Brief News with pictures from Universicty College, Mangalore
Kemmannu News Network, 18-01-2019 08:11:41
“ತುಳು ಭಾಷೆಯ ಪ್ರಾಕಾರಗಳನ್ನು ಉಳಿಸಿಕೊಳ್ಳಬೇಕಿದೆ”
ತುಳು ಮದಿಪು ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಡಾ. ಉದಯ್ ಕುಮಾರ್ ಎಂ.ಎ
ಮಂಗಳೂರು: ತುಳುವಿನಲ್ಲಿ ವಿವಿಧ ಪ್ರಾಕಾರಗಳಿದ್ದು ಅವುಗಳ ನೈಜತೆಯನ್ನು ಉಳಿಸಿಕೊಳ್ಳಬೇಕಿದೆ. ಕೆಲವರು ವೇದಿಕೆಗಳಲ್ಲಿ ಬಳಸುವ ತುಳು ಭಾಷೆಯ ‘ಪ್ರೇತ’ವೆಂಬಂತೆ ಭಾಸವಾಗುತ್ತದೆ, ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜಿನ ತುಳು ಸಂಘ ಸೋಮವಾರ ಶಿವರಾಮ ಕಾರಂತ ಸಭಾಭವನದಲ್ಲಿ ಆಯೋಜಿಸಿದ್ದ ತುಳು ಮದಿಪು ಚಿಂತನ ಮಾಲಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನೈಜತೆಯ ತತ್ವ ಬದುಕಿಗೂ ಅನ್ವಯವಾಗುತ್ತದೆ. “ನಮ್ಮ ಬದುಕಿನ ಅನುಭವಗಳನ್ನು ನಾಟಕರಂಗ, ಚಲನಚಿತ್ರಗಳ ಮೂಲಕ ಇನ್ನೊಬ್ಬರಿಗೆ ತಲುಪುವಂತೆ ಮಾಡಬೇಕು,” ಎಂದರು.
ಕಲಾವಿದ- ನಾಟಕಕಾರ ಸದಾಶಿವ ಅಮೀನ್, ಬಡತನ ಹಾಸುಹೊಕ್ಕಾಗಿದ್ದ ತುಳು ನಾಟಕರಂಗ ಬೆಳೆದ ಪರಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಹಿಂದೆ ವರ್ಷಕ್ಕೆ 2-3 ನಾಟಕಗಳು ಪ್ರದರ್ಶನ ಕಾಣುತ್ತಿದ್ದರೆ, ಈಗ ತಿಂಗಳಿಗೆ 35 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತವೆ. “ಅಳಿಸಲು ಸೀಮಿತವಾಗಿದ್ದ ನಾಟಕಗಳಲ್ಲಿ “ತೆಲಿಕೆದ ಬೊಳ್ಳಿ”ಯ ಮೂಲಕ ನಗಿಸುವ ಶಕೆ ಆರಂಭವಾಯಿತು. ಆದರೆ ಕಲಾವಿದನಿಗೆ ಎರಡೂ ತಿಳಿದಿರಬೇಕು. ಸಿನಿಮಾಕ್ಕೆ ಹೋದರೂ ತುಳು ಸಂಸ್ಕೃತಿಯನ್ನು ಬಿಡಬಾರದು. ತುಳು ಭಾಷೆ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಬೇಕು,” ಎಂದರು.
ಕಾರ್ಯಕ್ರಮದ ಸಂಯೋಜಕಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಹೇಂದ್ರ ಮಣಿ ರಾವ್, ತುಳು ಸಂಘದ ಕಾರ್ಯದರ್ಶಿ ಅಂಕಿತ, ಜೊತೆ ಕಾರ್ಯದರ್ಶಿ ತ್ರೀಜಾ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಆಂಗ್ಲಭಾ಼ಷಾ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ಪ್ರಾಧ್ಯಾಪಕರ ಸಂಘದ ಸಹಯೋಗದೊಂದಿಗೆ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಜನವರಿ 18 (ಶುಕ್ರವಾರ), ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರ ಬೆಳಿಗ್ಗೆ 10.30 ಕ್ಕೆ ಉದ್ಘಾಟನೆಗೊಳ್ಳಲಿದೆ.
“ಹಿತಾಸಕ್ತಿಗೆ ಮಣಿಯದ ಪತ್ರಕರ್ತರಿಂದ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ”
ವಿಶ್ವವಿದ್ಯಾನಿಲಯ ಕಾಲೇಜಿನ ಮಾಧ್ಯಮ ಕಾರ್ಯಾಗಾರದಲ್ಲಿ ಸಂವಿಧಾನ ತಜ್ಞ ಕಾಂತರಾಜ್
ಮಂಗಳೂರು: “ಪತ್ರಕರ್ತರು ಯಾವುದೇ ಹಿತಾಸಕ್ತಿಗಳಿಗೆ ಮಣಿಯದೆ ಕಾರ್ಯನಿರ್ವಹಿಸಿದರೆ ಸಂವಿಧಾನದ ರಕ್ಷಣೆ ಸಾಧ್ಯ. ಸಾಮಾಜಿಕ ಸಮಾನತೆ, ಮೀಸಲಾತಿ, ಮಹಿಳಾ ಸಮಾನತೆ ಮೊದಲಾದ ವಿಷಯಗಳ ಕುರಿತು ಪತ್ರಿಕಾರಂಗ ಧ್ವನಿಯೆತ್ತಬೇಕು,” ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಸಂವಿಧಾನ ತಜ್ಞ ಕಾಂತರಾಜ್ ಎಚ್ ಆಗ್ರಹಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದೊಂದಿಗೆ ಬುಧವಾರ ಆಯೋಜಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಭಾರತೀಯ ಜಾತಿ- ಧರ್ಮವನ್ನು ಮೀರಿ ಓದಲೇಬೇಕಾದ ಗ್ರಂಥ ಸಂವಿಧಾನ ಎಂದು ಪ್ರತಿಪಾದಿಸಿದರು. ಈ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಸಿದ್ದರಾಜು, “ಸಂವಿಧಾನದ ರಕ್ಷಕರಂತಿರುವ ಪತ್ರಿಕಾರಂಗ ಭ್ರಷ್ಟವಾದರೆ ನಮ್ಮ ಸಮಾಜದ ಉದ್ಧಾರ ಸಾಧ್ಯವಿಲ್ಲ,” ಎಂದರು. ಇದೇ ವೇಳೆ ‘ಮಂಗಳ ಸಿರಿ’ ಯ ಆಂಗ್ಲ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀಯ ಮತ್ತು ನ್ಯಾಯಾಂಗಕ್ಕಿಂತಲೂ ಪತ್ರಿಕಾರಂಗ ಹಾದಿ ತಪ್ಪುವುದು ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪತ್ರಕರ್ತರ ಕ್ಷೇಮ ನಿಧಿಗೆ ಚಾಲನೆ ನೀಡಿದರು. ತಾವೂ ಕ್ಷೇಮ ನಿಧಿಗೆ ರೂ. 50,000 ನೀಡುವುದಾಗಿ ಪ್ರಕಟಿಸಿದರು.
“ಅಭಿವೃದ್ಧಿ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಗಂಗಾಧರ ಹಿರೇಗುತ್ತಿ, ತಮ್ಮದೇ ವೃತ್ತಿ ಬದುಕನ್ನು ವಿವರಿಸಿ, ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಕ್ಷೀಣವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ರಾಂ, ಪತ್ರಿಕೋದ್ಯಮದ ಬಗ್ಗೆ ವಿದ್ಯಾರ್ಥಿಗಳಿಗಿರುವ ಭ್ರಮೆಯ ಜೊತೆಗೇ, ಇಲ್ಲಿರುವ ಅಪಾರ ಉದ್ಯೋಗಾವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಅಧ್ಯಕ್ಷತೆ ವಹಿಸಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ ಶಿವಾನಂದ, “ನಮಗೆ ಗೊತ್ತಿರುವುದನ್ನು ಯಾವುದಾದರೊಂದು ಮಾಧ್ಯಮದ ಮೂಲಕ ಜನರಿಗೆ ತಲುಪಿಸುವುದು ಪತ್ರಿಕೋದ್ಯಮದ ಮೂಲ ಆಶಯ,” ಎಂದರು.
ಬಾಕ್ಸ್ನಲ್ಲಿ ಬಳಸಬಹುದು...
ಸಂವಿಧಾನ ತಜ್ಞ ಕಾಂತರಾಜ್ ಎಚ್ ಜಾತಿ ಸಮೀಕ್ಷೆ, ಜಾತಿಗಳ ವಿಘಟನೆಗಲ್ಲ ಬದಲಾಗಿ ಅವುಗಳ ಅಂತರವನ್ನು ಮುಚ್ಚುವುದಕ್ಕಾಗಿ ಎಂದು ಜಾತಿ ಸಮೀಕ್ಷೆಯನ್ನು ಸಮರ್ಪಿಸಿಕೊಂಡರು. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಕುರಿತು ಮಾತನಾಡಿದ ಅವರು, “ಕಾನೂನು ವಿದ್ಯಾರ್ಥಿಯಾಗಿ ನಾನು ಅದನ್ನು ಒಪ್ಪಕೊಳ್ಳುತ್ತೇನೆ” ಎಂದರು. ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೇಲ್ವರ್ಗದ ಬಡವರಿಗೆ 10% ಮೀಸಲಾತಿ ಸಾಂವಿಧಾನಿಕವಾಗಿ ಸರಿಯಲ್ಲ ಎಂದು ಕಾಂತರಾಜ್ ಅಭಿಪ್ರಾಯಪಟ್ಟರು.
ಬೈಟ್ ಗಳನ್ನು ಬಳಸಿಕೊಳ್ಳಿ...
“ಮಾಧ್ಯಮಗಳು ಟಿಆರ್ಪಿಗಾಗಿ ಕಾರ್ಯನಿರ್ವಹಿಸದೆ ಸಮಾಜದ ಶೋಷಿತರ ಧ್ವನಿಯಾಗಬೇಕು”
- ಪ್ರೊ. ಎ.ಎಮ್. ಖಾನ್, ಕುಲಸಚಿವ, ಮಂಗಳೂರು ವಿಶ್ವವಿದ್ಯಾಲಯ
“ಪತ್ರಿಕೋದ್ಯಮದ ವ್ಯಾಪ್ತಿ ನ್ಯೂಸ್ ಆ್ಯಂಕರ್ಗಳಿಗೆ ಸೀಮಿತವಾಗಿಲ್ಲ”
- ನಾರಾಯಣ, ಅಧ್ಯಕ್ಷರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್
“ಸಂವಿಧಾನವನ್ನರಿಯದ ಒಬ್ಬ ವ್ಯಕ್ತಿ ಪತ್ರಕರ್ತನಾದರೆ, ಆತ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲ”
- ಡಾ. ಉದಯ್ ಕುಮಾರ್ ಎಂ.ಎ, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಾಲೇಜು
“ಪತ್ರಿಕೋದ್ಯಮವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಜಾಹಿರಾತು ನೀಡಿದವರ ಪರವಾಗಿ ಬರೆಯುತ್ತಿರುವುದು ವಾಸ್ತವ”
- ಪಿ. ಬಿ. ಹರೀಶ್ ರೈ, ಹಿರಿಯ ಪತ್ರಕರ್ತರು
‘ಯುವ ಪೀಳಿಗೆ ತುಳು ಸಂಸ್ಕøತಿ ಕುರಿತ ತಪ್ಪು ನಂಬಿಕೆ ದೂರಮಾಡಿಕೊಳ್ಳಬೇಕು’
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಸಂಘದ ಸಹಯೋಗದಲ್ಲಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಪ್ರಾಚೀನ ತುಳು ಸಾಹಿತ್ಯ ಮತ್ತು ತುಳು ಅನುವಾದ ಸಾಹಿತ್ಯದ ಕುರಿತು ವಿಚಾರ ಸಂಕಿರಣವನ್ನು ಶುಕ್ರವಾರ ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಕಾದಂಬರಿಕಾರ ಡಾ. ಪ್ರಭಾಕರ್ ನೀರ್ಮಾರ್ಗ ತುಳು ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಈಗ ವಿದ್ಯಾರ್ಥಿ ಸಮೂಹದ ಮೇಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳು ತಮ್ಮದೇ ಕೊಡುಗೆ ನೀಡುತ್ತಿವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿÀ ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಕಿಶೋರ್ ಕುಮಾರ್ ರೈ ಮಾತನಾಡಿ, ಇಂದಿನ ಯುವಪೀಳಿಗೆ ತುಳು ಸಂಸ್ಕøತಿಯ ಕುರಿತು ಬೆಳೆಸಿಕೊಂಡಿರುವ ಕೆಲವು ತಪ್ಪುಗ್ರಹಿಕೆಗಳನ್ನು ದೂರಮಾಡಿಕೊಳ್ಳಬೇಕು. ನಮ್ಮ ಹಿರಿಯರು ಕಥೆ-ಕಾದಂಬರಿಗಳಲ್ಲಿ ಪ್ರಾಚೀನ ಸಂಸ್ಕøತಿಯನ್ನು ಕಟ್ಟಿಕೊಟ್ಟಿದ್ದಾರೆ, ಎಂದರು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕಾಸರಗೋಡು ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ ರಾಧಾಕೃಷ್ಣ ಬೆಳ್ಳೂರು, ‘ಪ್ರಾಚೀನ ತುಳು ಸಾಹಿತ್ಯ ಸಮೀಕ್ಷೆ’ಯ ಕುರಿತು ಮಾತನಾಡಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ ಮಹಾಲಿಂಗ ಭಟ್, ‘ಅನುವಾದಗಳ ಸ್ವರೂಪ- ಸವಾಲು’ದ ಎಂಬ ಕುರಿತು ವಿಚಾರ ಮಂಡಿಸಿದರು. ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ.ಎ.ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ಸಂಘದ ಸಹನಿರ್ದೇಶಕ ಡಾ ಮಹೇಂದ್ರ ಮಣಿ, ಕನ್ನಡ ಸಂಘದ ಸಹನಿರ್ದೇಶಕ ಡಾ ರತ್ನಾವತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೇಜಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
///
ಖಿuಟu 1: ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಸಂಘದ ಸಹಯೋಗದಲ್ಲಿ ಕಾಲೇಜಿನÀಲ್ಲಿ ಆಯೋಜಿಸಿದ್ದ ಪ್ರಾಚೀನ ತುಳು ಸಾಹಿತ್ಯ ಮತ್ತು ತುಳು ಅನುವಾದ ಸಾಹಿತ್ಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಗಣ್ಯರು.
ಯುವಕರಲ್ಲಿ ಭವಿಷ್ಯದ ಸಂಕಲ್ಪ ಮುಖ್ಯ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಮಂಗಳೂರು: ದೇಶ ಎನ್ನುವ ಯೋಚನೆ ಬರುವಾಗ ಎಲ್ಲಾ ಧರ್ಮದವರು ನಮ್ಮವರು, ಎಲ್ಲಾ ಸಂಸ್ಕøತಿಗಳೂ ನಮ್ಮವೆÉಂದು ಭಾವಿಸುವುದು ನಿಜವಾದ ಸ್ವರ್ಗ ಎಂದು ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ‘ರಾಷ್ಟ್ರೀಯ ಯುವ ದಿನಾಚರಣೆ’É ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದೆ ನಾವು ಏನಾಗಬೇಕೆಂಬುದೇ ಇಂದಿನ ವಿದ್ಯಾರ್ಥಿಗಳ ಸಮಸ್ಯೆಯಾಗಿದೆ. ಹಾಗಾಗಿ ಮೊದಲೇ ಸಂಕಲ್ಪ ಮಾಡಬೇಕು. ಸಂಕಲ್ಪ ಎನ್ನುವುದು ಸಮುದ್ರದಷ್ಟು ಅಗಲವಾಗಿರಬೇಕು, ಬೆಟ್ಟದಷ್ಟು ಎತ್ತರವಾಗಿರಬೇಕು. ಯುವಕರು ಸದಾ ಛಲ ಮತ್ತು ಉತ್ಸಾಹದಿಂದಿರಬೇಕು. “ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೃಷಿ ಚಟುವಟಿಕೆಗಳನ್ನು ಕಲಿಸಬೇಕಿದೆ. ಇತರ ಧರ್ಮಗಳನ್ನು ಅರಿತುಕೊಂಡು ತÀಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬೇಕು”, ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ ಅಧ್ಯಕ್ಷ್ಯತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಧಾನ್ಯ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಬೇಕೆಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ್ಯೆ ರಿಶಾ, ಪದಾಧಿüಕಾರಿಗಳಾದ ಶ್ರೇಯಾ, ವಿನಯಲಾಕ್ಷಿ, ಮಯೂರೇಶ್ ಎಸ್, ಶಶಾಂಕ್ ಎಸ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ.ಎ.ಹರೀಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀವಿದ್ಯಾ ಕಾರ್ಯಕ್ರಮ ನಿರೂಪಣೆಗೈದರು.
//
ಗಿiveಞಚಿ 1: ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ರಾಷ್ಟ್ರೀಯ ಯುವ ದಿನಾಚರಣೆ’É ಉದ್ಘಾಟಿಸಿದರು.
ಗಿiveಞಚಿ 2: ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ರಾಷ್ಟ್ರೀಯ ಯುವ ದಿನಾಚರಣೆ’É ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಛಲವೊಂದಿದ್ದರೆ ಸಾಧನೆಗೆ ಅಡ್ಡಿಯೆಂಬುದಿಲ್ಲ’
ಮಂಗಳೂರು: ಸಾಧನೆ ಮಾಡಲು ಛಲವಿದ್ದಲ್ಲಿ ಕಲಿತ ಮಾಧ್ಯಮವಾಗಲೀ, ಆರ್ಥಿಕ ದುಸ್ಥಿತಿಯಾಗಲೀ ಯಾವುದೂ ಅಡ್ಡಿ ಬರುವುದಿಲ್ಲ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಗೋವಿಂದ ನಾಯ್ಕ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಕಾಲೇಜಿನ ವಿಜ್ಞಾನ ವಿಭಾಗ ಕಾಲೇಜಿನಲ್ಲಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಮೂಲವಿಜ್ಞಾನದಲ್ಲಿ ಆಸಕ್ತಿಯನ್ನು ಹೆಚ್ಚಿಸುವುದು’ ಎಂಬ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು ತಮ್ಮ ಮಾತನ್ನು ಉದಾಹರಣೆ ಸಹಿತ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ, ಮುಂದಿನ ದಿನಗಳಲ್ಲಿ ಪ್ರೌಢಶಾಲಾ ಅಧ್ಯಾಪಕರು ಪಠ್ಯಗಳಲ್ಲಿ ಸಮಸ್ಯೆಗಳಿದ್ದರೆ ಕಾಲೇಜು ಉಪನ್ಯಾಸಕರ ಸಹಾಯ ಪಡೆಯಲು ಈ ಕಾರ್ಯಾಗಾರ ಮೊದಲ ಹೆಜ್ಜೆಯಾಗಬೇಕು, ಎಂದರು.
ಶಿಬಿರಾರ್ಥಿಗಳಾಗಿ ಆಗಮಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 9 ಸರಕಾರಿ ಪ್ರೌಢಶಾಲೆಗಳ 28 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಸಿಪಿಇ ಸಂಯೋಜಕಿ ಡಾ. ಲತಾ ಎ. ಪಂಡಿತ್ ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಭಾರತಿ ಪೀಲಾರ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಇಂದಿರಾ ಜೆ. ವಂದಿಸಿದರು. ಡಾ. ನಾಗರತ್ನ ಕೆ.ಎ ನಿರೂಪಿಸಿದರು.
‘ಮನಸ್ಸಿನ ಶಕ್ತಿನ್ನರಿತ ಮೋಹನದಾಸ ಮಹಾತ್ಮರಾದರು, ನರೇಂದ್ರ ವಿವೇಕಾನಂದರಾದರು’
ವಿ.ವಿ ಕಾಲೇಜಿನ ‘ಸ್ವಚ್ಛ ಸೋಚ್’ ಕಾರ್ಯಕ್ರಮ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮತ್ತು ರಾಮಕೃಷ್ಣ ಮಿಷನ್, ಮಂಗಳಾದೇವಿ ಇವರ ಜಂಟಿ ಸಹಯೋಗದಲ್ಲಿ ವಿವೇಕೋತ್ಸವದ ಅಂಗವಾಗಿ ವಿ.ವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೋಮವಾರ ಸ್ವಚ್ಛ ಭಾರತ್ನ ಭಾಗವಾದ ‘ಸ್ವಚ್ಛ ಸೋಚ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ, ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ. ಮನಸ್ಸಿನ ಶಕ್ತಿನ್ನರಿತ ಮೋಹನದಾಸ ಮಹಾತ್ಮರಾದರು, ನರೇಂದ್ರ ವಿವೇಕಾನಂದರಾದರು. ಹೊರೆಯೆಂದುಕೊಳ್ಳದೆ ತಮ್ಮ ಕೆಲಸಗಳನ್ನು ಅರ್ಪಣಾ ಭಾವದಿಂದ ಮಾಡಬೇಕು ಎಂದರು. ಗಣ್ಯರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನಗೈದು ತಮ್ಮ ಗೌರವ ಸಮರ್ಪಿಸಿದರು.
ಸಂವಾದ ಕಾರ್ಯಕ್ರಮದಲ್ಲಿ, ನಾಗರಿಕ ಸಲಹಾ ಸಮಿತಿ ಮತ್ತು ಸ್ವಚ್ಛ ಸುರತ್ಕಲ್ ಅಭಿಯಾನದ ಪ್ರಧಾನ ಸಂಚಾಲಕ ಡಾ. ಕೆ. ರಾಜಮೋಹನರಾವ್ ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ ನಿರ್ಮಾಣಕ್ಕೆ ಮನಸ್ಥಿತಿಯಲ್ಲಿ ಆಗಬೇಕಾಗಿರುವ ಬದಲಾವಣೆಯ ಕುರಿತು ಮಾತನಾಡಿದರು. ರಾಮಕೃಷ್ಣ ಮಿಷನ್ ಮಂಗಳಾದೇವಿ ಪ್ರಧಾನ ಸಂಚಾಲಕ ಡಾ. ರಂಜನ್ ಬೆಳ್ಳರ್ಪಾಡಿ ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ಅವಶ್ಯಕತೆ ಹಾಗೂ ಕಸ ವಿಲೇವಾರಿ ವಿಧಾನಗಳನ್ನು ವೀಡಿಯೋ ಪ್ರದರ್ಶನದ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಸಿವಿಲ್ ಎಂಜಿನಿಯರ್ ಬೆಳಾಲು ಗೋಪಿನಾಥ್ ರಾವ್, ಕಾಲೇಜಿನ ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಎ. ಹರೀಶ್, ಎನ್ಸಿಸಿ ಅಧಿಕಾರಿ ಡಾ. ಜಯರಾಜ್ ಎನ್, ಎನ್ಎಸ್ಎಸ್ ಅಧಿಕಾರಿ ಭಾರತಿ ಪಿಲಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಿಶಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link