Brief Mumbai, Mangalore News with pictures


Rons Bantwal
Kemmannu News Network, 12-01-2020 09:49:59


Write Comment     |     E-Mail To a Friend     |     Facebook     |     Twitter     |     Print


ಜ.14: ಬಿಎಸ್‍ಕೆಬಿಎ (ಗೋಕುಲ) ದಿಂದ ಅಂಧೇರಿ ಪಶ್ಚಿಮದ ಅದಮಾರು ಮಠದಲ್ಲಿ ವಾರ್ಷಿಕ ಮಕರ ಸಂಕ್ರಾಂತಿ-2020 ಸಂಭ್ರಮ
ಮುಂಬಯಿ, ಜ.07: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬರುವ (ಜ.14) ಮಂಗಳವಾರ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ 2020ನೇ ಸಾಲಿನ ಮಕರ ಸಂಕ್ರಾಂತಿ ಆಚರಿಸಲಿದೆ.

ಆ ನಿಮಿತ್ತ ಸಂಜೆ 5.00 ಗಂಟೆಯಿಂದ ಸಾಮೂಹಿಕ ಸಂಕಲ್ಪ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಜೆ 5.20 ಗಂಟೆಯಿಂದ ಗೋಕುಲ ಭಜನಾ ಮಂಡಳಿ ಮತ್ತು ಪ್ರಾದೇಶಿಕ ವಿವಿಧ ಭಜನಾ ಮಂಡಳಿಗಳಿಂದ ದಾಸರ ಪದಗಳು, ಲೋಕಭರಿತನೋ ರಂಗನೇಕ ಚಾರಿತನೋ ಧ್ಯೇಯವ ನ್ನಿರಿಸಿ ಭಜನೆ, ಸಂಜೆ 5.30 ಗಂಟೆಯಿಂದ ಸಾಮೂಹಿಕ ಸಂಕಲ್ಪ, ಸಂಜೆ 7.15 ಗಂಟೆಯಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಸಲಾಗುವುದು ಎಂದು ಉಭಯ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ.
……………………………………………………………………………………….………………………………………

ಬಂಟ್ಸ್ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ
ಪೆÇವಾಯಿನಲ್ಲಿ ಜ.12: ಸಿಲ್ಕ್ ಆ್ಯಂಡ್ ಡೈಮಂಡ್ಸ್ ಪ್ರದರ್ಶನ-ಮಾರಾಟ
ಮುಂಬಯಿ, ಜ.07: ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಸಂಘದ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ಇದೇ ಬರುವ ಭಾನುವಾರ (ಜ.12) ಬೆಳಿಗ್ಗೆ ಗಂಟೆ 10.00 ಗಂಟೆಯಿಂದ ಸಂಜೆ 6.00 ಗಂಟೆ ವರೆಗೆ ಪೆÇವಾಯಿಇಲ್ಲಿನ ಎಸ್.ಎಂ ಶೆಟ್ಟಿ ವಿದ್ಯಾಲಯದ ಸಭಾಗೃಹದಲ್ಲಿ ರೇಷ್ಮೆ ಸೀರೆ, ಬಟ್ಟೆಬರೆಗಳು ಮತ್ತು ವಜ್ರಾಭರಣಗಳ (ಸಿಲ್ಕ್ ಆ್ಯಂಡ್ ಡೈಮಂಡ್ಸ್) ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ ತಿಳಿಸಿದ್ದಾರೆ.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಹಾಗೂ ಪದಾಧಿಕಾರಿಗಳು ಆಗಮಿಸಿ ಪ್ರದರ್ಶನಕ್ಕೆ ಚಾಲನೆಯನ್ನೀಡಲಿದ್ದಾರೆ.  ಮಹಿಳೆಯರಿಗೆ ಆಕರ್ಷಣೆ ನೀಡುವಂತಹ ಸರ್ವೋತ್ಕೃಷ್ಟ ಗುಣಮಟ್ಟ ಮತ್ತು ವೈವಿಧ್ಯಮಯ ರೇಷ್ಮೆ ಮತ್ತು ಹತ್ತಿ (ಕಾಟನ್) ಸೀರೆಗಳು ಹಾಗೂ  ಆಧುನಿಕ ಮಾದರಿ ಮತ್ತು ಕಲ್ಪನೆಯ ವಿಶೇಷ ವಜ್ರಾ ಆಭರಣಗಳನ್ನು ಪ್ರದರ್ಶಿಸಲಾಗುವುದು ಅಂತೆಯೇ ಉತ್ತಮ ದರದಲ್ಲಿ ಮಾರಾಟ ಮಾಡಲಾಗುವುದು. ಆ ಪ್ರಯುಕ್ತ ಬಂಟ್ಸ್ ಸಂಘದ ಎಲ್ಲಾ ಮಹಿಳೆಯರು ಮತ್ತು ಆಸಕ್ತರು ಆಗಮಿಸಿ ಇದರ ಸದುಪಯೋಗ ಪಡೆಯಬೇಕೆಂದು ಪ್ರಾದೇಶಿಕ ಸಮಿತಿಯ ಮಹಿಳಾ ಉಪಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಕಾರ್ಯದರ್ಶಿ ವಜ್ರಾ ಪೂಂಜ, ಕೋಶಾಧಿಕಾರಿ ಪ್ರೇಮಾ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಆರ್.ಜಿ ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ ಮಹಿಳಾ ಸಮಿತಿ ಪರವಾಗಿ ತಿಳಿಸಿದ್ದಾರೆ.

“ಪೆನ್ಸಿಲ್ವೇನಿಯಾ  ವಿಶ್ವವಿದ್ಯಾಲಯ ವಿಧ್ಯಾರ್ಥಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ”

ಪೆನ್ವಿಲೈೀನಿಯಾ ವಿಶ್ವವಿಧ್ಯಾಲಯ ವಿಧ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಕ್ಷೇತ್ರದಿಂದ ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ಅಧ್ಯಯನ ನಡಸಿದರು. ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳ ಜೊತೆ ಮಾತನಾಡುತ್ತಾ “ಸಮಾಜದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಹಳ ಅವಕಾಶಗಳಿವೆ. ಧಾರ್ಮಿಕ ಸಂಸ್ಥೆಗಳು ಧರ್ಮಸಂರಕ್ಷಣೆಯ ಜೊತೆಗೆ ಪ್ರಸಕ್ತ ಸಮಾಜದಲ್ಲಿ ಇರುವ ಸವಾಲುಗಳನ್ನು ಗುರುತಿಸಿ ಸ್ಪಂದಿಸಿದರೆ ಉತ್ತಮವಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಬಹಳ ವರ್ಷಗಳಿಂದ ಈ ನಿಟ್ಟಿನಲ್ಲಿ ಕರ್ತವ್ಯನಿರ್ವಹಿಸುತ್ತಿದೆ. ಪರಂಪರಾಗತವಾಗಿ ಬಂದಿರುವ ಈ ಕೈಂಕರ್ಯ ಸಮಾಜ ಸೇವೆಯನ್ನು ಮಾಡುವ ವಿಫುಲ ಅವಕಾಶವನ್ನು ನಮಗೆ ಒದಗಿಸಿದೆ. ಯೋಜನೆಗಳನ್ನು ಅನುಷ್ಠಾನಿಸುತ್ತಾ ಬಂದಂತೆ ಹೊಸ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು. ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬಹಳ ಸಂತೋಷದಾಯಕ ಹಾಗೂ ಸವಾಲುಗಳು ಸಾಮಾನ್ಯ. ಎಂದಿಗೂ ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು ಸಾಧ್ಯ.” ಎಂದು ಡಾ. ಡಿ. ವಿರೇಂದ್ರ  ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು “ನಾಲೆಡ್ಜ್ ಪಾರ್ಟ್‍ನರ್” ಆಗಿ ಗುರುತಿಸಿದ ಕುರಿತು ಪ್ರಮಾಣ ಪತ್ರವನ್ನು ಹಾಗೂ ಫಲಕವನ್ನು ನೀಡಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪರವಾಗಿ ಪ್ರೊ. ಫೆಮಿಡಾರವರು ಗೌರವಿಸಿದರು.

ಭೇಟಿಯ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್. ಹೆಚ್. ಮಂಜುನಾಥ್ ರವರು ಗ್ರಾಮೀಣಾಭಿವೃದ್ಧಿ ಯೋಜನೆಯ ಕುರಿತು ವಿವರಿಸಿದರು. ಸಿರಿಗ್ರಾಮೊದ್ಯೋಗ ಸಂಸ್ಥೆಗೆ ಭೇಟಿ ನೀಡಲಾಯಿತು. ಕ್ಷೇತ್ರದ ವಿವಿಧ ವಿಭಾಗಗಳನ್ನು ಭೇಟಿ ಮಾಡಲಾಯಿತು. ತಂಡದಲ್ಲಿ ಪ್ರೊ. ಫೆಮಿಡಾ, ಶ್ರೀ ವಿನೋದ್ ದೀಕ್ಷೀತ್ ಇವರು ತಂಡವನ್ನು ಪ್ರತಿನಿಧಿಸಿದರು. ಶ್ರೀಮತಿ ಮಮತಾ ಹರೀಶ್ ರಾವ್ ನಿರ್ದೇಶಕಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಶ್ರೀಮತಿ ಚೈತನ್ಯಾ, ಉಪನ್ಯಾಸಕಿ ಇವರು ಉಪಸ್ಥಿತರಿದ್ದರು.

 

 


ಉಪಮುಖ್ಯಮಂತ್ರಿ ಅಜಿತ್ ಪವಾರ್ ಆಹಾರ ಖಾತೆ ಸಚಿವ ಛಗ್‍ನ್ ಭುಜಬಲ್
ಅವರಿಗೆ ಅಭಿನಂದಿಸಿದ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪುರ 
ಮುಂಬಯಿ, ಜ.08: ಶಿವಸೇನಾ ಪಕ್ಷದ ವರಿಷ್ಠ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ಭಾನುವಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದ್ದು ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಧುರೀಣರಾಗಿದ್ದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎನ್‍ಸಿಪಿ ನಾಯಕ ಅಜಿತ್ ಪವಾರ್ (ವಿತ್ತ ಮತ್ತು ಯೋಜನಾ ಖಾತೆ ಸಚಿವ) ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಛಗ್‍ನ್ ಭುಜಬಲ್ ಅವರನ್ನು ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್‍ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪು ಪುಷ್ಫಗುಪ್ಚವನ್ನಿತ್ತು ಅಭಿನಂದಿಸಿದರು.



ನಲ್ಲಸೋಫರಾದಲ್ಲಿ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವ ಪೂರ್ವಭಾವೀ ಸಭೆ
ಜವಾಬ್ದಾರಿ ನಿರ್ವಹಿಸಿ ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ ಗೊಳಿಸಿ-ವಿರಾರ್ ಶಂಕರ್ ಶೆಟ್ಟಿ
ಮುಂಬಯಿ, ಜ.24: ತಿರುಪತಿ ತಿರುಮಲ ದೇವಸ್ಥಾನ (ಟಿ.ಟಿ.ಡಿ) ಇವರ ಪೌರೋಹಿತ್ಯದಲ್ಲಿ ಹಾಗೂ ಸರ್ವ ತುಳು ಕನ್ನಡಿಗರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿಯೂ ಶ್ರೀನಿವಾಸ ಮಂಗಲ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮೂರು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಇದೀಗಲೇ ಎಲ್ಲ ತರದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆದ್ದರಿಂದ ಇದರ ಯಶಸ್ಸಿಗೆ ತಮ್ಮೆಲ್ಲರಿಗೆ ನೀಡುವ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸಿ ಸಹಕರಿಸಬೇಕು. ಎಂದು ಮಹೋತ್ಸವದ ಪ್ರಧಾನ ಸಂಘಟಕ, ಧಾರ್ಮಿಕ ಚಿಂತಕ, ಸೌತ್ ಇಂಡಿಯನ್ ಫೆಡರೇಶನ್ ವಸಾಯಿ ತಾಲೂಕ ಇದರ ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಕರೆಯಿತ್ತರು.

ನಲ್ಲಸೋಫರಾ ಪೂರ್ವದ ಎಸ್‍ಫೆÇೀರ್ ಹೊಟೇಲು ಸಭಾಗೃಹದಲ್ಲಿ ಕಳೆದ ಸೋಮವಾರ ನ್‍ಡೆಸಲಾದ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವದ ಪೂರ್ವಭಾವೀ ಸಿದ್ಧತಾ ಸಭೆಯನ್ನುದ್ದೇಶಿಸಿ ವಿರಾರ್ ಶಂಕರ್ ಮಾತನಾಡಿ ಇದೇ ಜ.18ನೇ ಶನಿವಾರ ವಿರಾರ್‍ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಯಶವಂತ್ ವಿವಾ ಟೌನ್‍ಶಿಪ್ ಮೈದಾನ, ವಿವಿಸಿಎಂಸಿ ಫೈರ್ ಬ್ರಿಗೇಡ್ ಹೌಸ್, ಅಲ್ಕಾಪುರಿ ನಲ್ಲಸೋಫರಾ ಪಶ್ಚಿಮ ಇಲ್ಲಿ ಆಯೋಜಿಸಿರುವ ಮಂಗಲ ಮಹೋತ್ಸವದ ಕಾರ್ಯಕ್ರಮದಲ್ಲಿ ವಿೂರಾರೋಡ್‍ನಿಂದ ಡಹಾಣು ವರೆಗಿನ ಸರ್ವ ತುಳು ಕನ್ನಡಿಗರು ಮತ್ತು ಮುಂಬಯಿ ಮತ್ತು ಉಪನಗರಗಳ ಸಂಘಸಂಸ್ಥೆಗಳ ಸದಸ್ಯರು ಸಕ್ರೀಯರಾಗಿ ಕಾರ್ಯನಿರತರಾಗಬೇಕು. ಇಲ್ಲಿನ ಸರ್ವ ತುಳು ಕನ್ನಡಿಗರ ಸಂಘ ಸಂಸ್ಥೆಗಳ ಪೆÇ್ರ್ರೀತ್ಸಾಹ ಹಾಗೂ ಸಹಕಾರದಿಂದ ಈ ವರೆಗಿನ ಈ ಪವಿತ್ರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಈ ಬಾರಿಯ ಮಂಗಲೋತ್ಸವದಲ್ಲೂ ಪಾಲ್ಗೊಳ್ಳುವ ಭಕ್ತರಿಗೆ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ವಿರಾರ್ ಶಂಕರ್ ತಿಳಿಸಿದರು.

ಮೌಳಿ ಸಮಾಜದ ಧುರೀಣ ಚಂದ್ರಮೌಳಿ ಅವರು ಮಾತನಾಡುತ್ತಾ, ಸಂಘಟಕರು ನಮಗೆ ನೀಡಿರುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ದೇವರ ಸೇವೆಯೆಂದು ನಿರ್ವಹಿಸಿ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ನಾವೆಲ್ಲರೂ ಉತ್ಸಾಹದಿಂದ ಭಾಗಿಗಳಾಗೋಣ. ಈ ಬಾರಿಯ ಯಶಸ್ಸಿನ ಬಳಿಕ ಪ್ರತಿವರ್ಷವೂ ಇಂತಹ ಪುಣ್ಯಾಧಿ ಕಾರ್ಯಕ್ರಮಗಳು ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಲ್ಲಸೋಫರಾ ತುಳು ಕೂಟದ ಗೌರವಾಧ್ಯಕ್ಷ ಶಶಿಧರ ಕೆ.ಶೆಟ್ಟಿ ಮಾತನಾಡಿ ಈ ಮಂಗಲ ಮಹೋತ್ಸವವು ಯಶಸ್ವಿಯಾಗಿ ನೇರವೇರಲು ಸರ್ವರ ಉಪಸ್ಥಿತಿ ಮತ್ತು ಸಹಕಾರ ಅಗತ್ಯ ಎಂದರು. ಕಳೆದ ಬಾರಿಯೂ ಕಾರ್ಯಕರ್ತರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿದ್ದೇವೆ. ಈ ಬಾರಿಯೂ ಸೇವಕ ಕಾರ್ಯಕರ್ತರಿಗೆ 1000 ಗುರುತುಪತ್ರಗಳನ್ನು ಮಾಡುವ ಜವಾಬ್ದಾರಿ ನನ್ನದು ಎಂದರು.

ನಾನು ಪ್ರತಿವರ್ಷ ತಿರುಪತಿಗೆ ವೆಂಕಟ್ರಮಣ ದೇವರ ದರ್ಶನಕ್ಕೆ ಹೋಗುತ್ತೇನೆ. ಆದರೆ ಅಲ್ಲಿ ಸುಪ್ರಭಾತಂ ನೋಡುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಆದರೆ ಇಲ್ಲಿ ನಡೆಸಲ್ಪಟ್ಟ ಶ್ರೀನಿವಾಸ ಮಂಗಲ ಮಹೋತ್ಸವದಲ್ಲಿ ಬೆಳಿಗ್ಗೆ ಸುಪ್ರಭಾತಂ ನೋಡುವ ಭಾಗ್ಯ ನನಗೆ ಮತ್ತು ಎಲ್ಲರಿಗೂ ಲಭಿಸಿರಿವುದು ನಮ್ಮ ಪುಣ್ಯದ ಫಲವಾಗಿದೆ. ಈ ಮಹೋತ್ಸವದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಭಾಷಿಕರು ಭಾಗವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗುವಂತೆ ಲ| ಡಾ| ಶಂಕರ್ ಕೆ.ಟಿ ವಿನಂತಿಸಿ ಕೊಂಡರು.

ಸಭೆಯ ವೇದಿಕೆಯಲ್ಲಿ ಎಸ್‍ಐಎಫ್ ವಸಾಯಿ ಮೋಹನ್ ಟಿ., ಜೊತೆ ಕಾರ್ಯದರ್ಶಿ ಡಾಯನ್ ಡಿಸೋಜಾ ಆಸೀನರಾಗಿದ್ದರು. ಸಭೆಯಲ್ಲಿ ದಕ್ಷಿಣ ಭಾರತೀಯ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಾಂಡಿಚೇರಿ ಮತ್ತು ಕೊಂಕಣದ ಗೋವಾ ಹಾಗೂ ಮಹಾರಾಷ್ಟ್ರದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು. ಗೌ| ಪ್ರ. ಕಾರ್ಯದರ್ಶಿ ನರೇಂದ್ರ ಪ್ರಭು ಸ್ವಾಗತಿಸಿ ಸಭೆಗೆ ಆಗಮಿಸಿದ ಸರ್ವರಿಗೂ ವಂದಿಸಿದರು. 

ಎಸ್‍ಬಿಬಿಪಿಡಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆಯಿಂದ  ವಿದ್ಯಾಥಿರ್ü ಪ್ರತೀಕ್ ಪಿ ಪೂಜಾರಿಗೆ ದತ್ತುನಿಧಿ ಹಸ್ತಾಂತರ
ಮುಂಬಯಿ, ಡಿ.09: ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಕಾರ್ಯಕಾ ರಿ ಸಮಿತಿ ಸಭೆ ಕಳೆದ ಮಂಗಳವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಟ್ರಸ್ಟ್‍ನ ವಿದ್ಯಾನಿಧಿಯ ವತಿಯಿಂದ ಕೊಡುಗೈದಾನಿ, ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಸಿ.ಕೆ ಪೂಜಾರಿ ಕೊಡಮಾಡಿದ ದತ್ತು ಸ್ವೀಕಾರಕ್ಕೆ ಆಯ್ದ ವಿದ್ಯಾಥಿರ್ü ಮಾ| ಪ್ರತೀಕ್ ಪ್ರಕಾಶ್ ಪೂಜಾರಿ ಇವರಿಗೆ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ  ಸೇವಾ ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ,  ಶಂಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದು ಟ್ರಸ್ಟಿಗಳ  ಸಮ್ಮುಖದಲ್ಲಿ  ಚೆಕ್ ಮೂಲಕ ದತ್ತುನಿಧಿ ವಿತರಿಸಲಾಯಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Monti Fest - 2025 | Nativity of Mother Mary | St.
View More

Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
ತೋನ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗುಡ್ಯಾo, ಕೆಮ್ಮಣ್ಣು. ಮುದ್ದುಕೃಷ್ಣ ಸ್ಪರ್ಧೆ - ದಿನಾಂಕ 14:09:2025 ಆದಿತ್ಯವಾರ ಬೆಳಿಗ್ಗೆ 9:00 ಗಂಟೆಯಿಂದ...ತೋನ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗುಡ್ಯಾo, ಕೆಮ್ಮಣ್ಣು.  ಮುದ್ದುಕೃಷ್ಣ ಸ್ಪರ್ಧೆ - ದಿನಾಂಕ 14:09:2025 ಆದಿತ್ಯವಾರ ಬೆಳಿಗ್ಗೆ 9:00 ಗಂಟೆಯಿಂದ...
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi