Brief Mumbai, Mangalore news with pictures
Kemmannu News Network, 12-12-2018 22:21:12
ಡಿ.18: ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ಭಾರತಿ ಕಾರ್ಯಕ್ರಮ ಸಂಘದ ಮಹಿಳಾ ಸದಸ್ಯೆಯರಿಂದ `ಹರಿ ದರ್ಶನ’ಯಕ್ಷಗಾನ ತಾಳಮದ್ದಳೆ
ಮುಂಬಯಿ, ಡಿ.12: ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವದ ಪ್ರಯುಕ್ತ ಸಂಘದ ಮಹಿಳಾ ವಿಭಾಗವು ಸ್ತ್ರೀ ಜಗತ್ತು : ವರ್ತಮಾನ-ಭವಿಷ್ಯ ವಿಚಾರವಾಗಿಸಿ ಮಹಿಳಾ ಭಾರತಿ ಕಾರ್ಯಕ್ರಮವನ್ನು ಇದೇ ಡಿ.16ನೇ ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆ ವರೆಗೆ ಗೋರೆಗಾಂವ್ ಪಶ್ಚಿಮದ ಆರೇ ರೋಡ್ನ ಅಂಬಾಬಾಯಿ ದೇವಸ್ಥಾನದ ಸನಿಹದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ಆಯೋಜಿಸಿದೆ.
ಅಂದು ಪೂರ್ವಾಹ್ನ 11.00 ಗಂಟೆಗೆ ಸಂಧ್ಯಾ ರವಿ ಪಿಲಾರ್ ಮತ್ತು ಸುಧಾ ಮಧು ಪ್ರಭು (ಅಮೇರಿಕಾ) ಪ್ರಾಯೋಜಕತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗೋರೆಗಾಂವ್ ಕರ್ನಾಟಕ ಸಂಘದ ಪೂರ್ವಾಧ್ಯಕ್ಷೆ ಶಂಕುಂತಳಾ ರಾಮಕೃಷ್ಣ ಪ್ರಭು ಉದ್ಘಾಟಿಸಲಿದ್ದಾರೆ. ಲೇಖಕಿ, ಸಮಾಜಮುಖಿ ಚಿಂತಕಿ ಡಾ| ಇಂದಿರಾ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಆಶಯ ಭಾಷಣ ಮಾಡುವರು.
ಮಧ್ಯಾಹ್ನ 12.15 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಹಿರಿಯ ಯಕ್ಷಗಾನ ಕಲಾವಿದೆ ನ್ಯಾಯವಾದಿ ಗೀತಾ ಆರ್.ಎಲ್ ಭಟ್ ಆಗಮಿಸಲಿದ್ದು ಸಂಸ್ಕೃತಿ ಮತ್ತು ಮಹಿಳೆ ವಿಚಾರವಾಗಿ ರೇಖಾ ವಿ.ಬನ್ನಾಡಿ ಮತ್ತು ಸಮಾಜ ಸೇವೆ-ಸವಾಲುಗಳು ವಿಷಯದಲ್ಲಿ ಆತ್ರಾಡಿ ಅಮೃತಾ ಶೆಟ್ಟಿ ವಿಚಾರ ಮಂಡಿಸುವರು.
ಅಪರಾಹ್ನ 2.15 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಕೆನರಾ ಬ್ಯಾಂಕ್ ವಕೋಲಾ ಶಾಖೆಯ ಪ್ರಬಂಧಕಿ ನಿರ್ಮಲಾ ತಿನಯ್ಕರ್ ಆಗಮಿಸಲಿದ್ದು ಲತಾ ಎಸ್.ಶೆಟ್ಟಿ ಮುದ್ದುಮನೆ, ಸುಗುಣ ಎಸ್.ಬಂಗೇರ, ರಜನಿ ವಿ.ಪೈ, ರಜನಿ ತೋಳಾರ್, ನಳಿನಿ ಎಸ್.ಬಂಗೇರ, ಶೈಲಾ ಎಸ್.ನಾಯಕ್, ಸುಜತಾ ಯು.ಶೆಟ್ಟಿ, ರಕ್ಷಿತಾ ಆರ್.ನಾಯಕ್ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.
ಸಂಜೆ 3.30 ಗಂಟೆಗೆ ಡಾ| ಇಂದಿರಾ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಮುಖ್ಯ ಅತಿಥಿüಯಾಗಿ ಭಾಗವಹಿಸುವರು.
ಬೆಳಿಗ್ಗೆ 9.40 ಗಂಟೆಯಿಂದ ಸಂಘದ ಸದಸ್ಯರು, ಮುಂಬಯಿಯ ವಿವಿಧ ಸಂಘ-ಸಂಸ್ಥೆಗಳ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಸಂಜೆ 4.45 ಗಂಟೆಯಿಂದ ದೇವಲ್ಕುಂದ ಭಾಸ್ಕರ್ ಶೆಟ್ಟಿ ನಿರ್ದೇಶನದಲ್ಲಿ ಸುಮಿತ್ರಾ ಕುಂದರ್, ಉಷಾ ಪಿ.ಶೆಟ್ಟಿ, ವಾಣಿ ಶೆಟ್ಟಿ, ರಮಾ ದೇವಿ, ಲೀಲಾ ಗಣೇಶ್, ಪ್ರೇಮ ಗೌಡ, ವನಿತಾ ಪಾಲನ್, ನಮ್ರತಾ ಕರ್ಕೇರ, ಸಹನಾ ಶೆಟ್ಟಿ ಅರ್ಥಧಾರಿಗಳಾಗಿದ್ದು, ಸಂಘದ ಮಹಿಳಾ ಸದಸ್ಯೆಯರು `ಹರಿ ದರ್ಶನ’ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸುವರು.
ಆ ಪ್ರಯುಕ್ತ ನಾಡಿನ ಕಲಾಭಿಮಾನಿಗಳು ಮತ್ತು ಕನ್ನಢಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನಪೂರ್ತಿಯಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಸಂಘದ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಜಯಕರ ಡಿ.ಪೂಜಾರಿ, ವಜ್ರ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಮಹಿಳಾ ವಿಭಾಗದ ಸಂಚಾಲಕಿಯರಾದ ಇಂದಿರಾ ಮೊೈಲಿ ಮತ್ತು ಉಷಾ ಪಿ.ಶೆಟ್ಟಿ ಈ ಮೂಲಕ ವಿನಂತಿಸಿದ್ದಾರೆ. :ರೋನಿಡಾ ಮುಂಬಯಿ
ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಅಮೃತಮಹೋತ್ಸವ ಸಂಭ್ರಮ - ಡಿ.25: ಕುರ್ಲಾ ಪೂರ್ವದ ಬಂಟರ ಭವನÀದಲ್ಲಿ ಎಪ್ಪತ್ತೈದರ ಸಮಾರಂಭ
ಮುಂಬಯಿ, ಡಿ.11: ರಾಷ್ಟ್ರದ ಆಥಿರ್üಕ ರಾಜಧಾನಿ, ವಾಣಿಜ್ಯನಗರಿ ಬೃಹನ್ಮುಂಬಯಿನಲ್ಲಿ 1941ರಲ್ಲಿ ಸ್ಥಾಪಿತ ಸಾಫಲ್ಯ ಸೇವಾ ಸಂಘ (ರಿ.) ಸಂಸ್ಥೆಯು ಸೇವೆಯ ಮೂಲಕ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿ ಭದ್ರವಾದ ತಳಹದಿ ಹಾಕಿಸೇವಾತೃಪ್ತಿಯನ್ನು ಹೆಮ್ಮೆಯಿಂದ ತೋರಿಸಿ ಕೊಟ್ಟು ಸುದೀರ್ಘವಾದ ಇತಿಹಾಸವನ್ನು ಹೆಜ್ಜೆಗುರುತು ಆಗಿಸಿ ಅಮೃತಮಹೋತ್ಸವ ಸಂಭ್ರಮದ ಸಿದ್ಧತೆಯಲ್ಲಿದೆ.
ಇದೇ ಡಿ.25ರ ಮಂಗಳವಾರ ಬೆಳಿಗ್ಗೆ 9.30 ಗಂಟೆಯಿಂದ ರಾತ್ರಿ 10.00 ಗಂಟೆ ವರೆಗೆ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿ ಆಗಿಸಿ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ಅಮೃತಮಹೋತ್ಸವ ಆಚರಿಸಲಿದೆ.
ಉದ್ಘಾಟನಾ ಸಮಾರಂಭ
ಅಂದು ಬೆಳಿಗ್ಗೆ 10.00 ಗಂಟೆಗೆ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ, ಅರ್ಕೇಡಿಯಾ ಶಿಪ್ಪಿಂಗ್ ಲಿಮಿಟೆಡ್ ಇದರ ನಿರ್ದೇಶಕ ಎಂ.ಜಿ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಜರಗುವ ಅಮೃತಮಹೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಉಳ್ಳಾಲ (ಉಳಿಯ) ಇಲ್ಲಿನ ಶ್ರೀ ಉಳ್ಳಾಳ್ತಿ ಧರ್ಮರಸು ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲಿಯಣ್ಣ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿsಯಾಗಿ ಸುಯೋಗ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಯತೀಶ್ ಅತ್ತವರ ಹಾಗೂ ಅತಿಥಿs ಅಭ್ಯಾಗತರುಗಳಾಗಿ ಕೊಲ್ಕತ್ತದ ಉದ್ಯಮಿ ಎಂ.ವಿ ನಾಥ್, ಬೆಂಗಳೂರುನ ಉದ್ಯಮಿ ಸುಂದರ್ ಸಾಲ್ಯಾನ್, ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ
ಸಂಜೆ 4.30 ಗಂಟೆಗೆ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಅಮೃತಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾವಿಹರ್ ಇದರ ಪ್ರಧಾನ ಅರ್ಚಕ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಅನುಗ್ರಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಬೊರಿವಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ, ಮಂಗಳೂರು ಲೋಕಸಭಾ ಸದಸ್ಯ ನಳೀನ್ಕುಮಾರ್ ಕಟೀಲು, ಮಂಗಳೂರು ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್, ಅತಿಥಿs ಅಭ್ಯಾಗತರುಗಳಾಗಿ ಕರ್ನಾಟಕ ಸಂಘ ಅಸಲ್ಫಾ ಇದರ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆ ಪೆÇವಾಯಿ ಉಪ ಕಾರ್ಯಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಗೌರವ್ವಾನಿತ ಅತಿಥಿsಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಪಿ.ಕುಲಾಲ್, ಗಾಣಿಗ ಸಂಘ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಒಕ್ಕಲಿಗ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಗೌಡ ಆಗಮಿಸಲಿದ್ದಾರೆ.
ಸಂಘದ ಮುಖವಾಣಿ `ಸಾಫಲ್ಯ’ ತ್ರೈಮಾಸಿಕ ಬಗ್ಗೆ ಡಾ| ವಾಮನ ಎಸ್.ಸಾಫಲ್ಯ ತಿಳಿಸಲಿದ್ದು, ಹಾಗೂ ಸಂಘದ ಸಾಧನಾ ನಡೆಯ ಆರ್.ಸಿ ಮೂಲ್ಕಿ ರಚಿತ ಸಾಫಲ್ಯ ಯಾನೆ ಗಾಣಿಗ ಸಂಘ’ ಕೃತಿ ಮತ್ತು ಸಂಘದ `ಅಮೃತ ಮಹೋತ್ಸವ ಸ್ಮರಣ ಸಂಚಿಕೆ’ ಬಿಡುಗಡೆ ಗೊಳಿಸಲಿದ್ದಾರೆ. ಹಾಗೂ ಸಮುದಾಯದ ಸಾಧಕರಿಗೆ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಿದ್ದಾರೆ.
ದಿನಪೂರ್ತಿ ನಡೆಯಲಿರುವ ಸಂಭ್ರಮದಲ್ಲಿ ಸಂಘದ ಸದಸ್ಯರು ಮತ್ತು ಮಕ್ಕಳು ತುಳುನಾಡ ವೈಭವ, ಬಾಲಿವುಡ್ನ ನಡೆಯ ಪೂರ್ವಾನ್ವಯ (ರೆಟ್ರೋ ಡ್ಯಾನ್ಸ್) ನೃತ್ಯಗಳು, ಸಂಪ್ರದಾಯಿಕ ಉಡುಪುಗಳ ಪ್ರದರ್ಶನ (ಫ್ಯಾಶನ್ ಶೋ), ತುಳು ನಾಟಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಮತ್ತು ಮಂಗಳೂರು ಉಳ್ಳಾಲ ಇಲ್ಲಿನ ನಾಟ್ಯ ನಿಲಯ ಸಂಸ್ಥೆಯು ನಾಟ್ಯ ವಿದುಷಿ ಸುನೀತಾ ಜಯಂತ್ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯಗಳನ್ನು, ಗಣೇಶ್ ಎರ್ಮಾಳ್ ಮತ್ತು ಕಿರಣ್ ಸಫಲಿಗ ನಿರ್ದೇಶನದಲ್ಲಿ ಮಂಗಳೂರು ಮತ್ತು ಮುಂಬಯಿನ ನುರಿತ ಕಲಾವಿದರು ರಾಗ-ಸಂಗಮ ಪ್ರಸ್ತುತ ಪಡಿಸಲಿದ್ದಾರೆ.
ಮಹಾನಗರದಲ್ಲಿನ ಸಮಸ್ತ ಸಾಫಲ್ಯ ಬಂಧುಗಳು, ತುಳು-ಕನ್ನಡಿಗರು ಆಗಮಿಸಿ ಸಂಘದ ಅಮೃತಮಹೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
ಸಾಫಲ್ಯ ಸೇವಾ ಸಂಘ:
1941ರಲ್ಲಿ ಸ್ಥಾಪಿತ ಸಾಫಲ್ಯ ಸೇವಾ ಸಂಘ (ರಿ.) ಸಂಸ್ಥೆಯು ಸದ್ಯ 77ರ ಸೇವೆಯಲ್ಲಿ ಕಾರ್ಯನಿರತವಾಗಿದೆ. ಡಾ| ಜಿ.ಕೆ ಮೂಲ್ಕಿ, ಕೆ.ಎಸ್ ಮೆಂಡನ್, ಕೆ.ವಿ ಮಿಜಾರ್, ಐ.ಕೆ ರಾವ್, ಎಂ.ನಾರಾಯಣ್, ನರಸಿಂಹ ರಾವ್, ಲಕ್ಷ್ಮಣ್ ಕುಂದರ್, ಬಿ.ತಿಮ್ಮಪ್ಪ, ಎಸ್.ಸಫಲಿಗ, ಭಾಸ್ಕರ್ ಎನ್.ಡೊಂಗರಕೇರಿ, ಈಶ್ವರ್ ಮೆಂಡನ್, ಡಿ.ಜೆ ಬಂಗೇರ (ಎಲ್ಲರೂ ಸ್ವರ್ಗೀಯರು), ಓಂಪ್ರಕಾಶ್ ರಾವ್, ಎಂ.ಜಿ ಕರ್ಕೇರ, ಜಯರಾಮ ಸಫಲಿಗ, ನಾರಾಯಣ ಮೆಂಡನ್ ಸಂಘದ ಅಧ್ಯಕ್ಷರುಗಳಾಗಿ ಶ್ರಮಿಸಿದ್ದಾರೆ.
ಅಂಧೇರಿ ಪೂರ್ವದ ಸಾಯಿರಥ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ನ ಕೆಸರ್ ಕುಂಜ್ನಲ್ಲಿ ಸ್ವಂತ ಕಛೇರಿಯುಳ್ಳ ಈ ಸಂಸ್ಥೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಶ್ರೀನಿವಾಸ ಪಿ.ಸಾಫಲ್ಯ, ಉಪಾಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಆಗಿ ಭಾಸ್ಕರ್ ಸಫಲಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಶೋಭಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಗಿ ರವಿಕಾಂತ್ ಸಫಲಿಗ ಪ್ರಮುಖ ಸ್ಥಾನಗಳೊಂದಿಗೆ ಕಾರ್ಯನಿರತರಾಗಿದ್ದಾರೆ. ಸಂಘದ ಮುಖವಾಣಿ `ಸಾಫಲ್ಯ’ ತ್ರೈಮಾಸಿಕವು ಸಂಘಕ್ಕೆ ದೈವೀಪ್ರೇರಣೆಯಾಗಿದೆ. ಸದ್ಯ ಡಾ| ಜಿ.ಪಿ ಕುಸುಮಾ ತ್ರೈಮಾಸಿಕದ ಸಂಪಾದಕಿ ಆಗಿ ಸೇವಾ ನಿರತರಾಗಿದ್ದಾರೆ. : ರೋನಿಡಾ, ಮುಂಬಯಿ
ಡಿ.20: ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರಿಗೆ ಅಧಿಕೃತ ಆಮಂತ್ರಣ
ಮುಂಬಯಿ (ಶಿರ್ವ), ಡಿ.12: ಉಡುಪಿ ಜಿಲ್ಲೆಯ ನೂತನ ತಾಲೂಕು ಆಗಿ ರಚನೆಗೊಂಡಿರುವ ಕಾಪು ತಾಲೂಕಿನ ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ ಡಿ.20ನೇ ಗುರುವಾರ ಶಿರ್ವ ಸಮೀಪದ ಕುತ್ಯಾರು ಶ್ರೀ ಪರಶುರಾಮೇಶ್ವರ ಕ್ಷೇತ್ರದ ಶ್ರೀಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ಜರುಗಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರು, ಆಕಾಶವಾಣಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕವಿ, ಸಾಹಿತಿ ಮುದ್ದು ಮೂಡುಬೆಳ್ಳೆ ಅವರಿಗೆ ಕಸಾಪ ಉಡುಪಿ ಜಿಲ್ಲಾ ಸಮಿತಿ, ಕಾಪು ತಾಲೂಕು ಘಟಕ ಹಾಗೂ ಸಮ್ಮೇಳನ ಸಮಿತಿ ವತಿಯಿಂದ ಮೂಡುಬೆಳ್ಳೆ ನಿವಾಸದಲ್ಲಿ ಸಮಿತಿಯ ವತಿಯಿಂದ ಗೌರವಿಸಿ ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಿಲ್ಲೆಯ ಸಾಹಿತ್ಯ ಪರಂಪರೆ, ಹಾಗೂ ಸಾಹಿತ್ಯ ಪರಿಷತ್ತು ಕನ್ನಡ ನಾಡು,ನುಡಿ,ಪರಂಪರೆ, ಸಂಸ್ಕøತಿ, ಜಾನಪದಕ್ಕೆ ಒತ್ತು ನೀಡಿ, ಮಾಡುತ್ತಿರುವ ಕಾರ್ಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿ, ಕಾಪು ತಾಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನ ಭವಿಷ್ಯದ ಸಾಹಿತ್ಯಕ್ಷೇತ್ರಕ್ಕೆ ದಿಕ್ಸೂಚಿಯಾಗಲಿ ಎಂದರು.
ಸಾಹಿತ್ಯ ಪರಿಷತ್ತುಜಿಲ್ಲಾಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಅಭಿನಂದಿಸಿ ಶುಭಕೋರಿದರು. ಅಹ್ವಾನಪತ್ರ ಸ್ವೀಕರಿಸಿದ ಮುದ್ದು ಮೂಡುಬೆಳ್ಳೆ ಮಾತನಾಡಿ, ತಾಲೂಕಿನ ಪ್ರಪ್ರಥಮ ಐತಿಹಾಸಿಕ ಸಮ್ಮೇಳನದ ಸರ್ವಾಧ್ಯಕ್ಷತೆಗೆಆಯ್ಕೆ ಮಾಡಿ,ಕಳೆದ 40 ವರ್ಷಗಳಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ನೀಡುತ್ತಿರುವ ಸಾಹಿತ್ಯಸೇವೆಯನ್ನು ಗುರುತಿಸಿ ಗೌರವಿಸಿದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕ, ಸಮ್ಮೇಳನ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರೂ ಜೊತೆಯಾಗಿ ಈ ಸಮ್ಮೇಳನ ಸ್ಮರಣೀಯವಾಗಿ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನದ ಗೌರವ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ, ಸಮ್ಮೇಳನ ಸಮಿತಿ ಉಪಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಸಾಪ ತಾಲೂಕು ಘಟಕದ ಕೋಶಾಧಿಕಾರಿ ಎಸ್.ಎಸ್ ಪ್ರಸಾದ್ ಬಂಟಕಲ್ಲು, ಸಮತಿ ಸದಸ್ಯರಾದ ಹರೀಶ್ ಕಟ್ಪಾಡಿ, ಕೃಷ್ಣಕುಮಾರ್ ಮಟ್ಟು, ಸಲಹಾ ಸಮಿತಿಯ ಪದ್ಮನಾಭ ನಾಯಕ್ ಬೆಳ್ಳೆ, ತಾ.ಪಂ ಸದಸ್ಯೆ ಸುಜಾತಾ ಸುವರ್ಣ, ಮುದ್ದು ಮೂಡುಬೆಳ್ಳೆ ಅವರ ಸಹೋದರಿ ಗಿರಿಜಾ ಮೂಡುಬೆಳ್ಳೆ, ಕ್ರಿಸ್ತಿನ್ ಫೆರ್ನಾಂಡಿಸ್ ಬೆಳ್ಳೆ, ಅನಿಲ್ ಆಳ್ವ ಉಪಸ್ಥಿತರಿದ್ದರು.
ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸಮಿತಿ ಸದಸ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಸಮ್ಮೇಳನದ ಗೌರವ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿಧನ್ಯವಾದವಿತ್ತರು.
ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಬ್ರಿಟೀಷ್ ಮ್ಯೂಸಿಯಂನ ಡೆನೀಯಲ್ ಸೈಮೋನ್ ಭೇಟಿ
(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ (ಬಂಟ್ವಾಳ), ಡಿ.12: ಬಂಟ್ವಾಳ ಜೋಡುಮಾರ್ಗ (ಬಿ.ಸಿ ರೋಡು)ದ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಇಂದಿಲ್ಲಿ ಬ್ರಿಟೀಷ್ ಮ್ಯೂಸಿಯಂನ ಗ್ರಂಥಾಲಯ ಮೇಲ್ವಿಚಾರಕಿ ಡಾ| ಡೆನೀಯಲ್ ದೆ ಸೈಮೋನ್ ಭೇಟಿ ನೀಡಿದರು.
ಭಾರತ ರಾಷ್ಟ್ರದ ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಬಗ್ಗೆ ತಿಳಿದು ತುಳು ಬದುಕು ಹಾಗೂ ತೌಳವರ ಪರಂಪರೆ, ಬದುಕು ರೂಪಿಸುವಲ್ಲಿ ಉಪಯೋಗಿಸಲ್ಪಡುವ ವಸ್ತುಗಳ ಸಂಗ್ರಹಣೆ ಮತ್ತು ಭವಿಷ್ಯತ್ತಿನ ಪೀಳಿಗೆಗೆ ಪ್ರೇರಪಣೆ ಆಗಿಸುವ ಅಧ್ಯಯನ ಕೇಂದ್ರದ ಶ್ರಮವನ್ನು ಪ್ರಶಂಸಿ ಡಾ| ಡೆನೀಯಲ್ ಅಚ್ಚರಿ ವ್ಯಕ್ತ ಪಡಿಸಿದರು.
ಈ ಸಂದಭದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷಿ ್ಮೀ ನಾರಾಯಣ ಆಳ್ವ, ಪೆÇ್ರ| ವಿವೇಕ್ ರೈ, ಡಾ| ಎಂ.ಪ್ರಭಾಕರ್ ಜೋಶಿ, ನಿರೆನ್ ಜೈನ್ ಉಪಸ್ಥಿತರಿದ್ದು ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪೆÇ್ರ| ತುಕಾರಾಮ ಪೂಜಾರಿ ಸುಖಾಗಮನ ಬಯಸಿದರು. ಡಾ| ಆಶಾಲತಾ ಸುವರ್ಣ ವಂದಿಸಿದರು.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧಯಾಮಯ್ಯ ಅವರೂ ತುಳು ಕೇಂದ್ರಕ್ಕೆ ಕಳೆದ ಬಾರಿ ಭೇಟಿ ನೀಡಿ ಅಲ್ಲಿನ ರಾಷ್ಟ್ರದ ಪಿತಾಮಹಾ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪರಾರವನ್ನಿತ್ತು ನಮಿಸಿದ್ದರು. ನಾಡಿನ ಮತ್ತು ದೇಶವಿದೇಶದ ಹಲವಾರು ಗಣ್ಯರು ಈ ಅಧ್ಯಯನ ಕೇಂದ್ರಕ್ಕೆ ಭೇಟಿಯನ್ನಿತ್ತು ಪೆÇ್ರ| ತುಕಾರಾಮ ಪೂಜಾರಿ ಅವರ ದೂರದೃಷ್ಠಿತ್ವ ಹಾಗೂ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿ.23: ಮುಲುಂಡ್ ಪಶ್ಚಿಮದ ಸರಸ್ವತಿವಾಡಿಯ ಶ್ರೀ ಕುಛ್ ದೇಶಿಯಾ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿಯ 2018ನೇ ವಾರ್ಷಿಕ ಸಮ್ಮಿಲನ
ಮುಂಬಯಿ, ಡಿ.03: ಬೃಹನ್ಮುಂಬಯಿಯಲ್ಲಿ ಸಮುದಾಯದ ಶ್ರೇಯೋನ್ನತಿಗಾಗಿ ಸಾಮಾಜಿಕವಾಗಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ 2018ನೇ ವಾರ್ಷಿಕ ಸಮ್ಮೀಲನÀವು ಇದೇ ಡಿ.23ನೇ ರವಿವಾರ ಬೆಳಿಗ್ಗೆಯಿಂದ ಸಾಯಂಕಾಲ ತನಕ ಮುಲುಂಡ್ ಪಶ್ಚಿಮದ ಜವೇರ್ ರೋಡ್, ಸರಸ್ವತಿವಾಡಿ ಅಲ್ಲಿನ ಶ್ರೀ ಕುಛ್ ದೇಶಿಯಾ ಸರಸ್ವತಿ ಮಹಾ ಸಂಸ್ಥಾನ್ ಟ್ರಸ್ಟ್ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9.00 ಗಂಟೆಗೆ ಪದಾಧಿಕಾರಿಗಳನ್ನು ಒಳಗೊಂಡು ಅಧ್ಯಕ್ಷರು ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ ನೀಡುವರು. ನಂತರ ರಂಗೋಲಿ, ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಸಂಸ್ಥೆಯ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಸಾದರ ಪಡಿಸುವರು ಎಂದು ಸಂಘದ ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ ತಿಳಿಸಿದ್ದಾರೆ.
ಅಪರಾಹ್ನ 2.30 ಗಂಟೆಯಿಂದÀ ಸಂಘದ ನ್ಯಾ| ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಕ್ಯಾಬಿನೆಟ್ ಸಿಸ್ಟಮ್ಸ್ ಆ್ಯಂಡ್ ಕಂಟ್ರೋಲ್ಸ್ ಪ್ರವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಬಾಲಕೃಷ್ಣ ಪುತ್ತೂರು ಪುಣೆ, ಗೌರವ ಅತಿಥಿüಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರÀ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಎ.ಭಂಡಾರಿ ಸಕಲೇಶಪುರ, ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಶಿವರಾಮ ಕೆ.ಭಂಡಾರಿ, ಕರಾವಳಿ ಇಂಟರ್ನೆಟ್ ಸರ್ವಿಸ್ ಮತ್ತು ಕೇಬಲ್ ಟಿವಿ ನೆಟ್ವರ್ಕ್ ಬೆಂಗಳೂರು ಇದರ ಆಡಳಿತ ನಿರ್ದೇಶಕ ಲಕ್ಷ್ಮಣ್ ಕರಾವಳಿ, ತಿರುಮಲ ಗ್ರೂಫ್ ಪುಣೆ ಆಡಳಿತ ನಿರ್ದೇಶಕ ಪ್ರಶಾಂತ್ ಕಾರ್ಕಳ್ ಪುಣೆ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಾಜಿ ಅಧ್ಯಕ್ಷಗಳಾದ ಮಾಧವ ಆರ್.ಭಂಡಾರಿ, ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಶೇಖರ ಎಸ್.ಭಂಡಾರಿ, ಮಹಿಳಾ ವಿಭಾಗ ಮಾಜಿ ಕಾರ್ಯಾಧ್ಯಕ್ಷೆಯರಾದ ರುಕ್ಮಿಣಿ ಎ.ಭಂಡಾರಿ, ಲಲಿತಾ ವಿ.ಭಂಡಾರಿ, ಶೋಭಾ ಎಸ್.ಭಂಡಾರಿ ಆಗಮಿಸಿ ಸಮಾಜದ ಸಾಧಕರಾದ ವಿಠಲ್ ಕೆ.ಭಂಡಾರಿ ಭಾಂಡೂಪ್, ಟಿ.ಎಂ ಶೇಖರ್ ಭಂಡಾರಿ ಮುಲುಂಡ್, ವಿಜಯನಂದ ಎಂ.ಭಂಡಾರಿ ಬಾಂದ್ರಾ, ವನಿತಾ ಎಸ್.ಭಂಡಾರಿ ಮಲಾಡ್ ಇವರನ್ನು ಸನ್ಮಾನಿಸಲಿರುವರು ಎಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ತಿಳಿಸಿದ್ದಾರೆ.
ಸಂಜೆ 4.00 ಗಂಟೆಯಿಂದ ಪನ್ವಿ ಕ್ರಿಯೇಷನ್ಸ್ ಸಂಸ್ಥೆಯು ಹರೀಶ್ ಶೆಟ್ಟಿ ಎರ್ಮಾಳ್ ನಿರ್ದೇಶನದಲ್ಲಿ ಸಂಗೀತ, ನೃತ್ಯಗಳೊಂದಿಗೆ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಲಿದೆ. ಆ ನಿಮಿತ್ತ ಬೃಹನ್ಮುಂಬಯಿ, ಉಪನಗರಗ ಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಎಲ್ಲಾ ಭಂಡಾರಿ ಬಾಂಧವರು ಮತ್ತು ಹಿತೈಷಿಗಳು ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸ್ಕೂಟರ್ನಲ್ಲಿ ತಾಯಿ-ಮಗನ ತೀರ್ಥಯಾತ್ರೆ
ಚಿತ್ರಶೀರ್ಷಿಕೆ: ಸ್ಕೂಟರ್ನÀಲ್ಲಿ ತೀರ್ಥಯಾತ್ರೆ ಕೈಗೊಂಡ ಮೈಸೂರಿನ ಕೃಷ್ಣಕುಮಾರ್ ಮತ್ತು ತಾಯಿ ಚೂಡಾರತ್ನ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಉಜಿರೆ: ಮೈಸೂರಿನ ಕೆ. ಕೃಷ್ಣಕುಮಾರ್ ತನ್ನ ಹಳೆ ಸ್ಕೂಟರ್ನಲ್ಲಿ 70 ವರ್ಷ ಪ್ರಾಯದ ತಾಯಿ ಚೂಡಾಮಣಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದು ಈಗಾಗಲೆ ಇಪ್ಪತ್ತನಾಲ್ಕು ಸಾವಿರ ಕಿ.ಮೀ. ಕ್ರಮಿಸಿದ್ದು ವಿವಿಧ ಕ್ಷೇತ್ರಗಳ ದರ್ಶನ ಮಾಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹಿನ್ನೆಲೆ: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಕುಮಾರ್ ತಂದೆ ದಕ್ಷಿಣಾಮೂರ್ತಿ ಇತ್ತೀಚೆಗೆ ನಿಧನರಾದರು.
ತೀರ್ಥಕ್ಷೇತ್ರಗಳನ್ನು ನೋಡಬೇಕೆಂದು ತಾಯಿ ಚೂಡಾರತ್ನ ಆಶಯ ವ್ಯಕ್ತಪಡಿಸಿದಾಗ, ಮಗ ಕೃಷ್ಣ ಕುಮಾರ್ ತಾಯಿ ಜೊತೆ ಸ್ಕೂಟರ್ನಲ್ಲಿ ತೀರ್ಥಯಾತ್ರೆ ಪ್ರಾರಂಭಿಸಿದರು.
ತನ್ನನ್ನು ಹೊತ್ತು ಹೆತ್ತು, ಪ್ರೀತಿಯಿಂದ ಪಾಲನೆ ಮಾಡಿದ ತಾಯಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಬೇಕೆಂಬ ಆಸೆ ಇದೆ. ತನ್ನ ಜೀವನದ ಬಹುಭಾಗವನ್ನು ಅಡುಗೆ ಕೋಣೆಯಲ್ಲೇ ಕಳೆದ ತಾಯಿಗೆ ತೀರ್ಥಯಾತ್ರೆ ಮಾಡಿಸುವುದು ತನ್ನ ಕರ್ತವ್ಯ ಎಂದು ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಹಳೆ ಸ್ಕೂಟರ್ನಲ್ಲಿ ತೀರ್ಥಕ್ಷೇತ್ರ ಹೊಸ ಅನುಭವ ನೀಡುತ್ತಿದೆ. ತನಗೆ ಮಗನ ಬಗ್ಯೆ ಹೆಮ್ಮೆ ಇದೆ ಎಂದು ತಾಯಿ ಚೂಡಾರತ್ನ ಅಭಿಮಾನ ವ್ಯಕ್ತಪಡಿಸಿದ್ದಾರೆ.
2018ರ ಜನವರಿ 16 ಮೈಸೂರಿನಿಂದ ತೀರ್ಥಯಾತ್ರೆ ಪ್ರಾರಂಭಿಸಿದ ತಾಯಿ ಮತ್ತು ಮಗ ಈಗಾಗಲೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ತೀರ್ಥಕ್ಷೇತ್ರ ದರ್ಶನ ಮುಗಿಸಿ ಈಗ ಕರ್ನಾಟಕದಲ್ಲಿ ತೀರ್ಥಕ್ಷೇತ್ರ ದರ್ಶನ ಮಾಡುತ್ತಿದ್ದಾರೆ.
ನಿಧನ ಅಡೂರು ಗಣೇಶ್ ರಾವ್
ಉಜಿರೆ: ಧರ್ಮಸ್ಥಳ ಯಕ್ಷಗಾನ ಮಂಡಳಿಯ ಮದ್ದಳೆ ವಾದಕ ಅಡೂರು ಗಣೇಶ್ ರಾವ್ (50) ಮಂಗಳವಾರ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರ ನೆಡ್ಲೆ ನರಸಿಂಹ ಭಟ್ ಹಾಗೂ ಚಿಪ್ಪಾರು ಕೃಷ್ಣಯ್ಯ ಬಳ್ಳಾಲರ ಸಹವರ್ತಿಯಾಗಿ ಹಲವು ವರ್ಷ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ ಅಡೂರು ಗಣೇಶ್ರಾವ್ ಆರಂಭದಲ್ಲಿ ಕೆಲವು ವರ್ಷ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ಬಳಿಕ ಕಳೆದ 22 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.
ರಂಗದ ಸೂಕ್ಷ್ಮತೆಯ ಜ್ಞಾನದ ಜೊತೆಗೆ ಭಾಗವತರ ಮನೋಧರ್ಮಕ್ಕೆ ಅನುಗುಣವಾಗಿ ಮದ್ದಳೆ ನುಡಿಸುವುದರಲ್ಲಿ ಚಾಣಾಕ್ಷರಾಗಿದ್ದರು. ಚೆಂಡೆ, ಮದ್ದಳೆ ಅಲ್ಲದೆ ಭಾಗವತಿಕೆಯಲ್ಲಿಯೂ ಪರಿಣತರಾಗಿದ್ದ ಇವರು ರಂಗದ ಆಪದ್ಬಾಂಧವ ಕಲಾವಿದರಾಗಿದ್ದರು.
ಚೆಂಡೆ ಮತ್ತು ಮದ್ದಳೆಯನ್ನು ಶುೃತಿಗೊಳಿಸುವುದರಲ್ಲಿಯೂ ಪರಿಣತರಾಗಿದ್ದರು. ಕಳೆದ ಕೆಲವು ದಿನಗಳಿಂದ ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಯಿಂದ ಪೀಡಿತರಾಗಿದ್ದು ಮಂಗಳವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಕಾಸರಗೋಡಿನ ಅಡೂರು ನಿವಾಸಿಯಾದ ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link