ಸಾಡ್, ಮಹೇಶ್ ಎಸ್.ಶೆಟ್ಟಿ ಸಿಲ್ವಾಸ, ದಿವಾಕರ್ ಶೆಟ್ಟಿ ಸಿಲ್ವಾಸ, ಅಶೋಕ್ ಡಿ.ಶೆಟ್ಟಿ, ಹರೀಶ್ ಎಸ್.ಶೆಟ್ಟಿ, ವಸಂತ್ ಎಸ್.ಶೆಟ್ಟಿ ವಲ್ಸಾಡ್, ಜೀವನ್ ಶೆಟ್ಟಿ ಉಂಬರ್ಗಾಂವ್, ಶಶಿಧರ್ ಎನ್.ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯ ಭಾಸ್ಕರ್ ಸರಪಾಡಿ ಸೇವಾ ನಿರತರಾಗಿದ್ದಾರೆ.
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನಿಂದ
ಉಚಿತ ಸಾಮೂಹಿಕ ವಿವಾಹ-ಸ್ವಸ್ತಿಸಿರಿ ಪ್ರಶಸ್ತಿ-ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ
ಮುಂಬಯಿ (ಬಂಟ್ವಾಳ), ಫೆ.25: ಕಳೆದ ಸುಮಾರು ಮೂರುವರೆ ದಶಕಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 36ನೇ ಸಂಭ್ರಮಾಚರಣೆ ಮತ್ತು ಹನ್ನೆರಡನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭ ಇದೇ ಮಾ.8ರ ಭಾನುವಾರ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಮುನ್ನಲಾಯಿಗುತ್ತು ಸಚ್ಚಿದಾನಂದ ಎಂ.ಶೆಟ್ಟಿ (ವಿೂರರೋಡ್) ಹಾಗೂ ಸುಂದರ್ರಾಜ್ ಹೆಗ್ಡೆ ಮುಂಬಯಿ ಇವರುಗಳ ಮಹಾ ಪೆÇೀಷಕತ್ವದಲ್ಲಿ 12ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ನಿಮಿತ್ತ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾ.01ನೇ ರವಿವಾರ ಪುಂಜಾಲಕಟ್ಟೆ ಅಲ್ಲಿನ ನಂದಗೋಕುಲ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬಂಟ್ವಾಳ ತಹಶೀಲ್ದಾರ ಕೆ.ರಶ್ಮೀ ಅಧ್ಯಕ್ಷತೆಯಲ್ಲಿ ಜರುಗಲಿದೆ. ಇಂಜಿನೀಯರ್ ಎಸ್.ಮಂಜ ಪ್ಪ, ಮಲ್ಲಿಕಾ ಶೆಟ್ಟಿ, ವಿನ್ಸೆಂಟ ಸೆರಾ, ರಾಜಶೇಖರ್ ರೈ, ವಜ್ರಾ ಪೂಜಾರಿ ರಮೇಶ್ ಶೆಟ್ಟಿ ಮಜಲೋಡಿ ಮತ್ತಿತರ ಗಣ್ಯರು ಆಗಮಿಸಿ ವಧೂವರರಿಗೆ ಧಾರಾ ವಸ್ತ್ರವಿತರಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಪ್ರಧಾನ ಸಂಘಟಕ ತುಂಗಪ್ಪ ಬಂಗೇರ ವಿವರ ತಿಳಿಸಿದÀರು.
