ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
Kemmannu News Network, 12-06-2021 09:39:16
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ಮುಂಬಯಿ ವಿವಿ ಕನ್ನಡ ವಿಭಾಗ, ಕನ್ನಡಿಗ ಸಂಘ ಸಂಸ್ಥೆಗಳÀ ಸಂತಾಪ
ಮುಂಬಯಿ (ಆರ್ಬಿಐ), ಜೂ.11: ಕರ್ನಾಟಕ ರಾಜ್ಯದ ಖ್ಯಾತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ (67.) ಇಂದಿಲ್ಲಿ ಬೆಂಗಳೂರುನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೋನಾ ಬಾಧಿತರಾಗಿ ವಿಧಿವಶರಾದರು.
ಸಿದ್ಧಲಿಂಗಯ್ಯ ಅವರು ಕರ್ನಾಟಕ ಕನ್ನಡ ಪ್ರಾಧೀಕಾರದ ಅಧ್ಯಕ್ಷ, ಕರ್ನಾಟಕ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿದ್ದಾಗ ಮಹಾರಾಷ್ಟ್ರ ಮುಂಬಯಿಯ ನಂಟನ್ನಿರಿಸಿ ಆವಾಗಾವಗ ಆಗಮಿಸಿ ವಿವಿಧ ಕಾರ್ಯಕ್ರಮಗ ಳಲ್ಲಿ ಪಾಲ್ಗೊಳ್ಳುತ್ತಿದ್ದರು. 2003ರಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಆರನೇ ವಿಚಾರ ಭಾರತಿ ಸಮ್ಮೇಳನದ ಅಧ್ಯಕ್ಷತೆ, ಹೃದಯವಾಹಿನಿ ಸಂಸ್ಥೆ ಗೋವಾದಲ್ಲಿ ನಡೆಸಿದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಮರಾಠಿ ಸಾಹಿತ್ಯ ಪುರಸ್ಕಾರಕ್ಕೂ ಭಾಜನರಾಗಿದ್ದರು.
ಸಿದ್ಧಲಿಂಗಯ್ಯರ ನಿಧನಕ್ಕೆ ಗೋರೆಗಾಂವ್ ಕರ್ನಾಟಕ ಸಂಘ, ಕರ್ನಾಟಕ ಸಂಘ ಮುಂಬಯಿ, ಕನ್ನಡ ಸಂಘ ಮುಂಬಯಿ, ಹೃದಯವಾಹಿನಿ ಸಂಸ್ಥೆಯ ಇಂ. ಮಂಜುನಾಥ್ ಸಾಗರ್, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಡಾ| ಸುನೀತಾ ಎಂ.ಶೆಟ್ಟಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಐಹೆಚ್ಆರ್)ನ ಪ್ರಧಾನ ವಿಜ್ಞಾನಿ ಡಾ| ಬಿ.ನಾರಾಯಣಸ್ವಾಮಿ, ಡಾ| ಭರತ್ಕುಮಾರ್ ಪೆÇಲಿಪು, ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕವಿ ಸಿದ್ಧಲಿಂಗಯ್ಯ
ಇವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿಎ ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪೆÇ್ರ. ಡಿ.ಎಲ್.ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂಎ ಪದವಿಯನ್ನೂ, ಪೆÇ್ರ.ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ `ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ್ನ ಗಳಿಸಿದವರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ಧಲಿಂಗಯ್ಯನವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿದ್ಯಾಥಿರ್ü ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಸಿದ್ಧಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ `ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ `ಸಾವಿರಾರು ನದಿಗಳು’, `ಕಪ್ಪುಕಾಡಿನ ಹಾಡು’, `ಮೆರವಣಿಗೆ’, `ನನ್ನ ಜನಗಳು ಮತ್ತು ಇತರ ಕವಿತೆಗಳು’, `ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ.
ಸಿದ್ಧಲಿಂಗಯ್ಯನವರ `ಪಂಚಮ ಮತ್ತು ನೆಲಸಮ’, `ಏಕಲವ್ಯ’ ಪ್ರಮುಖ ನಾಟಕಗಳಾದರೆ `ಅವತಾರಗಳು’ ಪ್ರಬಂಧ ಕೃತಿ. ಇವಲ್ಲದೆ ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ಧಲಿಂಗಯ್ಯ ಭಾಗ 1-2 ಮತ್ತು ಆತ್ಮಕಥನ ಊರು-ಕೇರಿ ಭಾಗ 1-2 ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ?ಸಮಕಾಲೀನ ಕನ್ನಡ ಕವಿತೆಗಳು? ಭಾಗ-3 ಮತ್ತು ಭಾಗ-4 ನ್ನು ಸಂಪಾದಿಸಿಕೊಟ್ಟಿದ್ದಾರೆ.
ಸಿದ್ಧಲಿಂಗಯ್ಯ ಅವರ `ಊರು ಕೇರಿ’ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ. ಸಿದ್ಧಲಿಂಗಯ್ಯ ಅವರು ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ `ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಗೀತೆಗೆ 1983-84ರಲ್ಲಿ ರಾಜ್ಯಪ್ರಶಸ್ತಿ ಸಂದಿದೆ.
ಅಗಲಿದ ದಿವ್ಯ ಚೇತನಕ್ಕೆ
ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ
ಸಾಹಿತ್ಯ ಪರಿಷತ್ತು
ಸಿದ್ದಲಿಂಗಯ್ಯ : ಮಾನವತೆ ಎತ್ತಿ ಹಿಡಿದ
ಕವಿ-ನಾಡೋಜ ಡಾ| ಮನು ಬಳಿಗಾರ್
ಮುಂಬಯಿ (ಆರ್ಬಿಐ), ಜೂ.11: ಕಳೆದ ಶುಕ್ರವಾರ
ನಮ್ಮನ್ನಗಲಿದ ಡಾ| ಸಿದ್ದಲಿಂಗಯ್ಯ ಅವರು ಆಧುನಿಕ
ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠ ಕವಿಗಳÀಲ್ಲಿ
ಒಬ್ಬರು. ಅವರನ್ನು ದಲಿತ ಕವಿ ಅಥವಾ ಬಂಡಾಯ ಕವಿ
ಎಂದು ಕರೆಯುವುದಕ್ಕಿಂತ ಮಾನವತೆಯನ್ನು
ಪ್ರತಿಪಾದಿಸಿದ ಕವಿ ಎಂದು ಬಣ್ಣಿಸುವುದು ಸೂಕ್ತ. ಆ
ದೃಷ್ಟಿಯಿಂದ ಅವರದು ಆದಿಕವಿ ಪಂಪನ ಹಾದಿ. ಅದು ಆನೆ
ನಡೆದ ದಾರಿ.
ಕನ್ನಡ ಕಾವ್ಯಕ್ಕೆ ಅವರು ಹೊಸ ಸಂವೇದನೆಯನ್ನು
ಕೊಟ್ಟರು. ಅವರÀ ಹೊಲೆ ಮಾದಿಗರ ಹಾಡು ಕವನ
ಸಂಕಲನ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ಇಡೀ
ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನÀ ಗಳಿಸಿದ
ಒಂದು ಶ್ರೇಷ್ಠ ಕೃತಿಯಾಗಿದೆ. ಸತ್ತು ಹೋದ
ಸಂವೇದನೆಗಳನ್ನು ಬಡಿದೆಬ್ಬಿಸಿದಸಿದ ಕಾವ್ಯವದು. ಅವರ
ಇಡೀ ಸಾಹಿತ್ಯ ಸೃಷ್ಟಿಗೂ ಇದೇ ರೀತಿ ಒಂದು ಅನನ್ಯವಾದ
ಸ್ಥಾನ ಇದೆ.
ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಅನೇಕ
ಸ್ಥಾನಮಾನಗಳ ಸಿಕ್ಕಿವೆ. ಅವುಗಳಿಗೆ ಶಿಖರಪ್ರಾಯವಾದ
ಕನ್ನಡದ ಜ್ಞಾನಪೀಠ ಎಂದೇ ಹೆಸರಾಗಿರುವ
ನೃಪತುಂಗ ಪ್ರಶಸ್ತಿಯನ್ನು
ನಮ್ಮಅವಧಿಯಲ್ಲಿಯೇ ಅವರಿಗೆ ನೀಡಿ ಗೌರವಿಸಲಾಯಿತು
ಎಂಬುದನ್ನು ಇಲ್ಲಿ ಅತ್ಯಂತ ಹೆಮ್ಮೆಯಿಂದ ನೆನಪಿಸಿ
ಕೊಳ್ಳುತ್ತೇನೆ.
ನನ್ನ ಅವರ ಒಡನಾಟ ಅನೇಕ ದಶಕಗಳದ್ದು. ಅವರ
ನಮ್ರತೆ, ಜೀವನ ಪ್ರೀತಿ, ಹಾಸ್ಯಪ್ರಜ್ಞೆಗಳು ಅವರಿಗೇ
ವಿಶಿಷ್ಟವಾದುವು. ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ಸೇರಿದಾಗ
ಅವರ ಗುಣಮುಖರಾಗಿ ವಾಪಸು ಬಂದು ನಮ್ಮ ಜೊತೆಗೆ
ಇನ್ನೂ ಅನೇಕ ವರ್ಷಗಳ ಕಾಲ ಬಾಳುತ್ತಾರೆ,
ನಮ್ಮನ್ನು ಮತ್ತೆ ನಗಿಸುತ್ತಾರೆ ಎಂದು ಅನಿಸಿತ್ತು.
ಆದರೆ, ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡಿದೆ.
ಸಿದ್ದಲಿಂಗಯ್ಯ ಅವರಿಗೆÉ ಅವರೇ ಸಾಟಿ. ಅವರ ಜಾಗದಲ್ಲಿ
ಇನ್ನೊಬ್ಬರನ್ನು ಊಹಿಸುªÅÀದು ಸಾಧ್ಯವಿಲ್ಲ. ಆ ಅರ್ಥದಲ್ಲಿ
ಅವರ ಸಾವು ನಿಜವಾಗಿಯೂ ತುಂಬಿಬಾರದ ನಷ್ಟ. ಅವರ
ಕುಟುಂಬಕ್ಕೆ ಅವರÀ ಅಗಲಿಕೆಯ ದುಃಖ ಭರಿಸುವ
ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು
ಪ್ರಾಥಿರ್üಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು
ಅಧ್ಯಕ್ಷ ನಾಡೋಜ ಡಾ. ಮನು
Comments on this Article | |
Rjesh, Malpe | Sat, June-12-2021, 1:57 |
OM SHANTHI Agree[0]
|
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link