Brief Mumbai, Mangalore News with pictures


Rons Bantwal
Kemmannu News Network, 15-10-2019 18:21:18


Write Comment     |     E-Mail To a Friend     |     Facebook     |     Twitter     |     Print


ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಗೋಕುಲ ಸಾಯನ್) ಆಶ್ರಯದಲ್ಲಿ  ದೀಪಾರಾಧನೆ
ಮುಂಬಯಿ, ಅ.10: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್  ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಪರ್ವಕಾಲದ ಸೋಮವಾರ ಮಹಾನವಮಿ ದಿನ  ದೀಪಾರಾಧನೆಯನ್ನು ಆಶ್ರಯದ ಎ.ಕೆ. ಹೆಬ್ಬಾರ್ ಸಭಾಗೃಹದಲ್ಲಿ  ಸಂಭ್ರಮ-ಶ್ರದ್ಧಾಭಕ್ತಿಯಿಂದ ಆಚರಿಸಿತು.

ಪ್ರಧಾನ ಪುರೋಹಿತ, ವೇದಮೂರ್ತಿ ಶ್ರೀ ಕೃಷ್ಣರಾಜ ಉಪಾಧ್ಯಾಯ ತನ್ನ ಪೌರೋಹಿತ್ಯದಲ್ಲಿ ಸಹ ಸಹ ಪುರೋಹಿತರಾದ  ಶ್ರೀಶ  ಉಡುಪ, ರಾಘವೇಂದ್ರ ಭಟ್,  ಶ್ರೀನಿವಾಸ್ ಕುಂಜಾರು, ನಾಗರಾಜ್ ಐತಾಳ್, ಮತ್ತು ಬಾಲಕೃಷ್ಣ ಉಡುಪ ಅವರ ಸಹಕಾರದೊಂದಿಗೆ ಬೃಹತ್ ಮಂಡಲ ರಚಿಸಿ, ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಸಪ್ತಶತಿ ಪಾರಾಯಣ,  ಭುವನೇಶ್ವರಿ ಪೂಜೆ ಇತ್ಯಾದಿಗಳೊಂದಿಗೆ ವಿಧಿವತ್ತಾಗಿ ನೆರವೇರಿಸಿದರು.  ಅಶೋಕ್ ಮೇಲ್ಮನೆ ಮತ್ತು  ಚಿತ್ರಾ ಮೇಲ್ಮನೆ ದಂಪತಿ  ಪೂಜಾಧಿಗಳ ಯಜಮಾನ ಸ್ಥಾ£  ವಹಿಸಿದ್ದರು. 

ಶ್ರೀದೇವಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ಶ್ರೀ ಬದ್ರಿನಾರಾಯಣ ಪಿಲಿಂಜೆ ಪರಿವಾರದ ಪ್ರಾಯೋಜಕತ್ವದಲ್ಲಿ  ಕನ್ನಿಕೆ ಮತ್ತು ಸುವಾಸಿನಿ ಪೂಜೆ ನೆರವೇರಿತು. ಕುಮಾರಿ ತೃಷಾ ಭಟ್  ಹಾಗೂ  ಮಹಾಕಾಳಿ, ಮಹಾಲಕ್ಷಿ ್ಮೀ, ಮಹಾ ಸರಸ್ವತಿಯ ಸ್ತಾನವನ್ನು ವಿಜಯಾ ರಾವ್, ಉಷಾ ಭಟ್ ಮತ್ತು ನಾಗರತ್ನ ಹೊಳ್ಳ ಅವರು ಕನ್ನಿಕಾ ಸ್ಥಾನ ಅಲಂಕರಿಸಿದ್ದರು. 

ನವರಾತ್ರಿಯ ಪರ್ವ ಕಾಲದಲ್ಲಿ ಮಾತೃ ಸ್ವರೂಪಿಣಿ ಶ್ರೀ ದುರ್ಗಾ ದೇವಿಯನ್ನು ನಾವೆಲ್ಲಾ ಭಕ್ತಿ ಶ್ರದ್ಧಾ ಪೂರ್ವಕವಾಗಿ ಆರಾಧಿಸಿದ್ದೇವೆ. ಶ್ರೀದೇವಿಯು  ಭಕ್ತಾದಿಗಳ  ಮನೋಭಿಲಾಷೆಗಳನ್ನು ಈಡೇರಿಸಿ, ಸಂಘವು ಸಂಕಲ್ಪಿಸಿಕೊಂಡ ಗೋಕುಲ ಪುನರ್ ನಿರ್ಮಾಣ ಕಾರ್ಯವು ಶೀಘ್ರವಾಗಿ ಪೂರ್ಣಗೊಂಡು  ಭವ್ಯವಾದ ಮಂದಿರದಲ್ಲಿ  ಶ್ರೀ ಕೃಷ್ಣನ ಪುನರ್ ಪ್ರತಿಷ್ಠೆಯಾಗುವಂತೆ  ಅನುಗ್ರಹಿಸಲಿ   ಎಂದು ವೇ| ಮೂ| ಕೃಷ್ಣರಾಜರು
ಪ್ರಾಥಿರ್üಸಿದರು. 

