Brief Udupi News with Pictures
Kemmannu News Network, 02-08-2018 21:28:46
ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ 22 ನವೀನ ಪಠ್ಯೇತರ ಚಟುವಟಿಕೆಗಳ ಸಂಘಗಳ ಉದ್ಘಾಟನೆ
ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯು ಕೇವಲ ಕಲಿಕೆಗೆ ಮತ್ತು ಆಟೋಟಗಳಿಗೆ ಮಾತ್ರ ಆಧ್ಯತೆ ಕೊಡದೇ ಈ ವರ್ಷದಿಂದ ಮಕ್ಕಳ ಹಿತ ದೃಷ್ಟಿಮತ್ತು ಕ್ರಿಯಾತ್ಮಕತೆಗೆ ಪೆÇ್ರೀತ್ಸಾಹ ಹಾಗೂ ಪೆÇೀಷಣೆ ನೀಡುವ ಉದ್ದೇಶದಿಂದ ಪ್ರತಿ ಶನಿವಾರ ಹೊಸ 22 ಪಠ್ಯೇತರ ಚಟುವಟಿಕೆಗಳನ್ನು ಆರಂಭಿಸಿದ್ದು, ಮಕ್ಕಳಲ್ಲಿ ಉತ್ಸಾಹ ತುಂಬಿಸುವಂತೆ ಮಾಡಿದೆ.
ಪ್ರಾಥಮಿಕ ಮತ್ತು ಪೌಢ ಶಾಲೆಯಲ್ಲಿ ತಿಂಗಳ ಮೊದಲನೆಯ ಮತ್ತು ಮೂರನೆಯ ವಾರ ಒಂದು ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಂಡರೆ, ಎರಡನೆಯ ಮತ್ತು ನಾಲ್ಕನೆಯ ವಾರ ಮತ್ತೊಂದು ರೀತಿಯ ಚಟುವಟಿಕೆಯನ್ನು ನಮೂದಿಸಿ ಮಕ್ಕಳಿಗೆ ವೈವಿಧ್ಯತೆಯ ಅನುಭವವನ್ನು ನೀಡಿದೆ. ಐದನೇ ವಾರದಲ್ಲಿ ಯಾವ ಚಟುವಟಿಕೆಗೂ ಹೋಗುವ ಅವಕಾಶವನ್ನು ಶಾಲೆಯ ಸಿಬಂಧಿ ಒದಗಿಸಿಕೊಟ್ಟಿದೆ.
ಮೊದಲನೆಯ ಮತ್ತು ಮೂರನೆಯ ವಾರದಲ್ಲಿ ಇಕೊ ಕ್ಲಬ್, ಜಾಗ್ರತಿ ಕ್ಲಬ್, ಗ್ರಂಥಾಲಯ ಕ್ಲಬ್, ಬುಲ್ಬುಲ್ಸ್, ಕಬ್ಜ್, ಸೌಟ್ಸ್ ಮತ್ತು ಗೈಡ್ಸ್ ಸಂಘಗಳು ನಡೆಯುತ್ತವೆ. ಎರಡನೆ ಮತ್ತು ನಾಲ್ಕನೇ ವಾರದಲ್ಲಿ ವಿಜ್ಞಾನ ಸಂಘ, ಹಿಂದಿ ಸಭಾ, ಸಿರಿಗನ್ನಡ ಸಂಘ, ಕ್ವಿಜ್ ಕ್ಲಬ್, ನೃತ್ಯ ಸಂಘ, ಸಮಾಜ ಸೇವಾ ಸಂಘ, ಲೇಖಕರ ಸಂಘ, ಅಭಿನಯ ಸಂಘ, ಚಿತ್ರಕಲಾ ಸಂಘ ಇತ್ಯಾದಿಗಳು ನಡೆಯುತ್ತವೆ.
ಇವುಗಳ ಜೊತೆಗೆ ಆಸಕ್ತರು ಚೆಸ್, ಅಬಾಕಸ್, ಮೂಸಿಕ್ ಕ್ಲಬ್ಗಳನ್ನೂ ಸೇರಿಕೊಂಡು ಶಾಲಾ ಅವಧಿಯಲ್ಲೇ ವಿಶೇಷ ಕೌಶಲ್ಯಗಳಲ್ಲಿ ಬೆಳೆಯಬಲ್ಲ್ರು.
ಪ್ರೌಢ ಶಾಲೆಯಲ್ಲಿ ವೈ.ಎಸ್.ಎಮ್, ಐಯ್ನಸ್ಟೆನ್ ಕ್ಲಬ್, ಐ.ಟಿ ಕ್ಲಬ್, ಗೀತ ಗಾಯನ ಸಂಘ, ಭಾಷಣ ಕ್ಲಬ್, ಹಿಂದಿ ಸಭಾ, ಸಿರಿಗನ್ನಡ ಸಂಘಗಳು ಚಾಲ್ತಿಯಲ್ಲಿ ಇವೆ.
ಮೊದಲಿಗೆ ಮಕ್ಕಳಿಗೆ ಇಷ್ಟವಾದ ಚಟುವಟಿಕೆಗಳನ್ನು ಆರಿಸಲು ಅವಕಾಶವನು ನೀಡಲಾಗಿತ್ತು. ತದ ನಂತರ ಪಟ್ಟಿಯನ್ನು ಶಾಲೆಯ ಸೂಚನಾ ಫಲದಲ್ಲಿ ನಮೂದಿಸಲಾಗಿತ್ತು. ಮುಖ್ಯೋಪದ್ಯಾಯರ ಫಾ. ಲ್ಯಾನ್ಸಿ ರವರ ಪ್ರಕಾರ್ “ಮಕ್ಕಳಿಗೆ ಶಿಕ್ಷಣ ಪದ್ಧತಿಯಲ್ಲಿ ವೈವಿಧ್ಯತೆ ಅಗತ್ಯ. ಶಿಕ್ಷಕರಿಗೆ ಈ ಚಟುವಟಿಕೆಗಳು ಹೆಚ್ಚು ಶ್ರಮವಾದರೂ ಮಕ್ಕಳ ಒಳಿತಾಗಬೇಕು ಶಿಕ್ಷಕರ ಮತ್ತು ಶಿಕ್ಷಣದ ಗುರಿ.” ಮುಖ್ಯೋಪಧ್ಯಾಯಿನಿ ವೀರಾ ಡಿಸಿಲ್ವಾ ರವರ ಪ್ರಕಾರ“ಪ್ರತಿ ಕ್ಲಬನ್ನು ಮಕ್ಕಳೇ ನಡೆಸುವಂತೆ ತರಭೇತಿಯನ್ನು ನೀಡುವುದೇ ಇದರ ಉದ್ದೇಶ. ಮಕ್ಕಳಲ್ಲಿ ಇರುವ ಪ್ರತಿಭೆಗಳು ಹೊರಹೊಮ್ಮಲು, ಕ್ರಿಯಾತ್ಮಕತೆಯಲ್ಲಿ ಸದೃಡತೆ ಪಡೆಯುವುದುಸಂಸ್ಥೆಯ ಗುರಿ ಏಕೆಂದರೆ ಪಠೇತರ ಚತುವಟಿಕೆಗಳು ವಿದ್ಯಾರ್ಥಿಗಳಿಗೆ ಕಲಿಕೆಯ ಒತ್ತಡದ ಮಧ್ಯೆ ವ್ಯಾಯಾಮ ಮತ್ತು ವಿರಾಮದ ವಿಧಾನಗಳು,” ಎನ್ನುತ್ತಾರೆ.
ಬಸ್ರೂರು ತುಳುವೇಶ್ವರನ ಮಡಿಲಲ್ಲಿ ತುಳುನಾಡೋಚ್ಚಯ-2018
ಬಸ್ರೂರು ತುಳುನಾಡಿನ ಮತ್ತು ಕರ್ನಾಟಕದ ನಾಗರೀಕತೆಯ ಪ್ರಧಾನ ಮೈಲುಗಲ್ಲಾಗಬೇಕಾದ ಒಂದು ಪ್ರದೇಶ. ಪ್ರಾಚಿನ ತುಳುನಾಡಿನ ಬಂದರು ವಾಣಿಜ್ಯ ಪ್ರದೇಶವಾದ ಬಸ್ರೂರು ಸುಮಾರು 300ಕ್ಕಿಂತಲೂ ಹೆಚ್ಚು ದೇಗುಲಗಳ ನೆಲೆವೀಡಾಗಿತ್ತು. ಇದೀಗ ಸುತ್ತಲೂ ವಾರಾಹಿನದಿಯನ್ನು ಅಪ್ಪಿಕೊಂಡಿರುವ ಈ ಪ್ರದೇಶ ಹಲವು ಸಂಸ್ಕøತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಮೂಕವೇದನೆಯನ್ನು ಅನುಭವಿಸುತ್ತಿದೆ. ಸರಕಾರ ಮತ್ತು ಪುರಾತತ್ವ ಇಲಾಖೆಯ ಮತ್ತು ಅಕಾಡೆಮಿಗಳ ನಿರ್ಲಕ್ಷ್ಯದಿಂದ ತನ್ನ ಮಡಿಲೊಳಗಿದ್ದ ಇತಿಹಾಸವನ್ನು ಸಾರುವ ಸ್ಮಾರಕಗಳು ಮಣ್ಣುಪಾಲಾಗಿವೆ. ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳಾಗಿ, ಮೆಟ್ಟಲುಗಳಾಗಿ ನಾಮಾವಶೇಷಗೊಂಡಿವೆ. ಅಲ್ಲದೆ ತುಳುನಾಡಿನ ಹಾಗೂ ಭಾಷೆಯ ಪ್ರತೀಕವಾದ ತುಳುವೇಶ್ವರನ ದೇಗುಲವು ಶಿಥಿಲಗೊಂಡರೂ, ಪ್ರಕೃತಿ ಶಕ್ತಿಯಿಂದ ಆಲದಮರದಿಂದಾವೃತವಾದ ಗರ್ಭಗುಡಿಯಲ್ಲಿದ್ದು ತನ್ನ ಶಾಪಮೋಕ್ಷಕ್ಕಾಗಿ ಕಾಯುತ್ತಿದ್ದಾನೆ.
ಇಂತಹ ಭವ್ಯ ಪರಂಪರೆಯ ತುಳುನಾಡಿನ ಈ ಪ್ರದೇಶವನ್ನು ಜಗತ್ತಿಗೆ ಸಾರಿ ಹೇಳಬೇಕೆಂಬ ಉದ್ದೇಶದಿಂದ ತುಳುವೆರೆ ಆಯನೊ ಕೂಟವು ನಡೆಸುವ ತುಳುನಾಡೋಚ್ಚಯ ಕಾರ್ಯಕ್ರಮವನ್ನು ಬಸ್ರೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಕಾಸರಗೋಡಿನ ಸದಸ್ಯರು ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ಡಾ.ವಾದಿರಾಜ್ ಭಟ್ಟ್ ರವರಲ್ಲಿ ಚರ್ಚಿಸಿ ಅವರ ಸಹಾಯಸಹಕಾರವನ್ನು ಕೋರಿಕೊಂಡರು. ಈ ಸಂದರ್ಭದಲ್ಲಿ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ “ಈ ಮೊದಲು ಹಲವುಬಾರಿ ತುಳು ಸಮ್ಮೇಳನವನ್ನು ಆಯೋಜಿಸಲು ಹೊರಟರೂ ಅದು ಕೂಡಿಬರಲಿಲ್ಲ, ಈಗ ಕಾಲಕೂಡಿ ಬಂದಿದೆ ಎಂದು ಅನಿಸುತ್ತಿದೆ. ಸಮಸ್ತರನ್ನೂ ಒಟ್ಟು ಸೇರಿಸಿ, ತುಳುನಾಡಿನಲ್ಲಿ ಜಾತಿ-ಮತ-ಭಾಷಾ ಸೌಹಾರ್ದತೆಯನ್ನು ಸಾರುವ ತುಳುನಾಡೋಚ್ಚಯ-2018ನ್ನು ಬಸ್ರೂರಿನಲ್ಲಿ ನಡೆಸುವುದು ತುಂಬಾ ಹೆಮ್ಮೆಯ ವಿಷಯ” ಎಂದರು.
ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಾಧಿಕಾರಿಗಳಾದ ದಯಾನಂದ ಕತ್ತಲ್ಸಾರ್, ಡಾ. ರಾಜೇಶ ಆಳ್ವ, ಆಶಾ ಶೆಟ್ಟಿ ಅತ್ತಾವರ, ಹರೀಶ್ ಶೆಟ್ಟಿ ಪಣಿಯೂರು, ಪ್ರಸಾದ್.ಯಸ್ ಕೊಂಚಾಡಿ, ನಾಗಾರಾಜ್ ಕುದ್ರೊಳಿ, ಭೂಷಣ್ ಕುಲಾಲ್, ರಕ್ಷಿತ್ ಕುಡುಪು, ರಾಧಿಕ ವಾಮಂಜೂರು, ಚೇತನ್ ಕುಮಾರ್ ಕುಲಶೇಖರ, ಮೊದಲಾದವರು ಭೇಟಿನೀಡಿದರು.
ಕೇಂದ್ರ ಸರಕಾರದ ವೈಫಲ್ಯವನ್ನು ಜನತೆಗೆ ತಿಳಿಸುವ ಕೆಲಸವಾಗಬೇಕು – ವಿನಯ ಕುಮಾರ್ ಸೊರಕೆ
ಹಿರಿಯಡ್ಕ: ಜನರಿಗೆ ನಾನಾ ರೀತಿಯ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರವು ಎಲ್ಲಾ ರಂಗದಲ್ಲೂ ವೈಫಲ್ಯವನ್ನು ಕಂಡಿದೆ. ದೇಶದ ಆರ್ಥಿಕ ಸ್ಥಿತಿ ಸುದಾರಣೆ, ನಿರುದ್ಯೋಗ ತಡೆ ಇವುಗಳಲ್ಲಿ ವಿಫಲತೆಯನ್ನು ಸಾಧಿಸಿದ ಕೇಂದ್ರ ಸರಕಾರ ಕೇವಲ ಪ್ರಧಾನಿಗಳ ಸುಳ್ಳು ಭಾಷಣ ಮತ್ತು ವಿದೇಶ ಪ್ರವಾಸವನ್ನು ನೆಚ್ಚಿಕೊಂಡು ಬದುಕುತ್ತಿದೆ. ನಗದು ಅಪನಗದೀಕರಣದ ಮೂಲಕ ದೇಶದ ಜನರನ್ನು ಕಷ್ಟಕ್ಕೆ ಒಳಪಡಿಸಿದ ಸರಕಾರ ರಫೇಲ್ ಡೀಲ್ನ ಬಗ್ಗೆ ಮೌನವಾಗಿದೆ. ಅಲ್ಲದೆ ವಿರೋಧ ಪಕ್ಷಗಳು ಕೇಳುವ ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡದೆ ನುಣುಚಿಕೊಳ್ಳುತ್ತಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರದ 4 ವರ್ಷಗಳ ಆಡಳಿತ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದೆ ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಈ ವೈಫಲ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೆಕಾಗಿದೆ ಎಂದು ಮಾಜಿ ಸಚಿವರು ಮಾಜಿ ಕಾಪು ಶಾಸಕರಾದ ವಿನಯ ಕುಮಾರ್ ಸೊರಕೆಯವರು ಹಿರಿಯಡ್ಕ ಶ್ರೀ ಗಣೇಶ ಕಲಾಮಂದಿರದಲ್ಲಿ ಜರಗಿದೆ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ನುಡಿದರು. ಅವರು ಮುಂದುವರಿಯುತ್ತಾ ರಾಜ್ಯ ಸರಕಾರ ತನ್ನ 5 ವರ್ಷದ ಅಧಿಕಾರದ ಅವಧಿಯನ್ನು ಯಶಸ್ವೀಯಾಗಿ ಪೂರೈಸುತ್ತದೆ ಈ ಬಗ್ಗೆ ಯಾರಿಗೂ ಸಂಶಯ ಬೇಡ ಅಲ್ಲದೆ ಈ ಮೊದಲು ಕಾಂಗ್ರೆಸ್ ಸರಕಾರ ಯೋಜಿಸಿದ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯುತ್ತವೆ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾದರೂ ಕೂಡಾ ನಾನು ಜನರ ಮದ್ಯೆಯೇ ಇದ್ದು ಪಕ್ಷವನ್ನು ಪರಿಣಾಮ ಕಾರಿಯಾಗಿ ಸಂಘಟಿಸುವಲ್ಲಿ ಕೆಲಸವನ್ನು ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತೀ ಶನಿವಾರ ಕಛೇರಿಯಲ್ಲಿ ಲಭ್ಯನಿದ್ದೇನೆ . ಕಾರ್ಯಕರ್ತರು ನಾವೆಲ್ಲಾ ಒಂದಾಗಿ ಪಕ್ಷವನ್ನು ಬೂತ್ ಮಟ್ಟದಿಂದಲೇ ಪುನರಪಿ ಸಂಘಟಿಸಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧರಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರುಗಳಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ ಇವರು ಸಂಧರ್ಬೋಚಿತವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಿಕಾ ಕೇಳ್ಕರ್ ಮತ್ತು ಸುಧಾಕರ ಶೆಟ್ಟಿ ಮೈರ್ಮಾಡಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸೇವಾದಳ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್, ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಷನ್ ಹೆಗ್ಡೆ ಕೊಳ್ಕೆಬೈಲ್, ಬ್ಲಾಕ್ ವೀಕ್ಷಕರಾದ ಮಹಾಬಲ ಕುಂದರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಆತ್ರಾಡಿ, ಕಾಂಗ್ರೆಸ್ ನಾಯಕರಾದ ಶಾಂತಾರಾಮ್ ಸೂಡ, ಉದ್ಯಾವರ ನಾಗೇಶ್ ಕುಮಾರ್, ಭಾಸ್ಕರ್ ಪೂಜಾರಿ, ಪ್ರವೀಣ್ ಶೆಟ್ಟಿ, ವಿನೋದ್ ಕುಮಾರ್ ರಾವ್, ಸುಗಂಧಿ ಶೇಖರ್, ಸುಂದರ್ ಪೂಜಾರಿ, ರಮೇಶ್ ಹರಿಖಂಡಿಗೆ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಗ್ರಾಮಿಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಹೆಗ್ಡೆಯವರು ಸ್ವಾಗತಿಸಿದರು ಮತ್ತು ಪ್ರಧಾನ ಕಾರ್ಯದರ್ಶಿ ಕುತ್ಯಾರು ಬೀಡು ಶ್ರೀಧರ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿ ,ವಂದಿಸಿದರು.
ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
ಉಡುಪಿ, ಆಗಸ್ಟ್ 1 (ಕರ್ನಾಟಕ ವಾರ್ತೆ):- ಮಾರ್ಚ್ ಮತ್ತು ಏಪ್ರಿಲ್ 2018 ರಲ್ಲಿ ನಡೆದ ಎಸ್.ಎಸ್.ಎಲ್.ಸಿ /ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 21.
ಹೆಚ್ಚಿನ ವಿವರಗಳನ್ನು ಇಲಾಖಾ ವೆಬ್ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನಲ್ಲಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ಆಯ್ಕೆಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574881/2573881 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.
02-08-2018 ಜನತಾದಳ ಜ್ಯಾತ್ಯಾತೀತ, ಉಡುಪಿ ಜಿಲ್ಲೆ.
ದಿನಾಂಕ 1-08-2018ನೇ ಬುಧವಾರ ಸಂಜೆ 4 ಘಂಟೆಗೆ ಉಡುಪಿ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ.ಶೆಟ್ಟಿಯವರು ಸದಸ್ಯತ್ವ ನೋಂದಾವಣಿ ಹಾಗೂ ಸರಕಾರದ ಸವಲತ್ತುಗಳನ್ನು ಜನರ ಬಳಿಗೆ ತಲುಪಿಸುವ ಮೂಲಕ ಮುಂಬರುವ ಪಟ್ಟಣ ಪಂಚಾಯತ್, ನಗರ ಸಭೆ ಮತ್ತು ಪುರಸಭೆ ಚುನಾವಣೆಯ ತಯಾರಾಗುವ ಬಗ್ಗೆ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಧ್ಯಕ್ಷರಾದ ವಾಸುದೇವ ರಾವ್ ರವರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿಯ ಬಗ್ಗೆ ನಿರ್ದೇಶನ ನೀಡಿದರು. ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಆಡಿಗ ಇವರು ಕಂದಾಯ ಇಲಾಖೆಯ ಸುತ್ತೋಲೆಗಳಿಂದ ಜನ ಸಮಾನ್ಯರಿಗಾಗುವ ಸಮಸ್ಯೆಗಳನ್ನು ಈ ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿಲ್ಲಾಧ್ಯಕ್ಷರು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜನಸಾಮಾನ್ಯರಿಗಾಗುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯತ್ನಿಸೋಣ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ವಂದಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ವೀಕ್ಷಕರಾದ ಸುಧಾಕರ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ರಾಜ್ಯ ಕಾರ್ಯದರ್ಶಿ ಶೇಖರ್ ಕೋಟ್ಯಾನ್, , ಮಹಿಳಾ ಅಧ್ಯಕ್ಷರಾದ ಶ್ರೀಮತಿ ಅನಿತಾ ಶೆಟ್ಟಿ, ಯುವ ಜನತಾದಳದ ಅಧ್ಯಕ್ಷರಾದ ರೋಹೀತ್ ಕರಂಬಳ್ಳಿ, ಕುಂದಾಪುರ ಕ್ಷೇತ್ರಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಬೈಂದೂರು ಕ್ಷೇತ್ರಾಧ್ಯಕ್ಷರಾದ ಸಂದೇಶ್ ಭಟ್, ರಾಜ್ಯ ಪದಾಧಿಕಾರಿಗಳು, ವಿವಿಧ ಘಟಕದ ಅಧ್ಯಕ್ಷರುಗಳು ಪದಾಧಿಕಾರಿಗಳು ಮತ್ತು ಹಲವಾರು ಕಾರ್ಯಕರ್ತರು ಹಾಜರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link