Brief Mumbai News with Pictures
ಕರ್ನಾಟಕ: ಎಂಎಲ್ಎ ಸ್ಪರ್ಧೆಗೆ ಮತ್ತೆ ಉತ್ಸುಕರಾದ
ಅಜಾತಶತ್ರು ರಾಜಕಾರಣಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ
ಮುಂಬಯಿ, ಜ.11: ಕರ್ನಾಟಕ ರಾಜ್ಯದ ಅಸೆಂಬ್ಲಿ ಚುನಾವಣೆಗೆ ಅಖಾಡ ಸಜಾಗುತ್ತಿದ್ದಂತೆಯೇ ಎಲ್ಲಾ ಪಕ್ಷದ ನಾಯಕರು ಶಾಸಕನಾಗುವ ಹುಮ್ಮಸ್ಸಿನಲ್ಲಿದ್ದು ತೆರೆಮರೆಯಲ್ಲಿದ್ದೇ ಸ್ಪರ್ಧೆಗೂ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ವಿವಿಧ ಪಕ್ಷಗಳ ನಾಯಕರ ಆಯ್ಕೆ ಪ್ರಕ್ರಿಯೆ ಬರದಲ್ಲಿ ಸಾಗುತ್ತಿದ್ದಂತೆಯೇ ಮಾಜಿ-ಹಾಲಿ ನಾಯಕರಂತೂ ಶಾಸಕತ್ವ ಸ್ಥಾನ ಗಳಿಸಿಕೊಳ್ಳುವಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಅಜಾತಶತ್ರು ರಾಜಕಾರಣಿ ಎಂದೇ ಜನಜನಿತ ವಿಟ್ಲ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಮುಂದಿನ ಚುನಾವಣೆಯಲ್ಲಿ ಎಂಎಲ್ಎ ಸ್ಪರ್ಧೆಗೆ ಮತ್ತೆ ಉತ್ಸುಕತೆ ತೋರಿಸಿರುವುದಕ್ಕೆ ಅವರ ಅಭಿಮಾನಿ ಬಳಗ ಬಾರೀ ಸಂತಸ ವ್ಯಕ್ತಪಡಿಸಿದೆ.
ಅನೇಕ ದಶಕಗಳಿಂದ ರಾಜಕೀಯವಾಗಿ ಅಪಾರ ಅನುಭವ ಹೊಂದಿದವ ರುಕ್ಮಯ ಪೂಜಾರಿ 1967ರ ಬಿ.ಎಸ್ಸಿ ಪದವಿಧರ. ಆರ್ಎಸ್ಎಸ್ ಕಾರ್ಯಕರ್ತ.1969ರಲ್ಲಿ ಜನಸಂಘಕ್ಕೆ ಸೇರ್ಪಡೆಗೊಂಡು ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದು ದೆಹಲಿಯಲ್ಲಿ ಅಟಲ್ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ನಡೆದ ಹೋರಾಟ ನಡೆಸಿ ತಿಹಾರ್ ಜೈಲಿನಲ್ಲಿ ಕಾರಾಗೃಹ ವಾಸ ಅನುಭವಿಸಿದ ಧೀಮಂತ ನಾಯಕ. 1972ರಲ್ಲಿ ಜನಸಂಘದ ಅಭ್ಯಥಿರ್üಯಾಗಿ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಜಂಟಿ ಅಭ್ಯಥಿರ್ü ಬಿ.ವಿಕಕ್ಕಿಲ್ಲಾಯ ವಿರುದ್ಧ ಸ್ಪರ್ಧಿಸಿದ, 1978ರಲ್ಲಿ ನೂತನವಾಗಿ ರಚನೆ ಆದ ಜನತಾ ಪಕ್ಷದ ಅಭ್ಯಥಿರ್üಯಾಗಿ ಬಂಟ್ವಾಳದಿಂದ ಬಿ.ಎ ಮೊೈದಿನ್ ವಿರುದ್ಧ ಸ್ಪರ್ಧೆ ನಡೆಸಿದ, 1983ರಲ್ಲಿ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮವಾಗಿ ಶಾಸಕನಾಗಿ ಆಯ್ಕೆಯಾದ ಹಿರಿಯ ರಾಜಕಾರಣಿ ಮತ್ತೆ ಈ ಬಾರಿಯ ವಿಧಾನ ಸಭಾ ಚುನಾವಣೆ ಎದುರಿಸಲು ಸಿದ್ಧವಾಗಿರುವುದು ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿದೆ. 1989 ಮತ್ತು 1994ರಲ್ಲಿ ವಿಟ್ಲ ಕ್ಷೇತ್ರದಿಂದ ಸತತವಾಗಿ ಶಾಸಕನಾಗಿ ಆಯ್ಕೆ ಆಗಿದ್ದು, 1991ರಲ್ಲಿ ಉಡುಪಿ ಕ್ಷೇತ್ರದಿಂದ ಆಸ್ಕರ್ ಫರ್ನಾಂಡಿಸ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿದ ಅನುಭವೀ ರಾಜಕಾರಣಿ ಇವರಾಗಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿರುವ ರುಕ್ಮಯ ಪೂಜಾರಿ ಅವರು ಪಕ್ಷ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ. 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ನಾನು ಅಭ್ಯಥಿರ್üಯಾಗಬೇಕೆಂಬ ಒತ್ತಡ ಇತ್ತಾದರೂ ಆ ಸ್ಥಾನ ಮನೋರಮಾ ಮಧ್ವರಾಜ್ ಅವರಿಗೆ ಬಿಟ್ಟುಕೊಟ್ಟರೆಂದು ಪೂಜಾರಿ ಆಪ್ತರು ತಿಳಿಸುತ್ತಾರೆ.
1980ರಲ್ಲಿ ಬಿಜೆಪಿಯ ಸ್ಥಾಪನೆಯ ದಿನದಿಂದಲೂ ಜನಸಂಘದ ಎಲ್ಲರೂ ಬಿಜೆಪಿಗೆ ಸೇರ್ಪಡೆ ಗೊಂಡÀು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಪದಾಧಿಕಾರಿ, 1992-95 ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿ, 1994ರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿ, 7 ಬಾರಿ ವಿಧಾನ ಸಭೆಗೆ ಒಂದು ಬಾರಿ ಲೋಕಸಭೆಗೆ, ಒಂದು ಬಾರಿ ಜಿಲ್ಲಾ ಪರಿಷತ್ಗೆ ಸ್ಪರ್ಧಿಸಿದ ಅನುಭವಸ್ಥ ರಾಜಕಾರಣಿ ಇವರಾಗಿದ್ದಾರೆ.
1983ರಲ್ಲಿ ಮೊತ್ತ ಮೊದಲ ಬಾರಿ ವಿಧಾನ ಸಭೆಗೆ ಪ್ರವೇಶಿಸಿ ಕ್ಷೇತ್ರ, ಜಿಲ್ಲಾದ್ಯಂತ ಹೋರಾಟ ಮಾಡಿ ಪಕ್ಷ ಕಟ್ಟಿ ಬೆಳೆಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 2014ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಳಿನ್ಕುಮಾ ರ್ ಕಟೀಲ್ ಸ್ಪರ್ಧಾ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿ, ಅದಲ್ಲದೆ ಜೆ.ಕೃಷ್ಣ ಪಾಲೆಮಾರ್, ಬಿ.ನಾಗರಾಜ್ ಶೆಟ್ಟಿ, ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಹಾಗೂ ಇತರ ಬಿಜೆಪಿ ಅಭ್ಯಥಿರ್üಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ನೇತಾರ ಆಗಿದ್ದಾರೆ. ತಮ್ಮ 26ನೇ ವಯಸ್ಸಿನಲ್ಲೇ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಹೋರಾಡಿ 5 ತಿಂಗಳು ಮಂಗಳೂರು ಸಬ್ ಜೈಲಿನಲ್ಲಿ ಜೈಲುವಾಸ ಅನುಭವಿಸಿದ, 1976ರಲ್ಲಿ ಬಳ್ಳಾರಿಯಲ್ಲಿ ಮೀಸಾ ಕಾನೂನಿನಡಿ 5 ತಿಂಗಳು ಜೈಲುವಾಸ ಅನುಭವಿಸಿದ ಅನುಭವಿ.
ಸಂಘ ಪರಿವಾರದಿಂದ ಹಿಡಿದು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ಅಪಾರವಾದದ್ದು. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಭಾಜಪ ಸರಕಾರ ರಚನೆ ಆದಾಗ ಅದರ ಹಿಂದೆ ಇದ್ದ ನಾಯಕರಲ್ಲಿ ಇವರೋರ್ವರು. ಕೇಂದ್ರದಲ್ಲಿ ಮಾನ್ಯ ಮೋದಿಯವರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ದೇಶದ ಗೌರವ, ಪ್ರತಿಷ್ಠೆ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳು ಸಾಗುತ್ತಿದೆ. ಇದರಿಂದ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ವಿರೋಧ ಪಕ್ಷಗಳು ಜನರ ವಿಶ್ವಾಸ ಕಳಕೊಳ್ಳುತ್ತಿವೆ. ಇದರಿಂದ ಕಂಗೆಟ್ಟ ಕಾಂಗ್ರೆಸ್ಸು, ಕಮ್ಯೂನಿಸ್ಟ್ ಪಕ್ಷ, ಬುದ್ಧಿಜಾಲಗಳೆಂದೂ ಕರೆಸಿಕೊಳ್ಳುತ್ತಿರುವ ವ್ಯಕ್ತಿ ಬಿಜೆಪಿ ಮತ್ತು ಮೋದಿಯವರ ವಿರುದ್ಧ ಅಪಪ್ರಚಾರ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯ ಇದೆ. ಇಂತಹ ಸಂದರ್ಭದಲ್ಲಿ ಸಂಘ ಪರಿವಾರ, ಕಾರ್ಯಕರ್ತರು, ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನಿಸಿದರೆ ನಾನು ಅಭ್ಯಥಿರ್üಯಾಗಲು ಸಿದ್ಧನಿದ್ದೇನೆ. ನಾನು ಮತ್ತು ನಮ್ಮ ರಾಜ್ಯಾಧ್ಯಕ್ಷರು ಸಮಕಾಲೀನರು. ಪಕ್ಷವನ್ನು ಒಟ್ಟೊಟ್ಟಿಗೆ ಕಟ್ಟಿ ಬೆಳೆಸಿದವರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಇವರೊಂದಿಗೂ ಅನ್ಯೋನ್ಯತೆ ಕಾಯ್ದು ಕೊಂಡಿದ್ದೇನೆ. ಎಲ್ಲರಲ್ಲೂ ಅಪಾರ ಗೌರವವಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಬಂಧುಗಳಿಗೆ ನನ್ನ ಬಗ್ಗೆ ಇರುವ ಪ್ರೀತಿ ವಿಶ್ವಾಸದ ಆಧಾರದಲ್ಲಿ ನಾನು ಚುನಾವಣೆ ಗೆಲ್ಲುವ ವಿಶ್ವಾಸ ಕೂಡಾ ಹೊಂದಿದ್ದೇನೆ ಎನ್ನುತ್ತಾರೆ ಎ.ರುಕ್ಮಯ ಪೂಜಾರಿ.
ಮಾತಾಜಿ ಸಂಘದವರು ಧರ್ಮಸ್ಥಳದಲ್ಲಿ.
ಚಿತ್ರಶೀರ್ಷಿಕೆ: ಹೇಮಾವತಿ ವಿ. ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾತಾಜಿಯವರಿಗೆ ಸಿದ್ಧಾಂತ ಚಿಂತಾಮಣಿ ಗ್ರಂಥ ಸಮರ್ಪಿಸಿದರು.
ಉಜಿರೆ: ಆರ್ಯಿಕಾ ಶ್ರೀ 105 ಆದಿತ್ಯ ಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ನಿತ್ಯ ಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ದೀಪ್ತಿ ಶ್ರೀ ಮಾತಾಜಿ ಮತ್ತು ಆರ್ಯಿಕಾ ಶ್ರೀ 105 ದಿಶಾಶ್ರೀ ಮಾತಾಜಿಯವರು ಧರ್ಮಸ್ಥಳಕ್ಕೆ ಭಾನುವಾರ ಆಗಮಿಸಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ರತ್ನಗಿರಿಯಲ್ಲಿ ಶ್ರೀ ಬಾಹುಬಲಿಯ ದರ್ಶನ ಮಾಡಿದರು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾತಾಜಿಯವರಿಗೆ ಆಹಾರ ದಾನ ಮಾಡಿ ಆಶೀರ್ವಾದ ಮಾಡಿದರು. ಸಿದ್ಧಾಂತ ಚಿಂತಾಮಣಿ ಗ್ರಂಥ ಸಮರ್ಪಿಸಿದರು.
ಮಾತಾಜಿಯವರು ಹಾಸನದ ಮೂಲಕ ಶ್ರವಣಬೆಳಗೊಳಕ್ಕೆ ವಿಹಾರ ಮಾಡಿದರು.
ಉಡುಪಿಯಲ್ಲಿ `ಐಸಿಯು-ನೋಡುವೆ ನಿನ್ನ’ ಪ್ರದರ್ಶನ
ಮುಂಬಯಿ, ಜ.11: ಇತ್ತಿಚೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಇದರ 52ನೇ ವರ್ಷದ ಹೊಸ ನಾಟಕ `ಐಸಿಯು-ನೋಡುವೆ ನಿನ್ನ’ ಪ್ರದರ್ಶನ ಗೊಂಡಿತು.
ಸಾಮಾಜಿಕ ಕಳಕಳಿಯಿಂದ ಕೂಡಿದ ಈ ನಾಟಕ ಯಾಂತ್ರಿಕ ಬದುಕಿನ ಧಾವಂತದ ನಡುವೆ ನಯವಾದ, ಕೋಮಲವಾದ, ನಾಜೂಕಾದ ನವಿರು ನವಿಲುಗರಿಯಂಥ ಹೃದಯದ ಕಣ್ಣುಗಳನ್ನೇ ಮುಚ್ಚಿಕೊಳ್ಳುತ್ತಾ ಎಲ್ಲರ ನಡುವೆಯಿದ್ದರೂ ಪ್ರತ್ಯೇಕ ದ್ವೀಪವಾಗಿ ಬಿಡುವ ಭಾವಹೀನ ಮನುಷ್ಯರು ಇಲ್ಲಿ ಕಾಣಿಸುತ್ತಾರೆ.
ಕನ್ನಡ ನಾಡಿನ ಮಂಗಳಮುಖಿ `ಕಾಜಲ್’ ಪ್ರಥಮ ಬಾರಿಗೆ ರಂಗಭೂಮಿಯಲ್ಲಿ ರಂಗಪ್ರವೇಶ ಮಾಡಿದರು. ಈ ನಾಟಕವನ್ನು ರವಿರಾಜ್ ಹೆಚ್.ಪಿ. ನಿರ್ದೇಶಿಸಿದ್ದು ಶಶಿರಾಜ್ ಕಾವೂರು ರಚಿಸಿರುತ್ತಾರೆ. ಸಂಗೀತವನ್ನು ಗೀತಂ ಗಿರೀಶ್ ನೀಡಿರುತ್ತಾರೆ.
ಜೆಸಿಐ ಸುರತ್ಕಲ್ನ 2018ನೇ ಸಾಲಿನ ಪದಗ್ರಹಣ ಸಮಾರಂಭ
ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನಾಥ ಶೆಟ್ಟಿ ಬಾಳರಿಗೆ ಸನ್ಮಾನ
ಮುಂಬಯಿ (ಸುರತ್ಕಲ್), ಜ.08: ಜೆಸಿಐ ಸುರತ್ಕಲ್ನ 2018ನೇ ಸಾಲಿನ ಪದಗ್ರಹಣ ಸಮಾರಂಭ ಇತ್ತೀಚೆಗೆ ಬಂಟರ ಸಂಘ ಸುರತ್ಕಲ್ ನಲ್ಲಿ ನಡೆಯಿತು. ಮುಖ್ಯ ಅತಿಥಿüಯಾಗಿ ಜೆಸಿಐ 15 ವಲಯಾಧ್ಯಕ್ಷ ಜೆಎಫ್ಪಿ ರಾಕೇಶ್ ಕುಂಜೂರ್ ಉಪಸ್ಥಿತರಿದ್ದರು.
ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೆಸಿಐ, ಯುವ ಸಮುದಾಯವನ್ನು ಜೆಸಿ ಆಂದೋಲನದಲ್ಲಿ ಸಕ್ರಿಯರನ್ನಾಗಿಸಿ ಅವರನ್ನು ಸಮಾಜದ ಕ್ರಿಯಾಶೀಲ ನಾಗರಿಕರನ್ನಾಗಿ ಮಾಡುವ ಉದ್ದೇಶದ್ದಿಂದ ಪ್ರಸ್ತುತ ವರ್ಷದಲ್ಲಿ ಬದಲಾವಣೆ ನಮ್ಮಿಂದಲ್ಲೇ ಎಂಬ ಧ್ಯೇಯದೊಂದಿಗೆ ಕಾರ್ಯಪ್ರವರ್ತವಾಗಲಿದೆ ಮತ್ತು ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವೆಲೊಪ್ಮೆಂಟ್ ಗೋಲ್ ಕಾರ್ಯಕ್ರಮಗಳ ಪ್ರಮುಖ 6 ಅಂಶಗಳಾದ ಉತ್ತಮ ಅರೋಗ್ಯ ಮತ್ತು ಯೋಗ ಕ್ಷೇಮ, ಉತ್ತಮ ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವತ್ಛತಾ ಜಲ ಮತ್ತು ನೈರ್ಮಲ್ಯ, ಸಮರ್ಥನೀಯ ನಗರ ಮತ್ತು ಸಮುದಾಯದ ಅಭಿವೃದ್ಧಿ, ಭೂಮಿಯಲ್ಲಿ ಜೀವನ ಎಂಬ ಅಂಶಗಳ ಅನುಷ್ಠಾನಕ್ಕೆ ಒತ್ತು ಕೊಡಲಿದೆ ಎಂದು ರಾಕೇಶ್ ಕುಂಜೂರ್ ತಿಳಿಸಿದರು.
ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಅತಿಥಿü ಅಭ್ಯಾಗತರಾಗಿದ್ದು ಮಾತನಾಡಿ, ಶಿಸ್ತು, ಸಂವಿಧಾನಬದ್ದ ಮತ್ತು ಸಮಾಜಕ್ಕೆ ಒಳ್ಳೆಯ ನಾಯಕರನ್ನು ಜೆಸಿಐ ನೀಡಿದೆ ಎಂದು ಶುಭ ಹಾರೈಸಿದರು .
ಕಿರಣ್ ಭಟ್ ಮಾತನಾಡಿ, ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನಾಥ ಶೆಟ್ಟಿ ಬಾಳ ಮತ್ತು ಜೇಸಿ ಸುರತ್ಕಲ್ನ 2017ರ ಸಾಲಿನ ಅಧ್ಯಕ್ಷೆ ಚೇತನಾ ದತ್ತಾತ್ರೆಯ ದಂಪತಿಯನ್ನು ಸನ್ಮಾನಿಸಲಾಯಿತು .
ಪ್ರಥಮಾರ್ಧದ ಸಭಾಧ್ಯಕ್ಷತೆಯನ್ನು ಚೇತನಾ ದತ್ತಾತ್ರೆಯ ವಹಿಸಿ ಸ್ವಾಗತಿಸಿದರು. ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ದಿನೇಶ್ ದೇವಾಡಿಗ, ಯೋಗೀಶ್ ದೇವಾಡಿಗ, ಶಶಿಕುಮಾರ್, ಸುಜೀರ್ ಶೆಟ್ಟಿ, ಜ್ಯೋತಿ ಜೆÀ.ಶೆಟ್ಟಿ (ಉಪಾಧ್ಯಕರುಗಳು) ಲೋಕೇಶ ರೈ (ಕಾರ್ಯದರ್ಶಿ), ಶ್ರೀಶಯ್ ಶೆಟ್ಟಿ (ಜೊತೆ ಕಾರ್ಯದರ್ಶಿ), ರಾಕೇಶ್ ಹೊಸಬೆಟ್ಟು (ಕೋಶಾಧಿಕಾರಿ), ಜೆಸಿರೇಟ್ ಅಧ್ಯಕ್ಷೆಯಾಗಿ ಜ್ಯೋತಿ ಪಿ ಶೆಟ್ಟಿ, ಜೂನಿಯರ್ ಜೆಸಿ ಅಧ್ಯಕ್ಷೆಯಾಗಿ ಬಿಂದಿಯಾ ಐ.ಶೆಟ್ಟಿ ಹಾಗೂ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ಅಧಿಕಾರಿಯಾಗಿ ಜೆಸಿಐ ಸೆನೆಟರ್ ಪಶುಪತಿ ಶರ್ಮ ಭಾಗವಹಿಸಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಜೆಸಿಐ ವಲಯಾಧಿಕಾರಿಗಳಾದ ಶ್ರೀನಿವಾಸ್ ಭಟ್, ರಮ್ಯಾ ರಾವ್, ಸುರೇಂದ್ರ ಭಟ್, ಇತರ ಘಟಕ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜೆಸಿಐ ಸುರತ್ಕಲ್ನ ಎಲ್ಲಾ ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದು, ಜಯೇಶ್ ಗೋವಿಂದ್ ಅತಿಥಿüಗಳನ್ನು ವೇದಿಕೆಗೆ ಆಹ್ವಾನಿಸಿದರು. ಜಿತಿನ್ ಶೆಟ್ಟಿ, ವಿನಾಯಕ್, ತಸ್ವಿ ರೈ, ಸ್ತುತಿ, ಲೇಖನ, ಜಾನ್ವಿ ಮುಂತಾದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಕಾರ್ಯದರ್ಶಿ ಲೋಕೇಶ ರೈ ಧನ್ಯವದಿಸಿದರು.
ಕನ್ನಡ ವಿಭಾಗದಿಂದ ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ - ದೂರದೃಷ್ಠಿತ್ವವುಳ್ಳ ಕಾರಂತರ ಮಕ್ಕಳ ಸಾಹಿತ್ಯದಲ್ಲಿ ತರತಮಗಳಿವೆ
ಮುಂಬಯಿ, ಡಿ.15: ಕಾರಂತರ ಬಾಲ ಸಾಹಿತ್ಯ ಕೃತಿಗಳು ವೈಶಿಷ್ಟ್ಯತೆವುಳ್ಳವು. ಮಕ್ಕಳ ಸಾಹಿತ್ಯದ ಅಗತ್ಯಗಳನ್ನು ಸರಳ ಭಾಷೆ, ಪದ್ಯಗಳ ಬಳಕೆ, ಕೋಡಂಗಿ ಶಬ್ದಗಳ ಮೂಲಕ ರಚಿಸಿದ್ದಾರೆ. ಮನಸ್ಪರ್ಶಿ ಶಬ್ದಗಳ ಬಳಕೆ ಕಾರಂತರ ಬರವಣಿಗೆಯ ಶ್ರೇಷ್ಠತೆಯಾಗಿದೆ. ಮಕ್ಕಳ ಸಾಹಿತ್ಯದಲ್ಲಿ ವಿವಿಧ ವಯೋಮಾನದವರಿಗೆ ತಕ್ಕ ಹಾಗೆ ಸಾಹಿತ್ಯ ರಚಿಸಬೇಕು ಎಂಬ ಚಿಂತನೆ ಮೂಡಿಸಿದ ದೂರದೃಷ್ಠಿ ಕಾರಂತರು. ಸ್ವಲ್ಪ ದೊಡ್ಡವರಾಗುತ್ತಾ ಹೋದ ಹಾಗೆ ಮಾಹಿತಿ, ಲೋಕಜ್ಞಾನ, ಚಿಂತನೆಗಳನ್ನು ಒಳಗೊಂಡ ಕಥಾನಕಗಳಿರಬೇಕು ಎಂಬ ಮಾರ್ಗದರ್ಶಿ ಸೂತ್ರವನ್ನು ಕಾರಂತರು ತಮಗೆ ತಾವೇ ಹಾಕಿಕೊಂಡಿದ್ದರು. ಆದುದರಿಂದ ಕಾರಂತರ ಮಕ್ಕಳ ಸಾಹಿತ್ಯದಲ್ಲಿ ತರತಮಗಳಿವೆ ಎಂದು ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್ ತಿಳಿಸಿದರು.
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶನಿವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ಡಾ| ಶಿವರಾಮ ಕಾರಂತ ದತ್ತಿಯಾಗಿಸಿ ಡಾ| ಜನಾರ್ದನ ಭಟ್ `ಶಿವರಾಮ ಕಾರಂತರ ಸಣ್ಣ ಕಥೆಗಳು ಮತ್ತು ಕಾರಂತರ ಮಕ್ಕಳ ಸಾಹಿತ್ಯ’ ವಿಷಯವಾಗಿ ಉಪನ್ಯಾಸವನ್ನಿತ್ತರು.
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಸಾಹಿತಿಗಳಾದ ಡಾ| ಜಿ.ಡಿ ಜೋಶಿ, ಡಾ| ವಿಶ್ವನಾಥ ಕಾರ್ನಾಡ್, ಕನ್ನಡ ಸೇನಾನಿ ಎಸ್.ಕೆ ಸುಂದರ್, ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ| ಸುನೀತಾ ಎಂ.ಶೆಟ್ಟಿ, ರಾಜೀವ ನಾಯಕ, ವೈ.ವಿ ಮಧುಸೂದನ್ ರಾವ್, ಡಾ| ದಾಕ್ಷಾಯಣಿ ಯಡವಳ್ಳಿ, ಡಾ| ಈಶ್ವರ ಅಲೆವೂರು, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಕೊಲ್ಯಾರು ರಾಜು ಶೆಟ್ಟಿ, ಮಿಇತ್ರಾ ವೆಂಕಟ್ರಾಜ್, ಓಂದಾಸ್ ಕಣ್ಣಂಗಾರ್, ಅವಿನಾಶ್ ಕಾಮತ್, ಸಾ.ದಯಾ, ಎ.ನರಸಿಂಹ ರಾವ್, ಪಿ.ಎಸ್ ಕಾರಂತ, ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆ ಗೈದರು. ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶ್ಯಾಮಲಾ ಪ್ರಕಾಶ್ ಧನ್ಯವದಿಸಿದರು.
ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-ಕೃತೀಷ್ ಆರ್.ಸುವರ್ಣಗೆ ಕಂಚು ಪದಕ
ಮುಂಬಯಿ, ಜ.11: ಗುಜರಾತ್ ರಾಜ್ಯದ ದಮಾನ್ನಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ 9ನೇ ಅಖಿಲ ಭಾರತ ಆಹ್ವಾನಿತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಾ| ಕೃತೀಷ್ ರವೀಂದ್ರ ಸುವರ್ಣ ಕಂಚು ಪದಕ ಪಡೆದು ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡಿಗ ಕ್ರೀಡಾಪಟು.
ಕೃತೀಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗರಿ ಮೂಲತಃ ರವೀಂದ್ರ ಸುವರ್ಣ ಹಾಗೂ ಬೆಳ್ತಂಗಡಿ ಪಣಕಜೆ ನಿವಾಸಿ ಧನ್ಯ ಸುವರ್ಣ ದಂಪತಿ ಸುಪುತ್ರ ಆಗಿದ್ದು ಸೂರತ್ನಲ್ಲಿ ಎಂಟನೇ ತರಗತಿ ವಿದ್ಯಾಥಿರ್ü ಆಗಿದ್ದಾರೆ.
ಬಂಟರ ಸಂಘ ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿ - ಕಾರ್ಯಾಧ್ಯಕ್ಷರಾಗಿ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಆಯ್ಕೆ
ಮುಂಬಯಿ, ಜ.11: ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷ ಆಗಿ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಆಯ್ಕೆ ಆಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ಶುಕ್ರವಾರ (ಜ.12) ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಜರುಗಲಿದ್ದು ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ನಿರ್ಗಮನ ಅಧ್ಯಕ್ಷರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ಸಿಟಿ ಪ್ರಾದೇಶಿಕ ಸಮಿತಿಯ ಇತರ ಪದಾಧಿಕಾರಿಗಳಾಗಿ ಸಂಚಾಲಕ ಭುಜಂಗ ಆರ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶಿವರಾಮ್ ಎನ್.ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ, ಜತೆ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಮಹಾಬಲ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನಿತಾ ಎ.ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಚಿತಾ ಶೆಟ್ಟಿ, ಕಾರ್ಯದರ್ಶಿ ವಿನೋದಾ ಶೆಟ್ಟಿ, ಕೋಶಾಧಿಕಾರಿ ಯಮುನಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸಾಗರ್ ಶೆಟ್ಟಿ, ಕಾರ್ಯದರ್ಶಿ ಆದಿತ್ಯ ಶೆಟ್ಟಿ, ಕೋಶಾಧಿಕಾರಿ ಪೂಜಾ ಶೆಟ್ಟಿ, ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಎಸ್.ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ತನುಜ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಶೆಟ್ಟಿ, ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಎಂ.ಶೆಟ್ಟಿ, ಐ.ಟಿ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಆರ್.ಶೆಟ್ಟಿ, ಸಲಹೆಗಾರರಾದ ಕೃಷ್ಣ ವಿ.ಶೆಟ್ಟಿ, ರಾಘು ಪಿ.ಶೆಟ್ಟಿ, ಇನ್ನ ಜಯರಾಮ ಶೆಟ್ಟಿ, ಪ್ರಸಾದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ, ಅಶೋಕ್ ಪಕ್ಕಳ ಅವರೂ ಅಧಿಕಾರ ಸ್ವೀಕರಿಸುವರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ.ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ದಕ್ಷಿಣ ಮುಂಬಯಿ ಪ್ರಾದೇಶಿಕ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬಿ, ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಉಪಸ್ಥಿತರಿರುವರು ಎಂದು ವಕ್ತಾರರು ತಿಳಿಸಿದ್ದಾರೆ.
ಯುಸಿಎಂಎಎಸ್ ಪರೀಕ್ಷೆ-ಕು| ಸಿಯಾ ಬಿ.ಶೆಟ್ಟಿ ತೃತೀಯ ಸ್ಥಾನ
ಮುಂಬಯಿ, ಜ.11: ಜಪಾನ್ ರಾಷ್ಟ್ರದ ಸಂಸ್ಥೆಯು ಇತ್ತೀಚೆಗೆ ಮುಂಬಯಿನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಮಹಾರಾಷ್ಟ್ರ ರಾಜ್ಯ ಮಟ್ಟದಲ್ಲಿ ನಡೆಸಿದ 14ನೇ (ಯೂನಿವರ್ಸಲ್ ಕಾನ್ಸೆಪ್ಟ್ ಆಫ್ ಮೆಂಟಲ್ ಆ್ಯರಿತ್ಮೆಟಿಕ್ ಸಿಸ್ಟಂ) ಲೆಕ್ಕದ ಮನಿಚೌಕಟ್ಟು ಮತ್ತು ಮಾನಸಿಕ ಸಂಖ್ಯಾವಿದ್ಯಾ (ಯುಸಿಎಂಎಎಸ್) ಸ್ಪರ್ಧೆಯಲ್ಲಿ ವಿೂರಾರೋಡ್ ಪೂರ್ವದ ದಾಲ್ಮಿಯಾ ಹೈಸ್ಕೂಲ್ ವಿದ್ಯಾಥಿರ್sನಿ ಕು| ಸಿಯಾ ಭಾಸ್ಕರ್ ಶೆಟ್ಟಿ ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡತಿ ಆಗಿದ್ದಾರೆ.
ಈಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪಾದೂರು ನಿವಾಸಿ ಸಿಎ| ಭಾಸ್ಕರ್ ಶೆಟ್ಟಿ ಹಾಗೂ ಉಡುಪಿ ಮಣಿಪುರ ಮೂಲತಃ ಭವಾನಿ ಬಿ.ಶೆಟ್ಟಿ ದಂಪತಿ ಸುಪುತ್ರಿಯಾಗಿರುವ ಈಕೆ ಪ್ರತಿಭಾನ್ವಿತ ತುಳುಕನ್ನಡತಿ ಆಗಿದ್ದಾರೆ.
ಜ.20: ಶ್ರೀ ಸಚ್ಚೀದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಮುಂಬಯಿ ಭೇಟಿ-ಪಾದಪೂಜೆ-ಪ್ರವಚನ-ಆಶೀರ್ವಚನ
ಮುಂಬಯಿ, ಜ.10: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕರ್ಕಿ ಅಲ್ಲಿನ ದೈವಜ್ಞ ಬ್ರಾಹ್ಮಣ ಸಮುದಾಯದ ಗುರುವರ್ಯ, ಜ್ಞಾನೇಶ್ವರ ಪೀಠಾಧಿಪತಿ ಶ್ರೀ ಸಚ್ಚೀದಾನಂದ ಜ್ಞಾನೇಶ್ವರ್ ಭಾರತಿ ಸ್ವಾಮೀಜಿ ಅವರು ಇದೇ ಜ.20ರ ಭಾನುವಾರ ಬೃಹನ್ಮುಂಬಯಿಗೆ ಪಾದಾರ್ಪಣೆ ಮಾಡುವರು.
ಅಂದು ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ (ಶಿವಸೇನಾ ಭವನದ ಸನಿಹ) ಪದ್ಮಬಾಯಿ ಠಕ್ಕರ್ ಮಾರ್ಗದಲ್ಲಿನ ದೈವಜ್ಞ ಹಿತವರ್ಧಕ ಸಮಾಜದಿಂದ ಭವ್ಯ ಶೋಭಯಾತ್ರೆ ಮೂಲಕ ಶ್ರೀಪಾದರನ್ನು ಸ್ವಾಗತಿಸಿ ಸ್ಥಾನೀಯ ಸ್ವಾತಂತ್ರ ್ಯವೀರ ಸಾವರ್ಕರ್ ಮಾರ್ಗದಲ್ಲಿನ ವನಿತಾ ಸಮಾಜ ಭವನಕ್ಕೆ ಬರಮಾಡಿ ಕೊಳ್ಳಲಾಗುವುದು.
ಅಲ್ಲಿ ಪೂರ್ವಾಹ್ನ 11.00 ಗಂಟೆಗೆ ಸಾರ್ವಜನಿಕ ಪಾದಪೂಜೆ ನಡೆಸಲಾಗುವುದು. ಬಳಿಕ ಧಾರ್ಮಿಕ ಸಭೆ, ಶ್ರೀಗಳಿಂದ ಪ್ರವಚನ, ಸ್ವಾಮೀಜಿ ದರ್ಶನ, ಆಶೀರ್ವಚನ, ಮಹಾಪ್ರಸಾದ (ಭೋಜನ) ನಡೆಯಲಿದೆ.
ಕೆನರಾ ದೈವಜ್ಞ ಅಸೋಸಿಯೇಶನ್ನ ಅಧ್ಯಕ್ಷ ಸದಾನಂದ್ ಎಸ್.ಶೇಠ್, ಗೌ| ಪ್ರ| ಕಾರ್ಯದರ್ಶಿ ಗಜಾನ ನ ಡಿ.ಪವಾಸ್ಕರ್, ಅಖಿಲ ಭಾರತ ದೈವಜ್ಞ ಸಮಾಜೋನ್ನತಿ ಪರಿಷದ್ ಮುಂಬಯಿ ಅಧ್ಯಕ್ಷ ದಿನಕರ್ ಎಸ್.ಬೈಕೆರಿಕರ್, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಕೆ.ದಾಭೋಲ್ಕರ್ ಮತ್ತು ಉಭಯ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ಈ ಪುಣ್ಯಾಧಿ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.
ಭಾರತದ ಪಶ್ಚಿಮ ಕರಾವಳಿಯ ಗೋವಾ ಪ್ರದೇಶದಲ್ಲಿ ಅಧಿಕವಾಗಿ ನೆಲೆಕಂಡ ಶಾಸ್ತ್ರಜ್ಞ ಧರ್ಮೀಯ ಸೇರಿದ ಸಮುದಾಯ. ಕರ್ನಾಟಕ ಮತ್ತು ಮಹಾರಷ್ಟ್ರದ ಕರಾವಳಿಯಲ್ಲೂ ನೆಲೆಕಂಡ ಈ ಸಮುದಾಯವು ಅಕ್ಕಸಾಲಿಗ (ಸೋನಾರ-ಜ್ಯುಯೆಲರಿ) ಈ ಸಮಾಜದ ಕುಲ ಕಸಬು. ಸುಶಿಕ್ಷಿತ ಸಮಾಜ ಆಗಿರುವ ದೈವಜ್ಞರು ಮುಂಬಯಿಯಲ್ಲೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link