Brief Mumbai - Mangalore news with pictures
Kemmannu News Network, 28-05-2018 10:27:08
ಬಿಲ್ಲವರ ಭವನದಲ್ಲಿ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿದ ಸುಬ್ರಾಯ ಚೊಕ್ಕಾಡಿ ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ : ಸುಬ್ರಾಯ ಚೊಕ್ಕಾಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.26: ಗ್ರಾಮೀಣ ಮತ್ತು ಹೊರನಾಡ ಕನ್ನಡಿಗರು ಮಾತ್ರ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಆದರೆ ಒಳನಾಡ ಕನ್ನಡಿಗರಲ್ಲಿ ಇದು ಮರೆಯಾಗುತ್ತಿರುವುದು ದುರದೃಷ್ಟ. ಹೊರನಾಡಿನ ಜನರಿಂದಲೇ ಭಾಷೆ, ಸಂಸ್ಕೃತಿಯ ಉಳಿವು ಸ್ತುತ್ಯರ್ಹ. ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ. ನಾನು ನನಗಾಗಿ, ಬದುಕಿಗಾಗಿ ಬರೆಯುತ್ತಿದ್ದವ. ಆದರೆ ನನ್ನ ಬರವಣಿಗೆ ಓದುವ ಸಾಹಿತ್ಯಸಕ್ತ ಸ್ನೇಹಿತರಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ರಾತ್ರಿ ಬೆಳಗಾಗುವ ಒಳಗೆ ಪುಸ್ತಕಗಳನ್ನು ನಾಡಿನಾದ್ಯಂತ ಹೊತ್ತು ಮಾರಿದ ಕಾರಣ ನನ್ನ ಬರವಣಿಗೆಯು ವಿಸ್ತಾರವಾಯಿತು. ಜೊತೆಗೆ ನನ್ನ ಓದಿನ ಪ್ರೀತಿ ಸಂಪಾದನೆ ಆಯಿತು. ಇವೆಲ್ಲವುಗಳ ಫಲವೇ ಈ ಪ್ರಶಸ್ತಿ ಆಗಿದೆ ಎಂದು ಪ್ರಶಸ್ತಿಗೆ ಉತ್ತರಿಸಿ ಸಾಹಿತಿ, ಪ್ರಸಿದ್ಧ ಕವಿ, ವಿಮರ್ಶಕ ಹಾಗೂ ಶಿಕ್ಷಕ ಸುಬ್ರಾಯ ಚೊಕ್ಕಾಡಿ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ-2018ನ್ನು ಸ್ವೀಕರಿಸಿ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭಕ್ಕೆ ಚೊಕ್ಕಾಡಿ ದೀಪ ಬೆಳಗಿಸಿ ಚಾಲನೆಯನ್ನಿತ್ತರು. ಬಿಲ್ಲವರ ಮಹಾಮಂಡಲ ಅಧ್ಯಕ್ಷ ಜಯ ಸಿ.ಸುವರ್ಣ ಪ್ರಧಾನ ಅಭ್ಯಾಗತರಾಗಿದ್ದು ಚೊಕ್ಕಾಡಿ ಅವರಿಗೆ (ರೂಪಾಯಿ 25,000 ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳೊಂದಿಗೆ) ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ರಚಿತ `ಪ್ರಗತಿಪರ ಚಿಂತನೆಯ ಸಾಹಿತಿ ಎಂ.ಬಿ ಕುಕ್ಯಾನ್’ಕೃತಿಯನ್ನು ಬಿಡುಗಡೆ ಗೊಳಿಸಿದರು.
ನನ್ನನ್ನು ಸಾಹಿತಿಯಾಗಿಸಿದ್ದೇ ಜಯ ಸುವರ್ಣರು. ಅವರಿಂದಾಗಿ ಸರಸ್ವತಿಯನ್ನು ಮತ್ತು ಸ್ವಂತಿಕೆಯಿಂದ ಲಕ್ಷ್ಮೀಯನ್ನು ಒಲಿಸಿಕೊಂಡಿದ್ದೇನೆ. ಅಕ್ಷಯದೊಂದಿಗೆ ನಾನೂ ಬೆಳೆದಿದ್ದೇನೆ. ಮತ್ತೆನೇಕರೂ ಬೆಳೆದಿದ್ದಾರೆ. ನಾರಾಯಣ ಗುರುಗಳಿಂದ ಪ್ರೇರಿತನಾದ ನಾನು ಬಹಳಷ್ಟು ಸಂಪಾದಿಸಿದ್ದೇನೆ. ಅದ್ದರಿಂದ ಈ ಪ್ರಶಸ್ತಿಯನ್ನು ನಾನು ಗುರುಗಳಿಗೆನೇ ಸಮರ್ಪಿಸಿದ್ದೇನೆ ಎಂದು ಎಂ.ಬಿ ಕುಕ್ಯಾನ್ ಅಭಿಪ್ರಾಯ ಪಟ್ಟರು.
ಈ ಬಾರಿಯೂ ಯೋಗ್ಯ ವ್ಯಕ್ತಿಗೆ ಈ ಪ್ರಶಸ್ತಿ ಸಂದಿದೆ ಎಂದ ಸುನೀತಾ ಶೆಟ್ಟಿ, ಚೊಕ್ಕಾಡಿಯವರ ಬರಹ, ಕವಿತೆಗಳ ಬಗ್ಗೆ ಮೆಲುಕು ಹಾಕಿದರು. ಅಂತೆಯೇ ಎಂ.ಬಿ ಕುಕ್ಯಾನ್ ಬಗ್ಗೆ ಅಲೆವೂರು ಬರೆದ ಕೃತಿಯೂ ಶ್ಲಾಘನೀಯ. ಸಮಾಜದಲ್ಲಿ ಸರ್ವೋತ್ಕೃಷ್ಟ ಸೇವೆಗೈದ ಮಹಾನೀಯರನ್ನು ಗುರುತಿಸುವ ಅಗತ್ಯವಿದೆ. ಇದರಿಂದ ಉದಯೋನ್ಮುಖ ಪ್ರತಿಭೆ, ಸಮಾಜ ಸೇವಕರಿಗೆ ಪೆÇ್ರೀತ್ಸಹದಾಯಕ ಆಗುವುದು ಎಂದರು.
ಗುರು ನಾರಾಯಣ ಆವರ ತತ್ವಾನುಸಾರ ಮುನ್ನಡೆಯುವ ಬಿಲ್ಲವ ಸಮಾಜ ಗುರುಗಳ ಅನುಗ್ರಹದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಕೊಂಡು ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಪ್ರಶಸ್ತಿ ಒಂದು ಉತ್ತಮ ಮತ್ತು ಆದರ್ಶವಾದ ಕಾಯಕವಾಗಿದೆ. ಭವಿಷ್ಯತ್ತಿನುದ್ದಕ್ಕೂ ಈ ಪ್ರಶಸ್ತಿ ಯೋಗ್ಯವಕ್ತಿಗಳಿಗೆ ಪ್ರಾಪ್ತಿಯಾಗಲಿ. ಇದು ಯುವ ಪೀಳಿಗೆಯೂ ಮಾದರಿಯಾಗಬೇಕು. ಬಿಲ್ಲವ ಸಂಸ್ಥೆಯೂ, ಸಮಾಜವು ಸಾಹಿತಿಕವಾಗಿಯೂ ಸಾಮರಸ್ಯಮಯವಾಗಿ ಮುನ್ನಡೆಯುತ್ತಿರಲಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ನ್ಯಾ| ರಾಜ ವಿ.ಸಾಲ್ಯಾನ್, ಶಂಕರ ಡಿ.ಪೂಜಾರಿ, ಡಾ| ಯು.ಧನಂಜ ಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾ ನ್ ವೇದಿಕೆಯಲ್ಲಿ ಆಸೀನರಾಗಿದ್ದು ಬಿಲ್ಲವರ ಭವನದಲ್ಲಿ ಈ ಹಿಂದೆ ಸೇವಾನಿರತರಾಗಿದ್ದು ಇತ್ತೀಚೆಗೆ ಡಾಕ್ಟರೇಟ್ ಸನದು ಪ್ರಾಪ್ತಿಸಿದ ಡಾ| ಮೋಹನ್ ಬೊಳ್ಳಾರು ಅವರನ್ನು ಅಭಿನಂದಿಸಿ ಗೌರವಿಸಿದರು.
ಮಮತಾ ಆರ್.ನಾಯಕ್ ಪ್ರಾರ್ಥನೆಯನ್ನಾಡಿದರು. ಅಸೋಸಿಯೇಶನ್ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಯರಾಮ ಜಿ.ನಾಯಕ್ ಪುರಸ್ಕೃತರನ್ನು ಪರಿಚಯಿಸಿದ ರು. ಅಕ್ಷಯ ಸಹ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸತೀಶ್ ಎನ್.ಬಂಗೇರ ಅಭಾರ ಮನ್ನಿಸಿದರು.
ಮನೋರಂಜನಾ ಕಾರ್ಯಕ್ರಮವಾಗಿ ಶ್ರೀ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾಥಿರ್üಗಳು ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಡಾ| ರಮೇಶ್ ಕುಬಲ್ ಅವರು ಮರಾಠಿ ಭಾಷೆಯಲ್ಲಿ ರಚಿಸಿ ಕಾವ್ಯ ಕಣಂಜಾರ್ ತುಳು ಭಾಷೆಗೆ ಅನುವಾದಿಸಿ ಗುರುನಾರಾಯಣ ನಾಟಕೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕøತ `ಕುಡೊಂಜಿ ಕತೆ’ ತುಳು ನಾಟಕÀವನ್ನು ಮಧುಕರ್ ಮಾನೆ ನಿರ್ದೇಶನ ಹಾಗೂ ಸದಾಶಿವ ಎ.ಕರ್ಕೇರ ಮತ್ತು ಗಣೇಶ ಸುವರ್ಣ ಇವರ ಪ್ರಾಯೋಜಕತ್ವದಲ್ಲಿ ಅಸೋಸಿಯೇಶನ್ನ ನಲ್ಲಸೋಫರಾ-ವಿರಾರ್ ಸ್ಥಳೀಯ ಸಮಿತಿ ಸದಸ್ಯರು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಧರ್ಮೇಶ್ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಎಂಎಸ್ಆರ್ಎಸ್ ಕಾಲೇಜು ಶಿರ್ವ 1993ರ ಬಿಎ ಬ್ಯಾಚ್ `ಬೆಳ್ಳಿ ಸಂಭ್ರಮ’ ಹಳೆವಿದ್ಯಾಥಿರ್üಗಳೇ ಶಿಕ್ಷಣ ಸಂಸ್ಥೆಯ ಆಧಾರಸ್ತಂಭಗಳು:ವಿ.ಸುಬ್ಬಯ್ಯ ಹೆಗ್ಡೆ
ಮುಂಬಯಿ,ಮೇ.27: ಉಡುಪಿ ಅಲ್ಲಿನ ಶಿರ್ವ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜ್ನ 38ವರ್ಷಗಳ ಇತಿಹಾಸದಲ್ಲಿ ಬಿಎ ತರಗತಿಯಲ್ಲಿ ಅತ್ಯಧಿಕ 85 ವಿದ್ಯಾಥಿರ್üಗಳನ್ನು ಹೊಂದಿದ 1993ನೇ ಬ್ಯಾಚ್ನ ವಿದ್ಯಾಥಿರ್üಗಳು 25ವರ್ಷಗಳ ನಂತರ ಸಂಘಟಿತರಾಗಿ ಕಾಲೇಜ್ನಲ್ಲಿ ಸಮಾವೇಶಗೊಂಡು ತಮ್ಮ ಹಳೆಯ ಸವಿನೆನಪುಗಳ ವಿನಿಮಯದೊಂದಿಗೆ ಶಿಕ್ಷಣ ನೀಡಿದ ಗುರುಗಳನ್ನು ಗೌರವಿಸುವ ಕಾರ್ಯಅಭಿನಂದನೀಯ. ಹಳೆವಿದ್ಯಾಥಿರ್üಗಳೇ ಶಿಕ್ಷಣ ಸಂಸ್ಥೆಯ ಆಧಾರಸ್ತಂಭಗಳು ಎಂದು ಶಿರ್ವ ವಿದ್ಯಾವರ್ಧಕ ಸಂಘ (ರಿ.) ಇದರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ನುಡಿದರು.
ಶನಿವಾರ ಶಿರ್ವ ಎಂಎಸ್ಆರ್ಎಸ್ ಕಾಲೇಜ್ನ 1993ನೇ ಬ್ಯಾಚ್ ವಿದ್ಯಾಥಿರ್üಗಳು ಸಂಯೋಜಿಸಿದ `ಬೆಳ್ಳಿ ಸಂಭ್ರಮ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹೆಗ್ಡೆ ಮಾತನಾಡಿದರು. ಕಾಲೇಜ್ನ ಪ್ರಾಂಶುಪಾಲ ಪೆÇ್ರ| ಕರುಣಾಕರ ನಾಯಕ್ ಹಳೆ ವಿದ್ಯಾಥಿರ್üಗಳನ್ನು ಅಭಿನಂದಿಸಿ ಮಾತನಾಡುತ್ತಾ, 25ವರ್ಷಗಳ ಬಳಿಕ 76 ವಿದ್ಯಾಥಿರ್üಗಳು ಒಂದಾಗಿ ಸೇರಿದ ಈ ಕ್ಷಣ ಅವಿಸ್ಮರಣಿಯ ಹಾಗೂ ಮನಸ್ಸಿಗೆ ಅತ್ಯಂತ ಆನಂದ ನೀಡಿದೆ ಎಂದರು.
ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ ಸಂಸ್ಕಾರವಂತ ಮಕ್ಕಳೇ ನಮ್ಮ ಆಸ್ತಿ.ಕೃತಜ್ಞತಾ ಭಾವನೆಯೇ ಮನಸ್ಸಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ.ನಮ್ಮಲ್ಲಿಉತ್ತಮ ಮೌಲ್ಯಗಳು ಜಾಗೃತವಾದಾಗ ಮೌಲ್ಯಾಧಾರಿತ ಸಮಾಜದ ನಿರ್ಮಾಣವಾಗುತ್ತದೆಎಂದರು.
`ಬೆಳ್ಳಿ ಸಂಭ್ರಮ’ ಸವಿ ನೆನಪಿಗಾಗಿ ಅಂದಿನ ತಮ್ಮಗುರುವರೇಣ್ಯರಾದ ಪೆÇ್ರ| ವೈ,ಭಾಸ್ಕರ ಶೆಟ್ಟಿ, ಡಾ| ಶಾರದಾ ಎಂ., ಡಾ| ಸುಧಾಕರ ಮರ್ಲ ಕೆ., ಪೆÇ್ರ| ವಿನೋದ್ನಾಥ್, ಪೆÇ್ರ| ಕರುಣಾಕರ ನಾಯಕ್, ಮಂಜುನಾಥ್ಕೆ.ಜಿ, ಸುರೇಂದ್ರ ಶೆಟ್ಟಿ ಹೆಚ್., ರಘುರಾಮ ಶೆಟ್ಟಿ, ಕೆ.ಮುರುಗೇಶ್, ಶ್ರೀಮತಿ ಎಸ್.ನಯನಾ, ರಾಮದಾಸ್ ಪ್ರಭು, ರಮಾನಂದ ಶೆಟ್ಟಿಗಾರ್, ಎನ್.ಲಕ್ಷ್ಮೀ, ಪಿ.ಗೀತಾ ಹಾಗೂ ಕಾಲೇಜಿನ ಸಿಬ್ಬಂಧಿವರ್ಗ ಇಂದಿನ ಉಪನ್ಯಾಸಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಉಮೇಶ ಶೆಟ್ಟಿ, ದಿವಾಕರ ಶೆಟ್ಟಿ, ಗಂಗಾಧರ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಪ್ರಸಾದ್ ಶೆಟ್ಟಿ ಕುತ್ಯಾರು,
ಶಭುನಾ ಸತೀಶ್ ಶೆಟ್ಟಿ ಮುಂಬಯಿ, ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.
ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವನೆಗೈದರು. ಬಳಿಕ ಗುರುಶಿಷ್ಯರೊಂದಿಗೆ ಮನದಾಳದ ಮಾತು-ಸಂವಾದ ನಡೆಯಿತು.
ಇಂತಹ ಕಾರ್ಯಕ್ರಮಗಳು ಒಳ್ಳೆಯ ಯೋಚನೆಗಳಿಗೆ ಮುನ್ನುಡಿ ನೀಡುತ್ತವೆ.ಹೊಸರೀತಿಯ ಸಂತೋಷದಅನುಭವ ಶಿಕ್ಷಕವೃಂದಕ್ಕೆ ನೀಡಿದ್ದೀರಿ. ಕುಟುಂಬ ಸಮೇತರಾಗಿಇಂತಹಕಾರ್ಯಕ್ರಮ ಮಾಡಿದಾಗ ನಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರದ ಮೌಲÀು ಸಿಗುತ್ತವೆ ಎಂದÀು ಪೆÇ್ರ| ಸುಧಾಕರ ಮಾರ್ಲ ಅವರು ಸಮಾರೋಪ ಭಾಷಣವನ್ನುದ್ದೇಶಿಸಿ ತಿಳಿಸಿದರು.
ಆದಿಯಲ್ಲಿ ಅಗಲಿದ ಶಿಕ್ಷಕರಿಗೆ,ಸಹಪಾಠಿಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಸುರೇಶ ದೇವಾಡಿಗ ಅತಿಥಿüವರ್ಯರನ್ನು ಪರಿಚಯಿಸಿದರು. ಶ್ರೀಮತಿ ಗಾಯತ್ರಿ ಪ್ರಾಥಿರ್üಸಿದರು. ಶರಶ್ಚಂದ್ರ ಹೆಗ್ಡೆ ಸ್ವಾಗತಿಸಿದರು. ಶರ್ಮಿಳಾ ಮೋನಿಸ್ ಸಂದೇಶ ವಾಚನ ಮಾಡಿದರು. ಬಾಬುರಾಯ ಆಚಾರ್ಯ, ಶಾಂತಾರಾಮ ವಾಗ್ಲೆ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ವಂದಿಸಿದರು.
ಸಿನಿಮಾ ರಂಗದಲ್ಲಿ ಕರಾವಳಿಯ ಪ್ರತಿಭೆ ಚಾಂದಿನಿ ಅಂಚನ್
ತುಳು ಭಾಷೆಯ ಆಲ್ಬಂ ಮೂಲಕ ಬಣ್ಣದ ಬದುಕಿಗೆ ಬಂದಿರುವ ಸುಪ್ರಿಯಾ ಅಂಚನ್ ಯಾನೆ ಚಾಂದಿನಿ ಅಂಚನ್ ತೆಲುಗು-ಕನ್ನಡ ಸಿನಿಮಾದಲ್ಲೂ ಸೈ ಅನಿಸಿಕೊಂಡಿದ್ದಾರೆ. ಕುಡ್ಲದ ಈ ಬಹುಭಾಷಾ ನಟಿ ತಮ್ಮ ಸಿನಿ ಜರ್ನಿ ಕುರಿತು ತುಂಬಾ ಆತ್ಮ ವಿÀಶ್ವಾಸದಲ್ಲಿದ್ದಾರೆ. ಮಂಗಳೂರು ನನ್ನೂರು. ತುಳು ನನ್ನ ಮಾತೃಭಾಷೆ ನನ್ನೂರಿನ ಚಿತ್ರದಲ್ಲಿ ನಟಿಸುವುದೆಂದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಅನ್ಯ ಭಾಷೆಯ ಚಿತ್ರದಲ್ಲಿ ಎಷ್ಟೇ ಬಿಝಿಯಾಗಿದ್ದರೂ, ನನ್ನೂರಿನ ಆಹ್ವಾನ ಬಂದಾಗ ನಟಿಸಲು ಯಾವತ್ತೂ ನಾನು ರೆಡಿ ಎಂದಿದ್ದಾರೆ.
ರ್ಯಾಂಪ್ನಿಂದ ಸಿನಿಮಾ:
ನಾನು ಓದಿದ್ದು ಮಂಗಳೂರಿನ ಸೇಂಟ್ ಆ್ಯನ್ಸ್ನಲ್ಲಿ ಬಳಿಕ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಮುಗಿಸಿದೆ. ಕಾಲೇಜು ಲೈಫ್ನಲ್ಲಿಯೇ ಡಾನ್ಸ್, ಮಾಡೆಲಿಂಗ್ನಲ್ಲಿ ತೊಡಗಿಕೊಂಡಿದ್ದೆ 2014 ರಲ್ಲಿ ದೆಹಲಿಯಲ್ಲಿ ನಡೆದ ಮಿಸ್ ಗ್ಲೋರಿ ಆಫ್ ಇಂಡಿಯಾದಲ್ಲಿ ಭಾಗವಹಿಸುವ ಮೂಲಕ ಮಾಡೆಲಿಂಗ್ ಜಗತ್ತಿನಲ್ಲಿ ಅವಕಾಶ ಗಟ್ಟಿಯಾಯಿತು. ಜತೆಗೆ ರ್ಯಾಂಪ್ ವಾಕ್ಗಳಿಗೆ ಸಮಯ ನೀಡುತ್ತಿದ್ದೆ. ಬಳಿಕ ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದೆ ಎಂದು ಹೇಳಿದ್ದಾರೆ ಚಾಂದಿನಿ ಅಂಚನ್.
ತೃಪ್ತಿ ನೀಡಿದ ಪಾತ್ರ :
ಮೊಟ್ಟ ಮೊದಲು ಮೋಕೆದ ಮಗಳ್ ತುಳು ಆಲ್ಬಂನಲ್ಲಿ ನಟಿಸಿದ ಬಳಿಕ ಆಲ್ಬಂ ಸಾಂಗ್ಗಳಲ್ಲಿ ಅವಕಾಶಗಳು ಬಂದವು. ನಂತರ ತೆಲುಗು ಚಿತ್ರ ರುದ್ರ ಐಪಿಎಸ್ನಲ್ಲಿ ಸೈಡ್ ರೋಲ್ನಲ್ಲಿ ನಟಿಸಿದೆ. ಇದಾದ ಬಳಿಕ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಜತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಆ್ಯಕ್ಟ್ ಮಾಡಿದೆ. ಇದೊಂದು ದೊಡ್ಡ ಅನುಭವ, ಉಪೇಂದ್ರ ಸರ್ ನಟನೆ ಬಗ್ಗೆ ತುಂಬಾನೆ ಹೇಳ್ಕೊಟ್ರು. ಬಳಿಕ ತೆಲುಗು ಚಿತ್ರರಂಗದಿಂದ ಆಫರ್ ಬಂತು ಈ ಹೊಸ ಚಿತ್ರಕ್ಕೆ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಶೂಟಿಂಗ್ ನಡೆಯುತ್ತಿದೆ. ಅದರ ನಡುವೆ ತುಳು ಚಿತ್ರ ಮಹೇಂದ್ರ ಕಾರ್ಸ್ಟ್ರೀಟ್ ನಿರ್ಮಾಣ-ನಿರ್ದೇಶನದ ಕಾರ್ಣಿಕದ ಕಲ್ಲುರ್ಟಿ ತುಳುನಾಡಿನ ದೈವಾರಾಧನೆ ಕುರಿತು ನಿರ್ಮಾಣವಾಗುತ್ತಿರುವ ವಿಭಿನ್ನ ಚಿತ್ರ. ಇದರಲ್ಲಿ ವಿಭಿನ್ನವಾದ ಮತ್ತು ನನಗೆ ಅತ್ಯಂತ ತೃಪ್ತಿ ಕೊಡುವ ಪಾತ್ರ ಸಿಕ್ಕಿದೆÉ ಎನ್ನುತ್ತಾರೆ ಚಾಂದಿನಿ ಅಂಚನ್.
ಈ ನಡುವೆ ಬಾಲಿವುಡ್ನಲ್ಲೂ ಆಫರ್ ಬಂದಿದೆ. ಇದರ ಮಾತುಕತೆ ನಡೆಯುತ್ತಿದೆ. ಸುಮಾರು ಒಂದು ತಿಂಗಳ ಕಾಲ ಕಾರ್ನಿಕದ ಕಲ್ಲುರ್ಟಿ ಶೂಟಿಂಗ್ ಕರಾವಳಿಯಾದ್ಯಂತ ನಡೆಯಲಿದೆ. ಅದು ಮುಗಿದ ತಕ್ಷಣ ಮುಂಬಯಿಗೆ ತೆರಳುತ್ತೇನೆ. ಜತೆಗೆ ತಮಿಳು ಚಿತ್ರದಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವನ್ನೂ ಜತೆ ಜತೆಯಾಗಿ ನಿರ್ವಹಿಸುತ್ತಿದ್ದೇನೆ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸಿರುವುದು ನನಗೆ ಪೂರಕವಾಗಿದೆ. ಬಿಡುವಿನಲ್ಲಿ ಹಿಂದೂಸ್ತಾನಿ ಸಂಗೀತ ತರಬೇತಿ ಪಡೆಯುತ್ತಿದ್ದೇನೆ ಎಂದು ಚಾಂದಿನಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಟನೆಗೆ ಅವಕಾಶ ಬಂದಾಗ ತಾಯಿ, ತಂಗಿ ಜತೆ ಕೂತು ಕತೆ ಬಗ್ಗೆ ಚರ್ಚಿಸುತ್ತೇವೆ. ನನ್ನ ಪಾತ್ರವನ್ನು ಒಪ್ಪಿಕೊಳ್ಳಲು ಅವರಿಬ್ಬರ ಸಲಹೆಯನ್ನೂ ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ನಾನು ಒಬ್ಬಳೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಚಾಂದಿನಿ ಅಂಚನ್.
ಕಾರ್ಣಿಕದ ಕಲ್ಲುರ್ಟಿ ಚಿತ್ರದಲ್ಲಿ ಚಾಂದಿನಿ ಅಂಚನ್
ಉಪೇಂದ್ರ ಜತೆ ಚಾಂದಿನಿ
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link