ಇದೇ  ಸಂದರ್ಭದಲ್ಲಿ, ಸರಸ್ವತಿ ಪೂಜೆಯ ಅಂಗವಾಗಿ,   ಶಾರದಾ ಮಾತೆಯ ಭಾವಚಿತ್ರ ಹಾಗೂ  ಧಾರ್ಮಿಕ ಗ್ರಂಥಗಳನ್ನು ಇರಿಸಿ,  ಗೋಕುಲ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಹರಿಕೃಷ್ಣ ಭಜನಾ  ಮಂಡಳಿಯಿಂದ ದೇವಿ ಭಜನೆ,  ಸ್ತೋತ್ರ  ಪಠನೆ ಇತ್ಯಾದಿ ನೆರವೇರಿತು. ಬಾಲಕೃಷ್ಣ ಉಡುಪ ಇವರು ಶ್ರೀ ಶಾರದಾ ದೇವಿಗೆ ಮಂಗಳಾರತಿ  ಗೈದು, ತೀರ್ಥ ಪ್ರಸಾದ ವಿತರಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ  ಹಾಗೂ  ಬಿಎಸ್‍ಕೆಬಿ ಅಸೋಸಿಯೇಶನ್‍ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದು,  ಸೇವಾಥಿರ್üಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ನೀಡಿ ಅನುಗ್ರಹಿಸಲಾಗಿದ್ದು,  ಅನ್ನ  ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ಇವರು ನಮ್ಮವರು.....!  ಬರಹ: ರೋನ್ಸ್ ಬಂಟ್ವಾಳ್

ಮಹಾರಾಷ್ಟ್ರ ರಾಜ್ಯ ವಿಧಾನ ಸಭಾ ಚುನಾವಣೆ-2019
ಶಾಸಕ ಸ್ಥಾನ ಗಿಟ್ಟಿಸಿಕೊಳ್ಳಲು ಈ ಬಾರಿ ಇಬ್ಬರೇ ತುಳು-ಕನ್ನಡಿಗ ಸ್ಪರ್ಧಿಗಳು
ಮುಂಬಯಿ, ಅ.15: ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯ ಇತಿಹಾಸದಲ್ಲಿ ತುಳು-ಕನ್ನಡಿಗರು ಮೂಡಿಸಿದ ಹೆಜ್ಜೆಗುರುತುಗಳು ಮಹಾನಗರದ ಬೆಳವಣಿಗೆಯಲ್ಲಿ ನಿರ್ಣಾಯಕವಾದುದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಥಿರ್üಕ, ರಾಜಕೀಯ, ಬಾಲಿವುಡ್ ಇನ್ನಿತರ ರಂಗಗಳಲ್ಲೂ ಕನ್ನಡಿಗರು ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದ ನೆಲವನ್ನು ಕರ್ಮಭೂಮಿ ಅನ್ನಾಗಿಸಿದರೂ ಇಲ್ಲಿನ ಸಂಸ್ಕೃತಿ ಪರಂಪರೆಗಳಿಗೆ ಸ್ಪಂದಿಸಿ ಸೌಹಾರ್ದತೆಯ ಬದುಕನ್ನು ರೂಪಿಸುತ್ತಾ ತಮ್ಮೂರ, ತಾಯ್ನಾಡ ಸಂಸ್ಕೃತಿ, ದೈವದೇವರುಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ಸಾಮರಸ್ಯದ ಬಾಳಿಗೆ ತುಳು-ಕನ್ನಡಿಗರು ಪ್ರೇರಕರೂ ಹೆಸರುವಾಸಿಯಾಗಿದ್ದಾರೆ. ಈ ಎಲ್ಲಾ ಶ್ರೇಷ್ಠ ಪರಂಪರೆಯ ಮಧ್ಯೆ ಅನೇಕ ರಾಜಕೀಯ ನಾಯಕರು ಪಕ್ಷ ಭೇದವಿಲ್ಲದೆ ತುಳು-ಕನ್ನಡ ಭಾಷೆ, ಸಂಸ್ಕೃತಿ ಜೊತೆಗೆ ಕರುನಾಡ ನೆಲದ ಕೀರ್ತಿ ಪತಾಕೆಯನ್ನು ಇಲ್ಲಿ ಹಾರಿಸಿದ್ದಾರೆ. ಆ ಪೈಕಿ ಅನೇಕÀರು ಇದೀಗಲೇ ನಗರಸೇವಕರು, ಮಹಾರಾಷ್ಟ್ರ ರಾಜ್ಯದ ವಿಧಾನ ಸಭೆಗೆ ಪ್ರತಿನಿಧಿಸಿ ಶಾಸಕರೂ, ಸಂಸದರೂ ಸಚಿವರೂ ಆಗಿ ಜನಪ್ರತಿನಿಧಿಗಳಾಗಿ ಮೆರೆದಿದ್ದಾರೆ. ಏತನ್ಮಧ್ಯೆ ಇದೀಗ ಮತ್ತೆ 2019ರ ಸಾಲಿನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ನೂತನ ಸರಕಾರದಲ್ಲಿ ಸ್ಥಾನ ಗಿಟ್ಟಿಸಿ ಕೊಳ್ಳಲು ಈ ಬಾರಿಯೂ ತುಳು ಕನ್ನಡಿಗ ಸ್ಪರ್ಧಿಗಳು ಅಖಾಡಕ್ಕಿಳಿದಿದ್ದಾರೆ. ಅದರೆ ಈ ಬಾರಿ ಬರೇ ಇಬ್ಬರೇ ತುಳು ಕನ್ನಡಿಗರು ಸ್ಪರ್ಧಿಸುತ್ತಿರುವುದು ವ್ಯಥೆಯೆಣಿಸುತ್ತಿದೆ.

ಹೊರನಾಡ ಕರ್ಮಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿ ಜನತಾ ಸೇವೆಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಈ ಕನ್ನಡಿಗ ನಾಯಕರಿಗೆ ಮಾತೃಭಾಷೆ-ಪ್ರಾದೇಶಿಕ ನೆಲೆಯ ವಿಚಾರ ಎಂದೂ ಅಡ್ಡಿಯಾಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಸ್ಪರ್ಧಿಸಲು ಮುಕ್ತ ಅವಕಾಶವಿದೆ ಎನ್ನುವುದನ್ನು ಶಾಬೀತು ಪಡಿಸಿ ರಾಷ್ಟ್ರದ ಪ್ರಜಾಪ್ರಭುತ್ವ ಹಿರಿಮೆಯನ್ನು ಎತ್ತಿಹಿಡಿದ ನಮ್ಮವರು ಮತ್ತೆ ಸ್ಪರ್ಧಾ ಕಣದಲ್ಲಿ ಕಂಗೋಳಿಸುತ್ತಿದ್ದಾರೆ. ಆ ಪೈಕಿ  ಭಿವಂಡಿ ಪೂರ್ವದ ವಿಧಾನ ಸಭಾ  ಕ್ಷೇತ್ರದಿಂದ ಸಂತೋಷ್ ಎಂ.ಶೆಟ್ಟಿ  ಮತ್ತು ಅಂಧೇರಿ ಪೂರ್ವದ ವಿಧಾನ ಸಭಾ  ಕ್ಷೇತ್ರದಿಂದ ಜಗದೀಶ್ ಕುಟ್ಟಿ ಅವಿೂನ್ ಕಣಕ್ಕಿಳಿದಿದ್ದಾರೆ.

ಸಂತೋಷ್ ಎಂ.ಶೆಟ್ಟಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಮೂಡುಬೆಳ್ಳೆ ಗ್ರಾಮದ ಹಾಡಿಮನೆ ನಿವಾಸಿ  ಮಂಜಯ್ಯ ಶೆಟ್ಟಿ ಮತ್ತು ಶಾಂತಾ ಮಂಜಯ್ಯ ಸುಪುತ್ರರಾದ ಸಂತೋಷ್ ಎಂ.ಶೆಟ್ಟಿ ಅವರು ಭಿವಂಡಿ ಸಂತೋಷ್ ಎಂದೇ ಜನಜನಿತರು. 2014ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯಥಿರ್üಯಾಗಿ ಮೊದಲ ಬಾರಿ ಭಿವಂಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ತುಳು-ಕನ್ನಡಿಗ.

ಮುಂಬಯಿ ಉಪನಗರದ ಭಿವಂಡಿ ನಿಜ್ಹಾಮಪುರ ಸಿಟಿ ಮುನ್ಸಿಪಾಲ್ ಕಾಪೆರ್Çೀರೇಶನ್ (ಭಿವಂಡಿ ನಗರಪಾಲಿಕೆ -ಬಿಎನ್‍ಸಿಎಂಸಿ)ಗೆ 1996ರಿಂದ ಸ್ವತಂತ್ರ ್ಯವಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಂತೋಷ್ 18 ವರ್ಷಗಳಿಂದ  ನಿರಂತರ ನಗರ ಸೇವಕರಾಗಿ ಶ್ರಮಿಸಿದ ಸಮಾಜ ಸೇವಕ. `ಭಿವಂಡಿ ಕಾ ಅಣ್ಣಾ’ ಎಂದೇ ಖ್ಯಾತಿಯಲ್ಲಿರುವ ಸಂತೋಷ್ ಬಳಿಕ ಪಕ್ಷೇತರ ಅಭ್ಯಥಿರ್üಯಾಗಿ, ಬಿಎನ್‍ಸಿಎಂಸಿನ ಸ್ವತಂತ್ರ ಸಮೂಹ ನಾಯಕರಾಗಿ, ವಿರೋಧ ಪಕ್ಷ ನಾಯಕರಾಗಿ, ಸ್ಥಾಯಿ ಸಮಿತಿ  ಕಾರ್ಯಾಧ್ಯಕ್ಷರಾಗಿ, ಮೂರು ಬಾರಿ ಸಾರ್ವಜನಿಕ ಕಾಮಗಾರಿ ಸಮಿತಿ ಕಾರ್ಯಾಧ್ಯಕ್ಷರಾಗಿ, ನೀರು ಸರಬರಾಜು ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ ಯುವ ರಾಜಕಾರಣಿ.

ಭಿವಂಡಿ ವಲಯ ಪೆÇೀಲಿಸ್ ಶಾಂತಿ ಸೌಹಾರ್ದ ಸಮಿತಿ ಸದಸ್ಯರಾಗಿದ್ದು, ಸ್ವಾಮಿ ಅಯ್ಯಪ್ಪ ಸೇವಾ ಸಮಿತಿ ಭಿವಂಡಿ ಇದರ ಕಾರ್ಯಾಧ್ಯಕ್ಷರಾಗಿರುವ ಸಂತೋಷ್ ಅವರು ಸ್ವಾಭಿಮಾನ್ ಸೇವಾ ಸಂಸ್ಥೆ ಭಿವಂಡಿ ಜಿಲ್ಲಾಧ್ಯಕ್ಷರಾಗಿಯೂ ದುಡಿದವರು. ಮಹಾರಾಷ್ಟ್ರ ರಾಜ್ಯದ ವಿಶೇಷ ಕಾರ್ಯಕಾರಿ ಸದಸ್ಯರಾಗಿರುವರು. ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ) ತೊರೆದು ಬಿಜೆಪಿ ಅಭ್ಯಥಿರ್üಯಾಗಿ ಭಿವಂಡಿಯಿಂದ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಮತ್ತೆ ರಾಷ್ಟ್ರೀಯ ಕಾಂಗ್ರೇಸ್ (ಐ) ಮಾತೃಪಕ್ಷಕ್ಕೆ ಸೇರಿ ಸ್ಪರ್ಧಿಸುತ್ತಿದ್ದಾರೆ. ಪತ್ನಿ ಶ್ರೀಮತಿ ಶಶಿಲತಾ ಸಂತೋಷ ಶೆಟ್ಟಿ ಅವರೂ ಭಿವಂಡಿಯ ನಗರಸೇವಕಿ ಆಗಿದ್ದು, ಈ ಬಾರಿಯಂತೂ ಸಂತೋಷ್ ಗೆಲುವು ನಿಶ್ಚಿತ ಅನ್ನುತ್ತಿದ್ದಾರೆ.

ಜಗದೀಶ್ ಕೆ. ಅವಿೂನ್
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಾರ್ಕಳ ತಾಲೂಕು ನಿಟ್ಟೆ ಅತ್ತೂರು ಶ್ರೀಮೈಲಜಾ ನಿವಾಸಿ ಕುಟ್ಟಿ ಅವಿೂನ್ ಕುಟ್ಟಿ ಅವಿೂನ್ ಮತ್ತು ಲೀಲಾ ಕೆ. ಅವಿೂನ್ ದಂಪತಿ ಸುಪುತ್ರ. ಕುಟ್ಟಿ ಅವಿೂನ್ ಅವರು ಬೋಂಬೇ ಫೆÇೀರ್ಟ್ ಫ್ರೀ ನೈಟ್ ಹೈಸ್ಕೂಲುನಲ್ಲಿ ಕಲಿತು ಮುಂಬಯಿವಾಸಿ ಆಗಿದ್ದÀವರು. ಅಂತೆಯೇ ಜಗದೀಶ್ ಕುಟ್ಟಿ ಅವಿೂನ್ ಮುಂಬಯಿ ಗೋರೆಗಾಂ ಅಲ್ಲಿನ ಮುನ್ಸಿಪಾಲಿಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಳಿಕ ಘಾಟ್ಕೋಪರ್ ಅಲ್ಲಿನ ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಕರ್ನಾಟಕ ಫ್ರೀ ನೈಟ್ ಹೈಸ್ಕೂಲುನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಅಂಧೇರಿ ಪೂರ್ವದ ಮರೋಲ್ ಇಲ್ಲಿನ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ನಗರಸೇವಕರು. `ಚಕಲಾ ಕಾ ಅಣ್ಣಾ’ ಎಂದೇ ಪ್ರಸಿದ್ಧ ಅವಿೂನ್ ಅವರು ಕಳೆದ ಏಳುವರೆ ವರ್ಷಗಳಿಂದ ಅಂಧೇರಿ ಪೂರ್ವದ ಬಿಎಂಸಿ ವಾರ್ಡ್ 76 ಮತ್ತು 82ಗಳಿಂದ ಕ್ರಮವಾಗಿ ನಗರಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಸಕತ್ವದಲ್ಲಿ ಕ್ಷಿಣಿಸುತ್ತಿರುವ ಕನ್ನಡಿಗರು:
ಮಹಾರಾಷ್ಟ್ರ ರಾಜ್ಯ ಅಸ್ತಿತ್ವದಿಂದಲೇ ಸರಕಾರದ ಆಡಳಿತ್ವದಲ್ಲಿ ತುಳುಕನ್ನಡಿಗರು ಜನಪ್ರತಿನಿಧಿಗಳಾಗಿ ಮೆರೆದಿರುವರು. ಎರಡು ದಶಕಗಳ ಇತ್ತೀಚಿಗಿನ ಕಾಲಾವಧಿಯಲ್ಲಿ ಅಂತೂ ಮಹಾರಾಷ್ಟ್ರ ರಾಜ್ಯದ ವಿಧಾನ ಸಭೆಯಲ್ಲಿ ತುಳು-ಕನ್ನಡಿಗರ ಸ್ಪರ್ಧೆಯೂ ಒಂದು ಮಹತ್ತರದ್ದು. 2009ರ ಚುನಾವಣೆಯಲ್ಲಿ ಬೊರಿವಿಲಿ ಪಶ್ಚಿಮ ಕ್ಷೇತ್ರದಿಂದ ಬಿಜೆಪಿ-ಶಿವಸೇನೆ ಪಕ್ಷಗಳ ಮೈತ್ರಿ ಕೂಟದ ಅಭ್ಯಥಿರ್üಯಾಗಿ ಗೋಪಾಲ್ ಸಿ.ಶೆಟ್ಟಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿ ಶಾಸಕರಾಗಿದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಅಭೂತಪೂರ್ವ ಜಯಭೇರಿ ಗಳಿಸಿ ಸಂಸದರಾಗಿ 2014ರ ಚುನಾವಣೆಯಲ್ಲೂ ತಮ್ಮ ಸ್ಥಾನವನ್ನುಳಿಸಿ ರಾಷ್ಟ್ರ ಮನ್ನಣೆಯ ರಾಜಕಾರಣಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ ಮಣಿಪುರ ಮೂಲತಃ ಸುರೇಶ್ ಹಿರಿಯಣ್ಣ ಶೆಟ್ಟಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಂಧೇರಿ ಪೂರ್ವದ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ (ಐ) ಪಕ್ಷದ ಅಭ್ಯಥಿರ್sಯಾಗಿ ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿದ್ದರು (2009-2014ರ ಗೆಲುವುನಲ್ಲಿ ಎರಡು ಬಾರಿ ಸಚಿವರೂ ಆಗಿದ್ದರು) 2014ರ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತ ಗೊಂಡರು. ಉಡುಪಿ ಜಿಲ್ಲೆಯ (ಕಾಪು) ಮುದರಂಗಡಿ ಮಾಣಿಬೆಟ್ಟು ನಿವಾಸಿ ಜಗನ್ನಾಥ್ ಅಚ್ಚಣ್ಣ ಶೆಟ್ಟಿ 2004ರ ವಿಧಾನ ಸಭೆಗೆ ಮಾಟುಂಗಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದಿಂದ ಶಾಸಕರಾಗಿ ಬಳಿಕ 2009ರಲ್ಲಿ ಕ್ಷೇತ್ರ ವಿಗಂಡನೆಯಿಂದ ರೂಪಿತ ಸಯಾನ್ ಕೋಲಿವಾಡ ಕ್ಷೇತ್ರದಿಂದ ಸ್ಪರ್ಧಿಸಿ ದ್ವಿತೀಯ ಬಾರಿ ಶಾಸಕರಾಗಿದ್ದು, 2014ರಲ್ಲಿ ತೃತೀಯ ಬಾರಿ ಸ್ಪÀರ್ಧಿಸಿ ಸೋಲನ್ನನುಭವಿಸಿದ್ದರು. 2009ರ ಚುನಾವಣೆಯಲ್ಲಿ ಕಾರ್ಕಳ ನಿಟ್ಟೆ ಇಲ್ಲಿನ ಬೋಳ ಮರಿಮಾರುಗುತ್ತು ಮೂಲತಃ ಕೃಷ್ಣ ಶ್ರೀಪಾದ ಹೆಗ್ಡೆ ವಿಲೇಪಾರ್ಲೆ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾದರೆ 2014ರಲ್ಲಿ ಸ್ಪÀರ್ಧಿಸಿ ಸೋಲನ್ನನುಭವಿಸಿದ್ದರು. 2009 ಮತ್ತು 2014ರಲ್ಲಿ ದಹಿಸರ್ ಕ್ಷೇತ್ರದಿಂದ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಅಭ್ಯಥಿರ್üಯಾಗಿ ಡಾ| ಹರೀಶ್ ಭುಜಂಗ ಶೆಟ್ಟಿ ಸ್ಪÀರ್ಧಿಸಿದ್ದರು. 2014ರಲ್ಲಿ ಉಡುಪಿ ಅಲ್ಲಿನ ಮೂಡುಬೆಳ್ಳೆ ಮೂಲತಃ ಸಂತೋಷ್ ಎಂ.ಶೆಟ್ಟಿ ಮೊದಲ ಬಾರಿ ಭಿವಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವರಾದರೆ ಈ ಬಾರಿ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದಿಂದ ಕಣಕ್ಕಿಳಿದು ಗೆಲುವಿನ ಆಶಯದಲ್ಲಿದ್ದಾರೆ.

2009ರಲ್ಲಿ ಕಾಂಗ್ರೆಸ್-ಎನ್‍ಸಿಪಿ-ಆರ್‍ಪಿಐ ಮೈತ್ರಿ ಕೂಟದ ಅಭ್ಯಥಿರ್üಯಾಗಿ ಘಾಟ್ಕೋಪರ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಜಾನೆಟ್ ಲಾರೆನ್ಸ್ ಡಿಸೋಜಾ (ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವೆ ಸೆಲಿನ್ ಡಿಸಿಲ್ವಾ ಅವರ ಸುಪುತ್ರಿ), ಗೋರೆಗಾಂವ್ ಪಶ್ಚಿಮ ಕ್ಷೇತ್ರದಿಂದ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ) ಅಭ್ಯಥಿರ್üಯಾಗಿ ಶರದ್ ರಾವ್, ಮಲಾಡ್ ಪಶ್ಚಿಮ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿರ್üಯಾಗಿ ಡೋಲ್ಫಿ ಡಿಸೋಜಾ, ದಹಿಸರ್ ಪಶ್ಚಿಮ ಕ್ಷೇತ್ರದಿಂದ ಜಾತ್ಯಾತೀತ ಜನತಾದಳದ (ತೃತೀಯ ರಂಗದ) ಉಮೇದುವಾರರಾಗಿ ಎಡ್ವಿನ್ ಬ್ರಿಟ್ಟೋ, ಅಂಧೇರಿ ಪಶ್ಚಿಮ ಕ್ಷೇತ್ರದಿಂದ ಜಾಗೃತ್ ನಾಗರಿಕ್ ಮಂಚ್ ಇದರ (ಸಿಟಿಝನ್ ಕ್ಯಾಂಡಿಡೇಟ್) ಉಮೇದುವಾರ ಆಗಿ ಹ್ಯಾನ್ಸಲ್ ಡಿಸೋಜಾ ಮತ್ತು ಪುಣೆಯ ಕ್ಯಾಂಪ್ ಕ್ಷೇತ್ರದಿಂದ ಕಾಂಗ್ರೆಸ್-ಎನ್‍ಸಿಪಿ-ಆರ್‍ಪಿಐ ಪಕ್ಷಗಳ ಜಂಟಿ ಅಭ್ಯಥಿರ್üಯಾಗಿ ಸದಾನಂದ ಎಸ್.ಶೆಟ್ಟಿ, ಮೀರಾ-ಭಯಂದರ್ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿರ್üಯಾಗಿ ರವಿರಾಜ್ ರಾಥೋಡ್ ಸ್ಪರ್ಧಿಸಿದ ಕನ್ನಡಿಗರಾಗಿದ್ದರು.

ಅ.15: ಗುಜರಾತ್‍ನ ವಾಪಿಯಲ್ಲಿ ಪುಷ್ಪಕ್ಕನ ವಿಮಾನ ನಾಟಕ  ಪ್ರದರ್ಶನ
ವಾಪಿ,ತುಳುನಾಡ  ಐಸಿರಿ ಕಲಾವಿದರ ಪೆÇ್ರೀತ್ಸಹ ಹಾಗೂ ಹೊರನಾಡಿನಲ್ಲೂ ತುಳುನಾಡ  ಸಂಸ್ಕೃತಿಯನ್ನು ಬೆಳೆಸಿ  ಉಳಿಸುವ  ಉದ್ದೇಶದಿಂದ  ಹುಟ್ಟಿಕೊಂಡ ಸಂಸ್ಥೆ, ಕನ್ನಡ-ತುಳು  ಭಾಷೆ  ಉಳಿವುವಿನ ಜೊತೆಗೆ ನಮ್ಮವರಿಗೆ  ಭಾಷಾ ಪ್ರೇರಿತ ಮನೋರಂಜನೆ ಮತ್ತು ನಮ್ಮವರನ್ನು ಒಗ್ಗೂಡಿಸುವÀ ಕಾರ್ಯ ಐಸಿರಿ ಸಂಸ್ಥೆ  ಮಾಡುತ್ತಿದೆ.

ಆ ನಿಮಿತ್ತ ಇದೇ ಮಂಗಳವಾರ (ಅ.15) ಸಂಜೆ ವಾಪಿ ಚಾರ್‍ರಸ್ತಾ ಇಲ್ಲಿನ ಜಿಐಡಿಸಿ ಸನಿಹದ ವಿಐಎ ಸಭಾಗೃಹದಲ್ಲಿ ಸಂಸ್ಕೃತಿಕ  ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ತೆಳಿಕೆದಬೊಳ್ಳಿ ಲ| ದೇವದಾಸ್ ಕಾಪಿಕಾಡ್  ರಚನೆ, ನಿರ್ದೇಶನದ, ಪುಷ್ಪಕ್ಕನ ವಿಮಾನ  ನಾಟಕ  ಪ್ರದರ್ಶನ  ಆಯೋಜಿಸಲಾಗಿದೆ. ಈ  ಕಾರ್ಯಕ್ರಮಕ್ಕೆ ಪಂಚ ಗ್ರಾಮಗಳಾದ ಸೂರತ್, ವಲ್ಸಡ್, ಉಮ್ಮರ್ಗಾಂ, ಸಿಲ್ವಾಸ, ದಮನ್ ಪರಿಸರದ  ಉದ್ಯಮಿಗಳು, ಸಮಾಜ  ಸೇವಕರು,  ಸಂಘಟಕÀರು  ಈ  ಕಾರ್ಯಕ್ರಮದಲ್ಲಿ ಭಾಗವಾಯಿಸುವರೇ ಕನ್ನಡ, ತುಳು  ಅಭಿಮಾನಿಗಳು, ಬಂಧುಗಳು ಹೆಚ್ಚಿನ  ಸಂಖ್ಯೆಯಲ್ಲಿ  ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ  ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಯೋಜನಾ ಕಾರ್ಯಾಧ್ಯಕ್ಷ ಮೆಲ್‍ಕಾಂ ಪಿರೇರಾ, ಕಾರ್ಯದರ್ಶಿ  ಉದಯ ಬಿ.ಶೆಟ್ಟಿ ಹಾಗೂ ಭಾಸ್ಕರ್ ಸರಪಾಡಿ (7353136679) ಈ ಮೂಲಕ ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ. 

 

ಯಕ್ಷಗಾನ ಶೃತಿಗೆ ಬಂತು "ಯಕ್ಷನಾದ" ಮೊಬೈಲ್ ಅಪ್ಲಿಕೇಶನ್
ಹೌದು ! ಇಂದಿನ ಮೊಬೈಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲಿ ದೊರೆಯುತ್ತಿರುವಾಗ ಯಕ್ಷಲೋಕದ ಹಿಮ್ಮೇಳದ ಶೃತಿಗೆ ಮೊಬೈಲ್ ಅಪ್ಲಿಕೇಶನ್  ಇತ್ತೀಚಿಗೆ ಬಿಡುಗಡೆಯಾಗಿದೆ. ಹಿಂದೆ ಸಾಂಪ್ರದಾಯಿಕ ಹಾರ್ಮೋನಿಯಂ ಪೆಟ್ಟಿಗೆಯಿಂದ ಶ್ರುತಿಯನ್ನು ಕೈಯಲ್ಲೇ ಬೆಳಗ್ಗಿನವರೆಗೆ ನುಡಿಸಬೇಕಿತ್ತು. ಕಾಲಕ್ರಮೇಣ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಯನ್ನು ಉಪಯೋಗಿಸುತ್ತಿದ್ದು  ಈಗ ಬಹುತೇಕ ಭಾಗವತರು ಇದನ್ನು ಬಳಸುತ್ತಿದ್ದಾರೆ. ಈಗ ಯಾವುದೇ ಖರ್ಚಿಲ್ಲದೆ ಇದೇ ಶ್ರುತಿಯನ್ನು ಮೊಬೈಲ್ನಲ್ಲೆ "ಯಕ್ಷನಾದ" ಎಂಬ ಅಪ್ಲಿಕೇಶನ್  ಮೂಲಕ ನುಡಿಸಬಹುದು.
        ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದ ಯಕ್ಷಪ್ರೇಮಿಗಳು  ಈ ಅಪ್ಲಿಕೇಶನ್ ವೃದ್ಧಿಪಡಿಸಿದ್ದು ಪ್ಲೇ  ಸ್ಟೋರ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದು ಭಾಗವತರಿಗೆ ಚೌಕಿಪೂಜೆಯ ಸಂಧರ್ಭದಲ್ಲಿ  ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯವಿಲ್ಲದೆ ಹಾಡಲು ಅನುವುಮಾಡಿಕೊಡುವುದಲ್ಲದೆ ಸ್ಪೀಕರಿಗೆ ಕನ್ನೆಕ್ಟ್ ಮಾಡಿದರೆ ರಂಗಸ್ಥಳದಲ್ಲೂ ಶ್ರುತಿಪೆಟ್ಟಿಗೆಯ ರೀತಿಯಲ್ಲಿ ಉಪಯೋಗಿಸಬಹುದು.
        ಈ ಅಪ್ಲಿಕೇಶನ್ ನಲ್ಲಿರುವ ಶ್ರುತಿಗಳು ಉಭಯ ತಿಟ್ಟುಗಳಿಗೂ ಅನ್ವಯಿಸುವುದಲ್ಲದೆ ಶಾಸ್ತ್ರೀಯ ಸಂಗೀತಕ್ಕೂ ಬಳಸಬಹುದಾಗಿದೆ. ಆಂಡ್ರಾಯ್ಡ್ ನ ಎಲ್ಲಾ ವರ್ಷನ್ಗಳನ್ನು ಈ ಅಪ್ಲಿಕೇಶನ್ ಸಪೋರ್ಟ್ ಮಾಡಲಿದ್ದು ಕಾಲಕಾಲಕ್ಕೆ ಆಪ್ಡೇಟ್ಸ್ಗಳು ಬರಲಿವೆ. "ಯಕ್ಷನಾದ" ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದ್ದು ಪ್ಲೇ ಸ್ಟೋರಿನಿಂದ "ಯಕ್ಷನಾದ" ಎಂದು ಸರ್ಚ್ ಮಾಡಿ ಅಥವಾ "hಣಣಠಿs://ಠಿಟಚಿಥಿ.googಟe.ಛಿom/sಣoಡಿe/ಚಿಠಿಠಿs/ಜeಣಚಿiಟs?iಜ=ಛಿom.ಟovoಛಿಣeಛಿh.ಥಿಚಿಞshಚಿಟಿಚಿಚಿಜಚಿ" ಲಿಂಕ್ ಯಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಯಕ್ಷಗಾನಾಸಕ್ತರು ಇದರ ಸದುಪಯೋಗ ಪಡೆದುಕೊಂಡು ಅಮೂಲ್ಯ ಸಲಹೆಗಳನ್ನು ಪ್ಲೇ ಸ್ಟೋರಿನಲ್ಲಿ ಹಂಚಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




UNDO | A Konkani Short Film | ICYM Kallianpur Dean
View More

Final Journey of Dulcine Cecilia Mathias (89 years) | LIVE from Shirva | UdupiFinal Journey of Dulcine Cecilia Mathias (89 years) | LIVE from Shirva | Udupi
Titular Feast of St. Theresa Church, Kemmannu, UdupiTitular Feast of St. Theresa Church, Kemmannu, Udupi
Final Journey of Dolphy Louis Suares (61 years) | LIVE from Katapady | UdupiFinal Journey of Dolphy Louis Suares (61 years) | LIVE from Katapady | Udupi
Final Journey Of Mrs. Lenny Machado (74 Years) | LIVE From Kemmannu | UdupiFinal Journey Of Mrs. Lenny Machado (74 Years) | LIVE From Kemmannu | Udupi
Mount Rosary Church - Rozaricho Gaanch Sep, 2025 IssueMount Rosary Church - Rozaricho Gaanch Sep, 2025 Issue
Final Journey Of Mrs. Lilly D Souza (68Years) | LIVE From Mount Rosary, Santhekatte, UdupiFinal Journey Of Mrs. Lilly D Souza (68Years) | LIVE From Mount Rosary, Santhekatte, Udupi
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi