Brief Mumbai - Mangalore news with pictures


Rons Bantwal
Kemmannu News Network, 24-05-2020 12:26:10


Write Comment     |     E-Mail To a Friend     |     Facebook     |     Twitter     |     Print


ಗಣ್ಯರನೇಕರ ಹರಸಾಹಸದ ಪ್ರಯತ್ನಕ್ಕೆ ಮಾನವೀಯತೆ ಮೆರೆದ ಜನಪ್ರತಿನಿಧಿಗಳು - ನಿಪ್ಪಾಣಿಯಿಂದ ತಡೆ ತೆರವು ; ಕರಾವಳಿಯ ಪ್ರಯಾಣಿಕರÀ ಬಿಡುಗಡೆ

ಮುಂಬಯಿ, ಮೇ.21: ಉಪನಗರದ ವಿೂರಾರೋಡ್‍ನಿಂದ ಕಳೆದ ಸೋಮವಾರ ಸಂಜೆ ಬಸ್ ಮೂಲಕ ಮಂಗಳೂರು ಕಡೆ ಹೊರಟು ತಡ ರಾತ್ರಿಯಿಂದ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ತಡೆ ಹಿಡಿಯಲ್ಪಟ್ಟ ಗರ್ಭಿಣಿಯರು, ಮಹಿಳೆಯರು, ಮಕ್ಕಳನ್ನು ಸೇರಿದಂತೆ ಸುಮಾರು 30 ಮಂದಿ ಪ್ರಯಾಣಿಕರÀು  ಬಿಡುಗಡೆ ಗೊಂಡಿರುವರು. ಗಣ್ಯರನೇಕರ ಅವಿರತ ಪ್ರಯತ್ನಕ್ಕೆ ಮಾನವೀಯತೆ ಮೆರೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೊನೆಗೂ ಕರಾವಳಿ ಪ್ರಯಾಣಿಕರ ತಡೆಯನ್ನು ತೆರವು ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮರಳಿರುವÀರಲ್ಲೇ ನೂರಾರು ಪಾಸಿಟಿವ್ ಪ್ರಕರಣಗಳು ಅಲ್ಲದೆ ಗರ್ಭಿಣಿಯಲ್ಲೂ ಪಾಸಿಟಿವ್ ಪತ್ತೆಯಾದ ಕಾರಣ ಸರಕಾರವು ಕಠಿಣ ಕ್ರಮಕೈಗೊಂಡ ಹಿನ್ನಲೆ ಮತ್ತು ಪ್ರಯಾಣಿಕರಲ್ಲಿ ಒಳನಾಡು ಕರ್ನಾಟಕ ಪ್ರವೇಶಿಸುವ ಪಾಸ್ ಇಲ್ಲದ ಕಾರಣವೂ ನಿಪ್ಪಾಣಿಯಲ್ಲಿ ತಡೆ ಹಿಡಿಯಲಾಗಿತ್ತು.


ಮುಂಬಯಿನ ಯುವೋದ್ಯಮಿ ರಿತೇಶ್ ಡಿ.ಪೂಜಾರಿ ತೆರೆಮರೆಯಲ್ಲಿದ್ದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್‍ಕುಮಾರ್ ಕಟೀಲ್, ಶಾಸಕರಾದ ಉಮನಾಥ ಕೋಟ್ಯಾನ್ (ಮೂಡಬಿದ್ರೆ), ಕೆ.ರಘುಪತಿ ಭಟ್ (ಉಡುಪಿ), ಸಿಎಂ ಕಾರ್ಯದರ್ಶಿ ರವಿ ಕುಮಾರ್ ಮತ್ತಿತರರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಏಜೆಂಟರರನ್ನು ನಂಬಿ ಕರಾವಳಿಗೆ ಬಂದ ಪ್ರಯಾಣಿಕರು ಮೋಸ ಹೋದ ಬಗ್ಗೆ ತಿಳಿಸಿದ್ದರು. ಅಲ್ಲದೆ ಆಘಾತಗೊಂಡಿದ್ದರ ಬಗ್ಗೆ ಬಸ್ಸಿನಲ್ಲಿದ್ದ ಪ್ರಯಾಣಿಕರ ಅಳಲನ್ನು ಎಳೆಎಳೆಯಾಗಿ ಬಚ್ಚಿಟ್ಟು ಅಮಾಯಕ ಪ್ರಯಾಣಿಕರನ್ನು ದಂಡಿಸದೆ ಎಲ್ಲರಿಗೂ ತತ್‍ಕ್ಷಣವೇ ಊರಿಗೆ ತಲಪಿಸುವ ವ್ಯವಸ್ಥೆ ಮಾಡಬೇಕೆಂದು ನಮ್ರ ವಿನಂತಿಸಿದ್ದರು ಎನ್ನಲಾಗಿದೆ. ವಿಷಯವನ್ನು ಗಂಭೀರವಾಗಿ ಪಡೆದ ಸಚಿವ ಶ್ರೀನಿವಾಸ ಪೂಜಾರಿ ವಿಶೇಷ ಅನುಮತಿ ಮೇರೆಗೆ ಗಡಿ ದಾಟಲು ಅನುವು ಮಾಡಿಕೊಡಲು ಪ್ರತ್ಯಕ್ಷವಾಗಿ ತುರ್ತು ನೆರವಿಗೆ ಧಾವಿಸಿದ್ದರು ಮತ್ತು  ಈ ಪ್ರಯಾಣಿಕರಿಗೂ ತಮ್ಮ ನಿಪ್ಪಾಣಿ ಅಲ್ಲಿನ ಆಪ್ತರ ಮೂಲಕ ಆಹಾರ ವ್ಯವಸ್ಥೆಗೈದು ನೈತಿಕ ಬಲತುಂಬಿ ಧೈರ್ಯಾನ್ನೀಡಿದ್ದರು ಎನ್ನಲಾಗಿದೆ.

ಸದ್ಯ ನಿಪ್ಪಾಣಿ ಬಾರ್ಡರ್ ವಲಸಿಗರ ಪಾಲಿನ ಯುದ್ಧಭೂಮಿಯಂತೆ ಪರಿಣಮಿಸಿದ ಕಾರಣ ಸುಮಾರು ಎರಡುವರೆ ದಿನಗಳಿಂದ ಸಿಕ್ಕಾಕಿಕೊಂಡಿರುವ ಪ್ರಯಾಣಿಕರನ್ನು ಶೀಘ್ರವಾಗಿ ಕರೆಸಿಕೊಳ್ಳುವಂತೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಮುಂಬಯಿನ ಯುವೋದ್ಯಮಿ ಮಹೇಶ್ ಶೆಟ್ಟಿ ತೆಲ್ಲಾರ್ ಅವರೂ ಶಾಸಕರಾದ ವಿ.ಸುನೀಲ್ ಕುಮಾರ್ (ಕಾರ್ಕಳ), ಲಾಲಾಜಿ ಮೆಂಡನ್ (ಕಾಪು), ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ (ಐಎಎಸ್), ಜಿಲ್ಲಾ ಅಧಿಕಾರಿಗಳು, ಉನ್ನತ ಪೆÇೀಲಿಸ್ ಅಧಿಕಾರಿಗಳ ಮನವೊಲಿಸಿದ್ದರು. ಈ ಮಧ್ಯೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ಸಂಪಾದಕ ಯು.ಕೆ ಕುಮಾರನಾಥ್, ವಿಜಯ ಕರ್ನಾಟಕ ಬೆಳಗಾವಿ ಆವೃತ್ತಿ ಸಂಪಾದಕ ಮಹಾಂತೇಶ್ ಪಾಟೀಲ್ ಇವರೂ ನಿಪ್ಪಾಣಿಯಲ್ಲಿನ ವಿವಿಧ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಾ ಈ ಪ್ರಯಾಣಿಕರಿಗೆ ಭದ್ರತೆ, ಎಲ್ಲಾ ವ್ಯವಸ್ಥೆಗಳನ್ನಿತ್ತು ಶೀಘ್ರವೇ ಅವರವರ ಊರಿಗೆ ಕರೆಸಿಕೊಳ್ಳುವಂತೆ ಶ್ರಮಿಸಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಸದ್ಯ ಬಿಡುಗಡೆಗೊಂಡು ತವರೂರು ಸೇರಿದ ಪ್ರಯಾಣಿಕರೆಲ್ಲರೂ ನಿಟ್ಟಿಸಿರು ಬಿಟ್ಟಿದ್ದು ಬಿಡುಗಡೆಗಾಗಿ ಸಹಕರಿಸಿ ಮಾನವೀಯತೆ ಮೆರೆದ ಗೀತಾಂಜಲಿ ಸುವರ್ಣ ಕಟಪಾಡಿ, ನಿಲೇಶ್ ಪೂಜಾರಿ ಪಲಿಮಾರು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಪ್ರಯಾಣಿಕರು ಮತ್ತು ಕುಟುಂಬಸ್ಥರು ವಂದಿಸಿರುವುದಾಗಿ ರಿತೇಶ್ ಡಿ.ಪೂಜಾರಿ ತಿಳಿಸಿದ್ದಾರೆ.

