Brief Mumbai - Mangalore news with pictures
Kemmannu News Network, 16-11-2020 09:30:51
ರುಡ್ಸೆಟ್ ಸಂಸ್ಥೆ: ಆಡಳಿತ ವಿಭಾಗದ ನೂತನ ಕಟ್ಟಡ ಉದ್ಘಾಟನೆ
ಉಜಿರೆ: ಕೆನರಾ ಬ್ಯಾಂಕ್ನಲಿ ್ಲಸಂಪೂರ್ಣವಾಗಿ ಆಧುನಿಕ ತಂv À್ರಜ್ಞಾನ ಬಳಸಿದ್ದು ಸಿಂಡಿಕೇಟ್ ಬ್ಯಾಂಕ್ನ
ಗ್ರಾಹಕರು ಯಾವುದೇ ಕೆನರಾ ಬ್ಯಾಂಕ್ ಶಾಖೆಗೆ ಹೋಗಿ ತಮ್ಮ ವ್ಯವಹಾರ ನಡೆಸಬಹುದು ಎಂದು
ಕೆನರಾ ಬ್ಯಾಂಕ್ನ ಆಡಳಿತ ನಿರ್ದೇಶಕಿ ಎ. ಮಣಿಮೇಖಲಾಯಿ ಹೇಳಿದರು.
ಅವರು ಗುರುವಾರ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ
ಆಡಳಿv À ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ವಿವಿಧ ಯೋಜನೆಯಡಿ ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಾಲ
ನೀಡುತ್ತಿದೆ. ನಿರುದ್ಯೋಗಿಗಳು ರುಡ್ಸೆಟ್ ಸಂಸ್ಥೆ ಸಂಸ್ಥೆಗಳ ಮೂಲಕ ತರಬೇತಿ ಪಡೆದು ಸ್ವ-ಉದ್ಯೋಗ
ಪ್ರಾರಂಭಿಸಲು ಕೆನರಾ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಶೇ. 75 ರಷ್ಟು ಮಂದಿ ಸಾಲ
ಮರುಪಾವತಿಸಿ ಯಶಸ್ವಿಯಾಗಿ ಸ್ವ-ಉದ್ಯೋಗ ಮಾಡುತ್ತಿದ್ದಾರೆ ಎಂದು ಅವರು ಮೆZ À್ಚುU É
ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮ¸ À್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ,
ಭಾರತದಲ್ಲಿ ಅಪಾರ ಜನಸಂಖ್ಯೆ ಎಂದೂ ಸಮಸ್ಯೆ ಆಗಲಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಭೆ,
ಬುದ್ಧಿವಂತಿಕೆ ಹಾಗೂ ಸಾಮಥ್ರ್ಯ ಇರುತ್ತದೆ. ಅವರಿಗೆ ಸಕಾಲದಲ್ಲಿ ಮಾಹಿತಿ ಹಾಗೂ ತರಬೇತಿ ನೀಡಿ
ಸ್ವ-ಉದ್ಯೋಗ ಮಾಡಲು ಪ್ರೇರಣೆ ನೀಡುವುದೇ ರುಡ್ಸೆಟ್ ಸಂಸ್ಥೆಯ ಉದ್ದೇಶವಾಗಿದೆ. 1982 ರಲ್ಲಿ
ಉಜಿರೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ರುಡ್ಸೆಟ್ ಸಂಸ್ಥೆ ಇಂದು ದೇಶದೆಲ್ಲೆಡೆ ಯಶಸ್ವಿಯಾಗಿ
ಕಾರ್ಯನಿರ್ವಹಿಸುತ್ತಿದೆ.
ಮಹಿಳೆಯರು ಕೂಡಾ ಸ್ವ-ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು
ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ನ ಮಹಾಪ್ರಬಂಧಕರುಗಳಾz À ರಾಕೇಶ್ ಕಶ್ಯಪ್ ಮತ್ತು ಬಿ. ಯೋಗೀಶ್
ಆಚಾರ್ಯ, ಡಿ.ಜಿ.ಎಂ. ಸತ್ಯಮೂರ್ತಿ ಹಾಗೂ ಬಿಪುಲ್ಚಂದ್ರ ಶಹಾ, ರುಡ್ಸೆಟ್ ಸಂಸ್ಥೆಗಳ ಕೇಂದ್ರೀಯ
ಆಡಳಿv À ನಿರ್ದೇಶಕ ಎಂ. ಜನಾರ್ದನ್ ಮತ್ತು ನಿರ್ದೇಶಕ ಪಿ.ಸಿ. ಹಿರೇಮಠ ಉಪಸ್ಥಿತರಿದ್ದರು.
ಯುವ ಪೀಳಿಗೆಗೆ ಮಾದರಿ ಸಮಾಜ ಸೇವಕರೆಣಿಸಿದ ಡಾ| ಅಬ್ದುಲ್ ಶಕೀಲ್ ಹುಟ್ಟುಹಬ್ಬ
ದೇರಳಕಟ್ಟೆ ಸ್ನೇಹಿತರ ಬಳಗದಿಂದ ಬೆಳ್ಮದ ಸೇವಾಶ್ರಮದ ನಿವಾಸಿಗಳಿಗೆ ಅನ್ನದಾನ ಮಂಗಳೂರು (ಆರ್ಬಿಐ), ನ.12: ಮಂಗಳೂರು ಇಲ್ಲಿನ ದೇರಳಕಟ್ಟೆ ರೆಂಜಡಿ ನಿವಾಸಿ ಆಗಿದ್ದು ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಂಎ ಜಾಹೀರಾತು ಮತ್ತು ಒಳಾಂಗಣ ಸೌದಿ ಅರೇಬಿಯಾ, ಇದರ ವ್ಯವಸ್ಥಾಪಕ ನಿರ್ದೇಶಕ, ಗ್ರೇ ಲೈನ್ ಜಾಹೀರಾತು (ಯುಎಇ) ಇದರ ವ್ಯವಸ್ಥಾಪಕ ನಿರ್ದೇಶಕ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕಆಗಿ ಅನಿವಾಸಿ ಭಾರತೀಯ ಉದ್ಯಮಿ
(ಎನ್ಆರ್ಐ), ಸಮಾಜ ಸೇವಕ ಅಬ್ದುಲ್ ಶಕೀಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ದೇರಳಕಟ್ಟೆ ಸ್ನೇಹಿತರ ಬಳಗವು ಇಂದಿಲ್ಲಿ ದೇರಳಕಟ್ಟೆ ಬೆಳ್ಮದ ಸೇವಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಊಟ ವಿತರಿಸಿ ಹುಟ್ಟುಹಬ್ಬಆಚರಿಸಿ ಮಾನವೀಯತೆಯೊಂದಿಗೆ ಸೌಹಾರ್ದತೆ ಮೆರೆದರು.
ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ ಸತ್ತಾರ್ ಅತಿಥಿü ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ ಡಾ| ಶಕೀಲ್ ಅವರು ಉದ್ಯಮದ ಜೊತೆಗೆ ಸಮಾಜಿಕ ಕಳಕಳಿಯಲ್ಲಿ ತೊಡಗಿಸುವ ಮೂಲಕ ಬೆಳ್ಮ ಗ್ರಾಮಕ್ಕೆ ಹಾಗೂ ನಮ್ಮ ಜಿಲ್ಲೆಯೊಂದಿಗೆ ಕರುನಾಡಹಿರಿಮೆಯ ಸುಪುತ್ರರಾಗಿದ್ದಾದೆ ಇದು ನಮ್ಮೆಲ್ಲರ ಹೆಮ್ಮೆಯಾಗಿದೆ. ಪ್ರಸಕ್ತ ಯುವ ಜನಾಂಗಕ್ಕೆ ಶಕೀಲ್ ಅವರು ಮಾದರಿ ಆಗಿದ್ದಾರೆ ಎಂದರು.
ಬೆಳ್ಮ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಕಬೀರ್.ಡಿ ಸೇವಾಶ್ರಮದ ನಿವಾಸಿಗಳಿಗೆ ಅನ್ನ ವಿತರಿಸಿ ಮಾತನಾಡಿ ಊರಿನ ಸಂಘ ಸಂಸ್ಥೆಗಳಿಗೆ ಆಧಾರವಾಗಿ ನಿಂತು ಸ್ಥಳೀಯ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆಯುವ ಮೂಲಕ ವಿಭಿನ್ನ ಸೇವೆಮಾಡಿ ಸೈಂಟ್ ಪಾವ್ಲ್’ಸ್ ಇಂಟರ್ನೇಶನಲ್ ಯುನಿವರ್ಸಿಟಿ-ಎಸ್ಪಿಐಯು (ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ) ಶೈಕ್ಷಣಿಕ ಸಂಸ್ಥೆಯಿಂದ ಗುರುತಿಸಲ್ಪಟ್ಟು ಅಲ್ಲಿನ ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವದಲ್ಲಿಗೌರವ ಡಾಕ್ಟರೇಟ್ಗೆ ಭಾಜನರಾಗಿ
ದೇರಳಕಟ್ಟೆ ಪ್ರದೇಶವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇಂತಹ ವ್ಯಕ್ತಿಯ ಹುಟ್ಟು ಹಬ್ಬವನ್ನು ಸಂಭ್ರಮಿಸುದು ಅರ್ಥಪೂರ್ಣ ಎಂದು ಹೇಳಿದರು.
ಸೇವಾಶ್ರಮದ ವ್ಯವಸ್ಥಾಪಕ ಎಸ್.ಕೃಷ್ಣಪ್ಪ, ಹಯಾತುಲ್ ಇಸ್ಲಾಂ ಮದರಸದ ಹಳೇ ವಿದ್ಯಾಥಿರ್ü ಸಂಘದ ಅಧ್ಯಕ್ಷ ಅಶ್ರಫ್ ಡಿ.ಎ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾ ಆಧ್ಯಕ್ಷ ನಿಯಾಝ್ ಡಿ.ಎಂ,ಇಕ್ಬಾಲ್ ಹೆಚ್.ಆರ್, ನೌಫಲ್.ಬಿ, ಶಮೀರ್ ಡಿ.ಎ, ಅಶ್ರಫ್ ತಾಜ್, ಫೈಝಾಲ್ ಡಿ.ಎಂ, ರಫೀಕ್.ಡಿ ಮತ್ತಿತರ ಧುರೀಣರು
ಉಪಸ್ಥಿತರಿದ್ದು ಡಾ| ಶಕೀಲ್ ಅವರಿಗೆ ಶುಭಾರೈಸಿದರು.
ಪೇಜಾವರ ಮಠದ ಮಧ್ವ ಭವನದಲ್ಲಿನ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ನೆರೆವೇರಿಸಲ್ಪಟ್ಟ ಗೋಪೂಜೆ
ಗೋವುಗಳ ಮೂಲಕ ಭಗವಂತ ನಮ್ಮಲ್ಲಿ ನೆಲೆಯಾಗುವನು : ಪೇಜಾವರಶ್ರೀ
(ಚಿತ್ರ/ ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.14: ಭಗವಂತ ಎಲ್ಲಿಬೇಕೋ ಅಲ್ಲಿ ಅವತರಿಸ ಬಲ್ಲನು. ಆದರೆ ಮನುಕುಲಕ್ಕೆ ಹುಟ್ಟು
ಅನಿವಾರ್ಯ. ಭಗವಂತನದ್ದು ಅವತಾರ ನಮ್ಮನಿಮ್ಮ ಹಾಗೆ ಹುಟ್ಟುವಲ್ಲ. ಇಂತಹ ಭಗವಂತ ಕೃಷ್ಣನಾಗಿ
ಮಧುರೆಯಲ್ಲಿ ಅವತರಿಸಿ ಅರೆಕ್ಷಣ ಅಲ್ಲಿ ನಿಲ್ಲದೆ ಮರುಕ್ಷಣವೇ ಊರನ್ನು ತೊರೆದಿದ್ದನು ಕಾರಣ ಕಂಸನ
ಭಯದಿಂದಲ್ಲ ಬದಲಾಗಿ ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನಿರಲು ಯೋಗ್ಯನಲ್ಲ ಮತ್ತು
ಇದನ್ನು ಅನ್ನುವುದನ್ನು ನಾನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ತೊರೆದಿದ್ದನು ಎಂದು
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದಲ್ಲಿನ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ಗೋಪೂಜೆ
ನೆರವೇರಿಸಿ ನರಕ ಚತುರ್ದಶಿ, ದೀಪಾವಳಿ, ಲಕ್ಷಿ ್ಮೀಪೂಜೆ, ಆಕಾಶ ದೀಪ ಸಂಭ್ರಮಿಸಿ ನೆರೆದ ಸದ್ಭಕ್ತರನ್ನು
ಉದ್ದೇಶಿಸಿ ಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳವರು ಮಾತನಾಡಿ ಕಂಸನ ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ
ನಡೆಯುತ್ತಿತ್ತು. ಯಾಕೆಂದರೆ ನಾವು ಹಸುರರು ಎಂದು ಆತನಿಗೆ ಅರಿವುಯಿತ್ತು. ದೇವತೆಗಳು ನಮ್ಮ
ವಿರೋಧಿಗಳು ಅವರನ್ನು ಬಗ್ಗುಬಡಿಯಬೇಕು ಆದರೆ ಅವರು ಸ್ವರ್ಗಲೋಕದಲ್ಲಿದ್ದಾರೆ ಆದ್ದರಿಂದ ಅವರಲ್ಲಿ
ಹೇಗೆ ಹೋರಾಟ ನಡೆಸುವುದು ಎಂಬ ಚಿಂತೆ ಕಂಸನಲ್ಲಿ ಕಾಡುತ್ತಿತ್ತು. ಆದ್ದರಿಂದ ಅವರಿಗೆ ಆಹಾರ ಪೂರೈಕೆ
ಏನು ನಡೆಯುತ್ತಿತ್ತೋ ಅದನ್ನೇ ನಿಲ್ಲಿಸಿದರೆ ಸರಿಯಾದ ಪಾಠ ಕಲಿಸಬಹುದು ಎಂದು ಮನವರಿಕೆ ಮಾಡಿದ್ದ
ಕಂಸದೇವತೆಗಳ ಆಹಾರಕ್ಕೆ ತಡೆಯೊಡ್ಡಿದ್ದನು. ಆದ್ಯಂ ಸುರಾಣ ಮಾಹಾರಅಂದರೆ ಗೋವಿನ, ಆಕಾಲ ತುಪ್ಪ
ಏನಿದೆ ಅದು ದೇವತೆಗಳ ಆಹಾರವಾಗಿತ್ತು. ಅದನ್ನೇ ನಿರ್ನಾಮ ಮಾಡಿದರೆ ದೇವತೆಗಳಿಗೆ ಆಹಾರವಿಲ್ಲದೆ
ಕ್ಷಿಣಿಸುತ್ತಾರೆ. ಅದಕ್ಕಾಗಿಗೂವುಗಳನ್ನೇಲ್ಲಾ ಸಂಹಾರ ಮಾಡಿದ್ದರು. ಸ್ವತಃ ದುಷ್ಟರಿಗೂ ರಾಜನ ಆಜೆ
್ಞ
ಯಿತ್ತು.
ಆದ್ದರಿಂದ ಹಿಂಸೆ ಅವರಿಗೆ ಆಟವಾಗಿ ಹೋಗಿತ್ತು. ಇಂತಹ ರಾಜ್ಯದಲ್ಲಿ ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಾ
ಇದೆಯೋ ಅಲ್ಲಿ ನಾನು ಇರುವುದಿಲ್ಲ ಅನ್ನುವುದನ್ನು ನಾನು ಜಗತ್ತಿಗೆ ತೋರಿಸಬೇಕು. ಆ ಮೂಲಕ ಇಲ್ಲಿಯೇ
ಅವತರಿಸಿ ಮರುಕ್ಷಣವೇ ರಾಜ್ಯವನ್ನು ತೊರೆಯಬೇಕು ಆ ಮೂಲಕ ಜಗತ್ತಿಗೆ ಒಂದು ಸಂದೇಶ ಸಾರಬೇಕು
ಎಂದು ಎಲ್ಲಿ ಗೋವುಹತ್ಯೆ ನಡೆಯುತ್ತೆ ಅಲ್ಲಿ ನಾನು ಇರುವುದಿಲ್ಲಎಂದು ಕಂಸನ ರಾಜ್ಯ ಮಧುರಾನಗರವನ್ನು
ತೊರೆದನು. ಆದರೆ ಎಲ್ಲಿ ಬೇಕಾದರೂ ಹೋಗ ಬಹುದಾಗಿತ್ತಾದರೂ ಎಲ್ಲೆಲ್ಲೂ ಹೋಗದೆ ನೇರವಾಗಿ
ನಂದಾಗೋಕುಲಕ್ಕೆ ಹೋದನು. ಎಲ್ಲಿ ಗೋವುಗಳ ಪೆÇೀಷಣೆ ನಿರಂತರವಾಗಿ ನಡೆಯುತ್ತದೆಯೋ ಅದು
ನಂದಾಗೋಕುಲ. ಅಲ್ಲಿ ಭಗವಂತ ಹೋದನು. ಆ ಮೂಲಕ ಜಗತ್ತಿಗೆ ಒಂದು ದೊಡ್ಡ ಸಂದೇಶ ನೀಡಿ
ಗೋಹತ್ಯೆ ಆಗುವಲ್ಲಿ ನಾನು ಇರುವುದಿಲ್ಲ
ಅಂತಹ ಕೃಷ್ಣನ ಭಕ್ತರು ಎಂದು ಕೊಳ್ಳುವವರು ನಾವು ನಮ್ಮ ಮನೆಯಲ್ಲಿ ಭವಂತನು ಇರಬೇಕು ಎಂದಿದ್ದರೆ
ನಾವೂ ಕೂಡಾ ಗೋವುಗಳ ಪೆÇೀಷಣೆ ಮಾಡಬೇಕು. ಆವಾಗಲೇ ಭಗವಂತ ನಮ್ಮ ಮನೆಮನಗಳಲ್ಲೂ
ಉಳಿಯುತ್ತಾನೆ. ನಾವು ಇಂದು ಜೀವನೋಪಾಯಕ್ಕಾಗಿ ಎಲ್ಲೆಲ್ಲೂ ವಾಸವಾಗಿರುತ್ತೇವೆ ಅಲ್ಲಿ ಗೋವುಗಳ
ಪೆÇೀಷಣೆ ಅಸಾಧ್ಯವಾದರೂ ಎಲ್ಲಿ ಗೋವುಗಳ ಪೆÇೀಷಣೆ ನಡೆಯುತ್ತವೆ ಅಲ್ಲಿಯಾದರೂ ನಾವು
ಕೈಜೋಡಿಸಿದರೂ ಅಷ್ಟೇ ಸಾಕು. ಕಾರಣ ಭಗವಂತ ಗೋವಿನ ಮಾತನ್ನು ಬೇಗನೇ ಕೇಳುತ್ತಾನೆ. ಆ
ಗೋವುಗಳ ಮೂಲಕ ಭಗವಂತ ನಮ್ಮಲ್ಲಿ ನೆಲೆಯಾಗುವನು. ಈ ದೀಪಾವಳಿ ಪರ್ವಕಾಲದಲ್ಲಿ ಮುಂಬಯಿ
ಮಹಾಜನತೆ ನೀವೆಲ್ಲಭಗವದ್ಭಕ್ತರು ಇಲ್ಲಿ ಗೋವುಪೂಜೆ ನೆರವೇರಿಸಿದ್ದೀರಿ ತಮ್ಮೆಲ್ಲರಿಗೂ ಕೃಷ್ಣನ ಅನುಗ್ರಹ
ದಯಪಾಲಿಸಲಿ ಎಂದರು.
ಕರ್ನಾಟಕದ ಉಡುಪಿ ಜಿಲ್ಲೆಯ ಬ್ರಹ್ಮಾವರಸನಿಹದ ಉತ್ತರದಲ್ಲಿ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು
ನೀಲಾವರ ಇಲ್ಲಿಉಡುಪಿ ಪೇಜಾವರ ಮಠದ ಗೋಶಾಲೆ ಇದೆ. ಇದು ಶ್ರೀ ಕೃಷ್ಣೈಕ್ಯ ಶ್ರೀ ಪೇಜಾವರ
ಅಧೋಕ್ಷಜ ಮಠಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೂರದೃಷ್ಠಿತ್ವದ
ಯೋಜನೆ. ಬೀದಿಯಲ್ಲಿರುವ ಮತ್ತು ವಯಸ್ಸಾದ ಹಸುಗಳಿಗೆ ಇದು ಆರೈಕೆಯ ತಾಣವಾಗಿದೆ. ಈ
ಗೋಶಾಲೆಯಲ್ಲಿ ಸಾವಿರಾರು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇಲ್ಲಿ ಸರೋವರ ನಾಮದ ಕೆರೆ
ನಿರ್ಮಿಸಿ ಕೆರೆಯ ಮಧ್ಯದಲ್ಲಿ ಶ್ರೀ ಕೃಷ್ಣನ ದೇವಾಲಯ ಕಟ್ಟಲಾಗಿದೆ. ಇಲ್ಲೂ ತಮ್ಮ ಸೇವೆಗೈದು ಗೋವುಗಳ
ಪೆÇೀಷಣೆಮಾಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಪೇಜಾವರ ಶ್ರೀಗಳು ತಿಳಿಸಿದರು.
ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ಡಾ| ರಾಮದಾಸ
ಉಪಾಧ್ಯಾಯ ರೆಂಜಾಳ ಪೂಜಾಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ
ವಿದ್ಯಾಪೀಠ ಪ್ರತಿಷ್ಠಾನದ ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಪೇಜಾವರ ಮಠದ ಹರಿ ಭಟ್
ಪುತ್ತಿಗೆ, ನಿರಂಜನ್ ಗೋಗ್ಟೆ, ಅದಮಾರು ಮಠ ಮುಂಬಯಿ ಶಾಖಾ ಪ್ರಬಂಧಕ ಪಡುಬಿದ್ರಿವಿ.ರಾಜೇಶ್
ರಾವ್, ಶ್ರೀನಿವಾಸ ಭಟ್ ಪರೇಲ್, ಪುರೋಹಿತರುಗಳಾದಅರವಿಂದ ಬನ್ನಿಂತ್ತಾಯ, ವಿಷ್ಣುತೀರ್ಥ ಸಾಲಿ,
ಪವನ್ ಭಟ್, ಆದಿತ್ಯ ಕಾರಂತ, ರಾಮಕೃಷ್ಣ ದಾಂಬ್ಳೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ
ಚಂದ್ರಶೇಖರಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ರವೀಂದ್ರ ಶಾಂತಿ, ಪ್ರಭಾತ್ ಕಾಲೋನಿ ಸಾರ್ವಜನಿಕ
ಗಣೇಶೋತ್ಸವ ಮಂಡಳ್ ಅಧ್ಯಕ್ಷ ಶೇಖರ್ ಜೆ.ಸಾಲಿಯಾನ್, ಸಮಾಜ ಸೇವಕರಾದ ವೈ.ಟಿ ಶೆಟ್ಟಿ,
ಜಗದಾಂಬಾ ಶೆಟ್ಟಿ, ಎಸ್. ಸೌಭಾಗ್ಯ, ದೀಪಕ್ ಗಟ್ಟಿ, ಚಂದ್ರಕಾಂತ್ ಚೌಧುರಿ ಮತ್ತಿತರರು ಹಾಜರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link