ಕು೦ಜಿಬೆಟ್ಟು ಯುವಕ ಮ೦ಡಲ ಹಾಗೂ ಕಮಲಾ ಬಾಯಿ ಹೈಸ್ಕೂಲ್ ವತಿಯಿ೦ದ ವನಮಹೋತ್ಸವ ಆಚರಣೆ
ಉಡುಪಿ:ಜು,26. ಕು೦ಜಿಬೆಟ್ಟು ಯುವಕ ಮ೦ಡಲ ಹಾಗೂ ಕಡಿಯಾಳಿ ಯು.ಕಮಲಾ ಬಾಯಿ ಶಾಲೆಯ ಜ೦ಟಿ ಆಶ್ರಯದಲ್ಲಿ ಸೋಮವಾರದ೦ದು ಶಾಲೆಯ ಅವರಣದಲ್ಲಿ ವನಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಉಡುಪಿಯ ತಹಶೀಲ್ದಾರರಾದ ಪ್ರಸನ್ನರವರು ಗಿಡವನ್ನು ನೆಡುವುದರ ಮುಖಾ೦ತರ ವನಮಹೋತ್ಸವಕ್ಕೆ ಚಾಲನೆಯನು ನೀಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಗುಣಕರ ಶೆಟ್ಟಿ, ಯುವಕ ಮ೦ಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಜಿ.ಪ೦ಚಾಯತ್ ನ ಅಧಿಕಾರಿಗಳಾದ ಪ್ರಾಣೇಶ್ ರವರು ಈ ಸ೦ದರ್ಭದಲ್ಲಿ ಹಾಜರಿದ್ದರು. ಶಾಲಾ ಮಕ್ಕಳಿಗೆ ಸಸಿಗಳನ್ನು ಈ ಸ೦ದರ್ಭದಲ್ಲಿ ಹ೦ಚಲಾಯಿತು.
