Brief Mumbai - Mangalore news with pictures
Kemmannu News Network, 05-07-2020 14:53:15
ಡಾ| ಪಿ.ಎಸ್ಶಂಕರ್ : ಕೋವಿಡ್-19 ಆಕಾಶವಾಣಿ ಜಾಗೃತಿ ಸಂದರ್ಶನ
ಮುಂಬಯಿ (ಆರ್ಬಿಐ), ಜು.05: ಕಲಬುರಗಿ ಆಕಾಶವಾಣಿ ಕೇಂದ್ರವು ಕಳೆದ ಶನಿವಾರ ಹಿರಿಯ ವೈದ್ಯರಾದ ನಾಡೋಜ ಡಾ| ಪಿ.ಎಸ್.ಶಂಕರ್ ಅವರೊಂದಿಗಿನ ಸಂದರ್ಶನ ಪ್ರಸಾರ ನಡೆಸಿತು. ಕರೋನಾ ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಎಚ್ಚರ ಹಾಗೂ ಇತ್ತೀಚಿನ ಸಂಶೋಧನಾ ವರದಿ ನ್ಯೂಜಿಲೇಂಡ್, ವಿಯಟ್ನಾಂ ಮಾದರಿ, ಶವ ಸಂಸ್ಕಾರ ವಿಧಾನ, ಪಾಸ್ಮಾ ಥೆರಪಿ, ಲಾಕ್ಡೌನ್ ಸಂದರ್ಭದ ಆರೋಗ್ಯ ಪರಿಸ್ಥಿತಿ ಕುರಿತಾಗಿ ಅವರು ಬೆಳಕು ಚೆಲ್ಲಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.
ಬಾನುಲಿ `ಸಸ್ಯ ಸಂಜೀವಿನಿ’ಯಲ್ಲಿ ಪುಟಾಣಿಗಳು
ಕಲಬುರಗಿ ಆಕಾಶವಾಣಿ ಕೇಂದ್ರದ ಬಾಲಲೋಕ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವನಮಹೋತ್ಸವ ಸಪ್ತಾಹದಂಗವಾಗಿ `ಸಸ್ಯ ಸಂಜೀವಿನಿ’ ಎಂಬ ವಿಶೇಷ ಮಾತುಕತೆಯಲ್ಲಿ ಪುಟಾಣಿಗಳು ಪಾಲ್ಗೊಂಡರು. ಈ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಬಿತ್ತರಿಸಲ್ಪಟ್ಟಿತು.
ಫೋನ್ ಆಧಾರಿತ ಕಾರ್ಯಕ್ರಮದಲ್ಲಿ ಆಳಂದದ ತ್ರಿವೇಣಿ, ಕಲಬುರಗಿಯ ಸಂಪದ ಆರ್.ರೇವತಗಾಂವ, ಸೇಡಂ ತಾಲೂಕಿನ ಕಾಚೂರಿನ ಬಸವಪ್ರಸಾದ್, ಇಂಡಿ ತಾಲೂಕಿನ ಚಣೆಗಾಂವದ ಶ್ರೀನಿಧಿ, ಕಲಬುರಗಿಯ ಸಮರ್ಥ್ , ಸೃಜನ್ ಹಾಗೂ ವೈಷ್ಣವಿ ಭಾಗವಹಿಸಲಿದ್ದಾರೆ. ವನಮಹೊತ್ಸವದ ಮಹತ್ವ, ಗಿಡಮರ ನೆಡುವ ಹವ್ಯಾಸ, ಪರಿಸರ ಸಂರಕ್ಷಣೆ, ಆರೋಗ್ಯಯುತ ಜೀವನ ಕುರಿತು ಪುಟಾಣಿಗಳು ತಮ್ಮ ಮುಕ್ತ ಅನಿಸಿಕೆ ಹಂಚಿಕೊಂಡ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಡಾ| ಸದಾನಂದ ಪೆರ್ಲ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಮೊಬೈಲ್ ಆ್ಯಪ್ ಟಿeತಿsoಟಿಚಿiಡಿ ಹಾಗೂ ಎ ಎಂ 1071 ಕಿಲೋ ಹಟ್ರ್ಸ್ ಅಥವಾ 271 ಮೀಟರ್ ತರಂಗಾಂತರಗಳಲ್ಲೂ ಪ್ರಸಾರರ ಗೊಂಡೀತು ಎಂದು ನಿಲಯ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.
ರೋಟರಿ ಜಿಲ್ಲಾ ಗವರ್ನರ್ ಆಗಿ ಎಂ.ರಂಗನಾಥ ಭಟ್ ಪದಗ್ರಹಣ
ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದೇ ಸಮಾಜಸೇವೆ : ರಂಜನ್ ಕಿಣಿ ಮುಂಬಯಿ (ಮಂಗಳೂರು: ದಕ್ಷಿಣ ಕನ್ನಡ, ಮಡಿಕೇರಿ, ಮೈಸೂರು, ಚಾಮರಾಜ ನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ ನೂತನ ಜಿಲ್ಲಾ ಗವರ್ನರ್ ಆಗಿ ಎಂ.ರಂಗನಾಥ ಭಟ್ ಅಧಿಕಾರ ಸ್ವೀಕರಿಸಿದ್ದಾರೆ. ಸರಳ ಸಮಾರಂಭವೊಂದರಲ್ಲಿ ನಿರ್ಗಮನ ಗವರ್ನರ್ ಜೋಸೆಫ್ ಮ್ಯಾಥ್ಯೂ ಅವರಿಂದ ರಂಗನಾಥ ಭಟ್ ಅಧಿಕಾರ ಸ್ವೀಕರಿಸಿದರು. ಏಕ್ ಚಮಚ್ ಕಮ್, ಚಾರ್ ಕದಮ್ ಆಗೇ ಎನ್ನುವ ವಿಶಿಷ್ಠ ಯೋಜನೆಯಡಿ ಆರೋಗ್ಯ ಕಾಳಜಿಯ ಕಾರ್ಯಕ್ರಮಗಳು, ವಾಶ್ ಇನ್ ಸ್ಕೂಲ್ ಕಾರ್ಯಕ್ರಮದಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಇತರೆ ಸೌಲಭ್ಯಗಳು, ಪ್ರಥಮ ಚಿಕಿತ್ಸಾ ತರಬೇತಿ, ಅಲ್ಲದೇ ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅವರು ರೋಟರಿಯು ಪಲ್ಸ್ ಪೆÇೀಲಿಯೋ, ಆರೋಗ್ಯ, ಶಿಕ್ಷಣ, ನೀರು, ಶುಚಿತ್ವ ಮತ್ತು ಪರಿಸರಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ನಡೆಸಲಿದೆ ಎಂದವರು ಹೇಳಿದರು.
ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ರೋಟರಿ ಜಿಲ್ಲೆ 6540ರ ಮಾಜಿ ಗವರ್ನರ್ ಯುಎಎಸ್ಎ ಇಂಡಿಯಾನಾದ ರಂಜನ್ ಕಿಣಿ ಮಾತನಾಡಿ ರೋಟರಿಯ ಮೂಲಕ ಸಮಾಜದಲ್ಲಿ ಬೆಳವಣಿಗೆ ಮತ್ತು ಬದಲಾವಣೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು. ಸಂಪನ್ಮೂಲ, ಸಾಮಥ್ರ್ಯದ ಜತೆಗೆ ಮಾನವತೆಯ ಸೇವೆಗೆ ಬದ್ದತೆಯೂ ಅಗತ್ಯವಿದೆ ಎಂದವರು ಹೇಳಿದರು. ರೋಟರಿ ಮಾಜಿ ಗವರ್ನರ್ ಆರ್.ಗುರು, ಡಾ| ನಾಗಾರ್ಜುನ ಸಹಿತ ಮಾಜಿ ಗವರ್ನರ್ಗಳು, ನಿಯೋಜಿತ ಗವರ್ನರ್ಗಳು ಶುಭ ಹಾರೈಸಿದರು. ರಜನಿ ರಂಗನಾಥ ಭಟ್ ಉಪಸ್ಥಿತರಿದ್ದು, ಮಂಗಳೂರು ಮೆಟ್ರೋ ರೋಟರಿ ಅಧ್ಯಕ್ಷೆ ಆಗಿ ಅಶ್ವಿನಿ ಕಾಮತ್, ಕಾರ್ಯದರ್ಶಿ ಆಗಿ ಸ್ವಪ್ನಾ ಕಾಮತ್, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಆಗಿ ಅಭಿಜಿತ್ ಅಧಿಕಾರ ಸ್ವೀಕರಿಸಿದರು. ಪ್ರಧಾನ ದಾನಿಗಳಾದ ರತ್ನಾಕರ ಶೆಣೈ, ಗಣೇಶ್ ಕಾಮತ್ ಅವರನ್ನು ಗೌರವಿಸಲಾಯಿತು.
ಆನ್ಲೈನ್ ವೇದಿಕೆಯ ಮೂಲಕ ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆಯ 82 ಕ್ಲಬ್ಗಳ ಪದಾಧಿಕಾರಿಗಳೂ ಸೇರಿದಂತೆ 3500 ಸದಸ್ಯರು, ಆಹ್ವಾನಿತರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ರೋಟರಿ ಜಿಲ್ಲಾ ಡೈರೆಕ್ಟರಿ ಸಂಪರ್ಕ ಹಾಗೂ ಗವರ್ನರ್ ಮಾಸಿಕ ಪತ್ರ `ಒಪೋರ್ಚುನಿಟೀಸ್’ ಅನಾವರಣ ಗೊಳಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿಕ್ರಂ ದತ್ತಾ ಸ್ವಾಗತಿಸಿದರು. ಪ್ರೀತಂ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಕಾಮತ್ ವಂದಿಸಿದರು.
ಶರದ್ ಪವಾರ್-ಲಕ್ಷ ್ಮಣ ಪೂಜಾರಿ ಗುರುಭ್ಯೋ ನಮಃ
ಮುಂಬಯಿ (ಆರ್ಬಿಐ), ಜು.05: ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಇವರು ತನ್ನ ರಾಜಕೀಯ ಗುರು ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್ಸಿಪಿ) ವರಿಷ್ಠ ನಾಯಕ ಶರದ್ ಪವಾರ್ ಅವರನ್ನು ಭೇಟಿಗೈದು ಗುರುವಂದನೆಗೈದರು.
ದಕ್ಷಿಣ ಮುಂಬಯಿ ಇಲ್ಲಿನ ಎನ್ಸಿಪಿ ಪ್ರಧಾನ ಕಚೇರಿಯಲ್ಲಿ ಪವಾರ್ ಅವರನ್ನು ಗುರುಪೂರ್ಣಿಮೆ ಶುಭಾವಸರದಲ್ಲಿ ಭೇಟಿಗೈದು ಜ್ಞಾನ ವಿವೇಕ ಆತ್ಮವಿಶ್ವಾಸ ವ್ಯವಹಾರ ಮನೋಬಲಕ್ಕೆ ಪ್ರೇರಣಾಶಕ್ತಿಯನ್ನಿತ್ತು ಸಲಹಿ ಪಕ್ಷದ ನಾನಾ ಹುದ್ದೆಗಳನ್ನಿತ್ತು ಪೆÇ್ರೀತ್ಸಾಹಿಸಿದ ತನ್ನ ರಾಜಕೀಯ ಗುರುವರೇಣ್ಯ ಪವಾರ್ಗೆ ತಸ್ಮೈ ಶ್ರೀ ಗುರು ವಂದಿತರೆಣಿಸಿ ಅಭಿವಂದಿಸಿ ಶುಭಾರೈಸಿದರು.
ಕೆಲವು ವರ್ಷಗಳ ಹಿಂದೆ ಕೊಡಮಾಡಿದ್ದ ಹಲಸಿನ ಮರದ ಶವಪಲ್ಲಕ್ಕಿಯು ಇದೀಗ ಹಳೆಯದಾಗಿದ್ದ ಕಾರಣ ಇತ್ತೀಚೆಗೆ ಗ್ರಾಮಸ್ಥರ ವಿನಂತಿಯ ಮೇರೆಗೆ ತಮ್ಮ ಹಿರಿಯರಾದ ವೆಂಕು ಬಾಲು ಪೂಜಾರಿ ಚಿತ್ರಾಪು ಇವರ ಸ್ಮರಣಾರ್ಥವಾಗಿ ಸ್ಟಿಲ್ ಶವಪಲ್ಲಕ್ಕಿ ಕೊಡಮಾಡಿದ್ದು ಕಳೆದ ಭಾನುವಾರ ಲಕ್ಷ್ಮಣ ಪೂಜಾರಿ ಕುಟುಂಬಸ್ಥÀರು ಇದನ್ನು ಸ್ಮಶನಭೂಮಿಗೆ ಸಮರ್ಪಿಸಿದರು. ಚಿತ್ರಾಪು ಬಿಲ್ಲವ ಸಂಘ ಮುಂಬಯಿ ಸಂಚಾಲಿತ ಶ್ರೀ ವಿರೋಭ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಇದರ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸ್ಟೀಲ್ ಶವಪಲ್ಲಕ್ಕಿ ಬರಮಾಡಿ ಕೊಂಡÀು ಪೂಜಾರಿ ಪರಿವಾರದ ಸೇವೆಯನ್ನು ಸ್ಮರಿಸಿದರು.
ಜಾತಿ ಮತ ಬೇಧವಿಲ್ಲದೆ ಚಿತ್ರಾಪು ಪರಿಸರದಲ್ಲಿ ಮೃತ್ಯುವಶರಾದ ಪಾಥಿರ್üೀವ ಶರೀರಗಳನ್ನು ರವಾನಿಸಿ ಶವ ಸಂಸ್ಕಾರಕ್ಕೆ ಅನುಕೂಲಕರವಾಗುವಲ್ಲಿ ಶವಪಲ್ಲಕ್ಕಿ ಉಪಯೋಗಿಸಲಾಗುವುದು. ಭಜನಾ ಮಂಡಳಿಯು ಇದರ ವ್ಯವಸ್ಥೆ ಮತ್ತು ಜವಾಬ್ದಾರಿ ವಹಿಸಲಿದ್ದಾರೆ ಎಂದು ಲಕ್ಷ್ಮಣ ಸಿ.ಪೂಜಾರಿ ತಿಳಿಸಿದ್ದಾರೆ.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಟ್ಟ ಗುರುವಂದನಾ ಕಾರ್ಯಕ್ರಮ - ಗುರುಗಳ ಅನುಗ್ರಹ ಸದಾ ನಮ್ಮೊಂದಿಗೆ ಇರಲಿ- ಪೇಜಾವರ ವಿಶ್ವಪ್ರಸನ್ನತೀರ್ಥ
ಮುಂಬಯಿ (ಆರ್ಬಿಐ), ಜು.05: ನಮ್ಮಲ್ಲಿ ಎಷ್ಟೇ ಸಂಪತ್ತು ಸವಲತ್ತುಇದ್ದರೂ ಗುರುಗಳ ಅನುಗ್ರಹ ಹಾಗೂ ದೇವರ ಅನುಗ್ರಹ ಇಲ್ಲದಿದ್ದಲ್ಲಿ ಅದನ್ನು ಅನುಭವಿಸುವುದು ಅಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜುಪ್ರ್ರಾಸಾದ ವಾದಿರಾಜ ಮಂಟಪದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣದಲ್ಲಿ ನುಡಿದರು.
ತಮ್ಮ ಗುರುಗಳಾದ ಹರಿಪಾದಗೈದಿರುವ ಪೂಜ್ಯ ಶ್ರೀ ವಿಶ್ವೇಶತೀರ್ಥರು ತಮ್ಮ ಹೆಸರಿಗೆ ಅನ್ವರ್ಥ ಎಂಬಂತೆ ಮಾತಲ್ಲೂ ಕೃತಿಯಲ್ಲೂ ನಡೆದು ತೋರಿಸಿದವರು. ತುಂಡು ಬಟ್ಟೆಯುಟ್ಟು ದೇಶವ್ಯಾಪಿ ಸಂಚಾರ ನಡೆಸಿ ಸರ್ವಧರ್ಮೀಯರ ಪ್ರೀತಿ ಪಾತ್ರರಾಗಿದ್ದರು. ಪೂಜ್ಯರ ಅನುಗ್ರಹ ಸದಾ ನಮ್ಮೊಂದಿಗೆ ಇರಲೆಂದು ಪ್ರಾಥಿರ್üಸಿದರು.
ಹರಿಪಾದಗೈದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರ ಸಂಸ್ಮರಣೆಗೈದ ಹಿರಿಯ ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಪೂಜ್ಯ ವಿಶ್ವೇಶತೀರ್ಥರ ಜೀವನ ಶ್ರದ್ಧೆ, ಮುಗ್ದ ಮಗುವಿನ ಮನಸ್ಸಿನಿಂದ ಭಾರತೀಯ ಸಂಪ್ರದಾಯದಲ್ಲಿ ಅವರು ಮಾಡಿರುವ ಬಹುದೊಡ್ಡ ಕ್ರಾಂತಿಯನ್ನು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಅವರು ನೀಲಾವರದ ಗೋಶಾಲೆಯಲ್ಲಿ ಚಾತುರ್ಮಾಸ ನಿರತರಾಗುವ ಶ್ರೀ ವಿಶ್ವಪ್ರಸನ್ನತೀರ್ಥರ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ಗುರುಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷಿ ್ಮೀನಾರಾಯಣಆಸ್ರಣ್ಣ, ವೇ| ಮೂ| ಗಣಪತಿ ಆಚಾರ್ಯ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪೆÇ್ರ| ಎಂ.ಬಿ.ಪುರಾಣಿಕ್, ಜಿ. ಸೀತಾರಾಮ ಆಚಾರ್ಯ, ಲಕ್ಷ್ಮೀದಾಸ್, ಸುರೇಶ್ ಬಾರಿತ್ತಾಯ, ಪ್ರಭಾಕರ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು. . ಕಲ್ಕೂರ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಸ್ವಾಗತಿಸಿದರು. ಬೆಳಿಗ್ಗೆ ಶ್ರೀ ರಾಮ ವಿಟ್ಠಲ ದೇವರ ಮಹಾ ಪೂಜೆ ನಡೆಯಿತು.
ಕಟೀಲು ಕ್ಷೇತ್ರದ ಭಕ್ತಾದಿಗಳ ಅನುಮಾನ: ದೇವರಿಗೆ ದುಡ್ಡು..ಬೇಕೆ.! ಭಕ್ತಿ ಸಾಕೆ.? - ದೇವಸ್ಥಾನದ ಆಡಳಿತ ವ್ಯವಸ್ಥೆ-ಪೂಜಾವಿಧಿಗಳಲ್ಲಿ ಭ್ರಷ್ಟಾಚಾರದ ಆರೋಪÀ
ಮುಂಬಯಿ, ಜು.05: ದೈವ ದೇವರುಗಳ ನೆಲೆಬೀಡು ತುಳುನಾಡು ಇಲ್ಲಿನ ಅತ್ಯಂತ ಕಾರಣಿಕ ಕ್ಷೇತ್ರ ಎಂದೇ ಪ್ರಸಿದ್ಧಿಯ ಕ್ಷೇತ್ರ ಕಟೀಲು. ಇಲ್ಲಿ ಇತ್ತೀಚಿಗೆ ಕಟೀಲು ಅಸ್ರಣ್ಣ ಅವರ ಮತ್ತು ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಪೂಜಾವಿಧಿ ವಿಧಾನಗಳಲ್ಲಿ ಸಾಕ್ಷಿಗಳ ಮತ್ತು ದಾಖಲೆಗಳ ಸಮೇತ ಭ್ರಷ್ಟಾಚಾರದ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ. ಮೇಲ್ನೋಟಕ್ಕೆ ಈ ಆರೋಪದಲ್ಲಿ ಎಲ್ಲ ಸತ್ಯವಿದೆ ಅನ್ನಿಸುತ್ತದೆ, ಕಟೀಲು ಭ್ರಾಮರಿ ಮುಂಬಯಿ ತುಳು-ಕನ್ನಡಿಗರ ಆರಾಧ್ಯದೇವತೆ ಅವಳ ಹೆಸರೆತ್ತದೆ ನಾವು ಯಾವುದೇ ವ್ಯಾಪಾರ ವ್ಯವಹಾರ ಮಾಡುವುದಿಲ್ಲ ಅವಳಿಗೆ ಹೇಳಿದಷ್ಟು ಹರಕೆ ಭಂಡಾರ ಇನ್ಯಾವುದೇ ದೇವರಿಗೆ ಸಲ್ಲುವುದಿಲ್ಲ. ಮುಂಬಯಿಯ ಪ್ರತಿ ಹೋಟೆಲಿನಲ್ಲಿ ಕಟೀಲು ದೇವಿಗೆ ಪೂಜೆ ಸಲ್ಲುತ್ತದೆ. ಮುಂಬಯಿಗರು ಇಂತಹ ಭಯಭಕ್ತಿಯಲ್ಲಿ ಇದ್ದುಕೊಂಡು ದೇವಿಯ ಆರಾಧನೆಯೊಂದಿಗೆ ಊರಿಗೆ ಬಂದಾಗ ತಪ್ಪದೆ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಆಸ್ರಣ್ಣ ಬಂಧುಗಳನ್ನು ದೇವರ ಪ್ರತಿರೂಪದಂತೆ ಭಯಭಕ್ತಿಗಳಿಂದ ಮರ್ಯಾದಿ ಕೊಟ್ಟು ಮಾನಾದಿಗೆ ಸಲ್ಲಿಸುತ್ತಿರುವುದು ವಾಡಿಕೆ ಎಂದು ಮುಂಬಯಿ ಮಹಾನಗರದ ಹೆಸರಾಂತ ಸಂಘಟಕ, ಸಮಾಜ ಸೇವಕ, ಉತ್ತರ ಮುಂಬಯಿಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಗೋಪಾಲ್ ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕಟೀಲು ಕ್ಷೇತ್ರದ ಅವ್ಯವಸ್ಥೆಗಳನ್ನು ತಿಳಿಪಡಿಸಿ ನ್ಯಾಯಕ್ಕಾಗಿ ಮೊರೆಹೋದ ಪಣಿಯೂರು ಗುತ್ತು ಸುಶೀನ್ ಶೆಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕಟೀಲಿಗೆ ಭೇಟಿ ಕೊಟ್ಟರೆ ಮೂರು ಸುತ್ತು ಬರುವಾಗ ಒಂದು ಸಾವಿರಕ್ಕಿಂತ ಹೆಚ್ಚು ಹಣವನ್ನು ಅಲ್ಲಿದ್ದ ಕಾವಲುಗಾರ ನಿಂದ ಹಿಡಿದು ಅಸ್ರಣ್ಣ ಬಂಧುಗಳ ತಟ್ಟೆಗೆ ಸುರಿದು ಒಂದು ತುಂಡು ಮಲ್ಲಿಗೆಯನ್ನು ಹೆಗಲಿಗೆ ಹಾಕಿಸಿ ಕೊಂಡು ದೇವಿಯ ದರ್ಶನವನ್ನು ಹತ್ತಿರದಿಂದ ಕಾಣುವ ಭಾಗ್ಯವನ್ನು ತನ್ನದಾಗಿಸಿ ಕೊಂಡು ಮುಂಬೈಯ ದಾರಿ ಹಿಡಿಯುತ್ತಾರೆ. ಇದು ಸರಿಯೋ ತಪೆÇ್ಪೀ ನನಗೆ ಗೊತ್ತಿಲ್ಲ ನನ್ನ ಪ್ರಕಾರ ದೇವರು ಅಂತರ್ಯಾಮಿ ಎಲ್ಲರಿಗೂ ಸಮಾನತೆಯನ್ನು ನೀಡುವವರು ಹಾಗಾದರೆ ಕಟೀಲಿನಲ್ಲಿ ಜನ ನೋಡಿ ದರ್ಶನ ನೀಡುವ ಪದ್ಧತಿ ಯಾಕೆ ಇದನ್ನು ಆರಂಭಿಸಿದವರು ಯಾರು? ಇದನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಇದರ ಹಿಂದೆ ಆಸ್ರಣ್ಣ ಬಂಧುಗಳ ದೊಡ್ಡ ವ್ಯವಹಾರವೇ ಅಡಗಿದೆ ಈಗ ನಡೆಯುವ ರಂಗಪೂಜೆಯಂತೆ ಮೊದಲು ಹೂವಿನ ಪೂಜೆ ಕಟೀಲಿನಲ್ಲಿ ನಡೆಯುತ್ತಿತ್ತು.
ಈಗ ಕಟೀಲಿನ ಹೂವಿನ ಪೂಜೆಗೆ ಯಾವುದೇ ಆದ್ಯತೆ ಇಲ್ಲವೇ ಇಲ್ಲ. ಒಂದು ಚೀಟಿ ಮಾಡಿಸಿದರೆ ಹೂವಿನ ಪೂಜೆ ಮುಗಿದುಹೋಗುತ್ತದೆ ದೇವರಿಗೆ ಈ ಸೇವೆ ಹೇಗೆ ಸಂದಾಯವಾಗುತ್ತದೋ ನನಗಂತೂ ಗೊತ್ತಾಗುವುದಿಲ್ಲ. ರಂಗಪೂಜೆ ಲೆಕ್ಕ ಮೊದಲು ದಿನಕ್ಕೆ ಒಂದರಿಂದ ಮೂರು ಮೂರರಿಂದ ಆರು ನಂತರ 9 ಈಗ ದಿನಕ್ಕೆ 12ಕ್ಕೆ ಬಂದು ನಿಂತಿದೆ. ಯಾಕೋ ಇಲ್ಲಿನ ಲೆಕ್ಕಗಳು ತಲೆಕೆಳಗಾಗಿವೆ ಭಕ್ತಿ ಎಂದೋ.. ಕಳೆದುಹೋಗಿ ವ್ಯವಹಾರ ಮಾತ್ರ ಇಲ್ಲಿ ಕಾಣುತ್ತಿದೆ. ಲಕ್ಷಗಟ್ಟಲೆ ಖರ್ಚು ಮಾಡಿ ಮಾಡುವ ಯಕ್ಷಗಾನ, ಚಂಡಿಕಾಯಾಗ ಮತ್ತು ಚಿನ್ನದ ರಥೋತ್ಸವದ ಲೆಕ್ಕಪತ್ರಗಳು ಅರ್ಥವಾಗದೆ ಗೋಜಲು ಗೋಜಲಾಗಿದೆ.
ಇದರ ಹಿಂದೆ ಯಾವ ಕೈಗಳು ಕೆಲಸ ಮಾಡುತ್ತಿವೆ ಎಂದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ.
ಈ ಸಲ ನಡೆದ ಬ್ರಹ್ಮಕಲಶದ ಸಮಯದಲ್ಲಿ ಮುಂಬೈ ಸಮಿತಿ ಹಾಗೂ ಇತರ ಸಮಿತಿಗಳು ಕೂಡಿ ಕೋಟ್ಯಾಂತರ ಹಣವನ್ನು ಜನರ ಭಕ್ತಿಯ ಪ್ರತಿರೂಪವಾಗಿ ಕಟೀಲಿಗೆ ಸಂದಾಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಮುಂಬೈಯ ಪ್ರತಿ ಮೀಟಿಂಗಿನಲ್ಲಿ ಆಸ್ರಣ್ಣ ಬಂಧುಗಳು ಉಪಸ್ಥಿತಿ ಇದ್ದು. ಇವರು ಮುಂಬೈಯಲ್ಲಿ ಬ್ರಹ್ಮಕಲಶ ಸಮಿತಿ ಬಿಟ್ಟು ಇತರರಿಂದ ಲಕ್ಷಗಟ್ಟಲೆ ಹಣವನ್ನು ಬ್ರಹ್ಮಕಲಶೋತ್ಸವಕ್ಕೆ ಅಂತ ಸಂಗ್ರಹಿಸಿದ್ದಾರೆ ಇದರ ಲೆಕ್ಕಪತ್ರ ಎಲ್ಲಿದೆಯೋ ನಮಗಂತೂ ಗೊತ್ತಿಲ್ಲ ಅಷ್ಟೇ ಏಕೆ 12ವರ್ಷದ ಮೊದಲು ನಡೆದ ಬ್ರಹ್ಮ ಕಲಶದಲ್ಲಿ ಮುಂಬೈ ಸಮಿತಿ, ಬೆಂಗಳೂರು ಸಮಿತಿ, ಪೂನಾ ಸಮಿತಿ, ಮತ್ತು ಸ್ಥಳೀಯ ಸಮಿತಿಗಳು ಹಲವು ಕೋಟಿ ಹಣವನ್ನು ಕಟೀಲಿಗೆ ಅರ್ಪಿಸಿದ್ದಾರೆ. ಅದರಲ್ಲಿ 35ಲಕ್ಷ ಮಾತ್ರ ಬಂಗಾರದ ಕಳಶಕ್ಕೆ ವಿನಿಯೋಗಿಸಲಾಗಿದೆ ನಂತರ ಉಳಿದ ಹಣದ ಲೆಕ್ಕ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಪ್ರಶ್ನಸಿದಾಗ, ಪ್ರಶ್ನಿಸಿದವರನ್ನೇ ಬಾಯಿ ಮುಚ್ಚಿಸುವ ಕೆಲಸ ಇಲ್ಲಿ ನಡೆಯುತ್ತಿದೆ ಮುಂಬೈ ಮಂದಿ ಈ ಬಗ್ಗೆ ರೋಷಿ ಹೋಗಿದ್ದೇವೆ, ಕಟೀಲು ಯಕ್ಷಗಾನದಲ್ಲಿ ಮಿಂಚುತ್ತಿದ್ದ ಪಟ್ಲ ಅಂತಹ ಭಾಗವತರು ಹೊಸ ತಲೆಮಾರಿನ ಜನರನ್ನು ಆಕರ್ಷಿಸಿ ಯಕ್ಷರಂಗಕ್ಕೆ ಸೇವೆ ಸಲ್ಲಿಸಿದವರು. ಅವರು ಪ್ರಾರಂಭಿಸಿದ `ಪಟ್ಲ ಫೌಂಡೇಶನ್’ ಬಡ ಕಲಾವಿದರ ಆಶಾಕಿರಣವಾಗಿದೆ. ಮನೆ ಇಲ್ಲದವರಿಗೆ ಮನೆ ಕೊಟ್ಟು ಅಸೌಖ್ಯದ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸಿ ಕಣ್ಣಿರು ಒರೆಸಿದವರು. ಕೊರೋನ ಸಂಕಷ್ಟದಲ್ಲಿ ಮನೆಮನೆಗೆ ತೆರಳಿ ಕಲಾವಿದರಿಗೆ ಆಹಾರದ ಕಿಟ್ ಗಳನ್ನು ಪೂರೈಸಿ ಮಾನವೀಯತೆ ಮೆರೆದವರು ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸುತ್ತೇವೆ. ಆದರೆ ಕೆಲವು ಸಮಯದ ಹಿಂದೆ ಪಟ್ಲ ಅವರು ಭಾಗವತಿಕೆಗಾಗಿ ರಂಗಸ್ಥಳ ಏರಿದ ನಂತರ ಅವರನ್ನು ಕೆಳಗಿಳಿಸಿ ಅವಮಾನ ಮಾಡಿದ ಸಂದರ್ಭ ಈಗಲೂ ನೆನಪಾಗುತ್ತದೆ. ಸಮಸ್ಯೆಗಳು ಏನಿದ್ದರೂ ನಂತರ ಚರ್ಚಿಸ ಬಹುದಿತ್ತು ಕಲಾಭಿಮಾನಿಗಳ ಮುಂದೆ ಇಂಥ ಅವಮಾನ ಸಲ್ಲದು.
ಮುಂಬಯಿ ಕನ್ನಡಿಗರೆಲ್ಲರೂ ಇದನ್ನು ಇಂದೂ ಕೂಡ ಖಂಡಿಸುತ್ತಾರೆ. ಇಲ್ಲಿಯ ಒಳ ಜಗಳಗಳಿಗೆ ಪಟ್ಲರಂತಹ ಪ್ರತಿಭೆಗಳು ಮೂಲೆಗುಂಪಾಗಬಾರದಿತ್ತು. ಇದು ಅಕ್ಷಮ್ಯ ಅಪರಾಧ. ಸದ್ಯ ಹಿಂದೂ ಧಾರ್ಮಿಕ ಸ್ಥಳಗಳು ಬ್ರಷ್ಟಾಚಾರದ ಕೇಂದ್ರವಾಗುತ್ತಿರುವುದು ಬೇಸರ ವೆನಿಸುತ್ತದೆ, ಕೊರೋನ ಮಹಾಮಾರಿಯ ಈ ಸಂದರ್ಭದಲ್ಲಿ ಮುಂಬೈ ಕನ್ನಡಿಗರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೋಟೆಲು ಉದ್ಯಮ ನೆಲಕಚ್ಚಿ ಮೇಲೆ ಬರದಂತಹ ದುರ್ಗಮ ಪರಿಸ್ಥಿತಿಯಲ್ಲಿದೆ. ಸಾವು ಬದುಕಿನ ನಡುವೆ ಬದುಕುತ್ತಿರುವ ಕನ್ನಡಿಗರು ಊರಿಗೆ ಬರಲಾರದ ಪರಿಸ್ಥಿತಿಯಲ್ಲಿ ಭ್ರಮರಾಂಬಿಕೆಗೆ ಹರಕೆ ಹೊತ್ತು ನಮ್ಮನ್ನು ಕಾಪಾಡಮ್ಮ ಎಂದು ಗೋಗರೆಯುತ್ತಿದ್ದಾರೆ. ಆದರೆ ಈ ಪುಣ್ಯಸ್ಥಳ ಕಟೀಲಿನಿಂದ ಮುಂಬೈ ಮಂದಿಗೆ ಇಷ್ಟರವರೆಗೆ ಯಾವುದಾದರೂ ಸಹಾಯ ಆಗಿದೆಯೇ? ಹಿಂದೊಮ್ಮೆ ಕ್ವರಿಂಟೀನ್ ಆದವರಿಗೆ ಊಟ ಆರಂಭಿಸುವ ವಿಷಯದಲ್ಲಿ ಚರ್ಚೆಯಾಗಿ ಅದು ಕೂಡ ನಿಂತು ಹೋಗಿದೆ.
ದೇವಸ್ಥಾನದ ಹೆಸರಿನಲ್ಲಿ ಇರುವ ಶಾಲೆ ಮತ್ತು ಕಾಲೇಜುಗಳಲ್ಲಿ ಮುಂಬೈ ಮಂದಿಗೆ ಕ್ವಾರಂಟಾಯ್ನ್ ವ್ಯವಸ್ಥೆಯಾದರೂ ಮಾಡಬಹುದಿತ್ತು ದೇವರ ಪ್ರಸಾದವೆಂದು ಏರಡು ಹೊತ್ತು ಅನ್ನ ನೀಡಿ ಪುಣ್ಯ ಕಟ್ಟಿ ಕೊಳ್ಳಬಹುದಿತ್ತು. ಇಂತಹ ಪುಣ್ಯ ಕೆಲಸಗಳಿಗೆ ಆಸ್ರಣ್ಣ ಬಂಧುಗಳಿಗೆ ಭ್ರಮರಾಂಬಿಕೆ ಆಶೀರ್ವಾದ ಆದರೂ ಕೊಡುತ್ತಿದ್ದರು.ಆದರೆ ಇವರ ಬಾಯಿಂದ ಮುಂಬಯಿಗರ ಬಗ್ಗೆ ಒಂದು ಒಳ್ಳೆಯ ಹೇಳಿಕೆ ಕೂಡ ಬರಲಿಲ್ಲ. ಮುಂಬಯಿಯಿಂದ ಬಂದ ಹಣದ 10% ಆದರೂ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬಹುದಿತ್ತು ಆದರೆ ಮಾಡಲೇ ಇಲ್ಲ. ನಮ್ಮ ಜನರಿಗೆ ಇವರ ತಂತ್ರ ಕುತಂತ್ರಗಳು ದೇವಿಯ ಭಕ್ತಿಯ ಮುಂದೆ ಅರ್ಥವಾಗಲಿಲ್ಲ. ಆಸ್ರಣ್ಣರು ಹೇಳಿದಂತೆ ದೊಡ್ಡ ದೊಡ್ಡ ಯಾಗ ಯಜ್ಞಗಳನ್ನು ಮಾಡಿ ಪುಣ್ಯ ಕಟ್ಟಿಕೊಳ್ಳುವ ಬದಲು ಯಾವುದಾದರೂ ಅನಾಥಾಶ್ರಮಕ್ಕೆ ದಾನ ಮಾಡಿ, ಮದುವೆಯಾಗದೇ ಉಳಿದ ಹೆಣ್ಣಿನ ಮಾಂಗಲ್ಯಕ್ಕೆ ಸಹಾಯ ಮಾಡಿ, ಮನೆ ಇಲ್ಲದೆ ವಾಸಿಸುವ ಬಡ ಜನರ ಸೂರು ಆಗಿ, ಉಣ್ಣಲು ಅನ್ನವಿಲ್ಲದ ಜನರ ಹಸಿವಿನ ಅನ್ನವಾಗಿ, ಸಂಕಷ್ಟದಲ್ಲಿ ಜೀವಿಸುವ ಜನರ ಕಣ್ಣೀರು ಒರೆಸುವ ಕೆಲಸ ಮಾಡಿ, ಭ್ರಮರಾಂಬಿಕೆ ಗೆ ಇದಕ್ಕಿಂತ ಹೆಚ್ಚಿನ ಸೇವೆ ಬೇಡವೇ ಬೇಡ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ?
ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಮ್ಮ ಕರ್ಮವನ್ನು ನಾವು ಮಾಡಬೇಕು ಫಲ ಕೊಡುವ ಕೆಲಸ ದೇವರದ್ದು . ಅಮ್ಮನ ಆಶೀರ್ವಾದದ ಕೈಗಳು ಸದಾ ನಮ್ಮ ಮೇಲೆ ಇರುವುದು ಇದು ಖಂಡಿತ. ಕಟೀಲಿನ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯದ ವಿೂನುಗಾರಿಕೆ, ಬಂದರು ಮತ್ತು ಮುಜರಾಯಿ, ಮಂತ್ರಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್, ಕಟೀಲಿನ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ಕುಮಾರ್ ಶೆಟ್ಟಿ ಇವರೆಲ್ಲ ಕೂಡಿ ಈ ಅವ್ಯವಸ್ಥೆಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುವುದೇ ಮುಂಬಯಿ ತುಳು ಕನ್ನಡಿಗರ ಒತ್ತಾಸೆ ಆಗಿದೆ ಎಂದು ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
ಅನ್-ಡು (UNDO) | A Konkani Short Film | ICYM Kallianpur Deanery

THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery

Obituary: Malcom Braganza (51), Bahrain/Kundapur.

World Alzheimer’s Day at Mount Rosary, Santhekatte on Sep 21

Milarchi Lara, Milagres Cathedral, Kallianpur, Parish Bulletin - September 2025

Final Journey of Mrs. Elizabeth D’Souza (91 years) | LIVE from Udupi

ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com

Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu

Final Journey of Philip Saldhana (64 years) | LIVE from Kanajar | Udupi

Feast of Assumption & Independence Day Celebration | St. Theresa Church, Kemmannu

Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio

Final Journey of Golbert Suares (65 years) | LIVE from Barkur | Udupi

Final Journey of Gretta Suares (69 years) | LIVE from Barkur

Final Journey of Asha Fernandes (43 years) | LIVE from Thottam | Udupi

Yuva Samagam 2025 | ICYM | LIVE from Sastan, Udupi

Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Mount Rosary Church - Rozaricho Gaanch May 2025 Issue

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
Udupi: Cooking without fire competition at Kemmannu Church [Video]

A ‘Wisdom Home of Memories’, a heritage Museum in Suratkal, Mangaluru

Celebrating 50 Years of Devotion: Iconic Konkani Hymn Moriye Krista Maye Marks Golden Jubilee

Arrest of Nuns’ at Chhattisgarh - Massive Protest Rally in Udupi Echoes a Unified Call for Justice and Harmony [Video]

MCC Bank Inaugurates Its 20th Branch in Byndoor

Mog Ani Balidan’ – A Touching Konkani Novel Released at Anugraha, Udupi [Photographs updated]

Milagres Cathedral celebrates Sacerdotal Ruby Jubilee of Mngr Ferdinand Gonsalves and Parish Community Day with grandeur

Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis
