Brief Mumbai - Mangalore news with pictures


Rons Bantwal
Kemmannu News Network, 16-05-2020 19:33:37


Write Comment     |     E-Mail To a Friend     |     Facebook     |     Twitter     |     Print


ಕೊರೊನಾ ಸೊಂಕು ಬಗ್ಗೆ ಮುಂಜಾಗ್ರತಾ ಕ್ರಮ ವಹಸಿ : ಯು.ಟಿ ಖಾದರ್
ಮುಂಬಯಿ (ಬಂಟ್ವಾಳ), ಮೇ.15: ಜಿಲ್ಲೆಯಲ್ಲಿ ಈವರಗೆ ಐದು ಮಂದಿ  ಕೊರೊನಾ ಸೊಂಕು ತಗುಲಿ ಸಾವನ್ನಪ್ಪಿದ್ದಾರೆ ಇದು ಅತ್ಯಂತ ದುಖಃಕರ ವಿಚಾರ, ಇಂತಹ ಘಟನೆಗಳು ಮುಂದಿನ ದಿನಗಳಗಲ್ಲಿ ಮರುಕಳಿಸಿದಿರಲಿ ಎಂದು ಮಂಗಳೂರು ಶಾಸಕ ಯು.ಟಿ ಖಾದರ್ ಅವರು ಹೇಳಿದರು.

ಖಾದರ್ ಅವರು ಪರಂಗಿಪೇಟೆ ಇಲ್ಲಿನ ಸೇವಾಂಜಲಿ ಪ್ರತಿಷ್ಠಾನ ಸಭಾಭವನದಲ್ಲಿ ಅವರ ವೈಯಕ್ತಿಕ ನೆಲೆಯಲ್ಲಿ ತುಂಬೆ, ಮೇರೆಮಜಲು, ಪುದು ಮತ್ತು ಕಳ್ಳಿಗೆ ಕ್ಲಸ್ಟರ್ ಮಟ್ಟದ ಅಂಗನವಾಡಿ ಕಾರ್ಯಕರ್ತೆ ಯರಿಗೆ, ಸಹಾಯಕಿಯರಿಗೆ ಹಾಗೂ ಅಕ್ಷರ ದಾಸೋಹದ ಅಡುಗೆ ಕೆಲಸಗಾರರಿಗೆ ಕಿಟ್ ವಿತರಿಸಿ ತಿಳಿಸಿ ಕೊರೊನಾ ಸೊಂಕು ಬಗ್ಗೆ ಅತ್ಯಂತ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಸಿ ಬೇಕು ಆದರೆ ಭಯಬೇಡ. ಎಲ್ಲರೂ ಸೇರಿ ಕೊರೊನಾ ವಿರುದ್ದ ಹೋರಾಡಬೇಕಾಗಿದೆ ಈ ಸಂದರ್ಭದಲ್ಲಿ ನಮಗಾಗಿ ಸೇವೆ ಮಾಡುತ್ತಿರುವ ಎಲ್ಲಾ ಸೇವಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.


ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷ ತೆ ವಹಸಿದ್ದು, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಪ್ರಸ್ತಾವಿಕವಾಗಿ ಮಾತನಾಡಿ ಕೊರೊನಾ ಸಂಕಷ್ಟದ ಅವಧಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವೈಯಕ್ತಿಕ ನೆಲೆಯಲ್ಲಿ ಕಿಟ್ ವಿತರಿಸಿದ್ದಾರೆ . ಸಂಕಷ್ಟದ ಅವಧಿಯಲ್ಲಿ ಯಾರಿಗೂ ತೊಂದರೆ ಯಾಗಬಾರದು ಎಂಬುದೇ ಅವರ ಉದ್ದೇವಾಗಿದೆ ಎಂದರು.

ಈ ಸಂದರ್ಭದಲ್ಲಿ  ಸೇವಾಂಜಲಿ ಟ್ರಸ್ಟ್ ನ ಸಂಚಾಲಕ ಕೃಷ್ಣ ಕುಮಾರ್ ಪೂಂಜಾ, ಉದ್ಯಮಿ ಮಹಾಬಲ ರೈ, ಗ್ರಾ.ಪಂ ಸದಸ್ಯ ಭಾಸ್ಕರ್ ರೈ, ಮೊಹಮ್ಮದ್ ಮೋನು ಫರಂಗಿಪೇಟೆ, ಫೈಝಲ್ ಅಮ್ಮೆಮ್ಮರ್, ವೃಂದ ಪೂಜಾರಿ ಮೇರಮಜಲು ಗ್ರಾ. ಪಂ  ಮಾಜಿ ಅಧ್ಯಕ್ಷರು, ಇಮ್ತಿಯಾಜ್ ತುಂಬೆ ಮುಡಿಪು ಬ್ಲಾಕ್ ಅಧ್ಯಕ್ಷ, ಮಜೀದ್ ಪೆರಿಮಾರ್ ಯುವ ಕಾಂಗ್ರೆಸ್ ಮುಖಂಡರು ಪುದು, ಸಮೀಜ್ ಫರಂಗಿಪೇಟೆ ಸಾಮಾಜಿಕ ಜಾಲತಾಣದ ಮುಖಂಡರು, ಇಸ್ಮಾಯಿಲ್ ಹತ್ತು ಮೈಲು, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ, ಅಂಗವಾಡಿ ಕಾರ್ಯಕರ್ತರ ಅಧ್ಯಕ್ಷೆ ರವಿಕಲಾ, ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ಅಷ್ವಧ್ ಫರಂಗಿಪೇಟೆ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ಧನ್ ಚೆಂಡ್ತಿಮಾರ್ ಉಪಸ್ಥಿತರಿದ್ದು, ಮೇರೆಮಜಲು ಗ್ರಾ.ಪಂ ಸದಸ್ಯೆ ವೃಂದಾ ಪೂಜಾರಿ ಸ್ವಾಗತಿಸಿ ವಂದಿಸಿದರು.

ಪತ್ರಕರ್ತರ ನೋವಿಗೆ ಸರ್ಕಾರದ ಜೊತೆ ಪತ್ರಿಕಾ ಮಾಲೀಕರು ಸ್ಪಂದಿಸಬೇಕು  -ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಒತ್ತಾಯ

ಮುಂಬಯಿ (ಮೂಡುಬಿದಿರೆ), ಮೇ.14: ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ನೋವಿಗೆ ಪತ್ರಿಕಾ ಒಡೆಯರು, ಮಾಲೀಕರು, ಸರ್ಕಾರ ಸ್ಪಂದಿಸಲೇ ಬೇಕು. ಮಾಧ್ಯಮವನ್ನೇ ನಂಬಿದ ಅದೆಷ್ಟೋ ಮಂದಿ ಇಂದು ಉದ್ಯೋಗದ ಭೀತಿ ಅನುಭವಿಸುತ್ತಿದ್ದಾರೆ. ಅರೆಕಾಲಿಕ (ಸ್ಟ್ರಿಂಜರ್ಸ್) ಪತ್ರಕರ್ತರಂತೂ ತೀವ್ರ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಕೂಡಲೇ ಮಾಧ್ಯಮದ ಮಾಲೀಕರು, ಸರ್ಕಾರ ಇವರ ನೋವಿಗೆ ದನಿಯಾಗಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಅಂತರ್ಜಾಲ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಅರೆಕಾಲಿಕ ಪತ್ರಕರ್ತರ ನೋವು ಅರ್ಥವೇ ಆಗೋದಿಲ್ವೇ ? ಓದಿಗೆ ಈಶ ವಿಠಲದಾಸ ಸ್ವಾಮೀಜಿ ಕೊರೊನಾ ವಾರಿಯರ್ಸ್ ಹೇಗೆ ತನ್ನ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೋ ಅದೇ ಮಾದರಿಯಲ್ಲಿ ಪತ್ರಕರ್ತರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸೂಕ್ತ ಗೌರವ , ನೆರವು ಸಿಗುವಂತಾಗಬೇಕು. ಅವರ ಜೀವಗಳಿಗೂ ಬೆಲೆ ಇದೆ ಎಂಬುದನ್ನು ಅರಿಯಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇಂದು ಅರೆಕಾಲಿಕ ಪರ್ತರ್ತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಅವರಿಗೆ ಸೂಕ್ತ ವೇತನ ಭದ್ರತೆಯಿಲ್ಲ. ಅವರಿಗೆ ಸೂಕ್ತ ಆರೋಗ್ಯ ಭದ್ರತೆಗಳಿಲ್ಲ. ಹೀಗಿರುವಾಗ ಮಾಧ್ಯಮದ ಒಡೆತನ ಹೊಂದಿದವರು ಇಂತಹವರ ಕುರಿತು ಚಿಂತಿಸಬೇಕೆಂದು ಒತ್ತಾಯಿಸಿದ್ದಾರೆ. ಆಯಾ ಪತ್ರಿಕೆಯ ಪ್ರಗತಿಗೆ ಅರೆಕಾಲಿಕ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಅಂತಹ ಅರೆಕಾಲಿಕ ಪತ್ರಕರ್ತರಿಗೆ ವೇತನ ಭದ್ರತೆ, ಆರೋಗ್ಯ ಭದ್ರತೆ ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಮಾಲೀಕರು ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಕಷ್ಟದ ಕಾಲದ ಸ್ಪಂದನೆ ತುಳುನಾಡ-ತುಳುವರ ಮಣ್ಣಿನ ಗುಣವಾಗಿದೆ
ಅನಿವಾಸಿ ಬಂಧುಗಳನ್ನು ಅಸ್ಪ ೃಶ್ಯರರಂತೆ ಕಾಣದಿರಿ-ಕೇಮಾರು ಸ್ವಾಮೀಜಿ
ಮುಂಬಯಿ (ಮೂಡುದಿರೆ), ಮೇ.15: ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಜನರಲ್ಲಿ ಭಯ, ಆತಂಕಗಳು, ಸಾಂಕ್ರಮಿಕರೋಗ, ಕಾಯಿಲೆ ಬಗ್ಗೆ ಅನುಮಾನಗಳು ಉಂಟಾಗಿರುವುದು ಸರ್ವೇ ಸಾಮಾನ್ಯ. ಆದರೆ ಕಷ್ಟಕಾಲದಲ್ಲಿನ ಜನತೆಗೆ ಪರೋಪಕಾರಗೈಯುವÀ ಸದ್ಗುಣ ನಮ್ಮ ತುಳುವರದ್ದಾಗಿದೆ. ಇದು ತುಳುನಾಡ ಮಣ್ಣಿನ ಗುಣವೂ ಆಗಿದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅರ್ಥಾತ್ ತುಳುನಾಡು ಈ ಮಟ್ಟದ ಬೆಳವಣಿಗೆ, ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಮೂಲ ಕಾರಣರೇ ನಮ್ಮ ಬಂಧುಗಳ ವಲಸೆ ಜೀವನ ಮತ್ತು ಅನಿವಾಸಿ ತುಳು ಕನ್ನಡಿಗರ ತ್ಯಾಗಮಯ ಬದುಕಾಗಿದೆ. ಇದನ್ನು ನಾವೆಲ್ಲರೂ ಮಗದೊಮ್ಮೆ ಪ್ರದರ್ಶಿಸಿ ಇದನ್ನು ಗೌರವ್ವಾನಿತ ಸ್ಥಾನದಲ್ಲಿ ಕಾಪಾಡಿ ಕೊಳ್ಳುವ ಅಗತ್ಯವಿದೆ ಎಂದು ಮೂಡಬಿದ್ರಿ ಕೇಮಾರು ಸಂದೀಪನಿ ಸಾಧನಾಶ್ರಮದ ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ. 

ನಮ್ಮ ಹಿರಿಯರು ತಮ್ಮ ಜೀವನವನ್ನು ಅಡವಿಟ್ಟು, ಬಡತನ ನಿವಾರಿಸಿಕೊಳ್ಳುತ್ತಾ ಉದರ ಪೆÇೀಷಣೆಯ ಉದ್ದೇಶವಾಗಿಸಿ ಕೌಟುಂಬಿಕ ಬದುಕಿನ ಹಂಗು ತೊರೆದು ಕುಟುಂಬಸ್ಥರ ಬದುಕನ್ನು ಭದ್ರಗೊಳಿಸುತ್ತಾ ಬದುಕು ಕಂಡುಕೊಳ್ಳಲು ಮುಂಬಯಿ ಅಲ್ಲದೆ ದುಬಾಯಿಗಳಂತ ಗಲ್ಫ್‍ಗೂ ಸೇರಿದವರು. ಅವರ ಅವಿರತ ಶ್ರಮದಿಂದಾಗಿಯೇ ಇಂದು  ನಮ್ಮೂರ ಬಂಧುಗಳ ಮುಂಜಿ ಮದುವೆ, ಬಯಕೆ ಇತ್ಯಾದಿಗಳನ್ನು ಗಮ್ಮತ್ತಾಗಿಸಿದ್ದಾರೆ. ಜೊತೆಗೆ ನಮ್ಮಲ್ಲಿನ ದೇವಸ್ಥಾನ, ಗೋಪುರ, ಗುಡಿ, ಶಾಲೆಕಾಲೇಜುಗಳು, ಶಾಲಾ ಅವರಣ, ವೇದಿಕೆಗಳು, ಬಸ್‍ಸ್ಟ್ಯಾಂಡ್ ನಿರ್ಮಾಣ, ಭೂತಕೋಲ ಇನ್ನಿತರ ಹತ್ತಾರು ಧಾರ್ಮಿಕ ಕೈಂಕರ್ಯಗಳ ಕೆಲಸಕ್ಕೂ ಇವರಿಂದಲೇ ಕಾಡಿಬೇಡಿ ಹಣ ಒಗ್ಗೂಡಿಸಿದ್ದನ್ನು ನಮ್ಮಜನತೆ ಏಕಾಏಕಿ ಮರೆಯುತ್ತಿರುವುದು ಸರಿಯಲ್ಲ. ಅವರೆಲ್ಲರೂ ನಮ್ಮ ಕರಳುಬಳ್ಳಿಯ ರಕ್ತ ಸಂಬಂಧಿಗಳು ಮತ್ತು ಬಂಧುಗಳೇ ಆಗಿದ್ದಾರೆ ಆದ್ದರಿಂದ ನಮ್ಮೂರ ಜನರು ಸ್ವಯಂಪ್ರೇರಿತರಾಗಿ ಇವೆಲ್ಲವನ್ನೂ ತಿದ್ದಿಕೊಂಡು ನಮ್ಮೆಲ್ಲರ ಅಭಿವೃದ್ಧಿಗೆ ಪ್ರೇರಕರೂ, ಪೆÇ್ರೀತ್ಸಹಕರಾದ ಅನಿವಾಸಿ ತುಳು ಕನ್ನಡಿಗರನ್ನು ವಿಶೇಷವಾಗಿ ಮುಂಬಯಿನಿಂದ ಬರುವ ಜನರ ಸಂಷ್ಟದ ದಿನಗಳ ಆಗಮನವನ್ನು ವಿರೋಧಿಸದೆ ಎಲ್ಲರನ್ನೂ ಸ್ವಯಂಪ್ರೇರಿತರಾಗಿ ಆಹ್ವಾನಿಸಿ ಆತ್ಮೀಯತೆಯಿಂದ ಗೌರವಯುತ -ವಾಗಿ ಸ್ವಾಗತಿಸಿ ಪುರಸ್ಕರಿಸಬೇಕು ಎಂದು ಕೇಮಾರುಶ್ರೀಗಳು ನಾಡಿನ ಸಮಸ್ತ ಜನತೆಗೆ ಕರೆಯನ್ನೀಡಿದ್ದಾರೆ.

ಈ ಹಿಂದೆಯೂ ಕೊಲೆರಾ, ದಡಾರಾ, ಸಾರ್ಸ್, ಪ್ಲೇಗ್‍ಗಳಂತಹ ಅದೆಷ್ಟೋ ಸಾಂಕ್ರಮಿಕ ರೋಗಗಳು ಬಂದು ಇತಿಹಾಸದ ಪುಟಗಳಲ್ಲಿ ಸೇರಿವೆ. ಕೊರೋನಾ ಅನ್ನುವುದು ಕೂಡಾ ಸ್ವಯಂಕೃತ ಅಪರಾಧವಲ್ಲ ಅದೊಂದು ವೈರಸ್‍ನಿಂದ ಬಂದಂತ ಮಹಾಮಾರಿ. ಆದ್ದರಿಂದ ಕರ್ಮಭೂಮಿಯನ್ನಾಗಿಸಿ ಬದುಕನ್ನು ಕಟ್ಟಿಕೊಂಡ ಅನಿವಾಸಿ ತುಳು ಕನ್ನಡಿಗರನ್ನು ತಮ್ಮ ಸ್ವಂತಃ ಹುಟ್ಟೂರ ಬಂಧುಗಳೇ ನಮ್ಮವರನ್ನೇ ಮಹಾಮಾರಿ ರೋಗಿಗಳೆಂದು ಬಿಂಬಿಸಿ ತವರೂರಿಗೆ ಬರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಇವೆಲ್ಲವನ್ನೂ ಸಮಾಜಕಂಠಕ ಶಕ್ತಿಗಳು, ಸಾಮಾಜಿಕ ಮುಖಂಡರು ಸ್ವಯಂಪ್ರೇರಿತರಾಗಿ ತಿಳಿದು ಮೌಢÀ್ಯತೆ ಮುಕ್ತವಾಗಿಸಬೇಕಾಗಿದೆ. ಯಾವನೇ ಅನಿವಾಸಿಗರನ್ನು ಅಸ್ಪೃಶ್ಯರರು, ಭಯೋತ್ಪಧಕರು, ಉಗ್ರರು, ಕೊಲೆಗಾರರಂತೆ ತೀರಾ ಕೀಳುರೀತಿಯಲ್ಲಿ ಕಾಣುವುದು ಉಚಿತವಲ್ಲ. ನಮ್ಮವರ ಸಂಬಂಧಗಳ ಕನಿಷ್ಟ ಭಾವನಾತ್ಮಕತೆ ನಾವು ಗಾಢವಾಗಿ ತಿಳಿಯಲೇಬೇಕು ಇಲ್ಲವಾದರೆ ಸ್ವಲ್ಪ ದಿನಗಳಲ್ಲಿ ಕೊರೋನ ಮಾಯ ಆಗಬಹುದು ಆದರೆ ನಮ್ಮನಮ್ಮ ಮಧ್ಯೆಯೇ ಕೌಟುಂಬಿಕ, ಸಾಮಾಜಿಕ ಬಿರುಕು ಉದ್ಭವಿಸಿ ಇದು ಜೀವನದುದ್ದಕ್ಕೂ ಮಾಸಿ ಹೋಗದ ಕರಿ ನೆನಪುವಾಗಿ ಪರಿಣಮಿಸಬಲ್ಲದು. ಪರೋಪಕಾರ, ಕಷ್ಟದ ಕಾಲದಲ್ಲಿನ ಸ್ಪಂದನೆ ತುಳುವರ ಮತ್ತು ತುಳುನಾಡ ಮಣ್ಣಿನ ಗುಣವಾಗಿದೆ ಇದನ್ನೆಲ್ಲ ಇಂತಹ ಸಂಧಿಗ್ಧ ಕಾಲದಲ್ಲಿ ಮೆರೆದು ಅನಿವಾಸಿ ಬಂಧುಗಳನ್ನು ಗೌರವಿಸುವ ಅಗತ್ಯವಿದೆ ಎಂದೂ ಕೇಮಾರುಶ್ರೀಗಳು ಜನತೆಗೆ ಎಚ್ಚರಿಸಿದ್ದಾರೆ.
ಅವರೆಲ್ಲರೂ ಅವಿರತ ಶ್ರಮದಿಂದ ದುಡಿದ ಗಳಿಕೆಯ ಬಹುಭಾಗವನ್ನು ನಮಗೆ ತಂದುಕೊಟ್ಟ ಕಾರಣ ನಾವು ಇಂದು ಈ ಮಟ್ಟದಲ್ಲಿ ಬೆಳೆದಿರುವುದನ್ನು ಯೋಜಿಸಬೇಕು. ನಮ್ಮಂತಹ ಸಾಧುಸಂತರು ಮುಂಬಯಿಗೆ ಆಗಮಿಸುವ ವೇಳೆಗೆ ತಾವೆಲ್ಲರೂ ಬರಮಾಡಿ ಕೊಂಡು ಹಿಂದೆ ಕಳುಹಿಸಿ ಕೊಡುವ ಶ್ರದ್ಧೆಯೇ ನಮ್ಮೂರವರ ನಿಮ್ಮ ಕಳಕಳಿ ತೋರುವುದನ್ನೂ ನಾವು ಮರೆಯಬಾರದು. ಅನಿವಾಸಿಗರ ಪ್ರಾಮಾಣಿಕ, ಉದಾರತೆಯ ದೇಣಿಗೆ, ಮುಂಬಯಿ, ಗಲ್ಫ್‍ನ ಹಣದಿಂದಲೇ ನಮ್ಮ ನಾಡಿನ ಬಹುತೇಕ ಅಭಿವೃದ್ಧಿ ಸಾಧ್ಯವಾಗಿದೆ. ಆದ್ದರಿಂದ ಪರೋಪಕಾರಿಗಳಾಗಿ ನಮ್ಮನ್ನೆಲ್ಲಾ ಪೆÇ್ರೀತ್ಸಾಹಿಸಿದ ನಮ್ಮ ಬಂಧುಗಳಿಗೆ ಸ್ವಯಂಪ್ರೇರಿತರಾಗಿ ಸಹಕರಿಸಬೇಕು. ಭವಿಷ್ಯದ ದಿನಗಳಲ್ಲೂ ನಮ್ಮಲ್ಲಿನ ಪ್ರತೀಯೊಂದು ಕೆಲಸ, ಯೋಜನೆಗಳಿಗೂ ಈ ವಿದೇಶಿಗರ, ಅನಿವಾಸಿಗರ ಸಹಕಾರವೇ ವರವಾಗ ಬಲ್ಲದು. ಆದ್ದರಿಂದ ಇವರೆಲ್ಲರನ್ನೂ ಗೌರವಿಸಿ ಪ್ರೀತಿಯಿಂದ ಕಾಣುವ ಜವಾಬ್ದಾರಿ ಊರಿನ ಪ್ರತೀಯೋರ್ವರದ್ದಾಗಿದೆ. ಕ್ವಾರಂಟೈನ್ ಅಂದರೆ ಶಿಕ್ಷೆಯಲ್ಲ ತಮಗೂ ತಮ್ಮ ಪರಿವಾರಕ್ಕೂ ಈ ಬಗೆಗಿನ ತತ್ಸರ, ಮಲತಾಯಿ ಧೋರಣೆಗಳು ಸಲ್ಲದು.

ಅನಿವಾಸಿ ತುಳು ಕನ್ನಡಿಗರ ಅನಿಸಿಕೆಯಂತೆ ಕೊರೊನಾ ಮಾರಿಕ್ಕಿಂತ ಊರಿನ ಜನತೆ, ಜಿಲ್ಲಾಡಳಿತದ ಕಿರಿಕಿರಿ, ಅವಮಾನವೇ ನಮಗೆ ಬಹುದೊಡ್ಡ ಭೀತಿ, ಭಿಮಾರಿ ಆಗಿದೆ. ಊರಿನ ಜನತೆ, ಅಧಿಕಾರಿಗಳೇ ನಮ್ಮನ್ನೆಲ್ಲ ಅಸ್ವಸ್ಥರು (ರೋಗಿಗಳು) ಎಂದೇ ದೃಢಪಡಿಸಿ ಕೊಂಡು ಅವರೊಂದಿಗೆ ನಾವು ಜೊತೆಗೂಡಿ ಬಾಳಲು ನಿರಾಕರಿಸುತ್ತಿರುವುದೇ ಊರವರಲ್ಲಿನ ಸ್ವಾರ್ಥಕ್ಕೆ ಸಾಕ್ಷಿಯಾಗಿದೆ ಅನ್ನುತ್ತಿರುವುದು. ಸ್ವತಃ ಜನ್ಮವೆತ್ತ ತಂದೆತಾಯಿ, ಒಡಹುಟ್ಟಿದ ಅಣ್ಣತಮ್ಮ, ಅಕ್ಕತಂಗಿಯರಿಗೂ ನಾವು ಬೇಡವಾಗಿ ಪರಿಣಮಿಸಿದಂತಿದೆ ಅಂದಾಗ ನಮಗೂ ಬೇಸರ ಅಣಿಸುತ್ತಿದೆ. ಆದ್ದರಿಂದ ನಮ್ಮವರನ್ನೇ ನಾವೂ ಬೇರೆಯೇ ದೃಷ್ಟಿಕೋನದಿಂದ ಕಾಣುವುದು ಸರಿಯಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಗಾಢವಾಗಿ ಚಿಂತನಶೀಲರಾಗಿ ವಿಚಾರ ವಿನಿಮಯ ಮಾಡಬೇಕಾಗಿದೆ.  ಸದ್ಯ ಯಾರು ಯಾರನ್ನು ತಿದ್ದುವುದು ಅನ್ನುವುದೇ ಈಗ ಯಕ್ಷಪ್ರಶ್ನೆಯಾಗಿದೆ. ಜನರನ್ನು ಮನವರಿಸುವುದೇ ದೊಡ್ಡ ಸಾಧನೆಯಗುತ್ತಿದೆ ಎಂದೂ ಶ್ರೀಗಳು ವ್ಯಥೆ ವ್ಯಕ್ತಪಡಿಸಿದ್ದಾರೆ.

ಸರಕಾರ, ಜಿಲ್ಲಾಡಳಿತಗವೂ ಜನತೆಯ ಹಿತದೃಷ್ಟಿಯಿಂದ ಸ್ವಸ್ಥ ಸಮಾಜದ, ಆರೋಗ್ಯದ ಉದ್ದೇಶದಿಂದ ನಿಗಾ ಇರಿಸುವ ಸಲುವಾಗಿ ಸರಕಾರ ಕೈಗೊಂಡ ಕ್ರಮವಷ್ಟೇ  ಕ್ವಾರಂಟೈನ್. ಆದ್ದರಿಂದ ಊರವರು (ಸಾರ್ವಜನಿಕರು) ವಿನಃ ಕಾರಣ ಭಯಪಟ್ಟು ಕೊಳ್ಳುವ ಅಗತ್ಯವಿಲ್ಲ. ಇವರೆಲ್ಲರೂ ದೇಶದ ಇತರ ರಾಜ್ಯಗಳಲ್ಲಿ ನೆಲೆಸಿ ಸದ್ಯ ಊರಿಗೆ ಬರುವವರ (ಇಲ್ಲವಾರದೂ ಎಪ್ರಿಲ್‍ನಿಂದ ಜೂನ್ ತನಕ ಇವರೆಲ್ಲರೂ ನಮ್ಮೊಂದಿಗೆನೇ ಸಂಭ್ರಮದಲ್ಲಿರುತ್ತಿದ್ದರು) ವಿರುದ್ಧ ಹರಿಹಾಯ್ದು ನಿಷ್ಠುರತನ ಕಟ್ಟಿ ಕೊಳ್ಳುವುದು ಸರಿ ಕಾಣದು. ಊರಿಗೆ ಆಗಮಿಸುವ ಅನಿವಾಸಿಗರೂ ಸ್ವಯಂ ಪ್ರೇರಿತರಾಗಿ ಸಂಯಮ ಕಾಪಾಡಿಕೊಂಡು ಕೇಂದ್ರ ಸರಕಾರವೇ ನೀಡಿರುವ ಆದೇಶಗಳನ್ನು ಪರಿಪಾಲಿಸಿ ಸರಕಾರ ಒದಗಿಸುವ ಕನಿಷ್ಟ ದಿನಗಳ ದಿಗ್ಬಂಧನಕ್ಕೆ ಬದ್ಧರಾಗಿ ಜಿಲ್ಲಾಡಳಿತದ ವ್ಯವಸ್ಥೆಗೆ ಸಹಕರಿಸುವಂತೆಯೂ ಕೇಮಾರುಶ್ರೀ ವಿನಂತಿಸಿದ್ದಾರೆ.

ಚಾರ್ಲ್ಸ್ ವಲೇರಿಯನ್ ಫ್ರಾಂಕ್‍ಗೆ ಅಂತಿಮ ನಮನ ಸಲ್ಲಿಸಿ -ಶ್ರದ್ಧಾಂಜಲಿ ಅರ್ಪಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

ಮುಂಬಯಿ (ಬಂಟ್ವಾಳ), ಮೇ.13: ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಮಂಗಳೂರು ಇಲ್ಲಿ ಕಳೆದ ಸೋಮವಾರ ಹೃದಯಾಘಾತದಿಂದ ನಿಧನರಾದ ಹಾಲು ಉತ್ಪಾದಕರ ಸಂಘ ಮಂಡಾಡಿ ಬಂಟ್ವಾಳ ಇದರ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಿದ್ಯುತ್ ಮತ್ತು ನದಿನೀರು ಬಳಕೆದಾರರ ಹಿತರಕ್ಷಣಾ ಸಮಿತಿ (ರಿ.) ಬಂಟವಾಳ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಜಾನಪದ ಕ್ರೀಡೆ ಕಂಬಳದ ನಿಪುಣ,  ಕಂಬಳ ಕೋಣಗಳ ಓಟಗಾರ, ಪ್ರಗತಿಪರ ಕೃಷಿಕ ಚಾರ್ಲ್ಸ್ ವಲೇರಿಯನ್ ಫ್ರಾಂಕ್ ಇವರ ಅಂತ್ಯಕ್ರಿಯೆ ಇಂದಿಲ್ಲಿ  ಬುಧವಾರ ನೆರವೇರಿತು.

ಚಾರ್ಲ್ಸ್‍ರ ಪಾರ್ಥೀವ ದೇಹವನ್ನು ಬಂಟ್ವಾಳ ಬಿ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಇಲ್ಲಿನ ಪೆÇಲ್ತೋಡಿ ನಿವಾಸಕ್ಕೆ ತರುತ್ತಿದ್ದಂತೆಯೇ ಕರ್ನಾಟಕ ರಾಜ್ಯದ ಮಾಜಿ ಸಚಿವ ಬಿ.ರಮಾನಾಥ ರೈ, ಬೂಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಸೇರಿದಂತೆ ಹಲವಾರು ಧುರೀಣರು ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಮತ್ತು ಫ್ರಾಂಕ್ ಪರಿವಾರಕ್ಕೆ ಸಾಂತ್ವಾನ ತಿಳಿಸಿದರು.

ಸಮಾಜಮುಖಿ ಸೇವೆಗಳಲ್ಲಿ ಸದಾ ಮುಚೂಣಿಯಲಿದ್ದು ನಿಷ್ಠಾವಂತ ಸಮಾಜ ಸೇವಕರಾಗಿ ನಾಡಿನಾದಾದ್ಯಂತ ಜನಾನುರೆಣಿಸಿ ಓರ್ವ ಪ್ರಗತಿಪರ ಕೃಷಿಕರಾಗಿದ್ದ ಚಾರ್ಲ್ಸ್ ಪಶು ಪಾಲಕರಾಗಿದ್ದೂ ಪಶುವೈದ್ಯರಂತೆಯೇ ಪಶುಗಳ ಪ್ರಸವದಲ್ಲೂ ಪರಿಣತರೆಣಿಸಿದ್ದರು. ಅಸುಪಾಸಿನ ಪಶುಸಂಗೋಪಕರು, ಕೃಷಿಕರೂ (ಸರಕಾರದ ಆದೇಶ ಉಲ್ಲಂಗಿಸದೆ ಸಾಮಾಜಿಕ ಅಂತರ ಕಾಪಾಡುವಂತೆ ಮಾಡಿದ ಮನವಿಯಂತೆ) ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.

ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಉಡುಪಿ ಮೂಲದ ಎರ್ಮಾಳ್ ಹರೀಶ್ ಶೆಟ್ಟಿ ನೇಮಕ

ಮುಂಬಯಿ, ಮೇ.11: ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರÀತಿಮ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಇವರು ಉತ್ತರ ಮುಂಬಯಿ (ಬೋರಿವಿಲಿ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ.

ಮಹಾನಗರದಾದ್ಯಂತ ಎರ್ಮಾಳ್ ಹರೀಶ್ ಎಂದೇ ಪರಿಚಿತರಾದ, ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷರಾಗಿದ್ದು ಈ ಹಿಂದೆ ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ ಉಪಾಧ್ಯಕ್ಷರಾಗಿದ್ದು, ತಮ್ಮ ಹಲವಾರು ದಶಕಗಳ ಅನುಭವ, ಅವಿರತ ಶ್ರಮದ ಮೂಲಕ ಹೋಟೇಲು ಉದ್ಯಮದಲ್ಲಿ  ಪಳಗಿರುವರು. ಲಿಂಕ್ ವೀವ್ ಫೈನ್ ಡೈನ್ ಕಿಚನ್ ಬೋರಿವಿಲಿ ಹೆಸರಾಂತ ಹೋಟೇಲು ಸಂಸ್ಥೆಗಳ ಕ್ರೀಷ್ವಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷರಾಗಿ  ಮಲಾಡ್ ಇಲ್ಲಿನ ಮಡಾೈಲ್ಯಾಂಡ್‍ನಲ್ಲೂ ಮಂತ್ರ ರೆಸಿಡೆನ್ಸಿ ಹೊಟೇಲು ಹೊಂದಿರುವರು. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿ ಯ ದಕ್ಷ ಸಮಾಜ ಸೇವಕರೆಣಿಸಿದ್ದಾರೆ. ಸೇವೆ ಮತ್ತು ಉದ್ಯಮಗಳಲ್ಲಿ ಸದಾ ಕಾರ್ಯಶೀಲರಾಗಿರುವ ಇವರು ತೆರೆಯ ಮರೆಯಲ್ಲೇ ಸೇವಾ ನಿರತರಾಗಿದ್ದಾರೆ.

ಮುಂಬಯಿನಲ್ಲಿ ಉದ್ಯಮದ ಜೊತೆಜೊತೆಗೆ ವಾರ್ಷಿಕವಾಗಿ ತನ್ನ ಹುಟ್ಟೂರು ಉಡುಪಿ ಜಿಲ್ಲೆಯ ಎರ್ಮಾಳ್ ಇಲ್ಲಿನ ಅಂಬೋಡಿ ಕಲಾ ನಿವಾಸಿ ಆಗಿದ್ದು ತನ್ನ ಇಲ್ಲಿನ 5 ಎಕರೆಗೂ ಮಿಕ್ಕಿದ ಕೃಷಿ ಜಮೀನಿನಲ್ಲಿ ವಾರ್ಷಿಕವಾಗಿ ಭತ್ತ ಬೆಳೆಸಿಯೂ ಮಣ್ಣಿನಮಗ ಎಣಿಸಿಕೊಂಡಿದ್ದಾರೆ.

ಕೊರೋನಾ ನಿಮಿತ್ತ ಕಳೆದ ಸುಮಾರು 50 ದಿನಗಳಿಂದ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟ ಮುಂಬಯಿನಲ್ಲಿ ಹಗಲುರಾತ್ರಿ ಒಂದಾಗಿಸಿ ಶ್ರಮಿಸುತ್ತಾ ದಿನಾ ಸಾವಿರಾರು ಜನರಿಗೆ ಊಟೋಪಚಾರ, ಹಣ್ಣುಹಂಪಲು, ನೀರು, ವಾಹಗಳ ವ್ಯವಸ್ಥೆ, ಇದೀಗ ತಮ್ಮ ಅವಿರತ ಶ್ರಮದಿಂದ ಸಾರ್ವಜನಿಕವಾಗಿ ಮಂಗಳೂರು ಬಸ್ ಪ್ರಯಾಣಕ್ಕೆ ಕಾರಣಕರ್ತರಾಗಿ ಭಾರೀ ಪ್ರಶಂಸೆಗೆ ಪಾತ್ರರಾದ ಕೊರೋನಾ ವಾರಿಯರ್ಸ್ ಎಂದೆಣಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi