Brief Udupi News with pictures


Richard Dsouza
Kemmannu News Network, 09-04-2019 17:08:05


Write Comment     |     E-Mail To a Friend     |     Facebook     |     Twitter     |     Print


ಚುನಾವಣಾ ಸಿಬ್ಬಂದಿಗೆ ಪಂಚಾಯತ್ ಮೂಲಕ ಊಟದ ವ್ಯವಸ್ಥೆ- ಡಿಸಿ

       ಉಡುಪಿ, ಏಪ್ರಿಲ್ 7 (ಕರ್ನಾಟಕ ವಾರ್ತೆ):  ಏಪ್ರಿಲ್ 18 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮೀಪದ ಪಂಚಾಯತ್ ನಲ್ಲಿ ಊಟ ಸಿದ್ದಪಡಿಸಿ , ಕರ್ತವ್ಯ ನಿರತ ಮತಗಟ್ಟೆಗಳಿಗೆ ಸರಬರಾಜು       ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
     ಅವರು ಭಾನುವಾರ ಸೈಂಟ್ ಸಿಸಿಲಿ ಶಾಲೆಯಲ್ಲಿ , ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು.
       ಸುಗಮ ಚುನಾವಣೆಗಾಗಿ,  ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಎಲ್ಲಾ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಚುನಾವಣ ಸಿಬ್ಬಂದಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ತೊಂದರೆಯಾಗದಂತೆ ಎಲ್ಲಾ ಸೂಕ್ತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ, ಸಿಬ್ಬಂದಿಗೆ ಊಟದ ವ್ಯವಸ್ಥೆಗಾಗಿ ಸಮೀಪದ ಪಂಚಾಯತ್ ನ್ನು ನೋಡಲ್ ಕೇಂದ್ರವನ್ನಾಗಿಸಿ, ಅಲ್ಲಿ ಊಟ ತಯಾರಿಸಿ,  ಸಮೀಪದ ಎಲ್ಲಾ ಮತಗಟ್ಟೆಗಳಿಗೆ  ವಿತರಿಸಲು ಕ್ರಮ ಕೈಗೊಳ್ಳಲಾಗುವುದು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೂಕ್ತ ಸೌಲಭ್ಯಗಳನ್ನು ಸಿಬ್ಬಂದಿಗಳಿಗೆ ಒದಗಿಸಲಾಗುವುದು ಎಂದು ಡಿಸಿ ಹೇಳಿದರು.
   ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರಕ್ಕೆ ಬರಲು ಮತ್ತು ಡಿಮಸ್ಟರಿಂಗ್ ನಂತರ ತೆರಳು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗುವುದು, ಡಿಮಸ್ಟರಿಂಗ್ ಸಮಯದಲ್ಲಿ ಮತಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿ ಹಾಜರಿ ಕಡ್ಡಾಯವಾಗಿದ್ದು, ಡಿಮಸ್ಟರಿಂಗ್ ಸಮಯದಲ್ಲಿ ಹಾಜರಾತಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
        ಮತ ಚಲಾಯಿಸಲು ಎಪಿಕ್ ಕಾರ್ಡ್ ಪರಿಗಣಿಸುವಂತೆ ಮತ್ತು ಎಪಿಕ್    ಕಾರ್ಡ್ ಇಲ್ಲವಾದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಅಗತ್ಯ ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಿ, ಯಾವುದೇ ಕಾರಣಕ್ಕೂ ವೋಟರ್ ಸ್ಲಿಪ್ ಅನ್ನು ಮತದಾನಕ್ಕೆ ದಾಖಲೆ ಎಂದು ಪರಿಗಣಿಸಬೇಡಿ ಎಂದು ತರಬೇತಿ ನಿರತ ಸಿಬ್ಬಂದಿಗೆ ಡಿಸಿ ಹೇಳಿದರು.
     ಕೆಲವು ಕಡೆಗಳಲ್ಲಿ ಮುಚ್ಚಿದ್ದ ಶಾಲೆಗಳನ್ನು ಚುನಾವಣಾ ಮತಗಟ್ಟೆಗಾಗಿ ಮತ್ತೆ ತೆರಿದಿದ್ದು, ಇಂತಹ ಶಾಲೆಗಳಲ್ಲಿ ಎಲ್ಲಾ  ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ತಾವು ಜಿಲ್ಲೆಯಲ್ಲಿ ಇದುವರೆಗೆ 100 ಕ್ಕೂ ಅಧಿಕ ಮತಗಟ್ಟೆ ಇರುವ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಅಗತ್ಯವಿರುವ ದುರಸ್ತಿಗೆ ಸೂಚಿಸಲಾಗಿದೆ ಎಂದರು.
     ಮತಗಟ್ಟೆಗಳಲ್ಲಿ  ಮತ ಚಲಾವಣೆಯ ಗೋಪ್ಯತೆಯನ್ನು ಕಾಪಾಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮತಯಂತ್ರದ ಬಳಿ ಮತದಾರರನ್ನು ಬಿಟ್ಟು ಇತರೆ ಯಾರಿಗೂ ಅವಕಾಶ ನೀಡಬೇಡಿ , ಮತಗಟ್ಟೆಯಲ್ಲಿ ಯಾವುದೇ ಸಮಸ್ಯೆಯಿದ್ದಲ್ಲಿ ಕೂಡಲೇ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
        ಮತಗಟ್ಡೆಗೆ ಗಣ್ಯ ವ್ಯಕ್ತಿಗಳು ಮತದಾನಕ್ಕೆ ಬಂದರು ಎಂದು ನಿಯಮಗಳನ್ನು ಉಲ್ಲಂಘಿಸಬೇಡಿ, ಅಂಗವಿಕಲ ಮತದಾರರಿಗೆ  ಸೂಕ್ತ ನೆರವು ನೀಡುವಂತೆ ಡಿಸಿ ತಿಳಿಸಿದರು.
      ಉಡುಪಿ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ,ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ತರಬೇತಿ ಪಡೆದ ಜಿಲ್ಲಾಧಿಕಾರಿ

     ಉಡುಪಿ, ಏಪ್ರಿಲ್ 7 (ಕರ್ನಾಟಕ ವಾರ್ತೆ):  ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ , ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳಿಗೆ ಭಾನುವಾರ ತರಬೇತಿ ನಡೆಯುತ್ತಿತ್ತು,   ತರಬೇತಿ ಕೊಠಡಿದಲ್ಲಿದ್ದ ಸಿಬ್ಬಂದಿಗೆ ಹಾಗೂ ತರಬೇತುದಾರರಿಗೆ ಒಂದು ಕ್ಷಣ ಗಾಬರಿ, ಮತ್ತೊಂದೆಡೆ ಆಶ್ಚರ್ಯ .. ಕಾರಣ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತರಬೇತಿ ನಡೆಯುತ್ತಿದ್ದ ಕೊಠಡಿಗೆ ಆಗಮಿಸಿ, ನೇರವಾಗಿ ತೆರಳಿ ಸಿಬ್ಬಂದಿ ಮಧ್ಯೆ ಕುಳಿತದ್ದು...
    ತರಬೇತಿ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಜಿಲ್ಲಾಧಿಕಾರಿ, ಕೊಠಡಿಯೊಂದಕ್ಕೆ ತೆರಳಿ ಸಿಬ್ಬಂದಿ ಮಧ್ಯೆ ಕುಳಿತು, ತರಬೇತುದಾರರಿಗೆ ತರಬೇತಿ ಮುಂದುವರೆಸುವಂತೆ ಸೂಚಿಸಿದರು, ಜಿಲ್ಲಾಧಿಕಾರಿ ಆಗಮಿಸಿದಾಗ ನಡೆಯುತ್ತಿದ್ದ ತರಬೇತಿ ವಿಷಯ, ಮತಗಟ್ಟೆಗೆ ಮತದಾರರಲ್ಲದೆ ಯಾರಿಗೆ ಪ್ರವೇಶ ನೀಡಬಹುದು ಎಂದು..
     ಚುನಾವಣಾ ಆಯೋಗದಿಂದ ಅಧಿಕೃತ ಗುರುತಿನ ಚೀಟಿ ಪಡೆದ ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಬಹುದಾಗಿದ್ದು, ಮತದಾರರನ್ನು ಹೊರತುಪಡಿಸಿ ಇತರೆ ಯಾರಿಗೂ ಅನಧಿಕೃತ ಪ್ರವೇಶ ಇಲ್ಲ,  ಗುರುತು ಚೀಟಿ ಇಲ್ಲದೆ , ತಮ್ಮ ಸಂಸ್ಥೆಯ ಗುರುತು ಚೀಟಿ ನೀಡಿದರೂ ಪ್ರವೇಶ ನೀಡಬಾರದು ಎಂದು  ತರಬೇತುದಾರರು ತಿಳಿಸಿದರು.
    ನಂತರ ಮಾತನಾಡಿದ ಜಿಲ್ಲಾಧಿಕಾರಿ, ತರಬೇತಿಯ ಸಮಯದಲ್ಲಿ ಯಾವುದೇ ಸಂಶಯಗಳಿದ್ದರೂ ಪರಿಹರಿಸಿಕೊಳ್ಳಿ, ಮತಕೇಂದ್ರದಲ್ಲಿ ಸಿಬ್ಬಂದಿಗಳು ಅನವಶ್ಯಕವಾಗಿ ಚರ್ಚೆ ಮಾಡಬೇಡಿ, ಸಮಸ್ಯೆಗಳಿದ್ದಲ್ಲಿ ನೇರವಾಗಿ ತಿಳಿಸಿ, ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಎಲ್ಲಾ ವಿಧದಲ್ಲಿ ಮಾದರಿಯಾಗಿದ್ದು, ಚುನಾವಣಾ ಕಾರ್ಯದಲ್ಲೂ ಸಹ ಮಾದರಿಯಾಗಲಿದೆ.
     ಸುಗಮ ಚುನಾವಣೆಗಾಗಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಿ, ಮತದಾನದ ಕರ್ತವ್ಯ ಕಷ್ಟ ಎಂದುಕೊಳ್ಳಬೇಡಿ, ಪ್ರತಿಯೊಬ್ಬರಿಗೂ ಚುನಾವಣಾ ಕರ್ತವ್ಯ ಸಿಗುವುದಿಲ್ಲ, ನೀವು ಅರ್ಹರಿದ್ದಿರೀ ಎಂದು ನಿಮ್ಮನ್ನು ಕರ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದ ಡಿಸಿ,  ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಿ ಎಂದು  ಹೇಳಿದರು.

ಶ್ರೀ ಕೃಷ್ಣ ಮಠದ ದೇವರ ಗರ್ಭಗುಡಿಯ ಸುವರ್ಣ ಗೋಪುರದ ಕೆಲಸ ಮಾಡುತ್ತಿರುವ ಕಾರ್ಯಗಾರಕ್ಕೆ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಹೋಗಿ ಬೆಳ್ಳಿ ಚಿನ್ನದ ಕೆಲಸವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




THEELN POLETHANA | A Konkani Short Film | ICYM Udu
View More

Final Journey of Cecilia Menezes( 88 Years ) | LIVE From Kemmannu | UdupiFinal Journey of Cecilia Menezes( 88 Years ) | LIVE From Kemmannu | Udupi
New year Mass | St. Theresa Church, Kemmannu | UdupiNew year Mass | St. Theresa Church, Kemmannu | Udupi
Christman Mass | St. Theresa Church, Kemmannu | UdupiChristman Mass | St. Theresa Church, Kemmannu | Udupi
Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, UdupiSilver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi
Annual Day Calebration 2025 | Carmel English School, KemmannuAnnual Day Calebration 2025 | Carmel English School, Kemmannu
Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi