Brief Mumbai, Mangalore news with pictures


Rons Bantwal
Kemmannu News Network, 04-07-2019 20:17:38


Write Comment     |     E-Mail To a Friend     |     Facebook     |     Twitter     |     Print


ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪ - ದೇವರ ಸೇವೆಗೆ  ಪಡುವ ಕಷ್ಟ ಅದು ತಪಸ್ಸು ಇದ್ದಂತೆ: ವಿಶ್ವೇಶತೀರ್ಥಶ್ರೀ

ಮುಂಬಯಿ, ಜೂ.30: ಉಡುಪಿ ಶ್ರೀಕೃಷ್ಣನಿಗೆ ಸಪೆÇ್ತೀತ್ಸವ ನಡೆಯುವಂತೆ ಮುಂಬಯಿ ಮಹಾನಗರಿಯಲ್ಲಿ ಆತನಿಗೆ ತುಲಾಭಾರ ಸಪ್ತಾಹೋತ್ಸವ ನಡೆದಿದೆ. ಇಲ್ಲಿ ನಮಗೆ ಯಾವ ತೊಂದರೆಗಳೂ ಆಗಲಿಲ್ಲ. ದೇವರ ಸೇವೆಗೆ  ಪಡುವ ಕಷ್ಟ ಅದು ತಪಸ್ಸು ಇದ್ದ ಹಾಗೆ. ಅದು ಶ್ರೀ ಕೃಷ್ಣನ ಸೇವೆಗೆ ಆತ ನೀಡಿದ ಅವಕಾಶ.  ಕಾಳಿಯನಿಂದಾಗಿ ಯಮುನಾ ನದಿಯಲ್ಲಿ ತುಂಬಿದ ವಿಷವನ್ನು ಶ್ರೀ ಕೃಷ್ಣ ಕಾಳಿಯ ಮರ್ದನನಾಗಿ ಹೇಗೆ ಶುದ್ದಿಗೊಳಿಸಿದನೋ, ಅಂತೆಯೇ ಇಂದು  ಪರಿಸರದಲ್ಲಿ ಯಂತ್ರ, ತಂತ್ರಗಳಿಂದ ಕಲುಷಿತವಾದ ವಾತಾವರಣವನ್ನು  ಹಾಗೂ ನಮ್ಮ ಅಂತರಂಗ-ಬಹಿರಂಗದಲ್ಲಿ ತುಂಬಿಕೊಂಡ ಕೆಟ್ಟ ಕಾಮನೆಗಳನ್ನು, ಮಂತ್ರದಿಂದ ಶುದ್ದಿಗೊಳಿಸಬೇಕು. ಅದಕ್ಕೆ ಮಂದಿರಗಳ ನಿರ್ಮಾಣ ಅತ್ಯಂತ ಅವಶ್ಯ. ಗೋಕುಲದ  ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಸರ್ವ ಭಕ್ತಾದಿಗಳು ತುಂಬು ಹೃದಯದಿಂದ ಸಹಕರಿಸಬೇಕು ಎಂದು ಜಗದ್ಗುರು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ), ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳ ಭಕ್ತವೃಂದವು ಬೃಹನ್ಮುಂಬಯಿನಲ್ಲಿ ಹಮ್ಮಿಕೊಂಡಿದ್ದ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹ ಸಮಾರೋಪ ಉದ್ದೇಶಿಸಿ ಪೇಜಾವರಶ್ರೀ ನುಡಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ  ತುಲಾಭಾರ ಸಪ್ತಾಹದ ಸಮಾರೋಪದಲ್ಲಿ ಸಮಾರಂಭದಲ್ಲಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾಪೆರ್Çೀರೇಶನ್ (ಬಿಎಂಸಿ) ಮಹಾಪೌರ ಪೆÇ್ರ| ವಿಶ್ವನಾಥ್ ಮಹಾದೇಶ್ವರ್ ಮುಖ್ಯ ಅತಿಥಿsಯಾಗಿದ್ದು, ಪೇಜಾವರ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಡಾ| ಸುರೇಶ್ ಎಸ್.ರಾವ್ ಮಾತನಾಡಿ ನಾವು ಹಮ್ಮಿಕೊಂಡ ರಜತ ತುಲಾಭಾರ ಸೇವೆಯು ಶ್ರೀ ಗುರುಗಳ ಹಾಗೂ ಶ್ರೀ ಕೃಷ್ಣನ ಅನುಗ್ರಹದಿಂದ ಅತ್ಯುತ್ತಮವಾಗಿ ಜರಗಿ ಇತಿಹಾಸವನ್ನು ನಿರ್ಮಿಸಿದ  ತೃಪ್ತಿ ತಂದಿದೆ. ಆದರೆ ಒಂದೆರಡು ದಿನ ಮಳೆಯ ಕಾರಣ ಶ್ರೀಗಳಿಗೆ ಪ್ರಯಾಣದಲ್ಲಿ ತುಂಬಾ ತೊಂದರೆಯಾದುದು ನಮಗೆ ಬೇಸರವಾಗಿದೆ. ಅವರಿಗೆ ಆದ ಕಷ್ಟಗಳಿಗೆ ನಮಗೆ ತುಂಬಾ ನೋವಾಗಿದೆ.  ಆದರೆ ಅವರು ತಮ್ಮ ಎಂದಿನಂತೆ  ಉತ್ಸಾಹದಿಂದ ಶ್ರೀ ದೇವರ ಮಂದಿರ ನಿರ್ಮಾಣಕ್ಕೆ  ನಮ್ಮೊಂದಿಗೆ ಹಕರಿಸಿ  ನಮಗೆ ಅನುಗ್ರಹಿಸಿದ್ದಾರೆ ಎಂದು ಹೇಳಿದರು.

ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಅವರು ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ, ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ - ಲೋಕ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುವ ಯತಿಕುಲ ತಿಲಕರು,  ವಾಮನ ಮೂರ್ತಿಯಾದರೂ ಅದ್ಭುತ ಗಾತ್ರದ  ವ್ಯಕ್ತಿತ್ವವುಳ್ಳ ಶ್ರೀಪಾದರು, ಕಾಮಿತಾರ್ಥ ಪ್ರದಾಯಕರು-ನಮ್ಮ ಅಭಿಲಾಷೆಯನ್ನು ಈಡೇರಿಸುವವರು, ಪೂರ್ವಾಶ್ರಮದಲ್ಲಿ ವೆಂಕಟರಮಣನೆಂದು ನಾಮಾಂಕಿತರಾದ  ಪೂಜ್ಯ ಶ್ರೀಪಾದರು  ಶ್ರೀನಿವಾಸರಾಗಿ ನಮಗೆಲ್ಲಾ ಅನುಗ್ರಹಿಸಿದಾಗಗೋಕುಲ ಶ್ರೀ ಕೃಷ್ಣ  ಮಂದಿರ ನಿರ್ಮಾಣದ ಕನಸು  ಶೀಘ್ರದಲ್ಲಿ ಸಾಕಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ’  ಎಂದರು.  

ಗೋಪಾಲಕೃಷ್ಣ ಮತ್ತು ಬಿಎಸ್‍ಕೆಬಿಎ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನು ಸೇರಿಸಿಕೊಂಡು ಪೇಜಾವರಶ್ರೀಗಳ ಸಪ್ತಾಹದ ಕೊನೆಯ ರಜತ ತುಲಾಭಾರ ನೆರವೇರಿಸಿದರು. ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷಿ ್ಮೀ ಸುರೇಶ್ ರಾವ್ ದಂಪತಿ  ಆರತಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶೇಖರ್ ಸಾಲ್ಯಾನ್, ಡಾ| ಮನೋಜ್ ಹುನ್ನೂರು, ಸುರೇಂದ್ರ ಕುಮಾರ್ ಹೆಗ್ಡೆ, ಬಿಎಸ್‍ಕೆಬಿಎ ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಪಿಟಿ ವಿಶ್ವಸ್ಥ ಮಂಡಳಿ ಗೌ| ಪ್ರ| ಕಾರ್ಯದರ್ಶಿ ಎ.ಎಸ್ ರಾವ್, ವಿಶ್ವಸ್ಥ ಸದಸ್ಯರಾದ ಬಿ.ರಮಾನಂದ ರಾವ್ (ಬಡನಿಡಿಯೂರು), ಕೃಷ್ಣ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಕೈರಬೆಟ್ಟು ವಿಶ್ವನಾಥ್ ಭಟ್, ಪೇಜಾವರ ಮಠದ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ  ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಶುಭಾವಸರದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿಸಿ ಶ್ರೀ ಎಸ್.ಕೆ ಉರ್ವಾಳ್ ಮತ್ತು ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ ಪರಿವಾರದ ಪ್ರಾಯೋಜಕತ್ವದಲ್ಲಿ  ಗುರು ಶ್ರೀಮತಿ ಮಂಜುಳಾ ಜಿ.ಭಟ್ ಬಳಗವು  ಭಜನಾ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶಾಲಾ ಪರಿಕರಣಗಳನ್ನು ವಿತರಿಸಿದ ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಸಮಿತಿ - ವಿದ್ಯೆಯು ಕಲಿತಷ್ಟು ಕಲಿಯುವಂತಹ ಕಲ್ಪವೃಕ್ಷ : ಚಂದ್ರಹಾಸ ಕೆ.ಶೆಟ್ಟಿ

ಮುಂಬಯಿ, ಜೂ.30: ವಿದ್ಯೆಯು ಕಲಿತಷ್ಟು ಕಲಿಯುವಂತಹ ಕಲ್ಪವೃಕ್ಷ. ನಾವೆಲ್ಲ ಕನ್ನಡ ಭಾಷೆಯಲ್ಲಿ ಕಲಿತು ಮುಂದೆ ಬಂದವರು. ಹೆಚ್ಚಿನ ವಿದ್ಯೆ ಕಲಿಯ ಬಯಸುವ ವಿದ್ಯಾಥಿರ್sಗಳಿಗೆ ಸಹಕರಿಸುವ ಮನೋಭಾವನೆ ಎಲ್ಲರಲ್ಲೂ ಇರಲಿ. ವಿದ್ಯೆ ಕಲಿತು ದೊಡ್ಡವರಾದಗ ತಮ್ಮ ಮಾತಾಪಿತರನ್ನು ಮರೆಯಬಾರದು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಕರೆಯಿತ್ತರು.

ಕಳೆದ ಶನಿವಾರ ಪೆÇವಾಯಿಯ ಮಂತ್ರ ಹೊಟೇಲ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿಯು ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮುಂದಾಳತ್ವದಲ್ಲಿ ಮಹಾನಗರ ಪಾಲಿಕಾ ಕನ್ನಡ ವಿಭಾಗದ ಮಕ್ಕಳಿಗಾಗಿ ಶಾಲಾ ಉಪಕರಣ, ಪರಿಕರಣೆಗಳ ವಿತರಣಾ ಕಾರ್ಯಕ್ರಮದ 
ಅಧ್ಯಕ್ಷತೆ ವಹಿಸಿ ಚಂದ್ರಹಾಸ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತೃಭೂಮಿ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮಂತ್ರ ಹೊಟೇಲ್‍ನ ಮಾಲಕ ಅಪ್ಪಣ್ಣ ಎಂ.ಶೆಟ್ಟಿ, ಬಂಟರ ಸಂಘ ಮುಂಬಯಿ ಜೊತೆÉ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಸಂಘದ ಪ್ರಾದೇಶಿಕ ವಲಯಗಳ ಸಮನ್ವಯಕ ಡಾ| ಪ್ರಭಾಕರ್ ಶೆಟ್ಟಿ ಬೋಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಡಾ| ಆರ್.ಕೆ ಶೆಟ್ಟಿ ಮಾತನಾಡಿ ಪ್ರಯತ್ನ ಮಾಡಿದರೆ ಏನನ್ನೂ ಸಾಧಿಸಬಹುದು ಎಂಬ ಚಿಂತನೆ ಮಕ್ಕಳು ಚಿಕ್ಕಂದಿನಿಂದಲೇ ಮೈಗೂಡಿಸಿ ಕೊಳ್ಳಬೇಕು. ಸಾಧನೆ ಸಿದ್ಧಿಗೆ ನಮ್ಮ ದೇಶದ ಪ್ರಧಾನಿ ಮಂತ್ರಿ, ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಂ ಇಂತಹ ಮಹಾನ್ ಪುರುಷರನ್ನು ಆದರ್ಶವಾಗಿಸಿ ಕೊಳ್ಳಬಹುದು. ಶಾಲಾ ಪರಿಕರಗಳನ್ನು ಪಡೆದ ಮಕ್ಕಳು ಸುಶಿಕ್ಷಿತರಾಗಿ ಬೆಳೆದು ಇತರಿಗಾಗಿ ಸಹಾಯ ಮಾಡುವ ಸದ್ಗುಣವನ್ನು ಮೈಗೂಡಿಸಬೇಕು. ಎಲ್ಲಾ ಮಕ್ಕಳಿಗೆ ಸಾಧನೆ ಮಾಡುವ ಒಂದೊಲ್ಲ ಒಂದು ಧೀಶಕ್ತಿ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಿಸುವ ಅಗತ್ಯವಿದೆ ಎಂದು ಮಕ್ಕಳಿಗೆ ಮತ್ತು ಪೆÇೀಷಕರಿಗೆ ಕಿವಿಮಾತುಗಳನ್ನಾಡಿದರು.

ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಉಪ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ ಸುಖಾಗಮನ ಬಯಸಿದರು. ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ ಅಭಾರ ವ್ಯಕ್ತಪಡಿಸಿದರು.

ಮಾಯ ಸೀತಾರಾಮ ಆಳ್ವ ನಿಧನ
ಮುಂಬಯಿ, ಜು.01: ಬ್ರಹ್ಮನುಂಬಯಿ ಹೆಸರಾಂತ ವೈಧ್ಯಾಧಿಕಾರಿ, ಸಮಾಜ ಮತ್ತು ಧಾರ್ಮಿಕ ಮುಖಂಡ ಮಿಜಾರು ಡಾ| ಸೀತಾರಾಮ ಆಳ್ವ ಅವರ ಧರ್ಮಪತ್ನಿಮಾಯ ಸೀತಾರಾಮ ಆಳ್ವ (63.) ರವಿವಾರ (ಜೂ.30) ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮಾಹಿಮ್‍ನಲ್ಲಿನ ಸ್ವಗೃಹದಲ್ಲಿ ನಿಧನಾರಾದರು.

ಮೃತರು ಮೂಲತಃ ಹೆಜಮಾಡಿ ಗರಡಿ ಮನೆತನದವರಾಗಿದ್ದು, ದಿ| ಡಾ| ಬಾಲಕೃಷ್ಣ ಶೆಟ್ಟಿ ಅವರ ಸುಪುತ್ರಿಯಾಗಿದ್ದು, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಚಿತ್ರಕಲಾ ಪ್ರದರ್ಶನ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾವಿದ ಎಸ್.ಜಿ ವಾಸುದೇವ ಅವರಿಂದ ಉದ್ಘಾಟನೆ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.29: ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಮುಂಬಯಿ ವಿಶ್ವವಿದ್ಯಾಲ ಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಭಾಗೃಹದಲ್ಲಿ ಕರ್ನಾಟಕ ಮೂಲದ ಮುಂಬಯಿಯ ನಾಮಾಂಕಿತ ಚಿತ್ರ ಕಲಾವಿದರ `ಚಿತ್ರಕಲಾ ಪ್ರದರ್ಶನ’ಕ್ಕೆ ಚಾಲನೆಯನ್ನೀಡಿತು.

ಮೈಸೂರು ಅಸೋಸಿಯೇಶನ್‍ನ ಸಭಾಂಗಣದಲ್ಲಿ ದ್ವಿದಿನಗಳಲ್ಲಿ ಹಮ್ಮಿಕೊಳ್ಳಲಾದ `ಚಿತ್ರಕಲಾ ಪ್ರದರ್ಶನ’ ವನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ನಾಡಿನ ಹೆಸರಾಂತ ಚಿತ್ರಕಲಾವಿದ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಎಸ್.ಜಿ ವಾಸುದೇವ ಉದ್ಘಾಟಿಸಿದರು ಹಾಗೂ ಮೈಸೂರು ಅಸೋಸಿಯೇಶನ್‍ನ ಮುಖವಾಣಿ ನೇಸರು ತ್ರೈಮಾಸಿಕ ಬಿಡುಗಡೆಗೊಳಿಸಿ ಶುಭಾರೈಸಿದರು.
 
ಹಿರಿಯ ನಾಟಕಕಾರ, ಸಂಘಟಕ ಡಾ| ಬಿ.ಆರ್ ಮಂಜುನಾಥ್ ಅವರ ಪ್ರಧಾನ ಸಹಯೋಜಕತ್ವದಲ್ಲಿ ನಡೆಸಲ್ಪಟ್ಟ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಸಿದ್ಧ ಚಿತ್ರಕಲಾವಿದರಾದ ವಾಸುದೇವ ಕಾಮತ್, ದೇವದಾಸ್ ಎಸ್.ಶೆಟ್ಟಿ, ದಿವಾಕರ ಶೆಟ್ಟಿ, ರೇಖಾ ಹೆಬ್ಬಾರ್, ಅನು ಪಾವಂಜೆ, ಪಂಜು ಗಂಗುಲಿ, ಚಿತ್ರಮಿತ್ರ ಮತ್ತು ಜಯ ಎಸ್.ಸಾಲ್ಯಾನ್ ಮತ್ತಿತರ ಕಲಾವಿದರು ಭಾಗವಹಿಸಿ ತಮ್ಮತಮ್ಮ ಚಿತ್ರಗಳನ್ನು ಪ್ರದರ್ಶಿಸಿ ಕಲಾಭಿಮಾನಿ ಜನರ ಮನಾಕರ್ಷಣೆಗೆ ಪಾತ್ರರಾದರು. 

ಪ್ರದರ್ಶನದ ಅಂಗವಾಗಿ ಸಯನ್, ದಾದರ್ ಮತ್ತು ಮಾಟುಂಗಾ ಆಸುಪಾಸಿನ ಇಲ್ಲಿನ ರ್ನಲ್ಲಿಯ 9ರಿಂದ 12 ವರ್ಷದ ಮುಂಬಯಿನ ಕನ್ನಡ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಿ ಚಿತ್ರಕಲೆಗೆ ಪೆÇ್ರೀತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಅಸೋಸಿಯೇಶನ್ ಮುಂಬಯಿ ಟ್ರಸ್ಟಿ ಕೆ.ಮಂಜುನಾಥಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಮೊಗವೀರ ಮಾಸಿಕದ ಸಂಪಾದಕ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರಕಲಾ ಸ್ಪರ್ಧಿಗಳಿಗೆ ಪಾರಿತೋಷಕ ಪ್ರದಾನಿಸಿ ಅಭಿನಂದಿಸಿದರು.

ಅನೇಕ ಕಲಾವಿದರು ಹಾಜರಿದ್ದು, ಪದ್ಮನಾಭ ಶೆಟ್ಟಿ ಸಿದ್ದಕಟ್ಟೆ ಪ್ರಾರ್ಥನೆಯನ್ನಾಡಿದರು. ಮೈಸೂರು ಅಸೋಸಿಯೇಶನ್‍ನ ನಾರಾಯಣ ನವಿಲೇಕರ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶನ್‍ನ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ್ ವಂದಿಸಿದರು

ತಾಕ್ರೂಜ್‍ನ ಶ್ರೀ ಪೇಜಾವರ ಮಠದ ಸ್ವಾಗತ ಗೋಪುರ ಉದ್ಘಾಟನೆ ಶ್ರೀಗಳ ಅಭಯ ಹಸ್ತದ ಅನುಗ್ರಹ ಸರ್ವ ಶ್ರೇಷ್ಠವಾದುದು: ಮೇಯರ್ ಮಹಾದೇಶ್ವರ್
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.30: ಪೇಜಾವರ ಶ್ರೀಗಳು 93ರ ಇಳಿ ವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹದಿಂದ  ಸಮಾಜಮುಖಿ ಸೇವೆಯೊಂದಿಗೆ ನಮ್ಮೊಡನೆ ಇರುವುದು ನಮ್ಮ ಹಾಗೂ ರಾಷ್ಟ್ರದ ಸೌಭಾಗ್ಯವಾಗಿದೆ. ಶ್ರೀಗಳ ಅಭಯ ಹಸ್ತದ ಅನುಗ್ರಹ ಸರ್ವ ಶ್ರೇಷ್ಠವಾದುದು. ಆದುದರಿಂದಲೇ ನಾನು ಇಲ್ಲಿಗೆ ಆಗಮಿಸಿ ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ಪ್ರಾ|  ವಿಶ್ವನಾಥ ಮಹಾದೇಶ್ವರ್ ತಿಳಿಸಿದರು.

ಇಂದಿಲ್ಲಿ ರವಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಮಠದ ಸ್ವಾಗತ ಗೋಪುರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು  ಮೇಯರ್ ಮಹಾದೇಶ್ವರ್ ಮಾತನಾಡಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಭಕ್ತವೃಂದವು ಬೃಹನ್ಮುಂಬಯಿನಲ್ಲಿ ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳಲ್ಲಿ ಹಮ್ಮಿಕೊಂಡಿದ್ದ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪ ಸಮಾರರಂಭ ಪೇಜಾವರಶ್ರೀ ಯತಿಕುಲ ಚಕ್ರವರ್ತಿ ವಿಶ್ವೇಶತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆ ವತಿಯಿಂದ ಶ್ರೀಪಾದಂಗಳವರಿಗೆ ತುಲಾಭಾರ ಸೇವೆ ನೇರವೇರಿಸಲಾಯಿತು.

ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪದಲ್ಲಿ ಗೋಪಾಲಕೃಷ್ಣ ಟ್ರಸ್ಟ್ ಮತ್ತು ಬಿಎಸ್‍ಕೆಬಿಎ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಡಾ| ಮನೋಜ್ ಹುನ್ನೂರು, ಶೇಖರ್ ಸಾಲ್ಯಾನ್, ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್,  ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಮತ್ತು ಪುರೋಹಿತರನೇಕರು, ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ಬಿ.ರಮಾನಂದ ರಾವ್ (ಬಡನಿಡಿಯೂರು),ವೇದಿಕೆಯಲ್ಲಿದ್ದರು. ಅತಿಥಿsಗಳು ಮತ್ತು ಮಹಾದಾನಿಗಳು ಭಕ್ತರು ಶ್ರೀಗಳ ರಜತ ತುಲಾಭಾರ ನೆರವೇರಿಸಿ ಶ್ರೀಪಾದರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಮುಂಬಯಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಪದಾಧಿಕಾರಿಗಳು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಡಾ| ಎ.ಎಸ್ ರಾವ್, ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಕೃಷ್ಣ ಯಾದವ ಆಚಾರ್ಯ, ಕೆ.ಕೃಷ್ಣರಾಜ್ ತಂತ್ರಿ, ಕೈರಬೆಟ್ಟು ವಿಶ್ವನಾಥ್ ಭಟ್, ರಾಮ ವಿಠಲ ಕಲ್ಲೂರಾಯ, ಭಾರ್ಗವ ಆಚಾರ್ಯ, ವಿಷ್ಣುಮೂರ್ತಿ ಆಚಾರ್ಯ ಉಡುಪಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಜತ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಎಸ್.ಕೆ ಉರ್ವಾಳ್ ಮತ್ತು ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ ಪರಿವಾರದ ಪ್ರಾಯೋಜಕತ್ವದಲ್ಲಿ  ಗುರು ಶ್ರೀಮತಿ ಮಂಜುಳಾ ಜಿ.ಭಟ್ ಬಳಗವು  ಭಜನಾ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

82ನೇ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನಿಸಿದ ಶ್ರೀ ರಜಕ ಸಂಘ ಮುಂಬಯಿ - ನಿಸ್ವಾರ್ಥದ ಸೇವೆಯೇ ಫಲಪ್ರದವಾಗುವುದು : ದಾಸು ಸಿ.ಸಾಲಿಯಾನ್
 (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.30: ನಮ್ಮ ಹಿರಿಯರ ದೂರದೃಷ್ಠಿತ್ವದ ಫಲವೇ ಈ ಸಂಸ್ಥೆಯಾಗಿದೆ. ಅವರಲ್ಲಿನ ಸಮುದಾಯದ ಒಲವು ಇಂದು ನಾವು ಫಲವಾಗಿ ಅನುಭವಿಸುತ್ತಿದ್ದೇವೆ. ನಾವು ನಮ್ಮ ಭವಿಷ್ಯತ್ತಿನ ಪೀಳಿಗೆಗೆ ಸೇವೆಯ ಮೂಲಕ ಈ ಸಂಸ್ಥೆಯನ್ನು ಕೊಡಮಾಡಿದಾಗಲೇ ನಮ್ಮ ಸೇವೆಯೂ ಫಲಪ್ರದವಾಗುವುದು. ಪ್ರೀತಿ ವಿಶ್ವಾಸದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ ಸಂಘದ ಏಳಿಗೆಗೆ ಸದಸ್ಯರಿಂದ ದೊರೆತ ಸಹಕಾರ ಪೆÇ್ರೀತ್ಸಾಹಕ್ಕೆ  ನಾನು ತುಂಬಾ  ಚಿರಋಣಿಯಾಗಿದ್ದೇನೆ. ಇಂದಿನ ದಿನಗಳಲ್ಲಿ ನಾರಿ ಶಕ್ತಿ ಹಾಗೂ ಯುವ ಶಕ್ತಯಿಂದ ಸಂಘವನ್ನು ಬಲಪಡಿಸಿ, ಅದಕ್ಕಾಗಿ  ಹೆಂಗಸರು  ಹಾಗೂ  ತರುಣ ತರುಣಿಯರು ಮುಂದೆ ಬರಬೇಕೆಂದು ನಮ್ಮ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಿ ಸಂಘವನ್ನು ಮುನ್ನಡೆÀಸಬೇಕಾಗಿದೆ. ಅದಕ್ಕಾಗಿ ಸಂಘದ ನಿಧಿ ಸಂಗ್ರಹವನ್ನು ಉನ್ನತ ಗುಣಮಟ್ಟದ ಶಿಕ್ಷಣಕ್ಕೇ ಹಣದ ಕೊರತೆಯಿದೆ. ಅದಕ್ಕಾಗಿ ನಿಧಿಸಂಗ್ರಹಕ್ಕೆ ಕೈ ಜೋಡಿಸಬೇಕೆಂದು, ಅದಕ್ಕಾಗಿ ಪ್ರತಿಯೊಂದು ವಲಯದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು ಸಹಕರಿಸಬೇಕು ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲಿಯಾನ್ ತಿಳಿಸಿದರು.

ರಜಕ ಸಂಘವು ತನ್ನ 82ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಬೆಳಿಗ್ಗೆ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ನಡೆಸಲ್ಪಟ್ಟಿದ್ದು, ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲಿಯಾನ್ ದೀಪಹಚ್ಚಿ ಮಹಾಸಭೆಗೆ ಚಾಲನೆಯನ್ನೀಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಸಭಾಕಲಾಪ ನಡೆಸಿ ಮಾತನಾಡಿ ಒಂದು ಒಳ್ಳೆಯ ರಥವು ಸಾಗಬೇಕಾದರೆ ಆದರ ಎರಡೂ ಗಾಲಿಗಳು ಸಧೃಡವಾಗಿದ್ದು, ಶೀಘ್ರಗತಿಯಲ್ಲಿ ಸಾಗುವಂತಿರಬೇಕು. ಅಂತೆಯೇ ಒಂದು ಸಂಘವು ಕೂಡ ಸಮಾಜ ಬಾಂಧವರ ಸಮಾನತೆಯ ಸಮಬಲವಿದ್ದು ಮುನ್ನಡೆದಾಗ ಸಮಗ್ರ ಸಮಾಜೋಭಿವೃದ್ಧಿ ಸಾಧ್ಯ. ರಜಕರಲ್ಲಿ ಇಂತಹ ಸಮಾನತೆ ಮತ್ತು ಮುನ್ನಡತೆಯ ಮನೋಭಾವ ಮೂಡುತ್ತಿದ್ದು, ಇದು ಸಮಾಜೋನ್ನತಿಗೆ ಪ್ರೇರಕವಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ವಿಜಯ್ ವಿ.ಕುಂದರ್, ಜೊತೆ ಕೋಶಾಧಿಕಾರಿ ಜಯ ಕೆ.ಪಡುಬಿದ್ರಿ ಮತ್ತು ಮಹಿಳಾ ವಿಭಾಗಧ್ಯಕ್ಷೆ ಪ್ರವಿಣಾ ಕುಂದರ್, ಯುವ ರಜಕ ವಿಭಾಗಧ್ಯಕ್ಷ ಮನೀಷ್ ಕುಂದರ್ ವೇದಿಕೆಯಲ್ಲಿ, ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತಾ ಸಾಲ್ಯಾನ್, ಶಶಿಧಾರ ಸಾಲ್ಯಾನ್, ಡಿ.ಆರ್ ಸಾಲ್ಯಾನ್, ಪ್ರಭಾಕರ ಸಾಲ್ಯಾನ್, ಸಂಜೀವ ಸಾಲ್ಯಾನ್, ಪ್ರಕಾಶ್ ಕೆ.ಗುಜರನ್,  ಭಾಸ್ಕರ್ ಕುಂದರ್, ಸುಂದರ್ ಎಚ್.ಮಡಿವಾಳ್, ಅಂತರಿಕ ಲೆಕ್ಕಪರಿಶೋಧಕರಾದ ಪೂವಣಿ ಎಸ್.ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಿ ಸಾಲ್ಯಾನ್, ಕಾರ್ಯದರ್ಶಿ ಬಾನುಮತು ಬುನ್ನಾನ್, ಯುವ ವಿಭಾಗದ ಉಪಾಧ್ಯಕ್ಷ ಸ್ಪರ್ಷ ಸಾಲ್ಯಾನ್, ಕಾರ್ಯದರ್ಶಿ ಸಂಜೀತ್ ಕುಂದರ್, ಮಹಿಳಾ, ಯುವ ರಜಕ ವಿಭಾಗಗಳ, ಸಂಘದ ವಿವಿಧ ಪ್ರಾದೇಶಿಕ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು,  ಸದಸ್ಯರನೇಕರು ಹಾಜರಿದ್ದರು.

ಸಭಿಕರಲ್ಲಿ ಸಂಘದ ಮಾಜಿ ಅಧ್ಯಕ್ಷ ಪಿ.ಕೃಷ್ಣ ಹಾಗೂ ಹಿರಿಯ ಸದಸ್ಯ ಶಿವರಾಂ ಕುಂದರ್, ಮಾಜಿ ಮಹಿಳಾಧ್ಯಕ್ಷೆ ಸುಮಿತ್ರಾ ಗುಜರನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂಘದ ಸೇವೆ ಪ್ರಶಂಸಿಸಿ ಆರೋಗ್ಯ ನಿಧಿ ಮತ್ತಿ ವಿಧ್ಯಾನಿಧಿ ಸಂಗ್ರಹಣ ಹೆಚ್ಚಿಸಬೇಕು ಎಂದು ಭವಿಷ್ಯದ ಸರ್ವೋನ್ನತಿಗಾಗಿ ಸಲಹೆ ಸೂಚನೆಗಳನ್ನಿತ್ತು ಶುಭಾರೈಸಿದರು.

ಸಭೆಯ ಮಧ್ಯಾಂತರದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಇದರ ಸದಸ್ಯೆ ಶ್ಯಾಮಲಾ ಎಸ್.ಕುಂದರ್, ಕೋಲಾಪುರ ಆದಾಯ ತೆರಿಗೆ ಇಲಾಖಾ ಸಹ ಅಧಿಕಾರಿ ಶಿವನಂದ ಕಲಕೇರಿ (ಐಆರ್‍ಎಸ್), ಅಂತರಾಷ್ಟ್ರೀಯ ಅತ್ಲೇಟಿಕ್ ಸತೀಶ್ ಗುಜರನ್, ಕಾಮನ್ ವೆಲ್ತ್ ಗೇಮ್ಸ್‍ನ ಕರಾಟೆ ಸ್ವರ್ಣ ಪದಕ ವಿಜೇತ ವರುಣ್ ಡಿ.ಗುಜರನ್, ನೆಲ್ಸನ್ ಮಂಡೇಲಾ ಪ್ರಶಸ್ತಿ ವಿಜೇತೆ ಭರತನಾಟ್ಯ ಕಲಾವಿದೆ ಕು| ಸಮೃದ್ಧಿ ಎಸ್.ಸಾಲಿಯಾನ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ಕು| ನಿದೀಶಾ ಹೆಚ್.ಸಾಲಿಯಾನ್, ಮಾಡೆಲಿಂಗ್ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕು| ನೇಹಾ ಪಿ.ಸಾಲಿಯಾನ್ ಮತ್ತು ಸುಮಾರು ಹತ್ತಾರು ನವ ದಂಪತಿ ಜೋಡಿಗಳಿಗೆ ಸನ್ಮಾನಿಸಿದರು ಮತ್ತು ಗತ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಾಜಬಂಧು ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ, ಪ್ರಮಾಣ ಪತ್ರ ಪ್ರದಾನಿಸಿ ಗೌರವಿಸಿ ಶುಭಾರೈಸಿದರು. ಅಂತೆಯೇ ಸಂಘದ ಮಹಾ ಪೆÇೀಷಕರು, ಹಿರಿಯ ಸದಸ್ಯರು, ಉಪಸ್ಥಿತ ವಿವಿಧ  ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿ ಅಭಿನಂದಿಸಿದರು.

ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಗೌರವ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ  ಮತ್ತು  ವಾರ್ಷಿಕ ಚಟುವಟಿಕೆಗಳ ಮಾಹಿತಿ ಸಭೆ ಮುಂದಿಟ್ಟರು. ಕೋಶಾಧಿಕಾರಿ ಸುಭಾಷ್ ಕುಂದರ್ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ವರದಿ ವರ್ಷದÀಲ್ಲಿ ಸ್ವರ್ಗಸ್ಥರಾದ ಸಂಘದ ಹಿರಿ-ಕಿರಿಯ ಸದಸ್ಯರು, ಹಿತೈಷಿರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜೊತೆ ಕಾರ್ಯದರ್ಶಿ ಕಿರಣ್ ಕುಂದರ್ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿಗೊಂಡಿತು.

ವಿಘ್ನಾಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ-ಸಾರಸ್ವತ್ ಉತ್ಸವ್ ; 13ನೇ ಮಹಾಸಭೆ - ಸಮಾಜ ಸೇವೆಯಲ್ಲಿ ತಾಳ್ಮೆ-ಧರ್ಮನಿಷ್ಠೆ ಅವಶ್ಯ   : ನಾಗೇಂದ್ರ ಕಾಮತ್
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.30: ಸೇವೆ ಅನ್ನುವುದು ಪಾವಿತ್ರ್ಯತೆವುಳ್ಳದ್ದು. ಆದುದರಿಂದ ಸೇವೆಯಲ್ಲಿ ತಾಳ್ಮೆ, ಧರ್ಮನಿಷ್ಠೆ ಇರುವುದು ಅವಶ್ಯ. ಸಂಸ್ಥೆಯ ಚಟುವಟಿಕೆಗಳನ್ನು ಮನಸಾರೆ ಮೆಚ್ಚಿದ್ದೇನೆ ಹಾಗೂ ನನ್ನ ಬಾಯೊ ಕೊಂಕಣಿ ಸಿನೆಮಾಕ್ಕೆ ನಿಮ್ಮೆಲ್ಲರ ಬೆಂಬಲ ಸಿಗಬೇಕು ಎಂದು `ಬಾಯೊ’ ಕೊಂಕಣಿ ಚಿತ್ರ ನಿರ್ಮಾಪಕ ನಾಗೇಂದ್ರ ಕಾಮತ್ ನುಡಿದರು.

ವಿಘ್ನಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ ದಹಿಸರ್ ಸಂಸ್ಥೆಯು ಮಂಡಲದ ಅಧ್ಯಕ್ಷ ವಸಂತ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದಿಲ್ಲಿ ಭಾನುವಾರ ಅಪರಾಹ್ನ ದಹಿಸರ್ ಪೂರ್ವದ ಶ್ರೀ ವಿಠಲ ರುಕ್ಮಯಿ ಮಂದಿರದ ಮಧವೇಂದ್ರ ಸಭಾಗೃಹದಲ್ಲಿ 2019ನೇ ವಾರ್ಷಿಕ ಸಾರಸ್ವತ್ ಉತ್ಸವವನ್ನು ಜರುಗಿತು., ವಿಠಲ ಪ್ರಭು, ವಾಸುದೇವ ಪ್ರಭು, ವೇದಮೂರ್ತಿ ರಮೇಶ ಭಟ್ ಹಾಗೂ ಭಜನಾ ಮಂಡಳಿಯ ಸದಸ್ಯರಿಂದ ದೀಪ  ಬೆಳಗಿಸಿ ಉದ್ಟಾಟಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ನಾಗೇಂದ್ರ ಕಾಮತ್ ಮಾತನಾಡಿದರು.

ಗೌರವ ಅತಿಥಿsಯಾಗಿ ಮೋಹನ್‍ದಾಸ್ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿüಗಳು ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಇವರನ್ನು ಸನ್ಮಾನಿಸಿದರು ಮತ್ತು ಸಮಾಜ ಬಂಧು ಮಕ್ಕಳಿಗೆ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಅಂತೆಯೇ ಸಂಘದ ಮಹಾ ಪೆÇೀಷಕರು, ಉಪಸ್ಥಿತ ವಿವಿಧ  ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು.

ತಾನು ಸುಮಾರು ವರ್ಷದಿಂದ ಈ ಸಂಸ್ಥೆಯ ಪ್ರದಾನ ಸೇವಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನಿಮ್ಮೆಲ್ಲಾ ಸಹಕಾರ, ಮಾರ್ಗದರ್ಶನ ಸಮಯಚಿತವಾಗಿ ಸಿಕ್ಕಿದೆ. ಮುಂದೆ ಕೂಡ ಸಂಸ್ಥೆಯ ಏಳಿಗೆಗಾಗಿ ಕಾರ್ಯಕಾರಿ ಸಮಿತಿಗೆ ನಿಮ್ಮ ಬೆಂಬಲ ಕೊಡಬೇಕಾಗಿ ವಿನಂತಿ. ಸಂಸ್ಥೆಗೆ ಸ್ವಂತ ಕಟ್ಟಡ ಆಗುವ ಹಾಗೆ ನಾವೆಲ್ಲರೂ ದುಡಿಯಬೇಕು ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ವಸಂತ ನಾಯಕ್ ತಿಳಿಸಿದರು.

ಮೋಹನ್‍ದಾಸ್ ಮಲ್ಯ ಮಾತನಾಡಿ ವಿಘ್ನಹರ್ಥ ಮಂಡಳಿಯು ಸರ್ವೊತೋಮುಖ ಏಳಿಗೆಗಾಗಿ ತುಂಬ ಶ್ರಮ ವಹಿಸುತ್ತಿದೆ. ಆದರದೆ ಸ್ವಂತ ವಾಸ್ತು ಅದಷ್ಟು ಬೇಗ ಆಗಲೆಂದು ತನು ಮನ ಧನದಿಂದ ಹಾರೈಸುತ್ತೇನೆ ಎಂದು ನುಡಿದರು.

ಸುಜಾತಾ, ಜಯಲಕ್ಷ್ಮೀ ಮತ್ತು ವಾರಿಜ ಅವರು ಪ್ರಾರ್ಥನೆಯನ್ನಾಡಿದರು. ಕಾರ್ಯದರ್ಶಿ ಎನ್.ಶ್ರೀನಿವಾಸ ನಾಯಕ್ ಸ್ವಾಗತಿಸಿದರು. ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್ ವಂದಿಸಿದರು.

ಪೂರ್ವಾಹ್ನ ವಸಂತ ನಾಯಕ್ ಅಧ್ಯಕ್ಷತೆಯಲ್ಲಿ ಸೇವಾ ಮಂಡಲದ 13ನೇ ಮಹಾಸಭೆ ನಡೆಸಲಾಗಿದ್ದು, ವೇದಿಕೆಯಲ್ಲಿ ಮಂಡಲದ ಗೌರವಾಧ್ಯಕ್ಷ ಗೋಪಾಲ ಆರ್.ನವಳ್ಕರ್, ಉಪಾಧ್ಯಕ್ಷ ರಮೇಶ್ ಎಸ್.ನಾಯಕ್, ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್,  ಜೊತೆ ಕಾರ್ಯದರ್ಶಿ ಗೋಪಾಲ ಎ.ನಾಯಕ್, ಜೊತೆ ಕೋಶಾಧಿಕಾರಿ ಆನಂದ್ ಕೆ.ಪ್ರಭು ವೇದಿಕೆಯಲ್ಲಿ ಆಸೀನರಾಗಿದ್ದರು.

ವರದಿ ವರ್ಷದÀಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿ, ಕಲಾವಿದರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಎನ್.ಶ್ರೀನಿವಾಸ್ ನಾಯಕ್  ಗತ ವಾರ್ಷಿಕ ಮಹಾಸಭೆ ವರದಿ  ಮತ್ತು  ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್ ಗತ ಸಾಲಿನ ಲೆಕ್ಕಪತ್ರ ವಿವರ ಮಂಡಿಸಿದರು.

ಮಕ್ಕಳಿಗೆ ಛದ್ಮವೇಶ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ಮನೋರಂಜನೆ, ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ವಸಂತ ಆರ್.ನಾಯಕ್ ವಿರಚಿತ `ಬಾಬ’ ಕೊಂಕಣಿ ನಾಟಕ ಪ್ರದರ್ಶಿಸಲ್ಪಟ್ಟಿತು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಸಮಾಪನ ಗೊಂಡಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi