Breif Mumbai Mangalore News with Pictures
Kemmannu News Network, 18-01-2021 09:12:53
5ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಬೆಳೆದು ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕಟಿಬದ್ಧವಾಗಿದೆ. ಈ ಸಂಬಂಧ ಯೋಜನೆಯ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಯೋಜನೆಯ ಪಾಲುದಾರರೆಲ್ಲರೂ ಸ್ವಚ್ಛತೆಯ ಬಗ್ಗೆ ಅಭಿಮಾನವುಳ್ಳವರಾಗಿದ್ದಾರೆ. ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ. ಸ್ವಚ್ಛತೆಯ ಪರಿಕಲ್ಪನೆ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸ್ವಚ್ಛ ಶ್ರದ್ಧಾ ಕೇಂದ್ರ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜನ ಸಹಭಾಗಿತ್ವದ ಈ ಕಲ್ಪನೆ ಸಾಮಾನ್ಯರಲ್ಲಿ ಬಹಳಷ್ಟು ಉತ್ಸಾಹವನ್ನು ಮೂಡಿಸಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಪೂಜ್ಯ ಡಾ! ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು 2016ರಿಂದ ಪ್ರಾರಂಭಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿರುತ್ತದೆ. ಪ್ರಸ್ತುತ ವರ್ಷ ಜನವರಿ 14 ಮಕರ ಸಂಕ್ರಾಂತಿಯ ಸುಸಂದರ್ಭದಲ್ಲಿ ಕರ್ನಾಟಕ ರಾಜ್ಯದಾದ್ಯಂತ “ನಮ್ಮೂರು ನಮ್ಮ ಶ್ರದ್ಧಾಕೇಂದ್ರ” ಕಾರ್ಯಕ್ರಮದಡಿಯಲ್ಲಿ ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಎಂಬ ದಿಟ್ಟ ನಿಲುವಿನೊಂದಿಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶ ನೀಡಲಾಗಿದೆ.
ಈ ಸಂದೇಶಕ್ಕೆ ಸ್ಪಂದಿಸಿದ ಭಕ್ತಾದಿಗಳು ರಾಜ್ಯಾದ್ಯಂತ ಮಂದಿರ, ಬಸದಿ, ಚರ್ಚ್ ಹಾಗೂ ಮಸೀದಿ ಒಳಗೊಂಡಂತೆ ಸುಮಾರು ಕ್ಕೂ 12164 ಕ್ಕೂ ಮಿಕ್ಕಿದ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಚತಾ ಮಹಾ ಅಭಿಯಾನವನ್ನು ಕೈಗೊಂಡು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿರುತ್ತಾರೆ.
ಈ ಶ್ರದ್ಧಾಕೇಂದ್ರಗಳ ಅಭಿಯಾನದಲ್ಲಿ ದೇವಳದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ ಸದಸ್ಯರು, ಸ್ವಚ್ಛತಾ ಸೇನಾನಿಗಳು, ನವಜೀವನ ಸಮಿತಿ ಸದಸ್ಯರು, ಊರ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕರ್ತರು ಮುಂತಾದವರು ಕೈ ಜೋಡಿಸಿದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.
ನಡೆದ ಸ್ವಚ್ಚತಾ ಕಾರ್ಯಕ್ರಮಗಳ ವಿವರ :
ದೇವಸ್ಥಾನದ ಸುತ್ತಮುತ್ತಲಿನ ಗಿಡ ಘಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ.
ಮಂದಿರ, ಮಸೀದಿಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸಲಾಗಿದೆ
ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ನಾನಕಟ್ಟೆ, ನದಿ ತೀರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪ್ಲಾಸ್ಟಿಕ್, ಬಟ್ಟೆಬರೆ ಕಸಗಳನ್ನು ನದಿಗೆ ಎಸೆಯದಂತೆ ಅರಿವು ಮೂಡಿಸಲಾಗಿದೆ.
ಚರ್ಚ್, ಮಸೀದಿಗಳ ಸ್ವಚ್ಛತೆ ನಡೆಸಲಾಗಿದೆ.
ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ.
ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಚೀಲ ಬಳಕೆ ಮಾಡಲಾಗಿದೆ.
ಜಾತ್ರೆ, ವಿಶೇಷ ಕಾರ್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸಲಾಗಿದೆ
ತ್ಯಾಜ್ಯಗಳನ್ನು ಬಿಸಾಡಲು ಬಿದಿರಿನ ಬುಟ್ಟಿ, ಡಸ್ಟ್ಬಿನ್, ತಗಡಿನ ಡಬ್ಬ ಇತ್ಯಾದಿಗಳನ್ನು ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಹಾಕಲಾಗಿದೆ.
ಸ್ವಚ್ಚತೆ ಕಾರ್ಯ ಕೈಗೊಂಡ ಜಿಲ್ಲೆಗಳು: 37 (ಯೋಜನೆಯ ಪ್ರಕಾರ)
ಒಟ್ಟು ತಾಲೂಕು: 180
ಶ್ರದ್ಧಾಕೆಂದ್ರಗಳು:
ದೇವಸ್ಥಾನ ಚರ್ಚ್ ಮಸೀದಿ ಇತರೆ ಒಟ್ಟು
11,590 94 262 218 12,164
• ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಕರ ಒಟ್ಟು ಸಂಖ್ಯೆ: 2,86,063
`ವರ್ಷದ ವ್ಯಕ್ತಿ ಸಾಧಕ ಪ್ರಶಸ್ತಿ’ ಭಾಜಕ ಕೆ.ಅಭಯಚಂದ್ರ ಜೈನ್ ದಂಪತಿಗೆ ಸನ್ಮಾನ
108 ದಿವ್ಯ ಸಾಗರ ಮುನಿ ರಾಜರ ಪಾವನ ದಿವ್ಯೋಪಸ್ಥಿತಿಯಲ್ಲಿ ಗೌರವಾರ್ಪಣೆ
ಮುಂಬಯಿ (ಆರ್ಬಿಐ), ಜ.12: ಮಾಹೆ ವಿ ವಿ ಅಕಾಡೆಮಿ ಅಪ್ ಜನರಲ್ ಎಜ್ಯುಕೇಶನ್ ಮಣಿಪಾಲ ಹಾಗೂ ಮಣಿಪಾಲ ಮೀಡಿಯಾ ನೆಟ್ವರ್ಕ್ ಜಂಟಿ ಆಶ್ರಯದಲ್ಲಿ ಕೊಡಮಾಡುವ 2021ನೇ ಸಾಲಿನ ಬಾರಿಯ `ವರ್ಷದ ವ್ಯಕ್ತಿ ಸಾಧಕ ಪ್ರಶಸ್ತಿ’ ಗೌರವಕ್ಕೆ ಭಾಜನರಾದ ಮೂಡುಬಿದಿರೆಯ ಹೆಮ್ಮೆಯ ಸಜ್ಜನ ರಾಜಕಾರಣಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರೂ ಓರ್ವರಾಗಿದ್ದು ಶ್ರೀಯುತರನ್ನು ಜೈನ ಸಮಾಜದ ಪರವಾಗಿ ಹರಸಿ ಅಭಿನಂದಿಸುವ ಕಾರ್ಯಕ್ರಮ ಕಳೆದ ಭಾನುವಾರ (ಜ.10) ಜೈನಕಾಶಿ ಮೂಡುಬಿದಿರೆ ಇಲ್ಲಿನ ಜಗತ್ಪ್ರಸಿದ್ದ ಶ್ರೀ ಜೈನ ಮಠದ ಸಾವಿರ ಕಂಬದ ಬಸದಿಯಲ್ಲಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟಿತು.
108 ದಿವ್ಯ ಸಾಗರ ಮುನಿ ರಾಜರ ಪಾವನ ಸಾನ್ನಿಧ್ಯದಲ್ಲಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕರ ದಿವ್ಯೋಪಸ್ಥಿತಿ ಹಾಗೂ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ನಡೇಸಲಾದ ಸರಳ ಕಾರ್ಯಕ್ರಮದಲ್ಲಿ ಅಭಯಚಂದ್ರ ಜೈನ್ ಮತ್ತು ಮಂಜುಳಾ ಅಭಯಚಂದ್ರ ದಂಪತಿಗೆ ಶ್ರೀವರ್ಯರು ಶಾಲು ಹೊದೆಸಿ, ಫಲಪುಷ್ಪ, ಶ್ರೀಫಲ ನೀಡಿ ಅಭಿನಂದಿಸಿ ಆಶೀರ್ವಾದಿಸಿದರು.
ಗೌರವಕ್ಕೆ ಉತ್ತರಿಸಿ ಅಭಯಚಂದ್ರ ಜೈನ್, ಜನರ ಸೇವೆಗಾಗಿ ರಾಜಕೀಯ ದಲ್ಲಿದ್ದು ಜನರ ಪ್ರೀತಿ ಗಳಿಸಿದ್ದೇನೆ ಮಣಿಪಾಲ ಸಮೂಹ ಸಂಸ್ಥೆ ಉದಯವಾಣಿ ಬಳಗ ನಾವು ಮಾಡಿದ ಜನಪರ ಕಾರ್ಯ ಗುರುತಿಸಿ ಅಭಿನಂದಿಸಿರುವುದು ನನುಗೆ ಸಂತೋಷವಾಗಿದೆ ಎಂದೇಳಿ ಸಮಾಜ ಹಾಗೂ ಜನರ ಋಣ ತೀರಿಸುವ ಕೆಲಸ ಮುಂದೆಯೂ ಮುಂದುವರೆಸಿ ಕೊಂಡು ಹೋಗುದಾಗಿ ತಿಳಿಸಿದರು.
ಬಸದಿ ಮೋಕ್ತೇಸರ ದಿನೇಶ್, ಜಯರಾಜ್ ಕಂಬ್ಳಿ, ಶ್ವೇತಾ, ಅರಮನೆ ಕುಲದೀಪ ಜೈನ್, ಅಭಯ್ ಕುಮಾರ್, ಶೀತಲ್ ಇಂದ್ರ ಬೆಂಗಳೂರು, ಪದ್ಮ ಪ್ರಸಾದ್, ಎಸ್.ಪಿ ವಿದ್ಯಾಕುಮಾರ್, ಚಕ್ರಶ್ ಅರಿಗ ಮೊದಲಾದವರು ಉಪಸ್ಥಿತರಿದ್ದರು. ಪಟ್ಣ ಶೆಟ್ಟಿ ಸುದೇಶ್ಕುಮಾರ್ ಸ್ವಾಗತಿಸಿದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಶೈಲೇಂದ್ರ ಶುಭ ಹಾರೈಸಿದರು. ಕೆ.ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಜೈನ ಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ವಂದಿಸಿದರು.
ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಸಾದ್ವಿಯರ ಪುರಪ್ರ್ರವೇಶ
ದೇಹ ಶೃಂಗಾರದಿಂದ ಜೀವನದ ನೆಮ್ಮದಿ ಅಸಾಧ್ಯ : ದಿವ್ಯ ಸಾಗರ ಮುನಿ
ಮುಂಬಯಿ (ಆರ್ಬಿಐ), ಜ.17: ಜೈನಕಾಶಿ ಮೂಡುಬಿದಿರೆ ಇಲ್ಲಿನ ಜಗತ್ಪ್ರಸಿದ್ದ ಶ್ರೀ ಜೈನ ಮಠದ ಸಾವಿರ ಕಂಬದ ಬಸದಿಯ ಶ್ರೀ ಜೈನ ಮಠದಲ್ಲಿ ಕಳೆದ ಮಕರ ಸಂಕ್ರಾಂತಿ ದಿನ ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಪಾರಾಮೋಚ್ಚ ಗುರು ಮಹಾ ಶ್ರಮಣ್ ಜೀ ಶಿಷ್ಯೆ ಪ್ರಮೀಳಾ ಸಾದ್ವಿ ಜೀ ಅವರ ಹಾಗೂ ಸಂಘವು ಪುರಪ್ರ್ರವೇಶ ನಡೆಸಿತು.
18 ಬಸದಿಗಳ ದರ್ಶನ ಮಾಡಿ ಅಂದು ಬೆಳಿಗ್ಗೆ ಶ್ರೀ ಜೈನ ಮಠದಲ್ಲಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಸಿದ್ಧಾಂಥ ಶಾಸ್ತ್ರಗಳ ದರ್ಶನ ಮಾಡಿಸಿದರು. ಸಾದ್ವಿ ಪ್ರಮೀಳಾ, ಸಾದ್ವಿ ಆಸ್ತಾ, ಸಾದ್ವಿ ಧೈರ್ಯ, ಸಾದ್ವಿ ವಿಗ್ಯ ಮಾತಾಜಿ ಅಪರಾಹ್ನ ಶ್ರೀ ಮಠದಲ್ಲಿ ನಡೆದ 108 ದಿವ್ಯ ಸಾಗರ ಮುನಿ ರಾಜರ ಇಷ್ಟೋ ಪದೇಶ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು.
ಮುನಿ ರಾಜರು ಆಶೀರ್ವಾಚನ ನೀಡಿ ಸರಳ ಸಜ್ಜನ ವ್ಯಕ್ತಿಗಳಿಂದ ಮಾತ್ರ ಧರ್ಮ ಆಚರಣೆ ಆಗುತ್ತದೆ ಕ್ರೋಧ ಮಾನವ ವಿಕಾಸಕ್ಕೆ ಬಾದಕ. ದೇಹ ಶೃಂಗಾರದಿಂದ ಜೀವನದ ಅನಂತ, ಸುಖ ನೆಮ್ಮದಿ ಅಸಾಧ್ಯ. ಆತ್ಮ ಜಾಗೃತಿ ತಪಸ್ಸು ಪೂಜೆ, ಧ್ಯಾನ ಸತ್ಸಂಗದಿಂದ ನಿಜವಾದ ಸಂತೋಷ ಸಿಗುವುದು ಎಂದು ಹಿತೋಪದೇಶ ನೀಡಿದರು.
ಪ. ಪೂ ಮೂಡುಬಿದಿರೆ ಶ್ರೀಗಳು ಸಾದ್ವಿ ಸಂಘಕ್ಕೆ ಶ್ರೀ ಮಠದ ವತಿಯಿಂದ ಶಾಸ್ತ್ರ ದಾನ ಮಾಡಿದರು. ಅಭಯ ಕುಮಾರ್, ಸುಹಾಸ್ ಅರಿಗಾ, ತೇಜ್ ಕರಣ್ ಜೈನ್ ಮಂಗಳೂರು ಹಾಗೂ ಚಿಕ್ಕ ಮಗಳೂರು, ಚೆನ್ನೈ, ತೇರಾ ಪಂಥಿü ಜೈನ ಸಮಾಜ ಬಾಂಧವರು ಅತಿಥಿüಗಳಾಗಿ ಪಾಲ್ಗೊಂಡಿದ್ದರು.
ಮಂಗಳ ಜ್ಯೋತಿ ಕೇಂದ್ರ ಪ್ರಕಟಿತ `ಬಾಪಾಯ್ ಸಾಕ್ರ್ಯಾ ಕಾಳ್ಜಾಚೊ ಸಾಂ ಜುಜೆ’ ಕೃತಿ ಬಿಡುಗಡೆ
ಮುಂಬಯಿ (ಆರ್ಬಿಐ), ಜ.17: ಪೆÇೀಪ್ ಜಗದ್ಗುರು ಫ್ರಾನ್ಸಿಸ್ ಅವರು 2020ರ ಡಿಸೆಂಬರ್ 08 ರಿಂದ 2021ರ ಡಿ.08, ತನಕದ ಒಂದು ವರ್ಷವನ್ನು ಸಂತ ಜೋಸೆಫರ ವರ್ಷ ಎಂದು ಘೋಷಿಸಿದ್ದಾರೆ. ಆ ನಿಟ್ಟಿನಲ್ಲಿ ಪಾತ್ರಿಸ್ ಕೊರ್ದೆ ಎಂಬ ವಿಶ್ವಪತ್ರವನ್ನು ಪೆÇೀಪ್ ಪ್ರಕಟಿಸಿದ್ದಾರೆ. ಇದು ಸಂತ ಜೋಸೆಫರ ಜೀವನದ ಎಲ್ಲಾ ಸದ್ಗುಣಗಳನ್ನು ಒಳಗೊಂಡಿರುತ್ತದೆ. ಆ ಸಲುವಾಗಿ ಮಂಗಳೂರು ಧರ್ಮಪ್ರಾಂತ್ಯದಲ್ಲಿನ ಮಂಗಳ ಜ್ಯೋತಿ ಕೇಂದ್ರವು ಕೊಂಕಣಿ ಭಾಷೆಯಲ್ಲಿ ಅನುವಾದಿತ `ಬಾಪಾಯ್ ಸಾಕ್ರ್ಯಾ ಕಾಳ್ಜಾಚೊ ಸಾಂ ಜುಜೆ’ (ಪಿತಾ ಸಮಾನ ಹೃದಯವಂತ ಸಂತ ಜೋಸೆಫ್) ಕೃತಿಯನ್ನು ಪ್ರಕಟಿಸಿದೆ.
ಮಂಗಳೂರು ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ಇಲ್ಲಿ ನೆರವೇರಿಸಲಾಗುತ್ತಿರುವ ಬಾಲ ಯೇಸು ಸಮರ್ಪಿತ ಪುಣ್ಯಕ್ಷೇತ್ರದ ವಾರ್ಷಿಕ ಮತ್ತು ರಜತ ಮಹೋತ್ಸವದ ಶುಭಾವಸರದಲ್ಲಿ ಬಾಲಯೇಸು ಹಬ್ಬದದಿನ ಕಳೆದ ಶುಕ್ರವಾರ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಪೀಟರ್ ಪಾವ್ಲ್ ಸಲ್ದಾನ್ಹಾ ಕೃತಿಯನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬಾಲಯೇಸು ಪುಣ್ಯಕ್ಷೇತ್ರದ ಮುಖ್ಯಸ್ಥ ಅ| ವಂ| ಪಿಯುಸ್ ಡಿಸೋಜಾ, ನಿರ್ದೇಶಕ ವಂ| ರೋವೆಲ್ ಡಿಸೋಜಾ ವಂ| ಚಾರ್ಲ್ಸ್ ಹಾಗೂ ಮಂಗಳ ಜ್ಯೋತಿ ಕೇಂದ್ರದ ನಿರ್ದೇಶಕ ವಂ| ವಿಜಯ್ ಮಚಾದೊ ಉಪಸ್ಥಿತರಿದ್ದರು.
St. Joseph Book Release @ Mangalore
Mumbai (RBI), Jan.17: Pope Francis has declared the year of St Joseph from December 8, 2020 to December 8, 2021. On this occasion he has given the apostolic letter Patris Cordae which consists of the qualities of St Joseph. Mangala Jyothi Publication of the Diocese of Mangalore has published a new book on the life of St Joseph in konkani. The inauguration of this book took place at Infant Jesus Shrine, Bikarnakatte, Mangalore by Most Rev. Dr. Peter Paul Saldanha, Bishop of Mangalore.
The Provincial of Carmelites Rev. Dr. Pius D’Souza, the Superior of St Joseph Monastery Fr. Charles, the Director of the Shrine Fr. Rovel D’Souza and Director of Mangala Jyothi, Fr Vijay Machado were present on this occasion.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link