Brief Mumbai - Mangalore news with pictures
Kemmannu News Network, 25-06-2020 16:26:46
`ಶಿಕ್ಷಣ ದಾಸೋಹದ ಮಹಾನ್ ನಾಯಕ’ ಪೆÇ್ರ| ಎ.ವೈ.ನಾಯಕ್ ಸ್ಮರಣೆ - ಡಾ. ಸದಾನಂದ ಪೆರ್ಲ
ಮುಂಬಯಿ, ಜೂ.24: ಕಲಬುರಗಿ ದಕ್ಷಿಣ ಕನ್ನಡ ಸಂಘದ ಉಪಾzs್ಯಕ್ಷರಾಗಿ ಮತ್ತು ಸಂಘದ ಸರ್ವತೋಮುಖ ಬೆಳವಣೆಗಾಗಿ ದುಡಿದ ಹಿರಿಯ ಸದಸ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶ್ಯೆಕ್ಷಣಿಕ ರಂಗದ ಮಹಾನ್ ವ್ಯಕ್ತಿ ಕಾರವಾರ ಮೂಲದ ಪೆÇ್ರ್ರ! ಅಚ್ಯುತ ಯಶವಂತ್ ನಾಯ್ಕ್ (ಎ.ವೈ ನಾಯಕ್) ಅಗಲುವಿಕೆ ನಾಡಿಗೆ ತುಂಬಲಾರದ ನಷ್ಟ.
ಕಲಬುರಗಿ
ಯ ಮನೆ ಮನೆಯಲ್ಲೂ ‘ನಾಯಕ್ ಸರ್’ ಎಂದು ಖ್ಯಾತರಾದ ಆದರ್ಶ ಅಧ್ಯಾಪಕರು. ಕಲಬುರಗಿ ಭಾಗದಲ್ಲಿ ಮನೆ ಮನೆಗೆ ಶಿಷ್ಯ ವರ್ಗವನ್ನು ಹೊಂದಿದ ಅವರು ರಸಾಯನ ಶಾಸ್ತ್ರ ಟೀಚರ್ (ಕೆಮಿಷ್ಟ್ರೀ ಮಾಸ್ಟರ್) ಎಂದೇ ಜನಪ್ರಿಯರು. ವಿದ್ಯಾರ್ಥಿಗಳಿಗೆ ಚಾಕಲೇಟು, ಊಟ ತಿಂಡಿ ನೀಡಿ ಸಲಹಿದ ಮಾತೃಹೃದಯಿ ಮಾಸ್ಟರ್. ಟ್ಯೂಶನ್ ಕ್ಲಾಸಿನಲ್ಲಿ ಮಕ್ಕಳಿಗೆ ಉತ್ತೇಜನ ನೀಡಿ ಪಾಠ ಮನಮುಟ್ಟುವಂತೆ ಮಾಡುವ ಅವರ ಕಲಿಸುವ ಜಾಣ್ಮೆಯಿಂದಾಗಿ ಯಾವುದೇ ಕಾಲೇಜಾಗಲಿ ‘ನಾಯಕ್ ಸರ್’ ಟ್ಯೂಶನ್ಗೆ ಮುಗಿಬೀಳುತ್ತಿದ್ದರು, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಇಂದು ವಿಶ್ವದ ಮೂಲೆ ಮೂಲೆಯಲ್ಲಿ ಅವರ ಶಿಷ್ಯಂದಿರಿದ್ದಾರೆ. ‘ನಾಯಕ್ ಸರ್’ ವಿಧಿವಶರಾದ ಬೆನ್ನಲ್ಲೆ ಅಮೇರಿಕಾ, ದುಬೈ, ಸೌದಿ ಅರೇಬಿಯಂ ಮುಂತಾದೆಡೆಗಳ ರಾಷ್ಟ್ರದಲ್ಲಿರುವ ವಿದ್ಯಾರ್ಥಿಗಳಿಗೆ ದಿಗಿಲುಂಟಾಗಿ ಕಂಬನಿ ಮಿಡಿದಿದ್ದಾರೆ.
ಕಲಬುರಗಿಯ ದಕ್ಷಿಣಕನ್ನಡ ಸಂಘದ ದೊಡ್ಡ ಕೊಡುಗೈದಾನಿ. ಹಿರಿಯಸದಸ್ಯರಾಗಿ ಸಂಘದ ಸಾಮಾಜಿಕ ಸೇವಾ ಕಾರ್ಯಗಳಿಗೆ ಬೆನ್ನಲುಬಾದವರು. ಸಂಘದ ಸದಸ್ಯರಿಗೆ ಮತ್ತು ಸಮಾಜದ ಬಡಬಗ್ಗರಿಗೆ ತಮ್ಮ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ನೀಡಿ ಶಿಕ್ಷಣವನ್ನು ದಾಸೋಹಕ್ಕೆ ತಂದು ನಿಲ್ಲಿಸಿದವರು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಕಷ್ಟ ಸುಖಕ್ಕೆ ಸ್ಪಂದಿಸಿದವರು. ಕಲಬುರಗಿಯಲ್ಲಿ 2003-04 ರಲ್ಲಿ ಮಾತೋಶ್ರೀ ಕಲ್ಯಾಣಿ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರ ಅಧೀನದಲ್ಲಿ ಶ್ರೀಗುರು ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾರಂಭಿಸಿ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಅದರಲ್ಲೂ ಪಿ. ಯು. ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಶಿಕ್ಷಣತಜ್ಞ. ಕಲಬುರಗಿ ಭಾಗದಿಂದ ಪಿಯುಸಿಯಲ್ಲಿ ರ್ಯಾಂಕ್ ಗಳಿಸಿ ರಾಜ್ಯದ ಗಮನ ಸೆಳೆಯುವಂತೆ ಮಾಡಿದ ಮುನ್ನೋಟ ಹೊಂದಿದ ಶಿಕ್ಷಣಪ್ರೇಮಿ. 16 ವರ್ಷಗಳಲ್ಲಿ ಹೆಮ್ಮರವಾಗಿ ಬೆಳದ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡದ್ದÀಲ್ಲ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದ ಯಶೋಗಾಥೆ ಹುಬ್ಬೇರಿಸುವಂಥದ್ದು. ಶ್ರೀಗುರು ವಿದ್ಯಾಪೀಠದ ಬಸವರಾಜ ಡಿಗ್ಗಾವಿ ಹಾಗೂ ಪುತ್ರ ನಿತಿನ್ ನಾಯಕ್ ಅವರ ಸಹಯೋಗದಲ್ಲಿ ವಿದ್ಯಾಸಂಸ್ಥೆ ಕಲಬುರಗಿಯಲ್ಲಿ ಮನೆ ಮಾತಾಯಿತು. ವಿದ್ಯಾರ್ಥಿಗಳಿಗೆ ಊಟೋಪಚಾರದೊಂದಿಗೆ ಶಿಕ್ಷಣ ನೀಡುವ ವ್ಯವಸ್ಥೆ ಒಂದು ಮಾದರಿ ಎನಿಸಿತು. ತನ್ನ ಪೂರ್ಣ ಸಮಯವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿರಿಸಿದ ನಾಯಕ್ ಅವರು ಶ್ರೀಗುರು ಕಾಲೇಜಿನ ಆಡಳಿತದೊಂದಿಗೆ ಪಾಠವನ್ನು ಮಾಡುವ ನಾಯಕ್ ಅವರ ಕಾರ್ಯಕ್ಷಮತೆ ಜನಮೆಚ್ಚುವಂಥದ್ದು.
1946 ಜುಲೈ 31 ರಂದು ಕಾರಾವಾರದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅಂಕೋಲಾದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಬಳಿಕ ಕಾರವಾರ ದಲ್ಲಿ ಪಿ.ಯು.ಸಿ ಪದವಿ ಶಿಕ್ಷಣದ ನಂತರ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ. (ರಸಾಯನ ಶಾಸ್ತ್ರ) ಅಭ್ಯಾಸ ಮಾಡಿ ತೇರ್ಗಡೆ ಹೊಂದಿದರು. ನಂತರ ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಅಧ್ಯಯನ ಮಾಡಿದ ಪಂಡಿತರಿವರು. ತುಮಕೂರು, ಮಂಗಳೂರು, ಕಲಬುರಗಿ ಮತ್ತು ಹಾಸನ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ನಿವೃತ್ತಿಯ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಶಿಕ್ಷಣರಂಗದ ಬೆಳವಣಿಗೆಗೆ ನಾಯಕತ್ವ ನೀಡಿದವರು ನಾಯಕರು. ಸರಳ ಸಜ್ಜನಕೆಯ ಸಾಕಾರಮೂರ್ತಿ. ಒಬ್ಬ ಶಿಕ್ಷಕನಿಗೆ, ಹಾಗೂ ಶಿಕ್ಷಣ ಸಂಸ್ಥೆ ನಡೆಸುವವರಿಗೆ ಇರಬೇಕಾದ ಬದ್ಧತೆಗೆ ಮಾನಬಿಂದು ‘ನಾಯಕ್ ಸರ್’. ಬಡಬಗ್ಗರ ಬಗ್ಗೆ ಪ್ರತಿಭಾವಂತರ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೋತ್ಸಾಹ ನೀಡಿದ ಮೇರು ವ್ಯಕ್ತಿತ್ವ. ನಾಡು ಕಂಡ ಒಬ್ಬ ನಿಜಾರ್ಥದ ‘ನಾಡೋಜ’ ನಾಯಕ್ ಅವರು. ವ್ಯಕ್ತಿತ್ವದಲ್ಲಿ ಚ್ಯುತಿ ಬರದ ಹಾಗೆ ಕೊನೆ ಉಸಿರಿನ ತನಕ ಶಿಕ್ಷಕ ವೃತ್ತಿ, ಶಿಕ್ಷಣ ಧರ್ಮವನ್ನು ಕಾಯ್ದುಕೊಂಡವರು ಅಚ್ಯುತ ನಾಯಕ್.
ಅಸೂಯೆ ಎಂಬ ಪದವನ್ನ್ನು ಮರೆತ ಧೀಮಂತ. ತನ್ನೊಂದಿಗಿರುವವರಿಗೆ ಹೊಸದಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಕರಜೋಡಿಸಿದ ಮಹಾನ್ ವ್ಯಕ್ತಿ ಅವರು. ಇನ್ನು ಹಲವು ಶಿಕ್ಷಣ ಸಂಸ್ಥೆ ಆರಂಭಿಸಲು ಕೂಡಾ ಗುರುವಾದವರು. ‘ಇಂದು ವೈದ್ಯನಾಗಿ ಕಾಣಿಸಿಕೊಳ್ಳಬೇಕಾದರೆ ನಾಯಕ್ ಸರ್ ಅವರ ಶಿಕ್ಷಣ ಕಾರಣ’ ಎನ್ನುತ್ತಾರೆ ಡಾ.ರಾಜೇಶ್ ಕಡೇಚೂರ್. ‘ಮನೆಗೆ ಡಜನ್ ವಿದ್ಯಾರ್ಥಿಗಳು ನಾಯಕ್ ಸರ್ ಶಿಷ್ಯಂದಿರಾಗಿ ಸಿಗುತ್ತಾರೆ’ ಎನ್ನುತ್ತಾರೆ ಶ್ರೀನಿವಾಸ್ ಆಚಾರ್ಯರು. ‘ಉಪಕಾರ ಸ್ಮರಣೆಗೆ ಇನ್ನೊಂದು ಹೆಸರು ನಾಯಕ್ ಸರ್, ಸಹಾಯ ಮಾಡಿದ ಮಿತ್ರರ ಹೆಸರು ಹೇಳಿ ತನ್ನ ಕ್ಲಾಸಿನಲ್ಲಿ ಸೋದಾಹರಣ ಪ್ರಸಂಗ ತಿಳಿಸುವ ಉತ್ತಮ ಮನಸ್ಸಿನವರು’ ಎಂದು ಅವರ ಆಪ್ತರೂ, ಉದ್ಯಮಿಗಳು ಆದ ರವೀಂದ್ರನಾಥ ಶೆಟ್ಟಿ ಅವರ ಮಾತು.
‘ನೊಂದವರು, ಬೆಂದವರು, ಕಷ್ಟದಲ್ಲಿರುವವರಿಗೆ ಕರೆದು ದಾನ ಮಾಡುವ ಗುಣ ಸಂಪನ್ನರು’ ಎನ್ನುತ್ತಾರೆ ಉದ್ಯಮಿ ನರಸಿಂಹ ಮೆಂಡನ್. “ಬಡವರೆಂದು ಕರೆ ಮಾಡಿ ದೂರವಾಣಿ ಮೂಲಕ ಹೇಳಿದರೆ ಅಂತಹ ವಿದ್ಯಾರ್ಥಿಗಳಿಗೆ ಸೀಟು ನೀಡಿ ಸಿಕ್ಷಣ ಮುಂದುವರಿಸಲು ನೆರವಾಗುವಂಥ ದೊಡ್ಡ ಮನಸ್ಸಿನ ವ್ಯಕ್ತಿ ” ಎನ್ನುತ್ತಾರೆ ಉದ್ಯಮಿ ಸತೀಶ್ ವಿ.ಗುತ್ತೇದಾರ್.ಹೀಗೆ ಸರ್ವರ ಪ್ರೀತಿಗೆ ಪಾತ್ರರಾದ ಎ.ವೈ.ನಾಯ್ಕ್ ಪತ್ನಿ ನಳಿನಿ ಎ ನಾಯ್ಕ್, ಪುತ್ರರಾದ ನಿತೀನ್ ಎ ನಾಯ್ಕ್ ಗುರುರಾಜ ಎ ನಾಯ್ಕ್, ಪುತ್ರಿ ಮನಿಷಾ, ಆಳಿಯ ನವನೀತ, ಸೊಸೆಯಯಂದಿರಾದ ನೇಹಾ, ರಂಜನಾ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಾಯಕ್ ಅವರು ಹಚ್ಚಿದ ಶಿಕ್ಷಣ ದೀಪ ಪ್ರಜ್ವಲಿಸುವಂತಾಗಲು ಅವರ ಆದರ್ಶವೇ ದಾರಿದೀಪ. ದಕ್ಷಿಣ ಕನ್ನಡ ಸಂಘದ ಹಿರಿಯ ಸದಸ್ಯರಾಗಿ ಅವರು ತೋರಿದ ಪಥ ಭವಿತವ್ಯದ ಮಹಾನ್ ಪಥವಾಗಲಿ.
ಭಾರತೀಯನ ಮಾನವೀಯತೆಗೆ ಮನ ಮಿಡಿದ ಬ್ರಿಟಿಷ್ ಸಹೃದಯಿ - ಬಂಟ್ವಾಳ ಗೂಡಿನಬಳಿ ನಿವಾಸಿ ಅದ್ರಾಮ ಬ್ಯಾರಿಗೆ ಹಜ್ಜ್ಯಾತ್ರೆಗೆ ನೆರವು
ಮುಂಬಯಿ (ಬಂಟ್ವಾಳ), ಜು.24: ಬಂಟ್ವಾಳ ತಾಲೂಕು ಪಾಣೆಮಂಗಳೂರು ಗೂಡಿನಬಳಿ ನಿವಾಸಿ ಅದ್ರಾಮ ಬ್ಯಾರಿ ಇವರಿಗೆ ಲಂಡನ್ನ ಬ್ರಿಟೀಷ್ ಉದ್ಯಮಿ ಬಿಲಾಲ್ ಚಾವಲಾ ಇವರು ಹಜ್ಜ್ಯಾತ್ರೆಗೆ ನೆರವು ನೀಡಿ ಭಾರತೀಯನ ಮಾನವೀಯತೆಗೆ ಪೆÇ್ರೀತ್ಸಾಹಿಸಿದ್ದು, ನನ್ನ ತಂದೆಯವರ ಜೊತೆಗೆ ತಾಯಿಗೂ ಕೂಡ ಹಜ್ಜ್ ನಿರ್ವಹಿಸುವ ಭಾಗ್ಯವು ಒಲಿದು ಬಂದಿದೆ ಎಂದು ಅದ್ರಾಮರ ಪುತ್ರ ಇಲಿಯಾಸ್ ಗೂಡಿನಬಳಿ ತಿಳಿಸಿದ್ದಾರೆ.
ಜಾಗತಿಕವಾಗಿ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ತನ್ನ ಹಜ್ಜ್ಯಾತ್ರೆಯನ್ನು ಮೊಟಕುಗೊಳಿಸಿ ಯಾತ್ರೆಗಾಗಿಟ್ಟ ಹಣವನ್ನು ಅವಶ್ಯಕರಿಗೆ ಆಹಾರ ಕಿಟ್ ಒದಗಿಸಿ ಮಾನವೀಯತೆ ಮೆರೆದ ಅದ್ರಾಮ ಬ್ಯಾರಿ ಬಗೆಗಿನ ವರದಿ ಯೂರೋಪ್ ಖಂಡದಾದ್ಯಂತ ದಿ ಫೈವ್ ಪಿಲ್ಲರ್ಸ್ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಅದ್ರಾಮರ ಗುಣಗಾನ ಕಂಡ ಲಂಡನ್ನಿನ ಉದ್ಯಮಿ ಬಿಲಾಲ್ ಚಾವಲಾ ಎಂಬವರು ಶ್ರಮಪಟ್ಟು ಇಲಿಯಾಸ್ರನ್ನು ಸಂಪರ್ಕಿಸಿದ್ದರು. ನಿಮ್ಮ ತಂದೆಯವರ ಮುಖದ ಮುಗ್ದತೆಗೆ ನನ್ನ ಹೃದಯವನ್ನು ಮಿಡಿದಿದೆ. ನನಗೆ ಮದುವೆಯಾಗಿ ಮೂರು ವರ್ಷ ಕಳೆದಿದೆ ಅದರೆ ನಮಗೊಂದು ಮಗುವನ್ನು ಕರುಣಿಸಲು ದೇವನಲ್ಲಿ ನಿಮ್ಮ ಕುಟುಂಬದವರಲ್ಲಿ ಪ್ರಾಥಿರ್üಸಿ ಎಂಬುವುದಾಗಿ ಬಿಲಾಲ್ ಚಾವಲಾ ಕೋರಿಕೆಯಿತ್ತು ಹಜ್ಜ್ ವೆಚ್ಚ ನಾನು ಭರಿಸುವೆ ಅಂದಿದ್ದರು ಎನ್ನಲಾಗಿದೆ.
ಘಟನೆಯ ಹಿನ್ನಲೆ:
ಲಂಡನ್ ನಿವಾಸಿಯಾದ ಚಾವಲಾರು ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ನನ್ನ ಕುಟುಂಬದ ಹಜ್ಜ್ ವೆಚ್ಚ ಭರಿಸುವ ಬಗ್ಗೆ ನನ್ನ ಜೊತೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ನನ್ನ ತಂದೆಯವರು ಏಕಾಏಕಿ ನಿರಾಕರಿಸಿದ್ದರು. ನನ್ನ ತಂದೆಯವರ ಹಜ್ಜ್ ಜವಾಬ್ದಾರಿಯನ್ನು ಈಗಾಗಲೇ ನಮ್ಮ ಧಾರ್ಮಿಕ ಮುಖಂಡರಾದ ಪಾಣಕ್ಕಾಡ್ ಸಯ್ಯದ್ ಮನವ್ವರ್ ಅಲಿ ಶಿಯಾಬ್ ತಂಙಳರು ವಹಿಸಿ ಕೊಂಡಿರುವ ಬಗ್ಗೆ ಚಾವಲಾರಿಗೆ ಮಾಹಿತಿ ನೀಡಿದರೂ, ಪದೇಪದೇ ನನ್ನಲ್ಲಿ ಕೋರುತ್ತ್ತಿದ್ದ ಆ ವ್ಯಕ್ತಿಯಲ್ಲಿ ನಾನು ನನ್ನ ತಾಯಿಯ ಹಜ್ಜ್ ಬಗ್ಗೆ ತಿಳಿಸಿದ್ದೆ. ಅಸ್ತು ಎಂದ ಚಾವಲಾರು ಹಣ ರವಾನಿಸಲು ನನ್ನ ಬ್ಯಾಂಕ್ ಖಾತೆ ಸಂಖ್ಯೆ ಕೇಳಿದ್ದರು. ನನ್ನ ತಂದೆಯವರ ಅಕೌಂಟ್ ನಂಬರ್ ನೀಡಿದರೂ ಆ ವ್ಯಕ್ತಿಗೆ ಖಾತೆ ದೋಷದಿಂದ ಹಣ ಕಳುಹಿಸಲು ಸಾಧ್ಯವಾಗದೆ ಮತ್ತೆ ಕರೆಮಾಡಿ ಬೇರೆ ಖಾತೆ ಸಂಖ್ಯೆ ಇದ್ದರೆ ಕೊಡಿ ಎಂದು ಬೇಡಿಕೆ ಇಟ್ಟಾಗ, ನನ್ನ ಆಪ್ತರು ಇದೊಂದು ವಂಚನೆಯ ಜಾಲ ಆಗಿರಬಹುದು, ನಮ್ಮ ಖಾತೆಯಲ್ಲಿರುವ ಹಣ ದೋಚುವ ಉಪಾಯ ಆಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ನನಗೆ ಜಾಗರೂಕನಾಗಿರಲು ಎಚ್ಚರಿಕೆ ನೀಡಿದ್ದರು. ಕೊನೆಗೆ ನಾನು ಲಂಡನ್ನಲ್ಲಿ ಉದ್ಯೋಗದಲ್ಲಿರುವ ಗೆಳೆಯ ಆಸಿಫ್ ಬಜ್ಪೆ ಇವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಭಾರತೀಯನಿಗೆ ಗುರುತು ಪರಿಚಯವಿಲ್ಲದ ಲಂಡನ್ ವ್ಯಕ್ತಿ ಸಹಾಯ ಮಾಡುವುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದೆ. ಆಸಿಫ್ ಕೂಡಾ ಇದು ಮೋಸದ ಜಾಲವಾಗಿರಬಹುದೆಂದು ಎಂದು ಅನುಮಾನಪಟ್ಟರು. ಬಳಿಕ ತಾನು ಸದಸ್ಯತ್ವ ಹೊಂದಿರುವ ಕೆಸಿಎಫ್ ಲಂಡನ್ ಘಟಕದ ಮುಖಂಡರಿಗೆ ಮಾಹಿತಿ ನೀಡಿ ಈ ಬಗ್ಗೆ ಚರ್ಚಿಸಿ, ಆಸಿಫ್ ಚಾವಲಾರಿಗೆ ತನ್ನ ಬ್ಯಾಂಕ್ ಸಂಖ್ಯೆ ನೀಡಿದ್ದೆನು ಎಂದು ಇಲಿಯಾಸ್ ಗೂಡಿನಬಳಿ ತಿಳಿಸಿದರು.
ಆಶ್ಚರ್ಯವೆಂಬಂತೆ ಒಂದೆರಡು ಗಂಟೆಯೊಳಗೆ ಚಾವಲಾರು ನನ್ನ ಪೆÇೀಷಕರ ಹಜ್ಜ್ಯಾತ್ರೆಗೆ ಬೇಕಾಗುವ ಮೊತ್ತವನ್ನು ಆಸೀಫ್ರ ಖಾತೆಗೆ ವರ್ಗಾಹಿಸಿದ್ದರು. ಈ ಮೊತ್ತವನ್ನು ಚೆಕ್ ಮೂಲಕ ಕೆಸಿಎಫ್ ಸದಸ್ಯರು ನನ್ನ ಮನೆಗೆ ತಲುಪಿಸಿ ನಮ್ಮನ್ನೆಲ್ಲ ಆಶ್ಚರ್ಯ ಚಕಿತರನ್ನಾಗಿಸಿದ್ದರು. ಸಹಕರಿಸಿದ ಕೆಸಿಎಫ್ ಲಂಡನ್ ಹಾಗೂ ಇಂಡಿಯನ್ ಘಟಕಕ್ಕೂ ನಾನು ಧನ್ಯವಾದ ಸಲ್ಲಿಸಿ ಅಲ್ಲಾಹನು ತಮ್ಮ ಸೇವೆಗೆ ತಕ್ಕಂತೆ ಕರುಣಾಮಯಿಯಾದ ಏಕ ಇಲಾಹನು ಬಿಲಾಲ್ ಚಾವಲಾ ದಂಪತಿಗೆ ಕರುಳ ಕುಡಿಯೊಂದನ್ನು ನೀಡಿ ಅನುಗ್ರಹಿಸಲಿ ಎಂದು ಇಲಿಯಾಸ್ ಕುಟುಂಬಸ್ಥರು ಪ್ರಾಥಿರ್üಸಿದ್ದಾರೆ
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ದ್ವಿತೀಯ ಮಹಾಸಭೆ - ನಝೀರ್ ಹುಸೈನ್ ಮಂಚಿಲ (ಅಧ್ಯಕ್ಷ)-ಸಫ್ವಾನ್ ಕಲಾಯಿ (ಪ್ರಧಾನ ಕಾರ್ಯದರ್ಶಿ)
ಮುಂಬಯಿ (ಉಳ್ಳಾಲ), ಜೂ.23: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಸ್ಥೆಯ ದ್ವಿತೀಯ ವಾರ್ಷಿಕÀ ಮಹಾಸಭೆಯು ಕಳೆದ ಭಾನುವಾರ ತೊಕ್ಕೊಟ್ಟು ಎ.ಕೆ ಇಂಟರ್ನ್ಯಾಷನಲ್ ಹೋಟೆಲ್ ಸಭಾಗೃಹದಲ್ಲಿ ಅಧ್ಯಕ್ಷರಾದ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಮುಖ್ಯ ಸಲಹೆಗಾರ ಶೇಖ್ ಫಯಾಝ್ ಅಲಿ ಬೈಂದೂರು ತಿಳಿಸಿದರು. ವ್ಯವಸ್ಥಾಪಕ ಸಂಶುದ್ದೀನ್ ಬಳ್ಕುಂಜೆ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ನಝೀರ್ ಹುಸೈನ್ ಮಂಚಿಲ ಉಪಸ್ಥಿತರಿದ್ದರು. ಸಂಚಾಲಕರಾದ ನವಾಝ್ ಉಳ್ಳಾಲ ಸ್ವಾಗತಿಸಿ, ಖಜಾಂಜಿ ಸಫ್ವಾನ್ ಕಲಾಯಿ ವಂದಿಸಿದರು. ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ, ಅಧ್ಯಕ್ಷರಾಗಿ ನಝೀರ್ ಹುಸೈನ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕಲಾಯಿ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಕೃಷ್ಣಾಪುರ ಮತ್ತು ತಸ್ಲೀಂ ಹರೇಕಳ ನೇಮಕಗೊಂಡರು. ಸಂಚಾಲಕರಾಗಿ ಸಂಶುದ್ದೀನ್ ಬಳ್ಕುಂಜೆ, ವ್ಯವಸ್ಥಾಪಕರಾಗಿ ನವಾಝ್ ಉಳ್ಳಾಲ, ಖಜಾಂಜಿಯಾಗಿ ಸತ್ತಾರ್ ಪುತ್ತೂರು, ನಿರ್ದೇಶಕರಾಗಿ ಅಲ್ಮಾಝ್ ಉಳ್ಳಾಲ, ಮುಖ್ಯ ಸಲಹೆಗಾರರಾಗಿ ಶೇಖ್ ಫಯಾಝ್ ಅಲಿ ಬೈಂದೂರು ಆಯ್ಕೆಗೊಂಡರು. ಅದೇ ರೀತಿ ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಕೆ.ಸಿ ರೋಡ್, ಸಂವಹನ ಕಾರ್ಯದರ್ಶಿಯಾಗಿ ಬಾತಿಶ್ ತೆಕ್ಕಾರು, ಮಾಧ್ಯಮ ಕಾರ್ಯದರ್ಶಿಗಳಾಗಿ ಜಲೀಲ್ ಉಳ್ಳಾಲ ಮತ್ತು ಸಫ್ವಾನ್ ಸವಣೂರು, ರಕ್ತದಾನ ಶಿಬಿರಗಳ ಮೇಲ್ವಿಚಾರಕರಾಗಿ ಇಮ್ತಿಯಾಝ್ ಬಜ್ಪೆ ಹಾಗೂ ಶಿಬಿರದ ಉಸ್ತುವಾರಿಗಳಾಗಿ ಖಾದರ್ ಮುಂಚೂರು, ಸಿರಾಜ್ ಉಳಾಯಿಬೆಟ್ಟು, ರಾಫಿಝ್ ಕೃಷ್ಣಾಪುರ ಆಯ್ಕೆಯಾದರು. ಇನ್ನುಳಿದ ಸದಸ್ಯರನ್ನು ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಲಾಯಿತು
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್-ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದ - ಫೆ ್ಲೈ ದುಬಾಯಿ ವಿಮಾನ ಮಂಗಳೂರಿಗೆ ಆಗಮನ
ಮುಂಬಯಿ (ಮಂಗಳೂರು), ಜು.24: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ಫ್ಲೈ ದುಬೈ ಎಫ್ಜ್ಹೆಡ್ 4617 ವಿಮಾನವು ಮಂಗಳವಾರ ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಒಟ್ಟು 187 ಪ್ರಯಾಣಿಕರನ್ನು ಹೊತ್ತುಕೊಂಡು ಬರಬೇಕಾಗಿದ್ದ ವಿಮಾನವು ದುಬಾಯಿ ವಿಮಾನ ನಿಲ್ದಾಣದ ತಾಂತ್ರಿಕ ತೊಂದರೆಯಿಂದ 21 ಪ್ರಯಾಣಿಕರನ್ನು ಕೈಬಿಡಲಾಯಿತು. ಗರ್ಭಿಣಿಯರು, ವಯಸ್ಕರು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರನ್ನು ಒಳಗೊಂಡಂತೆ 128 ಪುರುಷರು ಹಾಗೂ 38 ಮಹಿಳೆಯರು ಸೇರಿದಂತೆ ಒಟ್ಟು 166 ಪ್ರಯಾಣಿಕರು ಆಗಮಿಸಿದರು. ಯುಎಇ ಕಾಲಮಾನದಂತೆ ಮಂಗಳವಾರ ಅಪರಾಹ್ನ ದುಬಾಯಿ ವಿಮಾನ ನಿಲ್ದಾಣ ಟರ್ಮಿನಲ್ 2 ರಿಂದ ಮಂಗಳೂರಿಗೆ ಪ್ರಯಾಣ ಆರಂಭಿಸಿತ್ತು. ದುಬಾಯಿಯಲ್ಲಿ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್, ಎಂ.ಫ್ರೆಂಡ್ಸ್ ಎನ್ಆರ್ಐ ಸದಸ್ಯರಾದ ಹನೀಫ್ ಪುತ್ತೂರು ಹಾಗೂ ನವಾಝ್ ಕಾನತ್ತಡ್ಕ ಪ್ರಯಾಣಿಕರೆಲ್ಲರಿಗೂ ಶುಭಾರೈಸಿ ಬೀಳ್ಕೊಟ್ಟರು.
ಮಂಗಳೂರಿನಲ್ಲಿ ಅಂತರಾಷ್ಟ್ರ ಪ್ರಯಾಣಿಕರ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಎಂ.ಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಜೊತೆ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸದಸ್ಯರಾದ ತುಫೈಲ್ ಅಹ್ಮದ್, ಮಹಮ್ಮದ್ ಟೋಪೆÇ್ಕೀ, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಫಾಕ್ ವಿಲಾಯತ್, ಇಂತಿಯಾಝ್ ಐ ಫ್ರೇಮ್, ಸಿರಾಜ್ ಮದಕ ಮೊದಲಾದವರು ಸುಖಾಗಮನ ಕೋರಿ ಬರಮಾಡಿಕೊಂಡರು.
ಪರಂಪರ ವಿವಿದೊದ್ದೇಶ ಸಹಕಾರ ಸಂಘ ಮತ್ತು ನಿಟ್ಟೆ ತೆಂಗು ಉತ್ಪಾದಕರ - ಸೌಹಾರ್ದ ಸೊಸೈಟಿಯ ಜಂಟಿ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ
ಮುಂಬಯಿ, ಜೂ.23: ಮಂಗಳವಾರ ಬೆಳಗ್ಗೆ ಪರಂಪರ ವಿವಿದೊದ್ದೇಶ ಸಹಕಾರ ಸಂಘ (ನಿ) ಇದರ ವತಿಯಿಂದ ಹಸಿರು ಕೃಷಿ ಅಭಿಯಾನದಡಿ ಸಸಿ ವಿತರಣಾ ಕಾರ್ಯಕ್ರಮವು ಶ್ರೀ ರಾಮಪ್ಪ ಶಾಲೆ ವಠಾರ ಆನೆಕೆರೆ ಇಲ್ಲಿ ಸಂಘದ ಅಧ್ಯಕ್ಷ ನವೀನ್ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಜರುಗಿತು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಕೃತಿ ವಿಕೋಪಗಳು ಹಾಗೂ ಸಾಂಕ್ರಾಮಿಕ ರೋಗಗಳಿಗೆ ಪ್ರಕೃತಿಯ ನಾಶವೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಿಡ ಮರಗಳನ್ನು ಬೆಳೆಸುವ ಸಲುವಾಗಿ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದ ಶ್ರೀ ರಾಮಪ್ಪ ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಶೆಟ್ಟಿ ತಿಳಿಸಿದರು.
ನವೀನ್ಚಂದ್ರ ಜೈನ್ ನಿಟ್ಟೆ ಸಭೆಯನ್ನುದ್ದೇಶಿಸಿ ಮಾತನಾಡಿ ಯಾವುದೇ ಗಿಡಗಳ ಪೋಷಣೆಯು ಕಷ್ಟದ ಕೆಲಸವಲ್ಲ. ಹೆಚ್ಚಿನ ಗಿಡ-ಮರಗಳನ್ನು ಬೆಳೆಸುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಸುಮಾರು 2500 ಗಿಡಗಳಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನುಗ್ಗೆ, ಮಹಾಗನಿ, ಗೇರು, ನೇರಳೆ, ನೆಲ್ಲಿ, ಹಲಸು, ಪೇರಳೆ, ಸೀಮರೋಭೆ, ಮಾವು, ನಿಂಬೆ, ಬಿದಿರು, ಹೊಳೆದಾಸವಾಳ, ಸಾಗುವನಿ, ಬಿಲ್ವ, ಶ್ರೀಗಂಧ ಮುಂತಾದ ಸಸಿಗಳ ತಳಿಗಳನ್ನು ಸಂಘದ ಸದಸ್ಯರಿಗೆ ಉಪಸ್ಥಿತರಿದ್ದ ಅತಿಥಿüಗಳು ವಿತರಿಸಿದರು. ನಿಟ್ಟೆ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯು ಕಾರ್ಯಕ್ರಮದಲ್ಲಿ ಜಂಟಿಯಾಗಿ ಸಹಕರಿಸಿದ್ದ ಅಲ್ಲಿನ ಕೃಷಿಕರಿಗೂ ಸಸಿಗಳನ್ನು ವಿತರಿಸಲಾಯಿತು.
ಈ ಸಭೆಯಲ್ಲಿ ಪರಂಪರಾ ವಿವಿದೊದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಭಯ್ಚಂದ್ರ ಜೈನ್, ನಿರ್ದೇಶಕರಾದ ಎ.ಮೋಹನ ಪಡಿವಾಳ, ಕೆ.ಪಿ. ಭಂಡಾರಿ, ನರಸಿಂಹ ಕಾಮತ್, ಮಮತಾ. ಆರ್. ಶೆಟ್ಟಿ ಉಪಸ್ಥಿತರಿದ್ದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ್.ಆರ್ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಧರಣೇಂದ್ರ ಜೈನ್ ನಿಟ್ಟೆ ಧನ್ಯವಾದ ಸಮರ್ಪಿಸಿದರು.
ಎರ್ಮಾಳು ಎರ್ಮಾಳು ಲಕ್ಷಿ ್ಮೀ ಜನಾರ್ದನ ದೇವಸ್ಥಾನದ ರಥಬೀದಿ ರಸ್ತೆ ಉದ್ಘಾಟನೆ
ಮುಂಬಯಿ, ಜೂ.23: ಕಾಪು ತಾಲೂಕು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರ್ಮಾಳು ಲಕ್ಷಿ ್ಮೀ ಜನಾರ್ದನ ದೇವಸ್ಥಾನದ ರಥಬೀದಿ ರಸ್ತೆಯನ್ನು ಇಂದಿಲ್ಲಿ ಸೋಮವಾರ ಅಪರಾಹ್ನ ಮುಂಬಯಿ ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರÀತಿಮ ಸಂಘಟಕ, ಉತ್ತರ ಮುಂಬಯಿ (ಬೋರಿವಿಲಿ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರ ಸಮಾಕ್ಷಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಜಿ ಆರ್.ಮೆಂಡನ್ ಉದ್ಘಾಟಿಸಿದರು.
ಶಾಸಕರ ಅನುದಾನದÀ ರೂಪಾಯಿ 5 ಲಕ್ಷ ಮೊತ್ತದಲ್ಲಿ ನಿರ್ಮಿತ ಈ ರಸ್ತೆಯನ್ನು ಶಾಸಕ ಲಾಲಜಿ ಮೆಂಡನ್ ನಿರ್ಮಿಸಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಮುಂಬಯಿ ಕಸ್ಟಮ್ಸ್ನ ನಿವೃತ್ತ ಎಸಿಪಿ ರೋಹಿತ್ ಹೆಗ್ಡೆ, ಅಶೋಕರಾಜ್ ಅರಸ, ಕಿಶೋರ್ ಶೆಟ್ಟಿ ಎರ್ಮಾಳ್, ಶ್ರೀಪ್ರಸಾದ್ ಶೆಟ್ಟಿ ಎರ್ಮಾಳ್, ಶೀಲಾ ಕೆ. ಶೆಟ್ಟಿ ಎರ್ಮಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
