Brief Mumbai - Mangalore news with pictures


Rons Bantwal
Kemmannu News Network, 15-06-2020 15:44:39


Write Comment     |     E-Mail To a Friend     |     Facebook     |     Twitter     |     Print


ಜನಪರ ಹೋರಾಟಗಾರ-ಆಪತ್ಭಾಂಧವ ಡಾ| ಶಿವ ಮೂಡಿಗೆರೆ - ಗೃಹ ಸಚಿವಾಲಯದ ಕೋವಿಡ್ ಉಸ್ತುವಾರಿ ಸಮಿತಿ ಸದಸ್ಯರಾಗಿ ನೇಮಕ

ಮುಂಬಯಿ, ಜೂ.14: ಮಹಾರಾಷ್ಟ್ರದಲ್ಲಿನ ಹೆಸರಾಂತ ಯುವ ಉದ್ಯಮಿ, ಸಮಾಜ ಸೇವಕ, ಮುಂಬಯಿ ನ್ಯೂಸ್ ವಾಹಿನಿಯ ಥಾಣೆ ಜಿಲ್ಲಾ ಮುಖ್ಯಸ್ಥ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಇವರನ್ನು ಕೇಂದ್ರ ಸರಕಾರದ ಗೃಹ ಇಲಾಖೆಯ ಕೋವಿಡ್-19 ಉಸ್ತುವಾರಿ (ಮಾನಿಟರಿಂಗ್) ಸಮಿತಿ ಸದಸ್ಯರಾಗಿ ನೇಮಕ ಗೊಂಡಿದ್ದಾರೆ ಎಂದು ಭಾರತ ಸರಕಾರದ ಗೃಹ ಸಚಿವಾಲಯದ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ (ಐಎಎಸ್) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19ರ ವಿಶೇಷ ಸ್ಥಿತಿ ಸಲಹಾ ಸಮಿತಿಯ ಅನುಮೋದನೆಯಲ್ಲಿ ಅಂಗೀಕರಿಸಲ್ಪಟ್ಟ ಗೌರವಾನ್ವಿತ ಕೇಂದ್ರೀಯ ಗೃಹ ಸಚಿವರ ಅಧಿಕೃತ ಆದೇಶಗಳಿಗೆ ಅನುಸಾರವಾಗಿ, ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕೋವಿಡ್-19 ಮಾನಿಟರಿಂಗ್ ಕಮಿಟಿ ರಚಿಸಲಾಗಿದ್ದು, ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‍ಒಪಿ) ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಮೇಲ್ವಿಚಾರಣೆ ಮತ್ತು ಪರಿಹಾರ ಮತ್ತು ಎಸ್‍ಒಪಿ ಬದಲಾವಣೆಗಳು ವಾಸ್ತವಿಕ ಮತದಾನ ನಿಮಿತ್ತ ದೇಶದ ವಿವಿಧ ಭಾಗಗಳಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅಜಯ್ ಭಲ್ಲಾ ತಿಳಿಸಿದ್ದಾರೆ.

ನೃಪೇಂದ್ರ ಮಿಶ್ರ (ಐಎಎಸ್) ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಕವಿತಾ ಪದ್ಮನಾಭನ್ ಐಎಎಸ್ ï ಪ್ರಧಾನ ಸಲಹೆಗಾರರಾಗಿದ್ದು, ಸಂಜಯ್ ಆರ್.ಭವ್ಸಾರ್ ಐಎಎಸ್, ಅಂಬುಜ್ ಶರ್ಮಾ ಐಎಎಸ್  ಮತ್ತು ಅಭಿಷೇಕ್ ಎಂ.ಚೌಧರಿ ಐಎಎಸ್, ಭರುಉನ್ ಮಿತ್ರ, ಅನಿಕೇತ್ ಡೇ, ವಿನಯ್ ಕುಮಾರ್ ಜೈನ್, ಗೋಪಾಲ್ ಪಿಳ್ಳೈ, ಅಶೋಲಿ ಚಲೈ, ಸಿದ್ಧಾರ್ಥ್ ಕಿಶೋರ್ ದೇವ್, ಪಾರ್ಥೋ ಭಟ್ಟಾಚಾರ್ಯ, ಝುಬೈರ್ ಆಹ್ಮದ್, ಇವರು ವಿವಿಧ ಹುದ್ದೆಗಳ ಸಲಹೆಗಾರರಾಗಿರುವರು. ಅಧ್ಯಕ್ಷರ ಅಂತಿಮ ಅನುಮೋದನೆಯಂತೆ ಸಮಿತಿ ಸಂಯೋಜನೆ ಆಗಿದ್ದು ಅಕಲಿ ಕೊಂಘೈ ಮಾಧ್ಯಮ ಸಲಹಗಾರ, ಉಷಾ ಪಧೀ ಮತ್ತು ಪಾಥ್ ಕಾಲಿಯಾ ವಕ್ತಾರರು ಹಾಗೂ ಒಂಭತ್ತು ಸದಸ್ಯರುಗಳಿದ್ದಾರೆ. ಆ ಪೈಕಿ ಡಾ| ಶಿವ ಮೂಡಿಗೆರೆ ಮಹಾರಾಷ್ಟ್ರ ರಾಜ್ಯ ಸದಸ್ಯರಾಗಿರುವರು ಎಂದೂ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.

ಪ್ರಸ್ತುತ ಮುಂಬಯಿನ `ಆ್ಯಂಟಿ ಕರೆಪ್ಷನ್ & ಇಂಟೆಲಿಜೆನ್ಸ್ ಕಮಿಟಿ’ಯ ಅಧ್ಯಕ್ಷರಾಗಿ, ರಾಯಗಾಢ ಜಿಲ್ಲೆಯ ಮಾನವಾಧಿಕಾರದ ಅಧ್ಯಕ್ಷರಾಗಿ, ನೆರೊಲ್‍ನ ಮಣಿಕಂಠ ಸೇವಾ ಸಮಿತಿಯ ಟ್ರಸ್ಟಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಭವನ ಸಮಿತಿ  ಕಾರ್ಯಾಧ್ಯಕ್ಷರಾಗಿ,  ಧರ್ಮಶಾಸ್ತ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಅನುಪಮ ಸಮಾಜ ಸೇವೆಗಾಗಿ ಯುನಾೈಟೆಡ್ ಸ್ಟೇಟ್ ಆಫ್ ಅಮೇರಿಕಾ ಅಲ್ಲಿನ ಕಿಂಗ್‍ಸ್ ಯುನಿವರ್ಸಿಟಿ ಮತ್ತು ಎಸ್‍ಎಎಂಎಸ್ ಟ್ರಸ್ಟ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೌರವ ಡಾಕ್ಟರೇಟ್ ಸನದು ಪ್ರಾಪ್ತಿಸಿದೆ. ಬಾಳಸಂಗಾತಿ ಶ್ರೀಮತಿ ಜ್ಯೋತಿ ಮೂಡಿಗೆರೆ ಮತ್ತು ಮಾ| ಸಿದ್ಧಾರ್ಥ್ ಮತ್ತು ಮಾ| ಶ್ರೀಪಾದ ಎಂಬ ಇಬ್ಬರು ಪುತರೊಂದಿಗೆ ಉಪನಗರದ ನವಿಮುಂಬಯಿ ನೆರೂಳ್‍ನಲ್ಲಿ ಸುಖಮಯ ಜೀವನ ನಡೆಸುತ್ತಿದ್ದಾರೆ.

ಜನಪರ ಹೋರಾಟಗಾರ-ಆಪತ್ಭಾಂಧವ ಶಿವ ಮೂಡಿಗೆರೆ

ಮೋಟಣ್ಣ ಮೂಡಿಗೆರೆ ಹಾಗೂ ಸೀತಮ್ಮ ಮೂಡಿಗೆರೆ ದಂಪತಿ ಸುಪುತ್ರನಾಗಿ ಚಿಕ್ಕ ಮಂಗಳೂರು ಜಿಲ್ಲೆಯ ಮೂಡಿಗೆರೆ ಮೂಲತಃ ಶಿವ ಸುಮಾರು 8 ತಿಂಗಳ ಹಸುಗೂಸಿದ್ದಾಗಲೇ ತಂದೆಯನ್ನು ಕಳೆದುಕೊಂಡು ಜೀವನ ಎತ್ತ ಸಾಗುತ್ತದೋ ಎಂಬ ಅರಿವೆಯೇ ಇಲ್ಲದ ಆ ವಯಸ್ಸಲ್ಲಿ ತನ್ನ ಸೋದರ ಮಾವಂದಿರ ಆಶ್ರಯ, ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾಗಿ ದೇವಲ್ಕೆರೆ ಎಂಬ ಕುಗ್ರಾಮದ ಶಾಲೆಯೊಂದರಲ್ಲಿ  ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಗೋಣಿಬೀಡಿನ ಹೊಯ್ಸಳ ಪ್ರೌಢಶಾಲೆಯಲ್ಲಿ ಹಾಗೂ ಅಂಬೇಡ್ಕರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಂದುವರೆಸಿ ಒಂದು ಹಂತದ ಶಿಕ್ಷಣ ಮುಗಿಸಿ ಪ್ರೌಢವಸ್ಥೆಯಲ್ಲೇ  ಮುಂಬಯಿ ಸೇರಿ ಬೆಳೆದವರು.

ಮಾತೃಭೂಮಿ, ಮಾತೃಭಾಷೆಯ ಮೇಲೆ ತೀರ ವ್ಯಾಮೋಹವಿದ್ದ ಇವರು ಆ ದಿನಗಳಲ್ಲಿ ಕನ್ನಡಿಗರಿಗೆ ಹಿಂಸೆ ಮಾಡುತ್ತಿದ್ದ `ಲುಂಗಿ ಉಠಾವೋ, ಪುಂಗಿ ಬಜಾವೊ’ ಕ್ರಾಂತಿಯ ವಿರುದ್ಧ ರಾಜೀವ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ `ಪರಪ್ರಾಂತೀಯ ಸೇನೆ’ ಆರಂಭಿಸಿ ಮಹಾರಾಷ್ಟ್ರದ ಪ್ರಭಾರಿಯಾಗಿ ಸೇವೆ ಸಲ್ಲಿಸಿದವರು. ಇದರ ಮೂಲಕ  ಮಹಾರಾಷ್ಟ್ರದ ಕಲ್ಯಾಣ್ ಎಂಬಲ್ಲಿ ರೈಲ್ವೇ ಕಾರ್ಮಿಕರಿಗೆ ನಡೆಯುತ್ತಿದ್ದ ಹಿಂಸೆ, ಅನ್ಯಾಯಗಳ ವಿರುದ್ಧ ನ್ಯಾಯಾಲಯಕ್ಕೆ  ಹೋಗಿ ಚಳುವಳಿ ನಡೆಸಿ ನ್ಯಾಯ ದೊರಕಿಸಿದವರು.  ಪ್ರತೀವರ್ಷ ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾಥಿರ್üಗಳಿಗೆ ವಿದ್ಯಾಥಿರ್üವೇತನ, ಪುಸ್ತಕ ವಿತರಣೆ ಮುಂತಾದ ಸಮಾಜಸೇವೆ  ಮಾಡುತ್ತಾ  ಜನಮಾನಸದಲ್ಲಿ ಮೆಚ್ಚಿನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಎಲ್ಲಾ ಧರ್ಮ, ಜಾತಿಗಳೂ ಒಂದೇ ಎನ್ನುವ ಶಿವಣ್ಣ ವಿಶೇಷವಾಗಿ ನಮಗೆ ನಮ್ಮ ತಾಯ್ನಾಡು, ನಮ್ಮ ಪ್ರಾಂತ್ಯದ ಬಗ್ಗೆ ಒಲವು ಇದ್ದೇ ಇರುತ್ತದೆ ಎನ್ನುತ್ತಾರೆ. ಮುಂಬಯಿನ ಎಲ್ಲಾ ರಾಜಕೀಯ ವ್ಯಕ್ತಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವರು.

ನಮ್ಮವರು ಕೊರೋನಾ ಬಂತೆದ್ದು ತಮ್ಮೂರಿಗೆ ಓಡಿಬರುತ್ತಿರುವುದಲ್ಲ- ತವರು ಮನೆಗೆ ಆಗಮಿಸುವವರನ್ನು ಅರ್ಥೈಸಿ ಬಾಳೋಣ: ಡಾ| ಪ್ರಭಾಕರ ಭಟ್

ಮುಂಬಯಿ (ಬಂಟ್ವಾಳ), ಜೂ.11: ಮುಂಬಯಿ-ಗಲ್ಫ್‍ವಾಸಿ ತುಳುಕನ್ನಡಿಗರು ಕೊರೋನಾ ಬಂತೆದ್ದು ಓಡಿ ತಮ್ಮೂರಿಗೆ ಬರುತ್ತಿರುವುದಲ್ಲ. ಶತಮಾನದ ಇತಿಹಾಸ  ತಿಳಿಸುವಂತೆ ವಾರ್ಷಿಕವಾಗಿ ಎಪ್ರಿಲ್‍ನಿಂದ ಜೂನ್ ತಿಂಗಳ ತನಕ  ಇವರೆಲ್ಲರೂ ತಮ್ಮ ಪರಿವಾರ ಸಹಿತ ಹುಟ್ಟೂರಲ್ಲೇ ಕಳೆಯುವಂತಹದ್ದು ಸ್ವಾಭಾವಿಕವಾಗಿದೆ. ಇದು ನಮ್ಮವರೆಲ್ಲರೂ ಒಪ್ಪಿಕೊಳ್ಳುವಂತಹ ಸತ್ಯವೇ ಸರಿ ಎಂದು ಅಖಂಡ ಕರ್ನಾಟಕದ (ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಡುಪಿ) ಜನತೆಗೆ ಆರ್‍ಎಸ್‍ಎಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮನವರಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ, ಸಹೃದಯಿ, ಕಷ್ಟಕ್ಕೆ ಸ್ಪಂದಿಸುವ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಕಳೆದ ಸುಮಾರು ಮೂರು ತಿಂಗಳಿಂದ ನಮ್ಮ ಜನರು ದೇಶ-ವಿದೇಶಗಳಲ್ಲಿ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಜನ ಕೆಲಸ ಕಳೆದುಕೊಂಡು, ಇನ್ನು ಕೆಲವರು ಕೊರೋನ ವ್ಯಾಪಿಸುತ್ತಿರುವಾಗ ನಮ್ಮ ಊರಲ್ಲಿ ಹೆಚ್ಚಿನ ರಕ್ಷಣೆ ಸಿಗಬಹುದೆಂಬ ಆಶಯದಿಂದ ನೂರಾರು ಮಂದಿ ತಮ್ಮ ಮನೆಗೆ (ತವರು ಮನೆಗೆ) ಮರಳಿದ್ದಾರೆ. ಇನ್ನಷ್ಟು ಮಂದಿ ಬರಲು ತಯಾರಿಯಲ್ಲಿದ್ದಾರೆ. ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೆ ಕೈಯಲ್ಲಿ ಇದ್ದ ಹಣವನ್ನೂ ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ. ಇಂತಹ ತವರು ಮನೆಗೆ ಧಾವಿಸುವ ಅನಿವಾಸಿ ತುಳುಕನ್ನಡಿಗರನ್ನು ಅರ್ಥೈಸಿ ನಾವೆಲ್ಲರೊಂದೆ ಎಂಬ ಭಾವಮೂಡಿಸಿ ಸಹೋದರತ್ವ, ಭಾವೈಕ್ಯದಿಂದ ಬಾಳೋಣ ಎಂದೂ ಡಾ| ಪ್ರಭಾಕರ ಭಟ್ ತಿಳಿಸಿದ್ದಾರೆ.

ಮುಂಬಯಿ ಅಲ್ಲಿನ ವ್ಯವಸ್ಥೆ ಮತ್ತೆ ಸಹಜತೆಗೆ ಮರಳಲು ಒಂದಿಷ್ಟು ಸಮಯ ಹಿಡಿಯಬಹುದು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ  ಹೇಗಿರಬಹುದು? ನಾವು ಅರ್ಥ ಮಾಡಿ ಕೊಂಡಿದ್ದೇವೆಯೇ ! ಊರಿಗೆ ಬರುತ್ತಿರುವ ಆ ನಮ್ಮ ಬಂಧುಗಳನ್ನು ಬರುವುದು ಬೇಡ ಅನ್ನುವುದು ಸರಿಯೇ? ನಮಗೆ ಆ ಹಕ್ಕು ಇದೆಯೇ ? ಅವರು ಬರುತ್ತಿರುವುದು ಅವರ ಮನೆಗೆ. ಇಂದಲ್ಲ ನಾಳೆ ಬರಲೇಬೇಕಾದೆಡೆಗೆ!  ಆ ನಮ್ಮ ಸಹೋದರ  ಸಹೋದರಿಯರನ್ನು ಅಸ್ಪೃಶ್ಯ ಮನೋಭಾವದಿಂದ ಕಾಣುವುದು ಸರಿಯಲ್ಲ. ಅವರು ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡೇ ಬರುತ್ತಾರೆ. ಇಲ್ಲೂ ಅದೇ ರೀತಿ ಪಾಲಿಸುವಂತೆ ನೋಡಿ ಕೊಳ್ಳಬೇಕಾಗಿದೆ ಅಷ್ಟೇ ಎಂದೂ ಡಾ| ಭಟ್ ಕಲ್ಲಡ್ಕ ಕಿವಿಮಾತುಗಳನ್ನಾಡಿದ್ದಾರೆ.

ನಾವೆಲ್ಲರೂ ತಿಳಿದಂತೆ ತುಳುನಾಡ ಜನ ಮುಂಬಯಿಗೆ ಹೋಗಿ ಅಲ್ಲಿ ಆ ವಾಣಿಜ್ಯ ನಗರದಲ್ಲಿ ಅಥವಾ ಇಡೀ ಮಹಾರಾಷ್ಟ್ರದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಬಾಲಿವುಡ್ ರಂಗದಲ್ಲಿ ರಾರಾಜಿಸಿ ನಮ್ಮ ಜಿಲ್ಲೆಗೂ ಗೌರವ ತಂದಿತ್ತಿದ್ದಾರೆ ಇಲ್ಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮ ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಚಟುವಟಿಕೆಗೆ ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ಒಂದು ಅಂದಾಜಿನಂತೆ ಜಿಲ್ಲೆಯಲ್ಲಿ ನಡೆಯುವ ಬ್ರಹ್ಮಕಲಶ, ಜೀರ್ಣೋದ್ಧಾರ, ಗುಡಿ, ಗೋಪುರಗಳ ಕಾರ್ಯಗಳಿಗಾಗಿ ವರ್ಷಂಪ್ರತಿ ನೂರಾರು ಕೋಟಿ ಅವರು ದುಡಿದ ಹಣವನ್ನು ನೀಡಿದ್ದಾರೆ.  ಇದರಿಂದ ಇಲ್ಲಿಯ ನಮ್ಮ ಎಲ್ಲ ರೀತಿಯ ಜನಜೀವನ ಚೆನ್ನಾಗಿ ನಡೆದುಕೊಂಡು ಬಂದಿದೆ. ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ ಇದರಿಂದ ನಮ್ಮ ಕುಟುಂಬಗಳೂ ಸಶಕ್ತವಾಗಿದೆ.

ಆದರೆ ಈ ಬಾರಿ ನಾವು ನಮ್ಮ ಮನುಷ್ಯತ್ವವನ್ನು ಕಳೆದುಕೊಂಡಿದ್ದೇವೇಯೇ..? ಉತ್ತರ ಪ್ರದೇಶಕ್ಕೆ ಎಲ್ಲ ರಾಜ್ಯಗಳಿಂದಲೂ ಜನ ಪ್ರವಾಹದೋಪಾದಿಯಂತೆ ಬರುತ್ತಿದ್ದಾರೆ. ಈ ಲಕ್ಷಾಂತರ ಜನ (ಮಹಾರಾಷ್ಟ್ರವೂ ಸೇರಿ) ಬಂದಾಗಲೆಲ್ಲಾ ಆ ಯೋಗಿ ಸಂತೋಷದಿಂದ ತನ್ನೆರಡೂ ಕೈಗಳಿಂದ ಅವರನ್ನು ಸ್ವಾಗತಿಸುತ್ತಿದ್ದರೆ, ನಾವು ಕೇವಲ ಭೋಗಿಗಳಂತೆ ಇದ್ದೇವೆ ಎಂದು ಅನಿಸುತ್ತಿಲ್ಲವೇ?  ದಯಮಾಡಿ ನೋವು ದುಃಖದಲ್ಲಿರುವ ನಮ್ಮವರೇ ಆಗಿರುವ ಆ ಬಂಧುಗಳ ಬಗ್ಗೆ ಕೆಟ್ಟದಾಗಿ ಮಾತನಾಡದಿರೋಣ. ಅವರ ಜೊತೆ ಕೀಳಾಗಿ ವರ್ತಿಸದಿರೋಣ. ಈ ಜಿಲ್ಲೆಯ ಜನರು ಸಹೃದಯಿಗಳು, ಕಷ್ಟಕ್ಕೆ ಸ್ಪಂದಿಸುವವರು, ಬುದ್ಧಿವಂತರು ಎಂಬುದನ್ನು ತೋರಿಸಲು ದೇವರೇ ಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.

ಸೌದಿ ಅರೇಬಿಯಾ-ಜಿದ್ದಾದಲ್ಲಿನ ಅನಿವಾಸಿ ಕನ್ನಡಿಗರು ತವರಿಗೆ - ಇಂಡಿಯನ್ ಸೋಶಿಯಲ್ ¥sóÉÇೀರಂನಿಂದ ಆರೋಗ್ಯ ಸುರಕ್ಷಾ ಕಿಟ್ ವಿತರಣೆ

ಮುಂಬಯಿ (ಜಿದ್ದಾ), ಜೂ.14: ಅನಿವಾಸಿಗರನ್ನು ಮರಳಿ ಕರೆತರುವ ಭಾರತ ಸರಕಾರದ ವಂದೇ ಭಾರತ್ ಮಿಷನ್‍ನ ಭಾಗವಾಗಿ ಕಳೆದ ಶನಿವಾರ (ಜೂ.13) ನಿಗದಿಯಾಗಿ ಜಿದ್ದಾ ಬೆಂಗಳೂರು ವಿಮಾನ ಮೂಲಕ ಹೊರಟ ಅನಿವಾಸಿ ಕನ್ನಡಿಗರಿಗೆ  ಇಂಡಿಯನ್ ಸೋಶಿಯಲ್ ¥sóÉÇೀರಂ ಜಿದ್ದಾ ಸಂಸ್ಥೆಯು ಪ್ರಯಾಣಿಕರಿಗೆ ಆಹಾರ ಮತ್ತು ಆರೋಗ್ಯ ಸುರಕ್ಷಾ ಸಾಮಾಗ್ರಿಗಳನ್ನೊಳಗೊಂಡ  ಕಿಟ್‍ಗಳನ್ನು ವಿತರಿಸಿ ಶುಭಾರೈಸಿತು.

ಇಂಡಿಯನ್ ಸೋಶಿಯಲ್ ¥sóÉÇೀರಂ ಅವಿರತ ಪ್ರಯತ್ನದಿಂದಾಗಿ ತವರಿಗೆ ಇಲ್ಲಿನ ಅನಿವಾಸಿ ಕನ್ನಡಿಗರು ಮರಳುವಂತಾಗಿದ್ದು, ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟುವ ಆರೋಗ್ಯ ಸುರಕ್ಷಾ ಕಿಟ್ ಮಾಸ್ಕ್, ಕೈಕವಚ, ಸ್ಯಾನಿಟೈಸರ್ ಮುಂತಾದ ಸಾಮಾಗ್ರಿಗಳನ್ನು ಒದಗಿಸಿತ್ತು.

ಹಲವು ಗರ್ಭಿಣಿ ಸ್ತ್ರೀಯರು ಮತ್ತು ಕಾಯಿಲೆ ಪೀಡಿತ ಅನಿವಾಸಿ ಕನ್ನಡಿಗರ ವಾಪಾಸಾತಿಗಾಗಿ  ಇಂಡಿಯನ್ ಸೋಶಿಯಲ್ ¥sóÉÇೀರಂ ಜಿದ್ದಾ,  ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮನವಿ ಮಾಡಿತ್ತು. ಕಳೆದ ಎರಡು ತಿಂಗಳುಗಳಿಂದ ಈ ಉದ್ದೇಶಕ್ಕಾಗಿ ಇಂಡಿಯನ್ ಸೋಶಿಯಲ್ ¥sóÉÇೀರಂ ನಾಯಕರು ಮತ್ತು ಕಾರ್ಯಕರ್ತರು ಪ್ರಯತ್ನ ಪಟ್ಟಿದ್ದರು. ಇದರ ¥sóÀಲವಾಗಿ ಇದೀಗ  ಅವರಲ್ಲಿ ಹಲವರು ಈ ವಿಮಾನದ ಮೂಲಕ ತವರಿಗೆ ಮರಳಿದ್ದಾರೆ.  ತಬೂಕ್ ಪ್ರಾಂತ್ಯದಿಂದ ಮಂಗಳೂರು ಮೂಲದ ನಾಲ್ಕು  ಮಂದಿ ಗರ್ಭಿಣಿ ಸ್ತ್ರೀಯರು, ಮಕ್ಕಳು ಮತ್ತು ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಜಿದ್ದಾದ ಅನಿಲ್ ಡಿಸೋಝ ಎಂಬವರು  ಈ ವಿಮಾನದ ಮೂಲಕ ತವರಿಗೆ ಹೊರಟಿದ್ದರು.

ಸೌದಿ ಅರೇಬಿಯಾದಲ್ಲಿ ಕೋವಿಡ್ 19 ಲಾಕ್ ಡೌನ್ ಆರಂಭವಾದಂದಿನಿಂದ ಇಂಡಿಯನ್ ಸೋಶಿಯಲ್ ¥sóÉÇೀರಂ ಇಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗಾಗಿ ನಿರಂತರ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದು ಸುಮಾರು 11000 ಮಂದಿಗೆ ಕಿಟ್ ವಿತರಿಸಿದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಸಲಹೆ ಸೂಚನೆಗಳನ್ನು ಒದಗಿಸಿದೆ. ಇಂದು ಪ್ರಯಾಣಿಕರ ಬೀಳ್ಕೊಡುಗೆಯ ಸಂಧರ್ಭದಲ್ಲಿ ಐಎಸ್‍ಎಫ್ ಅಧ್ಯಕ್ಷ ಕಲಂದರ್ ಸೂರಿಂಜೆ, ಕಾರ್ಯಕರ್ತರಾದ ಮುಸ್ತಫಾ, ರಷೀದ್ ಕಿನ್ನಿಗೋಳಿ, ರಫೀಕ್ ಬುಡೋಳಿ, ಆಸಿಫ್ ಮೂಳೂರು, ಆಸೀಫ್ ಗಂಜಿಮಠ, ಹಫಿûೀಝ್ ಮುಂತಾದವರು ಉಪಸ್ಥಿತರಿದ್ದರು.

ಶಾರ್ಜಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚಾರ್ಟರ್ಡ್ ಫೆ ್ಲೈಟ್ - ಕೋಟಿಗೊಬ್ಬ ಕನ್ನಡಿಗ ಪ್ರವೀಣ್ ಶೆಟ್ಟಿ ವಕ್ವಾಡಿಗೆ ಪ್ರಯಾಣಿಕರ ಶ್ಲಾಘನೆ

ಮುಂಬಯಿ, ಜೂ.14: ಗಲ್ಪ್ ರಾಷ್ಟ್ರದ ಶಾರ್ಜಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ಚಾರ್ಟರ್ಡ್ ವಿಮಾನ ಆಗಮಿಸಿದ್ದು, ಈ ಪ್ರಯಾಣಕ್ಕೆ ವಿಶೇಷವಾಗಿ ಶ್ರಮಿಸಿದ ದುಬಾಯಿನ ಪ್ರತಿಷ್ಠಿತ ಉದ್ಯಮಿ, ಫಾರ್ಚೂನ್ ಸಮೂಹದ ಕಾರ್ಯಾಧ್ಯಕ್ಷ, ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರನ್ನು ಪ್ರಯಾಣಿಕರೆಲ್ಲರೂ ಅಭಿವಂದಿಸಿದ್ದಾರೆ.

ಕಳೆದ ಶನಿವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೆಲ್ಲರೂ ಈ ಸುಖಮಯ ಪ್ರಯಾಣಕ್ಕೆ ಅನುಕೂಲಕರ ವ್ಯವಸ್ಥೆ ಮಾಡಿದ್ದ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ಇದರ ಸಹಾಯ ಹಸ್ತ ವಿಭಾಗ ಮತ್ತು ಸದಸ್ಯರೆಲ್ಲರಿಗೂ ಮತ್ತು ವಿಶೇಷವಾಗಿ ಪ್ರವೀಣ್ ಶೆಟ್ಟಿ ವಕ್ವಾಡಿ ಅವರ ಸತತ ಪ್ರಯತ್ನದಿಂದ ಇದು ಸಾಧ್ಯವಾಗಿ ಹಲವು ಗರ್ಭಿಣಿಯರು, ಮಕ್ಕಳು, ಜೇಷ್ಠ ನಾಗರೀಕರು ಮತ್ತು ಅಸ್ವಸ್ಥ ಕನ್ನಡಿಗರು ಕರುನಾಡು ಸೇರುವಂತಾಯಿತು ಎಂದು ಮನದಾಳದಿಂದ ಉಪಕಾರ ಸ್ಮರಿಸಿದ್ದಾರೆ.

ಪ್ರವೀಣ್ ಶೆಟ್ಟಿ ವಕ್ವಾಡಿ ಅವರು ಕಷ್ಟದಲ್ಲಿರುವ ಕನ್ನಡಿಗರನ್ನೆಲ್ಲಾ ತಾಯ್ನಾಡಿಗೆ ಕಳುಹಿಸಿ ಕೊಡುವ ಸೇವೆ ಮೆಚ್ಚಲೇಬೇಕು. ಪ್ರವೀಣ್ ಶೆಟ್ಟಿ ಅವರು ಕೇವಲ ಹೆಸರು, ಕೀರ್ತಿ ಮತ್ತು ದುಡ್ಡಿಗೆ ಮಾಡಿದ ಕಾರ್ಯ ಇದಲ್ಲ. ಮನವೀಯ ಕಳಕಳಿ ಅನ್ನುವುದು ಅವರಲ್ಲಿನ ಸದ್ಗುಣವಾಗಿದೆ. ಉದ್ಯೋಗ ಮತ್ತು ಆರೋಗ್ಯದಿಂದ ಕಂಗೆಟ್ಟವರಿಗೆ ಅವರು ಅನುವು ಮಾಡಿಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅವರು ತೋರುತ್ತಿರುವ ಸಹಾಯ ಹಸ್ತ ನಿಜವಾಗಲೂ ಬಣ್ಣಿಸಲು ಅಸಾಧ್ಯ, ಇವರು ಕೋಟಿಗೊಬ್ಬ ಕನ್ನಡಿಗ ಎಂದೇಳಲು ನಮಗೆ ಹಿರಿಮೆ ಅನ್ನಿಸುತ್ತಿದೆ. ಅವರಿಂದ ಇದೊಂದು ಸಾಧನೀಯ ಮತ್ತು ಶ್ಲಾಘನೀಯ ಸೇವೆ ಆಗಿದ್ದು ಮತ್ತೊಮ್ಮೆ ಹೆಮ್ಮೆಯ ಕನ್ನಡಿಗರು ತಮ್ಮತಮ್ಮ ಕುಟುಂಬದ ವತಿಯಿಂದ ಮನದುಂಬಿದ ಧನ್ಯವಾದಗಳನ್ನು ಹೇಳುತ್ತೇವೆ ಎಂದು ರಫೀಕ್ ಆಲಿ, ಚಂದ್ರಶೇಖರ್ ಬೆಂಗಳೂರು, ಟೀಂ ಸದಸ್ಯೆ ಮಮತಾ ಬೆಂಗಳೂರು ಅವರು ಶಾರ್ಜಾ ಏರ್‍ಪೆÇೀರ್ಟ್‍ನಿಂದ ಹೊರಡುವ ಮುನ್ನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi