Brief Mumbai, Mangalore news with pictures
Kemmannu News Network, 05-10-2018 07:02:03
Mumbai Oct. 03 :- On the occasion of the birth anniversary of Mumbai BJP chief Ashish Shelar, Maulana Azad, Minority Economic Development Board, Haji Haider Azam (State Minister rank) offer jadar in Mahim Dargah (Makhdoom Shah Baba) and prayed for Ashish Shelar’s longevity and health.
ಸಾಹಿತ್ಯ ಬಳಗ ಮುಂಬಯಿ-ರಜತ ಮಹೋತ್ಸವದ `ಸಾಧಕರಿಗೆ ನಮನ’ ಕೃತಿಗಳ ಅನಾವರಣ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಅ.02: ಸಾಹಿತ್ಯ ಬಳಗ ಮುಂಬಯಿ ತನ್ನ ರಜತ ಮಹೋತ್ಸವದ ಅಂಗವಾಗಿ `ಸಾಧಕರಿಗೆ ನಮನ’ ನಾಮಾಂಕಿತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಪಯ್ಕಿ ದ್ವಿತೀಯ ಕಂತಿನ ಹತ್ತು ಕೃತಿ ಕುಸುಮಗಳನ್ನು ಕಳೆದ ರವಿವಾರ (ಸೆ.30) ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಬಿಡುಗಡೆ ಗೊಳಿಸಿತು.
ಆ ಪಯ್ಕಿ ವಿಜಯ ಸುಬ್ರಹ್ಮಣ್ಯ ಸಂಗ್ರಹದ ಅಪೂರ್ವ ತೌಳವ ಸಂಶೋಧಕಿ `ಡಾ| ಲಕ್ಷ್ಮೀ ಪ್ರಸಾದ್’ (ಕುಸುಮ-11), ಮುದ್ರಾ ವಿಜ್ಞಾನತಜ್ಞೆ, ಸ್ವರ್ಗೀಯ ಸುಮನ್ ಚಿಪ್ಲೂಣ್ಕ್ಕರ್ ಅವರ ಪ್ರೇಮಾ ಎಸ್.ರಾವ್ ಸಂಗ್ರಹದ ಬಗ್ಗೆ `ಮುದ್ರಾ ವಿಜ್ಞಾನಿ ಸುಮನ್ ಚಿಪ್ಲುನ್ಕರ್’ (ಕುಸುಮ-12), ಲೇಖಕಿ ಚಿತ್ರಾ ಮೇಲ್ಮನೆ ರಚಿತ ಲೆಕ್ಕ ಪರಿಶೋಧಕ ಸಿಎ| ಸುಬ್ಬರಾವ್ ಬಗ್ಗೆ `ಕರ್ತವ್ಯ ನಿಷ್ಠ ಲೆಕ್ಕ ಪರಿಶೋಧಕ-ಸಿಎ| ಸುಬ್ಬರಾವ್’ (ಕುಸುಮ-13), ಲೇಖಕಿ ಪ್ರೇಮಾ ಎಸ್.ರಾವ್ ರಚಿತ ಸ್ವರ್ಗೀಯ ಮುಚ್ಚ್ಚೂರು ನಾರಾಯಣ ಭಟ್ ಕುರಿತ `ಪ್ರಚಾರ ಬಯಸದ ಕಲಾ ಪೆÇೀಷಕ ಮುಚ್ಚೂರು ನಾರಾಯಣ ಭಟ್’ (ಕುಸುಮ-14), ಲೇಖಕಿ ಡಾ| ಜಿ.ಪಿ ಕುಸುಮಾ ರಚಿತ `ನೂರನಲ್ವತ್ತು ವರ್ಷಗಳ ಇತಿಹಾಸವಿರುವ ಶ್ರೀಮದ್ಭಾರತ ಮಂಡಳಿ’ (ಕುಸುಮ-15), ಲೇಖಕ ಅಶೋಕ್ ಎಸ್.ಸುವರ್ಣ ರಚಿತ `ಸೇವಾ ಮನೋಭಾವದ ಮೊಗವೀರ ವ್ಯವಸ್ಥಾಪಕ ಮಂಡಳಿ` (ಕುಸುಮ-16) ಹೀಗೆ ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸಂಗ್ರಹಣೆಯ ಎಲ್ಲಾ ಆರು ಕೃತಿಗಳು ಅನಾವರಣ ಗೊಳಿಸಲ್ಪಟ್ಟವು.
ಪ್ರಸಿದ್ಧ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೈಗಾರಿಕೋದ್ಯಮಿ ಶ್ರೀನಿವಾಸ್ ಕಾಂಚನ್ ಮತ್ತು ಸುಮನ್ ಟ್ರಸ್ಟ್ ಯಾದಗಿರಿ ಇದರ ಅಧ್ಯಕ್ಷ ಡಾ| ಮರಿಯಪ್ಪ ನಾಟೇಕರ್ ಉಪಸ್ಥಿತರಿದ್ದು ಅತಿಥಿü ಅಭ್ಯಾಗತರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆಯಿತ್ತು, ಕೃತಿಗಳ ಅನಾವರಣ ಗೈದರು. ಕೇಶವರಾವ್ ಚಿಪ್ಲೂಣ್ಕ್ಕರ್, ಎಂ.ಹರಿ ಭಟ್, ಸಿಎ| ಸುಬ್ಬರಾವ್, ಡಾ| ಲಕ್ಷ್ಮೀ ಪ್ರಸಾದ್, ಜಗನ್ನಾಥ್ ಪಿ.ಪುತ್ರನ್, ಕೃಷ್ಣಕುಮಾರ ಎಲ್.ಬಂಗೇರ ಅವರು ಗ್ರಂಥ ಗೌರವದ ಸನ್ಮಾನ ಸ್ವೀಕರಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ತನ್ವಿ ರಾವ್ ಅವರ ಯಕ್ಷನೃತ್ಯ ಶೈಲಿಯ ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆದಿಗೊಂಡವು. ಅನಿತಾ ಆಚಾರ್ಯ ಕಥಕ್, ಅನುಪಮಾ ರಾವ್ ಮೋಹಿನಿಯಾಟ್ಟಂ, ಪ್ರಿಯಾಂಜಲಿ ರಾವ್ ಭರತನಾಟ್ಯ ಹಾಗೂ ವಿದುಷಿ ಸಹನಾ ಭಾರದ್ವಾಜ್ ಶಿಷ್ಯೆಯರಾದ ಜಾಹ್ನವಿ, ಭಾರ್ಗವಿ, ತನ್ವಿ, ಹಂಸಾ ಮತ್ತು ಮನಸ್ವಿ ಅವರು ನೃತ್ಯ ವೈಭವಗಳನ್ನು ಪ್ರಸ್ತುತ ಪಡಿಸಿದರು. ಹಿರಿಯ ಸಾಹಿತಿ ಮತ್ತು ಗಮಕಿ ಕೆ.ಆರ್ ಕೃಷ್ಣಯ್ಯ ಅವರು ಕುಮಾರವ್ಯಾಸ ಭಾರತದ ನಾಂದಿ ಪದ್ಯಗಳ ಕುರಿತು ವ್ಯಾಖ್ಯಾನ ನೀಡಿದರು. ಸಹನಾ ಭಾರದ್ವಾಜ್, ಡಾ| ಸಹನಾ ಪೆÇೀತಿ ಹಾಗೂ ಕಲಾ ಭಾಗವತ್ ಗಮಕ ವಾಚನಗೈದರು.
ಶಾಲಿನಿ ರಾವ್ ಮತ್ತು ಅನಿತಾ ಆಚಾರ್ಯ ಪ್ರಾರ್ಥನೆಯನ್ನಾಡಿದರು. ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್. ಬಿ. ಎಲ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುರಾಧಾ ರಾವ್, ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾ.ದಯಾ ಧನ್ಯವಾದ ಸಮರ್ಪಿಸಿದರು.
ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ- ಆರ್.ಪಿ.ನಾಯ್ಕ
ಮುಂಬಯಿ,ಸೆ.30: ಕೊಂಕಣಿ ಚಲನಚಿತ್ರ ರಸಗ್ರಹಣವೆನ್ನುವ ವಿನೂತನ ಚಿತ್ರಸಂವಾದ ಕಾರ್ಯಕ್ರಮವು ಇತ್ತೀಚೆಗೆ ನಗರದ ಶಿವರಾಮ ಕಾರಂತ ಭವನದಲ್ಲಿ ಜರುಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಆರ್.ಪಿ.ನಾಯ್ಕ ಮಾತನಾಡಿ ಈ ಕಾರ್ಯಕ್ರಮಕ್ಕೆ ಅಧ್ಯಕ್ಷರ ವಿವೇಚನೆಯ ಸಹಕಾರ ನೀಡಿರುವದಾಗಿ ತಿಳಿಸಿದರು. ಚಲನಚಿತ್ರಗಳು ಸಾಮಾಜಿಕ, ಕೌಟುಂಬಿಕ ಕಥಾಧಾರಿತ ವಿಷಯವನ್ನು ಹೊಂದಿರುವಾಗ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ. ಅಂತಹ ವಿಷಯವಸ್ತು ಆಧರಿಸಿದ `ಅಂತು’ ಕೊಂಕಣಿ ಚಲನಚಿತ್ರವು ಎಲ್ಲರ ಜೀವನದ ಕಥೆಯಾಗಿದೆ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಮುಂಬರುವ ದಿನಗಳಲ್ಲಿ ಹಳ್ಳಿಯಿಂದ ನಗರ, ನಗರದಿಂದ ರಾಜ್ಯ, ರಾಜ್ಯದಿಂದ ಹೊರರಾಜ್ಯ, ಹೊರರಾಜ್ಯದಿಂದ ಹೊರದೇಶದವರೆಗೆ ಕೊಂಕಣಿ ಜಾಗೃತಿ ಅಭಿಯಾನವನ್ನು ನಡೆಸಿ ದುಬೈಯಲ್ಲಿ ವಿಶ್ವಕೊಂಕಣಿ ಸಮಾರೋಪ ಕಾಣಲಿದೆಯೆಂದರು. ಕೊಂಕಣಿ ಸಾಹಿತ್ಯವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ 100 ಪುಸ್ತಕಗಳನ್ನು ಪ್ರಕಟಿಸುವ ದೂರದೃಷ್ಟಿಯೋಜನೆ ಅಕಾಡೆಮಿಯ ಮುಂದಿದ್ದು ಕೊಂಕಣಿ ಆಸಕ್ತರೆಲ್ಲರೂ ಈ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದು ಆಶಿಸಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಎಂ.ರವರು ಚಲನಚಿತ್ರಗಳು ಇಂದು ತೀವ್ರಗತಿಯಲ್ಲಿ ಜನಮಾನಸದಲ್ಲಿ ನೆಲೆಯೂರುವ ಸಾಮಾಜಿಕ ಮಾಧ್ಯಮವಾಗಿದೆಯೆಂದರು.
ಪ್ರಾಸ್ತಾವಿಕವಾಗಿಮಾತನಾಡಿದ ವಿಭಾಗದ ಸಂಯೋಜಕರಾಗಿರುವ ಡಾ. ಅರವಿಂದ ಶ್ಯಾನಭಾಗರು, ತಿಂಗಳಿಗೊಂದು ಕೊಂಕಣಿ ಚಲನಚಿತ್ರ ವೀಕ್ಷಿಸಿ ಚಿತ್ರವಿಮರ್ಶೆ ಮಾಡುವ ಕಾರ್ಯಕ್ರಮವು ಸ್ನಾತಕೋತ್ತರ ಹಂತದ ಅಧ್ಯಯನಾರ್ಥಿಗಳಲ್ಲಿ ಸಾಹಿತ್ಯಿಕ ಆಸಕ್ತಿಯನ್ನು ಜಾಗೃತಿಗೊಳಿಸುವದೆಂದರು.
ವೇದಿಕೆಯಲ್ಲಿ ಅಂತು ಕೊಂಕಣಿ ಚಲನಚಿತ್ರದ ನಿರ್ಮಾಪಕ, ನಿರ್ದೇಶಕ ಅಕ್ಷಯ ನಾಯಕ ಕರೋಪಾಡಿ, ಸಂಭಾಷಣೆಯನನು ಬರೆದಿರುವ ಕೊಡಿಯಾಲ ಖಬರ ಸಂಪಾದಕ ವೆಂಕಟೇಶ ಬಾಳಿಗಾ, ಅಭಿನೇತ್ರಿ ಪೂರ್ಣಿಮಾ ಸುರೇಶ ಇದ್ದರು. ನಂತರ ನಡೆದ ಚಲನಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಚಿತ್ರತಂಡದ ಇತರ ಕಲಾವಿದರೂ ಪಾಲ್ಗೊಂಡು ಕೊಂಕಣಿ ಅಭಿಮಾನಿಗಳ ಮನಸೂರೆಗೊಳ್ಳುವಂತೆ ಮಾಡಿದರು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಕೊಂಕಣಿ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ವಿಟ್ಠಲ ಕುಡ್ವಾ, ಜಿ.ಎಸ್.ಬಿ. ಮಹಿಳಾ ಮಂಡಲದ ಸದಸ್ಯರು, ಕೊಂಕಣಿ ಭಾಷಾಮಂಡಳ ಕರ್ನಾಟಕ ಇದರ ಪದಾಧಿಕಾರಿಗಳು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಸಂತೋಷ ಶೆಣೈ ಮತ್ತು ಲಕ್ಷ್ಮಣ ಪ್ರಭು, ಕೊಂಕಣಿ ಪ್ರೇಮಿಗಳಾದ ವಿಠೋಬ ಭಂಡಾರ್ಕರ್, ಡಾ. ಸುದೇಶರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಚಂದ್ರಿಕಾ ಮಲ್ಯ ಪ್ರಾರ್ಥನಾ ಗೀತೆಯನ್ನು ಹಾಡಿದರು.ಪ್ರೇಮ್ ಮೊರಾಸ್ ಎಲ್ಲರಿಗೂ ವಂದನಾರ್ಪಣೆಗೈದರು. ಅಕ್ಷತಾರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಇಂಗ್ಲೀಷ್, ತುಳುಮತ್ತು ಕೊಂಕಣಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಕ್ರಿಯವಾಗಿ ಪಾಲ್ಗೊಂಡು ಸಂವಾದವನ್ನು ಯಶಸ್ವಿಗೊಳಿಸಿದರು.
ಪ್ರಾಮಾಣಿಕ ಸೇವೆಯಿಂದ ಮಾತ್ರ ಜನರ ವಿಶ್ವಾಸ ಗಳಿಕೆ ಸಾಧ್ಯ ಕರಿಂಜೆ ಸೇವಾ ಸಹಕಾರಿ ವಾರ್ಷಿಕ ಮಹಾಸಭೆಯಲ್ಲಿ ಜೆರಾಲ್ಡ್ ಮೆಂಡಿಸ್
ಮುಂಬಯಿ (ಮೂಡುಬಿದಿರೆ),ಸೆ.30: ತಾಕೊಡೆ ಇಲ್ಲಿನ ಕರಿಂಜೆ ಸೇವಾ ಸಹಕಾರಿ ಸಂಘವು 2017-18ನೇ ಸಾಲಿನಲ್ಲಿ 58.93 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 21 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 12% ಡಿವಿಡೆಂಟ್ ನೀಡಲಾಗುತ್ತದೆ’ ಎಂದು ಬ್ಯಾಂಕ್ನ ಅಧ್ಯಕ್ಷ ಜೆರಾಲ್ಡ್ ಮೆಂಡಿಸ್ ಹೇಳಿದರು.
ಸಂಘದ ಸಭಾಭವನದಲ್ಲಿ ಕಳೆದ ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಜೆರಾಲ್ಡ್ ಮಾತನಾಡಿ ಕರಿಂಜೆ ಸೇವಾ ಸಹಕಾರಿಯು ಪ್ರಾಮಾಣಿಕ ಸೇವೆಯಿಂದ ಜನರ ವಿಶ್ವಾಸ ಗಳಿಸಿದ್ದು, ರೈತಸ್ನೇಹಿಯಾಗಿ ಕೃಷಿಕರಿಗೆ ಅನುಕೂಲವಾಗುವ ಸರಕಾರದ ಯೋಜನೆಗಳನ್ನು ನಿರಂತರವಾಗಿ ತಲುಪಿಸುತ್ತಿದೆ. 16 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷನಾಗಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದೂ ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಾನ್ಸಿಸ್ ಮೆಂಡೋನ್ಸಾ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ನಿವ್ವಳ ಲಾಭದ ವಿಂಗಡಣೆ, 2018-19ನೇ ಸಾಲಿನ ಬಜೆಟ್ ಮಂಡಿಸಿ, ಬಜೆಟಿಗಿಂತ ಜಾಸ್ತಿ ಖರ್ಚಾದ ಮೊತ್ತಕ್ಕೆ ಮಂಜೂರಾತಿ ಪಡೆದರು. ಮುಂದಿನ ಸಾಲಿಗೆ ಸಿಎ ಮೆಂಡಿಸ್ & ಕಂ. ಮಂಗಳೂರು ಇವರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು. ಸಂಘದ ಉಪನಿಯಮಗಳ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಆಳ್ವ, ವಲೇರಿಯನ್ ಡಿಮೆಲ್ಲೊ, ಫ್ಲೊಸ್ಸಿ ಪಾವ್ಲಿನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಆಳ್ವ ಅವರು ಪ್ರಕೃತಿಗೆ ಪೂರಕವಾಗಿಯೇ ಕೃಷಿ ಮಾಡಬೇಕೇ ವಿನಃ, ಪ್ರಕೃತಿಗೆ ವಿರುದ್ಧ ಹೋಗುವುದು ಸರಿಯಲ್ಲ. ಇಷ್ಟು ಸಣ್ಣ ಊರಿನಲ್ಲಿ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸಹಕಾರಿ ರಂಗದ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕರ್ನಾಟಕ ಯೋಜನೆ, ಸರಕಾರದ ಸಾಲಮನ್ನಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಜಾಯ್ ಡಿಸಿಲ್ವಾ ಅವರು ತೋಟಗಾರಿಕಾ ಇಲಾಖೆಯ ಸೌಲಭ್ಯಗಳು, ಹನಿ ನೀರಾವರಿ, ಯಾಂತ್ರೀಕರಣ ಯೋಜನೆ, ಬಾಳೆ ಕಾಳುಮೆಣಸು ತೋಟ ರಚನೆ ಮತ್ತು ಪುನಶ್ಚೇತನ ಯೋಜನೆ, ಸಂರಕ್ಷಿತ ಬೇಸಾಯ ಯೋಜನೆ, ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ, ಜೇನು ಕೃಷಿ ಸಂಬಂಧಿ ಮಾಹಿತಿ ನೀಡಿದರು.
ಬ್ಯಾಂಕ್ನ ನಿರ್ದೇಶಕರಾದ ಪಾವ್ಲ್ ಡಿಸೋಜಾ, ಜೋನ್ ರೇಗೊ, ಮೆಲ್ವಿನ್ ಡಿಕೋಸ್ತಾ ಸನ್ಮಾನಿತರ ವಿವರ ವಾಚಿಸಿದರು. ನಿರ್ದೇಶಕರಾದ ಎಡ್ವಿನ್ ಡಿಸೋಜಾ, ಜಾನ್ ಬ್ಯಾಪ್ಟಿಸ್ಟ್ ಮೆಂಡೋನ್ಸಾ, ಶೇಖರ ಎಂ., ಜೆಸಿಂತಾ ಲೋಬೊ, ಪುಷ್ಪಾವತಿ, ಶಾಖಾ ವ್ಯವಸ್ಥಾಪಕಿ ಗುಣವತಿ, ಲೆಕ್ಕಿಗ ರಾಜೀವಿ ಸಾಲಿಯಾನ್, ಸಿಬ್ಬಂದಿ ಹೆಲ್ಸನ್ ಮೆಂಡೋನ್ಸಾ ಉಪಸ್ಥಿತರಿದ್ದು ಸಭೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಆಳ್ವ, ವಲೇರಿಯನ್ ಡಿಮೆಲ್ಲೊ, ಫ್ಲೊಸ್ಸಿ ಪಾವ್ಲಿನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಅಶ್ವಿನ್ ಜೊಸ್ಸಿ ಪಿರೇರಾ ಸ್ವಾಗತಿಸಿದರು. ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ವಂದಿಸಿದರು
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link