 

`ತುಳುರತ್ನ’ ಜಯರಾಮ ಶೆಟ್ಟಿ ಸುರತ್ಕಲ್ (ಬರೋಡ) ನಿಧನ

ಮುಂಬಯಿ, ಮೇ.23: ಗುಜರಾತ್‍ನ ಹಿರಿಯ ಹೊಟೇಲು ಉದ್ಯಮಿ, ಸಂಘಟಕ, ಜನಪ್ರಿಯ ಸಮಾಜ ಸೇವಕ ಜಯರಾಮ ಶೆಟ್ಟಿ ಸುರತ್ಕಲ್ ಮಂಗಳೂರು  (82.) ಕಳೆದ ಶುಕ್ರವಾರ ರಾತ್ರಿ ಬರೋಡಾ ಇಲ್ಲಿನ ಎಲ್ಲೋರಾ ಪಾರ್ಕ್‍ನ ಕುಸುಮಾ ನಿವಾಸ್ ಸ್ವಗೃಹದಲ್ಲಿ ನಿಧಿವಶರಾದರು.

ಕೊಡುಗೈದಾನಿಯೂ ಆಗಿದ್ದ ಇವರು ತುಳು ಸಂಘ  ಬರೋಡಾ ಇದರ ಸ್ಥಾಪಕ ಅಧ್ಯಕ್ಷ, ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ, ಆಲ್ ಇಂಡಸ್ಟ್ರೀಸ್ ಕ್ಯಾಟರಿಂಗ್ ಅಸೋಸಿಯೇಶನ್ ಅಧ್ಯಕ್ಷರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು. ಕಳೆದ ಡಿಸೆಂಬರ್‍ನಲ್ಲಿ ಚೆಂಬೂರು ಕರ್ನಾಟಕ ಸಂಘ ಜರುಗಿಸಿದ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ `ಸಾಹಿತ್ಯ ಸಹವಾಸ’ ಕಾರ್ಯಕ್ರಮದಲ್ಲಿ ಸಂಘದ ವಾರ್ಷಿಕÀ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ’ ಪ್ರಶಸ್ತಿ ಪ್ರದಾನಿಸಿ ಜಯರಾಮ್ ಶೆಟ್ಟಿ ಇವರಿಗೆ ಗೌರವಿಸಿತ್ತು.

ಮೃತರು ಪತ್ನಿ ಕುಸುಮಾ ಶೆಟ್ಟಿ ಮೂರು ಸುಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ಬರೋಡಾ ಇಲ್ಲಿನ ವಾಡಿವಡಿ ಇಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಿದ್ದು ತುಳು ಸಂಘ  ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಹೊಟೇಲು ಉದ್ಯಮಿ ಸುಧಾಕರ್ ಶೆಟ್ಟಿ, ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ ನರಸಿಂಹನ್ ಮೂರ್ತಿ ಮತ್ತಿತರ ಪದಾಧಿಕಾರಿಗಳು, ಗಣ್ಯರನೇರು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ತುಳು ಸಂಘ ಅಹ್ಮದಾಬಾದ್ ಗೌರವಾಧ್ಯಕ್ಷ ಮೋಹನ್ ಸಿ.ಪೂಜಾರಿ, ಎಸ್ಕೆ ಹಳೆಯಂಗಡಿ ಸೇರಿದಂತೆ  ಹಲವಾರು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಓಂ ಶಕ್ತಿ ಮಹಿಳಾ ಸಂಸ್ಥೆಯಿಂದ ಸರ್ವೋತ್ಕೃಷ್ಟ ಪಿಪಿಇ ಕಿಟ್‍ಗಳ ವಿತರಣೆ
ಮುಂಬಯಿ (ಕಲ್ಯಾಣ್), ಮೇ.22: ಉಪನಗರದ ಕಲ್ಯಾಣ್‍ನಲ್ಲಿ ಸೇವಾ ನಿರತ ಓಂ ಶಕ್ತಿ ಮಹಿಳಾ ಸಂಸ್ಥೆಯು ಮುನ್ಸಿಪಾಲ್ ಆಸ್ಪತ್ರೆ ಕಲ್ಯಾಣ್ ಹಾಗೂ ರುಕ್ಮೀಣಿಭಾೈ ಆಸ್ಪತ್ರೆಗಳಿಗೆ ಮತ್ತು ಸ್ಥಾನೀಯ ಇನ್ನಿತರ ವೈದ್ಯರಿಗೆ ಸರ್ವೋತ್ಕೃಷ್ಟ ಸುಮಾರು 100 ಪಿಪಿಇ ಕಿಟ್ (ವೈಯಕ್ತಿಕ ರಕ್ಷಣಾ ಉಪಕರಣ ಪರಿಕರ -ಪರ್ಸನಲ್ ಪೆÇ್ರಟಕ್ಷನ್ ಇಕ್ವೀಪ್‍ಮೆಂಟ್‍ಗಳನ್ನು) ವಿತರಿಸಿದರು.

ಮುಖ್ಯ ವೈದ್ಯಕೀಯ ಅಧಿಕಾರಿ, ಡಾ| ಅಶ್ವಿನಿ ಪಾಟೀಲ್, ನಿದಾನ್ ಡೈನೋಜೆಸ್ಟಿಕ್ ಸೆಂಟರ್ ಕಲ್ಯಾಣ್ ಇದರ ಮುಖ್ಯಸ್ಥ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ನ ಕಲ್ಯಾಣ್‍ನ ಕಾರ್ಯದರ್ಶಿ ಡಾ| ಪ್ರಶಾಂತ್ ಪಾಟೀಲ್ ಉಪಕರಣಗಳನ್ನು ಸ್ವೀಕರಿಸಿದ್ದು ಇವರೆಲ್ಲರ ಸಹಕಾರಕ್ಕೆ ಓಂ ಶಕ್ತಿ ಸಂಸ್ಥೆಯು ವಂದಿಸಿತು.

ಓಂ ಶಕ್ತಿ ಮಹಿಳಾ ಸಂಸ್ಥೆಯ ಸಂಸ್ಥಾಪಕಿ ಮತ್ತು ಗೌರವಾಧ್ಯಕ್ಷೆ ಚಿತ್ರ ರವಿರಾಜ್ ಶೆಟ್ಟಿ, ಕೋಶಾಧಿಕಾರಿ ಸುರೇಖಾ ಹರೀಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಕುಶಲ ಜಿ.ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಸಂಚಾಲಕಿ ಶಶಿ ಪ್ರವೀಣ್ ಶೆಟ್ಟಿ ಮತ್ತು ಶ್ರೀಶ್ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದÀರು.

ಅಮಾಯಕ ಕಾರ್ಮಿಕರಿಗೆ ಅಭಯಾಸ್ತ ಚಾಚಿದ ಸಂತೋಷ್ ಶೆಟ್ಟಿ ಪನ್ವೇಲ್

ಮುಂಬಯಿ, ಮೇ.23: ಲಾಕ್‍ಡೌನ್‍ನಿಂದ ಭಾರೀ ಸಂಕಷ್ಟಕ್ಕೊಳಗಾಗಿ ವಲಸೆ ಹೋಗುತ್ತಿರುವ ಕಾರ್ಮಿಕರು ಮತ್ತು ಅನಿವಾಸಿ ಪರ ಪ್ರಾಂತೀಯ ಜನರಿಗೆ ಉಪನಗರದ ರಾಯಗಾಢ ಜಿಲ್ಲೆಯ ಪನ್ವೇಲ್‍ನಿಂದ ಊರಿಗೆ ಹೋಗುವರೇ ಪನ್ವೇಲ್ ಅಲ್ಲಿನ ನಾಮಾಂಕಿತ ಸಮಾಜ ಸೇವಕ, ಯುವ ಉದ್ಯಮಿ, ಪಿಎಂಸಿಸಿ ನಗರ ಸೇವಕ ಬಿಜೆಪಿ ಧುರಿಣ ಸಂತೋಷ್ ಶೆಟ್ಟಿ ಪನ್ವೇಲ್ ಮತ್ತು ತಂಡವು ಸಹಕರಿಸಿತು.

ಯಾರೋ ಟೆಂಪೆÇೀ ಚಾಲಕರು ತಮ್ಮನ್ನು ರಾಜ್ಯದ ಗಡಿಭಾಗಕ್ಕೆ ಬಿಟ್ಟುಬರುವುದಾಗಿ ನಂಬಿಸಿ ಈ ಅಮಾಯಕ ಕಾರ್ಮಿಕರನ್ನು ನ್ಯೂ ಪನ್ವೇಲ್‍ನ ಸೂಪರ್ ಮಾರ್ಕೆಟ್ ಬಳಿ ಇಳಿಸಿದ್ದು ಈ ಬಗ್ಗೆ ಗಮನಿಸಿದ ಸಂತೋಷ್ ಶೆಟ್ಟಿ ಇವರಿಗೆಲ್ಲ್ಲಾ ಆಶ್ರಮದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಜೊತೆಗೆ ಆಹಾರ ಮತ್ತು ನೀರು ಪೂರೈಸಿ ಜೀವನ ವ್ಯವಸ್ಥೆಗೈದು ಆರೋಗ್ಯ ತಪಾಸನೆಗೂ ಸಹಕರಿಸಿದ್ದರು. ಸದ್ಯ ಸ್ಥಳೀಯ ಪೆÇೀಲಿಸ್ ವರಿಷ್ಠಾಧಿಕಾರಿಗಳ ಸಹಯೋಗದಿಂದ ಅವರವರ ಊರಿಗೆ ಕಳುಹಿಸಿ ಕೊಡುವ ಭರವಸೆ ಸಂತೋಷ್ ಶೆಟ್ಟಿ ಕಾರ್ಮಿಕರಿಗೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನಿರಾಧರ ಪರ ಪ್ರಾಂತೀಯರಿಗೆ ಆಧಾರವನ್ನಿತ್ತು ಧೈರ್ಯ ತುಂಬಿ ಸಂತೋಷ್ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ.

ಸೇವಾಸಿಂಧು ಇ-ಪಾಸ್ ವಿನಃ ಕರ್ನಾಟಕಕ್ಕೆ ಪ್ರಯಾಣಿಸದಿರಿ  ಮುಂಬಯಿ ಪ್ರಯಾಣಿಕರಿಗೆ ಸಂಸದ ಗೋಪಾಲ್ ಸಿ.ಶೆಟ್ಟಿ ಕಿವಿಮಾತು

ಮುಂಬಯಿ, ಮೇ.21: ಒಳನಾಡ ಜನತೆಯ ಆರೋಗ್ಯ ಮತ್ತು ಸಾಮಾಜಿಕ ಸ್ವಸ್ಥತೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಸರಕಾರವು ಕಠಿಣ ಕ್ರಮಕೈಗೊಂಡ ಹಿನ್ನಲೆಯಲ್ಲಿ ಸದ್ಯ ಕರ್ನಾಟಕ ಸರಕಾರವು ಮಹಾರಾಷ್ಟ್ರದಿಂದ (ಮುಂಬಯಿ) ಒಳನಾಡು ಪ್ರವೇಶಿಸುವ ವಲಸೆಗಾರರು ಅಥವಾ ಅನಿವಾಸಿಗರಿಗೆ ಅವಕಾಶÀ ತಡೆಹಿಡಿದಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿನ ವಿಶೇಷವಾಗಿ ಮುಂಬಯಿ, ಪುಣೆಯಿಂದ ಕರ್ನಾಟಕಕ್ಕೆ ತೆರಳಲು ಇಚ್ಫಿಸುವವರು ಯಾವುದೇ ಕಾರಣಕ್ಕೂ ಸೇವಾಸಿಂಧು ಇ-ಪಾಸ್ ಇಲ್ಲದೆ ಪ್ರಯಾಣ ಬೆಳಸದಂತೆ ಉತ್ತರ ಮುಂಬಯಿ ಲೋಕಸಭಾ ಸಂಸದ ಗೋಪಾಲ್ ಸಿ.ಶೆಟ್ಟಿ ಇಲ್ಲಿನ ಸಮಗ್ರ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.


ಗರ್ಭಿಣಿಯರು, ತೀವ್ರ ಅಸ್ವಸ್ಥರು, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು, ಮನೆಮಂದಿ ಮರಣ ಹೊಂದಿದಂತಹ ಅತ್ಯವಶ್ಯಕತೆಗೆ ಸರಕಾರದ ಷರತ್ತು ಅನ್ವಯದೊಂದಿಗೆ ವಿಶೇಷ ಅನುಮತಿ ಪಡೆದ್ದಲ್ಲಿ ಮಾತ್ರ ಪ್ರಯಾಣಿಸÀಲು ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಸರಕಾರದ ಸಚಿವರು, ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳು ಮಹಾರಾಷ್ಟ್ರದಲ್ಲಿನ ಕನ್ನಡಿಗ ಜನಪ್ರತಿನಿಧಿ, ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮರಳಿರುವÀರಲ್ಲೇ ನೂರಾರು ಕೋವಿಡ್ ಪಾಸಿಟಿವ್ ಪ್ರಕರಣಗಳು ಅಲ್ಲದೆ ಗರ್ಭಿಣಿಯಲ್ಲೂ ಪಾಸಿಟಿವ್ ಪತ್ತೆಯಾದ ಕಾರಣ  ಪ್ರಯಾಣಿಕರಲ್ಲಿ ಒಳನಾಡು ಕರ್ನಾಟಕ ಪ್ರವೇಶಿಸುವ ಇ-ಪಾಸ್ ಕಾರಣಾಂತರದಿಂದ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೂ ಕಳೆದ ಸೋಮವಾರ ಬಸ್ ಮೂಲಕ ಕರಾವಳಿ ಕಡೆ ಬಂದ ತಂಡ ಸೇರಿದಂತೆ ಅಪಾರ ಸಂಖ್ಯೆಯ ಪ್ರಯಾಣಿಕರು ಇ-ಪಾಸ್ ಇಲ್ಲದೇ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಜಮಾಯಿಸಿ ಎಡವಟ್ಟು ಮಾಡಿದ್ದರು. ಆದ್ದರಿಂದ ನಿಪ್ಪಾಣಿ ಗಡಿಭಾಗ ವಲಸಿಗರ ಪಾಲಿನ ಯುದ್ಧಭೂಮಿಯಾಗಿ ಪರಿಣಮಿಸಿತ್ತು. ಅಧಿಕಾರಸ್ಥರಿಗೆ ಕರುನಾಡ ಬಂಧುಗಳಾದ ಪ್ರಯಾಣಿಕರ ತಡೆಯನ್ನು ತೆರವು ಗೊಳಿಸುವುದು ತುಂಬಾ ಕಷ್ಟಕರವಾಗಿತ್ತು. ಆದಕಾರಣ ಮುಂದೆ ಎಲ್ಲರೂ ಸಂಯಮದಿಂದ ಸಹಕರಿಸುವಂತೆ ಕರ್ನಾಟಕ ಸರಕಾರ ಜನತೆಗೆ ಮನವಿ ಮಾಡಿದೆ. ವಲಸೆ ಕಾರ್ಮಿಕರು, ಆಸಕ್ತ ಕನ್ನಡಿಗರನ್ನೆಲ್ಲರನ್ನೂ ಹಂತಹಂತವಾಗಿ ಸರಕಾರವೇ ವ್ಯವಸ್ಥಿತವಾಗಿ ತವರೂರಿಗೆ ಕರೆಸಿ ಕೊಳ್ಳುವ ವ್ಯವಸ್ಥೆ ಶೀಘ್ರಗತಿಯಲ್ಲಿ ಮಾಡಲಿದೆ. ಆದ್ದರಿಂದ ಯಾರೂ ಹತಾಶರಾಗದೆ ನೂತನ ಸೇವೆಗಳು ಜಾರಿಗೆ ಬರುವ ತನಕ ಎಲ್ಲರೂ ತಾಳ್ಮೆಯಿಂದ ಇರುವಂತೆಯೂ ಕೋರಿದ್ದಾರೆ. ಎಲ್ಲರೂ ಏಕಾಏಕೀ ಊರಿಗೆ ಹೊರಟರೆ ವ್ಯವಸ್ಥೆಗಳನ್ನು ಮಾಡುವಲ್ಲೂ ಕಷ್ಟವಾಗಲಿದೆ ಆದ್ದರಿಂದ ಯಾರೂ ಅಸಮಾಧಾನ ವ್ಯಕ್ತ ಪಡಿಸದೆ ಸಂಪೂರ್ಣವಾಗಿ ಸಹಕಾರ ನೀಡುವಂತೆಯೂ ಎರ್ಮಾಳ್ ಹರೀಶ್ ಶೆಟ್ಟಿ ಮನವಿ ಮಾಡಿದ್ದಾರೆ.

ತವರೂರಿಗೆ ಹೋಗಲಿಚ್ಛಿಸುವ ಸರ್ವರೂ ಹೊರಡುವ ಮುನ್ನ ಇದ್ದಲ್ಲಿಂದಲೇ ಭಾರತ ಸರಕಾರದ ಆರೋಗ್ಯಸೇತು ಆ್ಯಪ್‍ನಲ್ಲಿ ಮತ್ತು  ಕರ್ನಾಟಕ ಸರಕಾರದ ಸೇವಾಸಿಂಧು ಆ್ಯಪ್‍ನಲ್ಲಿಯೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ  ಹೆಸರುಗಳನ್ನು ಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಲೇ ಬೇಕು. ಆ ಮುಖೇನ  ಸೇವಾಸಿಂಧು ಇ-ಪಾಸ್ ಹೊಂದಿರತಕ್ಕದ್ದು. ಇದರ ವಿನಃ ಯಾರೂ ಎಲ್ಲಿಗೂ ಪ್ರಯಾಣಿಸಲಾಗದು. ಈ  ಎರಡು ಮಹತ್ವದ ಹಂತಗಳನ್ನು ಪೂರೈಸದೆ ತಾವು ಎಲ್ಲಿಂದಲೂ (ಮುಂಬಯಿ) ಊರಿನತ್ತ ಹೊರಟರೆ ಮಹಾರಾಷ್ಟ್ರ-ಕರ್ನಾಟಕದ ಗಡಿ ಪ್ರದೇಶ ನಿಪ್ಪಾಣಿಯಲ್ಲಿ ಖಂಡಿತಾವಾಗಿ ತಡೆಹಿಡಿಯಲ್ಪಡುವಿರಿ. ಆವಾಗ ಯಾವುದೇ ರಾಜಕೀಯ ನೇತಾರರು, ಜನಪ್ರತಿನಿಧಿಗಳು ಅಥವಾ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಏನೂ ಪ್ರಯೋಜನ ಆಗದು ಎಂದೂ ಎರ್ಮಾಳ್ ಹರೀಶ್ ಸಲಹಿದ್ದಾರೆ.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi