Brief Mumbai, Mangalore News with pictures
Kemmannu News Network, 13-06-2019 11:21:17
ಜೂ.11: ಡೊಂಬಿವಲಿ ಪೂರ್ವದ ವರದ ಸಿದ್ಧಿ ವಿನಾಯಕ ಸೇವಾ ಮಂಡಳ ಭವನದಲ್ಲಿ
`ಮಾವುಲೀ’ (ಶ್ರೀ ಪಂಡರ್ಪುರ್ ಮಹಿಮಾ) ಪೌರಾಣಿಕ ಯಕ್ಷಗಾನ
ಮುಂಬಯಿ, ಜೂ.08: ವರದ ಸಿದ್ಧಿ ವಿನಾಯಕ ಸೇವಾ ಮಂಡಳ ಭವನ, ಸಿದ್ಧಿ ವಿನಾಯಕ, ನಗರ, ಬೋಪರ್ರೋಡ್ನ ಮುಂಭಾಗ, ಮಾನ್ಪಾಡ ರೋಡ್, ಡೊಂಬಿವಲಿ ಪೂರ್ವ ಇಲ್ಲಿ, ಮೇಲ್ಕಾಣಿಸಿದ ಮಂಡಳಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ತಾ.11.05.2019ರ ಮಧ್ಯಾಹ್ನ ಗಂಟೆ 2.30ರಿಂದ `ಯಕ್ಷಕಲಾ ತರಂಗ’ ಯಕ್ಷಗಾನ ಮಂಡಳಿ ಮೀರಾ-ಮುಂಬಯಿ ಇವರು ತ್ರಿಭಾಷಾ ಯಕ್ಷಗಾನ ಪ್ರಸಂಗ ರಚಯಿತ ಮರಾಠಿ ಭಾಷಾ ಯಕ್ಷಗಾನ ಜನಕನೆಂಬ ಖ್ಯಾತಿ ಪಡೆದ ಎಂ.ಟಿ ಪೂಜಾರಿ ಬರೆದ ಮರಾಠಿ ಭಾಷೆಯಲ್ಲಿಯೇ ಸಂಪೂರ್ಣ ಭಾಗವತಿಕೆ ಅರ್ಥವನ್ನೊಳಗೊಂಡ `ಮಾವುಲೀ’ (ಶ್ರೀ ಪಂಡರ್ಪುರ್ ಮಹಿಮಾ) ಎಂಬ ಪೌರಾಣಿಕ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟ ರೂಪದಲ್ಲಿ ಆಡಿ ತೋರಿಸಲಿರುವರು.
ಉಚಿತ ಪ್ರವೇಶವಿರುವ ಈ ಪ್ರದರ್ಶನದ ಅಂತ್ಯದಲ್ಲಿ ಶ್ರೀ ವಿಠ್ಠಲ ರುಕ್ಮಿಣಿಯರ ಸಾಕ್ಷಾತ್ಕಾರದ ಲಾಭ ಪಡೆಯಬೇಕೆಂದು ಯಕ್ಷಗಾನ ಪ್ರಾಯೋಜಕರಾದ ವರದ ಸಿದ್ದಿವಿನಾಯಕ ಸೇವಾ ಮಂಡಳದ ಉಪಾಧ್ಯಕ್ಷ ಮಾಧವ ಪಿ.ನಾಯಕ್ ಹಾಗೂ ಯಕ್ಷಗಾನ ಮಂಡಳಿಯ ಪರವಾಗಿ ಕುಕ್ಕೆಹಳ್ಳಿ ವಿಠ್ಠಲ ಪ್ರಭು ವಿನಂತಿಸಿದ್ದಾರೆ. ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಯಶಸ್ವಿ ಗೊಳಿಸಬೇಕೆಂದು ಮಂಡಳದ ಅಧ್ಯಕ್ಷ ಎಲ್.ವಿ ನಾಯಕ್ ವಿನಂತಿಸಿದ್ದಾರೆ.
ಇದೀಗಲೇ ಮರಾಠಿ ಭಾಷೆಗೆ ಭಾಷಾಂತರಗೊಂಡು ಪ್ರದರ್ಶಿಸಲ್ಪಟ್ಟ `ಶ್ರೀ ಮಹಿಷಾಸುರ್ ಮರ್ದಿನಿ’ ಮತ್ತು `ಮಹಾಮಾಯೆ ಕೌಶಿಕಾ’ ಕಾಲಮಿತಿಯ ಪ್ರಸಂಗಗಳನ್ನು ಬಯಸುವವರು ಲೇಖಕ ಎಂ.ಟಿ ಪೂಜಾರಿ (7498997440) ಇವರನ್ನು ಸಂಪರ್ಕಿಸಬಹುದು
ಎಸ್ಡಿಎಂ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನ ಕಾಲೇಜು ಇಪ್ಪತ್ತೈದನೆ ಪದವಿ ಪ್ರದಾನ
ಆರೋಗ್ಯ ರಕ್ಷಣೆಗಾಗಿ ಸಮಗ್ರ ಚಿಕಿತ್ಸಾ ವಿಧಾನ ಬಳಸಬೇಕು- ಡಾ| ಬಿ.ಎನ್ ಗಂಗಾಧರ್
ಮುಂಬಯಿ (ಉಜಿರೆ), ಜೂ.11: ರೋಗಿಗಳಿಗೆ ಸಾಂತ್ವನದ ಮಾತುಗಳೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಅವರ ಭಯ, ಆತಂಕ ನಿವಾರಿಸಿ ರೋಗವನ್ನು ಶಮನ ಮಾಡಿಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವೈದ್ಯ ವೃತ್ತಿ ಹಣ ಸಂಪಾದನೆಗಾಗಿಅಲ್ಲ. ಮಾನವೀಯತೆಯಿಂದ ಸೇವೆ ಮಾಡಲಿಕ್ಕಾಗಿ.ರೋಗಿಗಳಆರೋಗ್ಯ ಭಾಗ್ಯರಕ್ಷಣೆಗಾಗಿ ವಿವೇಚನೆಯಿಂದ ವೈದ್ಯರುಅಲೊಪತಿ ಹಾಗೂ ಪಾರಂಪರಿಕಚಿಕಿತ್ಸಾ ವಿಧಾನವನ್ನು ಬಳಸಬೇಕು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು (ನಿಮ್ಹಾನ್ಸ್) ನಿರ್ದೇಶಕ ಡಾ| ಬಿ.ಎನ್ ಗಂಗಾಧರ್ ಹೇಳಿದರು.
ಉಜಿರೆಯಲ್ಲಿ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭ ಉದ್ದೇಶಿಸಿ ಡಾ| ಗಂಗಾಧರ್ ಮಾತನಾಡಿ ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದೆ. ರೋಗಿಗಳ ರೋಗವನ್ನು ಶಮನಗೊಳಿಸಿ ಆರೋಗ್ಯರಕ್ಷಣೆ ಮಾಡುವುದು ವೈದ್ಯರ ಕರ್ತವ್ಯವಾಗಿದೆ. ರೋಗದ ಲಕ್ಷಣರೋಗಿಯದೈಹಿಕ ಹಾಗೂ ಮಾನಸಿಕ ಸ್ಥಿತಿ, ಜೀವನಶೈಲಿ ಹೊಂದಿ ಕೊಂಡು ವಿವೇಚನೆಯಿಂದ ಸೂಕ್ತ ಚಿಕಿತ್ಸಾ ವಿಧಾನ ಬಳಸಬೇಕು. ಕೇವಲ ಅಲೋಪತಿಯಿಂದಅಥವಾ ಪಾರಂಪರಿಕ ಪದ್ಧತಿಗಳಾದ ಆಯುರ್ವೇದ, ಯುನಾನಿ, ಯೋಗ, ಪ್ರಕೃತಿಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸಾ ವಿಧಾನದಿಂದ ಎಲ್ಲಾ ರೋಗಗಳನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದುದರಿಂದ ವೈದ್ಯರು ವಿವೇಚನೆಯಿಂದ ರೋಗಿ ಮತ್ತುರೋಗದ ಲಕ್ಷಣ ಹೊಂದಿಕೊಂಡುಎಲ್ಲಾ ಪದ್ಧತಿಗಳ ಉತ್ತಮ ಅಂಶಗಳನ್ನು ಬಳಸಿ ಸಮಗ್ರಚಿಕಿತ್ಸಾ ವಿಧಾನದಿಂದ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಡಾ| ವೀರೇಂದ್ರ ಹೆಗ್ಗಡೆ ಅವರ ದಕ್ಷ ನೇತೃತ್ವದಲ್ಲಿ ಉಜಿರೆಯ ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನಕಾಲೇಜಿನ ಸೇವೆ, ಪ್ರಗತಿ ಮತ್ತು ಸಾಧನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿ ಇಲ್ಲಿ ಕಲಿತವರು ಆಡಳಿತ ಮಂಡಳಿಗೆ, ಸಂಸ್ಥೆಗೆ, ಪ್ರಾಧ್ಯಾಪಕರಿಗೆ, ತಮ್ಮ ಪೋಷಕರಿಗೆ ಸದಾಕೃತಜ್ಞರಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು.
ಎಸ್ಡಿಎಂ ವಿಶ್ವವಿದ್ಯಾಲಯ ಧಾರವಾಡದ ಇದರ ಕುಲಪತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವೈದ್ಯರು ರೋಗಿಗಳಲ್ಲಿ ಆತ್ಮವಿಶ್ವಾಸಮತ್ತು ಭರವಸೆ ಮೂಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಬೇಕು. ರೋಗ ಬಂದ ಮೇಲೆ ಶಮನಗೊಳಿಸುವುದಕ್ಕಿಂತ ರೋಗ ಬರದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ವೈದ್ಯರು ಸರಿಯಾದ ಆಹಾರಕ್ರಮ, ಜೀವನ ಶೈಲಿ, ಆರೋಗ್ಯಪೂರ್ಣ ಶಿಸ್ತಿನ ಜೀವನದ ಬಗ್ಯೆ ಮಾರ್ಗದರ್ಶನ, ಸಲಹೆ ನೀಡಬೇಕು.ರೋಗಿಗಳ ಸಮಸ್ಯೆ, ಆತಂಕವನ್ನು ತಾಳ್ಮೆಯಿಂದ, ಮಾನವೀಯತೆಯಿಂದ ಆಲಿಸಬೇಕು.ತಮ್ಮ ಪವಿತ್ರ ವೃತ್ತಿಯಲ್ಲಿ ಪ್ರತಿ ದಿನ ರೋಗಿಗಳಿಂದ ಹೊಸ ವಿಚಾರ, ಸಮಸ್ಯೆಗಳನ್ನು ತಿಳಿದುಕೊಂಡು ತಮ್ಮಜ್ಞಾನಕ್ಷಿತಿಜ ಹಾಗೂ ವೃತ್ತಿದಕ್ಷತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹಿದರು.
ಧಾರವಾಡದಲ್ಲಿ ಡೆಂಟಲ್ಕಾಲೇಜು ಮತ್ತುಆಸ್ಪತ್ರೆ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವನ್ನು ಸೇರಿಸಿಕೊಂಡು ಎಸ್ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ ಮುಂದೆ ಎಲ್ಲಾ ವಿದ್ಯಾಸಂಸ್ಥೆಗಳನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಮಾಡಲಾಗುವುದು ಎಂದರು.
ಹೇಮಾವತಿ ವಿ.ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಮತು ್ತಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. ಎಸ್ಡಿಎಂ ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಅಂಕಿತ್ ಪಾಂಡೆ ಮತ್ತು ಪ್ರಿಯದಾ ಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಯೋಗ ವಿಭಾಗದ ಡೀನ್ ಡಾ| ಶಿವಪ್ರಸಾದ ಶೆಟ್ಟಿ ಧನ್ಯವಾದವಿತ್ತರು.
ಜೂ.16:ಸುರತ್ಕಲ್ ಬಂಟರ ಸಂಘದಿಂದ ಮನೆ ಹಸ್ತಾಂತರ-ಸಹಾಯಹಸ್ತ
ಮುಂಬಯಿ (ಸುರತ್ಕಲ್), ಜೂ.11: ಬಂಟರ ಸಂಘ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಕಾರದಲ್ಲಿ ನಿರ್ಮಿಸಿದ ಎರಡು ಮನೆಗಳ ಕೀ ಹಸ್ತಾಂತರ ಹಾಗೂ ಅಭಿನಂದನೆ, ಬಡವರಿಗೆ ಸಹಾಯ ಹಸ್ತ ಮತ್ತು ವಿದ್ಯಾಥಿರ್ü ವೇತನ ವಿತರಣಾ ಸಮಾರಂಭವೂ ಜೂನ್ 16ರಂದು ಭಾನುವಾರ ಸಂಜೆ 5 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು ತಿಳಿಸಿದರು.
ಸುರತ್ಕಲ್ ಬಂಟರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಳ ಒಟ್ಟೆ ಕಾಯರ್ ನಿವಾಸಿ ವಿಜಯಲಕ್ಷ್ಮೀ ಶೆಟ್ಟಿ ಅವರಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುರತ್ಕಲ್ ಬಂಟರ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರದಿಂದ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು. ಅದೇ ರೀತಿ ಚೇಳಾೈರ್ ಖಂಡಿಗೆ ನಿವಾಸಿ ಹರೀಶ್ ಶೆಟ್ಟಿ ಅವರಿಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಸುರತ್ಕಲ್ ಬಂಟರ ಸಂಘದ ನೆರವಿನಲ್ಲಿ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ. ಸುರತ್ಕಲ್ ಬಂಟರ ಸಂಘವು ಈ ಹಿಂದೆ ಎರಡು ಮನೆಗಳನ್ನು ಸಮಾಜದ ಬಂಧುಗಳಿಗೆ ನಿರ್ಮಿಸಿ ಕೊಟ್ಟಿತ್ತು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಸುರತ್ಕಲ್ ಬಂಟರ ಸಂಘವು ವಿಧವೆಯರಿಗೆ, ಭಿನ್ನ ಸಾಮಥ್ರ್ಯದವರಿಗೆ ಹಾಗೂ ವಿಕಲಚೇತನರಿಗೆ ಸಹಾಯ ಹಸ್ತವನ್ನು ನೀಡುತ್ತಾ ಬಂದಿರುತ್ತದೆ. ಪ್ರಸ್ತುತ ಒಟ್ಟು 26 ಮಂದಿಗೆ ತಲಾ ಆರು ಸಾವಿರ ರೂ. ನೀಡಲಾಗುತ್ತಿದೆ. ಬಂಟರ ಯಾನೆ ನಾಡವರ ಮಾತೃ ಸಂಘ ಕೂಡಾ ಸುರತ್ಕಲ್ ಬಂಟರ ಸಂಘದ ಸಮಾಜ ಮುಖಿ ಕಾರ್ಯದೊಂದಿಗೆ ಕೈಜೋಡಿಸಿ ವಿಧವೆಯರಿಗೆ, ಭಿನ್ನ ಸಾಮಥ್ರ್ಯದವರಿಗೆ ಹಾಗೂ ವಿಕಲ ಚೇತನರಿಗೆ ಸದ್ರಿ ವರ್ಷದಿಂದ ತಲಾ ಆರು ಸಾವಿರ ರೂಪಾಯಿಯನ್ನು ನೀಡಲಿದ್ದಾರೆ. ಅಂತೆಯೇ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾಥಿರ್ü ವೇತನವನ್ನು ಸಮಾರಂಭದಲ್ಲಿ ವಿತರಿಸಲಾಗುವುದು. ಸುರತ್ಕಲ್ ಬಂಟರ ಸಂಘ ನೀಡುವ ವಿದ್ಯಾಥಿರ್ü ವೇತನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘ ನೆರವು ನೀಡಿದೆ.
ಸಮಾರಂಭದ ಅಧ್ಯಕ್ಷತೆ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜಾ ವಹಿಸಲಿದ್ದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸಂಘದ ಮಾಹಿತಿ ಪುಸ್ತಕವನ್ನು ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಚೇರ್ಮೆನ್ ಎ.ಸದಾನಂದ ಶೆಟ್ಟಿ ಬಿಡುಗಡೆ ಗೊಳಿಸಲಿದ್ದಾರೆ. ಮನೆಗಳ ಕೀ ಹಸ್ತಾಂತರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೆರವೇರಿಸಲಿದ್ದಾರೆ.
ಅತಿಥಿüಗಳಾಗಿ ಮದ್ಯ ಶ್ರೀ ಖಡ್ಗೇಶ್ವರ-ಖಡ್ಗೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಎಂ.ಶೆಟ್ಟಿ ಮದ್ಯಗುತ್ತು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಮಲಾಡ್ ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್ನ ಆಡಳಿತ ನಿರ್ದೇಶಕ ಬಾಬು ಶೆಟ್ಟಿ ಪೆರಾರ ಭಾಗವಹಿಸಲಿದ್ದಾರೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ಸುರತ್ಕಲ್ ಬಂಟರ ಸಂಘದ 19ನೇ ವಾರ್ಷಿಕ ಮಹಾಸಭೆ ಸಂಘದ ಸಭಾ ಭವನದಲ್ಲಿ ನಡೆಯಲಿದೆ. ಸಂಘದ ವ್ಯಾಪ್ತಿಯ ಗ್ರಾಮದ ಬಂಟ ಸಮಾಜ ಬಾಂಧವರಿಂದ ಸಾಂಸ್ಕøತಿಕ ಸ್ಪರ್ಧೆ ಜರಗಲಿದ್ದು, ವಿಜೇತ ತಂಡಕ್ಕೆ 15 ಸಾವಿರ ರೂಪಾಯಿ, ದ್ವಿತೀಯ ತಂಡಕ್ಕೆ 10 ಸಾವಿರ ಹಾಗೂ ತೃತೀಯ ತಂಡಕ್ಕೆ 5 ಸಾವಿರ ಹಾಗೂ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮುಂಚೂರು , ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ , ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು , ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ , ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ , ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
