Brief University college news with picturews
Kemmannu News Network, 15-10-2019 17:52:02

ದೇಶವನ್ನು ಒಗ್ಗೂಡಿಸಬಲ್ಲ ಒಂದೇ ಭಾಷೆ ಹಿಂದಿ: ಮನೀಶ್ ಕುಮಾರ್
ಮಂಗಳೂರು: ಬಹುಭಾ಼ಷಾ ಸಂಸ್ಕೃತಿಯಿರುವ ಭಾರತದಲ್ಲಿ ಹಿಂದಿ ಭಾಷೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಮ್ಯಾನೇಜರ್ ಮನೀಶ್ ಕುಮಾರ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳು ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ ಹಿಂದಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹಿಂದಿ ಭಾಷಾ ಜ್ಞಾನದಿಂದ ಸಿಗಬಹುದಾದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಕನ್ನಡದ ಪ್ರಸಿದ್ಧ ಕೃತಿಗಳನ್ನು ಹಿಂದಿಗೆ ಭಾಷಾಂತರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ ಹಿಂದಿ ಭಾಷೆಗೆ ಸಂಬಂಧಿಸಿದ ಚಟುವಟಿಕೆಗಳು ಭಾಷೆಯ ಬೆಳವಣಿಗೆಗೆ ಸಹಾಯಕ ಎಂದು ಅಭಿಪ್ರಾಯಪಟ್ಟರು. ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್ ಸ್ವಾಗತಿಸಿದರೆ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎನ್. ರಾವ್ ವರದಿ ವಾಚಿಸಿದರು. ಕಾಲೇಜಿನ ಗ್ರಂಥಪಾಲಕಿ ವನಜಾ ಮೊದಲಾದವರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ
ಹಿಂದಿ ಸಪ್ತಾಹದ ಅಂಗವಾಗಿ ‘ಗಾಂಧಿ ಮತ್ತು ಹಿಂದಿ’ ಎಂಬ ವಿಷಯದ ಕುರಿತು ಅಂತರ್ಕಾಲೇಜು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೆಸೆಂಟ್ ಮಹಿಳಾ ಕಾಲೇಜಿನ ಕೆ.ಸುಷ್ಮಾ ರೈ ಮೊದಲ ಬಹುಮಾನ ಗಳಿಸಿದರು. ವಿದ್ಯಾರ್ಥಿಗಳಿಗೆ ಕ್ರಿಯಾಶೀಲ ಬರವಣಿಗೆ, ಪಿಕ್ ಆಂಡ್ ಸ್ಪೀಚ್, ಸೆಮಿನಾರ್, ದೇಶಭಕ್ತಿಗೀತೆ ಸ್ಪರ್ಧೆಗಳನ್ನು ಆಯೋಜಿಸಿದ್ದರೆ, ಶಿಕ್ಷಕರಿಗೂ ವಾರ್ತಾ ವಾಚನ, ಹಿಂದಿ ರಸಪ್ರಶ್ನೆ ಸ್ಪರ್ಧೆ ನಡೆಸಲಾಗಿತ್ತು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ನಗದು ಬಹುಮಾನ
ಹಿಂದಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಳೆದ ಬಾರಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡ ನಗದು ಬಹುಮಾನ ನೀಡಿ ಪುರಸ್ಕರಿಸಿದೆ. ಮಂಗಳೂರು ವಿಭಾಗದ ಮಹಾ ಪ್ರಬಂಧಕ ನಾಗರಾಜ್ ಮತ್ತು ಉಪ ಮಹಾಪ್ರಬಂಧಕ ರಾಮಚಂದರ್, ಅನುಶ್ರೀ (ಪ್ರಥಮ) ಅವರಿಗೆ ರೂ.11,500 ಮತ್ತು ನೀರಜ ಕಾಮತ್ (ದ್ವಿತೀಯ) ಅವರಿಗೆ ರೂ.7500 ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿತು.


‘ಉಪದೇಶ ನೀಡದೆ ಸಾಧಿಸಿ ತೋರಿಸಿದ ಕಾರಂತರು’
ವಿವಿ ಕಾಲೇಜಿನ ‘ಕಾರಂತ ನಮನ’ ಕಾರ್ಯಕ್ರಮದಲ್ಲಿ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಅಭಿಮತ
ಮಂಗಳೂರು: ಸುಮಾರು 17,000 ಪುಟಗಳಷ್ಟು ಬರಹ, 400 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದ ಶಿವರಾಮ ಕಾರಂತರು ವಿಶ್ವವಿದ್ಯಾನಿಲಯವೊಂದು ಮಾಡಬಹುದಾದ ಕೆಲಸವನ್ನು ಮಾಡಿದ್ದಾರೆ. ಅವರ ಸಾವಿರಾರು ಪತ್ರಗಳು ಒಂದು ಅಮೂಲ್ಯ ಸಂಗ್ರಹ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಅಭಿಪ್ರಾಯಪಟ್ಟರು.
ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ, ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿದ್ದ ಶಿವರಾಮ ಕಾರಂತರ ಸ್ಮರಣಾರ್ಥ ಶನಿವಾರ ಏರ್ಪಡಿಸಲಾಗಿದ್ದ ‘ಕಾರಂತ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅನಿಸಿದ್ದನ್ನು ತಾವೇ ಮಾಡಿ ತೋರಿಸುತ್ತಿದ್ದ ಕಾರಂತರು ಉಪದೇಶ ನೀಡುತ್ತಿರಲಿಲ್ಲ. ಮಕ್ಕಳ ಸಾಹಿತಿಯಾದರು, ನಾಟಕ- ಯಕ್ಷಗಾನಗಳನ್ನು ಬರೆದು ಅಭಿನಯಿಸಿದರು, ಮುದ್ರಣಾಲಯ ನಡೆಸಿದರು, ಬಡಗಿಯೂ ಆದರು. ಮಕ್ಕಳಿಗಾಗಿ ಶಾಲೆ ನಡೆಸಿದರು, ಗಾಂಧೀ ಚಿಂತನೆಗಳನ್ನು ಹರಡಲು ಊರೂರು ಸುತ್ತಿದರು. “ಅವರನ್ನು ಅನುಸರಿಸಲು ಸಾಧ್ಯವಾದಷ್ಟು ಪ್ರಯತ್ನಿಸೋಣ. ಸೂರ್ಯನಿಂದಾಗಿ ನಮ್ಮಲ್ಲಿ ಒಂದು ಕಿರಣವಾದರೂ ಮೂಡಲಿ”, ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಉದಯ ಕುಮಾರ ಎಂ.ಎ, ಒಂದರ್ಥದಲ್ಲಿ ಕಾರಂತರು ಒಬ್ಬ ಅಪ್ಪಟ ವಿಜ್ಞಾನಿ. ಅವರ ಅನ್ವೇಷಿಸುವ ಪ್ರವೃತ್ತಿಯಿಂದಲೇ ದೊಡ್ಡ ಸಾಧನೆ ಮಾಡಿದರು. ಎಲ್ಲರನ್ನೂ ಪ್ರೀತಿಸಿದರು. ಮಕ್ಕಳ ಪ್ರಶ್ನೆಗೂ ಗಂಭೀರವಾಗಿ ಉತ್ತರ ನೀಡುತ್ತಿದ್ದರು. ನಾವು, ಅದರಲ್ಲೂ ಭಾಷಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕಾರಂತರನ್ನು ಪರಿಚಯಿಸಬೇಕಿದೆ ಎಂದರು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎನ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಿಕೆ ಅಶ್ವಿನಿ ನಾಯಕ್ ಧನ್ಯವಾದ ಸಮರ್ಪಿಸಿದರು. ಕು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ನಲ್ಲಿ….
ಲಾಡು ಮತ್ತು ತಂತಿ
ಕಾರಂತರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರಿಗೆ ಕೊಟ್ಟ ಲಾಡಿನಲ್ಲಿ ಒಂದು ತಂತಿಯ ಚೂರು ಸಿಕ್ಕಿತಂತೆ. ಆಗಿ ಹೋದ ಅಪಚಾರದ ಬಗ್ಗೆ ಕಾರ್ಯಕ್ರಮದ ಆಯೋಜಕರಿಗೆ ಅಪಾರ ಬೇಸರವಿತ್ತು. ಕೆಲದಿನಗಳ ಬಳಿಕ ಕಾರಂತರಿಂದ ಬಂದ ಒಂದು ಪತ್ರದಲ್ಲಿ, ‘ಲಡ್ಡುವಿನಲ್ಲಿ ಸಿಕ್ಕಿದ ತಂತಿ ಆಯೋಜಕರಲ್ಲ ಅಪಚಾರವಲ್ಲ, ವೈದ್ಯರು ನನ್ನ ಹಲ್ಲಿಗೆ ಹಾಕಿದ ತಂತಿಯೇ ಬಿದ್ದುಹೋಗಿತ್ತು’ ಎಂದು ಬರೆದಿದ್ದರಂತೆ! ತನಗಾಗಿ ಮಾಡಿದ ಪ್ರತಿ ಪೈಸೆ ಹಿಂದಿರುಗಿಸುತ್ತಿದ್ದ ರೀತಿ, ಪತ್ರದಲ್ಲಿ ನೀಡುತ್ತಿದ್ದ ಒಂದು ಶಬ್ದದ ಒಕ್ಕಣೆಗಳು, ಅದ್ಭುತ ಸಮಯಪಾಲನೆ, ಹೀಗೆ ಕಾರಂತರ ವಿಶಿಷ್ಠ ಬದುಕು ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Obituary: Prescilla Quadros (83 Years), Kambla thota, Kemmannu

289th Wilfynight at Milagres Church Ground, Kallianpur on 21st. Jan

Vespers 2026 | Mount Rosary Church, Santhekatte | Udupi

Annual Church Feast 2026 | Mount Rosary Church, Santhekatte | Udupi

Final Journey of Cecilia Menezes( 88 Years ) | LIVE From Kemmannu | Udupi

New year Mass | St. Theresa Church, Kemmannu | Udupi

Christman Mass | St. Theresa Church, Kemmannu | Udupi

Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi

Annual Day Calebration 2025 | Carmel English School, Kemmannu

Final Journey Of Francis Paul Quadros (59 Years) | LIVE From Udupi

Final Journey of Sudeep Sebastian Gordon Martis (55 years) | LIVE from Kalmady

Final Journey of Tyron Pereira (57 years) | LIVE from Kalmady, Udupi

Final Journey of Lawrence M Lewis (82 years) | LIVE from Milagres, Kallianpur, Udupi

Final Journey of Salvadore Fernandes (76 Years) | LIVE from Shirva | Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Focus Studio, Near Hotel Kidiyoor, Udupi

Earth Angels - Kemmannu Since 2023

Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
Annual Day Celebrated at Carmel English School, Kemmannu
Save Swarna River By Dr Gerald Pinto, Kallianpur
Udupi: Cooking without fire competition at Kemmannu Church [Video]
A ‘Wisdom Home of Memories’, a heritage Museum in Suratkal, Mangaluru
Celebrating 50 Years of Devotion: Iconic Konkani Hymn Moriye Krista Maye Marks Golden Jubilee
Arrest of Nuns’ at Chhattisgarh - Massive Protest Rally in Udupi Echoes a Unified Call for Justice and Harmony [Video]
MCC Bank Inaugurates Its 20th Branch in Byndoor
Mog Ani Balidan’ – A Touching Konkani Novel Released at Anugraha, Udupi [Photographs updated]
Milagres Cathedral celebrates Sacerdotal Ruby Jubilee of Mngr Ferdinand Gonsalves and Parish Community Day with grandeur
TODAY -

Write Comment
E-Mail To a Friend
Facebook
Twitter
Print 




