Brief Mumbai News with pictures
Kemmannu News Network, 18-05-2018 16:28:01
ಕರ್ನಾಟಕ ವಿಧಾನಸಭೆ ಚುನಾವಣೆ-ಕೆ.ಆರ್ ಪೇಟೆ ಕ್ಷೇತ್ರದಿಂದ ಮುಂಬಯಿ ಉದ್ಯಮಿ ಡಾ| ನಾರಾಯಣ ಆರ್.ಗೌಡ ದ್ವಿತೀಯ ಬಾರಿ ಶಾಸಕರಾಗಿ ಆಯ್ಕೆ
ಮುಂಬಯಿ, ಮೇ.15: ಕರ್ನಾಟಕ ರಾಜ್ಯ ಅಸೆಂಬ್ಲಿ ಚುನಾವಣೆ-2018ರಲ್ಲಿ ಕೃಷ್ಣರಾಜಪೇಟೆ (ಕೆ.ಆರ್.ಪೇಟೆ) ವಿಧಾನಸಭಾ ಕ್ಷೇತ್ರದಿಂದ ಜನತಾ ದಳ ಜಾತ್ಯಾತೀತ (ಜೆಡಿಎಸ್) ಪಕ್ಷದ ಅಧಿಕೃತ ಅಭ್ಯಥಿರ್üಯಾಗಿ ಮತ್ತೆ ಸ್ಪರ್ಧಿಸಿದ ಮುಂಬಯಿ ಮಹಾನಗರದಲ್ಲಿನ ಏಕೈಕ ಕನ್ನಡಿಗ ಸ್ಪರ್ಧಿ ಡಾ| ನಾರಾಯಣ ಆರ್.ಗೌಡ ಅವರು ದ್ವಿತೀಯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೇಸ್ (ಐ) ಪಕ್ಷದ ಕೆ.ಬಿ ಚಂದ್ರಶೇಖರ್ ಅವರ ವಿರುದ್ಧ 88,016 ಮತಗಳನ್ನು ಪಡೆದು ನಾರಾಯಣ ಗೌಡ ಗೆಲುವು ಸಾಧಿಸಿದ್ದಾರೆ. ಚಂದ್ರಶೇಖರ್ 70,897 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಬಿಜೆಪಿ ಅಭ್ಯಥಿರ್ü ಭೋಕಳ್ಳಿ ಮಂಜುನಾಥ್ ಅವರು 9,819 ಮತಗಳೊಂದಿಗೆ ತೃತೀಯ ಸ್ಥಾನ ಪಡೆದಿರುವರು. ಆ ಮೂಲಕ ನಾರಾಯಣ ಗೌಡ ಅವರು 17,119 ಮತಗಳಿಂದ ಜಯಭೇರಿ ಗಳಿಸಿದ್ದಾರೆ. ಸುಮಾರು 1093 ನೋಟಾ ವೋಟುಗಳೂ ಇಲ್ಲಿ ಚಲಾವಣೆ ಆಗಿವೆ.
ಈ ಬಾರಿ ಸುಮಾರು ಒಟ್ಟು 11 ಹುರಿಯಾಳುಗಳು ಕಣದಲ್ಲಿದ್ದರು. ರಾಷ್ಟ್ರದ ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ರಾಷ್ಟ್ರೀಯಾಧ್ಯಕ್ಷ, ಹೆಚ್.ಡಿ ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ನಿಕಟವರ್ತಿ ಆಗಿರುವ ನಾರಾಯಣ ಗೌಡರು ಕಳೆದ 2013ರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯಭೇರಿ ಸಾಧಿಸಿದ್ದರು. ಅಂತೆಯೇ ನುಡಿದಂತೆ ನಡೆದು ತನ್ನ ಕ್ಷೇತ್ರವನ್ನು ಸರ್ವೋನ್ನತಿಗಾಗಿ ಶ್ರಮಿಸಿ ಜನಾನುರೆಣೆಸಿದ್ದರು. ಕರ್ಮಭೂಮಿ ಮುಂಬಯಿಯಲ್ಲಿದ್ದು ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದೂ ಕಳೆದ ಸುಮಾರು ಒಂದುವರೆ ದಶಕದಿಂದÀ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಸಕ್ರೀಯರಾಗಿ ಹುಟ್ಟೂರ ಸ್ವಕ್ಷೇತ್ರ ಕೃಷ್ಣರಾಜಪೇಟೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.
ಮುಂಬಯಿ ಮಹಾನಗರದಲ್ಲಿನ ಉದ್ಯಮಿ, ಕೊಡುಗೈದಾನಿ, ಸಂಘ-ಸಂಸ್ಥೆಗಳ ಮಹಾಪೆÇೀಷಕ ಈ ಬಾರಿ 2018ರ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕ ರಾಜ್ಯ ಅಸೆಂಬ್ಲಿ ಸದಸ್ಯರಾಗಿ ಆರಿಸಿ ಬಂದಿರುವುದು ಜನ್ಮಭೂಮಿ ಕರ್ನಾಟಕದ ವಿಧಾನ ಸಭೆಯಲ್ಲಿ ಕರ್ಮಭೂಮಿ ಮುಂಬಯಿಯಲ್ಲಿನ ಕನ್ನಡಿಗರ ಧ್ವನಿಯಾಗುವ ಆಶಯ ಮುಂಬಯಿ ಕನ್ನಡಿಗರು ವ್ಯಕ್ತ ಪಡಿಸಿದ ಕರ್ನಾಟಕ ರಾಜ್ಯದಲ್ಲಿ ಜನಪ್ರತಿನಿಧಿಯಾಗಿ ಪ್ರತಿನಿಧಿಸಲು ಮುಂಬಯಿ ನೆಲೆಯ ಶಾಸಕನೋರ್ವನ ಅಗತ್ಯವಿದ್ದು, ಕರ್ನಾಟಕದಲ್ಲಿ ನಾರಯಾಣ ಗೌಡರ ಪ್ರತಿನಿಧಿತ್ವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ವರದಾನವಾಗಲಿದೆ ಎನ್ನುವ ಅಭಿಮತ ವ್ಯಕ್ತ ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಮೂಲದ ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿ, ಅದೇ ಸಂಘದ ಪ್ರಾಯೋಜಕತ್ವದ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಅನೇಕ ವರ್ಷಗಳ ಅವಿರತ ಸೇವೆಗೈದು, ಮಹಾನಗರದಲ್ಲಿನ ನೂರಾರು ತುಳು-ಕನ್ನಡಿಗ ಸಂಘಟನೆಗಳ ಹಿತೈಷಿ, ದಾನಿಯಾಗಿ ಜನಮಾನಸದಲ್ಲಿ ಜನಾನುರಾಗಿರುವ ನಾರಾಯಣ ಗೌಡರ ವಿಜಯ ಫಲಿಸಿರುವುದಕ್ಕೆ ಮಹಾನಗರ ಮುಂಬಯಿಯಲ್ಲಿನ ತುಳು-ಕನ್ನಡಿಗರ ಬಹುತೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಒಕ್ಕಲಿಗ ಸಮಾಜ ಮುಂಬಯಿಯ ಮುಂದಾಳುಗಳು ನಾರಾಯಣ ಗೌಡರನ್ನು ಅಭಿನಂದಿಸಿ ಶುಭಕೋರಿದ್ದಾರೆ.
ಇಂದಿಲ್ಲಿ ಪತ್ನಿ ದೇವಕಿ ಎನ್. ಗೌಡ, ಜೆಡಿಎಸ್ನ ಮುಖಂಡರು ಮತ್ತು ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಮತದಾರರು, ಅಸಂಖ್ಯ ಅಭಿಮಾನಿಗಳ ಜನ ಸಾಗರದೊಂದಿಗೆ ಭವ್ಯ ಮೆರವಣಿಗೆಯಲ್ಲಿ ವಿಜಯೋತ್ಸವ ಸಂಭ್ರಮಿಸಿದ ನೂತನ ಶಾಸಕ ನಾರಾಯಣ ಗೌಡರು ತನ್ನ ವಿಜಯಕ್ಕೆ ಆಶೀರ್ವಾದಿಸಿ ಸಹಕರಿಸಿದ ಸರ್ವರನ್ನೂ ಅಭಿವಂದಿಸಿದ್ದಾರೆ.
ಉಪ್ಪಳ ಕಡಲ ಕಿನಾರೆಯಲ್ಲಿ `ಶ್ರೀ ವಿಷ್ಣುಸಹಸ್ರನಾಮ ಅಭಿಯಾನ’ ಉದ್ಘಾಟನೆ
ಮುಂಬಯಿ, ಮೇ. 18: ಕಾಸರಗೋಡು ಉಪ್ಪಳ ಕೊಂಡೆವೂರು ಅಲ್ಲಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ `ಅತಿರಾತ್ರ ಸೋಮಯಾಗ’ದ ಪೂರ್ವಭಾವಿಯಾಗಿ `ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಭಿಯಾನ’ದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 20.05.2018 ಆದಿತ್ಯವಾರ ಅಪರಾಹ್ನ 3.00 ಗಂಟೆಯಿಂದ ಸೂರ್ಯಾಸ್ತದವರೆಗೆ `ಉಪ್ಪಳ ಶಾರದಾನಗರದ ಕಡಲಕಿನಾರೆ’ ಇಲ್ಲಿ ನಡೆಯಲಿದೆ. ಅಪರಾಹ್ನ.00 ಗಂಟೆಗೆ ದೀಪಪ್ರಜ್ವಲನೆ, ಭಜನೆ, 3.45ರಿಂದ ಸಾಮೂಹಿಕವಾಗಿ ವಿಷ್ಣುಸಹಸ್ರನಾಮಾವಳಿಯೊಂದಿಗೆ ಅರ್ಚನೆ, 4.30ಕ್ಕೆ ಧಾರ್ಮಿಕ ಸಭೆ, 6.00 ಗಂಟೆಗೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಮಹಾಪೂಜೆ, ಸೂರ್ಯಾಸ್ತ ಸಮಯದಲ್ಲಿ ಸಮುದ್ರಪೂಜೆ ನಡೆಸಿ ಪ್ರಸಾದ ವಿತರಿಸಲಾಗುವುದು.
ಧಾರ್ಮಿಕ ಸಭೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಸಭಾಧ್ಯಕ್ಷತೆಯನ್ನು ವಸಂತ ಪೈ ಬದಿಯಡ್ಕ ವಹಿಸಲಿದ್ದಾರೆ. ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ ಮತ್ತು ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳ ದಿವ್ಯಉಪಸ್ಥಿತಿ ಇರಲಿದ್ದು, ಮುಖ್ಯಅತಿಥಿüಗಳಾಗಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಅಜಿತ್ ಕುಮಾರ್ ರೈ ಮಾಲಾಡಿ, ಶಂಕರಪ್ರಸಾದ್ ಕುಂಬಳೆ, ಯಶಪಾಲ್ ಸುವರ್ಣ, ಮಾಧವ ಕಾವುಗೋಳಿ ಮತ್ತು ಡಾ| ಆಶಾಜ್ಯೋತಿ ರೈ ಪಾಲ್ಗೊಳ್ಳಲಿದ್ದಾರೆ.
ಮೋನಪ್ಪ ಭಂಡಾರಿ, ಕೋಡಿಬೈಲು ನಾರಾಯಣ ಹೆಗ್ಡೆ, ಕರುಣಾಕರ ಬೆಳ್ಚಪ್ಪಾಡ, ಕುಟ್ಟಿ ಕೃಷ್ಣನ್, ಶಿವರಾಮ್ ಬಂಗೇರ ಹಾಗೂ ಅಶೋಕ್ ಶ್ರೀಯಾನ್ ರವರು ಉಪಸ್ಥಿತರಿರುವರು.
ಉಪ್ಪಳ ಗೇಟಿನಿಂದ ಕಾರ್ಯಕ್ರಮಕ್ಕೆ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಭಕ್ತಾದಿಗಳು ಈ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣ್ಯಭಾಜನರಾಗಬೇಕಾಗಿ ವಿನಂತಿ.
ರವಿ ಶೆಟ್ಟಿಗೆ ಬಂಟ್ಸ್ ಕತಾರ್ ಸನ್ಮಾನ-ಅಬ್ದುಲ್ಲಾ ಮೋನು ಅವರಿಗೆ ಸೇವಾ ಸಂಪದ ಪ್ರಶಸ್ತಿ (ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ,ಮೇ.18: ಕೊಲ್ಲಿ ರಾಷ್ಟ್ರ ಕತಾರ್ ಅಲ್ಲಿನ ಬಂಟ್ಸ್ ಕತಾರ್ ಸಂಸ್ಥೆಯ ಪಂಚಮ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿದ್ದು ಈ ಸಂದರ್ಭದಲ್ಲಿ ಕತಾರ್ನ ಪ್ರತಿಪ್ಠಿತ ಎಟಿಎಸ್ ಸಮೂಹದ ಆಡಳಿತ ನಿರ್ದೇಶಕ ಮೂಡಂಬೈಲು ರವಿ ಶೆಟ್ಟಿ ಹಾಗೂ ಜ್ಯೋತಿ ರವಿ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಕತಾರ್ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲಾ ಮೋನು ಅವರಿಗೆ ಪ್ರತಿಷ್ಠಿತ ಬಂಟ್ಸ್ ಕತಾರ್ನ ಪ್ರಕಾಶ್ ಚಂದ್ರ ಅಜಿಲ ಸ್ಮರಣಾರ್ಥ ಸೇವಾ ಸಂಪದ ಪ್ರಶಸ್ತಿ 2018 ನೀಡಿ ಗೌರವಿಸಲಾಯಿತು.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕತಾರ್ನಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ ಖ್ಯಾತ ಉದ್ಯಮಿ, ಕಲಾ ಪೋಷಕ, ಕ್ರೀಡಾ ಪೆÇೀಷಕ, ಸಾಮಾಜಿಕ ಸೇವಾ ಚಟುವಟಿಕೆಗಳ ಮುಂಚೂಣಿಯ ಯುವ ಧುರೀಣ ರವಿ ಶೆಟ್ಟಿ ಅವರು ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್ ಕತಾರ್ ಮೊದಲಾದ ಸಂಘಟನೆಗಳ ಮುಂಚೂಣಿ ನಾಯಕರಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಕಾರ್ಯಕ್ರಮದ ವಿಶೇಷ ಅತಿಥಿü ಡಾ| ಶಶಿಕಲಾ ಶೆಟ್ಟಿ ಗುರುಪುರ (ನಿರ್ದೇಶಕಿ, ಸಿಂಬೋಸಿಸ್ ಸ್ಕೂಲ್ ಆಫ್ ಲಾ, ಪುಣೆ) ಅಭಿನಂದಿಸಿದರು ಅತಿಥಿü ಸತ್ಕಾರ, ಕಲಾವಿದರಿಗೆ ಪೆÇ್ರೀತ್ಸಾಹ, ನಿರಂತರ ಚಟುವಟಿಕೆಗಳ ಮಧ್ಯೆ ಯಶಸ್ವೀ ಉದ್ಯಮಿಯಾಗಿ ನೂರಾರು ತುಳುವರಿಗೆ ಉದ್ಯೋಗದಾತರಾಗಿರುವ ರವಿ ಶೆಟ್ಟಿ ದಂಪತಿಗಳ ಸಾಧನೆಯನ್ನು ಖ್ಯಾತ ಭಾಗವತ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ಮರಿಸಿ ಹಾರೈಸಿದರು.
ದೊಹ ಕತಾರ್ನ ಇಂಡಿಯನ್ ಕಲ್ಚರಲ್ ಸೆಂಟರ್ನ ಅಧ್ಯಕ್ಷೆ ಮಿಲನ್ ಅರುಣ್, ಹವ್ಯಾಸಿ ಯಕ್ಷಗಾನ ಕಲಾವಿದ ಕದ್ರಿ ನವನೀತ ಶಟ್ಟಿ, ಯಂ. ಪಲಾಂಜಿ ಸಂಸ್ಥೆಯ ಪ್ರಧಾನ ಪ್ರಬಂಧಕ ಜೆಪ್ಪು ಚಿದಾನಂದ ನಾಯ್ಕ, ಕತಾರ್ ಡಿಸೈನ್ ಕನ್ಸ್ಸೋರ್ಟಿಯಂ ಸಂಸ್ಥೆಯ ಬಿ.ಆರ್ ಸತೀಶ್ ಮುಖ್ಯ ಅತಿಥಿüಗಳಾಗಿ ಪಾಲ್ಗೊಂಡಿದ್ದರು.
ಬಂಟ್ಸ್ ಕತಾರ್ನ ಅಧ್ಯಕ್ಷ ನವನೀತ ಶೆಟ್ಟಿ ಸ್ವಾಗತಿಸಿದರು. ರಾಮ್ ಮೋಹನ್ ರೈ ಅಭಿನಂದನಾ ಭಾಷಣ ಮಾಡಿದರು. ಅಮತಿ ಅಕ್ಷಿಣಿ ಶೆಟ್ಟಿ ಮತ್ತು ನವೀನ್ ಶೆಟ್ಟಿ ಇರುವೈಲು ಕಾರ್ಯಕ್ರಮ ನಿರೂಪಿಸಿದರು.
ಸಮುದಾಯದ ಸದಸ್ಯರಿಂದ ಭಾರತೀಯ ಹಬ್ಬಗಳ ವೈಶಿಷ್ಟ್ಯವನ್ನು ವಿವಿಧ ನೃತ್ಯಗಳಿಂದ ಅನಾವರಣ ಗೊಳಿಸಲಾಯಿತು. ಪಟ್ಲ ಸತೀಶ್ ಶೆಟ್ಟಿ ನಿರ್ದೇಶನದಲ್ಲಿ ಖ್ಯಾತ ಕಲಾವಿದರಿಂದ `ಚಂದ್ರಹಾಸ ಚರಿತ್ರೆ’ ಯಕ್ಷಗಾನ ಪ್ರದರ್ಶಿಸಿತು.
ಉಪಾಧ್ಯಕ್ಷ ರಾಮಚಂದ್ರ ಶೆಟ್ಟಿ ಪೇಜಾವರ ಪ್ರಧಾನ ಕಾರ್ಯದರ್ಶಿ ರೋಶನ್ ಶೆಟ್ಟಿ , ಕೋಶಾಧಿಕಾರಿ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯದರ್ಶಿ ಚೈತಾಲಿ ಉದಯ ಶೆಟ್ಟಿ ಧನ್ಯವದಿಸಿದರು.
ಖಾರ್ ಜವಾಹರ್ ನಗರ ಪಹೇಲ್ವಾನ್ ಚಾಳ್ನ ಶ್ರೀ ಶನಿಮಹಾತ್ಮ ಸಮಿತಿಯಿಂದ ಜರುಗಿದ - ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವ-ಶನೀಶ್ವರ ಗ್ರಂಥಪಾರಾಯಣ
ಮುಂಬಯಿ, ಮೇ.17: ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಸಂಚಾಲಕತ್ವದಿಂದ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹಾರ್ ನಗರ್ನ ಪಹೇಲ್ವಾನ್ ಚಾಳ್ನಲ್ಲಿ ಸೇವಾ ನಿರತ ಸದ್ಯ ಸಾಯಿಧಾಮ್ ಬಿಲ್ಡಿಂಗ್ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಕಳೆದ ಮಂಗಳವಾರ ಸಾಮೂಹಿಕ ಶನಿ ಪೂಜೆಮತ್ತು ಶನೀಶ್ವರ ಗ್ರಂಥಪಾರಾಯಣದೊಂದಿಗೆ ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವವು ಸಧ್ಭಕ್ತರೆಲ್ಲರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ಸುಸಾಂಗವಾಗಿ ನೆರವೇರಿಸಲ್ಪಟ್ಟಿತು. ಖಾರ್ ಪೂರ್ವದ ಸ್ಥಾನೀಯ ನಗರ ಸೇವಕಿ ಶ್ರೀಮತಿ ಪ್ರಜ್ಞ ಭೂತ್ಕಾರ್ ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆ ಪ್ರಯುಕ್ತ ಅಪರಾಹ್ನ ಕಳಶ ಮುಹೂರ್ತ, ಭಜನೆ, ಸದ್ಭಕ್ತರ ಪರವಾಗಿ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ, ಮಂಗಳಾರತಿಗೈದು ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು. ಅರ್ಚಕ ನಾಗೇಶ್ ಸುವರ್ಣ ಅವರು ಕಲಶ ಪ್ರತಿಷ್ಠಾಪನೆಗೈದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಚಿತ್ರಕರ್ ಶೆಟ್ಟಿ ಮತ್ತು ಲಕ್ಷಿ ್ಮೀ ಶೆಟ್ಟಿ ದಂಪತಿ ಪೂಜೆಯ ಯಜಮಾನಿಕೆ ವಹಿಸಿದ್ದರು.
ಈ ಗ್ರಂಥಪಾರಾಯಣ, ಪೂಜೆ ಇತ್ಯಾದಿ ಪುಣ್ಯಾಧಿ ಕಾರ್ಯಕ್ರಮದಲ್ಲಿ ಸ್ಥಳಿಯ ಮಾಜಿ ನಗರ ಸೇವಕರಾದ ರಾಜು ಭೂತ್ಕÀರ್, ಸಮಿತಿಯ ಗೌರವ ಅಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಅಧ್ಯಕ್ಷ ಶಂಕರ್ ಕೆ.ಸುವರ್ಣ, ಕಾರ್ಯಾಧ್ಯಕ್ಷ ಆರ್.ಡಿ ಕೋಟ್ಯಾನ್, ಉಪಾಧ್ಯಕ್ಷರಾದ ದೇವೇಂದ್ರ ವಿ.ಬಂಗೇರ, ಶರತ್ ಮೂಡಿಬಿದ್ರಿ, ಉಪ ಕಾರ್ಯಧ್ಯಕ್ಷ ಜಯರಾಮ್ ಶೆಟ್ಟಿ, ಅರ್ಚಕ ಹಾಗೂ ಗೌರವ ಕೋಶಾಧಿಕಾರಿ ನಾಗೇಶ್ ಸುವರ್ಣ, ಪೂಜಾ ಸಮಿತಿ ಕಾರ್ಯದರ್ಶಿ ಜನಾರ್ದನ ಸಾಲಿಯಾನ್, ಉಪ ಕಾರ್ಯದರ್ಶಿ ರಮೇಶ್ ಪೂಜಾರಿ, ನರಸಿಂಹ ಸಾಲಿಯಾನ್, ಸಹ ಅರ್ಚಕರಾದ ಕೃಷ್ಣ ಕುಲಾಲ್, ಪೂಜಾ ಸಮಿತಿ ಕಾರ್ಯದರ್ಶಿ ರವೀಂದ್ರ ಕೋಟ್ಯಾನ್, ವಿಶ್ವನಾಥ ಕುಂದರ್, ಭಾರತ್ ಬ್ಯಾಂಕ್ನ ನಿರ್ದೇಶಕ ಅಡ್ವಕೇಟ್ ಸೋಮನಾಥ್ ಬಿ.ಅವಿೂನ್, ಪ್ರಬಂಧಕ ಸೋಮನಾಥ್ ಪೂಜಾರಿ, ಸಂಗೀತಾ ಎಸ್.ಪೂಜಾರಿ, ಯುವಕ ವೃಂದದ ಕಾರ್ಯಾಧ್ಯಕ್ಷವಿಜಯ್ ಸಾಲಿಯಾನ್, ಜೊತೆ ಕೋಶಾಧಿಕಾರಿ ವಿನೋದ್ ಹೆಜಮಾಡಿ, ಸಮಿತಿ ಸದಸ್ಯರಾದ ರಮೇಶ್ ಪೂಜಾರಿ, ಮಹಿಳಾ ಮಂಡಳಿ ಕಾರ್ಯಾಧ್ಯಕ್ಷೆ ಕೇಸರಿ ಬಿ. ಅವಿೂನ್, ಕಾಂದಿವಲಿ ಕನ್ನಡ ಸಂಘದ ಮಾಜಿ ಗೌರವಾಧ್ಯಕ್ಷ ಶ್ಯಾಮರಾಜ್ ಶೆಟ್ಟಿÀ, ಅಧ್ಯಕ್ಷ ಪೆÇಲ್ಯ ಜಯಪಾಲ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಿತಿಯ ಇತರ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯೆಯರು, ಯುವ ವಿಭಾಗ ಸೇರಿದಂತೆ ವಿವಿಧ ಉಪಸಮಿತಿಗಳ ಸದಸ್ಯರು, ಮಹಾನಗರದಲ್ಲಿನ ಬಹುಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಿದ್ದು ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಗುರು ನಾರಾಯಣ ಯಕ್ಷಗಾನ ಮಂಡಳಿಯ ಸಚಿನ್ ಪೂಜಾರಿ ಅವರನ್ನು ಸಮಿತಿಯ ಟ್ರಸ್ಟಿ ಸದಸ್ಯ ನಾರಾಯಣ ಜಿ.ಕೋಟ್ಯಾನ್ ಪುಷ್ಪಗುಚ್ಛ, ಪ್ರಸಾದ ನೀಡಿ ಗೌರವಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.
ತಂತ್ರಜ್ಞಾನದಲ್ಲಿ ಆಧುನಿಕ ವಿದ್ಯಮಾನಗಳು: ಅಂತರರಾಷ್ಟ್ರೀಯ ಕಾರ್ಯಗಾರ:
ವಿಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮನ್ವಯತೆಯಿಂದ ಶಾಂತಿ, ನೆಮ್ಮದಿ
ಚಿತ್ರಶೀರ್ಷಿಕೆ: ಕುವೆಂಪು ವಿ.ವಿ.ಯ ಮಾಜಿ ಕುಲಪತಿ ಡಾ. ಕೆ. ಚಿದಾನಂದ ಗೌಡ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು (18 ಯು.ಜೆ.ಆರ್. 1)
ಉಜಿರೆ: ಸಮಾಜದಲ್ಲಿ ಧರ್ಮ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕತೆಯ ಮಧ್ಯೆ ಸಮನ್ವಯ, ಸಾಮರಸ್ಯ ಇದ್ದಾಗ ಮಾತ್ರ ಆರೋಗ್ಯಪೂರ್ಣ ಜೀವನ ನಡೆಸಿ ಶಾಂತಿ, ನೆಮ್ಮದಿ ಹೊಂದಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಕೆ. ಚಿದಾನಂದ ಗೌಡ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ “ ತಂತ್ರಜ್ಞಾನದಲ್ಲಿ ಆಧುನಿಕ ವಿದ್ಯಮಾನಗಳು” ಎಂಬ ಅಂತರರಾಷ್ಟ್ರೀಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ನಾಗಾಲೋಟದ ಬೆಳವಣಿಗೆಯಲ್ಲಿ ನಾವು ಧರ್ಮವನ್ನು ಕಡೆಗಣಿಸಿದರೆ ಶಾಂತಿ, ನೆಮ್ಮದಿ ಹಾಗೂ ಸಂತೋಷ ಸಿಗುವುದಿಲ್ಲ. ನಮ್ಮ ಮನಸ್ಸು ಮತ್ತು ಹೃದಯ ಪರಿಶುದ್ಧವಾಗಿದ್ದು, ಪವಿತ್ರವಾದಾಗ ಮಾತ್ರ ಆಧ್ಯಾತ್ಮಿಕತೆಯೊಂದಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಜಪ, ತಪ, ಧ್ಯಾನ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಇದನ್ನು ಪಡೆಯಬಹುದು ಎಂದು ಋಷಿ, ಮುನಿಗಳು ಸಾಧಿಸಿ ತೋರಿಸಿದ್ದಾರೆ.
ಮಾನವ ವಿಕಾಸದ ಹಾದಿಯಲ್ಲಿ ಶಿಲಾಯುಗ, ಲೋಹಯುಗ, ಕೈಗಾರಿಕಾ ಕ್ರಾಂತಿಯ ಯುಗ, ತಂತ್ರಜ್ಞಾನದ ಯುಗ, ಎಲೆಕ್ಟ್ರಿಕಲ್ ಯುಗ, ವಿದ್ಯುನ್ಮಾನದ ಯುಗ, ವೆಬ್ ಯುಗ, ಮೊಬೈಲ್ ಯುಗ, ಜ್ಞಾನದ ಅಂತರಜಾಲ ಯುಗ - ಹಂತ ಹಂತವಾಗಿ ಬೆಳವಣಿಗೆಯಾಗಿದ್ದು 2030ರ ವೇಳೆಗೆ ವಸ್ತುಗಳ ಅಂತರಜಾಲ (Iಟಿಣeಡಿಟಿeಣ oಜಿ ಖಿhiಟಿgs – I.ಔ.ಖಿ) ಮೂಲಕ ಅತಿ ಹೆಚ್ಚು ಜನರು ಮತ್ತು ಅತಿ ಹೆಚ್ಚು ವಸ್ತುಗಳ ಮಧ್ಯೆ ಸಂಪರ್ಕ ಸಾಧ್ಯವಾಗುತ್ತದೆ. ನಾವು ಜ್ಞಾನಿಗಳು ಹಾಗೂ ಬುದ್ಧಿವಂತರಾಗುವುದರ ಜೊತೆಗೆ ಹೃದಯ ಶ್ರೀಮಂತಿಕೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನೆ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿ ಯುವಜನತೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ, ಪ್ರೋತ್ಸಾಹ ನೀಡುವುದೇ ಕಾರ್ಯಗಾರದ ಉದ್ದೇಶವಾಗಿದೆ. ಇಡಿ ದಿನದ ಕಾಂiÀರ್iಗಾರದಲ್ಲಿ 154 ಮಂದಿ ಪ್ರಬಂಧಗಳನ್ನು ಮಂಡಿಸುವರು ಎಂದು ತಿಳಿಸಿದರು.
ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಡೀನ್ ಪ್ರೊ. ಎಸ್. ಆರ್. ಮಹಾದೇವ ಪ್ರಸನ್ನ ಮಾತನಾಡಿ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದ್ದು, ಆಧುನಿಕ ತಂತ್ರಜ್ಞಾನ ಬೋಧನೆಯಲ್ಲಿ ಪ್ರಾಧ್ಯಾಪಕರು ಕೂಡಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕಾರ್ಯಗಾರದಲ್ಲಿ ಭಾಗವಹಿಸಿ, ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸುವುದರೊಂದಿಗೆ, ಸಂಶಯ, ಸಮಸ್ಯೆಗಳಿಗೆ ಪರಿಹಾರವನ್ನೂ ಪಡೆಯಬಹುದು.
ಎಲ್ಲಾ ಶಿಕ್ಷಣ ಸಂಸ್ಥೆಗಳೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಯೆ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಅವರು ಹೆಗ್ಗಡೆಯವರನ್ನು ಕೋರಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು: ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿಜ್ಞಾನದ ಬೆಳವಣಿಗೆಯಿಂದ ಇಂದು ಜೀವನ ಯಾಂತ್ರಿಕವಾಗಿದ್ದು ನಾವು ಮಾನವೀಯತೆಯನ್ನು ಕಳೆದುಕೊಳ್ಳಬಾರದು. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ಗ್ರಾಮೀಣ ಪ್ರದೇಶದ ಜನರಿಗೆ ಪರಿಚಯಿಸಿದ್ದು ಕೃಷಿ, ಹೈನುಗಾರಿಕೆ, ನೀರಾವರಿ, ಗ್ರಾಮೀಣ ಗುಡಿ ಕೈಗಾರಿಕೆಯಲ್ಲಿ ಅವರು ಉನ್ನತ ಸಾಧನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ಲಾಘಿಸಿ ಅಭಿನಂದಿಸಿದ್ದಾರೆ ಎಂದು ಹೆಗ್ಗಡೆಯವರು ಹೇಳಿದರು.
ಪ್ರಪಂಚದ ಎರಡು ಮಹಾಯುದ್ಧಗಳು, ಸಂಘರ್ಷ ಹಾಗೂ ತೀವ್ರ ಪೈಪೋಟಿಯಿಂದಾಗಿ ತಂತ್ರಜ್ಞಾನದ ಬೆಳವಣಿಗೆಯಾಗಿದೆ. ಜೀವನ ಮಟ್ಟ ಸುಧಾರಿಸಿದೆ. ಸೌಲಭ್ಯಗಳು ಹೆಚ್ಚಾಗಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿಯೂ ಸಾಕಷ್ಟು ಪ್ರಗತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಾನವೀಯತೆ ಮತ್ತು ಸಾಮರಸ್ಯ ಇದ್ದಾಗ ಸುಖ-ಶಾಂತಿಯ ಜೀವನ ಸಾಧ್ಯ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.
ಡಾ. ಧರ್ಮಣ್ಣ ಸ್ವಾಗತಿಸಿದರು. ಪ್ರೊ. ಶ್ವೇತಾ ಎಸ್.ವಿ. ಧನ್ಯವಾದವಿತ್ತರು. ಪ್ರೊ. ಶುಭದಾ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧ್ಯಾತಮಿಕತೆ ಮಧ್ಯೆ ಸಮನ್ವಯ ಇರಬೇಕು.
ಪ್ರಾರ್ಥನೆ, ಧ್ಯಾನದಿಂದ ಮನಸ್ಸು ಪವಿತ್ರವಾಗುತ್ತದೆ.
ಪ್ರಗತಿಯ ಹೆಸರಿನಲ್ಲಿ ಮಾನವೀಯತೆ ಮರೆಯಬಾರದು
ಆಧುನಿಕ ತಂತ್ರಜ್ಞಾನ ಬೋಧನೆಗೆ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರು ಹರಸಾಹಸ ಮಾಡಬೇಕಾಗುತ್ತದೆ.
ಕಾರ್ಯಗಾರದಿಂದ ಜ್ಞಾನ ವೃದ್ಧಿಯಾಗುತ್ತದೆ.
ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು.
ಎಲ್ಲಾ ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು.
ಕಾರ್ಯಗಾರದಲ್ಲಿ 154 ಮಂದಿ ಪ್ರಬಂಧಗಳನ್ನು ಮಂಡಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link