Brief Mumbai - Mangalore news with pictures
Kemmannu News Network, 12-08-2018 20:40:48
Mumbai Aug. 11 :- The Prime Minister Shri Narendra Modi presenting Gold Medal to the toppers at 56th Convocation of Indian Institute of Technology, Bombay in Mumbai. In pic The Prime Minister Shri Narendra Modi addressing.
ಹತ್ತನೇ ತರಗತಿ ವಿದ್ಯಾಥಿರ್üಗಳಿಗೆ ಮಾನವ ಸಂಪನ್ಮೂಲ ಸಬಲೀಕರಣ ತರಬೇತಿ ಶಿಬಿರ -ಮಾನವಅಂತರ್ಗತ ಪ್ರತಿಭೆಗಳು ಶ್ರೇಷ್ಠ ಸಂಪತ್ತು - ಪೆÇ| ಶ್ರೀರಾಮ್ ಮರಾಠೆ
ಮುಂಬಯಿ (ಶಿರ್ವ), ಆ.12: ಮಾನವ ಸಾಮಾನ್ಯಜೀವಿಯಲ್ಲ. ಇತರರನ್ನುಅರಿಯುವ ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಜೀವನದ ಪ್ರತಿಯೊಂದುಕ್ಷಣದ ಘಟನೆಗಳು ನಮ್ಮಅನುಭವವನ್ನು ವೃದ್ಧಿಸುತ್ತವೆ. ಧನಾತ್ಮಕ ಅನುಭವಗಳು ನಮ್ಮ ವ್ಯಕ್ತಿತ್ವಕ್ಕೆ ಹೊಳಪನ್ನು ನೀಡುತ್ತವೆ. ವಿದ್ಯಾರ್ಥಿದೆಸೆಯಲ್ಲಿಯೇ ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅಂತರ್ಗತ ಪ್ರತಿಭೆಗಳಿಗೆ ಚಾಲನೆ ಸಿಗುತ್ತದೆ. ಮಾನವಅಂತರ್ಗತ ಪ್ರತಿಭೆಗಳು ಶ್ರೇಷ್ಠ ಸಂಪತ್ತುಎಂದು ನಿಟ್ಟೆತಾಂತ್ರಿಕ ಮಹಾ ವಿದ್ಯಾಲಯದಉಪನ್ಯಾಸಕ ಹಾಗೂ ಮಾನವ ಸಂಪನ್ಮೂಲ ಸಬಲೀಕರಣದ ಮಾಸ್ಟರ್ಟ್ರೈನರ್ ಪೆÇ್ರ| ಶ್ರೀರಾಮ್ ಮರಾಠೆ ನುಡಿದರು.
ಕಳೆದ ಶನಿವಾರ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿ ವಿದ್ಯಾಥಿರ್üಗಳಿಗೆ ಶಿರ್ವ ರೋಟರಿ ಕ್ಲಬ್ ಹಾಗೂ ಶಾಲಾ ಇಂಟರ್ಯಾಕ್ಟ್ಕ್ಲಬ್ ವತಿಯಿಂದ ಏರ್ಪಡಿಸಿದ ಮೂರು ದಿನಗಳ "ಮಾನವ ಸಂಪನ್ಮೂಲ ಸಬಲೀಕರಣ ತರಬೇತಿ" ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾಥಿರ್üಗಳಿಗೆ ಪ್ರಶಸ್ತಿಪತ್ರ ವಿತರಿಸಿ ಶ್ರೀರಾಮ್ ಮರಾಠೆ ಮಾತನಾಡಿ ಜೀವನದಲ್ಲಿಒಂದುಗುರಿ, ಶಿಸ್ತು, ಸತತ ಪರಿಶ್ರಮ,ಸಾಧನಾಶೀಲ ವ್ಯಕ್ತಿತ್ವ ಬೆಳೆಸಿಕೊಂಡಾಗ ಸಾಮಾನ್ಯ ಮಾನವ ವಿಶ್ವಮಾನವ ಆಗುತ್ತಾನೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಾಸ್ಟರ್ಟ್ರೈನರ್ ಶ್ರೀರಾಮ್ ಮರಾಠೆ ಅವರನ್ನು ಸನ್ಮಾನಿಸಲಾಯಿತು. ಶಿಬಿರಾಥಿರ್üಗಳ ಪರವಾಗಿ ನೇಹಾ, ರೂಪೇಶ್ ಮಾತನಾಡಿದರು. ಶಿಬಿರದ ಶಾಲಾ ಉಸ್ತುವಾರಿ ಶಿಕ್ಷಕ ಲಕ್ಷ್ಮೀಶ ವಿ.ಆರ್ ಅವರನ್ನು ಅಬಿನಂದಿಸಲಾಯಿತು.
ಇಂಟರ್ಯಾಕ್ಟ್ ಅಧ್ಯಕ್ಷೆ ಪೃಥ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ವ ರೋಟರಿಅಧ್ಯಕ್ಷದೆಂದೂರುದಯಾನಂದ ಶೆಟ್ಟಿ, ರೋಟರಿಅಂತಾರಾಷ್ಠ್ರೀಯಜಿಲ್ಲೆ 3182 ಇದರ ಸಾಕ್ಷರತಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಭಾಗವಹಿಸಿ ಶುಭಕೋರಿದರು.
ಶಾಲಾ ಮುಖ್ಯ ಶಿಕ್ಷಕ ಜಿನರಾಜ್ ಸಿ.ಸಾಲಿಯಾನ್ ಮಾತನಾಡಿ, ಇಂತಹ ಉತ್ತಮ ತರಬೇತಿ ನೀಡಿ, ವಿದ್ಯಾಥಿರ್üಗಳಲ್ಲಿ ಸ್ಫೂರ್ತಿತುಂಬಿದ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆತಾಂತ್ರಿಕ ಮಹಾ ವಿದ್ಯಾಲಯದ ಶ್ರೀರಾಮ್ ಮರಾಠೆ, ಪೆÇ್ರ| ಸುಬ್ರಹ್ಮಣ್ಯ ಭಟ್ ಹಾಗೂ ಉಚಿತವಾಗಿ ವ್ಯವಸ್ಥೆ ಮಾಡಿದ ಶಿರ್ವ ರೋಟರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಶಾಲಾ ವಿದ್ಯಾಥಿರ್ü ನಾಯಕ ಸಂದೀಪ್, ಇಂಟರ್ಯಾಕ್ಟ್ ಕಾರ್ಯದರ್ಶಿ ಮರೀಷಾ, ಇಂಟರ್ಯಾಕ್ಟ್ ಶಿಕ್ಷಕ ಸಂಯೋಜಕಿ ವೀಣಾ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕಿ ಹೇಮಾ ಬಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಬಿ.ಸುಕನ್ಯಾ, ಎಸ್.ರಂಜನಿ, ಕೆ.ಅಶ್ವಿನಿ ಸಹಕರಿಸಿದರು.
ಜಡತ್ವವನ್ನು ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ತುಳು ಆಚರಣೆಗಳಲ್ಲಿದೆ - ಸ್ವರ್ಣ ಆಟಿದ ಆಯನೊ ಕಾರ್ಯಕ್ರಮದಲ್ಲಿ ಪ್ರದೀಪಕುಮಾರ್ ಕಲ್ಕೂರ
ಮುಂಬಯಿ (ಬದಿಯಡ್ಕ), ಆ.12: ಭೋಗ ಜೀವನದಿಂದ ತ್ಯಾಗದತ್ತ ಬದುಕು-ಜೀವನವನ್ನು ಎತ್ತರಕ್ಕೆ ಏರಿಸುವ ಆಚರಣೆ ಈ ಮಣ್ಣಿನ ಸತ್ವದ ಸಂಕೇತ. ಇಂದು ನಮ್ಮನ್ನು ಆವರಿಸಿರುವ ಜಡತ್ವವನ್ನು ನಿವಾರಿಸಿ, ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ತುಳುನಾಡಿನ ಆಚರಣೆಗಳಲ್ಲಿ ಅಡಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ, ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಟಾಲುಮೂಲೆ ವಾಂತಿಚ್ಚಾಲುನಲ್ಲಿ ಭಾನುವಾರ ಆಯೋಜಿಸಲಾದ ಆಟಿದ ಆಯನೊ ದ 50ನೇ ವರ್ಷದ ಸಮಾರಂಭದಲ್ಲಿ ಮುಖ್ಯ ಅತಿಥಿüಗಳಾಗಿ ಕಲ್ಕೂರ ಮಾತನಾಡಿದರು.
ಸಂಸ್ಕøತಿಯೊಳಗಿನ ಬದುಕು ಸೌಖ್ಯ ನೆಮ್ಮದಿ ನೀಡುತ್ತದೆ. ಜಾನಪದ, ಆಚರಣೆಗಳೊಮದಿಗೆ ಒಂದಾಗಿ ಬದುಕಿದಾಗ ಜೀವ ಚೈತ್ಯ ಮೂಡಿಬಂದು ನೆಮ್ಮದಿ ಮೂಡಿಸುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಅತಿಥಿüಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿ ಹರಿದು ಬಂದ ಸಾಂಸ್ಕøತಿಕ ಆಚರಣೆಗಳು ಪ್ರಕೃತಿಯೊಂದಿಗೆ ಜೀವ ಭಾವ ಸಂಬಂಧಗಳೊಂದಿಗೆ ನಿಕಟತೆಯನ್ನು ಹೊಂದಿದೆ ಎಂದು ತಿಳಿಸಿದರು. ಆಟಿಮಾಸದ ಸಂಕಷ್ಟಗಳನ್ನು ಜಾನಪದೀಯ ಚಿಂತನೆಗಳೊಂದಿಗೆ ಜೋಡಿಸಿ ಬದುಕಿನ ನೆಮ್ಮದಿಗೆ ಕಾರಣವಾದ ಆಚರಣೆಗಳನ್ನು ಮರೆಯಾಗದಂತೆ ಕಾಪಿಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಮಲಾರ್ ಮೂಲಬ್ರಹ್ಮಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಧರ್ಮಚಾವಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ತುಳುನಾಡಿನ ಆಚರಣೆಗಳನ್ನು ಯುವ ಸಮಾಜಕ್ಕೆ ತಿಳಿಯಪಡಿಸುವ ಚಟುವಟಿಕೆಗಳು ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಶುಭಹಾರೈಸಿದರು. ಟೈಮ್ಸ್ ಆಫ್ ಕುಡ್ಳ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ಬದಿಯಡ್ಕ ಗ್ರಾ.ಪಂ.ಮಾಜೀ ಅಧ್ಯಕ್ಷ ಮಾಹಿನ್ ಕೇಳೋಟ್, ಸಾಮಾಜಿಕ ಕಾರ್ಯಕರ್ತ ಅಶೋಕ ಭಂಡಾರಿ ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನ್ಯಾಯವಾದಿ ಕೆ.ಶ್ರೀಕಾಂತ್ ಹಾಗೂ ಪ್ರದೀಪಕುಮಾರ್ ಕಲ್ಕೂರ ಆಟಿ ಆಯನೊವನ್ನು ಚೆನ್ನೆಮಣೆ ಆಟವಾಡುವ ಮೂಲಕ ಜಂಟಿಯಾಗಿ ವಿಶಿಷ್ಟ ಚಾಲನೆ ನೀಡಿದರು. ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಕೀರ್ತನ ಕೇಸರಿ ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಪಾಲಕೃಷ್ಣಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ರಂಗ ನಿರ್ದೇಶಕ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಕ್ಕಳಿಗೆ ಆಯೋಜಿಸಲಾದ ವಿವಿಧ ಜಾನಪದ ಕ್ರೀಡಾ ಸ್ಪರ್ಧೆಗಳನ್ನು ಕುಂಬಾರ ಜನಾಂಗ ಸಂಶೋಧಕ ಸೋಮಪ್ಪ ಸಾಲಿಯಾನ್ ಕಟ್ಟೆ ಮೈಸೂರು ಉದ್ಘಾಟಿಸಿದರು. ಶಶಿಪ್ರಭಾ ಮಂಡೆಕಾವು ನಿರ್ವಹಿಸಿದರು. ಯತೀಶ್ ಕುಮಾರ್ ವಂದಿಸಿದರು.
ಧರ್ಮಸ್ಥಳದಲ್ಲಿ ಕರ್ನಾಟಕ ಎಂಜಿನಿಯರ್ಗಳ ಸಂಘದ ಕಾರ್ಯಕಾರಿ ಸಮಿತಿ ಸಭೆ
ಚಿತ್ರಶೀರ್ಷಿಕೆ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ಎಂಜಿನಿಯರ್ಗಳ ಸಂಘದ ಕಾರ್ಯಾಕಾರಿ ಸಮಿತಿಯ ಸಭೆಯನ್ನು ಉದ್ಘಾಟಿಸಿದರು
ಉಜಿರೆ: ಬದುಕಿನ ಎಲ್ಲಾ ರಂಗಗಳಲ್ಲಿ ಎಂಜಿನಿಯರ್ಗಳ ಅವಶ್ಯಕತೆ ಇದ್ದು ಅವರು ಆತ್ಮಸಾಕ್ಷಿಗೆ ಸರಿಯಾಗಿ ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಕರ್ನಾಟಕ ಎಂಜಿನಿಯರ್ಗಳ ಸಂಘದ ಆರನೇ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರ್ಗಳು ವಿಜ್ಞಾನಿಗಳು ಹಾಗೂ ಚಿಂತಕರಾಗಿದ್ದು ಸಾವಿರಾರು ವರ್ಷಗಳ ಹಿಂದೆಯೇ ಪಿರಮಿಡ್, ತಾಜ್ಮಹಲ್ ನಂತಹ ವಿಶೇಷ ವಿನ್ಯಾಸದ ಕಟ್ಟಡಗಳ ಕಲ್ಪನೆ ಮಾಡಿ ವಿನ್ಯಾಸ ರೂಪಿಸಿದ್ದರು. ಅನೇಕ ವೈಶಿಷ್ಠ್ಯಪೂರ್ಣ ಸ್ಮಾರಕಗಳು, ದೇವಸ್ಥಾನಗಳು, ಚರ್ಚ್ಗಳು, ಮಸೀದಿಗಳು ಹಾಗೂ ಮಂದಿರಗಳನ್ನು ನಿರ್ಮಿಸಿದ್ದಾರೆ. ಸಮಾಜದಲ್ಲಿ ಎಂಜಿನಿಯರ್ ಗಳಿಗೆ ವಿಶೇಷ ಗೌರವವಿದೆ. ತಾವು ಮಾಡುವ ಕೆಲಸ ಶಾಶ್ವತವಾಗಿ ಜನರ ಸ್ಮರಣೆಯಲ್ಲಿರುವಂತೆ ಹಾಗೂ ದೇಶದ ಪ್ರಗತಿಗೆ ಪ್ರೇರಕವಾಗುವಂತೆ ಎಂಜಿನಿಯರ್ಗಳು ಕೆಲಸ ಮಾಡಬೇಕು. ತಮ್ಮ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಬದ್ಧತೆ ಮತ್ತು ಕುಶಲತೆಯಿಂದ ಪರಿಹರಿಸಬೇಕು ಎಂದು ಅವರು ಸಲಹೆ ನೀಡಿದರು.
ನಿವೃತ್ತ ಎಂಜಿನಿಯರ್ ಕಲ್ಲಪ್ಪ ಅವರನ್ನು ಗೌರವಿಸಲಾಯಿತು. ಎಂಜಿನಿಯರ್ಗಳ ಸಂಘದ ಅಧ್ಯಕ್ಷ ಡಿ.ಎಸ್. ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸೇವೆ, ಸಾಧನೆಯ ಮಾಹಿತಿ ನೀಡಿದರು.
ಎಂಜಿನಿಯರ್ಗಳಾದ ಕಾಂತರಾಜ್, ಚಿನ್ನೇಗೌಡ, ಎಸ್.ಎಂ. ಮೇಟಿ, ಎಚ್.ಕೆ. ಕಲ್ಲಪ್ಪ ಮತ್ತು ಯಶವಂತ ಉಪಸ್ಥಿತರಿದ್ದರು.
ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಧನ್ಯವಾದವಿತ್ತರು.
ಮುಖ್ಯಾಂಶಗಳು:
• ಭೌತಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಜ್ಞಾನ ಭಾರತೀಯರಿಗೆ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು.
• ಎಂಜಿನಿಯರ್ಗಳು ಮಾಡುವ ಕೆಲಸ ಶಾಶ್ವತವಾಗಿ ದೇಶದ ಪ್ರಗತಿಗೆ ಸಹಾಯಕವಾಗಬೇಕು.
• ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ನಡೆಯಬೇಕು.
• ಎಂಜಿನಿಯರ್ಗಳಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ.
• ಪ್ರಶಂಸೆಗೆ ರಾಜಕಾರಣಿಗಳು, ದೂಷಣೆಗೆ ಅಧಿಕಾರಿಗಳು.
• ಎಂಜಿನಿಯರ್ಗಳ ಸಂಘದ ವತಿಯಿಂದ ಹೆಗ್ಗಡೆಯವರನ್ನು ಸನ್ಮನಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯ ಮಾಲರವರಿಗೆ ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ ಹೂಗುಚ್ಚ ನೀಡಿ ಅಭಿನಂದಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷರಾದ ಜನಾರ್ಧನ ತೋನ್ಸೆ ಎಂ. ಎ. ಗಫೂರ್, ಪ್ರಾಂಕಿ ಡಿಸೋಜಾ ಉಪ್ಪೂರು ಮಂಡಲ ಸದಸ್ಯರು, ಗಣೇಶ ಶೆಟ್ಟಿ ಕೀಳಂಜೆ, ರಮೇಶ ಪೂಜಾರಿ ಕೀಳಂಜೆ, ವಾಲ್ಟರ್ ಡಿ’ಸೋಜಾ, ಆದರ್ಶ ಪರ್ಕಳ ಮತ್ತಿತರರು ಅವರಿಗೆ ಶುಭ ಹಾರೈಸಿದರು.
ಆ.18: ಕನ್ನಡ ಸಂಘ ಸಾಂತಕ್ರೂಜ್ 61ನೇ ವಾರ್ಷಿಕ ಮಹಾಸಭೆ -ಸಂಘದ ವಜ್ರವಮೋತ್ಸವ ಸಂಭ್ರÀ್ರಮದ ಮನವಿಪತ್ರ ಬಿಡುಗಡೆ
ಮುಂಬಯಿ, ಆ.12: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 61ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವಿದ್ಯಾಥಿರ್ü ವೇತನ ಕಾರ್ಯಕ್ರಮವು ಇದೇ ಆ.18ನೇ ಶನಿವಾರ ಸಂಜೆ 3:00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಬರುವ ಡಿಸೆಂಬರ್.16ನೇ ಆದಿತ್ಯವಾರ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾದ ಸಂಘದ ವಜ್ರವಮೋತ್ಸವ ಸಂಭ್ರÀ್ರಮದ ಮನವಿಪತ್ರ ಇದೇ ವೇಳೆ ಬಿಡುಗಡೆ ಗೊಳಿಸಲಾಗುವುದು. ತದನಂತರ ಸಂಘವು ದಾನಿಗಳ ಪ್ರಾಯೋಜಕತ್ವದಲ್ಲಿ ವಾರ್ಷಿಕವಾಗಿ ನೀಡುವ 2018ನೇ ಸಾಲಿನ ವಿದ್ಯಾಥಿರ್ü ವೇತನ ವಿತರಣೆ, ದತ್ತು ಸ್ವೀಕೃತ ವಿದ್ಯಾಥಿರ್üಗಳ ವಿದ್ಯಾಸಹಾಯ ನಿಧಿಯನ್ನು ಸಂಜೆ 4:00 ಗಂಟೆಗೆ ದಾನಿಗಳ ಹಸ್ತದಿಂದಲೇ ಪ್ರದಾನಿಸಲಾಗುವುದು ಎಂದು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ತಿಳಿಸಿದ್ದಾರೆ.
ಆ ನಿಮಿತ್ತ ಫಲಾನುಭವಿ ವಿದ್ಯಾಥಿರ್üಗಳು ತಮ್ಮ ಪೆÇೀಷಕರನ್ನು ಒಳಗೊಂಡು ಕ್ಲಪ್ತ ಸಮಯಕ್ಕೆ ಆಗಮಿಸಬೇಕು ಮತ್ತು ಸಂಘದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯ ಯಶಸ್ವಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಮತ್ತು ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link