ಮಾ.08ನೇ ಭಾನುವಾರ ಪುಂಜಾಲಕಟ್ಟೆ ಅಲ್ಲಿನ ಬಸವನಗುಡಿ ಬಸವೇಶ್ವರ ದೇವಾಲಯದಿಂದ ವಧೂವರರನ್ನು ಲಗ್ನೋತ್ಸವಕ್ಕೆ ಶಾಸ್ತ್ರೋಕ್ತವಾಗಿ ಸಿದ್ಧಪಡಿಸಿ ಕರ್ನಾಟಕ ಕರಾವಳಿಯ ತುಳುನಾಡ ಸಂಸ್ಕಾರ, ಸಂಸ್ಕøತಿ ಧಾರ್ಮಿಕ ಪರಂಪರೆ, ಹಿನ್ನೆಲೆಗಳನ್ನು ಭಿತ್ತರಿಸುವ ವೇಷಭೂಷಣ, ಚೆಂಡೆ, ಬ್ಯಾಂಡ್, ಕೊಂಬು ಕಹಳೆ, ಡೋಲು ವಾದ್ಯ ವಾದನಗಳ ನೀನಾದÀ, ಸಾಂಸ್ಕøತಿಕ ವೈಭವ, ಜಾನಪದ ನೃತ್ಯಗಳ ಪ್ರಾತ್ಯಕ್ಷಿಕೆಗಳ ಮೇಳೈಕೆ, ಸಾಂಪ್ರ್ರದಾಯಿಕ ಉಡುಪು ಧರಿತ ಕಲಶ ಹೊತ್ತ ಸುವಾಸಿನಿಯರ ಸ್ವಾಗತ, ವೈವಿಧ್ಯತಾ ವೈಭವ,À ಉತ್ಸವದ ಸಡಗರದ ವೈಭವೋಪೇತ ದಿಬ್ಬಣ ಮೆರವಣಿಗೆಯಲ್ಲಿ ಮದುವೆ ಮಂಟಪದ ವರೆಗೆ ಬರಮಾಡಿ ಕೊಳ್ಳಲಾಗುವುದು. ನಂತರ ಬಂಗ್ಲೆ ಮೈದಾನದಲ್ಲಿ ನಿರ್ಮಿತ ಮದುವೆ ಮಂಟಪದಲ್ಲಿ ಪೂರ್ವಾಹ್ನ 11.33ರ ಶುಭ ಮುಹೂರ್ತದಲ್ಲಿ 10 ಜೋಡಿ ವಧು-ವರರಿಗೆ ವೇದಮೂರ್ತಿ ಕೃಷ್ಣಭಟ್ ಗುರುವಾಯನಕೆರೆ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಗುವು ದು. ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯ ಜಿ. ಅವರು ದಿಬ್ಬಣ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆ ಪಡೆಯಲಿರುವ ನವಮಧುವರರಿಗೆ ಕರ್ನಾಟಕ ಸರಕಾರದ ಆದರ್ಶ ವಿವಾಹ ಯೋಜನೆಯಡಿ ರೂ.50,000/- ಅಧುವಿನ ಖಾತೆಗೆ ಜಮಾ ಮಾಡಲಾಗುವುದು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ 2020 ಪ್ರದಾನಿಸಲಾಗುವುದು. ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಶಶಿಕಿರಣ್ ಬೊಮ್ಮಸಂದ್ರ ಬೆಂಗಳೂರು (ಉದ್ಯಮ), ಸತೀಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಬೋಳದಗುತ್ತು (ಕಂಬಳ ಕ್ಷೇತ್ರ), ಎ.ಕೆ ಸುಂದರ್ ಸಾಲ್ಯಾನ್ ಬೆಂಗಳೂರು (ಸಮಾಜ ಸೇವೆ), ಮೋಹನದಾಸ್ ಕೊಟ್ಟಾರಿ (ಸಾಂಸ್ಕೃತಿಕ) ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಗೌರವಕ್ಕೆ ಲಿಯೋ ಬಾಸಿಲ್ ಫೆರ್ನಾಂಡಿಸ್ (ಮುದ್ರಣ-ಉದ್ಯಮ), ಕು| ಭ್ರಾಹ್ಮಿ ಮಯ್ಯ (ಸಾಂಸ್ಕೃತಿಕ), ಕು| ಆರಾಧನಾ ಭಟ್ ನಿಡ್ಡೋಡಿ (ಕಲೆ), ಸ್ವರ್ಣ ಸಂಜೀವಿನಿ ಮಡವು ಪಾಂಡವರಕಲ್ಲು (ಅತ್ಯುತ್ತಮ ಯುವ ಸಂಘಟನೆ) ಅವರನ್ನು ಆಯ್ಕೆ ಗೊಳಿಸಲಾಗಿದೆ.
ಬಂಟ್ವಾಳ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗುವ ಭವ್ಯ ಸಮಾರಂಭವನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಂಸದ, ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಸಾಧಕರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿüಗಳಾಗಿ ಭಾಗವಹಿಸುವರು ಎಂದು ಕ್ಲಬ್ ಅಧ್ಯಕ್ಷ ಪ್ರಶಾಂತ್ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಮಾಜಿ ಅಧ್ಯಕ್ಷ ಪಿ.ಎಂ ಪ್ರಭಾಕರ, ಕಾರ್ಯದರ್ಶಿ ಜಯರಾಜ ಅತ್ತಾಜೆ, ಸಂಚಾಲಕ ರಾಜೇಶ್ ಪಿ.ಪುಂಜಲಕಟ್ಟೆ ತಿಳಿಸಿದ್ದಾರೆ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲಾಡ್-ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ - ಫೆ.27: ಪುನಃಪ್ರತಿಷ್ಠಾಪನೆ-108 ಕಲಶಾಭಿಷೇಕ ಮತ್ತು ಚಂಡಿಕಾ ಯಾಗ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಫೆ.23: ಮಲಾಡ್ ಪೂರ್ವದ ಕುರಾರ್ ವಿಲೇಜ್ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಪುನಃರ್ನಿರ್ಮಾಣ ನಿಮಿತ್ತ ಶ್ರೀ ಗಣಪತಿ ದೇವರ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪುನಃರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಉತ್ಸವಕ್ಕೆ ಇಂದಿಲ್ಲಿ ಭಾನುವಾರ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಪೂಜಾಧಿಗಳನ್ನು ನೆರವೇಇಸಿ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
ಮಂದಿರದ ಪ್ರಧಾನ ಅರ್ಚಕರಾದ ಸೂಡ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಇಂದಿನಿಂದ ಫೆ.28ನೇ ಶುಕ್ರವಾರ ತನಕ ನಡೆಯಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಶ್ರೀ ಗಣಪತಿ ದೇವರ, ಶ್ರೀ ದುರ್ಗಾಪರಮೇಶ್ವರಿ ದೇವಿಯ ಪುನಃಪ್ರತಿಷ್ಠಾಪನೆ ಮತ್ತು ಅಷ್ಠಬಂಧ ಬ್ರಹ್ಮಕಲಶಾಭಿಷೇಕಕ್ಕೆ ಧಾರ್ಮಿಕ ಕೈಂಕರ್ಯಗಳೊಂದಿಗೆ ಉತ್ಸವಕ್ಕೆ ಪೂರ್ವಸಿದ್ಧತೆ ನಡೆಸಲಾಯಿತು.
ಆ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ರಿತ್ವಿಕ್ ವರಣಿ, ದೇವ ನಾಂದೀ ಕಂಕಣ ಬಂಧ, ತೋರಣ ಸ್ಥಾಪನೆ, ಅರಣಿ ಮಥನ, ಭದ್ರ ದೀಪ ಪ್ರಜ್ವಲನೆ, ಮಹಾಗಣಪತಿ ಹೋಮ, ಸುಕೃತ ಹೋಮ, ಅಂಕುರ ಪೂಜೆ, ಪಂಚಗವ್ಯ ಹೋಮ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಭೂಶುದ್ಧಿ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ಅಸ್ತ್ರ ಕಲಶ ಸ್ಥಾಪನೆ, ವಿವಿಧ ಭಜನಾ ಮಂಡಳಿಗಳಿಂದ ರಾತ್ರಿವಿಡೀ ಅರ್ಧ ಏಕಾಹ ಭಜನಾ ಕಾರ್ಯಕ್ರಮಗಳೊಂದಿಗೆ ಆದಿಗೊಳಿಸಲಾಯಿತು.
ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ, ಉಪಾಧ್ಯಕ್ಷರುಗಳಾದ ಪದ್ಮನಾಭ ಟಿ.ಶೆಟ್ಟಿ, ಗಣೇಶ್ ಎಲ್.ಕುಂದರ್, ನರೇಶ್ ಆರ್.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸೋಮಪ್ಪ ಬಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಗೋಪಾಲ್ ಬಿ.ಕೋಟ್ಯಾನ್, ಮುರಳೀಧರ ಬಿ. ಪೂಜಾರಿ, ರಮೇಶ್ ಟಿ.ಶೆಟ್ಟಿ, ಗೌ| ಕೋಶಾಧಿಕಾರಿ ಬಾಬು ಎಂ.ಸುವರ್ಣ, ಜೊತೆ ಕೋಶಾಧಿಕಾರಿಗಳಾದ ದೇವು ಬಿ.ಕೋಟ್ಯಾನ್, ಸುರೇಶ್ ಎಂ.ಕೋಟ್ಯಾನ್, ಗೀತಾ ಸಿ.ಜತ್ತನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರೇಮನಾಥ ಎಸ್.ಸಾಲಿಯಾನ್, ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ಆನಂದ ಕೆ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ಡಾ| ಶೈಲೇಸ್ ಗೌಡ, ರಮೇಶ್ ಪೂಂಜ, ನ್ಯಾ| ಜಗನ್ನಾಥ ಎನ್.ಶೆಟ್ಟಿ, ನ್ಯಾ| ಸೋಮನಾಥ ಬಿ.ಅಮೀನ್, ಕುಮಾರೇಶ್ ಆಚಾರ್ಯ ಸೇರಿದಂತೆ ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಕಂಬಳ ಕೋಣಗಳ ಓಟಗಾರ ಶ್ರೀನಿವಾಸ ಗೌಡರಿಗೆ ಹೆಗ್ಗಡೆಯವರಿಂದ ಸನ್ಮಾನ - ಕಂಬಳಕ್ಕೂ ಒಂದುಯೋಗ ಬಂದಿದೆ : ಡಿ.ವೀರೇಂದ್ರ ಹೆಗ್ಗಡೆ
ಮುಂಬಯಿ (ಉಜಿರೆ), ಫೆ.24: ಸೋಲು-ಗೆಲುವಿನ ಬಗ್ಯೆಚಿಂತಿಸದೆ ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಕಂಬಳ ಕ್ರೀಡೆಗೂ ಒಳ್ಳೆಯ ಕಾಲ ಹಾಗೂ ಒಂದುಯೋಗ ಬಂದಿದೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಹೆಗ್ಗಡೆಯವರು ಸೋಮವಾರ ಧರ್ಮಸ್ಥಳದಲ್ಲಿ ತಮ್ಮ ನಿವಾಸದಲ್ಲಿಕಂಬಳಗಳ ಕೋಣಗಳ ಓಟದಲ್ಲಿ ದಾಖಲೆ ನಿರ್ಮಿಸಿದಮೂಡಬಿದ್ರೆ ಬಳಿ ಅಶ್ವತ್ಥಪುರ ನಿವಾಸಿ ಶ್ರೀನಿವಾಸ ಗೌಡಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಗೆಲುವು ಬಂದಾಗ ಹಿಗ್ಗದೆ, ಸೋಲು ಬಂದಾಗಕುಗ್ಗದೆ ಸಮತೋಲನದಲ್ಲಿರಬೇಕು.ಸ್ಥಿಮಿತ ಕಳೆದು ಕೊಳ್ಳಬಾರದು. ಸಭೆ-ಸಮಾರಂಭಗಳಿಗೆ ಹೋಗುವಾಗ ಪ್ಯಾಂಟು ಹಾಕಬಾರದು.ಬಿಳಿ ಧೋತಿ ಉಡಬೇಕು ಎಂದು ಹೊಸ ವೇಸ್ಟಿಯನ್ನು ಉಡುಗೊರೆಯಾಗಿ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರಜೈನ್, ಕಂಬಳ ಅಕಾಡೆಮಿ ಸಂಚಾಲಕ ಕೆ ಗುಣಪಾಲ ಕಡಂಬ, ಎಸ್.ಡಿ. ಸಂಪತ್ ಸಾಮ್ಯಾಜ್ಯ ಶಿರ್ತಾಡಿ, ಕೋಣಗಳ ಮಾಲಕ ಸತೀಶ್ಚಂದ್ರ ಸಾಲಿಯಾನ್ಇರುವೈಲ್, ಕಂಬಳ ಅಕಾಡೆಮಿ ನಿರ್ದೇಶಕರುಗಳಾದ ಜ್ವಾಲಾ ಪ್ರಸಾದ್ ಈದು, ಸುಭಾಶ್ಚಂದ್ರ ಚೌಟ, ಮೂಡಬಿದ್ರೆ, ಮಂಗಳೂರು ಎ.ಪಿ.ಎಂ.ಸಿ.ಅಧ್ಯಕ್ಷ ಪ್ರವೀಣಕುಮಾರ್ಜೈನ್, ಚಿಂತನ್ಲೋಬೊ, ತರಬೇತುದಾರ ದಿನೇಶ್ ಅಳಿಯೂರು ಉಪಸ್ಥಿತರಿದ್ದರು.
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಗಾಯನ ಸ್ಪರ್ಧೆ-ಪುರಂದರದಾಸರ ಭಕ್ತಿಗೀತೆ-ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.24: ಮುಂಬಯಿ ಕನ್ನಡ ಸಂಘವು ಕಳೆದ ಭಾನುವಾರ ಸಂಜೆ ಮಾಟುಂಗಾ ಅಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಜಿ.ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಶ್ರೀ ಪುರಂದರದಾಸರ 454ನೇ ಆರಾಧನಾ ಮಹೋತ್ಸವ ನಡೆಸಿತು.
ಸಂಘದ ಪದಾಧಿಕಾರಿಗಳು ದೀಪಹಚ್ಚಿ ಮಹೋತ್ಸವಕ್ಕೆ ಚಾಲನೆಯನ್ನಿತ್ತÀರು. ಆರಾಧನಾ ಮಹೋತ್ಸವ ಪ್ರಯುಕ್ತ ಶ್ರೀ ದೇವರ ನಾಮ ಗಾಯನ ಸ್ಪರ್ಧೆ ಆಯೋಜಿಸಲಾಗಿದ್ದು ನಗರದ ಬಹುಭಾಷಾ ಸಂಗೀತಕಾರ ರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಾಯನ ಪ್ರಸ್ತುತ ಪಡಿಸಿರು. ವಿದ್ವಾನ್ ಟಿ.ಎನ್ ಅಶೋಕ್ ಸ್ಪರ್ಧಾ ತೀರ್ಪುಗಾರರಾಗಿದ್ದು ಹಿತವಚನಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಆಶಾ ಕುಲ್ಕರ್ಣಿ ಮತ್ತು ತಂಡವು ಪುರಂದರದಾಸರ ಭಕ್ತಿಗೀತೆ ಪ್ರಸ್ತುತ ಪಡಿಸಿದರು.
ಕೊನೆಯಲ್ಲಿ ನಡೆಸಲ್ಪಲ್ಪಟ್ಟ ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಬೃಹನ್ಮುಂಬಯಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಕಲಾವಿದ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಉಪಸ್ಥಿತರಿದ್ದು ಪುರಂದರದಾಸರ ಸಂದೇಶವನ್ನಿತ್ತು ಸಂಘದ ಸೇವಾ ವೈಖರಿ ಪ್ರಶಂಸಿಸಿದರು ಹಾಗೂ ಕಾರ್ಯಕ್ರಮದ ಪ್ರಾಯೋಜಕ ರನ್ನು ಗೌರವಿಸಿ, ಸ್ಪರ್ಧಾ ವಿಜೇತರಿಗೆ ಪಾರಿತೋಷ ಕಗಳನ್ನು ನೀಡಿ ಗೌರವಿಸಿ ಅಭಿನಂದಿಸಿದರು.
ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಸ್ವಾಗತಿಸಿದರು. ಕು| ಎಂ.ಆರ್ ಚಿತ್ರರಥ್ ಮತ್ತು ಕು| ಎಂ.ಆರ್ ಎಸ್.ಹರ್ಷಿತಾ ಪ್ರಾರ್ಥನೆಯನ್ನಾಡಿದರು. ಜಿ.ಎಸ್ ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಸತೀಶ್ ಎನ್.ಬಂಗೇರÀ ಅತಿಥಿü ಪರಿಚಯಗೈದರು. ರಾಜೇಂದ್ರ ಗಡಿಯಾರ ಬಹುಮಾನ ವಿಜೇತರ ಯಾದಿಯನ್ನು ಹಾಗೂ ನರ್ಮದಾ ಕಿಣಿ ಶೈಕ್ಷಣಿಕ ಪ್ರತಿಭಾ ಪುರಸ್ಕೃತರ ಯಾದಿ ಪ್ರಕಟಿಸಿದರು.
ಜಿ.ಎಸ್.ಬಿ ಸಭಾ ಮುಂಬಯಿ (ಮಾಟುಂಗಾ) ಇದರ ವಿಶ್ವಸ್ಥೆ ಸುಧಾ ಪೈ, ಶಾಂತೇರಿ ನಾಗೇಶ್ ನಾಯಕ್, ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ, ಶ್ಯಾಮಲಾ ಮಾಧವ್, ಅನಿತಾ ಪೂಜಾರಿ ತಾಕೋಡೆ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ.ಪೈ, ಎಸ್.ಕೆ ಪದ್ಮನಾಭ, ನಾರಾಯಣ ಎ.ಆರ್ ರಾವ್, ವಿಠಲ್ ಆಚಾರ್ಯ, ಸಂಧ್ಯಾ ಪ್ರಭು ಮತ್ತಿತರರು ಉಪಸ್ಥಿತರಿದ್ದು, ಗೌರವ ಜೊತೆ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ಉಪಕಾರ ಸ್ಮರಿಸಿದರು. ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಆರಾಧನೋತ್ಸವ ಸಮಾಪನ ಕಂಡಿತು.
ಗುಜರಾತ್ ಬಿಲ್ಲವರ ಸಂಘದಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲ್ಪಟ್ಟ ಮಹಾಶಿವರಾತ್ರಿ
ಮುಂಬಯಿ (ಬರೋಡಾ), ಫೆ.21: ಗುಜರಾತ್ ಬಿಲ್ಲವರ ಸಂಘವು ಗುಜರಾತ್ನ ಬರೋಡಾ ಅಲ್ಕಾಪುರಾ ಇಲ್ಲಿನ ತನ್ನ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಇಂದಿಲ್ಲಿ ಮಹಾಶಿವರಾತ್ರಿ ಆಚರಿಸಿತು. ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರ ಸಾರಥ್ಯ, ಸಂಘದ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಹಾಗೂ ಕಾರ್ಯದರ್ಶಿ ವಾಸು ಸುವರ್ಣ ಅವರ ಮುಂದಾಳತ್ವದಲ್ಲಿ ಉತ್ತರಾಷಾಢಾ, ತ್ರಯೋದಶಿಯ ಶುಭಾವಸರಧಿ ಸಂಘದ ಎಲ್ಲಾ ಶಾಖೆಗಳ ಮುಖ್ಯಸ್ಥರು ಮತ್ತು ಸದಸ್ಯರನ್ನೊಳಗೊಂಡು ಲಘರುದ್ರಾಭಿಷೇಕ, ಪೂಜಾಧಿಗಳಿಂದ ಶಾಸ್ತ್ರೋಕ್ತವಾಗಿ ಶ್ರದ್ಧಾಭಕ್ತಿಪೂರ್ವಕವಾಗಿ ಮಹಾಶಿವರಾತ್ರಿ ಆಚರಿಸಿದರು.
ಸಂಘದ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರನೇಕರು ಹಾಜರಿದ್ದು, ನಡೆಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಮಂದಿರದಲ್ಲಿನ ಕೋಟಿ ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಪೂಜೆ ನೆರವೇರಿಸಿದ್ದು, ಮಹಿಳಾ ವಿಭಾಗದಧ್ಯಕ್ಷೆ ಸರಿತಾ ಪೂಜಾರಿ ಮತ್ತು ಮಹಿಳಾವೃಂದ, ಯುವ ವಿಭಾಗದ ಸದಸ್ಯರು ಭಜನೆ ನಡೆಸಿ ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದÀರು. ಕೊನೆಯಲ್ಲಿ ಪ್ರಸಾದರೂಪವಾಗಿ ಅನ್ನಸಂತರ್ಪಣೆ ನಡೆಸಲ್ಪಟ್ಟಿತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link